Shuru
Apke Nagar Ki App…
ಸಮ್ಮರ್ ಕ್ಯಾಂಪ್ ಸಡಗರ.... ಪ್ರಜಾ ಪ್ರಗತಿ ಪತ್ರಿಕೆ ವಿಶೇಷ....
ಶ್ರೀಧರ್ ಚಿತ್ರಹಳ್ಳಿ
ಸಮ್ಮರ್ ಕ್ಯಾಂಪ್ ಸಡಗರ.... ಪ್ರಜಾ ಪ್ರಗತಿ ಪತ್ರಿಕೆ ವಿಶೇಷ....
More news from ಕರ್ನಾಟಕ and nearby areas
- ಚಳ್ಳಕೆರೆ:ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ದಲಿತ ನಾಯಕ. 'ಬಾಬೂಜಿ' ಎಂದೇ ಜನಪ್ರಿಯರಾಗಿದ್ದ ಇವರು, ಭಾರತದ ಮೊದಲ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ, ನಂತರ ರಕ್ಷಣಾ ಸಚಿವರಾಗಿ (1971ರ ಯುದ್ಧದ ಸಮಯದಲ್ಲಿ) ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಹಸಿರು ಕ್ರಾಂತಿಯ ಹರಿಕಾರರಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜವಜೀವನ್ ರಾಮ್ ರವರ ಜನ್ನ ದಿನದ ಶುಭಾಷಯಗಳು ಎಲ್ಲರೂ ಇಂಥ ಮಹನಾಯಕರ ಆದರ್ಶಗಳನ್ನು ಪಾಲಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು. ಕೆರೆ ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ಸಮಾಜ ಕಲ್ಯಾಣ ಇಲಾಖೆ ವಿವಿಧ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಬಾಬು ಜಗಜೀವನ್ ರಾಮ್ ಪುತ್ತಳಿಗೆ ಪುಷ್ಪ ಮಾಲೆ ಸಲ್ಲಿಸಿ ನಂತರ ಡಾ. ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು..1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿ ಯೇಷನ್ ವತಿಯಿಂದ ಶುಭ ಶುಕ್ರವಾರ (ಗುಡ್ ಫ್ರೈಡೆ) ಮತ್ತು ಭಾನುವಾರ ಪುನರುತ್ಥಾನ (ಈಸ್ಟರ್) ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿ ಸಹ ಶಾಂತಿ ಮತ್ತು ಸೌಹಾರ್ದತೆಗಾಗಿ ನಗರದಲ್ಲಿ ಆಯೋಜಿಸ ಲಾಗಿದ್ದ `ರನ್ ಫಾರ್ ಜೀಸಸ್' ಕಾರ್ಯಕ್ರಮಕ್ಕೆ ತಾಲೂಕಿನ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೈಟ್ ರೆವೆರೆಂಡ್ ಡಾ. ಜೋಸೆಫ್ ಅರಮಚ್ಚಾದತ್ ಚಾಲನೆ ನೀಡಿದರು. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾನವ ಕುಲಕ್ಕೆ ಯೇಸು ಕ್ರಿಸ್ತರ ತ್ಯಾಗ, ಬಲಿದಾನ ಸ್ಮರಿಸಲಾಯಿತು. ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ಕನಕಮಂಟಪ ಮೈದಾನದವರೆಗೂ `ರನ್ ಫಾರ್ ಜೀಸಸ್' ನಡೆಯಿತು. ಪ್ರಮುಖ ವೃತ್ತಗಳಲ್ಲಿ ಯೇಸು ಕ್ರಿಸ್ತರ ಜೀವನ ಚರಿತ್ರೆ ಹಾಗು ಮರಣದ ಕೊನೆಯ ಕ್ಷಣಗಳ ದೃಶ್ಯಗಳನ್ನು ನಾಟಕದ ಮೂಲಕ ಪ್ರದರ್ಶಿಸಲಾಯಿತು. ಅಲ್ಲದೆ ಮಧ್ಯಪ್ರಾಚ್ಯ ರಾಷ್ಟ್ರ(ಕೊಲ್ಲಿ ರಾಷ್ಟ್ರಗಳು)ಗಳಲ್ಲಿ ನಡೆಯುತ್ತಿರುವ ಯುದ್ಧ ಅಂತ್ಯಗೊಂಡು ಶಾಂತಿ ನೆಲೆಗೊಳ್ಳುವಂತೆ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥಿಸ ಲಾಯಿತು.ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ಮತ್ತು ವೈಎಂಸಿಎ ಅಧ್ಯಕ್ಷ ಆರ್. ಮೋಸಸ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಲಾಗಿತ್ತು.1
- ವಿವರಗಳು: ಹುಂಜನಾಳು ಗ್ರಾಮ, ಸರ್ವೇ ನಂ. 69/1ರಲ್ಲಿ 3 ಎಕರೆ 25 ಗುಂಟೆ ಜಮೀನು ನಮ್ಮ ಕುಟುಂಬದ ಅಸ್ತಿ, ಪಹಣಿಯಲ್ಲಿ ರಂಗತಾಯಿ ಶಿಬಿ ಮತ್ತು ಶಿಬಿತಾಯಿ ಶಿಬಿ ಜಂಟಿ ಮಾಲಿಕರಾಗಿದ್ದಾರೆ.ನಕಲಿ ಭೂ ಪರಿಹಾರ ಪಡೆದ ಫಲಾನುಭವಿ ಯು ನೀಡಿದ ನಕಲಿ ವಂಶ ವೃಕ್ಷಕ್ಕೆ ಅಧಿಕಾರಿಗಳು ಬೆಂಬಸಿ ಪರಿಹಾರ ನೀಡಿದ್ದಾರೆ. ಆದರೆ (ಕಂದಾಯ ಇಲಾಖೆ ನೀಡಿದ ವಂಶವೃಕ್ಷದಲ್ಲಿ ನಮ್ಮ ಹೆಸರುಗಳು ಇವೆ.ಡಿಜಿಟಲ್ ರೂಪದ ವಂಶ ವೃಕ್ಷ ನೀಡಿದ್ದೇವೆ.) ಇಲಾಖೆ ಅಧಿಕಾರಿಗಳು ನೈಜಿ ಪಲಾನುಭವಿಗಳಾದ ನಮನೆಗೆ ಪರಿಹಾರ ನೀಡಲು ಮುಂದಾದರೆ ಕಾನೂನು ಶಿಕ್ಷೆಗೆ ಒಳಗಾಗುತ್ತೇವೆ ಎನ್ನುವ ಆತಂಕದಿಂದ ನಮ್ಮನ್ನು ದಾರಿ ತಪ್ಪಿಸಲು ಇದೀಗ ಇಲಾಖೆ ಅಧಿಕಾರಿಗಳು ಖುದ್ದು ಬೆಂಬಲಿಸಿದ ನಕಲಿ ಫಲಾನುಭವಿಗೆ ರಾಜಿ ಮಾಡಿಕೊಳ್ಳುವಂತೆ ರೆಜಿಲೆಶನ್ (ನಡಾವಳಿ ಪುಸ್ತಕ) ದಲ್ಲಿ ಸಹಿ ಮಾಡಿಸಿ ರಾಜಿ ಸಂಧಾನಕ್ಕೆ ಒಪ್ಪಿಸಿ ಇದೀಗ ನಕಲಿ ವ್ಯಕ್ತಿ ಯನ್ನು ಬೆಂಬಲಿಸಿ ತಪ್ಪಿಸಿಕೊಂಡು ಓಡಿ ಹೋಗುವಂತೆ ಮಾಡಿದ್ದಾರೆ. ಹಾಗೂ ಅಧಿಕಾರಿಗಳ ತಪ್ಪನ್ನು ಮರೆಮಾಚಿಕೊಳ್ಳಲು ನಕಲಿ ವ್ಯಕ್ತಿಯ ಮೇಲೆ ಮಾತ್ರವೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನಕಲಿ ವ್ಯಕ್ತಿಯು ಪರಿಹಾರದ ಹಣ ದುರುಪಯೋಗಿಸಿಕೊಂಡು ನೈಜ ಫಲನು ಭವಿಗಳಾದ ನಮಗೆ ಹಣ ನೀಡದೆ ತಪ್ಪಿಸಿಕೊಂಡಲ್ಲಿ ಇಲಾಖೆ ಯವರೇ ನೇರ ಹೊಣೆ ಗೆ ಕಾರಣಿಭೂತರಾಗಿರುತ್ತಾರೆ ಈ ಬಗ್ಗೆ ದಿನಾಂಕ 03-04-2026 ರಂದು ವ್ಯಾಪ್ತಿ ಪೊಲೀಸ್ ಠಾಣೆ ಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ & ಈ ದಾಖಲೆಗೆ ಬೆಂಬಲಿಸಿದ ಸಂಗಟಿತರ ವಿರುದ್ಧ ಶಿಸ್ತು ಕ್ರಮಕ್ಕೆ ದೂರು ಧಾಖಲಿಸಿರುತ್ತೇನೆ. KIADB ಭೂಸ್ವಾಧೀನ ನೋಟಿನ್ನಲ್ಲಿ ಎಕರೆಗೆ ₹40 ಲಕ್ಷ ಪರಿಹಾರ ದ ನೋಟಿಸ್ ನೀಡಿದ್ದು ನೈಜ ಜಂಟಿ ಮಾಲೀಕತ್ವದಾರರದ ನಮಗೆ ನೀಡಿದ ಅಧಿಕಾರಿಗಳು ನಮಗೆ ಮೋಸ ಎಸಾಗಿರುತ್ತಾರೆ. ಆದರೆ ಗೋಪಾಲಯ್ಯ (ಸಂಬಂಧಿ. ಸಂ ಲೇಟ್ ರಂಗಯ್ಯ) ನಕಲಿ ದಾಖಲೆಗಳೊಂದಿಗೆ (ದಿನಾಂಕ 27.11.209) ₹1.45 ಕೋಟಿ ಪರಿಹಾರವನ್ನು 27.11.2025ರಂದು ಐಕೋ ಬ್ಯಾಂಕ್ RTGS ಮೂಲಕ ಪಡೆದಿದ್ದಾರೆ. ನಾವು 18.03.2026ರಂದು KIADB ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಇಲಾಖೆಯವರು ಇದನ್ನು ದೃಢಪಡಿಸಿದರು. ಭೂಸ್ವಾಧೀನಾಧಿಕಾರಿಗಳು ಜಂಟಿ ಮಾಲಕರನ್ನು ಪರಿಗಣಿಸದೆ ಒಬ್ಬರಿಗೆ ಮಾತ್ರ ಪಾವತಿ ಮಾಡಿದ್ದಾರೆ ಎಂಬುದನ್ನು ಭೂ ಸ್ವಧೀನಾಧಿಕಾರಿಗಳ ಅರಿವಿಗೆ ತಂದಾಗ, ದಾಖಲೆಗಳನ್ನು ಪರಿಶೀಲಿಸಿ ನೈಜ ಫಲಾನುಭವಿಗಳಾದ ನಾವು ಮೋಸ ಹೋಗಿರುವುದು ಸ್ಪಷ್ಟವಾಗಿ ಕಂಡುಬದಿರುತ್ತದೆ. (25.03.2026), ಅಧಿಕಾರಿಗಳು ಗೋಪಾಲಯ್ಯ ಮತ್ತು ನಮ್ಮನ್ನು ಕರೆಸಿ ಒಳ-ಒಪ್ಪಂದಕ್ಕೆ ಒತ್ತಾಯ ಮಾಡಿದರು. ಯಾವುದೇ ಕ್ರಮ ಜರುಗಿಸಲಿಲ್ಲ. ಇದೀಗ ಅಧಿಕಾರಿಗಳು ಗೋಪಾಲಯ್ಯ ವಿರುದ್ಧ ದೂರು ನೀಡುವುದಾಗಿ ಹೇಳುತ್ತ, ತಮ್ಮ ತಪ್ಪನ್ನು ಮರೆಮಾಚಲು ಮುಂದಾಗಿದ್ದಾರೆ. ಅಧಿಕಾರಿಗಳ ತಪ್ಪುಗಳು (Points): (Karnataka Land Revenue Act ಸೆಕ್ಷನ್ 95 ರ ನಿಯಮದಂತೆ ಜಂಟಿ ಪಹಣಿ/ವಂಶವೃಕ್ಷ ಪರಿಶೀಲಿಸದೆ ನಕಲಿ ದಾಖಲೆಗಳನ್ನು (KIADB Rules, 1969 ರೂಲ್ 6 ಮತ್ತು LARR Act ಸೆಕ್ಷನ್ 11 ನಿಯಮದಂತೆ ದಾಖಲೆ ಸತ್ಯಾಪನ ಕಡ್ಡಾಯ); ಒಪ್ಪಿಕೊಂಡರು.ಪರಿಹಾರ ನೀಡಿ ಇತರ ಜಂಟಿ ಮಾಲೀಕತ್ವದಾರರಿಗೆ ಮೋಸ ಎಸಾಗಿರುವುದು ಏಕ ಮಾತ್ರ ವ್ಯಕ್ತಿಗೆ RTGS ಮಾಡಿರುವುದು ಸ್ಪಷ್ಟ ಉಲ್ಲೇವಾಗಿದೆ.ಭೂಪರಿಹಾರ ಕಾನೂನು ಪ್ರಕಾರ ( (LARR Act ಸೆಕ್ಷನ್ 23)) ಜಂಟಿ ಖಾತೆಗೆ ಪಾವತಿ ಮಾಡದ ಒಬ್ಬರಿಗೆ ಮಾತ್ರ RTGS ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸಹ್ಯಾಪಿಸದೆ ₹1.45 ಕೋಟಿ ನೀಡಲಾಗಿದೆ (KIADB Act ಸೆಕ್ಷನ್ 29(1) ಪ್ರಕಾರ ಪರಿಹಾರ ನ್ಯಾಯಪರವಾಗಿ ವಿಂಗಡಿಸಬೇಕು). Indian Evidence Act, 1872 - ಸೆಕ್ಷನ್: 61-66 ನಿಯಮದ ವಿರುದ್ಧವಾಗಿ( 3 ತಿಂಗಳ ಕಾಲವಧಿಯವರೆಗೆ ನಕಲಿ ಫಲನುಭವಿಯ ಒಬ್ಬನ ಬಳಿಯೇ ಹಣ ಇರಿಸಲಾಗಿದೆ.) ಮನವಿದಾರ( ಜಂಟಿ ಮಾಲೀಕತ್ವ ದಾರ)/ಫಲನಭವಿ ದೂರು ತಿಳಿಸಿದ ನಂತರ ತನಿಖೆಯ ಬದಲು ಒಳ-ಒಪ್ಪಂದಕ್ಕೆ ಒತ್ತಡ ಹೇರದೇ(KIADB Regulations) ರಲ್ಲಿ ಕಡ್ಡಾಯ ತನಿಖೆಗೆ ನಿರ್ದೇಶಿಸಬೇಕು. ಇಲಾಖೆಯ ಕಾನೂನು ಸಲಹೆಗಾರ/ವಕೀಲರು ಮತ್ತು ವ್ಯವಸ್ಥಾಪಕ ರವರು ದಾಖಲೆಗಳನ್ನು ಪರಿಶೀಲಿಸದೇ ತಪ್ಪುಗಳನ್ನು ಮರೆಮಾಚಲು ಯತ್ನಿಸಲಾಗಿದೆ. ಸದರಿ ಇಲಾಖೆಯ ಕಾನೂನು ಸಲಹೆಗಾರ & ವ್ಯವಸ್ಥಾಪಕರು ಅಂತಿಮ ಅನುಮೋದನೆ ನೀಡಿದ ಸದರಿ ಇಲಾಖೆಯಲ್ಲಿ ಇಂತಹ ಎಲ್ಲ ಜಂಟಿ ಮಾಲೀಕತ್ವದ ಸರ್ವೇ ನಂಬರ್ಗಳಲ್ಲಿ ನಕಲಿ ಪರಿಹಾರಗಳ ತನಿಖೆ ನಡೆಸದಿರುವುದು ಮನವಿ: 1. ಗೋಪಾಲಯ್ಯ, KIADB ಅಧಿಕಾರಿಗಳು, ಮತ್ತು ಭೂಸ್ವಾಧೀನಾಧಿಕಾರಿಗಳ ವಿರುದ್ಧ IPC 420 (ಮೋಸ), 467 (ನಕಲಿ ದಾಖಲೆ), 120B ಅಡಿಯಲ್ಲಿ ಸಂಬಂಧ ರಾಜ್ಯ ಪ್ರಾಧಿಕಾರ ದೂರು ಧಾಖಲಿಸಿ ತನಿಖೆ ನಡೆಸಿ ಎಂದು ಮನವಿ. 2. ನಮಗೆ ಸೇರಿದ ಪಾಲು ಪರಿಹಾರ (ಜಂಟಿ ಜಮೀನಿನ ಪ್ರಮಾಣದಂತೆ) (LARR Act ಸೆಕ್ಷನ್ 26 ನಿಯಮದಂತೆ) ತಕ್ಷಣ ಪಾವತಿ ಮಾಡಿ. 3. ಸದರಿ ತುಮಕೂರು KIADB ಇಲಾಖೆಯಲ್ಲಿ ಇಂತಹ ಎಲ್ಲಾ ಸರ್ವೇ ನಂಬರ್ಗಳ ತನಿಖೆ ನಡೆಸಿ. (KIADB Act ಸೆಕ್ಷನ್ 31). ರಡಿಯಲ್ಲಿ ಕ್ರಮ ಕ್ಕೆ ಮುಂದಾಗಬೇಕಾಗಿ ಮನವಿ. 4. ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಿ (/ದಂಡ).ವಿಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಿವುದು.(KIADB Rules ರೂಲ್ 12). ನಿಯಮವನ್ನು ಅನುಸರಿಸುವಂತೆ ಮನವಿ. 5. ನಕಲಿ ದಾಖಲೆ ನೀಡಿದ ಗೋಪಾಲಯ್ಯ, ಹಾಗೂ ನಕಲಿ ದಾಖಲೆ ಗಳನ್ನು ಪರಿಶೀಲಿಸದೇ ಬೆಂಬಲಿಸಿದ KIADB ... 2 IPC 420, 467, 120B + CrPC 154 Indian Evidence Act 73 + Prevention of Corruption Act 13 ಅಡಿಯಲ್ಲಿ ದೂರು ಧಾಖಲಿಸಿ ತನಿಖೆ ನಡೆಸಿ. ನಮಗೆ ಸೇರಿದ ಹಣದಪಾಲುಹಣ ಮುಂಗಡ/ನೇರವಾಗಿ ಪಡೆದ ನಕಲಿ ಫಲನುಭವಿಯ ಬಳಿ 3 ತಿಂಗಳಿಗೂ ಅಧಿಕ ಇರಿಸಿದ್ದು. ನ್ಯಾಯುತ ಬಡ್ಡಿ ಕ ಆತನು ಪಡೆದ ಲಾಭವನ್ನು ನಮ್ಮ ಪಾಲು ಹಣದೊಂದಿಗೆ RTGS ಮೂಲಕ ತಕ್ಷಣ ಪಾವತಿ ಮಾಡಿ." ಎಂದು ಈ ಮೂಲಕ ಮನವಿ ಮಾಡುತ್ತೇನೆ.4
- ಜಾತ್ರೆಯಲ್ಲಿ ಭೀಕರ ದುರಂತ: 60 ಅಡಿ ಎತ್ತರದ ದೈತ್ಯ ಚಕ್ರ ಕುಸಿದು 40ಕ್ಕೂ ಹೆಚ್ಚು ಜನರಿಗೆ ಗಾಯ! #JB_News_Kannada ಉತ್ತರ ಪ್ರದೇಶದಲ್ಲಿ1
- Post by Mayur TV Hangal YouTube c1
- Snake rauf 99164034481
- ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. 1
- ಪ್ರಕೃತಿಯಲ್ಲಿ ವಿಸ್ಮಯ ಒಂದೆ ಬುಡ ಎರಡು ಮರ. ಒಂದೆ ಜಾತಿಯ ಎರಡು ಮರಗಳು ಜತೆಯಾಗಿ ಬೆಳೆದಿರುವಂತಹ ಉದಾಹಾರಣೆಗಳಿವ ಮರಗಳ ಕೊಂಬೆಗಳು ಒಂದಕ್ಕೊಂದು ಹತ್ತಿರವಾಗಿ ಬೆಳೆದು, ಒಂದಾಗಿ ಜೋಡಣೆಯಾಗುತ್ತವೆ ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಒಂದೇ ಬುಡದಲ್ಲಿ ಎರಡು ವಿಭಿನ್ನ ಪ್ರಕಾರದ ಆಳದ ಮರ ಮತ್ತು ತಾಳೆ ಮರ ಬೆಳೆದಿದ್ದು. ಇದು ಪ್ರಕೃತಿಯ ಸೌಂದರ್ಯ ಮತ್ತು ಜೀವಿಗಳ ನಡುವಿನ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ... ಹೀಗೆ ತಾಳೆಮರಕ್ಕೆ ಸುತ್ತಿಕೊಂಡು ಆಲದ ಮರ ಬೆಳೆದಿರುವಂತಹ ದೃಶ್ಯವನ್ನು ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯಾ ಪ್ರಾಥಮಿಕ ಶಾಲೆಯಲ್ಲಿ ಕಾಣಬಹುದಾಗಿದೆ.. ಶಾಲೆಯ ಆವರಣದಲ್ಲಿನ ಆಲದ ಮರ ಹಾಗೂ ತಾಳೆ ಮರ ಒಂದೇ ಬುಡ ಎರಡು ಮರ ಎನ್ನುವಂತೆ ಬೆಳದಿದ್ದು ಎರಡು ಮರಗಳು ಒಂದಕ್ಕೊಂದು ಅಂಟಿಕೊಂಡು ಪ್ರಕೃತಿಯಲ್ಲಿನ ವಿಸ್ಮಯವನ್ನು ತೋರಿಸುತ್ತಿವೆ .. ಹುಟ್ಟಿದ ಅಣ್ಣ ತಮ್ಮಂದಿರರೇ ದಯಾದಿಗಳಾಗುವಂತಹ ಕಾಲದಲ್ಲಿ ತಾಳೆಮರಕ್ಕೆ ಆಲದ ಮರ ಆಸರೆ ಆಲದ ಮರಕ್ಕೆ ತಾಳೆಮರೆ ಆಸರೆ ಎನ್ನುವಂತೆ ಗೋಚರಿಸುತ್ತಿದೆ..1