ಸಹಸ್ರಾರು ಸಂಖ್ಯೆಯಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ಗಂಗಮ್ಮ ದೇವಿ ಕರಗ ಮಹೋತ್ಸವ ಬಾಗೇಪಲ್ಲಿ: ಪಟ್ಟಣದ ಗ್ರಾಮದೇವತೆ ಶ್ರೀ ಗಂಗಮ್ಮ ದೇವಿಯ ಸನ್ನಿಧಿಯಲ್ಲಿ ಶ್ರೀಧರ್ಮರಾಯ ಸ್ವಾಮಿಯ 37 ನೇ ವರ್ಷದ ಹೂವಿನ ಕರಗ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಶ್ರದ್ದೆಯಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಬಾಗೇಪಲ್ಲಿ ಪಟ್ಟಣದ ಶ್ರೀ ಗಂಗಮ್ಮ ದೇವಿ ಟ್ರಸ್ಟ್ ಹಾಗೂ ಕರಗ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಅಯೋಜಿಸಲಾಗಿದ್ದ ಶ್ರೀ ಧರ್ಮರಾಯನ ಕರಗ ಮಹೋತ್ಸವಕ್ಕೆ ಸಮಿತಿ ಸದಸ್ಯರು, ವಿವಿಧ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ ಹೂವಿನ ಕರಗ ಹೊರುವ ಮೇಲೂರಿನ ಧಮೇಂದ್ರ ಪಟ್ಟಣದ ಕೆ.ವಿ.ಟ್ರಸ್ಟ್ ಆವರಣಕ್ಕೆ ಹೋಗಿ ಬಳೇ ತೊಡೆಸಿಕೊಂಡ ನಂತರ ವೀರಕುಮಾರರ ತಮಟೆ ವಾದ್ಯಗಳೊಡನೆ ಗ್ರಾಮದೇವತೆ ಶ್ರೀಗಂಗಮ್ಮ ದೇವಾಲಯಕ್ಕೆ ಪ್ರವೇಶ ಮಾಡಿ ಶ್ರೀಗಂಗಮ್ಮ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸುತ್ತಿದ್ದಂತೆ ಕರಗ ಹೊತ್ತ ಮೇಲೂರಿನ ಧಮೇಂದ್ರ ಅವರು ವೀರಕುಮಾರರು ಗೋವಿಂದ.. ಗೋವಿಂದ.. ಗೋವಿಂದಾ ನಾಮಸ್ಮರಣೆಯೊಂದಿಗೆ ಖಡ್ಗಗಳನ್ನು ಝಳಪಿಸುತ್ತಾ ಹೂವಿನ ಕರಗಕ್ಕೆ ಸ್ವಾಗಸಿಸುತ್ತಾ ದೇವಾಲಯದಿಂದ ಹೂರಬಂದ ಹೂವಿನ ಕರಗ ದೇವಾಲಯದ ಮುಂಭಾಗದಲ್ಲಿ ತಮಟೆಗಳ ತಾಳಕ್ಕೆ ಕುಣಿಯುತ್ತಾ ಜನಸಾಗರವನ್ನು ರೋಮಾಂಚನಗೊಳಿಸಿ ದರ್ಶನ ನೀಡುತ್ತದೆ. ಕರಗ ಹೊತ್ತ ಪೂಜಾರಿ ವಹ್ನಿಕುಲ ಧಮೇಂದ್ರ ಅವರು ಬಾಗೇಪಲ್ಲಿ ಪಟ್ಟಣದ ವಿವಿಧಡೆ ಸಿದ್ದಪಡಿಸಿರುವ ಹಲವು ವೇದಿಕೆಗಳ ಮೇಲೆ ವಿವಿಧ ಜನಪದ ಹಾಡುಗಳಿಗೆ ನೃತ್ಯ ಮಾಡುತ್ತಾ ಜನರನ್ನು ರಂಜಿಸಿ ನಂತರ ತಮಟೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಪಟ್ಟಣದ ಕೆಇಬಿ ಕಾಲೋನಿ, ಕಣಜ ರಸ್ತೆ, ಅವಲಮಂದೆ ರಸ್ತೆ, ಹಳೇ ಕೋರ್ಟ್ ರಸ್ತೆ, ಪೊಲೀಸ್ ಬಡವಾಣೆ, ಅಂಬೇಡ್ಕರ್ ನಗರ, ಕುಂಭಾರಪೇಟೆ, ಗೂಳೂರು ರಸ್ತೆ, ಕೊತ್ತಪಲ್ಲಿ, ದರ್ಗಾ ಮೊಹಲ್ಲಾ ಮತ್ತಿತರರ ಬಡವಾಣೆಗಳಲ್ಲಿ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಿದರು. ಹೂವಿನ ಕರಗ ತಮ್ಮ ಮನೆಗಳ ಬಳಿ ಬರುವುದಕ್ಕೂ ಮುನ್ನವೇ ಮಹಿಳೆಯರು ಮನೆ ಮುಂದೆ ಸಾರಸಿ, ಬಣ್ಣ ಬಣ್ಣದ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಿದರು. ಆಂಧ್ರಪ್ರದೇಶ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಹೂವಿನ ಕರಗದ ರಮಣೀಯ ದೃಶ್ಯಗಳನ್ನು ಅಸ್ಪಾಧಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕರಗ ಮಹೋತ್ಸವದ ದೀಪಾಲಂಕಾರದ ಜತೆಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದರು, ಹರಿನಾಥರೆಡ್ಡಿ ಚಾರಿಟಿಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಎನ್ಡಿಎ ಮುಖಂಡ ಹರಿನಾಥರೆಡ್ಡಿ ಗ್ರಾಮದೇವತೆಯ ಕರಗ ರಥೋತ್ಸವ, ಅನ್ನದಾನದ ಜತೆಗೆ ಮನರಂಜನಾ ಕಾರ್ಯಕ್ರಮವನ್ನು ಅಯೋಜಿಸಿ ಸುಮಾರು 50 ಸಾವಿರ ಭಕ್ತಾಧಿಗಳಿಗೆ ಅನ್ನಪ್ರಸಾದ ಉಣಬಡಿಸಿದರು. ಬಾಗೇಪಲ್ಲಿಯ ಕರಗ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ಅಜೆಯ್ ಸಾರಥಿ ನೇತೃತ್ವದಲ್ಲಿ ಪೊಲೀಸ್ ಬೀಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎನ್.ಸಂಪಂಗಿ, ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹರಿನಾಥರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಮತಾ ನಾಗರಾಜುರೆಡ್ಡಿ, ಮುಖಂಡರಾದ ಎಸ್ಟಿಡಿ ಮೂರ್ತಿ, ಎ.ನಂಜುಂಡ, ಕರಗ ಸಮಿತಿ ಸದಸ್ಯರಾದ ಬಿ.ಆರ್.ನರಸಿಂಹನಾಯ್ದು, ಎ.ಜಿ.ಸುಧಾಕರ್, ಸಿ.ಎಸ್.ವೆಂಕಟೇಶ್, ಮರಿಯಪ್ಪ, ಎ.ಸೂರ್ಯನಾರಾಯಣರೆಡ್ಡಿ, ಜಯಪ್ರಕಾಶ್ ನಾರಾಯಣ್, ಆದಿಮೂರ್ತಿ, ಅರ್ಚಕ ಅಪ್ಪುಸ್ವಾಮಿ ಮತ್ತಿತರರು ಇದ್ದರು.
ಸಹಸ್ರಾರು ಸಂಖ್ಯೆಯಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ಗಂಗಮ್ಮ ದೇವಿ ಕರಗ ಮಹೋತ್ಸವ ಬಾಗೇಪಲ್ಲಿ: ಪಟ್ಟಣದ ಗ್ರಾಮದೇವತೆ ಶ್ರೀ ಗಂಗಮ್ಮ ದೇವಿಯ ಸನ್ನಿಧಿಯಲ್ಲಿ ಶ್ರೀಧರ್ಮರಾಯ ಸ್ವಾಮಿಯ 37 ನೇ ವರ್ಷದ ಹೂವಿನ ಕರಗ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಶ್ರದ್ದೆಯಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಬಾಗೇಪಲ್ಲಿ ಪಟ್ಟಣದ ಶ್ರೀ ಗಂಗಮ್ಮ ದೇವಿ ಟ್ರಸ್ಟ್ ಹಾಗೂ ಕರಗ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಅಯೋಜಿಸಲಾಗಿದ್ದ ಶ್ರೀ ಧರ್ಮರಾಯನ ಕರಗ ಮಹೋತ್ಸವಕ್ಕೆ ಸಮಿತಿ ಸದಸ್ಯರು, ವಿವಿಧ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ ಹೂವಿನ ಕರಗ ಹೊರುವ ಮೇಲೂರಿನ ಧಮೇಂದ್ರ ಪಟ್ಟಣದ ಕೆ.ವಿ.ಟ್ರಸ್ಟ್ ಆವರಣಕ್ಕೆ ಹೋಗಿ ಬಳೇ ತೊಡೆಸಿಕೊಂಡ ನಂತರ ವೀರಕುಮಾರರ ತಮಟೆ ವಾದ್ಯಗಳೊಡನೆ ಗ್ರಾಮದೇವತೆ ಶ್ರೀಗಂಗಮ್ಮ ದೇವಾಲಯಕ್ಕೆ ಪ್ರವೇಶ ಮಾಡಿ ಶ್ರೀಗಂಗಮ್ಮ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸುತ್ತಿದ್ದಂತೆ ಕರಗ ಹೊತ್ತ ಮೇಲೂರಿನ ಧಮೇಂದ್ರ ಅವರು ವೀರಕುಮಾರರು ಗೋವಿಂದ.. ಗೋವಿಂದ.. ಗೋವಿಂದಾ ನಾಮಸ್ಮರಣೆಯೊಂದಿಗೆ ಖಡ್ಗಗಳನ್ನು ಝಳಪಿಸುತ್ತಾ ಹೂವಿನ ಕರಗಕ್ಕೆ
ಸ್ವಾಗಸಿಸುತ್ತಾ ದೇವಾಲಯದಿಂದ ಹೂರಬಂದ ಹೂವಿನ ಕರಗ ದೇವಾಲಯದ ಮುಂಭಾಗದಲ್ಲಿ ತಮಟೆಗಳ ತಾಳಕ್ಕೆ ಕುಣಿಯುತ್ತಾ ಜನಸಾಗರವನ್ನು ರೋಮಾಂಚನಗೊಳಿಸಿ ದರ್ಶನ ನೀಡುತ್ತದೆ. ಕರಗ ಹೊತ್ತ ಪೂಜಾರಿ ವಹ್ನಿಕುಲ ಧಮೇಂದ್ರ ಅವರು ಬಾಗೇಪಲ್ಲಿ ಪಟ್ಟಣದ ವಿವಿಧಡೆ ಸಿದ್ದಪಡಿಸಿರುವ ಹಲವು ವೇದಿಕೆಗಳ ಮೇಲೆ ವಿವಿಧ ಜನಪದ ಹಾಡುಗಳಿಗೆ ನೃತ್ಯ ಮಾಡುತ್ತಾ ಜನರನ್ನು ರಂಜಿಸಿ ನಂತರ ತಮಟೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಪಟ್ಟಣದ ಕೆಇಬಿ ಕಾಲೋನಿ, ಕಣಜ ರಸ್ತೆ, ಅವಲಮಂದೆ ರಸ್ತೆ, ಹಳೇ ಕೋರ್ಟ್ ರಸ್ತೆ, ಪೊಲೀಸ್ ಬಡವಾಣೆ, ಅಂಬೇಡ್ಕರ್ ನಗರ, ಕುಂಭಾರಪೇಟೆ, ಗೂಳೂರು ರಸ್ತೆ, ಕೊತ್ತಪಲ್ಲಿ, ದರ್ಗಾ ಮೊಹಲ್ಲಾ ಮತ್ತಿತರರ ಬಡವಾಣೆಗಳಲ್ಲಿ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಿದರು. ಹೂವಿನ ಕರಗ ತಮ್ಮ ಮನೆಗಳ ಬಳಿ ಬರುವುದಕ್ಕೂ ಮುನ್ನವೇ ಮಹಿಳೆಯರು ಮನೆ ಮುಂದೆ ಸಾರಸಿ, ಬಣ್ಣ ಬಣ್ಣದ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಿದರು. ಆಂಧ್ರಪ್ರದೇಶ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಹೂವಿನ ಕರಗದ ರಮಣೀಯ ದೃಶ್ಯಗಳನ್ನು ಅಸ್ಪಾಧಿಸಿದರು. ಬಿಜೆಪಿ ರಾಜ್ಯ
ಕಾರ್ಯದರ್ಶಿ ಸಿ.ಮುನಿರಾಜು ಕರಗ ಮಹೋತ್ಸವದ ದೀಪಾಲಂಕಾರದ ಜತೆಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದರು, ಹರಿನಾಥರೆಡ್ಡಿ ಚಾರಿಟಿಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಎನ್ಡಿಎ ಮುಖಂಡ ಹರಿನಾಥರೆಡ್ಡಿ ಗ್ರಾಮದೇವತೆಯ ಕರಗ ರಥೋತ್ಸವ, ಅನ್ನದಾನದ ಜತೆಗೆ ಮನರಂಜನಾ ಕಾರ್ಯಕ್ರಮವನ್ನು ಅಯೋಜಿಸಿ ಸುಮಾರು 50 ಸಾವಿರ ಭಕ್ತಾಧಿಗಳಿಗೆ ಅನ್ನಪ್ರಸಾದ ಉಣಬಡಿಸಿದರು. ಬಾಗೇಪಲ್ಲಿಯ ಕರಗ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ಅಜೆಯ್ ಸಾರಥಿ ನೇತೃತ್ವದಲ್ಲಿ ಪೊಲೀಸ್ ಬೀಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎನ್.ಸಂಪಂಗಿ, ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹರಿನಾಥರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಮತಾ ನಾಗರಾಜುರೆಡ್ಡಿ, ಮುಖಂಡರಾದ ಎಸ್ಟಿಡಿ ಮೂರ್ತಿ, ಎ.ನಂಜುಂಡ, ಕರಗ ಸಮಿತಿ ಸದಸ್ಯರಾದ ಬಿ.ಆರ್.ನರಸಿಂಹನಾಯ್ದು, ಎ.ಜಿ.ಸುಧಾಕರ್, ಸಿ.ಎಸ್.ವೆಂಕಟೇಶ್, ಮರಿಯಪ್ಪ, ಎ.ಸೂರ್ಯನಾರಾಯಣರೆಡ್ಡಿ, ಜಯಪ್ರಕಾಶ್ ನಾರಾಯಣ್, ಆದಿಮೂರ್ತಿ, ಅರ್ಚಕ ಅಪ್ಪುಸ್ವಾಮಿ ಮತ್ತಿತರರು ಇದ್ದರು.
- ಚಿಂತಾಮಣಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ತಡರಾತ್ರಿ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.1
- ಸನ್ ಸ್ಟ್ರೋಕ್ ಗೆ ಕುಸಿದು ಬಿದ್ದು ವೃದ್ಧ ಸಾವನ್ನಪ್ಪಿರುವ ಶಂಕೆ ಬಿಸಿಲಲ್ಲಿ ನಿಂತಲ್ಲಿಯೇ ಕುಸಿದು ಬಿದ್ದಿರುವ ವೃದ್ಧ ನೆಲಮಂಗಲ ಸನ್ ಸ್ಟ್ರೋಕ್ ಗೆ ಕುಸಿದು ಬಿದ್ದು ವೃದ್ಧ ಸಾವು ಶಂಕೆ ಬಿಸಿಲಲ್ಲಿ ನಿಂತಲ್ಲಿಯೇ ಕುಸಿದು ಬಿದ್ದಿರುವ ವೃದ್ಧ ಶೆಟ್ಟಿಹಳ್ಳಿ ಗ್ರಾಮದ ಚಿಕ್ಕಣ್ಣ(70) ಸಾವು ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಬೆಳಗ್ಗೆ ಅಂಗಡಿಗೆ ಹೋದಾಗ ನಡೆದಿರುವ ಘಟನೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ರಾಜ್ಯದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಕೊಲೆ ಆರೋಪಿಗಳಾದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದಿಂದ ಪ್ರಕರಣದ ಹಲವು ರಹಸ್ಯಗಳು ಬಯಲಾಗುವ ಸಾಧ್ಯತೆ ಇದೆ.2
- ಪ್ರೀತಿ ವಿಚಾರಕ್ಕೆ ಅಪಹರಣ, ಹಲ್ಲೆ ಆರೋಪ ಕೈಕಾಲು ಕಟ್ಟಿ ವಿಡಿಯೋ ಮಾಡಿದ ಘಟನೆ ಪ್ರೀತಿ ವಿಚಾರಕ್ಕೆ ಅಪಹರಣ, ಹಲ್ಲೆ ಆರೋಪ ಕೈಕಾಲು ಕಟ್ಟಿ ವಿಡಿಯೋ ಮಾಡಿದ ಘಟನೆ1
- ಹಾಸ್ಟೆಲ್ನಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಬೆಂಗಳೂರಿನ ಕೊಟ್ಟಿಗೆಪಾಳ್ಯದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ಮಿತಿಮೀರಿದ್ದು, ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆಯಿಂದ ಊಟ, ನಿದ್ದೆಯಿಲ್ಲದೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ವಾರ್ಡನ್ ಹಾಗೂ ಸಿಬ್ಬಂದಿಗಳ ಗೈರುಹಾಜರಿ, ಕಳಪೆ ಗುಣಮಟ್ಟದ ಆಹಾರ ಮತ್ತು ಸಿಬ್ಬಂದಿಯ ಅಸಭ್ಯ ವರ್ತನೆಯಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕೂಡಲೇ ಜವಾಬ್ದಾರಿಯುತ ವಾರ್ಡನ್ ನೇಮಕ ಹಾಗೂ ಉತ್ತಮ ವಿದ್ಯಾಭ್ಯಾಸದ ವಾತಾವರಣ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.1
- ತಮಿಳುನಾಡಿನ ಟಿವಿಕೆ ನಾಯಕ, ನಟ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.1
- ಆನೇಕಲ್: ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಯುವಕರು; ವಿಡಿಯೋ ವೈರಲ್. ಆನೇಕಲ್ನ ಹೊಸೂರು ಮುಖ್ಯರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಹಣದ ವಿಚಾರವಾಗಿ ಇಬ್ಬರು ಯುವಕರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ ಯುವಕರು, ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಈ ದೃಶ್ಯಗಳನ್ನು ಹಾದಿಹೋಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ಚಿಂತಾಮಣಿ ಉಪ ಪೊಲೀಸ್ ಅಧೀಕ್ಷಕರನ್ನು (DySP) ಹೊಸಪೇಟೆಗೆ ವರ್ಗಾವಣೆ ಮಾಡಲಾಗಿದೆ. ಈ ದಿಢೀರ್ ಬೆಳವಣಿಗೆ ಸ್ಥಳೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.1