Shuru
Apke Nagar Ki App…
ಕಲಬುರ್ಗಿ: ಮಹಾಪೌರರಾದ ಶ್ರೀಮತಿ ಶ್ರೀ ವರ್ಷಾ ರಾಜೀವ ಜಾನೇ ಅವರ ಗ್ರಹಪ್ರವೇಶಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಶ್ರೀ ಶಿವರಾಜ ಪಾಟೀಲ್ ಕಲಗುರ್ತೀ ರಾಜ್ಯಾಧ್ಯಕ್ಷರು ಕುಡ ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಶ್ರೀ ಶಿವಯೋಗಿ ಸಾಹು ಗುಂಡಗುರ್ತೀ ಶ್ರೀ ಮನ್ಸೂರ್ ಪಟೇಲ್ ಉದ್ಯಮಿ ಹಾಗೂ ಅಲ್ಪಸಂಖ್ಯಾತರ ಮುಖಂಡರು ಅಫಜಲಪೂರ ತಾ ಕು ಒಕ್ಕಲಿಗ ಅಧ್ಯಕ್ಷ ಶ್ರೀ ಅಣ್ಣುಗೌಡ ಪಾಟೀಲ್ ಗಾಣಗಾಪುರ ಶ್ರೀ ಅಂಬರೀಷ್ ಕಲಗುರ್ತೀ ಅನೇಕ ಗಣ್ಯರು ಉಪಸ್ಥಿತರಿದ್ದರು
User1523
ಕಲಬುರ್ಗಿ: ಮಹಾಪೌರರಾದ ಶ್ರೀಮತಿ ಶ್ರೀ ವರ್ಷಾ ರಾಜೀವ ಜಾನೇ ಅವರ ಗ್ರಹಪ್ರವೇಶಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಶ್ರೀ ಶಿವರಾಜ ಪಾಟೀಲ್ ಕಲಗುರ್ತೀ ರಾಜ್ಯಾಧ್ಯಕ್ಷರು ಕುಡ ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಶ್ರೀ ಶಿವಯೋಗಿ ಸಾಹು ಗುಂಡಗುರ್ತೀ ಶ್ರೀ ಮನ್ಸೂರ್ ಪಟೇಲ್ ಉದ್ಯಮಿ ಹಾಗೂ ಅಲ್ಪಸಂಖ್ಯಾತರ ಮುಖಂಡರು ಅಫಜಲಪೂರ ತಾ ಕು ಒಕ್ಕಲಿಗ ಅಧ್ಯಕ್ಷ ಶ್ರೀ ಅಣ್ಣುಗೌಡ ಪಾಟೀಲ್ ಗಾಣಗಾಪುರ ಶ್ರೀ ಅಂಬರೀಷ್ ಕಲಗುರ್ತೀ ಅನೇಕ ಗಣ್ಯರು ಉಪಸ್ಥಿತರಿದ್ದರು
More news from Karnataka and nearby areas
- Post by Kalyan karanataka news channel1
- ದಾರಿ ಕಾಣದಾಗಿದೆ ಅಲ್ಲಿಪೂರಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ ! ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವುದು ಯಾವಾಗ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ ! ಜನ ಸಾಮಾನ್ಯರಿಗೆ ಸಾರಿಗೆ ರಸ್ತೆ ಸರಿಪಡಿಸದ ಅಧಿಕಾರಿ ಜನಪ್ರತಿನಿದಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ಯಾದಗಿರಿ: ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ದಿಂದ ಚಾಮನಹಳ್ಳಿಗೆ ಹೋಗುವ ಒಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತೆಗ್ಗು ದಿನ್ನೆಗಳಿಂದ ಸಂಚಾರಕ್ಕೆ ತೊಂದರೆ ಆಗಿದೆ. ಅಲ್ಲದೇ ಎರಡು ಬದಿಯಲ್ಲಿ ಇಕ್ಕೆಲಗಳಲ್ಲಿ ಜಾಲೆ ಬೆಳೆದಿರುವುದ ರಿಂದ ವಾಹನಗಳು ಕಾಣುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ್ ದೂರಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ ಅವರು ಈ ಒಳ ರಸ್ತೆಗಳ ಮುಖಾಂತರ ರೈತರ ದನಕರುಗಳಿಗೂ ವಾಹನ ಸವಾರರ ಕಣ್ಣಿಗೆ ತಗಲುವುದಲ್ಲದೇ, ತೊಂದರೆ ಆಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಗ್ರಾಮಗಳ ಸಂಪರ್ಕ ವಿರುವ ಒಳ ರಸ್ತೆಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ಕೆಲಸ ಸರ್ಕಾರದಿಂದ ಆಗಬೇಕು. ಜಿಲ್ಲಾಡಳಿತ ದಿಂದ ಈ ಕೆಲಸವನ್ನು ಅತಿ ಶೀಘ್ರದಲ್ಲೇ ಕೈಗೆತ್ತಿಕೊಂಡು ಕಾಮಗಾರಿ ಮಾಡಲು ಮುಂದಾಗಬೇಕು. ಈ ಭಾಗದಲ್ಲಿ ಬಡವರು, ಕೃಷಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಇವರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದ್ದು, ಕೂಡಲೇ ಈ ಸಮಸ್ಯೆ ಪರಿಹರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೋಟ್ : ಜನಪ್ರತಿನಿಧಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಸ್ಪಂದಿಸಿದೇ ಎಸಿ ರೂಮ್ಲ್ಲಿ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದಾರೆ ತಕ್ಷಣ ರಸ್ತೆಯ ಎರಡು ಬದಿಯಲ್ಲಿರುವ ಜಾಲಿಕಂಟಿಗಳನ್ನು ತೆರವುಗೊಳಿಸಿ ರಸ್ತೆ ದುರಸ್ಥಿಗೊಳಿಸಬೇಕೆಂದು ಎಚ್ಚರಿಸಿದ್ದಾರೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್2
- ಮುದನೂರಿನಲ್ಲಿ ವರುಣನ ಅಟ್ಟಹಾಸ: ಕೋರಿ ಸಿದ್ದೇಶ್ವರ ಮಠಕ್ಕೆ ಸಿಡಿಲು ಬಡಿದು ಅಗ್ನಿ ಅವಘಡ; ದೇವರ ಮೂರ್ತಿಗಳು ಸುಟ್ಟು ಭಸ್ಮ ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಸಿಡಿಲು ಅಘಾತಕ್ಕೆ ಐತಿಹಾಸಿಕ ಶ್ರೀ ಕೋರಿ ಸಿದ್ದೇಶ್ವರ ಶಾಖಾ ಮಠದ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಠದ ಪಾವಿತ್ರ್ಯತೆಯ ಸಂಕೇತವಾಗಿದ್ದ ದೇವರ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿವೆ. ಘಟನೆಯ ವಿವರ: ಸೋಮವಾರ ತಡರಾತ್ರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುತ್ತಿದ್ದು, ಈ ವೇಳೆ ಮುದನೂರು ಗ್ರಾಮದ ಮಠದ ಮೇಲೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮಠದ ಒಳಗೆ ಅಗ್ನಿ ಆವರಿಸಿದ್ದು, ನೋಡನೋಡುತ್ತಿದ್ದಂತೆಯೇ ಬೆಂಕಿ ಧಗಧಗಿಸಿದೆ. ಮಠದ ಕಟ್ಟಡಕ್ಕೆ ಹಾನಿಯಾಗುವುದರ ಜೊತೆಗೆ ಬೆಲೆಬಾಳುವ ಪೂಜಾ ಪರಿಕರಗಳು ಕರಕಲಾಗಿವೆ. ಭಕ್ತರಲ್ಲಿ ಆತಂಕ: ಸಿಡಿಲಿನ ಅಘಾತದ ಭೀಕರ ಶಬ್ದಕ್ಕೆ ಗ್ರಾಮಸ್ಥರು ನಡುಗಿ ಹೋಗಿದ್ದಾರೆ. ಮಠದ ಭಕ್ತರು ಸಮಯಪ್ರಜ್ಞೆ ಮೆರೆದು ತಕ್ಷಣವೇ ದೂರ ಸರಿದಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳವು ಸಕಾಲಕ್ಕೆ ಧಾವಿಸಿ ಬೆಂಕಿ ನಂದಿಸುವ ಮೂಲಕ ಮಠದ ಉಳಿದ ಭಾಗಕ್ಕೆ ಬೆಂಕಿ ಹರಡುವುದನ್ನು ತಡೆದಿದೆ.1
- ಸಿಡಿಲು ಬಡಿದ ಪರಿಣಾಮ ಬುದುರು ಗ್ರಾಮದಲ್ಲಿ ಇತ್ತೀಚೆಗೆ 56 ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ನಿನ್ನೆ (ದಿನಾಂಕ ಉಲ್ಲೇಖಿಸಲಾಗಿಲ್ಲ) ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಬುದುರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಸಿಡಿಲು ಹಾಗೂ ಮಳೆಯಿಂದ ಸುರಕ್ಷತವಾಗಿರಲು ಸಲಹೆ ನೀಡಿದ ಅವರು, ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.1
- ಅಫಜಲಪುರ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅರ್ಜುನ ಕೆರೂರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಹಿರಿಯ ನ್ಯಾಯಾಧೀಶರು ಸಲಹೆ ನೀಡಿದರು. ಜೊತೆಗೆ, ಲೋಕ ಅದಾಲತ್ ಮೂಲಕ ಜನರಿಗೆ ಹೆಚ್ಚು ನ್ಯಾಯ ಒದಗಿಸುವ ಕಾರ್ಯವನ್ನು ಬಲಪಡಿಸಬೇಕೆಂದು ಕರೆ ನೀಡಲಾಯಿತು. ಹಿರಿಯ ನ್ಯಾಯವಾದಿಗಳು ನೂತನ ಅಧ್ಯಕ್ಷರಿಗೆ ಶುಭಾಶಯ ತಿಳಿಸಿ, ಅವರ ನೇತೃತ್ವದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮತ್ತು ವಕೀಲರ ಹಿತಾಸಕ್ತಿಗೆ ಆದ್ಯತೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. #Afzalpur #LawyersAssociation #ArjunKerur #CourtDevelopment #LegalNews #LokAdalat #Suddi9TV1
- ಬಸವಕಲ್ಯಾಣ: ತಾಲೂಕಿನ ಘಾಟ ಹಿಪ್ಪರಗಾ ಗ್ರಾಮದ ಬಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಆನಂದ ಪಾಟೀಲ್ ಆರೋಪಿಸಿದರು1
- ಕರ್ನಾಟಕದಲ್ಲಿ ಫೈನಾನ್ಸ್ ಕಂಪನಿಯಲ್ಲಿ ಯಾವುದೇ ವಾಹನ ಖರೀದಿ ಮಾಡದಲ್ಲಿ ಮತ್ತು ಅದರಿಂದ ಲೋನ ಮಾಡಿದವರಿಗೆ 1 2 ಕಂತುಗಳು ತುಂಬಾಲಿಲ್ಲ ಅಂದರೆ ಫೈನಾನ್ಸಿ ಏಜೆಂಟ್ರು ಬಂದು ವಾಹನ ಹೋಯ್ತಾರೆ ಅಂತ ಭಯಪಡುವ ಅವಶ್ಯಕತೆ ಇಲ್ಲ ಯಾಕಂದರೆ ಅವರು 6: ಕಂತು ಆಗುವರೆಗೂ ವಯ್ಯುವುದಿಲ್ಲ 6 ಕಂತು ಹೆಚ್ಚಾದರೆ ಫೈನಾನ್ಸ್ ಕಂಪನಿಯವರು ಕೊರ್ಟದಿಂದ ಆದೇಶ ಲೆಟರ್ ತಂದು ವಾಹನ ಒಯ್ಯಬಹುದು . ಹಾಗೆ ಬಂದರೆ ದಯವಿಟ್ಟು ಸಾರ್ವಜನಿಕರು ವಾಹನ ಬಿಡಬಾರದು.1
- Post by Kalyan karanataka news channel1