logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹುಣಸೂರು ತಾಲೂಕಿನ ಗಿರಿಜನ ಹಾಡಿಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 30ರಿಂದ ಆರಂಭಗೊಂಡಿದ್ದ ಎನ್ಯುಮರೇಷನ್ ಫಾರಂ ವಿತರಣೆ ಮತ್ತು ಭರ್ತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗಿರಿಜನರ ಅಳಲಿನ ಕುರಿತು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ ಅಭಿಯಾನ ನಡೆಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 10ರಂದು ತಾಲೂಕು ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 20ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಆದಿವಾಸಿಗಳ ಸಂಪೂರ್ಣ ಸಹಕಾರ ಕೋರಿರುವ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ವಿವಿಧ ಹಾಡಿಗಳಿಗೆ ತೆರಳಿ ಕಾರ್ಯನಿರ್ವಹಿಸಲು ಶಿಕ್ಷಕರ ತಂಡಗಳನ್ನು ನಿಯೋಜಿಸಿದ್ದಾರೆ. ನಿಯೋಜಿತ ತಂಡಗಳ ವಿವರ ಹೀಗಿದೆ: ಚಂದನಗಿರಿ, ಬೋಳನಹಳ್ಳಿ ಮತ್ತು ಜೀನಹಳ್ಳಿ ಹಾಡಿಗಳಿಗೆ ಸಹಶಿಕ್ಷಕ ಸಿ.ಕೆ.ಚೇತನ್; ಶೆಟ್ಟಳ್ಳಿ ಹೊಸ ಮತ್ತು ಹಳೆಹಾಡಿಗೆ ಶಿಕ್ಷಕ ಎಸ್.ಯೋಗೇಶ್; ಮಾಸ್ತಮ್ಮನಹಾಡಿ, ಬೀರತಮ್ಮನಹಳ್ಳಿ ಹಾಡಿ, ಕರ್ಣಕುಪ್ಪೆ, ಹೆಮ್ಮಿಗೆ ಹಾಡಿಗಳಿಗೆ ಶಿಕ್ಷಕ ಕೆ.ಎಸ್.ರಾಜು; ಮಂಗಳೂರು ಮಾಳ (ಜಿಕೆ ಮತ್ತು ಡೋಂಗ್ರಿ ಗೆರೇಶಿಯಾ) ಹಾಡಿಗಳಿಗೆ ಸಹಶಿಕ್ಷಕ ಟಿ.ಬಿ.ಮಹದೇವ; ಕೊಟ್ಟಿಗೆ ಕಾವಲ್, ಕಾಳೇನಹಳ್ಳಿ, ಅಂಬೇಡ್ಕರ್‌ನಗರ (ಡೋಂಗ್ರಿ) ಹಾಡಿಗಳಿಗೆ ಸಹಶಿಕ್ಷಕ ಆರ್.ಸಿ.ಈರಯ್ಯ; ಹಳೇವಾರಂಚಿ, ಬಲ್ಲೇನಹಳ್ಳಿ, ಪೆಂಜಳ್ಳಿ ಗ್ರಾಮಗಳಿಗೆ ಶಿಕ್ಷಕ ಎಸ್.ಯದುನಾರಾಯಣ್; ಉದ್ದೂರು, ಸೋನಳ್ಳಿ, ಮಹದೇವಪುರ, ಹೊಸಪುರ ಮತ್ತು ಹಳೇಪುರ ಗ್ರಾಮಗಳಿಗೆ ಶಿಕ್ಷಕ ಕೆ.ಆರ್.ಕೆಂಚಪ್ಪ ಅವರನ್ನು ನಿಯೋಜಿಸಲಾಗಿದೆ. ಇದೇ ರೀತಿ 1ನೇ ಮತ್ತು 2ನೇ ಪಕ್ಷಿರಾಜಪುರ (ಹಕ್ಕಿಪಿಕ್ಕಿ) ಹಾಡಿಗಳಿಗೆ ಶಿಕ್ಷಕರಾದ ಹೇಮಾಕ್ಷಿ ಮತ್ತು ಸುನಿ; ನೇರಳಕುಪ್ಪೆ ಎ ಮತ್ತು ಬಿ ಹಾಡಿ, ಬಿಲ್ಲೇನಹೊಸಹಳ್ಳಿ ಹಾಡಿಗಳಿಗೆ ಶಿಕ್ಷಕ ಶೇಖರ್; ಅಯ್ಯನಕೆರೆ ಮತ್ತು ಹೆಬ್ಬಾಳ ಹಾಡಿಗಳಿಗೆ ಶಿಕ್ಷಕ ಕೆ.ಕೆ.ಸ್ವಾಮಿ; ವೀರನಹೊಸಹಳ್ಳಿ, ಕೆರೆಹಾಡಿ ಮತ್ತು ಭರತವಾಡಿ ಹಾಡಿಗಳಿಗೆ ಶಿಕ್ಷಕ ಬಿ.ಆರ್.ಗಿರೀಶ್; ಮಾದಯ್ಯನಕಟ್ಟೆ, ತೆಕ್ಕಲಹಾಡಿಗಳಿಗೆ ಶಿಕ್ಷಕ ಎಚ್.ಪಿ.ಅಶೋಕ್; ದಾಸನಪುರ, ಮಾದಳ್ಳಿಗಳಿಗೆ ಶಿಕ್ಷಕ ಪ್ರೇಮ್‌ಕುಮಾರ್; ತರೀಕಲ್ ರಂಗಯ್ಯನಕೊಪ್ಪಲು, ಹಳ್ಳದಕೊಪ್ಪಲು ಗ್ರಾಮಗಳಿಗೆ ಶಿಕ್ಷಕ ಎಚ್.ಸಿ.ಶಿವಜಲೇಂದ್ರ; ನಾಗಪುರ 1, 2, 3, 4, 5 ಮತ್ತು 6ನೇ ಘಟಕಗಳಿಗೆ ಶಿಕ್ಷಕರಾದ ಎಚ್.ಎಂ.ಪ್ರಕಾಶ್, ಶಬೀನಾ ಹಾಗೂ ಕೆ.ಜಿ.ಹೇಮಾಕ್ಷಿ; ಯಶೋಧರಪುರ, ಕಲ್ಕುಣಿಕೆ ಮತ್ತು ಬೀರನಹಳ್ಳಿ ಕಾವಲ್ ಗ್ರಾಮಗಳಿಗೆ ಶಿಕ್ಷಕ ವೈ.ಎಸ್.ಲೋಕೇಶ್; ಶಂಕರಪುರ (ಡೋಂಗ್ರಿ ಗೆರೇಶಿಯಾ ಮತ್ತು ಹಕ್ಕಿಪಿಕ್ಕಿ) ಹಾಡಿಗೆ ಶಿಕ್ಷಕ ನವೀನ್‌ಕುಮಾರ್; ಕೊಳವಿಗೆ, ಚಿಕ್ಕಹೆಜ್ಜೂರು ಗ್ರಾಮಗಳಿಗೆ ಶಿಕ್ಷಕ ಟಿ.ಬಿ.ಸುಬ್ಬೇಗೌಡ; ಕಪ್ಪನಕಟ್ಟೆ, ವಿಜಯಗಿರಿ, ಹರಳಹಳ್ಳಿ ಹಾಡಿಗಳಿಗೆ ಶಿಕ್ಷಕ ಎಂ.ಎ.ಮಂಜುನಾಥ್ ಮತ್ತು ಬಿ.ಆರ್.ಕಾವಲ್ (ಡೋಂಗ್ರಿ ಗೆರೇಶಿಯಾ) ಹಾಡಿಗೆ ಶಿಕ್ಷಕ ಕೆ.ಎಂ.ರಾಜು ಅವರನ್ನು ನಿಯೋಜಿಸಲಾಗಿದೆ. ಒಟ್ಟು ಉಸ್ತುವಾರಿಗಳಾಗಿ ಶೆಟ್ಟಳ್ಳಿ ವಸತಿಶಾಲೆಯ ಮುಖ್ಯಶಿಕ್ಷಕ ಎಂ.ಟಿ.ಶಿವಕುಮಾರ್, ನಲ್ಲೂರುಪಾಲ ಮತ್ತು ನೇರಳಕುಪ್ಪೆ ವಸತಿ ಶಾಲೆ ಮುಖ್ಯಶಿಕ್ಷಕ ಎಚ್.ಎಸ್.ಚೇತನ್‌ಕುಮಾರ್, ವೀರನಹೊಸಹಳ್ಳಿ ವಸತಿ ಶಾಲೆಯ ಮುಖ್ಯಶಿಕ್ಷಕ ಕೆ.ಎ.ಮೋಹನ್, ನಾಗಪುರ ವಸತಿಶಾಲೆಯ ಮುಖ್ಯಶಿಕ್ಷಕ ಸಿ.ಲಕ್ಷ್ಮಣ್ ಹಾಗೂ ಕೊಳವಿಗೆ ವಸತಿ ಶಾಲೆಯ ಮುಖ್ಯಶಿಕ್ಷಕ ಸಣ್ಣಯ್ಯ ಸೇರಿದಂತೆ ಒಟ್ಟು ಆರು ಜನರನ್ನು ನೇಮಿಸಲಾಗಿದೆ. ತಾಲೂಕಿನ ಎಲ್ಲಾ ಗಿರಿಜನರೂ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿಯೋಜಿತ ತಂಡಗಳು ಹಾಡಿಗಳಿಗೆ ಭೇಟಿ ನೀಡಿದಾಗ ಆದಿವಾಸಿಗಳು ಸೂಕ್ತ ಸಹಕಾರ ನೀಡಬೇಕು ಮತ್ತು ನಿಗದಿತ ಅವಧಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

8 hrs ago
user_Ravikumar
Ravikumar
Local News Reporter ಹುಣಸೂರು, ಮೈಸೂರು, ಕರ್ನಾಟಕ•
8 hrs ago
4fe101d6-c09e-44ac-8f43-8ff94d72ae84

ಹುಣಸೂರು ತಾಲೂಕಿನ ಗಿರಿಜನ ಹಾಡಿಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 30ರಿಂದ ಆರಂಭಗೊಂಡಿದ್ದ ಎನ್ಯುಮರೇಷನ್ ಫಾರಂ ವಿತರಣೆ ಮತ್ತು ಭರ್ತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗಿರಿಜನರ ಅಳಲಿನ ಕುರಿತು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ ಅಭಿಯಾನ ನಡೆಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 10ರಂದು ತಾಲೂಕು ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 20ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಆದಿವಾಸಿಗಳ ಸಂಪೂರ್ಣ ಸಹಕಾರ ಕೋರಿರುವ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ವಿವಿಧ ಹಾಡಿಗಳಿಗೆ ತೆರಳಿ ಕಾರ್ಯನಿರ್ವಹಿಸಲು ಶಿಕ್ಷಕರ ತಂಡಗಳನ್ನು ನಿಯೋಜಿಸಿದ್ದಾರೆ. ನಿಯೋಜಿತ ತಂಡಗಳ ವಿವರ ಹೀಗಿದೆ: ಚಂದನಗಿರಿ, ಬೋಳನಹಳ್ಳಿ ಮತ್ತು ಜೀನಹಳ್ಳಿ ಹಾಡಿಗಳಿಗೆ ಸಹಶಿಕ್ಷಕ ಸಿ.ಕೆ.ಚೇತನ್; ಶೆಟ್ಟಳ್ಳಿ ಹೊಸ ಮತ್ತು ಹಳೆಹಾಡಿಗೆ ಶಿಕ್ಷಕ ಎಸ್.ಯೋಗೇಶ್; ಮಾಸ್ತಮ್ಮನಹಾಡಿ, ಬೀರತಮ್ಮನಹಳ್ಳಿ ಹಾಡಿ, ಕರ್ಣಕುಪ್ಪೆ, ಹೆಮ್ಮಿಗೆ ಹಾಡಿಗಳಿಗೆ ಶಿಕ್ಷಕ ಕೆ.ಎಸ್.ರಾಜು; ಮಂಗಳೂರು ಮಾಳ (ಜಿಕೆ ಮತ್ತು ಡೋಂಗ್ರಿ ಗೆರೇಶಿಯಾ) ಹಾಡಿಗಳಿಗೆ ಸಹಶಿಕ್ಷಕ ಟಿ.ಬಿ.ಮಹದೇವ; ಕೊಟ್ಟಿಗೆ ಕಾವಲ್, ಕಾಳೇನಹಳ್ಳಿ, ಅಂಬೇಡ್ಕರ್‌ನಗರ (ಡೋಂಗ್ರಿ) ಹಾಡಿಗಳಿಗೆ ಸಹಶಿಕ್ಷಕ ಆರ್.ಸಿ.ಈರಯ್ಯ; ಹಳೇವಾರಂಚಿ, ಬಲ್ಲೇನಹಳ್ಳಿ, ಪೆಂಜಳ್ಳಿ ಗ್ರಾಮಗಳಿಗೆ ಶಿಕ್ಷಕ ಎಸ್.ಯದುನಾರಾಯಣ್; ಉದ್ದೂರು, ಸೋನಳ್ಳಿ, ಮಹದೇವಪುರ, ಹೊಸಪುರ ಮತ್ತು ಹಳೇಪುರ ಗ್ರಾಮಗಳಿಗೆ ಶಿಕ್ಷಕ ಕೆ.ಆರ್.ಕೆಂಚಪ್ಪ ಅವರನ್ನು ನಿಯೋಜಿಸಲಾಗಿದೆ. ಇದೇ ರೀತಿ 1ನೇ ಮತ್ತು 2ನೇ ಪಕ್ಷಿರಾಜಪುರ (ಹಕ್ಕಿಪಿಕ್ಕಿ) ಹಾಡಿಗಳಿಗೆ ಶಿಕ್ಷಕರಾದ ಹೇಮಾಕ್ಷಿ ಮತ್ತು ಸುನಿ; ನೇರಳಕುಪ್ಪೆ ಎ ಮತ್ತು ಬಿ ಹಾಡಿ, ಬಿಲ್ಲೇನಹೊಸಹಳ್ಳಿ ಹಾಡಿಗಳಿಗೆ ಶಿಕ್ಷಕ ಶೇಖರ್; ಅಯ್ಯನಕೆರೆ ಮತ್ತು ಹೆಬ್ಬಾಳ ಹಾಡಿಗಳಿಗೆ ಶಿಕ್ಷಕ ಕೆ.ಕೆ.ಸ್ವಾಮಿ; ವೀರನಹೊಸಹಳ್ಳಿ, ಕೆರೆಹಾಡಿ ಮತ್ತು ಭರತವಾಡಿ ಹಾಡಿಗಳಿಗೆ ಶಿಕ್ಷಕ ಬಿ.ಆರ್.ಗಿರೀಶ್; ಮಾದಯ್ಯನಕಟ್ಟೆ, ತೆಕ್ಕಲಹಾಡಿಗಳಿಗೆ ಶಿಕ್ಷಕ ಎಚ್.ಪಿ.ಅಶೋಕ್; ದಾಸನಪುರ, ಮಾದಳ್ಳಿಗಳಿಗೆ ಶಿಕ್ಷಕ ಪ್ರೇಮ್‌ಕುಮಾರ್; ತರೀಕಲ್ ರಂಗಯ್ಯನಕೊಪ್ಪಲು, ಹಳ್ಳದಕೊಪ್ಪಲು ಗ್ರಾಮಗಳಿಗೆ ಶಿಕ್ಷಕ ಎಚ್.ಸಿ.ಶಿವಜಲೇಂದ್ರ; ನಾಗಪುರ 1, 2, 3, 4, 5 ಮತ್ತು 6ನೇ ಘಟಕಗಳಿಗೆ ಶಿಕ್ಷಕರಾದ ಎಚ್.ಎಂ.ಪ್ರಕಾಶ್, ಶಬೀನಾ ಹಾಗೂ ಕೆ.ಜಿ.ಹೇಮಾಕ್ಷಿ; ಯಶೋಧರಪುರ, ಕಲ್ಕುಣಿಕೆ ಮತ್ತು ಬೀರನಹಳ್ಳಿ ಕಾವಲ್ ಗ್ರಾಮಗಳಿಗೆ ಶಿಕ್ಷಕ ವೈ.ಎಸ್.ಲೋಕೇಶ್; ಶಂಕರಪುರ (ಡೋಂಗ್ರಿ ಗೆರೇಶಿಯಾ ಮತ್ತು ಹಕ್ಕಿಪಿಕ್ಕಿ) ಹಾಡಿಗೆ ಶಿಕ್ಷಕ ನವೀನ್‌ಕುಮಾರ್; ಕೊಳವಿಗೆ, ಚಿಕ್ಕಹೆಜ್ಜೂರು ಗ್ರಾಮಗಳಿಗೆ ಶಿಕ್ಷಕ ಟಿ.ಬಿ.ಸುಬ್ಬೇಗೌಡ; ಕಪ್ಪನಕಟ್ಟೆ, ವಿಜಯಗಿರಿ, ಹರಳಹಳ್ಳಿ ಹಾಡಿಗಳಿಗೆ ಶಿಕ್ಷಕ ಎಂ.ಎ.ಮಂಜುನಾಥ್ ಮತ್ತು ಬಿ.ಆರ್.ಕಾವಲ್ (ಡೋಂಗ್ರಿ ಗೆರೇಶಿಯಾ) ಹಾಡಿಗೆ ಶಿಕ್ಷಕ ಕೆ.ಎಂ.ರಾಜು ಅವರನ್ನು ನಿಯೋಜಿಸಲಾಗಿದೆ. ಒಟ್ಟು ಉಸ್ತುವಾರಿಗಳಾಗಿ ಶೆಟ್ಟಳ್ಳಿ ವಸತಿಶಾಲೆಯ ಮುಖ್ಯಶಿಕ್ಷಕ ಎಂ.ಟಿ.ಶಿವಕುಮಾರ್, ನಲ್ಲೂರುಪಾಲ ಮತ್ತು ನೇರಳಕುಪ್ಪೆ ವಸತಿ ಶಾಲೆ ಮುಖ್ಯಶಿಕ್ಷಕ ಎಚ್.ಎಸ್.ಚೇತನ್‌ಕುಮಾರ್, ವೀರನಹೊಸಹಳ್ಳಿ ವಸತಿ ಶಾಲೆಯ ಮುಖ್ಯಶಿಕ್ಷಕ ಕೆ.ಎ.ಮೋಹನ್, ನಾಗಪುರ ವಸತಿಶಾಲೆಯ ಮುಖ್ಯಶಿಕ್ಷಕ ಸಿ.ಲಕ್ಷ್ಮಣ್ ಹಾಗೂ ಕೊಳವಿಗೆ ವಸತಿ ಶಾಲೆಯ ಮುಖ್ಯಶಿಕ್ಷಕ ಸಣ್ಣಯ್ಯ ಸೇರಿದಂತೆ ಒಟ್ಟು ಆರು ಜನರನ್ನು ನೇಮಿಸಲಾಗಿದೆ. ತಾಲೂಕಿನ ಎಲ್ಲಾ ಗಿರಿಜನರೂ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿಯೋಜಿತ ತಂಡಗಳು ಹಾಡಿಗಳಿಗೆ ಭೇಟಿ ನೀಡಿದಾಗ ಆದಿವಾಸಿಗಳು ಸೂಕ್ತ ಸಹಕಾರ ನೀಡಬೇಕು ಮತ್ತು ನಿಗದಿತ ಅವಧಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

More news from ಕರ್ನಾಟಕ and nearby areas
  • ಮೈಸೂರಿನಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಸ್.ಜಾನಕಿ ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಅವರ ಅಂತಿಮ ದರ್ಶನಕ್ಕಾಗಿ ಸಾಕಷ್ಟು ಅಭಿಮಾನಿಗಳು ಬರುವ ನಿರೀಕ್ಷೆ ಇದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಒಟ್ಟು 455 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 4 ಎಸಿಪಿ, 12 ಇನ್ಸ್‌ಪೆಕ್ಟರ್, 20 ಪಿಎಸ್‌ಐಗಳು, 3 ಕೆ.ಎಸ್.ಆರ್.ಪಿ ಹಾಗೂ 3 ಕಮಾಂಡೋ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಬ್ಯಾರಿಕೇಟ್‌ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
    1
    ಮೈಸೂರಿನಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಸ್.ಜಾನಕಿ ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಅವರ ಅಂತಿಮ ದರ್ಶನಕ್ಕಾಗಿ ಸಾಕಷ್ಟು ಅಭಿಮಾನಿಗಳು ಬರುವ ನಿರೀಕ್ಷೆ ಇದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಒಟ್ಟು 455 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 4 ಎಸಿಪಿ, 12 ಇನ್ಸ್‌ಪೆಕ್ಟರ್, 20 ಪಿಎಸ್‌ಐಗಳು, 3 ಕೆ.ಎಸ್.ಆರ್.ಪಿ ಹಾಗೂ 3 ಕಮಾಂಡೋ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಬ್ಯಾರಿಕೇಟ್‌ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
    user_Ravikumar
    Ravikumar
    Local News Reporter ಹುಣಸೂರು, ಮೈಸೂರು, ಕರ್ನಾಟಕ•
    8 hrs ago
  • ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಂಗೀತ ಪಯಣ ಹೊಂದಿದ್ದ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ಅಪಾರ ನಷ್ಟವನ್ನುಂಟು ಮಾಡಿದೆ. ಅಪ್ರತಿಮ ಗಾಯಕಿಯ ನಿಧನಕ್ಕೆ ಅಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
    3
    ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಂಗೀತ ಪಯಣ ಹೊಂದಿದ್ದ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ಅಪಾರ ನಷ್ಟವನ್ನುಂಟು ಮಾಡಿದೆ.

ಅಪ್ರತಿಮ ಗಾಯಕಿಯ ನಿಧನಕ್ಕೆ ಅಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
    user_ಚಂದನ್ ಕುಮಾರ್ M S ಮಿರ್ಲೆ
    ಚಂದನ್ ಕುಮಾರ್ M S ಮಿರ್ಲೆ
    Grain Trader ಸಾಲಿಗ್ರಾಮ, ಮೈಸೂರು, ಕರ್ನಾಟಕ•
    20 hrs ago
  • ಭಾರತದಲ್ಲಿ ವೈರಲ್ ಆಗುತ್ತಿರುವ ಚರ್ಚೆಯೊಂದರಲ್ಲಿ, ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಔಕಾಫ್ ಮಂಡಳಿಯ ಬೋರ್ಡ್ ಸಭೆಗಳ ನಡಾವಳಿಗಳನ್ನು ನೇರ ರೆಕಾರ್ಡಿಂಗ್ ಮಾಡಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಮಂಡಳಿಯ ಸಭೆಗಳ ನೇರ ರೆಕಾರ್ಡಿಂಗ್ ಪ್ರಕ್ರಿಯೆಯನ್ನು ಏಕೆ ಜಾರಿಗೆ ತರಬಾರದು ಎಂದು ಕೇಳಲಾಗುತ್ತಿದ್ದು, ಈ ವಿಷಯವು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
    1
    ಭಾರತದಲ್ಲಿ ವೈರಲ್ ಆಗುತ್ತಿರುವ ಚರ್ಚೆಯೊಂದರಲ್ಲಿ, ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಔಕಾಫ್ ಮಂಡಳಿಯ ಬೋರ್ಡ್ ಸಭೆಗಳ ನಡಾವಳಿಗಳನ್ನು ನೇರ ರೆಕಾರ್ಡಿಂಗ್ ಮಾಡಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಮಂಡಳಿಯ ಸಭೆಗಳ ನೇರ ರೆಕಾರ್ಡಿಂಗ್ ಪ್ರಕ್ರಿಯೆಯನ್ನು ಏಕೆ ಜಾರಿಗೆ ತರಬಾರದು ಎಂದು ಕೇಳಲಾಗುತ್ತಿದ್ದು, ಈ ವಿಷಯವು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಸಾರ್ವಜನಿಕ ಅಂತಿಮ ದರ್ಶನ ಪಡೆದ ಶಾಸಕ ಜಿ.ಟಿ. ದೇವೇಗೌಡ ಅವರು ಭಾವಪೂರ್ಣ ನಮನ ಸಲ್ಲಿಸಿದರು. ಈ ವೇಳೆ ಜಿ.ಟಿ. ದೇವೇಗೌಡ ಅವರು ಎಸ್. ಜಾನಕಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಎಸ್. ಜಾನಕಿ ಅವರ ಅಗಲಿಕೆಯು ಸಂಗೀತ ಲೋಕಕ್ಕೆ ಅಪಾರ ನಷ್ಟ ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಸಂತಾಪ ಸೂಚಿಸಿದರು.
    1
    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಸಾರ್ವಜನಿಕ ಅಂತಿಮ ದರ್ಶನ ಪಡೆದ ಶಾಸಕ ಜಿ.ಟಿ. ದೇವೇಗೌಡ ಅವರು ಭಾವಪೂರ್ಣ ನಮನ ಸಲ್ಲಿಸಿದರು. ಈ ವೇಳೆ ಜಿ.ಟಿ. ದೇವೇಗೌಡ ಅವರು ಎಸ್. ಜಾನಕಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಎಸ್. ಜಾನಕಿ ಅವರ ಅಗಲಿಕೆಯು ಸಂಗೀತ ಲೋಕಕ್ಕೆ ಅಪಾರ ನಷ್ಟ ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಸಂತಾಪ ಸೂಚಿಸಿದರು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • ಐಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಕರ್ನಾಟಕದ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿದ್ದಾರೆ.
    1
    ಐಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಕರ್ನಾಟಕದ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿದ್ದಾರೆ.
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    12 hrs ago
  • ಮಂಡ್ಯದಲ್ಲಿ 35 ವರ್ಷಗಳ ಕಾಲ ಸಂಸಾರಕ್ಕಾಗಿ ದುಡಿದು ಮನೆ ಕಟ್ಟಿದ ವ್ಯಕ್ತಿಯೊಬ್ಬರು, ಈಗ ತಮ್ಮದೇ ಪತ್ನಿ ಮತ್ತು ಮಕ್ಕಳಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಅನಾರೋಗ್ಯವಿದ್ದರೂ ಯಾವುದೇ ನೆರವು ನೀಡದೆ, ಕನಿಷ್ಠ ಊಟ ಮತ್ತು ನೀರನ್ನೂ ಕೊಡದೆ ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಪತಿಯು ಮಂಡ್ಯದಲ್ಲಿರುವ ರಾಷ್ಟ್ರೀಯ ಪುರುಷರ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ಪತ್ನಿಯ ವಿರುದ್ಧ ಅಕ್ರಮ ಸಂಬಂಧ ಹೊಂದಿರುವ ಗಂಭೀರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಅವರು ಮಾಡಿದ್ದಾರೆ.
    1
    ಮಂಡ್ಯದಲ್ಲಿ 35 ವರ್ಷಗಳ ಕಾಲ ಸಂಸಾರಕ್ಕಾಗಿ ದುಡಿದು ಮನೆ ಕಟ್ಟಿದ ವ್ಯಕ್ತಿಯೊಬ್ಬರು, ಈಗ ತಮ್ಮದೇ ಪತ್ನಿ ಮತ್ತು ಮಕ್ಕಳಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಅನಾರೋಗ್ಯವಿದ್ದರೂ ಯಾವುದೇ ನೆರವು ನೀಡದೆ, ಕನಿಷ್ಠ ಊಟ ಮತ್ತು ನೀರನ್ನೂ ಕೊಡದೆ ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ಪತಿಯು ಮಂಡ್ಯದಲ್ಲಿರುವ ರಾಷ್ಟ್ರೀಯ ಪುರುಷರ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ಪತ್ನಿಯ ವಿರುದ್ಧ ಅಕ್ರಮ ಸಂಬಂಧ ಹೊಂದಿರುವ ಗಂಭೀರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಅವರು ಮಾಡಿದ್ದಾರೆ.
    user_AsnNews24Kannada
    AsnNews24Kannada
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    3 hrs ago
  • ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದ ಸಮೀಪವಿರುವ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾಗಿರುವ ಸಂಪಿಗೆ ಬೀರೇಶ್ವರಸ್ವಾಮಿ ಹಾಗೂ ಕಾಳಮ್ಮನವರ ದೇವಸ್ಥಾನ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಬೀರೇಶ್ವರಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಉದ್ಘಾಟನೆಯ ಅಂಗವಾಗಿ ಶನಿವಾರ ಹಾಗೂ ಭಾನುವಾರ ವಿವಿಧ ಹೋಮ ಹವನಗಳು ನಡೆದವು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
    1
    ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದ ಸಮೀಪವಿರುವ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾಗಿರುವ ಸಂಪಿಗೆ ಬೀರೇಶ್ವರಸ್ವಾಮಿ ಹಾಗೂ ಕಾಳಮ್ಮನವರ ದೇವಸ್ಥಾನ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಬೀರೇಶ್ವರಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಉದ್ಘಾಟನೆಯ ಅಂಗವಾಗಿ ಶನಿವಾರ ಹಾಗೂ ಭಾನುವಾರ ವಿವಿಧ ಹೋಮ ಹವನಗಳು ನಡೆದವು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    20 min ago
  • ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಗಾಯಕಿ ಸುನೀತಾ ಅವರು ಅತ್ಯಂತ ಭಾವುಕರಾಗಿ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಸಾಕ್ಷಾತ್ ಶಾರದೆಯನ್ನು ನೋಡಿಲ್ಲವಾದರೂ ನಮ್ಮ ಪಾಲಿಗೆ ಜಾನಕಿ ಅವರೇ ಸರಸ್ವತಿ ಮತ್ತು ಶಾರದೆ ಎಂದು ಕೊಂಡಾಡಿದರು. ಎಲ್ಲಾ ರೀತಿಯ ಹಾಡುಗಳನ್ನು ಅದ್ಭುತವಾಗಿ ಹಾಡಿದ ಮಹಾನ್ ಗಾಯಕಿ ಅವರಾಗಿದ್ದು, ನಮ್ಮಂತಹ ಅನೇಕ ಗಾಯಕಿಯರಿಗೆ ಪ್ರೇರಣೆ ಹಾಗೂ ಮಾರ್ಗದರ್ಶಿಯಾಗಿದ್ದರು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದ ಸುನೀತಾ ಅವರು, ಜಾನಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣವಾಗಿ ಹಾರೈಸಿದರು.
    1
    ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಗಾಯಕಿ ಸುನೀತಾ ಅವರು ಅತ್ಯಂತ ಭಾವುಕರಾಗಿ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಸಾಕ್ಷಾತ್ ಶಾರದೆಯನ್ನು ನೋಡಿಲ್ಲವಾದರೂ ನಮ್ಮ ಪಾಲಿಗೆ ಜಾನಕಿ ಅವರೇ ಸರಸ್ವತಿ ಮತ್ತು ಶಾರದೆ ಎಂದು ಕೊಂಡಾಡಿದರು. ಎಲ್ಲಾ ರೀತಿಯ ಹಾಡುಗಳನ್ನು ಅದ್ಭುತವಾಗಿ ಹಾಡಿದ ಮಹಾನ್ ಗಾಯಕಿ ಅವರಾಗಿದ್ದು, ನಮ್ಮಂತಹ ಅನೇಕ ಗಾಯಕಿಯರಿಗೆ ಪ್ರೇರಣೆ ಹಾಗೂ ಮಾರ್ಗದರ್ಶಿಯಾಗಿದ್ದರು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದ ಸುನೀತಾ ಅವರು, ಜಾನಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣವಾಗಿ ಹಾರೈಸಿದರು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.