Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಉದ್ಯಾನವನದಲ್ಲಿ ಆಯೋಜಿಸಲಾದ ಉಚಿತ ಬಾಡಿಫೈ ಥೆರಪಿ ಶಿಬಿರಕ್ಕೆ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶ್ರೀಮತಿ ಅಕ್ಕಮ್ಮಣ್ಣಿ ಉದ್ಯಾನವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಬಾಡಿಫೈ ಥೆರಪಿ ಸಂಸ್ಥೆಯ ಸಹಯೋಗದಲ್ಲಿ 10 ದಿನಗಳ ಉಚಿತ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 27 ರಂದು ಆರಂಭವಾದ ಈ ಶಿಬಿರವು ಏಪ್ರಿಲ್ 5 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ. ಔಷಧಿ ರಹಿತ ವಿಧಾನದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮಾಂಸಖಂಡಗಳ ಸೆಳೆತ ನಿವಾರಣೆ, ರಕ್ತ ಪರಿಚಲನೆಯನ್ನು ಸುಧಾರಿಸುವುದು ಹಾಗೂ ನರಗಳಿಗೆ ಸಂಬಂಧಿಸಿದ ಸರಳ ಮತ್ತು ದೀರ್ಘಕಾಲಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ, ಪಾದ ಉರಿ, ಅಧಿಕ ರಕ್ತದೊತ್ತಡ, ಸಂಧಿವಾತ, ಕುತ್ತಿಗೆ ನೋವು, ಮಂಡಿನೋವು, ಸೊಂಟನೋವು, ಭುಜದ ನೋವು, ಸ್ನಾಯು ಸೆಳೆತ, ಸ್ಪಾಂಡಿಲೈಟಿಸ್, ಸಯಾಟಿಕ್, ಪಾರ್ಶ್ವವಾಯು, ಪಾರ್ಕಿನ್ಸನ್, ನಿದ್ರಾಹೀನತೆ, ನರಗಳ ಸಮಸ್ಯೆ ಹಾಗೂ ಥೈರಾಯ್ಡ್ ಸಂಬಂಧಿತ ತೊಂದರೆಗಳಿಗೆ ಈ ಥೆರಪಿ ಪರಿಣಾಮಕಾರಿ ಎಂದು ಆಯೋಜಕರು ತಿಳಿಸಿದ್ದಾರೆ. ಕೆವಲ 25 ನಿಮಿಷಗಳ ಥೆರಪಿಯಿಂದ ಸುಮಾರು 5 ಕಿಲೋಮೀಟರ್ ನಡೆದುಕೊಂಡಷ್ಟು ರಕ್ತಸಂಚಾರ ಹೆಚ್ಚಾಗುತ್ತದೆ ಎಂಬುದು ವಿಶೇಷವಾಗಿದೆ. ಶಿಬಿರ ಆರಂಭವಾದ ಕೆಲವೇ ದಿನಗಳಲ್ಲಿ ನೂರಾರು ನಾಗರಿಕರು ಭಾಗವಹಿಸಿ ಆರೋಗ್ಯ ಪ್ರಯೋಜನ ಪಡೆದುಕೊಂಡಿದ್ದಾರೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಶಿಬಿರದಲ್ಲಿ ಭಾಗವಹಿಸದವರು ಏಪ್ರಿಲ್ 5 ರೊಳಗೆ ಅಕ್ಕಮ್ಮಣ್ಣಿ ಉದ್ಯಾನವನಕ್ಕೆ ಭೇಟಿ ನೀಡಿ ಉಚಿತ ಥೆರಪಿ ಸೇವೆಯನ್ನು ಪಡೆಯಬಹುದು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.1
- ಮಳವಳ್ಳಿ: ಇತಿಹಾಸ ಪ್ರಸಿದ್ದ ತಾಲೂಕಿನ ೩ ದಿನಗಳ ಚಿಲ್ಲಾಪುರ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ. ಮಳವಳ್ಳಿ:ತಾಲೂಕಿನ ಇತಿಹಾಸ ಪ್ರಸಿದ್ದ ಚಿಲ್ಲಾಪುರ ಸಿದ್ದಪ್ಪಾಜಿ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಂಪ್ರದಾಯಬದ್ದವಾಗಿ ಖಂಡಾಯಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಏ.೨ ರಂದು ಬೆಳಿಗ್ಗೆ ೭.೩೦ ರಿಂದ ೮.೪೫ ಗಂಟೆಗೆ ಪುಣ್ಯಾಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿಯೊAದಿಗೆ ಅರಂಭಗೊAಡು ಏ.೫ ರವರೆಗೆ ಭಕ್ತಿಪೂರ್ವಕವಾಗಿ ನಡೆಯುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಮುತ್ತತ್ತಿರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಅರಂಭಗೊAಡಿತ್ತು. ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನನಂತರ ಉತ್ಸವದೊಂದಿಗೆ ಸ್ವಾಮಿಯವರನ್ನು ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಕರೆತರಲಾಯಿತು,ನಂತರ ಹಲಗೂರು ವಿಶ್ವಕರ್ಮ ಕುಲಭಾಂದವರು ಚಂದ್ರಮAಡೋಲೋತ್ಸವ ಬೆಳಗಿಸಲಿದ್ದು ,ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ, ಟ್ರ್ಯಾಕ್ಟರ್ ಮುಖಾಂತರ ಹಲಗೂರಿನ ಪಂಚವಾಲರ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಚಿಲ್ಲಾಪುರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಸ್ವಾಮಿ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಚಿಲ್ಲಾಪುರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಬಂದ ಭಕ್ತಾದಿಗಳಿಗೆ ರಾತ್ರಿ ಫಲಹಾರ ನಡೆಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ರಾಮಚಂದ್ರಚಾರಿ ಮಾತನಾಡುತಾ ್ತ೧೨ನೇ ಶತಮಾನದಲ್ಲಿ ಸಿದ್ದಪ್ಪಾಜಿಯವರು ಹಲಗೂರಿನ ಚಿಲ್ಲಾಪುರಕ್ಕೆ ಕಬ್ಬಿಣದ ಭಿಕ್ಷೆಗಾಗಿ ಬರುತ್ತಾರೆ.ಆ ಸಮಯದಲ್ಲಿ ಹಲವಾರು ಪವಾಡಗಳು ನಡೆದು ಸಿದ್ದಪ್ಪಾಜಿಯವರು ಗೆದ್ದು ಕಬ್ಬಿಣವನ್ನು ತೆಗೆದುಕೊಂಡು ಹಾರೆ ಗುದ್ದಲಿಗಳನ್ನು ಮಾಡಿಕೊಂಡು ತಮ್ಮ ಗುರುಗಳಾದ ಮಂಟೇಸ್ವಾಮಿಯವರ ನೆಲಮಾಳಿಗೆ ಗದ್ದುಗೆಗೆ ಹೋಗುತ್ತಾರೆ .ಹಲಗೂರು ಪವಾಡ ಕ್ಷೇತ್ರವಾಗಿದೆ.ಇದು ೪೪ನೇ ವಾರ್ಷಿಕೋತ್ಸವ. ನಾವು ಹಲಗೂರಿನವರು ಮತ್ತು ಜಿಲ್ಲಾಪುರದವರು ಸೇರಿ ಈ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು ಏಪ್ರಿಲ್ ೩ ರಂದು ಶುಕ್ರವಾರ ಬೆ.೬ ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿಯು ನಡೆಯಲಿದೆ.ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಎರ್ಪಡಿಸಿದೆ. ಎಂದರು. ಏಪ್ರಿಲ್ ೪ ರಂದು ಶನಿವಾರ ಬೆಳಿಗ್ಗೆ ೬ ಗಂಟೆಯಿAದ ಚಿಲ್ಲಾಪುರದ ಕುಲಬಾಂಧವರಿAದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆ.೯ ಗಂಟೆಗೆ ಹಲಗೂರು ಕುಲಭಾಂದವರಿAದ ಶ್ರೀ ಸ್ವಾಮಿಯ ಜಯಂತ್ಯೋತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಸುವುದರ ಜೊತೆಗೆ ಚಂದ್ರಮAಡಲ, ಸಾಲಗತ್ತಿ ಪೂಜೆ ಬಸಪ್ಪನ ಪೂಜೆ ಸಂಜೆ ನಾಟಕವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಪಿ.ಈಶಕುಮಾರ್ ,ಕಾರ್ಯದರ್ಶಿ ರಾಮಚಂದ್ರ ,ಎಚ್. ಕೆ. ಶಿವಾಚಾರಿ, ಕಾರ್ಯದರ್ಶಿ ಸೇರಿದಂತೆ ಅನಂತಸ್ವಾಮಿ, ಅಪ್ಪಾಜಿ ,ಉಮೇಶ ಮತ್ತು ಇತರರು ಇದ್ದರು.1
- ಗೋಪಿನಾಥಂ ಚೆಕ್ ಪೋಸ್ಟ್ ಬಳಿ ಕಾಡಾನೆಗಳ ಹಾರಾಟ: ಸಾರ್ವಜನಿಕರಲ್ಲಿ ಆತಂಕ ಹನೂರು: ತಾಲ್ಲೂಕಿನ ಪಾಲಾರ್ ಸಮೀಪದ ಗೋಪಿನಾಥಂ ಚೆಕ್ ಪೋಸ್ಟ್ ಬಳಿ ಕಾಡಾನೆಗಳ ಗುಂಪು ನೀರಿಗಾಗಿ ಬಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತೀವ್ರ ಬಿಸಿಲು ಮತ್ತು ನೀರಿನ ಕೊರತೆಯಿಂದ ಕಾಡಾನೆಗಳು ಬಾಣಕೇಬೆ ಕೆರೆಯಲ್ಲಿ ಕುಡಿಯಲು ಹೊರಬಂದಿದ್ದು, ರಸ್ತೆಗಳ ಬಳಿ ತಿರುಗಾಡುತ್ತಿರುವುದು ಗಮನ ಸೆಳೆದಿದೆ. ಸ್ಥಳೀಯರು ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡುಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಸ್ಥಳೀಯರು, ಪರಿಸರ ಪ್ರೇಮಿಗಳು ಕೂಡ ಕಾಡಾನೆಗಳು ಊರು-ರಸ್ತೆಗಳತ್ತ ಬಾರದಂತೆ, ಅರಣ್ಯ ಪ್ರದೇಶದಲ್ಲೇ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ಆಗ್ರಹಿಸಿದ್ದಾರೆ. ವಿಶೇಷಜ್ಞರು, ಈ ರೀತಿಯ ಘಟನೆಗಳು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.1
- ಮಾಗಡಿ : ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು. ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ ಖಾತೆಗೆ 70 ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ. ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು. ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.3
- Post by ಅರವಿಂದ್ ರಾಜೀವ್1
- 53 ವರ್ಷಗಳ ಬಳಿಕ ಚಂದ್ರನತ್ತ ಮಾನವ.. ಚಂದ್ರನಲ್ಲಿ ಸಂಶೋಧನೆ ನಡೆಸಲು ನಾಸಾದ ನಾಲ್ವರು ಗಗನಯಾತ್ರಿಗಳಿದ್ದ ಒರಿಯನ್ ಅಂತರಿಕ್ಷ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆರ್ಟೆಮಿಸ್-2 ಮಿಷನ್ ಮೂಲಕ ಅಮೆರಿಕದ 3 ಗಗನಯಾತ್ರಿಗಳು ಮತ್ತು ಕೆನಡಾದ ಒಬ್ಬರು ಗಗನಯಾತ್ರಿ ಪ್ರಯಾಣಿಸುತ್ತಿದ್ದಾರೆ. ಇಂದು ಒಂದು ದಿನಪೂರ್ತಿ ಭೂಮಿಯನ್ನು ಸುತ್ತುವ ಈ ನೌಕೆ, ನಾಳೆ ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಲಿದೆ. 1969ರ ನಂತರ ಎರಡನೇ ಬಾರಿ ನಾಸಾ ಮಾನವರನ್ನು ಚಂದ್ರನತ್ತ ಕಳುಹಿಸಿದೆ. ಆರ್ಟೆಮಿಸ್-2: ಚಂದ್ರನ ಕಕ್ಷೆಗೆ ಸ್ಮಾರ್ಟ್ಫೋನ್.. NASA ಕೈಗೊಂಡಿರುವ ಆರ್ಟೆಮಿಸ್-2 ಮಿಷನ್ ದಾಖಲೆ ನಿರ್ಮಿಸುತ್ತಿದೆ. ಇದು ಅಪೋಲೋ-13ಗಿಂತ 3,345 ಮೈಲುಗಳ ಹೆಚ್ಚು ದೂರ ಪ್ರಯಾಣಿಸಲಿದೆ. ಹಾಗೆಯೇ ಚಂದ್ರನ ಕಕ್ಷೆಗೆ ತೆರಳುವ ಮೊದಲ ಮಹಿಳೆಯಾಗಿ ಕ್ರಿಸ್ಟಿನಾ ಕೋಚ್ ಇತಿಹಾಸ ನಿರ್ಮಿಸಲಿದ್ದಾರೆ. ಒರಿಯನ್ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ತಮ್ಮೊಂದಿಗೆ ಸ್ಮಾರ್ಟ್ಫೋನ್ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ವಿಶೇಷ. 10 ದಿನಗಳ ಕಾಲ ಸಾಗುವ ಈ ಪ್ರಯಾಣದಲ್ಲಿ ಅವರು ಅಂತರಿಕ್ಷದಿಂದ ಸೂರ್ಯಗ್ರಹಣವನ್ನು ವೀಕ್ಷಿಸಲಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ.....3
- *ಭಾರತ ನಲ್ಲಿ ವೈರಲ್*1