ಕೋಲಾರ ರೈತರು, ಬಡವರು ಮತ್ತು ಜನಸಾಮಾನ್ಯರ ಪರ ಆಡಳಿತದ ಭರವಸೆ ನೂತನ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಕೋಲಾರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಎಂ.ಆರ್. ರವಿಕುಮಾರ್ ಅಧಿಕಾರ ಸ್ವೀಕರಿಸಿರುವುದು ಜಿಲ್ಲೆಯ ಆಡಳಿತದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಜಿಲ್ಲೆಯ ಮಣ್ಣಿನ ಮಗನೇ ಜಿಲ್ಲಾಧಿಕಾರಿಯಾಗಿ ಬಂದಿರುವುದು ಜನರಲ್ಲಿ ವಿಶೇಷ ನಿರೀಕ್ಷೆ ಮೂಡಿಸಿದ್ದು, ರೈತರ ಸಮಸ್ಯೆಗಳಿಗೆ ಆದ್ಯತೆ, ಜನಸಾಮಾನ್ಯರಿಗೆ ಸ್ಪಂದಿಸುವ ಆಡಳಿತ ಹಾಗೂ ಪಾರದರ್ಶಕ ಕಾರ್ಯವೈಖರಿ ತಮ್ಮ ಗುರಿಯಾಗಿದೆ ಎಂದು ಅವರು ಘೋಷಿಸಿರುವುದು ಗಮನ ಸೆಳೆದಿದೆ.ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಎಂ.ಆರ್. ರವಿಕುಮಾರ್, "ಕೋಲಾರ ಜಿಲ್ಲೆಯ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಪಾಲಿನ ದೊಡ್ಡ ಜವಾಬ್ದಾರಿ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.ರೈತನೇ ಮೊದಲ ಆದ್ಯತೆ ಕೋಲಾರ ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ರೈತರ ಬದುಕು ಸುಧಾರಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರೈತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಸೇವೆಗಳು, ಪರಿಹಾರ, ಬೆಳೆ ಸಂಬಂಧಿತ ಆಡಳಿತಾತ್ಮಕ ನೆರವು ದೊರೆತರೆ ಅವರು ಮಣ್ಣಿನಲ್ಲೇ ಚಿನ್ನ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸಿದರು.ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ಬೆಳೆ ಹಾನಿ, ಬೆಂಬಲ ಬೆಲೆ, ಭೂ ದಾಖಲೆ, ಕಂದಾಯ ಸಮಸ್ಯೆಗಳು ಸೇರಿದಂತೆ ರೈತರು ಎದುರಿಸುತ್ತಿರುವ ಎಲ್ಲ ವಿಚಾರಗಳಿಗೂ ಸ್ಪಂದಿಸುವ ಭರವಸೆಯನ್ನು ಅವರು ನೀಡಿದರು. ಜನಪರ ಆಡಳಿತವೇ ಗುರಿ ಆಡಳಿತ ಎಂದರೆ ಕೇವಲ ಕಚೇರಿಯಲ್ಲೇ ಸೀಮಿತವಾಗಬಾರದು. ಅದು ಜನರ ಮನೆಬಾಗಿಲಿಗೆ ತಲುಪಬೇಕು ಎಂಬ ದೃಷ್ಟಿಕೋನವನ್ನು ವ್ಯಕ್ತಪಡಿಸಿದ ಅವರು, ಬಡವರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕೋಲಾರ ರೈತರು, ಬಡವರು ಮತ್ತು ಜನಸಾಮಾನ್ಯರ ಪರ ಆಡಳಿತದ ಭರವಸೆ ನೂತನ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಕೋಲಾರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಎಂ.ಆರ್. ರವಿಕುಮಾರ್ ಅಧಿಕಾರ ಸ್ವೀಕರಿಸಿರುವುದು ಜಿಲ್ಲೆಯ ಆಡಳಿತದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಜಿಲ್ಲೆಯ ಮಣ್ಣಿನ ಮಗನೇ ಜಿಲ್ಲಾಧಿಕಾರಿಯಾಗಿ ಬಂದಿರುವುದು ಜನರಲ್ಲಿ ವಿಶೇಷ ನಿರೀಕ್ಷೆ ಮೂಡಿಸಿದ್ದು, ರೈತರ ಸಮಸ್ಯೆಗಳಿಗೆ ಆದ್ಯತೆ, ಜನಸಾಮಾನ್ಯರಿಗೆ ಸ್ಪಂದಿಸುವ ಆಡಳಿತ ಹಾಗೂ ಪಾರದರ್ಶಕ ಕಾರ್ಯವೈಖರಿ ತಮ್ಮ ಗುರಿಯಾಗಿದೆ ಎಂದು ಅವರು ಘೋಷಿಸಿರುವುದು ಗಮನ ಸೆಳೆದಿದೆ.ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಎಂ.ಆರ್. ರವಿಕುಮಾರ್, "ಕೋಲಾರ ಜಿಲ್ಲೆಯ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಪಾಲಿನ ದೊಡ್ಡ ಜವಾಬ್ದಾರಿ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.ರೈತನೇ ಮೊದಲ ಆದ್ಯತೆ ಕೋಲಾರ ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ರೈತರ ಬದುಕು ಸುಧಾರಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರೈತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಸೇವೆಗಳು, ಪರಿಹಾರ, ಬೆಳೆ ಸಂಬಂಧಿತ ಆಡಳಿತಾತ್ಮಕ ನೆರವು ದೊರೆತರೆ ಅವರು ಮಣ್ಣಿನಲ್ಲೇ ಚಿನ್ನ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸಿದರು.ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ಬೆಳೆ ಹಾನಿ, ಬೆಂಬಲ ಬೆಲೆ, ಭೂ ದಾಖಲೆ, ಕಂದಾಯ ಸಮಸ್ಯೆಗಳು ಸೇರಿದಂತೆ ರೈತರು ಎದುರಿಸುತ್ತಿರುವ ಎಲ್ಲ ವಿಚಾರಗಳಿಗೂ ಸ್ಪಂದಿಸುವ ಭರವಸೆಯನ್ನು ಅವರು ನೀಡಿದರು. ಜನಪರ ಆಡಳಿತವೇ ಗುರಿ ಆಡಳಿತ ಎಂದರೆ ಕೇವಲ ಕಚೇರಿಯಲ್ಲೇ ಸೀಮಿತವಾಗಬಾರದು. ಅದು ಜನರ ಮನೆಬಾಗಿಲಿಗೆ ತಲುಪಬೇಕು ಎಂಬ ದೃಷ್ಟಿಕೋನವನ್ನು ವ್ಯಕ್ತಪಡಿಸಿದ ಅವರು, ಬಡವರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
- ನಿಮ್ಮೂರಲ್ಲಿ ವೇಗ| ರೇಷನ್ ದುಡ್ಡು ಬಂತು ಆದ್ರೆ ಗೃಹಲಕ್ಷ್ಮಿ ಹಣ ಬಂದಿಲ್ಲ| Veega News Kannada ನಿಮ್ಮೂರಲ್ಲಿ ವೇಗ| ರೇಷನ್ ದುಡ್ಡು ಬಂತು ಆದ್ರೆ ಗೃಹಲಕ್ಷ್ಮಿ ಹಣ ಬಂದಿಲ್ಲ| Veega News Kannada1
- *ಗಣಕೀಕರಿಸುವಲ್ಲಿ ಶೇ 100% ಪ್ರಗತಿ ಸಾಧನೆ-ರಾಜ್ಯದಲ್ಲೇ ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ-ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ* ಭಾಗ್ಯನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 204413 ಶೇ 100% ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಹಾಗೂ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದು ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 16 ರವರೆಗೆ 2,04,413 ಮತದಾರಿದ್ದು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಸಂಬಂಧ ಭಾರತ ಚುನಾವಣಾ ಆಯೋಗದ ದಿನಾಂಕ: 14/05/2026 ರ ವೇಳಾಪಟ್ಟಿಯಂತೆ ದಿನಾಂಕ: 30/06/2026 ರಿಂದ 29/07/2026ರವರೆಗೆ ಬಿ.ಎಲ್.ಓ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸ್ವೀಕರಿಸುವ ಕಾರ್ಯ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ದಿನಾಂಕ 16/06/2026 ರವರೆಗೆ ಒಟ್ಟು 204413 ಮತದಾರರಿದ್ದು, ಈ ಪೈಕಿ 198165 (ಶೇ.96.94%) ಮತದಾರರನ್ನು ಮ್ಯಾಪಿಂಗ್ ಮಾಡಲಾಗಿರುತ್ತದೆ.ತಾಲ್ಲೂಕಿನಲ್ಲಿ ದಿನಾಂಕ: 30/07/2026 ರ ಸಂಜೆ 6.00 ಗಂಟೆಗೆ ಎಲ್ಲಾ ಮತಗಟ್ಟೆಗಳಿಂದ ಒಟ್ಟು 204413 (ಶೇ.100%) ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಮುಗಿದಿದ್ದು,ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ಮನಿಷಾ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ.ಶ್ವೇತಾ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ,ಚುನಾವಣಾ ಶಾಖೆಯ ಅಧಿಕಾರಿಗಳಾದ ಮೂರ್ತಿ,ರಾಘವೇಂದ್ರ,ಕಾಂಗ್ರೆಸ್ ಪಕ್ಷದ ಬಿ ಎಲ್ ಎ2 ಮದ್ದಿಲೇಟಿರೆಡ್ಡಿ,ಕ್ರಿಕೆಟ್ ಮೂರ್ತಿ,ಅಶೋಕ್,ಮಿಲ್ಕ್ ವೀರ,ಪಾತಪಾಳ್ಯ ಚಂದ್ರಣ್ಣ,ನಿಜಾಮ್ ಉದ್ದಿನ್ ಬಾಬು,ಮನ್ಸೂರ್,ದಿವಾಕರ್,ಸಿಪಿ.ಐ.ಎಂ ಪಕ್ಷದ ಬಿ ಎಲ್ ಎ2 ಎಂ. ಎನ್.ರಘುರಾಮರೆಡ್ಡಿ,ಅಶ್ವಥಪ್ಪ, ಜಿ ಕೃಷ್ಣಪ್ಪ, ಇಮ್ರಾನ್, ಬಿಜೆಪಿ ಪಕ್ಷದ ಬಿ ಎಲ್ ಎ2 ಬಿ. ಎಸ್.ಲೋಕೇಶ್,ರವಿಕುಮಾರ್,ಲೋಕೇಶ್,ವನಜಾ, ಗಂಗುಳಮ್ಮ, ಮಂಜುಳಾ,ರೂಪ,ಸೇರಿದಂತೆ ಮತ್ತಿತರರು ಇದ್ದರು.3
- ಕೆಆರ್ ಪುರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಬೆಂ,ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ಚಾಲನೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ರಿಂದ ಚಾಲನೆ .ಆಯುಕ್ತ ರಮೇಶ್ ಅವರಿಗೆ ಕೆಆರ್ ಪುರ ಜಂಟಿ ಆಯುಕ್ತೆ ಡಾ . ಸುಧಾ ಸ್ವಪ್ನ ಸಾಥ್ .ಕೆಆರ್ ಪುರದ ಐಟಿಐ ಗೇಟ್ ನಿಂದ ಆರಂಭವಾಗಿರುವ ಅಭಿಯಾನ .ಕೆಆರ್ ಪುರ ಹಾಗೂ ಮಹದೇವಪುರ ವಲಯಗಳಲ್ಲಿ ಏಕಕಾಲ ಚಾಲನೆ ನೀಡಿರುವ ಆಯುಕ್ತ ರಮೇಶ್ .ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನ .ಖಾಸಗೀ ಸ್ವತ್ತುಗಳಲ್ಲಿ ತ್ಯಾಜ್ಯ ತೆರವಿಗೆ ಮಾಲೀಕರಿಗೆ ೧೫ದಿನಗಳ ಗಡುವು.೧೫ ದಿನಗಳ ಬಳಿಕವೂ ತೆರವುವಾಗಿಲ್ಲ ಅಂದ್ರೆ ಮಾಲೀಕರೇ ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ವೆಚ್ಚ ಭರಿಸಬೇಕು1
- ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಪ್ರತಿಭಟನೆ ಬೆಂಗಳೂರು:ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.1
- 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ! | ರಾಜ್ಯದಲ್ಲಿ ಹೆಚ್ಚುತ್ತಿರುವ ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಮಹತ್ವದ ಅಭಿಯಾನ ಆರಂಭಿಸಿದೆ. 14 ವರ್ಷದೊಳಗಿನ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ HPV ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಅಭಿಯಾನದ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದು, ಪೋಷಕರು ಹಾಗೂ ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. #Hashtags #HPVVaccine #CervicalCancer #HealthDepartment #UTKhader #KarnatakaNews #HealthNews #WomenHealth #FreeVaccine #KannadaNews #BreakingNews #ASNNews24Kannada #ViralNews #karnataka1
- burger king bangalore jayanagar must visit the store every time burger1
- ಸುವರ್ಣಹಳ್ಳಿಯಲ್ಲಿ ಯಶಸ್ವಿ ಕೊಳವೆ ಬಾವಿ ಕೊರೆತ – ಶಾಸಕಿ ರೂಪಕಲಾ ಶಶಿಧರ್ಗೆ ಕೃತಜ್ಞತೆ ಸಲ್ಲಿಸಿದ ರೈತ ಮಹಿಳೆ ಕೆ.ಜಿ.ಎಫ್: ತಾಲೂಕಿನ ಕಾಸಂಬಳ್ಳಿ ಹೋಬಳಿಯ ಸುವರ್ಣಹಳ್ಳಿ ಗ್ರಾಮದ ರೈತ ಮಹಿಳೆ ಶ್ರೀಮತಿ ಭಾಗ್ಯಮ್ಮ ಕೋಂ ಮುನಿಸ್ವಾಮಿ ಅವರ ಜಮೀನಿನಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಯಡಿ ಇಂದು ಯಶಸ್ವಿಯಾಗಿ ಕೊಳವೆ ಬಾವಿ ಕೊರೆಯಲಾಯಿತು. ಕೆ.ಜಿ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಶಶಿಧರ್ ಅವರ ವಿಶೇಷ ಪ್ರಯತ್ನ ಹಾಗೂ ಮಂಜೂರಾತಿಯಿಂದ ಈ ಕೊಳವೆ ಬಾವಿ ನಿರ್ಮಾಣಗೊಂಡಿದ್ದು, ಬೋರ್ವೆಲ್ನಲ್ಲಿ ಉತ್ತಮ ನೀರು ಬಿದ್ದ ಹಿನ್ನೆಲೆಯಲ್ಲಿ ರೈತ ಕುಟುಂಬ ಹಾಗೂ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಳವೆ ಬಾವಿ ಮಂಜೂರು ಮಾಡಿಸಿ ತಮ್ಮ ಕೃಷಿ ಜೀವನಕ್ಕೆ ಆಸರೆಯಾದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ರೈತರು ಹಾಗೂ ಸ್ಥಳೀಯರು, ಅವರ ಜನಪರ ಕಾಳಜಿಯನ್ನು ಶ್ಲಾಘಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.1
- ಕೆಸರಲ್ಲೇ ಶಾಲೆಗೆ ನಡೆಯುವ ವಿದ್ಯಾರ್ಥಿಗಳು! ರಸ್ತೆ ಇಲ್ಲದೆ ವಸ್ತಾರಿ ಗ್ರಾಮಕ್ಕೆ ಸಂಕಷ್ಟ! ಕಲಬುರಗಿ ಜಿಲ್ಲೆಯ ವಸ್ತಾರಿ ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದರೂ ಸಂಪರ್ಕ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಕೆಸರಿನಲ್ಲಿ ನಡೆದು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.1
- ನಾನೇನು ಲಾಭಿ ಮಾಡೋಕೆ ಹೋಗಿಲ್ಲ:ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲಪಾಡ್ ಪ್ರತಿಕ್ರಿಯೆ ಬೆಂಗಳೂರು:ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋದಾಗಲೆಲ್ಲಾ ನಲಪಾಡ್ ಫಾಲೋ ಮಾಡ್ತಿದ್ದು,ಈ ಬಾರಿಯಾದ್ರೂ ಮಂತ್ರಿಗಿರಿ ಪಡೆಯುವಲ್ಲಿ ತಂದೆ ಮತ್ತು ಮಗ ಸಕ್ಸಸ್ ಆಗ್ತಾರಾ?ಫೈನಲ್ ಲೀಸ್ಟ್ ನಲ್ಲಿ ಹೆಸರು ಇರುವಂತೆ ತಂದೆ ಮತ್ತು ಮಗ ಎಫರ್ಟ್ ಆಗ್ತಿದ್ದಾರೆ.ದೆಹಲಿಯಲ್ಲಿ ಸಿಎಂ ಭೇಟಿಯಾಗಿ ತಂದೆಗೆ ಸಚಿವಸ್ಥಾನ ಕೊಡಿಸಲು ಹ್ಯಾರೀಸ್ ಪುತ್ರ ನಲಪಾಡ್ ಪ್ಲಾನ್ ನಡೆಸಿದ್ದಾರೆ.ಇನ್ನೂ ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ನಲಪಾಡ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಗಳು ದೆಹಲಿಗೆ ಹೋದಾಗ ಫ್ರೀಯಾಗಿ ಸಿಗ್ತಾರೆ ಅಂತ ಮಾತಾಡೋಕೆ ಹೋಗಿದ್ದೆ,ನಾನೇನು ಲಾಭಿ ಮಾಡೋಕೆ ಹೋಗಿಲ್ಲ, ನಮ್ಮ ಅಪ್ಪ ನಾಲ್ಕು ಬಾರಿ ಗೆದ್ದಿದ್ದಾರೆ, ಅವರು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ,ಕಡಲಸಗಳನ್ನ ನಡೆಸಿಕೊಂಡು ಬಂದಿದ್ದಾರೆ, ಅವರನ್ನ ಮಂತ್ರಿ ಮಂಡಲದಲ್ಲಿ ಸೇರ್ಸ್ತಾರೆ ಅನ್ನೋ ನಂಬಿಕೆ ನಮ್ಮ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ಮೇಲೆ ಇದೆ,ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ, ಡೈಲಿ ಮುಖ ತೋರಿಸಿರ್ದೆ ನೆನಪು ಬರುತ್ತೆ ಎಂದು ನಲಪಾಡ್ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.1