ಸಹಸ್ರಾರು ಭಕ್ತರ ನಡುವೆ ಸಂಭ್ರಮದ ರೇವಣಸಿದ್ಧ ಶಿವಶರಣರ ರಥೋತ್ಸವ ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ದ ಶಿವಶರಣರ ಮಠದ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ರಥೋತ್ಸವ ಗುರುವಾರ ನಡೆಯಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗೊಂಬೆ ಕುಣಿತ, ಡೊಳ್ಳು, ಕರಡಿಮಜಲಿನ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಸಂಜೆ 6.30ಗಂಟೆಗೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನಡೆಯಿತು. ಜಾತ್ರಾಮಹೋತ್ಸವದಲ್ಲಿ ಆಳಂದದ ಶಿವಶರಣಮಠದ ಚನ್ನಬಸವ ಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದ ಶಿವಶರಣರು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಸೋಮಯ್ಯ ಶಾಸ್ತ್ರೀಗಳು, ಗುರಪ್ಪಗೌಡ ಪಾಟೀಲ, ಲಕ್ಷ್ಮಣ ದಡ್ಡಿ, ಬಿ.ಬಿ.ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ರಾಮಸ್ವಾಮಿ, ಮಲ್ಲಿಕಾರ್ಜುನ ಸೂಡಿ, ನಾಗೇಶ ಸಿದ್ದಣ್ಣವರ, ಪುರುಷೋತ್ತಮ ಗಂಡಿ,ನಾರಾಯಣಪ್ಪ ಚಿತ್ರಗಾರ, ಬಸವಂತಪ್ಪ, ಶರಣಪ್ಪ ದಿಂಡಿ, ಬಸಪ್ಪ ದಿಂಡಿ, ಸಂಗಪ್ಪ ರಕ್ಕಸಗಿ,ಮೇಟಿ ಸೇರಿದಂತೆ ಗುಳೇದಗುಡ್ಡ ಕೋಟೆಕಲ್, ಪರ್ವತಿ, ಚೌಡಾಪುರ, ಶಿರೂರು, ಹಳ್ಳೂರು, ಆಚನೂರ, ಸೀತಿಮನಿ, ಹುಲಸಗೇರಿ, ಜಮ್ಮನಕಟ್ಟಿ ಲಕ್ಕಸಕೊಪ್ಪ, ಸುರಳಿಕಲ್ಲ, ಸಂಗಾಪೂರ, ಮಂಗಳಗುಡ್ಡ, ಯಂಕಂಚಿ ಮಣಿನಾಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಸಹಸ್ರಾರು ಭಕ್ತರ ನಡುವೆ ಸಂಭ್ರಮದ ರೇವಣಸಿದ್ಧ ಶಿವಶರಣರ ರಥೋತ್ಸವ ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ದ ಶಿವಶರಣರ ಮಠದ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ರಥೋತ್ಸವ ಗುರುವಾರ ನಡೆಯಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗೊಂಬೆ ಕುಣಿತ, ಡೊಳ್ಳು, ಕರಡಿಮಜಲಿನ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಸಂಜೆ 6.30ಗಂಟೆಗೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನಡೆಯಿತು. ಜಾತ್ರಾಮಹೋತ್ಸವದಲ್ಲಿ ಆಳಂದದ ಶಿವಶರಣಮಠದ ಚನ್ನಬಸವ ಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದ ಶಿವಶರಣರು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಸೋಮಯ್ಯ ಶಾಸ್ತ್ರೀಗಳು, ಗುರಪ್ಪಗೌಡ ಪಾಟೀಲ, ಲಕ್ಷ್ಮಣ ದಡ್ಡಿ, ಬಿ.ಬಿ.ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ರಾಮಸ್ವಾಮಿ, ಮಲ್ಲಿಕಾರ್ಜುನ ಸೂಡಿ, ನಾಗೇಶ ಸಿದ್ದಣ್ಣವರ, ಪುರುಷೋತ್ತಮ ಗಂಡಿ,ನಾರಾಯಣಪ್ಪ ಚಿತ್ರಗಾರ, ಬಸವಂತಪ್ಪ, ಶರಣಪ್ಪ ದಿಂಡಿ, ಬಸಪ್ಪ ದಿಂಡಿ, ಸಂಗಪ್ಪ ರಕ್ಕಸಗಿ,ಮೇಟಿ ಸೇರಿದಂತೆ ಗುಳೇದಗುಡ್ಡ ಕೋಟೆಕಲ್, ಪರ್ವತಿ, ಚೌಡಾಪುರ, ಶಿರೂರು, ಹಳ್ಳೂರು, ಆಚನೂರ, ಸೀತಿಮನಿ, ಹುಲಸಗೇರಿ, ಜಮ್ಮನಕಟ್ಟಿ ಲಕ್ಕಸಕೊಪ್ಪ, ಸುರಳಿಕಲ್ಲ, ಸಂಗಾಪೂರ, ಮಂಗಳಗುಡ್ಡ, ಯಂಕಂಚಿ ಮಣಿನಾಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.2
- ರಂಗೇರಿದ ಬಾಗಲಕೋಟೆ ಉಪಚುನಾವಣೆ… ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು … ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ. “ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”1
- Post by Sharanugouda Patil1
- Yatnal In Bagalkote Byelections 2026 | ಬಿಜೆಪಿ ಸೇರಲು ನಾಟಕ ಮಾಡ್ತಿದ್ದಾರೆ ಅಂತಿದ್ದಂತೆ ಯತ್ನಾಳ್ ಕೆಂಡ .1
- Post by ಫಾರೂಕ್ ಕುತುಬೂದಿನ್ ನದಾಫ1
- Post by Makbulahmed Mulla2
- ಹನುಮ ಜಯಂತಿ ಅಂಗವಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿನ ಹನುಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ನಗರದಲ್ಲಿನ ಹನುಮ ದೇವಸ್ಥಾನಗಳನ್ನು ತಳಿರೋ ತೋರಣ,ಹೂವುಗಳಿಂದ ಶೃಂಗರಿಸಿ ಆಂಜನೇಯ್ಯನಿಗೆ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನಗಳಿಗೆ ಭಕ್ತರು ದಂಡು ಆಗಮಿಸಿ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಜೋಶಿಗಲ್ಲಿಯಲ್ಲಿನ ಹನುಮ ಮಂದಿರ, ಬಸ್ ನಿಲ್ದಾಣ ಹತ್ತಿರದ ಆಂಜನೇಯ್ಯಸ್ವಾಮಿ ದೇವಸ್ಥಾನ, ಬಸವನಗರದ ಹನುಮ ದೇವಸ್ಥಾನ, ದರ್ಗಾ ಹತ್ತಿರದ ಹನುಮ ದೇವಸ್ಥಾನ, ಜುಂಜಾ ಮನೆಯ ಹತ್ತಿರದ ಹನುಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.1
- ವಿಜಯಪುರ: 2028ಕ್ಕೆ ನಾನೇ ಮುಖ್ಯಮಂತ್ರಿ ಶಾಸಕ ಯತ್ನಾಳ್ ಹೇಳಿಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ ಅವರು 2028 ರಲ್ಲಿ ಹಿಂದೂ ಸರ್ಕಾರ ಅಧಿಕಾರಕ್ಕೆ ಬರುವುದಾಗಿ ಹೇಳಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗೆ ತರಬೇತಿ ನೀಡಲಾಗುತ್ತಿದೆ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹಣ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಚುನಾವಣೆಯಲ್ಲಿ ಹಿಂದೂಗಳು ಒಗ್ಗಟ್ಟಾಗಲಿದ್ದಾರೆ ಎಂದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣಗಳಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಾಗ ಎನ್ಕೌಂಟರ್ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಯೋಗಿ ಆದಿತ್ಯನಾಥ್ ಅವರಂತಹ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಯತ್ನಾಳ, 2028ಕ್ಕೆ ಅಧಿಕಾರ ನೀಡಿದರೆ ಯೋಗಿ ಆದಿತ್ಯನಾಥ್ ಅವರಂತಹ ಆಡಳಿತ ನೀಡುವುದಾಗಿ, 4% ಮುಸ್ಲಿಂ ಮೀಸಲಾತಿ ರದ್ದು ಮಾಡುವುದಾಗಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.1
- SSLC ಪರೀಕ್ಷೆ ಮುಗಿದ ನಂತರ ಮಕ್ಕಳ ಮಾತು | ಫುಲ್ ಖುಷ್ | suddi point 📢 #suddipoint #sslcexam #sslc #sslcstudents1