15 ಸಾವಿರ ರೂ. ಲಂಚ ಪಡೆದಿದ್ದ ನಿವೃತ್ತ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ.. ಕಲ್ಬುರ್ಗಿ : ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅವರಿಂದ 15 ಸಾವಿರ ರೂಪಾಯಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿವರ್ಹಣಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕನಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ತಲಾ 4 ವರ್ಷ ಸಜೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿದೆ. ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ ಪಂಡಿತ್ ಶಿಕ್ಷೆಗೊಳಗಾದವರು. ಕಲಬುರಗಿ ತಾಲೂಕು ಕಿನ್ನಿಸಡಕ ಪಂಚಾಯಿತಿ ಪಿಡಿಒ ಶರಣಗೌಡ ಕವಿತಾಳ ಅವರು ಜೇವರ್ಗಿ ತಾಲೂಕಿನ ಹುಲ್ಲೂರ ಪಂಚಾಯಿತಿಗೆ ವರ್ಗಾವಣೆಯಾಗಿದ್ದರು. ಅವರ ಸರ್ವಿಸ್ ಬುಕ್ ಕೊನೆಯ ವೇತನ ಪ್ರಮಾಣ ಪತ್ರವನ್ನು ಜೇವರ್ಗಿ ತಾಲೂಕು ಪಂಚಾಯಿತಿಗೆ ಕಳುಹಿಸಬೇಕಿತ್ತು. ಇದಕ್ಕಾಗಿ ಕಲಬುರಗಿ ತಾಲೂಕು ಪಂಚಾಯಿತಿಯ ಆಗಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2019ರ ಮೇ 10ರಂದು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಇನ್ಸ್ಪೆಕ್ಟರ್ ಕೆ.ಎಸ್. ಕಲ್ಲದೇವರು ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಕೋರ್ಟ್ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿ ನಾರಾಯಣ ಅವರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎಸ್. ಚಾಂದಕವಠೆ ವಾದ ಮಂಡಿಸಿದ್ದರು
15 ಸಾವಿರ ರೂ. ಲಂಚ ಪಡೆದಿದ್ದ ನಿವೃತ್ತ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ.. ಕಲ್ಬುರ್ಗಿ : ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅವರಿಂದ 15 ಸಾವಿರ ರೂಪಾಯಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿವರ್ಹಣಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕನಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ತಲಾ 4 ವರ್ಷ ಸಜೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿದೆ. ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ ಪಂಡಿತ್ ಶಿಕ್ಷೆಗೊಳಗಾದವರು. ಕಲಬುರಗಿ ತಾಲೂಕು ಕಿನ್ನಿಸಡಕ ಪಂಚಾಯಿತಿ ಪಿಡಿಒ ಶರಣಗೌಡ ಕವಿತಾಳ ಅವರು ಜೇವರ್ಗಿ ತಾಲೂಕಿನ ಹುಲ್ಲೂರ ಪಂಚಾಯಿತಿಗೆ ವರ್ಗಾವಣೆಯಾಗಿದ್ದರು. ಅವರ ಸರ್ವಿಸ್ ಬುಕ್ ಕೊನೆಯ ವೇತನ ಪ್ರಮಾಣ ಪತ್ರವನ್ನು ಜೇವರ್ಗಿ ತಾಲೂಕು ಪಂಚಾಯಿತಿಗೆ ಕಳುಹಿಸಬೇಕಿತ್ತು. ಇದಕ್ಕಾಗಿ ಕಲಬುರಗಿ ತಾಲೂಕು ಪಂಚಾಯಿತಿಯ ಆಗಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2019ರ ಮೇ 10ರಂದು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಇನ್ಸ್ಪೆಕ್ಟರ್ ಕೆ.ಎಸ್. ಕಲ್ಲದೇವರು ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಕೋರ್ಟ್ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿ ನಾರಾಯಣ ಅವರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎಸ್. ಚಾಂದಕವಠೆ ವಾದ ಮಂಡಿಸಿದ್ದರು
- ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ.. ಚಳ್ಳಕೆರೆ ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು. ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ ಪಾಲ್ಗೊಂಡರು ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....1
- ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.1
- "ಬಳ್ಳಾರಿಯಲ್ಲಿ ಆಟೋ ಡ್ರೈವರ್ ಗಳ ಜೀವನ ಏನಾಗಿದೆ ಗೊತ್ತಾ?" "ನಾವು ಹೇಗೆ ಜೀವನ ಸಾಗಿಸೋದು ಸಾರ್? ಇಷ್ಟು ದರ ವ್ಯತ್ಯಾಸ ಯಾಕೆ?" "ಗಾಂಧಿನಗರದಲ್ಲಿ ಆಟೋ ಗ್ಯಾಸ್ ದರ ₹93.54… MG ರೋಡ್ ನಲ್ಲಿ ₹84.10…" ಬಳ್ಳಾರಿಯಲ್ಲಿ ಒಂದೇ ನಗರದಲ್ಲಿ ಎರಡು ಗ್ಯಾಸ್ ದರ! 😡 ಆಟೋ ಡ್ರೈವರ್ ಗಳ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ಯಾರು ಉತ್ತರ ಕೊಡ್ತಾರೆ? "ಇಂಧನ ದರ ಏರಿದ್ರೆ… ಆಟೋ ಭಾಡಿಗೆ ಏರಿಸೋಕೆ ಆಗಲ್ಲ… ಜನ ಬೈತಾರೆ… ಸರ್ಕಾರ ಕೇಳ್ತಾ ಇಲ್ಲ…" "ಈ ವಿಡಿಯೋ share ಮಾಡಿ… ನಮ್ಮ ಧ್ವನಿ ಸರ್ಕಾರದವರೆಗೆ ತಲುಪಿಸೋಣ!"1
- ದಾವಣಗೆರೆ ಬ್ರೇಕಿಂಗ್ ರಂಗೇರಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾಚಣೆ ದಾವಣಗೆರೆಯಲ್ಲಿ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಅಬ್ಬರದ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಹಾಲಿ ಸಿಎಂ ಸಿದ್ದರಾಮಯ್ಯ ಕ್ಯಾಂಪಿಯನ್ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಬ್ಬರದ ಪ್ರಚಾರ ಗ್ರಾಮಾಂತರ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದ್ರೆ ನಗರ ಭಾಗದಲ್ಲಿ ಮಾಜಿ ಸಿಎಂ ಬಿಎಸ್ ವೈ ಪ್ರಚಾರ1
- ಸೊರಬ: ಸುರಭಿ ಜ್ಯುವೆಲ್ಲರಿ ಫೆಡರೇಷನ್ ಸೊರಬ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ದೊಡ್ಡಮನೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊರಬ ಪಟ್ಟಣದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಚಿನ್ನ-ಬೆಳ್ಳಿ ವ್ಯಾಪಾರಸ್ಥರು, ಮಾರಾಟಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸುರಭಿ ಜ್ಯುವೆಲ್ಲರಿ ಫೆಡರೇಷನ್ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಧುರಾಯ್ ಜಿ ಶೇಟ್, ಮಂಜುನಾಥ್ ಶೇಟ್, ರಾಮಕೃಷ್ಣ ಶೇಟ್, ಉಪಾಧ್ಯಕ್ಷರಾಗಿ ಪವನ್, ಸಚಿನ್, ಮೌನೇಶ್, ಗಿರೀಶ್ ಶೇಟ್, ಪ್ರಧಾನ ಕಾರ್ಯದರ್ಶಿಯಾಗಿ ಮರಿ ಶೇಟ್, ರಾಜು ಗೌರಿ ಜುವೆಲರಿ ವರ್ಕ್ಸ್, ಕಾರ್ಯದರ್ಶಿಗಳಾಗಿ ಭೂಷಣ್, ಪ್ರಶಾಂತ್ ಕುಮಾರ್ ದೊಡ್ಮನೆ. ವಿಜಯ್ ಯಶೋಧರ್ ಜುವೆಲ್ಲರಿ, ಖಜಾಂಚಿಯಾಗಿ ಗೋಪಾಲ್ ಶೇಟ್, ಸಹ ಖಜಾಂಚಿಗಳಾಗಿ ಗಜೇಂದ್ರ, ಸಂಜಯ್ ಕಾಳಿಕಾಂಬ ಜುವೆಲ್ಲರ್ಸ್, ಮಾಧ್ಯಮ ಸಲಹೆಗಾರರಾಗಿ ಎಸ್.ಜಿ ರಾಮಚಂದ್ರ ಸುರಭಿವಾಣಿ, ಕಾನೂನು ಸಲಹೆಗಾರಾಗಿ ವಕೀಲರಾದ ಬಂಗಾರಪ್ಪ, ಮಾಲತೇಶ್, ಪ್ರವೀಣ್ ಕುಮಾರ್ ದೊಡ್ಮನೆ ಹಾಗೂ ನಿರ್ದೇಶಕರಾಗಿ ವಸಂತ, ಸುರೇಂದ್ರ ಆನಂದ ಮಹಾಲಸ ಜ್ಯುವೆಲರಿ, ಲಕ್ಷ್ಮಿನಾರಾಯಣ, ಶ್ರೀನಿವಾಸ, ವಿಶ್ವ, ರಾಜಣ್ಣ, ರಾಮನಾಥ, ಸದಸ್ಯರಾಗಿ ಚಂದ್ರು, ಶ್ರೀಧರ್ ಮಂಜುನಾಥ್, ಕರಡಿಗೆರೆ ಶೆಟ್ರು ವಸಂತ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ದೊಡ್ಡಮನೆ ಮಾತನಾಡಿ ಪ್ರತಿದಿನ ಚಿನ್ನದ ದರದ ಏರಿಳಿತದಿಂದ ನಿರಂತರವಾಗಿ ಬಂಗಾರದ ಅಂಗಡಿಯ ಮೇಲೆ ದೌರ್ಜನ್ಯವಾಗುವ ನಿಟ್ಟಿನಲ್ಲಿ ಹಾಗೂ ಬಂಗಾರದ ಅಂಗಡಿಗಳ ಹಿತವನ್ನು ಕಾಯುವ ನಿಟ್ಟಿನಲ್ಲಿ, ಬಂಗಾರದ ಕೆಲಸ ಮಾಡುವ ಕೆಲಸಗಾರರ ಹಿತವನ್ನು ಕಾಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲಾಗುವದು. ಹಾಗೂ ಸೊರಬದಲ್ಲಿ ಒಂದೇ ಬಂಗಾರದ ದರ ನಿಗದಿ ಮಾಡುವ ನಿಟ್ಟಿನಲ್ಲಿ ಈ ಸಂಘ ಬದ್ಧವಾಗಿರುತ್ತದೆ. ಎಲ್ಲಾ ಬಂಗಾರದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು. ಗುರುತು ಪರಿಚಯ ಇರುವ ಹಾಗೂ ಕಡ್ಡಾಯವಾಗಿ ಬಿಲ್ಲನ್ನು ಇರುವ ಗ್ರಾಹಕರಿಗೆ ಮಾತ್ರ ಗಿರವಿಯನ್ನು ಕೊಡಬೇಕೆಂದು ತಿಳಿಸಿದರು3
- ಅರಕಲಗೂಡು : ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ನಡೆಯುವ ಬಾಬು ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ ಸಮಾರಂಭದಲ್ಲಿ ಸಮಾಜದ ಮುಖಂಡರು,ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಮಹಾನೀಯರನ್ನು ಗೌರವಿಸಬೇಕೆಂದು ಶಾಸಕ ಎ.ಮಂಜು ಅವರು ಸೂಚನೆ ನೀಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು,ಏ.5ರಂದು ಪಟ್ಟಣದ ದೇವರಾಜು ಅರಸು ಭವನದಲ್ಲಿ ಬಾಬು ಜಗಜೀವನ್ ರಾಂ ಅವರ 119ನೇ ಜಯಂತಿ ಆಚರಣೆ ಸಮಾರಂಭ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು,ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ. ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯು ತಾಲೂಕು ಕಚೇರಿ ಆವರಣದಲ್ಲಿ ಜರುಗಲಿದೆ.ವಿಶೇಷವಾಗಿ ನೂತನವಾಗಿ ನಿರ್ಮಾಣಗೊಂಡಿರುವ ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆ ಗೋಪುರ ಉದ್ಘಾಟನೆ ಹಾಗೂ ಬೃಹತ್ ವೇದಿಕೆ ಸಮಾರಂಭ ಆಯೋಜನೆ ಮಾಡಲಾಗಿದೆ.ಇದಕ್ಕೂ ಮುನ್ನಾ ಅನಕೃ ವೃತ್ತದಿಂದ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ 135 ಕುಂಭಕಳಸ,ಕಲಾ ತಂಡಗಳೊಂದಿಗೆ ನಡೆಯಲಿದೆ.ವಿಶ್ವಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಕೂಡ ನಡೆಯಲಿದೆ.ಈ ಕಾರ್ಯಕ್ರಮದ ಉಸ್ತುವಾರಿಯನ್ನು ತಾಲೂಕು ಆರೋಗ್ಯ ಅಧಿಕಾರಿಗಳು,ಸಿಬ್ಬಂದಿಗಳು ನೋಡಿಕೊಳ್ಳಬೇಕು.ಇದಕ್ಕಾಗಿ ಇದೇ ಆವರಣದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಈ ಎರಡು ಕಾರ್ಯಕ್ರಮಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಗೌರವ ಸಮರ್ಪಣೆ,ವಿಶೇಷವಾಗಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.ಈ ಇಬ್ಬರು ಮಹಾನೀಯರ ಜಯಂತಿ ಆಚರಣೆ ಕಾರ್ಯಕ್ರಮ ಹಬ್ಬವಾಗಿ ಜರುಗಲು ಸಮಾಜದ ಮುಖಂಡಂರು,ಚುನಾಯಿತ ಮಾಜಿ,ಹಾಲಿ ಸದಸ್ಯರು,ಗ್ರಾಪಂ ಆಡಳಿತದಿಂದಲೂ ಜನರನ್ನು ಕರೆತರುವ ಕೆಲಸ ಹಾಗೂ ಅಂಗನವಾಡಿ,ಆಶಾ ಕಾರ್ಯಕರ್ತರು,ಮಹಿಳಾ ಸಂಘಟನೆಗಳ ಕಾರ್ಯಕರ್ತರು,ಧರ್ಮಸ್ಥಳ ಸ್ತೀಶಕ್ತಿ ಸಂಘಟನೆಗಳ ಮಹಿಳೆಯರನ್ನು ಆಹ್ವಾನಿಸಲು ಕ್ರಮವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ತಹಸೀಲ್ದಾರ್ ಕೆ.ಸಿ.ಸೌಮ್ಯ ಅವರು ಮಾತನಾಡಿದರು.ದಲಿತ ಸಂಘಟನೆಗಳ ಮುಖಂಡರು.ವಿವಿಧ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.1
- Post by H M ಹರಕುಣಿ2
- ಈಚಘಟ್ಟ ಗ್ರಾಮದ ಜನಗಣತಿ ಕಾರ್ಯಕ್ರಮದಲ್ಲಿ ಶಾಸಕ ಎಂ ಚಂದ್ರಪ್ಪ ಬಾಗಿಯಾಗಿದ್ದಾರೆ. ಹೊಳಲ್ಕೆರೆ ಮತಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ, ತಹಶೀಲ್ದಾರ್ ಕಾರ್ಯಾಲಯ ಹೊಳಲ್ಕೆರೆ ವತಿಯಿಂದ ಭಾರತ ಜನಗಣತಿ- 2027ರ ಪ್ರಕ್ರಿಯೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿ ಮಾತನಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಜನಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಂ ಚಂದ್ರಪ್ಪ ಮನವಿ ಮಾಡಿದ್ದಾರೆ.1