Shuru
Apke Nagar Ki App…
ನೆನಪಿಟ್ಟುಕೊಳ್ಳಿ ಒಳ್ಳೆಯ ಸಂದೇಶವಿದೆ. ಯಾವತ್ತಿಗೂ ಇಂಥ ಒಳ್ಳೆ ಒಳ್ಳೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು
ಈಶ್ವರ್ ಬೆಳಕು ನ್ಯೂಸ್ ಕನ್ನಡ User
ನೆನಪಿಟ್ಟುಕೊಳ್ಳಿ ಒಳ್ಳೆಯ ಸಂದೇಶವಿದೆ. ಯಾವತ್ತಿಗೂ ಇಂಥ ಒಳ್ಳೆ ಒಳ್ಳೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು
More news from ಕರ್ನಾಟಕ and nearby areas
- ನಕಲಿ ಕೀ ಬಳಸಿ ಬೈಕ್ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾದ ಖದೀಮನ ಕೃತ್ಯ ನೆಲಮಂಗಲ ಬೈಕ್ ಕಳ್ಳತನ ಸಿಸಿಟಿವಿ ದೃಶ್ಯ ಸೋಮವಾರ ಮಧ್ಯರಾತ್ರಿ ನೆಲಮಂಗಲದ ರೈಲ್ವೆ ಗೊಲ್ಲಹಳ್ಳಿ ಬಳಿ ಮನೆ ಮುಂದೆ ನಿಲ್ಲಿಸಿದ್ದ ಸ್ಪೆಂಡರ್ ಬೈಕ್ ಅನ್ನು ನಕಲಿ ಕೀ ಬಳಸಿ ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಸುತ್ತಮುತ್ತ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಕಳವಳ ಉಂಟುಮಾಡಿದೆ.1
- Post by Gulam Muhammad1
- ಮಾಗಡಿ: ತಾಲೂಕಿನ ಪುರಾಣ ಪ್ರಸಿದ್ದ ಮಾಂಡವ್ಯ ಕುಟೀ ತಿರುಮಲೆ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ 12-15 ಕ್ಕೆ ನೆರವೇರಿತು. ಬ್ರಹ್ಮರಥೋತ್ಸವದಲ್ಲಿ ದೂರದೂರುಗಳಿಂದ ಸಾವಿರಾರು ಭಕ್ತರು ಆಗಮಿಸಿ ತಿರುಮಲೆ ರಂಗನ ದರುಶನ ಪಡೆದರು. ಗರುಡದೇವ ಮೊದಲಿಗೆ ರಥದ ಮೇಲೆ ಹಾರಾಡಿ ಶುಭಸೂಚನೆ ನೀಡಿದ ನಂತರ ಬ್ರಹ್ಮರಥೋತ್ಸವಕ್ಕೆ ಪ್ರಥಮ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಭಕ್ತರು ಗೋವಿಂದ....ಗೋವಿಂದ....ಎಂಬ ಘೋಷಣೆ ಕೂಗುತ್ತಾ ಬಾಳೆಹಣ್ಣು ದವನವನ್ನ ರಥದ ಕಳಶಕ್ಕೆ ಎಸೆದು ಭಕ್ತಿ ಬಾವ, ಸಮರ್ಪಿಸಿದರು. ರಂಗನ ದರ್ಶನಕ್ಕೆ ಬರುವವರ ದಣಿವನ್ನ ತಣಿಸಲು ಪಾನಕ ಮಜ್ಜಿಗೆ ವಿವಿಧ ಸಮುದಾಯಗಳಿಂದ ಅನ್ನದಾಸೋಹದ ಅರವಟ್ಟಿಗೆಗಳು ಅನ್ನದ ರಂಗನ ಸನ್ನಿಧಿಯಲ್ಲಿ ನಡೆಯುವುದು ಪ್ರತಿವರ್ಷದಂತೆ ಈ ಭಾರಿಯೂ ವಿಶೇಷವಾಗಿತ್ತು. ರಥದ ಬಳಿ ಪೆÇಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಯಿತು. ಕೆಲ ಶಾಲೆ, ಕಾಲೇಜುಗಳು ರಜೆಗಳಿಂದಾಗಿ ಈ ಭಾರಿಯ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಮಂದಿ ಭಾಗವಹಿಸಿದ್ದು ಮತಷ್ಟು ವಿಶೇಷವಾಗಿತ್ತು. ಬ್ರಹ್ಮರಥೊತ್ಸವಕ್ಕೆ ಹೆಚ್ಚು ಮಂದಿ ಭಕ್ತರು ಭಾಗವಹಿಸುತ್ತಾರೆಂಬ ನಿರೀP ಹಿನ್ನಲೆಯಲ್ಲಿ ಗಾಂಧಿ ಸರ್ಕಲ್, ಹೊಸಪೇಟೆ ಸರ್ಕಲ್ ಮತ್ತು ತಿರುಮಲೆ ಗೇಟ್ ಬಳಿ ಪೆÇಲೀಸರು ಸುಸರ್ಜಿತವಾಗಿ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಿದರು. ಬ್ರಹ್ಮರಥೋತ್ಸವದಲ್ಲಿ ಹೆಚ್ಚು ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಬೆಳಗ್ಗೆ ಬ್ರಹ್ಮರಥೋತ್ಸವ ನಂತರ ಸಂಜೆಯ ಮಡಿತೇರು ಸಂಜೆ 6 ಗಂಟೆಗೆ ಸಂಜೆ 8 ಗಂಟೆಯವರೆಗೆ ನಡೆಯಿತು, ರಾತ್ರಿ 12 ಗಂಟೆಗೆ ದೊಡ್ಡಗರುಡೋತ್ಸವ ನಡೆಯಿತು. ಈ ಭಾರಿ ಭಕ್ತರಿಗೆ ವಿಶೇಷವಾಗಿ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿ ನೂಕುನುಗ್ಗಲು ಇಲ್ಲದಂತೆ ಭಕ್ತರು ದರ್ಶನ ಪಡೆದರು. ಪ್ರತ್ಯೇಕ ದರ್ಶನಕ್ಕಾಗಿ 100ರೂಪಾಯಿಗಳ ಟಿಕೇಟು ವ್ಯವಸ್ಥೆ ಮಾಡಲಾಯಿತು. ಗಣ್ಯರ ಶೀಘ್ರ ದರ್ಶನಕ್ಕೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸುವ ಮೂಲಕ ಆಡಳಿತ ಮಂಡಳಿ ಮತ್ತು ಸ್ವಯಂ ಸೇವಕರು ಉತ್ತಮ ವ್ಯವಸ್ಥೆ ಕಲ್ಪಿಸಲಾಯಿತು. ಶಾಸಕ ಎಚ್.ಸಿ.ಬಾಲಕೃಷ್ಣ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸಿ ಮಾತನಾಡಿ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಬ್ರಹ್ಮರಥೋತ್ಸವ ಇಂದಿಗೂ ಕೂಡ ತನ್ನದೆಯಾದ ವೈಶಿಷ್ಟ್ಯ ಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀರಂಗನಲ್ಲಿ ಏನನ್ನು ಕೇಳಿಕೊಳ್ಳಬಾರದು, ಯಾರಿಗೆ ಎನುಕೊಡಬೇಕೆಂದು ಗೊತ್ತು, ಯಾರಿಗೆ ಏನುಮಾಡಬೇಕು ಶ್ರೀರಂಗ ಮಾಡಲಿದ್ದಾನೆ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ಮಾಂಡವ್ಯ ಮಹರ್ಷಿಗಳು ಇದೇ ಕ್ಷೇತ್ರದಲ್ಲಿ ತಪಸ್ಸು ಮಾಡಿ ಶ್ರೀ ರಂಗನಾಥಸ್ವಾಮಿಯನ್ನ ಪ್ರತಿμÁ್ಟಪನೆ ಮಾಡಿದ್ದು ಭಕ್ತರ ಇμÁ್ಟರ್ಥ ಸಿದ್ದಿಯಾಗುತ್ತದೆಂಬ ನಂಬಿಕೆಯಿದೆ. ತಿರುಪತಿಗೆ ಹೋಗಲಾರದಂತವರು ಈ ಕ್ಷೇತ್ರದಲ್ಲಿ ತಿರುಮಲೆ ರಂಗನ ದರ್ಶನ ಮಾಡಿದರೆ ಪುಣ್ಯ ಸಿಗುತ್ತದೆಂಬ ನಂಬಿಕೆ ಇದೆ. ಆದ್ದರಿಂದ ಭಕ್ತಾಧಿಗಳು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ರಂಗನ ದರ್ಶನ ಪಡೆಯುತ್ತಾರೆ ಎಂದರು. ಶ್ರೀರಂಗನಾಥ ಸ್ವಾಮಿ ದನಗಳ ಜಾತ್ರೆಗೆ ದೇಶದ ಮೂಲೆಮೂಲೆಗಳಿಂದ ಬಂದು ರಾಸುಗಳ ವ್ಯಾಪಾರ ನಡೆಯುವುದು ವಿಶೇಷ. ನಾನು ಶಾಸಕನಾದ ವೇಳೆ ಗೋಪುರ, ಸುತ್ತಮುತ್ತಲ ಪ್ರರಾಂಗಣ ಪುನಜೀಣೋದ್ದಾರ, ದೇವಾಲಯದ ಸುತ್ತÁ ಅಗಲೀಕರಣ ಮಾಡಿ ಡಾಂಬರೀಕರಣ ಸೇರಿದಂತೆ ದೇವಾಲಯದ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡುವ ಮೂಲಕ ಭಕ್ತಾಧಿಗಳ ಅನುಕೂಲಕ್ಕೆ ಯಾತ್ರಿ ನಿವಾಸ ನಿರ್ಮಿಸಲಾಗಿದೆ, ಈಗ 5 ಕೋಟಿರೂ ವೆಚ್ಚದಲ್ಲಿ ಅಭಿವೃದ್ದಿಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದು ಕಾಮಗಾರಿ ಆರಂಭಿಸಲಾಗುವುದು ಇನ್ನೂ 5 ಕೋಟಿಗೆ ಬೇಡಿಕೆ ಇಡಲಾಗಿದೆ ಮತ್ತೆ 5 ಕೋಟಿ ರೂ ನೀಡಿ ಸಂಪೂರ್ಣವಾಗಿ ದೇವಾಲಯ ಜೀಣೋದ್ದಾರಗೊಳಿಸಲಾಗುವುದು ಎಂದರು. ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಿದ್ದೇನೆ ಶ್ರೀರಂಗ ಮುಂದೆಮತಷ್ಟು ಶಕ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸಮಾಡಲಾಗುವುದು ಎಂದರು. ನಾನು ಒಂದು ವರ್ಷವೂ ಬ್ರಹ್ಮರಥೋತ್ಸವಕ್ಕೆ ತಪ್ಪಿಸಿಕೊಳ್ಳದೆ ಭಗವಂತನ ದರ್ಶನ ಪಡೆಯುತ್ತಿದ್ದೇನೆ. ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರು ಸಂಮೃದ್ದಿಯಿಂದ ಜೀವನ ನಡೆಸಲು ಅನುವುಮಾಡಿಕೊಡುವಂತೆ ಶ್ರೀರಂಗನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಪಟ್ಟನಾಯ್ಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ಶ್ರೀರಂಗನಾಥಸ್ವಾಮಿ ಪಶ್ಚಿಮಾಭಿಮುಖವಾಗಿದ್ದು ಸಾಲಿಗ್ರಾಮ ರೂಪದಲ್ಲಿ ದೇವರು ಮಹಾತಪಸ್ವಿಗಳಿಗೆ ದರ್ಶನ ನೀಡಿದ್ದರೆಂಬ ಪುರಾಣವಿದೆ. ಹಿಂದಿನಿಂದಲ್ಲೂ ಅದ್ದೂರಿಯಾಗಿ ವಿಜೃಂಬಣೆಯಿಂದ ಪ್ರತಿವರ್ಷವೂ ಕೂಡ ಬ್ರಹ್ಮರಥೋತ್ಸವ ನಡೆದುಕೊಂಡು ಬರುತ್ತಿದೆ. ಲಕ್ಷ್ಮೀನಿವಾಸ ಇರುವ ಮಾಗಡಿಯ ತಿರುಮಲೆ ಶ್ರೀರಂಗನಾಥಸ್ವಾಮಿ ಕ್ಷೇತ್ರ ಮಹಾತಪಸ್ವಿಗಳ ನಾಡು ಎಂದು ಖ್ಯಾತಿಗೊಂಡಿದೆ. ಮಾಂಡವ್ಯಕುಟೀ ಶ್ರೀರಂಗನಾಥಸ್ವಾಮಿ, ಬೆಳೆಯೋರಂಗ, ಅನ್ನದರಂಗ, ಮಕ್ಕಳ ರಂಗ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮಕ್ಕಳಿಲ್ಲದವರು ಮಕ್ಕಳ ರಂಗನಿಗೆ ಹರಕೆ ಹೊತ್ತರೆ ಮಡಿಲು ತುಂಬುತ್ತದೆಂಬ ನಂಬಿಕೆಯೂ ಇಂದಿಗೂ ಇದೆ ಎಂದರು. ಪಟ್ಟಣದ ಗೌರಮ್ಮನಕೆರೆ ಕ್ರಾಸ್ ನಿಂದ ದೇವಾಲಯದ ಸುಮಾರು ಎರಡು ಕಿಲೋಮೀಟರು ನಷ್ಟು ಅರವಟ್ಟಿಗೆಗಳು ನಡೆದವು ಜಾತಿ ಧರ್ಮ ವರ್ಗ ಬೇದವಿಲ್ಲದೆ ಅನ್ನಸಂತರ್ಪಣೆ ಮತ್ತು ತಿರುಮಲೆ ರಂಗನ ಪ್ರಸಾದ ಸವಿದರು. ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀರಂಗನಾಥಸ್ವಾಮಿಗೆ ಚಿನ್ನದ ಕಿರೀಟ ಧಾರಣೆ ಮಾಡಲಾಯಿತು. ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಪ್ರತಿ ಅರವಂಟಿಕೆಗಳಿಗೆ ಬೇಟಿ ನೀಡಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಆಶೋಕ್, ಬೆಂಗಳೂರು ಡೇರಿ ಮಾಜಿ ಅದ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಮಾಜಿ ನಿರ್ದೆಶಕ ಜೆಪಿ.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೆ.ಕೃಷ್ಣಮೂರ್ತಿ, ಸಮಾಜ ಸೇವಕ ತಿರುಮಲೆ ಬೈರಪ್ಪ, ಬಿಜೆಪಿ ಅಧ್ಯಕ್ಷ ವೀರಭದ್ರಯ್ಯ, ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ, ಮಾಜಿ ಪುರಸಭಾಧ್ಯರಾದ ವಿಜಯರೂಪೇಶ್, ಎಚ್.ಜೆ.ಪುರುμÉೂೀತ್ತಮ್, ಮಾಜಿ ಸದಸ್ಯರಾದ ಎಂ.ಎನ್.ಮಂಜುನಾಥ್, ಶಿವಕುಮಾರು, ಭಾಗ್ಯಮ್ಮ, ಮಾಜಿ ಸದಸ್ಯ ನರಸಿಂಹಶೆಟ್ಟಿ, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್.ಮಂಜುನಾಥ್, ತಹಶೀಲ್ದಾರ್ ಶರತ್ ಕುಮಾರು, ಪ್ರಧಾನ ವೆಂಕಟೇಶ್ ಅಯ್ಯಂಗಾರ್, ಇಓ ಸುಮಿತ್ರ, ಟಿಎಸ್.ಸತೀಶ್,ಯು.ಗೌರೀಶ್ ಸೇರಿದಂತೆ ಲಕ್ಷಾಂತರ ಮಂದಿ ಭಕ್ತರು ಇದ್ದರು.1
- ಪೋಲೀಸರಿಂದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್1
- KOLAR KI.AWAAZ KOUSAR NEWS1
- sehar kolar me 2 wheeler par sawar karnye waloon ku sakt kanoon k zarye chalaan kata jaye ga1
- 'ರಾಮಾಯಣ' ಟೀಸರ್.. ರಾಮನ ಲುಕ್ ರಿವೀಲ್! ರಣ್ಬೀರ್ ಕಪೂರ್, ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹನುಮ ಜಯಂತಿ ಅಂಗವಾಗಿ 'ರಾಮ' ಹೆಸರಿನಲ್ಲಿ ನಿರ್ಮಾಪಕರು ವಿಶೇಷ ವಿಡಿಯೋ ರಿಲೀಸ್ ಮಾಡಿದ್ದಾರೆ. 2.38 ನಿಮಿಷಗಳ ವಿಡಿಯೋದಲ್ಲಿ ರಾಮನಾಗಿ ರಣ್ಬೀರ್ ಲುಕ್, VFX, BGM ಗಮನ ಸೆಳೆಯುತ್ತಿವೆ. ನಿತೇಶ್ ತಿವಾರಿ ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಾರ್ಟ್-2 ಮುಂದಿನ ವರ್ಷದ ದೀಪಾವಳಿಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ....2
- ಡೆಲಿವರಿ ಬಾಯ್ಸ್ ಮೇಲೆ ವಲಸಿಗ ಸೆಕ್ಯೂರಿಟಿ ಇಂದ ಹಲ್ಲೆ1
- kolar old middle school aek zamanye ki bahtreen school kaun is school me taleem hasil ki hai comment kar k bataye1