ಇಂಗಳಗಾಂವ ತೀರ್ಥ ಗ್ರಾಮದ ಸೀಮಿ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿಯಿಂದ ಅಡಿಗಲ್ಲು ಅಥಣಿ+ ತಾಲೂಕಿನ ನದಿ ಇಂಗಳಗಾಂವ ಹಾಗೂ ತೀರ್ಥ ಗ್ರಾಮದ ಗಡಿ ಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸೀಮಿ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಅಡಿಗಲ್ಲು ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಎರಡೂ ಗ್ರಾಮಗಳ ಮುಖಂಡರು ಪಂಚಾಯತಿ ಸದಸ್ಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಅಡಿಗಲ್ಲು ಸಮಾರಂಭದ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ದೇವಸ್ಥಾನದ ಕಾಮಗಾರಿಗೆ ವಿಧ್ಯುಕ್ತವಾಗಿ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು ನದಿ ಇಂಗಳಗಾಂವ ಮತ್ತು ತೀರ್ಥ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದ ಈ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲಾಗುವುದು ಈ ದೇವಾಲಯವು ಎರಡೂ ಗ್ರಾಮಗಳ ಭಾವೈಕ್ಯತೆಯ ಸಂಕೇತವಾಗಲಿದೆ ಎಂದರು. ಇನ್ನೂ ಈ ವೇಳೆ ದೇವಸ್ಥಾನದ ನಿರ್ಮಾಣಕ್ಕೆ ಭೂ ದಾನ ಮಾಡಿದ ಪ್ರವೀಣ ನಾಡಗೌಡ ಹಾಗೂ ವಿಜಯ ಮಹಾಂತೇಶ ನಾಡಗೌಡ ತೇರದಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಈ ಸಂಧರ್ಭದಲ್ಲಿ ಗುತ್ತಿಗೆದಾರರಾದ ಶಿವರುದ್ರ ಗೂಳಪ್ಪನ್ನವರ, ಸಂಜಯ ನಾಡಗೌಡ,ಮಲ್ಲಪ್ಪ ಠಕ್ಕಣ್ಣವರ,ಅಲಗೌಡ ಮುದಿಗೌಡರ,ಸಂಗಪ್ಪ ಸಾವಂತ್ರಿ, ಪರೀಧ ನನ್ನೆ, ಅಪ್ಪು ಮಧಬಾವಿ, ವಿಜಯ ಕಾಂಬಳೆ, ಚಿದಾನಂದ ಕಾಂಬಳೆ, ಮಹಾಂತೇಶ ಗೂಳಪ್ಪನ್ನವರ, ನಾಗಪ್ಪ ಗೂಳಪ್ಪನ್ನವರ, ಅರುಣ ಬಾಸಿಂಗಿ, ಲಕ್ಕಪ್ಪ ಠಕ್ಕಣ್ಣವರ, ರಾವಸಾಬ ಪಾಟೀಲ, ರಾಮಣ್ಣ ಯಡೂರ,ಉಸ್ಮಾನ ನದಾಫ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು
ಇಂಗಳಗಾಂವ ತೀರ್ಥ ಗ್ರಾಮದ ಸೀಮಿ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿಯಿಂದ ಅಡಿಗಲ್ಲು ಅಥಣಿ+ ತಾಲೂಕಿನ ನದಿ ಇಂಗಳಗಾಂವ ಹಾಗೂ ತೀರ್ಥ ಗ್ರಾಮದ ಗಡಿ ಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸೀಮಿ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಅಡಿಗಲ್ಲು ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಎರಡೂ ಗ್ರಾಮಗಳ ಮುಖಂಡರು ಪಂಚಾಯತಿ ಸದಸ್ಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಅಡಿಗಲ್ಲು ಸಮಾರಂಭದ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ದೇವಸ್ಥಾನದ ಕಾಮಗಾರಿಗೆ ವಿಧ್ಯುಕ್ತವಾಗಿ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು ನದಿ ಇಂಗಳಗಾಂವ ಮತ್ತು ತೀರ್ಥ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದ ಈ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲಾಗುವುದು ಈ ದೇವಾಲಯವು ಎರಡೂ ಗ್ರಾಮಗಳ ಭಾವೈಕ್ಯತೆಯ ಸಂಕೇತವಾಗಲಿದೆ ಎಂದರು. ಇನ್ನೂ ಈ ವೇಳೆ ದೇವಸ್ಥಾನದ ನಿರ್ಮಾಣಕ್ಕೆ ಭೂ ದಾನ ಮಾಡಿದ ಪ್ರವೀಣ ನಾಡಗೌಡ ಹಾಗೂ ವಿಜಯ ಮಹಾಂತೇಶ ನಾಡಗೌಡ ತೇರದಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಈ ಸಂಧರ್ಭದಲ್ಲಿ ಗುತ್ತಿಗೆದಾರರಾದ ಶಿವರುದ್ರ ಗೂಳಪ್ಪನ್ನವರ, ಸಂಜಯ ನಾಡಗೌಡ,ಮಲ್ಲಪ್ಪ ಠಕ್ಕಣ್ಣವರ,ಅಲಗೌಡ ಮುದಿಗೌಡರ,ಸಂಗಪ್ಪ ಸಾವಂತ್ರಿ, ಪರೀಧ ನನ್ನೆ, ಅಪ್ಪು ಮಧಬಾವಿ, ವಿಜಯ ಕಾಂಬಳೆ, ಚಿದಾನಂದ ಕಾಂಬಳೆ, ಮಹಾಂತೇಶ ಗೂಳಪ್ಪನ್ನವರ, ನಾಗಪ್ಪ ಗೂಳಪ್ಪನ್ನವರ, ಅರುಣ ಬಾಸಿಂಗಿ, ಲಕ್ಕಪ್ಪ ಠಕ್ಕಣ್ಣವರ, ರಾವಸಾಬ ಪಾಟೀಲ, ರಾಮಣ್ಣ ಯಡೂರ,ಉಸ್ಮಾನ ನದಾಫ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು
- ಶ್ರೀ ಕೃಷ್ಣ ಪಾರಿಜಾತ ರುಕ್ಮಿಣಿ ಸನ್ನಿವೇಶ ಹಾಡು1
- ಶಾಸಕ ಉಮೇಶ್ ಮೇಟಿ ತಮ್ಮ ಗೆಲುವಿನ ಹಿಂದಿನ ಕಾರಣವನ್ನು ಕರ್ನಾಟಕದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.1
- ಬಾಗಲಕೋಟೆ ಮೂಲದ ಭೀಮ ಬಲ ನ್ಯೂಸ್ 24×7 ಕನ್ನಡ ವಾಹಿನಿಯ ಸಂಪಾದಕರಾಗಿ ಹನಮಂತ ಸಂಗೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಸುದ್ದಿಗಳಿಗೆ ಒತ್ತು ನೀಡುವ ಈ ವಾಹಿನಿಗೆ ಇವರು ನೇತೃತ್ವ ವಹಿಸಿದ್ದಾರೆ.1
- ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮೇ 10ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಆಯೋಜಿಸಿದ್ದಾರೆ. ಆಸಂಗಿ ರಸ್ತೆಯ ಕಾಟವಾ ಫಾರ್ಮಹೌಸ್ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರು, ನಿವೃತ್ತ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಇದು ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅದ್ಭುತ ಅವಕಾಶವಾಗಿದೆ.1
- #dss ಭೀಮ ಧ್ವನಿ ಸಂಘಟನೆ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ಜರುಗಿತು #dss ಭೀಮ ಧ್ವನಿ ಸಂಘಟನೆ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ಜರುಗಿತು1
- ವಿಜಯಪುರ ಜಿಲ್ಲೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಆಸ್ಪತ್ರೆಯಲ್ಲೇ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಇದ್ದರೂ ಇಂತಹ ಕೃತ್ಯ ನಡೆದಿರುವುದು ಆಘಾತ ಮೂಡಿಸಿದೆ.1
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಬ್ಬು ಕೃಷಿಯು ಸ್ಥಳೀಯ ರೈತರ ಪ್ರಮುಖ ಆದಾಯ ಮೂಲವಾಗಿದೆ. ಸದ್ಯ ಕಬ್ಬು ಬೆಳೆಗಾರರು ಇಳುವರಿ ಮತ್ತು ಬೆಲೆಯಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷ ಉತ್ತಮ ಇಳುವರಿ ಹಾಗೂ ಲಾಭದಾಯಕ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.1
- ವಿಜಯಪುರದಲ್ಲಿ ನಡೆದ ರೈತ ಸಮಾವೇಶದಲ್ಲಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಪ್ರತಿ 5 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಸರ್ಕಾರ ಅದನ್ನು ತಡೆಯುವ ಬದಲು ರೈತರ ಸಮಾಧಿಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.1