Shuru
Apke Nagar Ki App…
120 ಅಡಿ ಹಾಲುಗಂಭ ಏರಿದ ಸಾಹಸಿ 62ರ ವಯಸ್ಸಿನಲ್ಲಿ ಶರಣಪ್ಪನ ಅದ್ಭುತ ಸಾಧನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
Veega News Kannada
120 ಅಡಿ ಹಾಲುಗಂಭ ಏರಿದ ಸಾಹಸಿ 62ರ ವಯಸ್ಸಿನಲ್ಲಿ ಶರಣಪ್ಪನ ಅದ್ಭುತ ಸಾಧನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.
More news from ಕರ್ನಾಟಕ and nearby areas
- full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.1
- ದೇವನಹಳ್ಳಿ ಹೆಚ್ಚಾದ ಎಲ್ಪಿಜಿ ಸಮಸ್ಯೆ...ರಾಜ್ಯ ಸರ್ಕಾರ ವಿರುದ್ದ ಸಂಸದ ಡಾ.ಕೆ.ಸುಧಾಕರ್ ಕಿಡಿ. ಇದು ವಿಶ್ವದ ಸಮಸ್ಯೆ, ಇದರಲ್ಲಿ ರಾಜಕಾರಣ ಮಾಡಿದ್ರೆ ಅವರಿಗೆ ಡೆಪಾಸಿಟ್ ಸಿಗಲ್ಲ. ಕಾಂಗ್ರೆಸಿನವರಿಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ. ಯುದ್ಧದ ನಡುವೆಯೂ ಮೋದಿಯವರ ರಾಜತಾಂತ್ರಿಕತೆಯಿಂದಾಗಿ ಮೂರೊತ್ತು ಊಟ ಮಾಡ್ತಿದ್ದೀವಿ. ಮೋದಿಯವರಿಂದ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗ್ತಿದೆ. ಕಾಂಗ್ರೆಸಿಗರಿಗೆ ಏನಾದ್ರೂ ನಾಚಿಕೆ ಇದ್ಯಾ..? ಇದರಲ್ಲಾ ರಾಜಕಾರಣ ಮಾಡೋದು..?, ಕೋವಿಡ್ ನಲ್ಲಿ ರಾಜಕಾರಣ ಮಾಡಿದ್ರು, ಮೋದಿ ಇಂಜಕ್ಷನ್ ಅಂದ್ರು, ಯುದ್ಧ ರಾಷ್ಟಗಳಿಗೆ ವಿಮಾನ ಹೋಗ್ತಿಲ್ಲ, ಅಲ್ಲಿನ ಜನ ಸಾಯ್ತಿದ್ದಾರೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 300ರೂ ನಿಂದ 400ರೂ ಹೆಚ್ಚಾಗಿ ಶೇ.50ರಷ್ಟು ಏರಿಕೆ ಮಾಡಿದ್ದಾರೆ. ಇತಹ ಸಂದರ್ಭದಲ್ಲಿ ದೇಶ ಒಂದಾಗಿ ವಿಚಾರ ಮಾಡಬೇಕು. ರಾಜಕಾರಣ ಮಾಡದೇ ದೇಶದ ಜನರನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡಬೇಕು. ಸಮಸ್ಯೆ ಬಗೆಹರಿಸೋದು ಬಿಟ್ಟು ರಾಜಕಾರಣ ಮಾಡಿದ್ರೆ ಖಂಡಿತವಾಗಿಯೂ ಡೆಪಾಸಿಟ್ ಬರಲ್ಲ. ದೇವನಹಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಹೇಳಿಕೆ.1
- Post by Rownak Ali khan1
- KOLAR KI.AWAAZ KOUSAR1
- ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯರದ ಅಶ್ವಿನಿ ಮತ್ತು ಲಕ್ಷ್ಮೀದೇವಿ ಮೇಲೆ ಅಂಗಡಿ ಮಂಜಮ್ಮ ಎಂಬ ಸವರ್ಣೀಯ ಮಹಿಳೆ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 5, 2026) ಬೆಳಿಗ್ಗೆ 08 ಗಂಟ್ಟೆಗೆ ನಡೆದಿದೆ. ಜಾತಿ ಹೆಸರಿನಲ್ಲಿ ನಿಂದಿಸಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿ, ಗಂಭೀರವಾಗಿ ಬಾಯಿಂದ ಕಚ್ಚಿ ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ಘಟನೆಯ ವಿವರ: ಹೋಳೂರು ಗ್ರಾಮದ ನಿವಾಸಿಗಳು ಅಶ್ವಿನಿ ಹಾಗೂ ಲಕ್ಷ್ಮೀದೇವಿ ಎಂಬುವರು ಭಾನುವಾರ ನೀರು ಹಿಡಿಯಲು ಟ್ಯಾಂಕ್ ಬಳಿ ಹೋದಾಗ, ಅದೇ ಗ್ರಾಮದ ಅಂಗಡಿ ಮಂಜಮ್ಮ ಎಂಬ ಮಹಿಳೆ ತಕರಾರು ತೆಗೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ಮಂಜಮ್ಮ, ಅಶ್ವಿನಿ ಹಾಗೂ ಲಕ್ಷ್ಮೀದೇವಿ ರವರನ್ನು ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿದ್ದಲ್ಲದೆ, ಬಾಯಿಂದ ಕಚ್ಚಿ ಗಾಯಮಾಡಿ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಮಚ್ಚನ್ನು ಕಸಿದುಕೊಂಡಾಗ, ಆಕ್ರೋಶಗೊಂಡ ಮಂಜಮ್ಮ ಅಶ್ವಿನಿ ರವರ ಕೈಯನ್ನು ಎರಡು ಬಾರಿ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೊಂದು ಸುತ್ತಿನ ಹಲ್ಲೆ: ಇದಾದ ಕೆಲವೇ ಸಮಯದಲ್ಲಿ,ಅಶ್ವಿನಿ ರವರ ತಂಗಿ ಆದ ಲಕ್ಷ್ಮಿ ದೇವಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿ ತಡೆದು ಮಂಜಮ್ಮ ಮತ್ತು ತಂಡದವರು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಲಕ್ಷ್ಮಿ ದೇವಮ್ಮ ಅವರಿಗೆ ಈ ಹಿಂದೆ ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ, ಕಿಂಚಿತ್ತೂ ದಯೆಯಿಲ್ಲದೆ ಅವರ ಹೊಟ್ಟೆಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಅವರ ಕೊರಳಲ್ಲಿದ್ದ ತಾಳಿ ಸರವನ್ನು ಕಿತ್ತು ಎಸೆದಿದ್ದು, ಹಲ್ಲೆಯ ತೀವ್ರತೆಗೆ ಲಕ್ಷ್ಮಿ ದೇವಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಮಾನವೀಯ ನಡವಳಿಕೆ: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೂ ಮಂಜಮ್ಮನಮಗ ಅರ್ಜುನ್ ರೆಡ್ಡಿ ಎಂಬ ವೆಕ್ತಿ ಆಟೋ ಚಾಲಕನನ್ನು ರಸ್ತೆಯಲ್ಲಿ ತಡೆದು . "ನಿನಗೆ ಇವರು ಏನು ಸಂಬಂಧ?" ಎಂದು ಪ್ರಶ್ನಿಸಿ ಆತನ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹ: ಸದ್ಯ ಇಬ್ಬರೂ ಮಹಿಳೆಯರು ಕೋಲಾರದ ಎಸ್.ಎನ್ .ಆರ್ (SNR) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಗಡಿ ಮಂಜಮ್ಮ ಎಂಬುವವರನ್ನು ಕೂಡಲೇ ಬಂಧಿಸಬೇಕು ಮತ್ತು ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು ಎಂದು ದಲಿತ ಮುಖಂಡರು ಮತ್ತು ಸಂತ್ರಸ್ತ ಕುಟುಂಬದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.1
- ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೋಮಯಾಜಲಹಳ್ಳಿ ಗ್ರಾಮದ ಕೆರೆಯಲ್ಲಿ ಹಾಡಹಗಲೇ ಮಣ್ಣು ತೆಗೆಯುವ ಮೂಲಕ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ…1
- ರಾಜಾಜಿನಗರದ 19ನೇ ಎ ಮುಖ್ಯರಸ್ತೆಯಲ್ಲಿ ಸೈಕಲ್ನಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನಿಗೆ ಸಾಕು ನಾಯಿ ಕಚ್ಚಿರುವ ಘಟನೆ ಮಾರ್ಚ್ 21ರಂದು ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶ್ವಾನ ಮಾಲೀಕರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಗಾಯಗೊಂಡ ಬಾಲಕನ ತಾಯಿ ರಾಧಿಕಾ ಅವರು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.1
- ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪ, ಸ್ಥಳೀಯ ರೈತ ಸಂಘದ ಜಾಗೃತಿಯಿಂದ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ಪೊಲೀಸರ ವಶಕ್ಕೆ ಘಟನೆ ನೆಡೆದಿದೆ ರೈತ ಸಂಘದ ಮುಖಂಡ ವೆಂಕಟಚಲ ಹಾಗೂ ಸದಸ್ಯರು ವೈನ್ ಸ್ಟೋರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ಹೊರಗೆ ಸಂಗ್ರಹಿಸಿದ್ದ 97 ಪೌಚ್ ‘ಒರಿಜಿನಲ್ ಚಾಯ್ಸ್ ವಿಸ್ಕಿ’ ಪತ್ತೆಯಾಗಿದ್ದು, ಯಾವುದೇ ವಾರಸುದಾರರಿಲ್ಲದೆ ಇರುವುದು ದೃಢಪಟ್ಟಿದೆ. ಅಬಕಾರಿ ಇಲಾಖೆಗೆ ಕೂಡ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ, ರೈತ ಸಂಘದವರು ತುರ್ತು 112 ಸೇವೆಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದರು. ನಂತರ ರಾಮಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಶಕ್ಕೆ ಪಡೆದ ಮದ್ಯವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಲು ರೈತ ಸಂಘದವರು ಒಪ್ಪಿದ್ದಾರೆ.1
- Contact AIJAZ PASHA BANNUR DARGAH 8970712631 63635830171