ಅಳ್ನಾವರದಲ್ಲಿ ಆದಿಗುರು ಶಂಕರಾಚಾರ್ಯರ ಜಯಂತಿ ಸಮಾರಂಭದಲ್ಲಿ ಸಾಮಾಜದ ಗಣ್ಯರು, ಅಧಿಕಾರಿಗಳು ಇದ್ದರು. ಅಳ್ನಾವರದಲ್ಲಿ ಶಂಕರಾಚಾರ್ಯರ ಜಯಂತಿ ಅಳ್ನಾವರ (ಧಾರವಾಡ ):ಧರ್ಮದ ಉಳಿವಿಗಾಗಿ ಶ್ರಮಿಸಿದ ಶಂಕರಾಚಾರ್ಯರ ತತ್ವಗಳು, ಉಪದೇಶಗಳಲ್ಲಿ ಸುಂದರ ಬದುಕಿನ ಮೌಲ್ಯ ಅಡಗಿದೆ. ನಾಡಿನ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಧಾರ್ಮಿಕ ಪರಂಪರೆ ಆಚಾರ ಉಳಿಸಲು ಶಂಕರಾಚಾರ್ಯರ ಸಂದೇಶಗಳನ್ನು ಅಳವಡಿಸಿಕೊಳ್ಳುವದು ಅವಶ್ಯ ಎಂದು ಸಾಮಾಜಿಕ ಚಿಂತಕ ಮಹಾದೇವ ಸಾಗರೇಕರ ಹೇಳಿದರು. ಇಲ್ಲಿನ ತಾಲ್ಲೂಕಕ ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಸಹಯೋಗದಲ್ಲಿ ಮಂಗಳವಾರ ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧರ್ಮ, ಸಂಸ್ಕಾರ ಉಳಿಯಲು ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ, ಬಾಲ್ಯವಸ್ಥೆಯಲ್ಲಿಯೇ ದೇಶ ಸುತ್ತಿದ ಶಂಕರರು ಹಿಂದೂ ಮಠಗಳನ್ನು ಸ್ಥಾಪನೆ ಮಾಡುವ ಮೂಲಕ ಧರ್ಮ ಪ್ರಚಾರ ನಡೆಸಿದರು ಎಂದರು. ಬ್ರಾಹ್ಮಣ ಸಮಾಜದ ಹಿರಿಯರಾದ ಉದಯ ಶಿಬ್ರಿಕೇರಿ ಶಂಕರಾಚಾರ್ಯರ ಸಂದೇಶಗಳನ್ನು ಮುದ್ರಿಸಿ ಪತ್ರಗಳನ್ನು ಹಂಚಿದರು. ಉಪ ತಹಸೀಲ್ದಾರ್ ಎಂ.ಎಸ್. ಬಿರಾದಾರ, ಶೀರಸ್ಥೆದಾರ ಎ.ಎಂ. ಮಂಗಳಗಟ್ಟಿ, ರಾಜು ಕರ್ಲೆಕರ, ಸುರೇಂದ್ರ ಕಡಕೋಳ, ಪ್ರವೀಣ ಪವಾರ, ನಾಗರಾಜ ಶಿಬ್ರೀಕೇರಿ, ವಿಜಯಕುಮಾರ ಕೌಜಲಗಿ, ಕಂದಾಯ ನೀರಿಕ್ಷಕ ಸಂಪತಕುಮಾರ ಗುರುಒಡೆಯರ, ರವಿರಾಜ ಕಂಬಳಿ, ಬಸವರಾಜ ಐನಾಪೂರ, ವಿನಾಯಕ ಮಾಯಮ್ಮನವರ,ರಾಜು ಕರ್ಲೇಕರ ಇದ್ದರು.
ಅಳ್ನಾವರದಲ್ಲಿ ಆದಿಗುರು ಶಂಕರಾಚಾರ್ಯರ ಜಯಂತಿ ಸಮಾರಂಭದಲ್ಲಿ ಸಾಮಾಜದ ಗಣ್ಯರು, ಅಧಿಕಾರಿಗಳು ಇದ್ದರು. ಅಳ್ನಾವರದಲ್ಲಿ ಶಂಕರಾಚಾರ್ಯರ ಜಯಂತಿ ಅಳ್ನಾವರ (ಧಾರವಾಡ ):ಧರ್ಮದ ಉಳಿವಿಗಾಗಿ ಶ್ರಮಿಸಿದ ಶಂಕರಾಚಾರ್ಯರ ತತ್ವಗಳು, ಉಪದೇಶಗಳಲ್ಲಿ ಸುಂದರ ಬದುಕಿನ ಮೌಲ್ಯ ಅಡಗಿದೆ. ನಾಡಿನ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಧಾರ್ಮಿಕ ಪರಂಪರೆ ಆಚಾರ ಉಳಿಸಲು ಶಂಕರಾಚಾರ್ಯರ ಸಂದೇಶಗಳನ್ನು ಅಳವಡಿಸಿಕೊಳ್ಳುವದು ಅವಶ್ಯ ಎಂದು ಸಾಮಾಜಿಕ ಚಿಂತಕ ಮಹಾದೇವ ಸಾಗರೇಕರ ಹೇಳಿದರು. ಇಲ್ಲಿನ ತಾಲ್ಲೂಕಕ ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಸಹಯೋಗದಲ್ಲಿ ಮಂಗಳವಾರ ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧರ್ಮ, ಸಂಸ್ಕಾರ ಉಳಿಯಲು ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ, ಬಾಲ್ಯವಸ್ಥೆಯಲ್ಲಿಯೇ ದೇಶ ಸುತ್ತಿದ ಶಂಕರರು ಹಿಂದೂ ಮಠಗಳನ್ನು ಸ್ಥಾಪನೆ ಮಾಡುವ ಮೂಲಕ ಧರ್ಮ ಪ್ರಚಾರ ನಡೆಸಿದರು ಎಂದರು. ಬ್ರಾಹ್ಮಣ ಸಮಾಜದ ಹಿರಿಯರಾದ ಉದಯ ಶಿಬ್ರಿಕೇರಿ ಶಂಕರಾಚಾರ್ಯರ ಸಂದೇಶಗಳನ್ನು ಮುದ್ರಿಸಿ ಪತ್ರಗಳನ್ನು ಹಂಚಿದರು. ಉಪ ತಹಸೀಲ್ದಾರ್ ಎಂ.ಎಸ್. ಬಿರಾದಾರ, ಶೀರಸ್ಥೆದಾರ ಎ.ಎಂ. ಮಂಗಳಗಟ್ಟಿ, ರಾಜು ಕರ್ಲೆಕರ, ಸುರೇಂದ್ರ ಕಡಕೋಳ, ಪ್ರವೀಣ ಪವಾರ, ನಾಗರಾಜ ಶಿಬ್ರೀಕೇರಿ, ವಿಜಯಕುಮಾರ ಕೌಜಲಗಿ, ಕಂದಾಯ ನೀರಿಕ್ಷಕ ಸಂಪತಕುಮಾರ ಗುರುಒಡೆಯರ, ರವಿರಾಜ ಕಂಬಳಿ, ಬಸವರಾಜ ಐನಾಪೂರ, ವಿನಾಯಕ ಮಾಯಮ್ಮನವರ,ರಾಜು ಕರ್ಲೇಕರ ಇದ್ದರು.
- ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ನಮ್ಮ ಜಾತಿಯ ನಾಯಕ ನಮ್ಮ ಸಮಾಜದ ನಾಯಕ ಅನ್ನೋದನ್ನ ಬಿಟ್ಟು ಅಭಿವೃದ್ಧಿ ಕಡೆ ಗಮನಕೊಟ್ಟರೆ ರಾಜ್ಯ ಅಭಿವೃದ್ಧಿ ಆಗಲಿಕ್ಕೆ ಮಾತ್ರ ಸಾಧ್ಯ1
- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- Post by Onlinetv24x71
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- Post by Vv Vv1