ಗುಳೇದಗುಡ್ಡದಲ್ಲಿ ಗುರುವಂದನೆ: ಗುರು-ಶಿಷ್ಯರ ಸಂಬಂಧ ಅಪಾರ: ಗುರೂಜಿ ಹಡಗಲಿ ಗುಳೇದಗುಡ್ಡ: ವ್ಯಾಸರ ಜಯಂತಿಯಂದು ಗುರುಗಳ ನೆನಪಿಸುವ ಕಾರ್ಯವೇ ಗುರುವಂದನೆಯ ವ್ಯಾಸ ಪೂರ್ಣಿಮೆ ಆಗಿದೆ. ಗುರುಗಳು ಶಿಷ್ಯರ ಆಗು-ಹೋಗುಗಗಳನ್ನು ಸಮಾನತೆಯಿಂದ ನೋಡಿ ಅವರಿಗೆ ಮಾರ್ಗದರ್ಶನ ಮಾಡುತ್ತಾತೆ. ಈ ಗುರು-ಶಿಷ್ಯರ ಸಂಬಂಧ ಅಪಾರವಾದ ಪವಿತ್ರವಾದುದು ಗುರೂಜಿ ಬಸವರಾಜ ಹಡಗಲಿ ಹೇಳಿದರು. ಅವರು ಪಟ್ಟಣದ ಶ್ರೀ ಕೃಷ್ಣ ಯೋಗಾಶ್ರಮದಲ್ಲಿ ಶಿಷ್ಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ತಾಯಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಗುರುವಿಗೂ ಇದೆ. ಗುರು ದೇವರಿಗಿಂತಲೂ ದೊಡ್ಡವನು ಎನ್ನುತ್ತಾರೆ. ಹೀಗಾಗಿ ಗುರು ಸೇವೆ ಮಾಡುವುದರಿಂದ ನಾವು ದೇವರನ್ನು ಮೆಚ್ಚಿಸಬಹುದು ಎಂದರು. ಡಾ.ವಿ.ಎ.ಬೆನಕನಾಳ ಮಾತನಾಡಿ, ಇದು ವಿಶಿಷ್ಠವಾದ ದಿನ ಇದು ವ್ಯಾಸ ಪೂರ್ಣಿಮೆ, ಗುರುಪುರ್ಣಿಮೆ ಬುದ್ದ ಪುರ್ಣಿಮೆ ಇವತ್ತು ಭೂಮಿಯ ಮೇಲೆ ಚಂದ್ರನ ಬೆಳೆಕು ಪ್ರತಿ ಮಾಸಗಿಂತ ಇವತ್ತಿನ ದಿವಸ ಪ್ರಕಾಶಮಾನವಾಗಿ ಕಂಡು ಬರುತ್ತದೆಚಂದ್ರ ದೊಡ್ಡದಾಗಿ ಕಾಣುತ್ತದೆ ಎಂದು ಹೇಳಿದರು. ಡಾ. ಬಸವರಾಜ ಹಡಗಲಿ ಗುರುಗಳ ಪಾದಪೂಜೆಯನ್ನು ನರಗುಂದದ ಶಿವಯೋಗಿ ಹಿರೇಮಠ ತಡಹಾಳ ಸ್ವಾಮಿಗಳು ನಿವಾಸಿಗಳು ನಡೆಸಿದರು. ಬೆಳ್ಳೇರಿಯ ಬಸಗೌಡ ಹಿರೇಗೌಡರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ದೀಪಕ ಹಡಗಲಿ, ಸುಹಾಸಿನಿ ಹಡಗಲಿ, ಸಂಗಮೇಶ ಚಿಕ್ಕಾಡಿ, ಲಕ್ಷ್ಮೀ ಹಡಗಲಿ, ಸಿದ್ದು ಕರನಾಲಗಿ, ಶೆಖರಪ್ಪ ಹೂಗಾರ, ಸಂಗಮೇಶ ಯಲಿಗಾರ, ಭಾಗ್ಯಾ ಉದ್ನೂರ ಮತ್ತಿತರರು ಇದ್ದರು.
ಗುಳೇದಗುಡ್ಡದಲ್ಲಿ ಗುರುವಂದನೆ: ಗುರು-ಶಿಷ್ಯರ ಸಂಬಂಧ ಅಪಾರ: ಗುರೂಜಿ ಹಡಗಲಿ ಗುಳೇದಗುಡ್ಡ: ವ್ಯಾಸರ ಜಯಂತಿಯಂದು ಗುರುಗಳ ನೆನಪಿಸುವ ಕಾರ್ಯವೇ ಗುರುವಂದನೆಯ ವ್ಯಾಸ ಪೂರ್ಣಿಮೆ ಆಗಿದೆ. ಗುರುಗಳು ಶಿಷ್ಯರ ಆಗು-ಹೋಗುಗಗಳನ್ನು ಸಮಾನತೆಯಿಂದ ನೋಡಿ ಅವರಿಗೆ ಮಾರ್ಗದರ್ಶನ ಮಾಡುತ್ತಾತೆ. ಈ ಗುರು-ಶಿಷ್ಯರ ಸಂಬಂಧ ಅಪಾರವಾದ ಪವಿತ್ರವಾದುದು ಗುರೂಜಿ ಬಸವರಾಜ ಹಡಗಲಿ ಹೇಳಿದರು. ಅವರು ಪಟ್ಟಣದ ಶ್ರೀ ಕೃಷ್ಣ ಯೋಗಾಶ್ರಮದಲ್ಲಿ ಶಿಷ್ಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ತಾಯಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಗುರುವಿಗೂ ಇದೆ. ಗುರು ದೇವರಿಗಿಂತಲೂ ದೊಡ್ಡವನು ಎನ್ನುತ್ತಾರೆ. ಹೀಗಾಗಿ ಗುರು ಸೇವೆ ಮಾಡುವುದರಿಂದ ನಾವು ದೇವರನ್ನು ಮೆಚ್ಚಿಸಬಹುದು ಎಂದರು. ಡಾ.ವಿ.ಎ.ಬೆನಕನಾಳ ಮಾತನಾಡಿ, ಇದು ವಿಶಿಷ್ಠವಾದ ದಿನ ಇದು ವ್ಯಾಸ ಪೂರ್ಣಿಮೆ, ಗುರುಪುರ್ಣಿಮೆ ಬುದ್ದ ಪುರ್ಣಿಮೆ ಇವತ್ತು ಭೂಮಿಯ ಮೇಲೆ ಚಂದ್ರನ ಬೆಳೆಕು ಪ್ರತಿ ಮಾಸಗಿಂತ ಇವತ್ತಿನ ದಿವಸ ಪ್ರಕಾಶಮಾನವಾಗಿ ಕಂಡು ಬರುತ್ತದೆಚಂದ್ರ ದೊಡ್ಡದಾಗಿ ಕಾಣುತ್ತದೆ ಎಂದು ಹೇಳಿದರು. ಡಾ. ಬಸವರಾಜ ಹಡಗಲಿ ಗುರುಗಳ ಪಾದಪೂಜೆಯನ್ನು ನರಗುಂದದ ಶಿವಯೋಗಿ ಹಿರೇಮಠ ತಡಹಾಳ ಸ್ವಾಮಿಗಳು ನಿವಾಸಿಗಳು ನಡೆಸಿದರು. ಬೆಳ್ಳೇರಿಯ ಬಸಗೌಡ ಹಿರೇಗೌಡರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ದೀಪಕ ಹಡಗಲಿ, ಸುಹಾಸಿನಿ ಹಡಗಲಿ, ಸಂಗಮೇಶ ಚಿಕ್ಕಾಡಿ, ಲಕ್ಷ್ಮೀ ಹಡಗಲಿ, ಸಿದ್ದು ಕರನಾಲಗಿ, ಶೆಖರಪ್ಪ ಹೂಗಾರ, ಸಂಗಮೇಶ ಯಲಿಗಾರ, ಭಾಗ್ಯಾ ಉದ್ನೂರ ಮತ್ತಿತರರು ಇದ್ದರು.
- ಮದರಸಾ ಆರಂಭಕ್ಕೆ ವಿರೋಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತಹಸಿಲ್ದಾರ್ ಅವರಿಗೆ ಮನವಿ1
- ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.1
- ತುಮಕೂರು-ಶ್ರೀ ನೀಲಕಂಠೇರಶ್ವ ಸ್ವಾಮಿ ಪತ್ತಿನ ಸಹಕಾರ ಸಂಘದ 25ನೇ ರಜತ ಮಹೋತ್ಸವ #onlinetv24x7 #ಸೌಹಾರ್ದಸಂಘಗಳು #tumkur1
- ಹಮ್ಮಿಗಿ ಗ್ರಾಮದಲ್ಲಿ ಸಣ್ಣದೊಂದು ಜನನ ಪ್ರಮಾಣ ಪತ್ರದ ತಿದ್ದುಪಡಿ ಗಾಗಿ ಅಂಗವಿಕಲ ಮಹಿಳೆಯೊಬ್ಬರು ನಾಲ್ಕು ದಿನಗಳಿಂದ ಅಲೆದಾಡುತ್ತಿರುವ ಘಟನೆ... ಹೌದು, ಹಮ್ಮಿಗಿ ಗ್ರಾಮದ ವೀರಮ್ಮ ಬಾಬುಸಾಬ ಮಡಿವಾಳರ ಎಂಬ ವಿಶೇಷ ಚೇತನ ಮಹಿಳೆ, ನವಿನ ಹಾಲಪ್ಪ ಈಟಿ ಅವರ ಜನನ ಪ್ರಮಾಣ ಪತ್ರಕ್ಕಾಗಿ ನಾಲ್ಕು ದಿನಗಳಿಂದ ನಿರಂತರವಾಗಿ ಅಲೆದಾಡುತ್ತಿದ್ದಾರೆ. ಎರಡು ಕಾಲು ಇಲ್ಲದೆ ನಡೆಯಲು ಶಕ್ತಿಯಿಲ್ಲದಿದ್ದರೂ, ಶ್ರಮಪಟ್ಟು ಕಚೇರಿಗೆ ಬಂದರೆ ತಲಾಠಿ ಮಾತ್ರ ಸ್ಥಳದಲ್ಲೇ ಇರುವುದಿಲ್ಲ! ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿ ಹೀಗೆ ನಾಪತ್ತೆಯಾಗುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳು ಹೀಗೆ ಬಡವರನ್ನು, ಅಂಗವಿಕಲರನ್ನು ಸತಾಹಿಸುವುದು ಎಷ್ಟು ಸರಿ ಎನ್ನುವುದು ಗ್ರಾಮಸ್ಥರ ಖಾರವಾದ ಪ್ರಶ್ನೆ.1
- ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ1
- ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಗ್ರಾಮ ಘಟಕ ಮತ್ತು ನಾಮಫಲಕ ಉದ್ಘಾಟನೆಯ ಕಾರ್ಯಕ್ರಮ1
- Post by Onlinetv24x71
- ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಣೆ ಮಾಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ರೈತರು ಆಗ್ರಿಸಿದರು..! ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಣೆ ಮಾಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ರೈತರು ಆಗ್ರಿಸಿದರು..!1
- ಬೈಕ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಬೈಕ್ ಸವಾರ ಸಾ**ವು ! ಹಿಂಬದಿ ಸವಾರನಿಗೆ ಗಂಭೀರ ಗಾಯ1