Shuru
Apke Nagar Ki App…
ಅಣ್ಣನನ್ನು ಬರಮಾಡಿಕೊಳ್ಳಲು ಬಂದ 18 ತಿಂಗಳ ಕಂದಮ್ಮ ಶಾಲಾ ಬಸ್ಸಿಗೆ ಬಲಿ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಾಲೆಯಿಂದ ಹಿಂದಿರುಗಿದ ಅಣ್ಣನನ್ನು ಸ್ವಾಗತಿಸಲು ಮನೆಯಿಂದ ಹೊರಬಂದ 18 ತಿಂಗಳ ಹಸುಗೂಸು ಆರ್ಯನ್, ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾನೆ. ಚಾಲಕನ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಂಜುನಾಥ್ ಎಂಬುವವರ ಪುತ್ರನಾದ ಆರ್ಯನ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲಾ ವಾಹನ ಚಾಲಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿವಮೊಗ್ಗ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
SANDEEP U. L
ಅಣ್ಣನನ್ನು ಬರಮಾಡಿಕೊಳ್ಳಲು ಬಂದ 18 ತಿಂಗಳ ಕಂದಮ್ಮ ಶಾಲಾ ಬಸ್ಸಿಗೆ ಬಲಿ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಾಲೆಯಿಂದ ಹಿಂದಿರುಗಿದ ಅಣ್ಣನನ್ನು ಸ್ವಾಗತಿಸಲು ಮನೆಯಿಂದ ಹೊರಬಂದ 18 ತಿಂಗಳ ಹಸುಗೂಸು ಆರ್ಯನ್, ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾನೆ. ಚಾಲಕನ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಂಜುನಾಥ್ ಎಂಬುವವರ ಪುತ್ರನಾದ ಆರ್ಯನ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲಾ ವಾಹನ ಚಾಲಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿವಮೊಗ್ಗ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
More news from ಕರ್ನಾಟಕ and nearby areas
- ಸೊರಬ: ಸುರಭಿ ಜ್ಯುವೆಲ್ಲರಿ ಫೆಡರೇಷನ್ ಸೊರಬ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ದೊಡ್ಡಮನೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊರಬ ಪಟ್ಟಣದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಚಿನ್ನ-ಬೆಳ್ಳಿ ವ್ಯಾಪಾರಸ್ಥರು, ಮಾರಾಟಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸುರಭಿ ಜ್ಯುವೆಲ್ಲರಿ ಫೆಡರೇಷನ್ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಧುರಾಯ್ ಜಿ ಶೇಟ್, ಮಂಜುನಾಥ್ ಶೇಟ್, ರಾಮಕೃಷ್ಣ ಶೇಟ್, ಉಪಾಧ್ಯಕ್ಷರಾಗಿ ಪವನ್, ಸಚಿನ್, ಮೌನೇಶ್, ಗಿರೀಶ್ ಶೇಟ್, ಪ್ರಧಾನ ಕಾರ್ಯದರ್ಶಿಯಾಗಿ ಮರಿ ಶೇಟ್, ರಾಜು ಗೌರಿ ಜುವೆಲರಿ ವರ್ಕ್ಸ್, ಕಾರ್ಯದರ್ಶಿಗಳಾಗಿ ಭೂಷಣ್, ಪ್ರಶಾಂತ್ ಕುಮಾರ್ ದೊಡ್ಮನೆ. ವಿಜಯ್ ಯಶೋಧರ್ ಜುವೆಲ್ಲರಿ, ಖಜಾಂಚಿಯಾಗಿ ಗೋಪಾಲ್ ಶೇಟ್, ಸಹ ಖಜಾಂಚಿಗಳಾಗಿ ಗಜೇಂದ್ರ, ಸಂಜಯ್ ಕಾಳಿಕಾಂಬ ಜುವೆಲ್ಲರ್ಸ್, ಮಾಧ್ಯಮ ಸಲಹೆಗಾರರಾಗಿ ಎಸ್.ಜಿ ರಾಮಚಂದ್ರ ಸುರಭಿವಾಣಿ, ಕಾನೂನು ಸಲಹೆಗಾರಾಗಿ ವಕೀಲರಾದ ಬಂಗಾರಪ್ಪ, ಮಾಲತೇಶ್, ಪ್ರವೀಣ್ ಕುಮಾರ್ ದೊಡ್ಮನೆ ಹಾಗೂ ನಿರ್ದೇಶಕರಾಗಿ ವಸಂತ, ಸುರೇಂದ್ರ ಆನಂದ ಮಹಾಲಸ ಜ್ಯುವೆಲರಿ, ಲಕ್ಷ್ಮಿನಾರಾಯಣ, ಶ್ರೀನಿವಾಸ, ವಿಶ್ವ, ರಾಜಣ್ಣ, ರಾಮನಾಥ, ಸದಸ್ಯರಾಗಿ ಚಂದ್ರು, ಶ್ರೀಧರ್ ಮಂಜುನಾಥ್, ಕರಡಿಗೆರೆ ಶೆಟ್ರು ವಸಂತ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ದೊಡ್ಡಮನೆ ಮಾತನಾಡಿ ಪ್ರತಿದಿನ ಚಿನ್ನದ ದರದ ಏರಿಳಿತದಿಂದ ನಿರಂತರವಾಗಿ ಬಂಗಾರದ ಅಂಗಡಿಯ ಮೇಲೆ ದೌರ್ಜನ್ಯವಾಗುವ ನಿಟ್ಟಿನಲ್ಲಿ ಹಾಗೂ ಬಂಗಾರದ ಅಂಗಡಿಗಳ ಹಿತವನ್ನು ಕಾಯುವ ನಿಟ್ಟಿನಲ್ಲಿ, ಬಂಗಾರದ ಕೆಲಸ ಮಾಡುವ ಕೆಲಸಗಾರರ ಹಿತವನ್ನು ಕಾಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲಾಗುವದು. ಹಾಗೂ ಸೊರಬದಲ್ಲಿ ಒಂದೇ ಬಂಗಾರದ ದರ ನಿಗದಿ ಮಾಡುವ ನಿಟ್ಟಿನಲ್ಲಿ ಈ ಸಂಘ ಬದ್ಧವಾಗಿರುತ್ತದೆ. ಎಲ್ಲಾ ಬಂಗಾರದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು. ಗುರುತು ಪರಿಚಯ ಇರುವ ಹಾಗೂ ಕಡ್ಡಾಯವಾಗಿ ಬಿಲ್ಲನ್ನು ಇರುವ ಗ್ರಾಹಕರಿಗೆ ಮಾತ್ರ ಗಿರವಿಯನ್ನು ಕೊಡಬೇಕೆಂದು ತಿಳಿಸಿದರು3
- "ಬಳ್ಳಾರಿಯಲ್ಲಿ ಆಟೋ ಡ್ರೈವರ್ ಗಳ ಜೀವನ ಏನಾಗಿದೆ ಗೊತ್ತಾ?" "ನಾವು ಹೇಗೆ ಜೀವನ ಸಾಗಿಸೋದು ಸಾರ್? ಇಷ್ಟು ದರ ವ್ಯತ್ಯಾಸ ಯಾಕೆ?" "ಗಾಂಧಿನಗರದಲ್ಲಿ ಆಟೋ ಗ್ಯಾಸ್ ದರ ₹93.54… MG ರೋಡ್ ನಲ್ಲಿ ₹84.10…" ಬಳ್ಳಾರಿಯಲ್ಲಿ ಒಂದೇ ನಗರದಲ್ಲಿ ಎರಡು ಗ್ಯಾಸ್ ದರ! 😡 ಆಟೋ ಡ್ರೈವರ್ ಗಳ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ಯಾರು ಉತ್ತರ ಕೊಡ್ತಾರೆ? "ಇಂಧನ ದರ ಏರಿದ್ರೆ… ಆಟೋ ಭಾಡಿಗೆ ಏರಿಸೋಕೆ ಆಗಲ್ಲ… ಜನ ಬೈತಾರೆ… ಸರ್ಕಾರ ಕೇಳ್ತಾ ಇಲ್ಲ…" "ಈ ವಿಡಿಯೋ share ಮಾಡಿ… ನಮ್ಮ ಧ್ವನಿ ಸರ್ಕಾರದವರೆಗೆ ತಲುಪಿಸೋಣ!"1
- ದಾವಣಗೆರೆ ಬ್ರೇಕಿಂಗ್ ರಂಗೇರಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾಚಣೆ ದಾವಣಗೆರೆಯಲ್ಲಿ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಅಬ್ಬರದ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಹಾಲಿ ಸಿಎಂ ಸಿದ್ದರಾಮಯ್ಯ ಕ್ಯಾಂಪಿಯನ್ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಬ್ಬರದ ಪ್ರಚಾರ ಗ್ರಾಮಾಂತರ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದ್ರೆ ನಗರ ಭಾಗದಲ್ಲಿ ಮಾಜಿ ಸಿಎಂ ಬಿಎಸ್ ವೈ ಪ್ರಚಾರ1
- ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ.. ಚಳ್ಳಕೆರೆ ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು. ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ ಪಾಲ್ಗೊಂಡರು ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....1
- ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.1
- Post by H M ಹರಕುಣಿ2
- ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜ ಕಟ್ಟೆ ಬಳಿ ಬುಧವಾರ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಗುಳಿಗಜ್ಜ ಕಟ್ಟೆಗೆ ಹಣ ಹಾಕಲು ಹೆದ್ದಾರಿ ರಸ್ತೆಯ ಅಂಚಿಗೆ ತಲುಪಿದಾಗ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಕೃಷ್ಣ ಶ್ಯಾಮ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳು ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ1
- ಈಚಘಟ್ಟ ಗ್ರಾಮದ ಜನಗಣತಿ ಕಾರ್ಯಕ್ರಮದಲ್ಲಿ ಶಾಸಕ ಎಂ ಚಂದ್ರಪ್ಪ ಬಾಗಿಯಾಗಿದ್ದಾರೆ. ಹೊಳಲ್ಕೆರೆ ಮತಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ, ತಹಶೀಲ್ದಾರ್ ಕಾರ್ಯಾಲಯ ಹೊಳಲ್ಕೆರೆ ವತಿಯಿಂದ ಭಾರತ ಜನಗಣತಿ- 2027ರ ಪ್ರಕ್ರಿಯೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿ ಮಾತನಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಜನಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಂ ಚಂದ್ರಪ್ಪ ಮನವಿ ಮಾಡಿದ್ದಾರೆ.1