ದೇಶಾದ್ಯಂತ ಇಂಧನಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗಿದ್ದೇವೆ. ದೇಶಾದ್ಯಂತ ಇಂಡಿಯನ್ ಆಯಿಲ್ ಇಂಧನ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ, ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜುಗಳನ್ನು ನೆಟ್ವರ್ಕ್ನಾದ್ಯಂತ ಸರಾಗವಾಗಿ ವಿತರಿಸಲಾಗುತ್ತಿದೆ. ಗ್ರಾಹಕರು ಪರಿಶೀಲಿಸಿದ ಮಾಹಿತಿಯನ್ನು ಅವಲಂಬಿಸಿ ಮತ್ತು ಎಂದಿನಂತೆ ಇಂಧನ ತುಂಬುವುದನ್ನು ಮುಂದುವರಿಸಲು ವಿನಂತಿಸಲಾಗಿದೆ. ಆತ್ಮೀಯ ಎಲ್ಲಾ ಗ್ರಾಹಕರಿಗೆ ಮಾಮರ ಇಂಧನ ಸೇವಾ ಕೇಂದ್ರದ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.. ಆತ್ಮೀಯರೇ ದೇಶದಲ್ಲಿ ನಂಬರ್ ಒನ್ ಇಂಡಿಯನ್ ಆಯಿಲ್ ಕಂಪನಿಯು ಗ್ರಾಹಕರಿಗೆ ಗುಣಮಟ್ಟದ ಪಾರದರ್ಶಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿಯಲ್ಲಿ ಇರಾನ್ ಮತ್ತು ಇಸ್ರೇಲ್ ಅಮೆರಿಕ ನಡುವೆ ಯುದ್ಧ ನಡೆಯುತ್ತಿದ್ದರೂ ಸಹ ದೇಶದ ಜನರಿಗೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ,ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಂದಿನಂತೆ ಗ್ರಾಹಕರಿಗೆ ಇಂಧನ ಸರಬರಾಜು ಮಾಡುತ್ತಿರುವುದು ಹೆಮ್ಮೆಯ ಸಂಗತಿ . ಗ್ರಾಹಕರೇ ಇತ್ತೀಚಿನ ದಿನಗಳಲ್ಲಿ ಗಾಳಿ ಸುದ್ದಿಗಳು ,ಸುಳ್ಳು ಸುದ್ದಿಗಳು ಹರಡುತ್ತಿವೆ, ಇದಕ್ಕೆ ಯಾರು ಸಹ ಕಿವಿ ಕೊಡಬೇಡಿ, ಇಂಧನ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ, ನಿರಂತಕವಾಗಿ ಇಂಧನ ಲಭ್ಯವಿದೆ. ಎಲ್ಲಾ ಇಂಧನ ಸೇವಾ ಕೇಂದ್ರಗಳಿಗೂ ಸರಬರಾಜು ಮಾಡುವ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ. ಸರಬರಾಜಿನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲ ಗ್ರಾಹಕರು ನಿರ್ಭಯವಾಗಿ ತಮ್ಮ ಸಮೀಪದ ಇಂಧನ ಸೇವಾ ಕೇಂದ್ರಗಳಲ್ಲಿ ಇಂಧನ ಪಡೆಯಬಹುದಾಗಿದೆ ಎಂದು ಈಗಾಗಲೇ ಇಂಡಿಯನ್ ಆಯಿಲ್ ಕಂಪನಿ, ಪ್ರಕಟಣೆಯಲ್ಲಿ ಗ್ರಾಹಕರಿಗೆ ಮಾಹಿತಿ ನೀಡಿದೆ. ಗ್ರಾಹಕರಿಗೆ ಮತ್ತೊಮ್ಮೆ ಹೊಸ ವರ್ಷದ ಯುಗಾದಿ ಸಂವತ್ಸರದ ಶುಭಾಶಯಗಳು ಹೊಸ ವರ್ಷದ ಯುಗಾದಿ ಹಬ್ಬವು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲೆಂದು ಕೋರುತ್ತೇನೆ . ಗ್ರಾಹಕರೇ ಯಾವುದೇ ಆತಂಕ ಬೇಡ ಸರಾಗವಾಗಿ ಇಂಧನ ಎಲ್ಲಾ ಸೇವಾ ಕೇಂದ್ರಗಳನ್ನು ಸಿಗುತ್ತಿದೆ ಎಂದು ತಮ್ಮೆಲ್ಲರಿಗೂ ಮಾಹಿತಿ ನೀಡುತ್ತಾ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವಾಕೇಂದ್ರ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು ಈ ಮೂಲಕ ತಿಳಿಸ ಬಯಸುತ್ತೇನೆ ಧನ್ಯವಾದಗಳು ಶುಭದಿನ. ಎಂ ಶಿವಕುಮಾರ್ ವ್ಯವಸ್ಥಾಪಕರು ಮಾಮರ ಇಂಧನ ಸೇವಾ ಕೇಂದ್ರ ಶ್ರೀ ಶಿವರಾತ್ರಿ ಶಿವ ಬಡಾವಣೆ ಮಾಗನೂರು ಮಳವಳ್ಳಿ ಟೌನ್ ಮಂಡ್ಯ ಜಿಲ್ಲೆ
ದೇಶಾದ್ಯಂತ ಇಂಧನಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗಿದ್ದೇವೆ. ದೇಶಾದ್ಯಂತ ಇಂಡಿಯನ್ ಆಯಿಲ್ ಇಂಧನ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ, ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜುಗಳನ್ನು ನೆಟ್ವರ್ಕ್ನಾದ್ಯಂತ ಸರಾಗವಾಗಿ ವಿತರಿಸಲಾಗುತ್ತಿದೆ. ಗ್ರಾಹಕರು ಪರಿಶೀಲಿಸಿದ ಮಾಹಿತಿಯನ್ನು ಅವಲಂಬಿಸಿ ಮತ್ತು ಎಂದಿನಂತೆ ಇಂಧನ ತುಂಬುವುದನ್ನು ಮುಂದುವರಿಸಲು ವಿನಂತಿಸಲಾಗಿದೆ. ಆತ್ಮೀಯ ಎಲ್ಲಾ ಗ್ರಾಹಕರಿಗೆ ಮಾಮರ ಇಂಧನ ಸೇವಾ ಕೇಂದ್ರದ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.. ಆತ್ಮೀಯರೇ ದೇಶದಲ್ಲಿ ನಂಬರ್ ಒನ್ ಇಂಡಿಯನ್ ಆಯಿಲ್ ಕಂಪನಿಯು ಗ್ರಾಹಕರಿಗೆ ಗುಣಮಟ್ಟದ ಪಾರದರ್ಶಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿಯಲ್ಲಿ ಇರಾನ್ ಮತ್ತು ಇಸ್ರೇಲ್ ಅಮೆರಿಕ ನಡುವೆ ಯುದ್ಧ ನಡೆಯುತ್ತಿದ್ದರೂ ಸಹ ದೇಶದ ಜನರಿಗೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ,ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಂದಿನಂತೆ ಗ್ರಾಹಕರಿಗೆ ಇಂಧನ ಸರಬರಾಜು ಮಾಡುತ್ತಿರುವುದು ಹೆಮ್ಮೆಯ ಸಂಗತಿ . ಗ್ರಾಹಕರೇ ಇತ್ತೀಚಿನ ದಿನಗಳಲ್ಲಿ ಗಾಳಿ ಸುದ್ದಿಗಳು ,ಸುಳ್ಳು ಸುದ್ದಿಗಳು ಹರಡುತ್ತಿವೆ, ಇದಕ್ಕೆ ಯಾರು ಸಹ ಕಿವಿ ಕೊಡಬೇಡಿ, ಇಂಧನ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ, ನಿರಂತಕವಾಗಿ ಇಂಧನ ಲಭ್ಯವಿದೆ. ಎಲ್ಲಾ ಇಂಧನ ಸೇವಾ ಕೇಂದ್ರಗಳಿಗೂ ಸರಬರಾಜು ಮಾಡುವ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ. ಸರಬರಾಜಿನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲ ಗ್ರಾಹಕರು ನಿರ್ಭಯವಾಗಿ ತಮ್ಮ ಸಮೀಪದ ಇಂಧನ ಸೇವಾ ಕೇಂದ್ರಗಳಲ್ಲಿ ಇಂಧನ ಪಡೆಯಬಹುದಾಗಿದೆ ಎಂದು ಈಗಾಗಲೇ ಇಂಡಿಯನ್ ಆಯಿಲ್ ಕಂಪನಿ, ಪ್ರಕಟಣೆಯಲ್ಲಿ ಗ್ರಾಹಕರಿಗೆ ಮಾಹಿತಿ ನೀಡಿದೆ. ಗ್ರಾಹಕರಿಗೆ ಮತ್ತೊಮ್ಮೆ ಹೊಸ ವರ್ಷದ ಯುಗಾದಿ ಸಂವತ್ಸರದ ಶುಭಾಶಯಗಳು ಹೊಸ ವರ್ಷದ ಯುಗಾದಿ ಹಬ್ಬವು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲೆಂದು ಕೋರುತ್ತೇನೆ . ಗ್ರಾಹಕರೇ ಯಾವುದೇ ಆತಂಕ ಬೇಡ ಸರಾಗವಾಗಿ ಇಂಧನ ಎಲ್ಲಾ ಸೇವಾ ಕೇಂದ್ರಗಳನ್ನು ಸಿಗುತ್ತಿದೆ ಎಂದು ತಮ್ಮೆಲ್ಲರಿಗೂ ಮಾಹಿತಿ ನೀಡುತ್ತಾ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವಾಕೇಂದ್ರ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು ಈ ಮೂಲಕ ತಿಳಿಸ ಬಯಸುತ್ತೇನೆ ಧನ್ಯವಾದಗಳು ಶುಭದಿನ. ಎಂ ಶಿವಕುಮಾರ್ ವ್ಯವಸ್ಥಾಪಕರು ಮಾಮರ ಇಂಧನ ಸೇವಾ ಕೇಂದ್ರ ಶ್ರೀ ಶಿವರಾತ್ರಿ ಶಿವ ಬಡಾವಣೆ ಮಾಗನೂರು ಮಳವಳ್ಳಿ ಟೌನ್ ಮಂಡ್ಯ ಜಿಲ್ಲೆ
- ಮಳವಳ್ಳಿ ಹಂಗ್ರಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಹೊನ್ನೇರು ಪೂಜಾ ಕಾರ್ಯಕ್ರಮ ಸಂಪನ್ನ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದ ಶ್ರೀ ಮಠದಲ್ಲಿ ಸಂಪ್ರದಾಯ ಬದ್ಧ ಆಚರಣೆಯಂತೆ ಹೊಸ ವರ್ಷದ ಯುಗಾದಿ ಸಂವತ್ಸರದಲ್ಲಿ ಹೊನ್ನೇರು ಪೂಜಾ ಕಾರ್ಯಕ್ರಮ ಅಪಾರ ಭಕ್ತರ ಗುರುವಾರ ಸಂಪನ್ನಗೊಂಡಿತು. ಪ್ರತಿವರ್ಷದಂತೆ ಈ ವರ್ಷವೂ ಹಂಗ್ರಾಪುರ ಮಠದ ಶ್ರೀ ಬಸವ ಲಿಂಗ ದೇಸಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಯುಗಾದಿ ಸಂವತ್ಸರದ ಹೊನ್ನೇರು ಪೂಜಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಈ ಸಂದರ್ಭದಲ್ಲಿ ಹೊನ್ನೇರುಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೀಡಿದರು ನಂತರ ಆಗಮಿಸಿದ ಜನರಿಗೆ ಶ್ರೀಮಠದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು1
- SIDDIQA HANDICAPPED WELFARE TRUST Wilson Garden Bangalore Distrubuted Ration to the members of KAVERI PHYSICALLY DISABLED WELFARE TRUST #kvnews1
- *ಭಾರತ ನಲ್ಲಿ ವೈರಲ್*1
- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 2026 ನೆಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆ ಜರುಗಿತು. #ಮಲೆಗಳಲ್ಲಿ ಮೈದಳೆದ ಮಾದೇವನ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ! 🌿 ಬೇವು-ಬೆಲ್ಲದ ಸವಿ ಒಂದೆಡೆಯಾದರೆ, ಬೆಟ್ಟದ ದಾರಿಯಲ್ಲಿ ಮಾದಪ್ಪನ ಸಾರಥ್ಯದ ಸಡಗರ ಇನ್ನೊಂದೆಡೆ. ಯುಗಾದಿ ಹಬ್ಬ ಹಾಗೂ ಮಹದೇಶ್ವರ ಬೆಟ್ಟದ ಜಾತ್ರೆಯ ಹಾರ್ದಿಕ ಶುಭಾಶಯಗಳು.1
- ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿದವು. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ರಥೋತ್ಸವ, ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವೂ ಭಕ್ತಿಭಾವದಿಂದ ನೆರವೇರಿತು.2
- ಮೈಸೂರು: ಸಂವತ್ಸರಾದಿ (ಅಕ್ಷರಶಃ' ವರ್ಷದ ಆರಂಭ'. ಯುಗ ಎಂದರೆ "ಯುಗ" ಮತ್ತು ಆದಿ ಎಂದರೆ "ಆರಂಭ") ಎಂದೂ ಕರೆಯಲ್ಪಡುವ ಈ ಹಬ್ಬವು ಹಿಂದೂ ಕ್ಯಾಲೆಂಡರ್ನಲ್ಲಿ ವರ್ಷದ ಮೊದಲ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸ್ ಹೇಳಿದರು. ಯುಗಾದಿ ಅಂಗವಾಗಿ ದೇವಾಲಯದಲ್ಲಿ ಶ್ರೀ ಸ್ವಾಮಿಗೆ ನಡೆದ ವಿಶೇಷ ಪೂಜಾ ಕೈಂಕರ್ಯದ ಬಳಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಅವರು ಮಾತನಾಡಿದರು. ವರ್ಷದ ಮೊದಲ ದಿನವೇ ಯುಗಾದಿ ಎಂಬುದು ಹಿಂದೂ ಧರ್ಮದ ಪ್ರತೀತಿಯಾಗಿದೆ. ಬೇವು- ಬೆಲ್ಲದ ಸಮಾಗಮದ ಈ ದಿನದಂದು ಆ ಭಗವಂತನು ಎಲ್ಲರಿಗೂ ಸರ್ವಮಂಗಳವನ್ನುಂಟು ಮಾಡಲಿ ಎಂದು ಆಶಿಸಿದರು. ಯೋಗಾನರಸಿಂಹ ಸ್ವಾಮಿ ದೇವಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನೂತನ ದಿನಚರಿ ( ಕ್ಯಾಲೆಂಡರ್ ) ಅನ್ನು ದೇಗುಲದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿದೆ ಎಂದ ಶ್ರೀನಿವಾಸನ್ ಅವರು,ಇ ಯುಗಾದಿಯಿಂದ ಮುಂದಿನ ಸಾಲಿನ ಯುಗಾದಿವರೆಗಿನ ಧಾರ್ಮಿಕ ಪರಂಪರೆಯುಳ್ಳ, ದೇವಾಲಯದ ಎಲ್ಲ ಉತ್ಸವಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳು ಈ ದಿನಚರಿಯಲ್ಲಿ ಇರುವುದು ವಿಶೇಷವಾಗಿದೆ ಎಂದರು. ಈ ಒಂದು ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿರುವ ನಗರದ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ಅವರ ಸೇವಾ ಕಾರ್ಯಗಳು ಹೀಗೆ ಮುಂದುವರೆಯಲಿ, ಶ್ರೀ ಸ್ವಾಮಿಯ ಆಶೀರ್ವಾದ ಸದಾ ಅವರ ಮೇಲಿರಲಿ ಹಾಗೂ ನಾಡಿನ ಎಲ್ಲ ಜನರಿಗೂ ಒಳಿತಾಗಲಿ ಎಂದು ಹಾರೈಸಿದರು. ಇದೇ ವೇಳೆ ನೂತನ ದಿನಚರಿಯನ್ನು ಬಿಡುಗಡೆ ಮಾಡಿದ ಗಣ್ಯರುಗಳು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇವಾಲಯ ಮತ್ತಷ್ಟು ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ, ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ದಂಪತಿ, ರಘುಲಾಲ್ ಕಂಪನಿಯ ಮುಖ್ಯಸ್ಥರಾದ ರಾಘವ್ ದಂಪತಿ, ಮೈಸೂರಿನ ಪ್ರತಿಷ್ಠಿತ ಅಸ್ಕರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ನಾರಾಯಣ ರಾಜು ಅವರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- Post by ಅರವಿಂದ್ ರಾಜೀವ್1
- ಮಳವಳ್ಳಿ ತಾಲೂಕಿನ ಬಿಜಿಪುರ ಗ್ರಾಮದ ಇತಿಹಾಸ ಪ್ರಸಿದ್ಧ ಮಂಟೇಸ್ವಾಮಿ ಪುಣ್ಯಕ್ಷೇತ್ರದ ಯುಗಾದಿ ಜಾತ್ರಾ ಮಹೋತ್ಸವ ಮತ್ತು ಮಠಕ್ಕೆ ನುಗ್ಗುವ ಸೇವೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಸಂಪ್ರದಾಯಪದ್ಧ ಆಚರಣೆಗಳೊಂದಿಗೆ ಸಂಪನ್ನಗೊಂಡಿತು1