ವಿಶ್ವ ಯೋಗ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಯೋಗಾಸನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ಗಡಿನಾಡು ಅಥಣಿಯ 74 ವರ್ಷದ ವಿಲಾಸರಾವ್ ಕುಲಕರ್ಣಿ ನಿರೂಪಿಸಿದ್ದಾರೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಜಲಯೋಗ ಅಭ್ಯಾಸ ಮಾಡುತ್ತಿರುವ ಇವರು, ನೆಲದ ಮೇಲೆ ಆಸನ ಮಾಡುವ ಬದಲು ನೀರಿನಲ್ಲಿ ತೇಲುತ್ತಾ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಬ್ರಹ್ಮಚರ್ಯ ಪಾಲಿಸಿಕೊಂಡು ಬಂದಿರುವ ಕುಲಕರ್ಣಿ, ಸದಾ ಲವಲವಿಕೆ, ಚುರುಕುತನ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಜನಪ್ರಿಯರಾಗಿದ್ದು, ಅವರ ಫಿಟ್ನೆಸ್ ಅನೇಕ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಅವರು ಅಥಣಿ ಪಟ್ಟಣದ ನಿವಾಸಿ. ವಿಲಾಸರಾವ್ ಕುಲಕರ್ಣಿಯವರಿಗೆ ಈಜುಗಾರಿಕೆ ಮತ್ತು ಜಲಯೋಗದ ಅಭ್ಯಾಸ ಅವರ ತಂದೆ ಗೋವಿಂದರಾವ್ ಮಾಸ್ತರ್ ಅವರಿಂದ ಬಂದ ಬಳುವಳಿಯಾಗಿದ್ದು, ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಇಂದಿಗೂ ಸಹಕಾರಿಯಾಗಿದೆ. ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಕಾಲ ಲೆಕ್ಕಿಸದೆ ವರ್ಷದ 12 ತಿಂಗಳು ನಿತ್ಯ ಒಂದು ಗಂಟೆ ಕಾಲ ಬಾವಿಯಲ್ಲಿ ಜಲಯೋಗ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. 74ರ ಇಳಿವಯಸ್ಸಿನಲ್ಲಿಯೂ ಅಥಣಿ ಪಟ್ಟಣ ಹಾಗೂ ಸುತ್ತಮುತ್ತಲಿನ ಬಾವಿಗಳಲ್ಲಿ ಪದ್ಮಾಸನ, ಶವಾಸನ, ಸಮುದ್ರೋಲ್ಲಂಘಾಸನ ಸೇರಿದಂತೆ ಅನೇಕ ಯೋಗಾಸನ ಭಂಗಿಗಳನ್ನು ನೀರಿನಲ್ಲಿ ಪ್ರದರ್ಶಿಸಿ ಯುವಕರು ನಾಚುವಂತೆ ಮಾಡುತ್ತಾರೆ. ಇವರು ಚಿಕ್ಕಮಕ್ಕಳು ಮತ್ತು ಯುವಕರಿಗೆ ಈಜು ಹಾಗೂ ಆಸನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ವಿಲಾಸರಾವ್ ಅವರ ಈ ಅಪರೂಪದ ಸಾಧನೆಗೆ ತಾಲೂಕು ಆಡಳಿತವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ 'ಜಲಯೋಗ ಸಾಧಕ' ಎಂಬ ಪ್ರಶಸ್ತಿ ಪತ್ರವನ್ನು ನೀಡಿದೆ. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಮಠಾಧೀಶರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಅಭಿನಂದಿಸಿವೆ. ಅಥಣಿಯ ವೈದ್ಯರಾದ ಡಾ. ರಮೇಶ್ ಗುಳ್ಳ ಅವರು ಇವರ ವ್ಯಕ್ತಿತ್ವ ಮತ್ತು ಸಾಧನೆಯ ಕುರಿತು 'ವಿಶ್ವ ಜಲಯೋಗ' ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಇದು ಜಲಯೋಗದ ಕುರಿತು ವಿಶ್ವದಲ್ಲಿಯೇ ಪ್ರಥಮ ಪುಸ್ತಕವಾಗಿದೆ ಮತ್ತು ಸಮಾಜದ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಶುರು app ನೊಂದಿಗೆ ಮಾತನಾಡಿದ ಜಲಯೋಗ ಸಾಧಕ ವಿಲಾಸರಾವ್ ಕುಲಕರ್ಣಿ, ಬಾವಿಯ ನೀರು ಬೆಚ್ಚಗಿರುತ್ತದೆ ಮತ್ತು ಚಳಿಯು ಗಾಳಿಯಲ್ಲಿ ಇರುತ್ತದೆ, ನೀರಿನಲ್ಲಿ ಜಿಗಿದರೆ ಚಳಿ ಓಡಿ ಹೋಗುತ್ತದೆ ಎಂದು ತಿಳಿಸಿದ್ದಾರೆ. ಬಾವಿಯಲ್ಲಿ ಐದು ಅಡಿ ಆಳವಿರಲಿ ಅಥವಾ ಹೆಚ್ಚು ಆಳವಿರಲಿ, ಜಲಯೋಗಕ್ಕೆ ಯಾವುದೇ ಅಡಚಣೆ ಇಲ್ಲ ಎಂದಿರುವ ಅವರು, ತಣ್ಣೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿಪಾದಿಸಿದ್ದಾರೆ. ಪ್ರತಿದಿನ ನೀರಿನಲ್ಲಿ ಈಜಾಡುವುದರಿಂದ ದೇಹದ ಎಲ್ಲಾ ಅಂಗಾಂಗಗಳಿಗೆ ವ್ಯಾಯಾಮವಾಗುತ್ತದೆ ಹಾಗೂ ನೀರಿನಲ್ಲಿ ತೇಲುವಿಕೆ ಮತ್ತು ದೇಹದ ಭಾರ ಕಡಿಮೆಯಾಗುವುದರಿಂದ ಕೀಲು ನೋವುಗಳಿಗೆ ಯಾವುದೇ ಹಾನಿಯಾಗದಂತೆ ದೈಹಿಕ ಸದೃಢತೆಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ. ಆಸಕ್ತಿ ಹೊಂದಿರುವ ಚಿಕ್ಕಮಕ್ಕಳು, ಯುವಕ-ಯುವತಿಯರಿಗೆ ಈಜು ಮತ್ತು ನೀರಿನಲ್ಲಿ ಯೋಗಾಭ್ಯಾಸಗಳನ್ನು ಉಚಿತವಾಗಿ ಹೇಳಿಕೊಡುತ್ತಿರುವುದಾಗಿ ಅವರು ಸಂತಸ ಹಂಚಿಕೊಂಡರು. ಅಥಣಿಯ ವೈದ್ಯರಾದ ಡಾ. ರಮೇಶ ಗುಳ್ಳ ಅವರು, ಜಲಯೋಗದಿಂದಲೇ ಸಾಧನೆಯ ಜತೆಗೆ ಸಾರ್ಥಕ ಬದುಕು ನಡೆಸುತ್ತಿರುವ ವಿಲಾಸರಾವ್ ಕುಲಕರ್ಣಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಅವರು, ವಿಲಾಸರಾವ್ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ, ಮನಸ್ಸನ್ನೇ ಗುರುವಾಗಿಸಿಕೊಂಡು ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಕ್ಲಿಷ್ಟಕರ ಯೋಗ ಭಂಗಿಗಳನ್ನು ನೀರಿನಲ್ಲಿ ಲೀಲಾಜಾಲವಾಗಿ ಪ್ರದರ್ಶಿಸುವುದು ವಿಸ್ಮಯಕಾರಿ ಎಂದು ಬಣ್ಣಿಸಿದ್ದಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಜಲಯೋಗ ಮತ್ತು ಈಜಲು ಯಾವುದೇ ತೊಂದರೆ ಇಲ್ಲ, ಆದರೆ ಬೇಸಿಗೆಯಲ್ಲಿ ಅನೇಕ ಬಾವಿಗಳು ಬತ್ತುವುದರಿಂದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ಸರ್ಕಾರ ಮತ್ತು ಜನಪ್ರತಿನಿಧಿಗಳು ತಾಲೂಕಿನ ಜನತೆಗೆ ಅನುಕೂಲವಾಗುವಂತೆ ಈಜು ಕೊಳವನ್ನು ನಿರ್ಮಿಸಬೇಕು ಎಂದು ವಿಲಾಸರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ. ಯೋಗ ಬಲ್ಲವರಿಗೆ ರೋಗವಿಲ್ಲ ಎಂಬ ಮಾತಿನಂತೆ ವಿಲಾಸರಾವ್ ಕುಲಕರ್ಣಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವಿಶ್ವ ಯೋಗ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಯೋಗಾಸನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ಗಡಿನಾಡು ಅಥಣಿಯ 74 ವರ್ಷದ ವಿಲಾಸರಾವ್ ಕುಲಕರ್ಣಿ ನಿರೂಪಿಸಿದ್ದಾರೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಜಲಯೋಗ ಅಭ್ಯಾಸ ಮಾಡುತ್ತಿರುವ ಇವರು, ನೆಲದ ಮೇಲೆ ಆಸನ ಮಾಡುವ ಬದಲು ನೀರಿನಲ್ಲಿ ತೇಲುತ್ತಾ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಬ್ರಹ್ಮಚರ್ಯ ಪಾಲಿಸಿಕೊಂಡು ಬಂದಿರುವ ಕುಲಕರ್ಣಿ, ಸದಾ ಲವಲವಿಕೆ, ಚುರುಕುತನ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಜನಪ್ರಿಯರಾಗಿದ್ದು, ಅವರ ಫಿಟ್ನೆಸ್ ಅನೇಕ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಅವರು ಅಥಣಿ ಪಟ್ಟಣದ ನಿವಾಸಿ. ವಿಲಾಸರಾವ್ ಕುಲಕರ್ಣಿಯವರಿಗೆ ಈಜುಗಾರಿಕೆ ಮತ್ತು ಜಲಯೋಗದ ಅಭ್ಯಾಸ ಅವರ ತಂದೆ ಗೋವಿಂದರಾವ್ ಮಾಸ್ತರ್ ಅವರಿಂದ ಬಂದ ಬಳುವಳಿಯಾಗಿದ್ದು, ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ
ಸುಧಾರಣೆಗೆ ಇಂದಿಗೂ ಸಹಕಾರಿಯಾಗಿದೆ. ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಕಾಲ ಲೆಕ್ಕಿಸದೆ ವರ್ಷದ 12 ತಿಂಗಳು ನಿತ್ಯ ಒಂದು ಗಂಟೆ ಕಾಲ ಬಾವಿಯಲ್ಲಿ ಜಲಯೋಗ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. 74ರ ಇಳಿವಯಸ್ಸಿನಲ್ಲಿಯೂ ಅಥಣಿ ಪಟ್ಟಣ ಹಾಗೂ ಸುತ್ತಮುತ್ತಲಿನ ಬಾವಿಗಳಲ್ಲಿ ಪದ್ಮಾಸನ, ಶವಾಸನ, ಸಮುದ್ರೋಲ್ಲಂಘಾಸನ ಸೇರಿದಂತೆ ಅನೇಕ ಯೋಗಾಸನ ಭಂಗಿಗಳನ್ನು ನೀರಿನಲ್ಲಿ ಪ್ರದರ್ಶಿಸಿ ಯುವಕರು ನಾಚುವಂತೆ ಮಾಡುತ್ತಾರೆ. ಇವರು ಚಿಕ್ಕಮಕ್ಕಳು ಮತ್ತು ಯುವಕರಿಗೆ ಈಜು ಹಾಗೂ ಆಸನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ವಿಲಾಸರಾವ್ ಅವರ ಈ ಅಪರೂಪದ ಸಾಧನೆಗೆ ತಾಲೂಕು ಆಡಳಿತವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ 'ಜಲಯೋಗ ಸಾಧಕ' ಎಂಬ ಪ್ರಶಸ್ತಿ ಪತ್ರವನ್ನು ನೀಡಿದೆ. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಮಠಾಧೀಶರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಅಭಿನಂದಿಸಿವೆ. ಅಥಣಿಯ ವೈದ್ಯರಾದ ಡಾ. ರಮೇಶ್ ಗುಳ್ಳ ಅವರು ಇವರ ವ್ಯಕ್ತಿತ್ವ ಮತ್ತು ಸಾಧನೆಯ
ಕುರಿತು 'ವಿಶ್ವ ಜಲಯೋಗ' ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಇದು ಜಲಯೋಗದ ಕುರಿತು ವಿಶ್ವದಲ್ಲಿಯೇ ಪ್ರಥಮ ಪುಸ್ತಕವಾಗಿದೆ ಮತ್ತು ಸಮಾಜದ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಶುರು app ನೊಂದಿಗೆ ಮಾತನಾಡಿದ ಜಲಯೋಗ ಸಾಧಕ ವಿಲಾಸರಾವ್ ಕುಲಕರ್ಣಿ, ಬಾವಿಯ ನೀರು ಬೆಚ್ಚಗಿರುತ್ತದೆ ಮತ್ತು ಚಳಿಯು ಗಾಳಿಯಲ್ಲಿ ಇರುತ್ತದೆ, ನೀರಿನಲ್ಲಿ ಜಿಗಿದರೆ ಚಳಿ ಓಡಿ ಹೋಗುತ್ತದೆ ಎಂದು ತಿಳಿಸಿದ್ದಾರೆ. ಬಾವಿಯಲ್ಲಿ ಐದು ಅಡಿ ಆಳವಿರಲಿ ಅಥವಾ ಹೆಚ್ಚು ಆಳವಿರಲಿ, ಜಲಯೋಗಕ್ಕೆ ಯಾವುದೇ ಅಡಚಣೆ ಇಲ್ಲ ಎಂದಿರುವ ಅವರು, ತಣ್ಣೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿಪಾದಿಸಿದ್ದಾರೆ. ಪ್ರತಿದಿನ ನೀರಿನಲ್ಲಿ ಈಜಾಡುವುದರಿಂದ ದೇಹದ ಎಲ್ಲಾ ಅಂಗಾಂಗಗಳಿಗೆ ವ್ಯಾಯಾಮವಾಗುತ್ತದೆ ಹಾಗೂ ನೀರಿನಲ್ಲಿ ತೇಲುವಿಕೆ ಮತ್ತು ದೇಹದ ಭಾರ ಕಡಿಮೆಯಾಗುವುದರಿಂದ ಕೀಲು ನೋವುಗಳಿಗೆ ಯಾವುದೇ ಹಾನಿಯಾಗದಂತೆ ದೈಹಿಕ ಸದೃಢತೆಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ. ಆಸಕ್ತಿ ಹೊಂದಿರುವ ಚಿಕ್ಕಮಕ್ಕಳು, ಯುವಕ-ಯುವತಿಯರಿಗೆ ಈಜು ಮತ್ತು ನೀರಿನಲ್ಲಿ ಯೋಗಾಭ್ಯಾಸಗಳನ್ನು
ಉಚಿತವಾಗಿ ಹೇಳಿಕೊಡುತ್ತಿರುವುದಾಗಿ ಅವರು ಸಂತಸ ಹಂಚಿಕೊಂಡರು. ಅಥಣಿಯ ವೈದ್ಯರಾದ ಡಾ. ರಮೇಶ ಗುಳ್ಳ ಅವರು, ಜಲಯೋಗದಿಂದಲೇ ಸಾಧನೆಯ ಜತೆಗೆ ಸಾರ್ಥಕ ಬದುಕು ನಡೆಸುತ್ತಿರುವ ವಿಲಾಸರಾವ್ ಕುಲಕರ್ಣಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಅವರು, ವಿಲಾಸರಾವ್ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ, ಮನಸ್ಸನ್ನೇ ಗುರುವಾಗಿಸಿಕೊಂಡು ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಕ್ಲಿಷ್ಟಕರ ಯೋಗ ಭಂಗಿಗಳನ್ನು ನೀರಿನಲ್ಲಿ ಲೀಲಾಜಾಲವಾಗಿ ಪ್ರದರ್ಶಿಸುವುದು ವಿಸ್ಮಯಕಾರಿ ಎಂದು ಬಣ್ಣಿಸಿದ್ದಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಜಲಯೋಗ ಮತ್ತು ಈಜಲು ಯಾವುದೇ ತೊಂದರೆ ಇಲ್ಲ, ಆದರೆ ಬೇಸಿಗೆಯಲ್ಲಿ ಅನೇಕ ಬಾವಿಗಳು ಬತ್ತುವುದರಿಂದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ಸರ್ಕಾರ ಮತ್ತು ಜನಪ್ರತಿನಿಧಿಗಳು ತಾಲೂಕಿನ ಜನತೆಗೆ ಅನುಕೂಲವಾಗುವಂತೆ ಈಜು ಕೊಳವನ್ನು ನಿರ್ಮಿಸಬೇಕು ಎಂದು ವಿಲಾಸರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ. ಯೋಗ ಬಲ್ಲವರಿಗೆ ರೋಗವಿಲ್ಲ ಎಂಬ ಮಾತಿನಂತೆ ವಿಲಾಸರಾವ್ ಕುಲಕರ್ಣಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
- ರಾಜ್ಯದಲ್ಲಿ ಒಟ್ಟು 1.53 ಲಕ್ಷ ಅನರ್ಹ ವ್ಯಕ್ತಿಗಳ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಲಾಗಿದ್ದು, ಅವರ ಪಿಂಚಣಿ ಸೌಲಭ್ಯವನ್ನು ನಿಲ್ಲಿಸಲಾಗಿದೆ.1
- ಅಮರ ವಾಹಿನಿ ಕನ್ನಡ ನ್ಯೂಸ್ ವರದಿಯ ಪ್ರಕಾರ, ಕತ್ತಿ ಸಾಹುಕಾರ್ ಮತ್ತು ಜಾರಕಿಹೊಳಿ ಸಾಹುಕಾರ್ಗಳ ಸಮಾಗಮ ನಡೆದಿದೆ.1
- ಜಮಖಂಡಿಯಲ್ಲಿ ರೈತ ಕುಟುಂಬವೊಂದು ಗಂಭೀರ ಆರೋಪ ಮಾಡಿದೆ. ಪಶುವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಆಕಳು ಸಾವನ್ನಪ್ಪಿದೆ ಎಂದು ಕುಟುಂಬ ಹೇಳಿದೆ.1
- ಡಾ. ಅಂಬೇಡ್ಕರ್ ಅವರು ಅಜ್ಞಾನವನ್ನು ದೂರಗೊಳಿಸಿ, ಜ್ಞಾನದ ಬೆಳಕನ್ನು ಹರಡಿದ ಯುಗಪುರುಷರಾಗಿದ್ದಾರೆ.1
- ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಭಾಗದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ವಿಸ್ತರಣಾ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ, ನಿಂಗಾಪುರ, ಹಲಕಿ, ಬೊಮ್ಮನಬುದ್ನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರಕ್ಕೆ ಎಂಟನೇ ದಿನಕ್ಕೆ ತಲುಪಿದೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾವ ಬಳಸಿ ದಲ್ಲಾಳಿಗಳ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, “ನಮ್ಮ ಭೂಮಿ ನಮ್ಮ ಹಕ್ಕು, ಕಾರ್ಖಾನೆ ಬೇಡವೇ ಬೇಡ” ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ವರ್ತನೆ ವಿರುದ್ಧವೂ ರೈತರು ತೀವ್ರ ವಾಗ್ವಾದ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ರೈತ ಮುಖಂಡ ಶಾಂತೇಶ ಹಂಪಿಹೊಳಿ, ತಾವು ವಿದ್ಯಾವಂತರಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾರ್ಖಾನೆಯು ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ವಿಚಾರಣೆಯ ಹೆಸರಿನಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ಅನುಮತಿ ಪಡೆದಿದೆ ಎಂಬುದು ರೈತರ ಗಂಭೀರ ಆರೋಪವಾಗಿದೆ. ಅತಿಯಾದ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ದುರ್ಬಳಕೆಯಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ವಿಸ್ತರಣೆಯನ್ನು ತಡೆಯುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಶಂಕರಗೌಡ ಹಿರೇಗೌಡರ, ಸುರೇಶ ಕಿವುಡಿ, ಶೈಲು ಹಂಪಿಹೊಳಿ, ರಂಗಪ್ಪ ತುಳಶಿಗೇರಿ, ಗಣಪತಿ ಹಂಪಿಹೊಳಿ, ಸುನಿಲ್ ನಾವಿ, ಹನುಮಂತ ಕಿವುಡಿ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.1
- ವಿಜಯಪುರ ಜಿಲ್ಲೆಯ ಸಂಸದ ರಮೇಶ್ ಜಿಗಜಿನಗಿ ಅವರ ಹೇಳಿಕೆಯನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಭಾನುವಾರ ಹೇಳಿದ್ದಾರೆ. ಜಿಗಜಿನಗಿ ಹಿರಿಯರು ಮತ್ತು ಖರ್ಗೆ ಕಿರಿಯರಾಗಿದ್ದು, ಇಬ್ಬರೂ ದಲಿತ ಸಮಾಜಕ್ಕೆ ಸೇರಿದವರಾಗಿದ್ದಾರೆ ಎಂದು ಅಂಗಡಿ ವಿವರಿಸಿದರು. ಹಿರಿಯರು ಕಿರಿಯರಿಗೆ ಬುದ್ದಿವಾದ ಹೇಳುವಂತೆ, ಖರ್ಗೆ ಅವರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಖಾತೆ ನಿರ್ವಹಿಸುತ್ತಿದ್ದಾರೆ ಎಂದರು. "ನಮಗೂ ನಿಮಗೂ ಆರ್ ಎಸ್ ಎಸ್ ಸಹವಾಸ ಬೇಡ" ಎಂಬುದು ಜಿಗಜಿನಗಿ ಅವರ ಮಾತಿನ ಅರ್ಥ ಎಂದು ಅಂಗಡಿ ಸ್ಪಷ್ಟಪಡಿಸಿದರು.1
- ಚಿತ್ರನಟ ಚೇತನ್ ಅಹಿಂಸಾ ಅವರು ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಆರೋಪಿಸಿದ್ದಾರೆ. ಬೀಳಗಿಯ ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡದೆ ಕೇವಲ ಬೆಂಗಳೂರಿಗೆ ಆದ್ಯತೆ ನೀಡಿ ಈ ಭಾಗದ ಜನರಿಗೆ ಹಾಗೂ ಯುವಕರಿಗೆ ಅನ್ಯಾಯ ಮಾಡುತ್ತಾ ಬಂದಿವೆ ಎಂದರು. ಇದರಿಂದ ಜನರು ರೋಸಿ ಹೋಗಿದ್ದಾರೆ ಎಂದು ಅವರು ತಿಳಿಸಿದರು. ಚೇತನ್ ಅಹಿಂಸಾ ಅವರು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚರಿಸಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ, ದಲಿತ ಸಂಘ, ಬಹುಜನ ಸಂಘ, ಕಾರ್ಮಿಕ ಸಂಘ, ಭ್ರಷ್ಟಾಚಾರ ವಿರೋಧಿ ಸಂಘ, ಪರಿಸರವಾದಿ ಸಂಘ, ರೈತ ಸಂಘ ಮತ್ತು ಮಹಿಳಾ ಸಂಘಗಳ ಜೊತೆಗೂಡಿ ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣ ಮಾಡಿ ಬರುವ ಚುನಾವಣೆಯಲ್ಲಿ ಸಂವಿಧಾನದ ಶಕ್ತಿಯನ್ನು ಕಟ್ಟಲಾಗುವುದು ಎಂದು ತಿಳಿಸಿದರು. ಈಗಿರುವ ನಾಯಕರು ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿಲ್ಲ ಮತ್ತು ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಆಸಕ್ತಿ ಯಾರ ಮನಸ್ಸಿನಲ್ಲಿಯೂ ಇಲ್ಲ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಅವರು ಟೀಕಿಸಿದರು. ಮುಂಬರುವ 2028ರ ಚುನಾವಣೆಗೆ ಹೊಸ ಪಕ್ಷವನ್ನು ಕಟ್ಟಿ, ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಚೇತನ್ ಘೋಷಿಸಿದರು. ತಾವು ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಯುವಕರ ಸಂಘಟನೆಯನ್ನು ಮಾಡುತ್ತಿದ್ದೇನೆ ಮತ್ತು ಎಲ್ಲ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಪ್ರವೀಣಗೌಡ ಪಾಟೀಲ್, ಹನಮಂತ ಜಲ್ಲಿ, ಭೀಮಸಿ ಮುತ್ತಲದಿನ್ನಿ, ಮಂಜುನಾಥ್ ಹೂಗಾರ್, ಶ್ರೀಕಾಂತ್ ಬಾಡಗಂಡಿ ಸೇರಿ ಅನೇಕರು ಉಪಸ್ಥಿತರಿದ್ದರು.1
- ರಾಯಭಾಗದಲ್ಲಿ ರಾಜಾರಾಮ ಮೋಹಿತೆ ಕುಟುಂಬದ ಸದಸ್ಯರು ನೇತ್ರದಾನ ಮಾಡುವ ಸಂಕಲ್ಪ ಮಾಡಿದ್ದಾರೆ.1