ಭಕ್ತರ ಆರಾಧ್ಯ ಧೈವ ನವಿಲೇಯ ಜಡೆಶಂಕರಲಿಂಗ ; ಚನ್ನಪ್ಪ ಹರಸೂರ... ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವ ಗಣ್ಯ ಮಾನ್ಯರು. ಕಂದಗಲ್ಲ : ಸಮೀಪದ ಸುಕ್ಷೇತ್ರ ನವಲಿ ಗ್ರಾಮದ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಅಕ್ಷತ್ತದಗಿ ಅಮಾವಾಸ್ಯೆಯ ದಿವಸ ವಿಶೇಷ ಪೂಜೆ, ಅನ್ನದಾಸೋಹ, ಉಪನ್ಯಾಸ, ಹಾಗೂ ಸನ್ಮಾನ ಕಾರ್ಯಕ್ರಮವನ್ನು ಶಹಾಪುರ ಸಿಂಪಿ ಸಮಾಜ ಬಾಂಧವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು, ತನು ಮನ ಧನದೊಂದಿಗೆ ಸೇವೆ ಸಲ್ಲಿಸಿದ ಇವರನ್ನು ದಾಸೋಹ ಸಮಿತಿಯಿಂದ ಅಭಿನಂಧಿಸಲಾಯಿತು. ಬಣಗಾರ್ ಸಿಂಪಿ ಸಮಾಜದ ಹಾಗೂ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರತಿ ಊರಿನ ಸಮಾಜ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಜಡೆಶಂಕಲಿಂಗನ ಕ್ರಪೆಗೆ ಪಾತ್ರರಾಗಬೇಕೆಂದು ಬೆಂಗಳೂರ ಬಣಗಾರ್ ಸಮಾಜದ ಅಧ್ಯಕ್ಷರು ಹಾಗೂ ನಿವೃತ್ತ ವಕೀಲರಾದ ಚೆನ್ನಪ್ಪ ಹರಸೂರು ಮಸ್ಕಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು . ಶಹಾಪುರ ಸಿಂಪಿ ಸಮಾಜದ ತಾಲೂಕ್ ಅಧ್ಯಕ್ಷ ನಟರಾಜ ಗಟ್ಟಿನ ಮತ್ತು ಯಾದಗಿರಿ ಜಿಲ್ಲಾಧ್ಯಕ್ಷ ಚನ್ನಪ್ಪ ಗಿಂಡಿ ಅವರಿಗೆ ದಾಸೋಹ ಸೇವೆ ಸಲ್ಲಿಸಿದಕ್ಕಾಗಿ ದಾಸೋಹ ಸಮಿತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಆಗಬೇಕು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಜಡೆಶಂಕರಲಿಂಗ ದೇವರ ಆಶೀರ್ವಾದ ಪಡೆದುಕೊಳ್ಳಬೇಕೆಂದು. ಬಣಗಾರ ಫೌಂಡೇಶನ್ ಸುರಪುರದ ಅಧ್ಯಕ್ಷ ವಸಂತಕುಮಾರ ಬಣಗಾರ ಮು ಅಥಿತಿಗಳಾಗಿ ಮಾತನಾಡಿದರು. ಬಣಗಾರ್ ಸಿಂಪಿ ಸಮಾಜದ ಆರಾಧ್ಯ ದೈವ ಕುಲದೇವರು ಸುಕ್ಷೇತ್ರ ಜಡೆಯ ಶಂಕರಲಿಂಗ ದೇವಸ್ಥಾನ ಕೃಷ್ಣಾ ನದಿಯ ತಟದಲ್ಲಿ ಅತ್ಯಂತ ಸುಂದರವಾದ ಪರಿಸರದಲ್ಲಿ ನೋಡುಗರ ಮನ ಸೆಳೆಯುತ್ತದೆ. ಶ್ರೀ ಜಡೆ ಶಂಕರಲಿಂಗ ದೇವರ ಮಹಿಮೆ ಅಪಾರವಾದದ್ದು. ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ ಪುರಾಣ ಪ್ರವಚನಗಳು ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿ ಜರುಗಬೇಕೆಂದು ಮಲ್ಲಿಕಾರ್ಜುನ್ ಪಾಟೀಲ್ ಶಿಕ್ಷಕರು ಶಹಾಪುರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಂದಗಲ್ಲ ಗ್ರಾಮದ ಮೂಲ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವೀರೇಶ ಚನ್ನಪ್ಪ ಸಿಂಪಿ . ಬಸವರಾಜ ಗಟ್ಟಿನ, ಬಸವರಾಜ್ ಶಾಬಾದಿ, ಹಾಗೂ ಸಮಾಜದ ಮುಖಂಡರು, ವೇದಿಕೆ ಮೇಲಿದ್ದರು ಕಾರ್ಯಕ್ರಮದಲ್ಲಿ ಗಿರಿಯಪ್ಪ ಪಾಟೀಲ್. ಶ್ರೀಧರ ಮಸ್ಕಿ, ಬಸವರಾಜ ಸಿಂಪಿ, ರವೀಂದ್ರ ಸಿದ್ದು ಗಿಂಡಿ, ವಾಸು ಆನೆಹೊಸೂರ, ಸಂತೋಷ್ ಹರಸೊರ. ಪಂಚಾಕ್ಷರಿ ಹಿರೇಮಠ, ಹನುಮೇಶ ಹೂಗಾರ. ವಿರುಪಾಕ್ಷ ಸಿಂಪಿ ಕಾಶಿನಾಥ್ ಸಿರಗೋಜಿ ಈರಪ್ಪ ಸಿಂಪಿಗೇರ, ಕುಮಾರಸ್ವಾಮಿ ಆದಪುರಮಠ, ಹಾಗೂ ಶಹಾಪುರ ಸಿಂಪಿ ಸಮಾಜದ ಮಹಿಳಾ ಮಂಡಳಿ ಸದಸ್ಯರು ಭಾಗವಹಿಸಿದ್ದರು. ವಿವಿಧ ಊರಿನ ಸಮಾಜ ಬಾಂಧವರು ಮತ್ತು ನವಲಿ ಸುತ್ತಮುತ್ತಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿದರು.
ಭಕ್ತರ ಆರಾಧ್ಯ ಧೈವ ನವಿಲೇಯ ಜಡೆಶಂಕರಲಿಂಗ ; ಚನ್ನಪ್ಪ ಹರಸೂರ... ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವ ಗಣ್ಯ ಮಾನ್ಯರು. ಕಂದಗಲ್ಲ : ಸಮೀಪದ ಸುಕ್ಷೇತ್ರ ನವಲಿ ಗ್ರಾಮದ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಅಕ್ಷತ್ತದಗಿ ಅಮಾವಾಸ್ಯೆಯ ದಿವಸ ವಿಶೇಷ ಪೂಜೆ, ಅನ್ನದಾಸೋಹ, ಉಪನ್ಯಾಸ, ಹಾಗೂ ಸನ್ಮಾನ ಕಾರ್ಯಕ್ರಮವನ್ನು ಶಹಾಪುರ ಸಿಂಪಿ ಸಮಾಜ ಬಾಂಧವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು, ತನು ಮನ ಧನದೊಂದಿಗೆ ಸೇವೆ ಸಲ್ಲಿಸಿದ ಇವರನ್ನು ದಾಸೋಹ ಸಮಿತಿಯಿಂದ ಅಭಿನಂಧಿಸಲಾಯಿತು. ಬಣಗಾರ್ ಸಿಂಪಿ ಸಮಾಜದ ಹಾಗೂ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರತಿ ಊರಿನ ಸಮಾಜ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಜಡೆಶಂಕಲಿಂಗನ ಕ್ರಪೆಗೆ ಪಾತ್ರರಾಗಬೇಕೆಂದು ಬೆಂಗಳೂರ ಬಣಗಾರ್ ಸಮಾಜದ ಅಧ್ಯಕ್ಷರು ಹಾಗೂ ನಿವೃತ್ತ ವಕೀಲರಾದ ಚೆನ್ನಪ್ಪ ಹರಸೂರು ಮಸ್ಕಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು . ಶಹಾಪುರ ಸಿಂಪಿ ಸಮಾಜದ ತಾಲೂಕ್ ಅಧ್ಯಕ್ಷ ನಟರಾಜ ಗಟ್ಟಿನ ಮತ್ತು ಯಾದಗಿರಿ ಜಿಲ್ಲಾಧ್ಯಕ್ಷ ಚನ್ನಪ್ಪ ಗಿಂಡಿ ಅವರಿಗೆ ದಾಸೋಹ ಸೇವೆ ಸಲ್ಲಿಸಿದಕ್ಕಾಗಿ ದಾಸೋಹ ಸಮಿತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಆಗಬೇಕು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಜಡೆಶಂಕರಲಿಂಗ ದೇವರ ಆಶೀರ್ವಾದ ಪಡೆದುಕೊಳ್ಳಬೇಕೆಂದು. ಬಣಗಾರ ಫೌಂಡೇಶನ್ ಸುರಪುರದ ಅಧ್ಯಕ್ಷ ವಸಂತಕುಮಾರ ಬಣಗಾರ ಮು ಅಥಿತಿಗಳಾಗಿ ಮಾತನಾಡಿದರು. ಬಣಗಾರ್ ಸಿಂಪಿ ಸಮಾಜದ ಆರಾಧ್ಯ ದೈವ ಕುಲದೇವರು ಸುಕ್ಷೇತ್ರ ಜಡೆಯ ಶಂಕರಲಿಂಗ ದೇವಸ್ಥಾನ ಕೃಷ್ಣಾ ನದಿಯ ತಟದಲ್ಲಿ ಅತ್ಯಂತ ಸುಂದರವಾದ ಪರಿಸರದಲ್ಲಿ ನೋಡುಗರ ಮನ ಸೆಳೆಯುತ್ತದೆ. ಶ್ರೀ ಜಡೆ ಶಂಕರಲಿಂಗ ದೇವರ ಮಹಿಮೆ ಅಪಾರವಾದದ್ದು. ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ ಪುರಾಣ ಪ್ರವಚನಗಳು ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿ ಜರುಗಬೇಕೆಂದು ಮಲ್ಲಿಕಾರ್ಜುನ್ ಪಾಟೀಲ್ ಶಿಕ್ಷಕರು ಶಹಾಪುರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಂದಗಲ್ಲ ಗ್ರಾಮದ ಮೂಲ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವೀರೇಶ ಚನ್ನಪ್ಪ ಸಿಂಪಿ . ಬಸವರಾಜ ಗಟ್ಟಿನ, ಬಸವರಾಜ್ ಶಾಬಾದಿ, ಹಾಗೂ ಸಮಾಜದ ಮುಖಂಡರು, ವೇದಿಕೆ ಮೇಲಿದ್ದರು ಕಾರ್ಯಕ್ರಮದಲ್ಲಿ ಗಿರಿಯಪ್ಪ ಪಾಟೀಲ್. ಶ್ರೀಧರ ಮಸ್ಕಿ, ಬಸವರಾಜ ಸಿಂಪಿ, ರವೀಂದ್ರ ಸಿದ್ದು ಗಿಂಡಿ, ವಾಸು ಆನೆಹೊಸೂರ, ಸಂತೋಷ್ ಹರಸೊರ. ಪಂಚಾಕ್ಷರಿ ಹಿರೇಮಠ, ಹನುಮೇಶ ಹೂಗಾರ. ವಿರುಪಾಕ್ಷ ಸಿಂಪಿ ಕಾಶಿನಾಥ್ ಸಿರಗೋಜಿ ಈರಪ್ಪ ಸಿಂಪಿಗೇರ, ಕುಮಾರಸ್ವಾಮಿ ಆದಪುರಮಠ, ಹಾಗೂ ಶಹಾಪುರ ಸಿಂಪಿ ಸಮಾಜದ ಮಹಿಳಾ ಮಂಡಳಿ ಸದಸ್ಯರು ಭಾಗವಹಿಸಿದ್ದರು. ವಿವಿಧ ಊರಿನ ಸಮಾಜ ಬಾಂಧವರು ಮತ್ತು ನವಲಿ ಸುತ್ತಮುತ್ತಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿದರು.
- ಭೀಮ ಬಲ ನ್ಯೂಸ್ 24×7 ಕನ್ನಡಬಾಗಲಕೋಟೆ, ಬಾಗಲಕೋಟೆ, ಕರ್ನಾಟಕಸೂಪರ್ ಸುದ್ದಿ8 hrs ago
- ಇಳಕಲ್ ತಾಲೂಕಿನ ವಜ್ಜಲ ಗ್ರಾಮದ ಮಹಿಳೆ ಶ್ಯಾವವ್ವ ಮಲ್ಲಪ್ಪ ವಾಲಿಕಾರ ವಯಸ್ಸು 48 ಇವರು ಸಿಡಿಲು ಬಡಿದು ಮೃತ ಪಟ್ಟಿದ್ದರು. ನಿನ್ನೆ ರಾತ್ರಿ ಸ್ಥಳಕ್ಕೆ ತಹಸಿಲ್ದಾರ ಅಮರೇಶ ಪಮ್ಮಾರ ಭೇಟಿ ನೀಡಿದರು1
- ಇಳಕಲ್ಲ : ಇಲ್ಲಿನ ಬಸವ ಕೇಂದ್ರ, ಚಿತ್ತರಗಿ ಶ್ರೀವಿಜಯ ಮಹಾಂತೇಶ ಸಂಸ್ಥಾನಮಠದ ವತಿಯಿಂದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಅಂಗವಾಗಿ ಜನಜಾಗೃತಿ ಪಾದಯಾತ್ರೆ ಹಾಗೂ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಸೋಮವಾರ ನಡೆಯಿತು. ಚಿತ್ತರಗಿ ಶ್ರೀವಿಜಯ ಮಹಾಂತೇಶ ಸಂಸ್ಥಾನಮಠದ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಗುರುಮಹಾಂತಶ್ರೀಗಳು ನೆರವೇರಿಸಿ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿದರು. ಶ್ರೀಮಠದಿಂದ ಆರಂಭವಾದ ಪಾದಯಾತ್ರೆ ಬಜಾರ ಬಸವನಗುಡಿ,ಕೊಪ್ಪರದಪೇಟೆ ಬನಶಂಕರಿ ದೇವಸ್ಥಾನ, ಪಶು ಆಸ್ಪತ್ರೆ, ಪೋಲಿಸ್ ಬಯಲು, ಸರಕಾರಿ ಶಾಲೆ ೧೦ ನಂಬರ್, ಮಹಾಂತೇಶ ಚಿತ್ರಮಂದಿರ, ನಗರಸಭೆ, ಕಂಠಿ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ, ಮಹಾಂತ ಗಂಗೋತ್ರಿ, ಪ್ರವಾಸಿ ಮಂದಿರ ಮಾರ್ಗವಾಗಿ ಬಸವೇಶ್ವರ ಸರ್ಕಲ್ ತಲುಪಿ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪಾದಯಾತ್ರೆಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಮಹಾಂತೇಶ ವಾಲಿ,ಕಾರ್ಯದರ್ಶಿ ಮಲ್ಲಯ್ಯ ಗಣಾಚಾರಿ, ಹುಚ್ಚಪ್ಪ ಬೆಳಗಲ್, ದೊಡ್ಡಪ್ಪ ಹಡಪದ ಸೇರಿದಂತೆ ಶ್ರೀವಿಜಯ ಮಹಾಂತೇಶ ತರುಣ ಸಂಘ, ಅಕ್ಕನ ಬಳಗ, ಯುವ ಸೇವಾ ಬಳಗ,ಜಾಗತಿಕ ಲಿಂಗಾಯತ ಮಹಾಸಭಾ, ನೀಲಾಂಬಿಕಾ ಸೇವಾ ಬಳಗ, ಕದಳಿ ವೇದಿಕೆ, ವೀರರಾಣಿ ಚನ್ನಮ್ಮ ಬಳಗ,ವಚನ ಸಾಹಿತ್ಯ,ಶರಣ ಸಾಹಿತ್ಯ ಪರಿಷತ್ತ, ಕಂಠಿ ವೇದಿಕೆ,ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ತ ಪದಾಧಿಕಾರಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.2
- ಕರ್ನಾಟಕದಲ್ಲಿ ಎಷ್ಠೇ ಬಡತನವಿರಲ್ಲಿ ಹೆತ್ತ ಮಕ್ಕಳಿಗೆ ಏನು ಕಡೆಮೆ ಮಾಡಲ ಅನ್ನೋದಕ್ಕೆ ಇದೆ ಉದಾಹರಣಿ. ತಂದೆ ಹೇಳುತಾನೆ ನಮಗೆ ಕಷ್ಠ ಇದ್ದಾಂಗೆ ನಿಮಗೆ ಇಲ್ಲಾ ಕಷ್ ಪಟ್ಟು ಓದಿ ನಿಮ್ಮ ತಾಯಿ ತಂದೆ ಹೆಸರು ತಂದರೆ ಸಾಕು ಇದು ತಂದೆಯ ಮಾತ್ತು1
- ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವಂತ ಎಲ್ಲಾ ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಬೇಸಿಗೆ ಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ಆಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರು ಮೇವುನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೇಸಿಗೆ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಅದರಲ್ಲೂ ಡಿಬಿ ಓಟಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಬೇಸಿಗೆ ಮುಗಿಯುವವರೆಗೆ ನೀರಿನ ಅಭಾವ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು,ಬಾಸಲಾಪುರ, ಮುಗಳಿ, ಗುಳಗುಳಿ ಪಂಚಾಯತಿ ಅಮರಗಟ್ಟಿ,ರುದ್ರಾಪುರ,ರಾಂಪುರ, ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು,ಬಾಸಲಾಪುರಲ್ಲಿ ಡಿಬಿಒಟಿ ನೀರು ಪೂರೈಕೆ ಸರಿಯಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು, ಚಿಕ್ಕಮನ್ನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಡಿಬಿಒಟಿ ನೀರು ಪೂರೈಕೆ ಸರಿ ಇಲ್ಲ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದರು,ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು ,ವಿದ್ಯುತ್ ವ್ಯತ್ಯಯಗಳಿಂದ ಸಹ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಶ್ಮಿ ನಡುವಿನಮನಿ ಹೇಳಿದರು,ಸವಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರು ದಿನಕ್ಕೊಂದು ಸರಿ ನೀರನ್ನು ಬಿಡಲಾಗುತ್ತದೆ, ಐದು ಲಕ್ಷ ಲೀಟರ ಬದಲು ಕೇವಲ ಎರಡು ಲಕ್ಷ ಲೀಟರ್ ನೀರು ಬರುತ್ತಿದೆ ಎಂದು ಪಿಡಿಒ ಮೆಣಸಗಿ ತಿಳಿಸಿದರು,ಹಿರೇಹಾಳ ಪಂಚಾಯತಿ ವ್ಯಾಪ್ತಿಯ ಯರೇಕುರುಬಾನಾಳ ನೀರಿನ ಸಮಸ್ಯೆ ಇದೆ,ನೈನಾಪುರ ,ಬಸರಕೋಡ ನವಗ್ರಾಮ,ಚಿಕ್ಕಳಗುಂಡಿ ಹಿರೇಅಳಗುಂಡಿ,ಹಾಲಕೆರೆ,ಮಾಟರಂಗಿ, ಗೊಗೇರಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಬೇಕು, ನೀರನ್ನು ಪರೀಕ್ಷೆ ಮಾಡದೇ ಸರಬರಾಜು ಮಾಡಬಾರದು ಶುದ್ಧ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತಿ ಆಡಳಿತ ಅಧಿಕಾರಿಗಳು ಸಹ ಹೆಚ್ಚಿನ ಜವಾಬ್ದಾರರಾಗಿದ್ದಿರಿ ನೀರಿನ ಸಮಸ್ಯೆ ಬಾರದ ಹಾಗೆ ನೀವು ಜಾಗೃತ ವಹಿಸಬೇಕು,ಜಾನುವಾರುಗಳಿಗೆ ಮೇವು ನೀರು ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು, ಸಭೆಯಲ್ಲಿ ರೋಣ ತಾಲೂಕು ಗಜೇಂದ್ರಗಡ ತಾಲೂಕು ಮುಂಡರಗಿ ತಾಲೂಕು ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- Post by Onlinetv24x71
- ಕಾಯಕ ದಾಸೋಹದ ಹರಿಕಾರರು ಮಹಾಮಾನವತಾವಾದಿ ಜಗಜ್ಯೋತಿ ವಿಶ್ವಗುರು ಶ್ರೀ ಬಸವಣ್ಣನವರ ಜಯಂತಿಯನ್ನು ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಳಕಲ್ ನಗರದ ಅವರ ಗೃಹ ಕಚೇರಿಯಲ್ಲಿ ಆಚರಿಸಿದರು. ಈಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.1