ದೇಶದಲ್ಲಿ ಅಸಮಾನತೆ ಇನ್ನೂ ಕಾಣಸಿಗುತ್ತಿದೆ: ಎನ್.ನಾಗಮೋಹನ್ ದಾಸ್ ಬೆಂಗಳೂರು: ಈ ದೇಶದಲ್ಲಿ ಅಸಮಾನತೆ ಇನ್ನೂ ಕಾಣಸಿಗುತ್ತಿದೆ. ಆರ್ಥಿಕ ತಾರತಮ್ಯ ಕೂಡ ಮನೆ ಮಾಡಿದೆ, ಕರ್ನಾಟಕದ ಪರಿಶಿಷ್ಟರಲ್ಲಿ 101 ಜಾತಿಗಳಿವೆ, ಇದರಲ್ಲಿ ಸ್ಪಶ್ಯ ಜಾತಿಗಳು ಸಹ ಇದ್ದಾರೆ, ಇಲ್ಲಿಯೂ ಕೂಡ ಅಸಮಾನತೆ ಇದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ಸೋಮವಾರ ಗಾಯತ್ರಿನಗರದ ಮಾರುತಿ ಬಡಾವಣೆಯಲ್ಲಿರುವ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ರಾಜಮಂತ್ರ ಪ್ರವೀಣ ಹೆಚ್. ಬಿ ಗುಂಡಪ್ಪ ಗೌಡ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಲೆಯರು ಮಾದಿಗರಿಗಿಂತ ಹೆಚ್ಚಿದ್ದೇವೆ ಎಂದು ಹೇಳುತ್ತಾರೆ, ಮಾದಿಗರು ಹೊಲೆಯರಿಗಿಂತ ಶ್ರೇಷ್ಠರು ಎಂದು ಹೇಳುತ್ತಾರೆ. ದಲಿತರು ಮಾದಿಗರಿಗಿಂತ ಶ್ರೇಷ್ಠರು ಎನ್ನುತ್ತಾರೆ, ಅಸ್ಪೃಶ್ಯರಲ್ಲಿ ಸಾಕಷ್ಟು ಜಾತಿ ತಾರತಮ್ಯ ಇದೆ ಎಂದರು. ಅನೇಕ ಮಹಾತ್ಮರು ಜಾತಿ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದರು ಅದರಲ್ಲಿ ಅಂಬೇಡ್ಕರ್ ಕೂಡ ಒಬ್ಬರು, ಭಾರತದ ಸಂವಿಧಾನದಲ್ಲಿ ಸಮಾಜಿಕ ನ್ಯಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ, ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ. ಸಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಬುಡಕಟ್ಟು ಜನಾಂಗದವರು ರಾಷ್ಟ್ರಪತಿಗಳಾಗಿದ್ದಾರೆ, ಹಿಂದುಳಿದ ವರ್ಗದವರು ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು. ಈ ದೇಶದಲ್ಲಿ ಅಲೆಮಾರಿಗಳಿಗೆ, ದೇವದಾಸಿಗಳಿಗೆ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಸಂವಿಧಾನದ ಸಮಾಜಿಕ ನ್ಯಾಯ ವಿಚಾರದಲ್ಲಿ ಸವಾಲುಗಳಿವೆ. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದವರಿಗೆ ಸರಿಯಾದ ಮೀಸಲಾತಿ ಹಕ್ಕುಗಳು ದೊರೆತಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಒಲಸೆ ಹೋದವರಿಗೆ ಯಾವುದೇ ಸವಲತ್ತುಗಳು ದೊರೆತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿದೆ. ಇದು ಪುರುಷ ಪ್ರಧಾನ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಈ ಕೂಡಲೇ ಮೊದಲು ಜಾರಿಯಾದ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಮಾಡಬೇಕು. ಈ ವಿಚಾರದಲ್ಲಿ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಬಾರದು. ಎಲ್ಲರನ್ನು ಒಳಗೊಂಡು, ಚರ್ಚೆ ನಡೆಸಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಅತಿ ಶೀಘ್ರದಲ್ಲಿಯೇ ನಡೆಸಬೇಕು. ಅನಾವಶ್ಯಕ ನೆಪಗಳನ್ನು ಹೇಳಿ ಮುಂದೂಡುವ ಪ್ರಕ್ರಿಯೆ ನಿಲ್ಲಿಸಬೇಕು. ತುಂಬಾ ಜಾಸ್ತಿ ವರ್ಷಗಳು ಕೇವಲ ಅಧಿಕಾರಶಾಯಿ ವ್ಯವಸ್ಥೆ ಇರುವುದು ಸಂವಿಧಾನಾತ್ಮಕತೆಗೆ ಒಳ್ಳೆಯದಲ್ಲ. ರಾಜಕೀಯ ಪ್ರತಿನಿಧಿತ್ವ ಕೂಡ ಬಹುಮುಖ್ಯವಾಗಿದೆ ಎಂದು ಎನ್.ನಾಗಮೋಹನ್ ದಾಸ್ ಅಭಿಪ್ರಾಯಿಸಿದರು. ಜನತಾ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಡಾ.ಆರ್.ರವೀಂದ್ರ, ಕಾರ್ಯದರ್ಶಿ ಅಪ್ಪಾರೆಡ್ಡಿ ಹರೀಶ್, ಖಚಾಂಚಿ ಹೆಚ್.ಜಿ. ಬಾಲಗೋಪಾಲ, ಗೌರ್ನಿಗ್ ಕೌನ್ಸಿಲ್ ನ ಎನ್.ಸಪ್ನಾ, ಪ್ರಾಂಶುಪಾಲ ಕೆ.ಬಿ.ಕೆಂಪೇಗೌಡ ಮತ್ತಿತರರು ಭಾಗವಹಿಸಿದ್ದರು.
ದೇಶದಲ್ಲಿ ಅಸಮಾನತೆ ಇನ್ನೂ ಕಾಣಸಿಗುತ್ತಿದೆ: ಎನ್.ನಾಗಮೋಹನ್ ದಾಸ್ ಬೆಂಗಳೂರು: ಈ ದೇಶದಲ್ಲಿ ಅಸಮಾನತೆ ಇನ್ನೂ ಕಾಣಸಿಗುತ್ತಿದೆ. ಆರ್ಥಿಕ ತಾರತಮ್ಯ ಕೂಡ ಮನೆ ಮಾಡಿದೆ, ಕರ್ನಾಟಕದ ಪರಿಶಿಷ್ಟರಲ್ಲಿ 101 ಜಾತಿಗಳಿವೆ, ಇದರಲ್ಲಿ ಸ್ಪಶ್ಯ ಜಾತಿಗಳು ಸಹ ಇದ್ದಾರೆ, ಇಲ್ಲಿಯೂ ಕೂಡ ಅಸಮಾನತೆ ಇದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ಸೋಮವಾರ ಗಾಯತ್ರಿನಗರದ ಮಾರುತಿ ಬಡಾವಣೆಯಲ್ಲಿರುವ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ರಾಜಮಂತ್ರ ಪ್ರವೀಣ ಹೆಚ್. ಬಿ ಗುಂಡಪ್ಪ ಗೌಡ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಲೆಯರು ಮಾದಿಗರಿಗಿಂತ ಹೆಚ್ಚಿದ್ದೇವೆ ಎಂದು ಹೇಳುತ್ತಾರೆ, ಮಾದಿಗರು ಹೊಲೆಯರಿಗಿಂತ ಶ್ರೇಷ್ಠರು ಎಂದು ಹೇಳುತ್ತಾರೆ. ದಲಿತರು ಮಾದಿಗರಿಗಿಂತ ಶ್ರೇಷ್ಠರು ಎನ್ನುತ್ತಾರೆ, ಅಸ್ಪೃಶ್ಯರಲ್ಲಿ ಸಾಕಷ್ಟು ಜಾತಿ ತಾರತಮ್ಯ ಇದೆ ಎಂದರು. ಅನೇಕ ಮಹಾತ್ಮರು ಜಾತಿ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದರು ಅದರಲ್ಲಿ ಅಂಬೇಡ್ಕರ್ ಕೂಡ ಒಬ್ಬರು, ಭಾರತದ ಸಂವಿಧಾನದಲ್ಲಿ ಸಮಾಜಿಕ ನ್ಯಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ, ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ. ಸಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಬುಡಕಟ್ಟು ಜನಾಂಗದವರು ರಾಷ್ಟ್ರಪತಿಗಳಾಗಿದ್ದಾರೆ, ಹಿಂದುಳಿದ ವರ್ಗದವರು ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು. ಈ ದೇಶದಲ್ಲಿ ಅಲೆಮಾರಿಗಳಿಗೆ, ದೇವದಾಸಿಗಳಿಗೆ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಸಂವಿಧಾನದ ಸಮಾಜಿಕ ನ್ಯಾಯ ವಿಚಾರದಲ್ಲಿ ಸವಾಲುಗಳಿವೆ. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದವರಿಗೆ ಸರಿಯಾದ ಮೀಸಲಾತಿ ಹಕ್ಕುಗಳು ದೊರೆತಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಒಲಸೆ ಹೋದವರಿಗೆ ಯಾವುದೇ ಸವಲತ್ತುಗಳು ದೊರೆತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿದೆ. ಇದು ಪುರುಷ ಪ್ರಧಾನ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಈ ಕೂಡಲೇ ಮೊದಲು ಜಾರಿಯಾದ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಮಾಡಬೇಕು. ಈ ವಿಚಾರದಲ್ಲಿ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಬಾರದು. ಎಲ್ಲರನ್ನು ಒಳಗೊಂಡು, ಚರ್ಚೆ ನಡೆಸಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಅತಿ ಶೀಘ್ರದಲ್ಲಿಯೇ ನಡೆಸಬೇಕು. ಅನಾವಶ್ಯಕ ನೆಪಗಳನ್ನು ಹೇಳಿ ಮುಂದೂಡುವ ಪ್ರಕ್ರಿಯೆ ನಿಲ್ಲಿಸಬೇಕು. ತುಂಬಾ ಜಾಸ್ತಿ ವರ್ಷಗಳು ಕೇವಲ ಅಧಿಕಾರಶಾಯಿ ವ್ಯವಸ್ಥೆ ಇರುವುದು ಸಂವಿಧಾನಾತ್ಮಕತೆಗೆ ಒಳ್ಳೆಯದಲ್ಲ. ರಾಜಕೀಯ ಪ್ರತಿನಿಧಿತ್ವ ಕೂಡ ಬಹುಮುಖ್ಯವಾಗಿದೆ ಎಂದು ಎನ್.ನಾಗಮೋಹನ್ ದಾಸ್ ಅಭಿಪ್ರಾಯಿಸಿದರು. ಜನತಾ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಡಾ.ಆರ್.ರವೀಂದ್ರ, ಕಾರ್ಯದರ್ಶಿ ಅಪ್ಪಾರೆಡ್ಡಿ ಹರೀಶ್, ಖಚಾಂಚಿ ಹೆಚ್.ಜಿ. ಬಾಲಗೋಪಾಲ, ಗೌರ್ನಿಗ್ ಕೌನ್ಸಿಲ್ ನ ಎನ್.ಸಪ್ನಾ, ಪ್ರಾಂಶುಪಾಲ ಕೆ.ಬಿ.ಕೆಂಪೇಗೌಡ ಮತ್ತಿತರರು ಭಾಗವಹಿಸಿದ್ದರು.
- ವಾಟರ್ ಫಿಲ್ಟರ್ ಕಾಮಗಾರಿ ವಿಚಾರಕ್ಕೆ ಗಲಾಟೆ ಸಾವಕನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ವಾಟರ್ ಫಿಲ್ಟರ್ ಕಾಮಗಾರಿ ವಿಚಾರಕ್ಕೆ ಗಲಾಟೆ ಸಾವಕನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ1
- ಬೆಂಗಳೂರಿನ ಕೊಟ್ಟಿಗೆಪಾಳ್ಯದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್ನಲ್ಲಿ ಅವ್ಯವಸ್ಥೆ ಮಿತಿಮೀರಿದ್ದು, ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಳಪೆ ಊಟ, ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಊಟ-ನಿದ್ದೆಯನ್ನೂ ತ್ಯಜಿಸಿದ್ದಾರೆ. ಕೂಡಲೇ ಉತ್ತಮ ವಾರ್ಡನ್ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.1
- ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ 70 ವರ್ಷದ ವೃದ್ಧ ಚಿಕ್ಕಣ್ಣ ಬಿಸಿಲಿಗೆ ಕುಸಿದು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಅವರು ಬೆಳಗ್ಗೆ ಅಂಗಡಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.2
- ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನ ಹೊಸೂರು ಮುಖ್ಯರಸ್ತೆಯಲ್ಲಿ ಹಣದ ವಿಚಾರವಾಗಿ ಇಬ್ಬರು ಯುವಕರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಸಾರ್ವಜನಿಕರ ಎದುರೇ ಪರಸ್ಪರ ಕೈಕೈ ಮಿಲಾಯಿಸಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕರ ಅಸಭ್ಯ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ಬಿಡದಿ ಟೌನ್ ಶಿಪ್ ಗೆ ಭೂ ಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ;ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಹಿನ್ನಲೆ. ತೀವ್ರ ಗೊಂಡ ರೈತರ ಪ್ರತಿಭಟನೆ. ಬಿಡದಿ ಟೌನ್ ಶಿಪ್ ಗೆ ಭೂ ಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ಹಿನ್ನಲೆ ಕಳೆದ ಒಂದು ವರ್ಷದಿಂದ ಭೈರಮಂಗಲ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು. ಇದೀಗ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಹಿನ್ನಲೆ. ತೀವ್ರ ಗೊಂಡ ರೈತರ ಪ್ರತಿಭಟನೆ. ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು. ಇಂದಿನಿಂದ ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸಲು ರೈತರ ಸಜ್ಜು. ಟ್ರಾಕ್ಟರ್ ,ಎತ್ತಿನ ಗಾಡಿ, ಹಸುಗಳನ್ನು ರಸ್ತೆಗೆ ತಂದು ಪ್ರತಿಭಟನೆ ನಡೆಸುತ್ತಿರುವ ರೈತರು. ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗಿ ರೈತರ ಆಕ್ರೋಶ. ಬಿಡದಿ- ಕನಕಪುರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ನೂರಾರು ರೈತರು ರೈತರ ಒಪ್ಪಿಗೆ ಪಡೆಯದೇ ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಭೂಮಿ ನೀಡುವುದಿಲ್ಲ ಎಂದು ರೈತರ ಬಿಗಿಪಟ್ಟು. ರಸ್ತೆ ಮಧ್ಯೆಯೇ ಅಡುಗೆ ತಯಾರಿಸುತ್ತಿರುವ ರೈತರು.1
- ಚಿಂತಾಮಣಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ತಡರಾತ್ರಿ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.1
- ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕ ಸಾವನ್ನಪ್ಪಿದ ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಭಕ್ತರು ಮತ್ತು ಗ್ರಾಮಸ್ಥರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ, ನಾಗಮಲೆ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಭಕ್ತರ ಸುರಕ್ಷತೆಗೆ ಅಗತ್ಯ ಭದ್ರತಾ ಕ್ರಮ, ತುರ್ತು ರಸ್ತೆ ನಿರ್ಮಾಣ ಹಾಗೂ ಕಾಡುಪ್ರಾಣಿಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈಕುರಿತು ಪ್ರತಿಭಟನಾಕಾರರು ಮಾತನಾಡಿಈ ಕುರಿತು ಪ್ರತಿಭಟನಾಕಾರರು ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಭಕ್ತರು ಮತ್ತು ಗ್ರಾಮಸ್ಥರ ಜೀವ ಭದ್ರತೆ ಪ್ರಶ್ನಾರ್ಥಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ತಕ್ಷಣ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಪಾದಯಾತ್ರೆ ಮಾರ್ಗಗಳಲ್ಲಿ ಸೂಕ್ತ ನಿಗಾವ್ಯವಸ್ಥೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಸಂಘಟನೆಯ ಅಧ್ಯಕ್ಷ ಮಾದಪ್ಪ ಚಂಗಡಿಕರಿಯಪ್ಪ ರೈತರ ಶಾಂತರಾಜು ಅಮೋಘ್ ಪುಟ್ಟಸ್ವಾಮಿ ಶ್ರೀನಿವಾಸ್ ಸೇರಿದಂತೆ ಹಲವಾರು ಹಾಜರಿದ್ದರು ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕ ಸಾವನ್ನಪ್ಪಿದ ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಭಕ್ತರು ಮತ್ತು ಗ್ರಾಮಸ್ಥರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ, ನಾಗಮಲೆ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಭಕ್ತರ ಸುರಕ್ಷತೆಗೆ ಅಗತ್ಯ ಭದ್ರತಾ ಕ್ರಮ, ತುರ್ತು ರಸ್ತೆ ನಿರ್ಮಾಣ ಹಾಗೂ ಕಾಡುಪ್ರಾಣಿಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈಕುರಿತು ಪ್ರತಿಭಟನಾಕಾರರು ಮಾತನಾಡಿಈ ಕುರಿತು ಪ್ರತಿಭಟನಾಕಾರರು ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಭಕ್ತರು ಮತ್ತು ಗ್ರಾಮಸ್ಥರ ಜೀವ ಭದ್ರತೆ ಪ್ರಶ್ನಾರ್ಥಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ಚಿರತೆ ದಾಳಿಯಲ್ಲಿ ಬಾಲಕನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ತಕ್ಷಣ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಪಾದಯಾತ್ರೆ ಮಾರ್ಗಗಳಲ್ಲಿ ಸೂಕ್ತ ನಿಗಾವ್ಯವಸ್ಥೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಸಂಘಟನೆಯ ಅಧ್ಯಕ್ಷ ಮಾದಪ್ಪ ಚಂಗಡಿಕರಿಯಪ್ಪ ರೈತರ ಶಾಂತರಾಜು ಅಮೋಘ್ ಪುಟ್ಟಸ್ವಾಮಿ ಶ್ರೀನಿವಾಸ್ ಸೇರಿದಂತೆ ಹಲವಾರು ಹಾಜರಿದ್ದರು1
- ಬೆಂಗಳೂರಿನಲ್ಲಿ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಅಪಹರಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ದುಷ್ಕರ್ಮಿಗಳು ಯುವಕನ ಕೈಕಾಲು ಕಟ್ಟಿ, ವೀಡಿಯೋ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.1