ಅಳ್ನಾವರ ಸಮೀಪದ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆಯಲ್ಲಿ ೧೯೯೧-೯೨ನೇ ಸಾಲಿನ ಎಸ್ಎಸ್ಎಲ್ಸಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುರುಗಳು ಮತ್ತು ಹಳೆಯ ವಿದ್ಯಾರ್ಥಿಗಳ ಗುಂಪು ಚಿತ್ರ. ಗುರುವಂದನಾ, ಸ್ನೇಹ ಸಮ್ಮಿಲನದಲ್ಲಿ ಗುರುಗಳ ಪಾದಕ್ಕೆ ಶರಣಾದ ಹಳೆಯ ವಿದ್ಯಾರ್ಥಿಗಳು ಅಳ್ನಾವರ (ಧಾರವಾಡ ): ಸಮೀಪದ ಕಕ್ಕೇರಿ ಗ್ರಾಮದ ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆಯಲ್ಲಿ ೧೯೯೧-೯೨ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಈಚೆಗೆ ಶಾಲಾ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ದಾರಿ ತೋರಿದ ಗುರುಗಳಿಗೆ ಪಾದಪೂಜೆ ನೆರವೇರಿಸಿ, ಆತ್ಮೀಯವಾಗಿ ಸತ್ಕರಿಸಿ, ಗೌರವ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು, ಶಾಲಾ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊAಡರು. ಸಾನಿಧ್ಯ ವಹಿಸಿದ್ದ ಬಿಳಕಿ ಅವರೊಳ್ಳಿ ಮಠದ ಶ್ರೀ ಚನ್ನಬಸವದೇವರು ಆಶೀರ್ವಚನ ನೀಡಿ, ಹಿಂದಿನ ಕಾಲಘಟ್ಟದಲ್ಲಿ ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯ. ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಉಳ್ಳಾಗಡ್ಡಿ, ಶಿಕ್ಷಣ ಸಂಸ್ಥೆ ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಿದೆ ಎಂಬುದು ಹೆಮ್ಮೆಯ ಸಂಗತಿ ಎಂದರು. ಮುಖ್ಯ ಶಿಕ್ಷಕ ಐ.ಎಫ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಐ.ಜಿ. ಸಂಪಗಾವಿ, ಬಿ.ಜಿ. ಕಿಲಾರಿ, ಎ.ಎನ್.ಎಸ್. ಪಾಟೀಲ, ವಿ.ಡಿ. ಪಿರೋಜಿ, ಡಿ.ಎನ್. ಶಾಹಾಪೂರಮಠ, ಆರ್.ವೈ. ಬೆನ್ನೂರ, ಎಸ್.ಎಸ್. ಗಾಣಿಗೇರ, ಪ್ರಭು ಪ್ರಭುಣ್ಣವರ, ಬಿ.ಎ. ಹುಲಮನಿ, ಎಂ.ಬಿ. ಹೊಸಕೋಟಿ, ಎಸ್.ಎಸ್. ಜಾಧವ, ಪರಶುರಾಮ ಸೆಡೇಕರ ಹಾಗೂ ನಾಗಪ್ಪ ಮಾದರ ಮತ್ತು ಗಣ್ಯರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿದ್ದರು. ನೆನಪಿನ ಕಾಣಿಕೆ ನೀಡಲಾ ವಿನಿª?. ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಕೊನೆಯಲ್ಲಿ ಎಲ್ಲರೂ ಸೇರಿ ಗುಂಪು ಛಾಯಾಚಿತ್ರ ತೆಗೆಸಿಕೊಂಡು ಸಂತಸದ ಕ್ಷಣಗಳನ್ನು ಸವಿದರು.
ಅಳ್ನಾವರ ಸಮೀಪದ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆಯಲ್ಲಿ ೧೯೯೧-೯೨ನೇ ಸಾಲಿನ ಎಸ್ಎಸ್ಎಲ್ಸಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುರುಗಳು ಮತ್ತು ಹಳೆಯ ವಿದ್ಯಾರ್ಥಿಗಳ ಗುಂಪು ಚಿತ್ರ. ಗುರುವಂದನಾ, ಸ್ನೇಹ ಸಮ್ಮಿಲನದಲ್ಲಿ ಗುರುಗಳ ಪಾದಕ್ಕೆ ಶರಣಾದ ಹಳೆಯ ವಿದ್ಯಾರ್ಥಿಗಳು ಅಳ್ನಾವರ (ಧಾರವಾಡ ): ಸಮೀಪದ ಕಕ್ಕೇರಿ ಗ್ರಾಮದ ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆಯಲ್ಲಿ ೧೯೯೧-೯೨ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಈಚೆಗೆ ಶಾಲಾ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ದಾರಿ ತೋರಿದ ಗುರುಗಳಿಗೆ ಪಾದಪೂಜೆ ನೆರವೇರಿಸಿ, ಆತ್ಮೀಯವಾಗಿ ಸತ್ಕರಿಸಿ, ಗೌರವ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು, ಶಾಲಾ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊAಡರು. ಸಾನಿಧ್ಯ ವಹಿಸಿದ್ದ ಬಿಳಕಿ ಅವರೊಳ್ಳಿ ಮಠದ ಶ್ರೀ ಚನ್ನಬಸವದೇವರು ಆಶೀರ್ವಚನ ನೀಡಿ, ಹಿಂದಿನ ಕಾಲಘಟ್ಟದಲ್ಲಿ ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯ. ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಉಳ್ಳಾಗಡ್ಡಿ, ಶಿಕ್ಷಣ ಸಂಸ್ಥೆ ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಿದೆ ಎಂಬುದು ಹೆಮ್ಮೆಯ ಸಂಗತಿ ಎಂದರು. ಮುಖ್ಯ ಶಿಕ್ಷಕ ಐ.ಎಫ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಐ.ಜಿ. ಸಂಪಗಾವಿ, ಬಿ.ಜಿ. ಕಿಲಾರಿ, ಎ.ಎನ್.ಎಸ್. ಪಾಟೀಲ, ವಿ.ಡಿ. ಪಿರೋಜಿ, ಡಿ.ಎನ್. ಶಾಹಾಪೂರಮಠ, ಆರ್.ವೈ. ಬೆನ್ನೂರ, ಎಸ್.ಎಸ್. ಗಾಣಿಗೇರ, ಪ್ರಭು ಪ್ರಭುಣ್ಣವರ, ಬಿ.ಎ. ಹುಲಮನಿ, ಎಂ.ಬಿ. ಹೊಸಕೋಟಿ, ಎಸ್.ಎಸ್. ಜಾಧವ, ಪರಶುರಾಮ ಸೆಡೇಕರ ಹಾಗೂ ನಾಗಪ್ಪ ಮಾದರ ಮತ್ತು ಗಣ್ಯರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿದ್ದರು. ನೆನಪಿನ ಕಾಣಿಕೆ ನೀಡಲಾ ವಿನಿª?. ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಕೊನೆಯಲ್ಲಿ ಎಲ್ಲರೂ ಸೇರಿ ಗುಂಪು ಛಾಯಾಚಿತ್ರ ತೆಗೆಸಿಕೊಂಡು ಸಂತಸದ ಕ್ಷಣಗಳನ್ನು ಸವಿದರು.
- ಖಾಲಿ ಹುದ್ದೆಗಳ ಭರ್ತಿ ಹಾಗೂ ಹಗರಣಗಳ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು. ಅನುಮತಿ ಇಲ್ಲದ ಕಾರಣ ಪ್ರತಿಭಟನೆ ಕೈಬಿಡಲು ಪೊಲೀಸರು ಮನವೊಲಿಸಿದರೂ ಒಪ್ಪದಿದ್ದಾಗ ಅವರನ್ನು ವಶಕ್ಕೆ ಪಡೆಯಲಾಯಿತು.1
- ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿ ರೈತರ ಜೊತೆ ಚರ್ಚೆ ಇಲ್ಲದೆ ಕಾಮಗಾರಿ ಕೈಗೊಳ್ಳುವುದರನ್ನ ಖಂಡಿಸಿ ಪ್ರತಿಭಟನೆ ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನಿ ಕಾರ್ಯದರ್ಶಿ ಆಮ ಆದ್ಮಿ ಪಕ್ಷ ಹಾಗೂ ರೈತ ಸಂಘ ಇವರ ನೇತೃತ್ವದಲ್ಲಿ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರ ಜೊತೆ ಚರ್ಚೆ ಇಲ್ಲದೆ ಆ ವೈಜ್ಞಾನಿಕವಾಗಿ ರೈತರಿಗೆ ಯಾವುದೇ ಉಪಯೋಗ ಇಲ್ಲದೆ ಮಾಡುತ್ತಿರುವುದನ್ನು ಖಂಡಿಸಿ ಅಪ್ಪರ್ ತುಂಗಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರು ವಾಲಿಕಾರ್, ಗ್ರಾಮ ಪಂಚಾಯಿತಿ ಪಿಡಿಒ, ಹಾಗೂ ಕಾಗಿನಲ್ಲಿ ಪ್ರಾಧಿಕಾರ ಕಮಿಷನರ್ ಅವರಿಗೆ ಒತ್ತಾಯ ಮಾಡಿ ರೈತರ ಸಭೆಯನ್ನು ಕರೆದು ಚರ್ಚೆ ಮಾಡಲಾಯಿತು. ಚರ್ಚೆಯಲ್ಲಿ ರೈತರು ಕಾಮಗಾರಿಯ ಅವೈಜ್ಞಾನಿಕತೆ ಹಾಗೂ ರೈತರಿಗೆ ಯಾವುದೇ ಉಪಯೋಗ ಇಲ್ಲವಿದ್ದನ್ನು ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಶಾಸಕರು ಬಸವರಾಜ್ ಶಿವಣ್ಣವರ್ ರೈತರ ಜೊತೆ ಚರ್ಚೆ ಇಲ್ಲದೆ ಕಾಂಟ್ರಾಕ್ಟರ್ ಗಳಿಗೆ ಕೆಲಸ ಮಾಡುತ್ತಿರುವುದನ್ನು ಕೂಡ ಖಂಡಿಸಲಾಯಿತು, ಸಂದರ್ಭದಲ್ಲಿ ಕಾಗಿನಲ್ಲಿ ಮಾಜಿ ಅಧ್ಯಕ್ಷರು ಮತ್ತೆಹಳ್ಳಿ, ಉಪಾಧ್ಯಕ್ಷರು ಪ್ರೇಮಾ ಜೋಗುಳ, ಗ್ರಾಮ್ ಪಂಚಾಯ್ತಿ ಸದಸ್ಯರು ರಾಮತುಲ್ಲಾ ಹಾವೇರಿ, ಊರಿನ ಜನಸಾಮಾನ್ಯರು, ರೈತರು ಮತ್ತು ಇತರರು ಉಪಸ್ಥಿತರಿದ್ದರು.1
- ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.1
- #dss ಭೀಮ ಧ್ವನಿ ಸಂಘಟನೆ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ಜರುಗಿತು #dss ಭೀಮ ಧ್ವನಿ ಸಂಘಟನೆ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ಜರುಗಿತು1
- ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ ರಾಹುಲ್ ಗಾಂಧಿ ಸಾತ್ ನೀಡಿದರು1
- ಹಾವೇರಿ ಜಲ್ಲಾ ಹಾನಗಲ್1
- ಗದಗ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನಗರದ ತೋಂಟದಾರ್ಯ ಇಂಜನೀಯರ್ ಕಾಲೇಜ್ ಬಳಿ ಲಾರಿಯನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಸುಮಾರು 14 ಲಕ್ಷ ಮೌಲ್ಯದ ಅಂದಾಜು 34,720 ಕೆಜಿ ಅನ್ನಭಾಗ್ಯ ಅಕ್ಕಿ, ಹಾಗೂ ಮಧ್ಯಪ್ರದೇಶ ಮೂಲದ MP-09 DN-7251 ನಂಬರಿನ 29 ಲಕ್ಷ ಮೌಲದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ. ಈ ಲಾರಿಯು ವಿಜಯನಗರ ಜಿಲ್ಲೆ ಹರಪನಹಳ್ಳಿ ಕಡೆಯಿಂದ ಇಳಕಲ್ ಮಾರ್ಗವಾಗಿ ಗುಜರಾತ್'ಗೆ ಹೊರಟಿತ್ತು ಎಂದು ತಿಳಿದಿದೆ, ಈಗ ಸಧ್ಯ ಲಾರಿ ಚಾಲಕನನ್ನು ಪೊಲೀಸ್ ವಶಕ್ಕೆಪಡೆದಿದ್ದಾರೆ. ಅಲ್ಲದೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ವಶಕ್ಕೆ ಪಡೆದ ಅಕ್ಕಿ ಮೂಟೆಗಳನ್ನು KFCSC ಗೋಡೌನ್ ಗೆ ಸಾಗಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ಎಸ್ಪಿ ರೋಹನ್ ಜಗದೀಶ್, ಗದಗ ಬೆಟಗೇರಿ ಆಹಾರ ನೀರಿಕ್ಷಕ ಜಗದೀಶ್ ಅಮಾತಿ ಅವರು ಭೇಟಿ ಪರಿಶೀಲನೆ ನೆಡೆಸಿದ್ದಾರೆ.1
- ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಬಸವರಾಜ ಕಲ್ಗುಡಿ, ಬಸವಣ್ಣನವರು ಜಾತಿರಹಿತ ಸಮಾಜದ ಕನಸು ಕಂಡಿದ್ದರು ಎಂದು ಧಾರವಾಡದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದರು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಮಾನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು ಎಂದರು. ಈ ಸಂದರ್ಭದಲ್ಲಿ ಡಾ. ವೀರಣ್ಣ ರಾಜೂರ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.1