ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile
ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile
- ತಾಳಿಕೋಟೆ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅಪ್ಪಾಸಾಹೇಬಗೌಡ ಮೂಲಿಮನಿ ಆಯ್ಕೆ ತಾಳಿಕೋಟೆ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ದೊರೆಯುವ ಗೌರವಗಳಲ್ಲಿ ಒಂದಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಳಿಕೋಟೆ ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅಪ್ಪಾಸಾಹೇಬಗೌಡ ಮೂಲಿಮನಿ ಅವರು ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ತಾಳಿಕೋಟೆ ತಾಲ್ಲೂಕಿನಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಈ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಶಿಕ್ಷಕರಾಗಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದದಿಂದಲೂ ಅಪ್ಪಾಸಾಹೇಬಗೌಡ ಮೂಲಿಮನಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಹ ಶಿಕ್ಷಕರು ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶುಭ ಹಾರೈಸಿದರು. ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸೇವೆಗೆ ಇದೀಗ ಜಿಲ್ಲಾ ಮಟ್ಟದ ಗೌರವ ದೊರೆತಿರುವುದು ವಿಶೇಷವಾಗಿದೆ. ಅವರ ಈ ಸಾಧನೆ ತಾಳಿಕೋಟೆ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ, ಹೆಚ್ಚಿನ ಗೌರವ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದ ಹಾಗೂ ಶಿಕ್ಷಣಾಭಿಮಾನಿಗಳು ಶುಭ ಹಾರೈಸಿದರು. ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.1
- ಅಥಣಿಯಲ್ಲಿ ಎಸ್ಐಆರ್-2026 (SIR-2026) ವಿಶೇಷ ಮತದಾರರ ನೋಂದಣಿ ಜಾಗೃತಿ ಅಭಿಯಾನ ಯಶಸ್ವಿ ಅಥಣಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ರ ಅಂಗವಾಗಿ ಅಥಣಿಯ ಕೆ.ಇ. ಲೋಕಪೂರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾರರ ನೋಂದಣಿ ಕುರಿತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸಲು SVEEP ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅತಿಥಿಗಳು ಮತ್ತು ಅಧಿಕಾರಿಗಳು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಯುವ ಮತದಾರರು ಹೊಸ ಮತದಾರರ ನೊಂದಣಿ, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಟಿ.ಪಿ.ಒ. ಆದ ಶ್ರೀ ಬಿ.ಬಿ. ಗಾವಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೆ.ಇ. ಲೋಕಪೂರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್.ಎನ್. ನಾಯಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಎನ್. ಹಿರೇಮಠ, ಜೆ.ಡಿ. ಪವಾರ, ಕಿರಣ ಕಳ್ಳಿಮಠ, ಮಹೇಶ ಮಾಂಗ, ವಿಶ್ವನಾಥ ಮೋರೆ, ಕಿರಣಗ ಗೆಜ್ಜಿ ಸೇರಿದಂತೆ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಮತದಾರರ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಿದರು. ಎಸ್.ವಿ.ಇ.ಇ.ಪಿ. (SVEEP) ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.4
- ವಿಶಾಲ ಕೆರೆ, ಪ್ರಶಾಂತ ವಾತಾವರಣ. ಮನಸ್ಸಿಗೆ ಮುದ ನೀಡುವ ಸಂಗೀತ ವಾದ್ಯಗಳ ನಿನಾದ. ಕತ್ತಲೆ ರಂಗು ತುಂಬಿದ ಲೇಸರ್ ಶೋ. ಕಗ್ಗತ್ತಲ ಬಾನಲ್ಲಿ ಕಲ್ಯಾಣ ಕರ್ನಾಟಕ ವೈಶಿಷ್ಟ್ಯ ಸ್ಫುಟವಾಗಿ ಪರಿಚಯಿಸಿದ ಡ್ರೋನ್ ಶೋ. ನಭದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳು... ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯ ನಗರದ ಶರಣಬಸವೇಶ್ವರ ಅಪ್ಪ ಕೆರೆ ಆವರಣದಲ್ಲಿ ಬುಧವಾರ ರಾತ್ರಿ ಕಂಡ ದೃಶ್ಯಗಳಿವು. #ಕಲಬುರಗಿ #ಲೇಸರ್ಶೋ #ಕಲ್ಯಾಣಕರ್ನಾಟಕ #ಉತ್ಸವ #ಸಿಎಂ #ಡಿಕೆಶಿವಕುಮಾರ್ #Kalburagi #lasershow #Prajavani #PrajavaniVideo1
- ಬಾಗಲಕೋಟೆ: ಒಂದು ತಿಂಗಳ ಕಾಲ ಸೇವಾಸಂಕಲ್ಪ ಅಭಿಯಾನದ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್1
- ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ತಾಳಿಕೋಟಿ ವರದಿ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ಬಿಸಿಲಿನ ತಾಪದಿಂದ ತಲೆ ಸುತ್ತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ರೈತ ಮುಖಂಡರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯ ಬಳಿಕ ಅರವಿಂದ ಕುಲಕರ್ಣಿ ಅವರು ಚೇತರಿಸಿಕೊಂಡಿದ್ದು, ಧರಣಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಎಂದು ರೈತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ್ ಕುಲಕರ್ಣಿ, ಉಮೇಶ್ ವಾಲಿಕಾರ್, ಬಾಲಪ್ಪ ಗೌಡ ಲಿಂಗದಳ್ಳಿ ವಿಟ್ಟಲ್ ಬಿರಾದರ್, ಮಲ್ಲನಗೌಡ ಹಗರಟಿಗಿ, ಗುರುನಾಥ್ ರೆಡ್ಡಿ, ಪವಿತ್ರ ಬಡಿಗೇರ್, ಸಾವಿತ್ರಿ ಪಂದಗನೂರ್, ಬಸ್ಸು ಮಾಲಿ ಪಾಟೀಲ್, ಗುರುಲಿಂಗಪ್ಪ ಪಡಸಲಗಿ, ಮುತ್ತು ಗೌಡ ಪರ್ಸನಳ್ಳಿ, ರಾಜು ಗೌಡ ಆನಂದ್ ರೆಡ್ಡಿ, ಶಿವಶರಣಪ್ಪ ಸಾಹುಕಾರ್ ಇನ್ನು ಅನೇಕ ರೈತ ಮುಖಂಡರು ಭಾಗಿಯಾಗಿದ್ದರು1
- ರಬಕವಿ-ಬನಹಟ್ಟಿ: ಇಂದಿರಾ ಕ್ಯಾಂಟೀನ್ ಉದ್ಘಾಟನಾ ವೇಳೆ ವಾಗ್ವಾದ ಸಚಿವರ ಸಮ್ಮುಖದಲ್ಲೇ ಪರಸ್ಪರ ವಾಗ್ದಾಳಿ ರಬಕವಿ-ಬನಹಟ್ಟಿ ತಾಲೂಕು ಬನಹಟ್ಟಿ ನಗರದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಚಿವರ ಸಮ್ಮುಖದಲ್ಲೇ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ವೇಳೆ ನಡೆದ ಈ ವಾಗ್ವಾದದಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಾಗ್ವಾದಕ್ಕೆ ಕಾರಣವೇನು? ಯಾವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಯಿತು ಸಚಿವರ ಸಮ್ಮುಖದಲ್ಲೇ ಈ ಬೆಳವಣಿಗೆಗೆ ಕಾರಣವೇನು1
- Dad and kids challenge! #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad #dadchallenge #dadandson #daddaughterchallenge #familychallenge #dadlife Multi DO & Ryan's World The Lift/Balance Challenge Humorous Routines #DadSonChallenge Dad and kids challenge! #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad #dadchallenge #dadandson #daddaughterchallenge #familychallenge #dadlife Multi DO & Ryan's World The Lift/Balance Challenge Humorous Routines #DadSonChallenge3
- ಕಿತ್ತೂರು ಹೋರಾಟದಲ್ಲಿ ಚೆನ್ನಮ್ಮಳ ತ್ಯಾಗ, ದೇಶ ಪ್ರೇಮ ಅಪಾರ :ಸಂಶೋಧಕ ಯ. ರು. ಪಾಟೀಲ ಅಥಣಿ :ಕಿತ್ತೂರು ಹೋರಾಟದಲ್ಲಿ ತ್ಯಾಗ, ದೇಶ ಪ್ರೇಮ ಅಪಾರವಾಗಿತ್ತು. ಕಿತ್ತೂರು ಸೈನಿಕರು ಭಂಟರು,ವೀರರು, ಪ್ರಾಣದ ಹಂಗು ತೊರೆದು ಹೋರಾಟ ಮಾಡುವವರಾಗಿದ್ದರು.ವೇತನಕ್ಕಾಗಿ ಕೆಲಸ ಮಾಡುವವರಾಗಿರಲಿಲ್ಲ. ದೇಶ ಪ್ರೇಮಿಗಳಾಗಿದ್ದರು. ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸವಾಯಿ ಮಲ್ಲಸರ್ಜನಂತಹ ಅನೇಕ ವೀರರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಬೆಳಗಾವಿಯ ಸಂಶೋಧಕ ವಾಗ್ಮಿ ಯ. ರು. ಪಾಟೀಲ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ಕನ್ನಡ ವಿಭಾಗ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ 'ಕಿತ್ತೂರು ಸಂಸ್ಥಾನ ಮತ್ತು ರಾಣಿ ಚನ್ನಮ್ಮ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಸಿಂಹಾಸನಕ್ಕಾಗಿ ತಮ್ಮ ಮಗನಿಗೆ ಭೈರವ ಕಂಕಣ ಕಟ್ಟಿದ ಮಹಾನ್ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮ. ಐತಿಹಾಸಿಕ ಮಾಹಿತಿಗಳು ಮತ್ತು ಹೊಸ ಸಾಹಿತ್ಯ ಕೃತಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಪ್ರಭಾರ ಪ್ರಾಚಾರ್ಯರಾದ ಪ್ರೊ. ಶಾಂತಿನಾಥ ಬಳೋಜ ಅವರು ಕಾರ್ಯಕ್ರಮ ಉದ್ಘಾಟಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಹೋರಾಟಗಾರ್ತಿ ಚೆನ್ನಮ್ಮ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಹೊಂದಿದ್ದಾರೆ ಎಂದು ಸ್ಮರಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯ. ರು. ಪಾಟೀಲ ಅವರು "ಕಿತ್ತೂರು ಸಂಸ್ಥಾನದ ಮೇಲೆ ಇತ್ತೀಚಿಗೆ ಬಂದ ಸಾಹಿತ್ಯ ಕೃತಿಗಳ ಅವಲೋಕನ" ಕುರಿತು ವಿಶೇಷ ಉಪನ್ಯಾಸ ನೀಡಿದರು. ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಕಾರ್ಯಕ್ರಮದ ಮೂಲಕ ಕಿತ್ತೂರು ಸಂಸ್ಥಾನದ ಪರಿಚಯ ಅವಳ ಶೂರತನ, ವೀರತನ, ಧೈರ್ಯ ನಮಗೆ ಮತ್ತೆ ಮತ್ತೆ ಪುಟಿದೇಳಲು ಹುಮ್ಮಸ್ಸು ತುಂಬುತ್ತೆ.ಕಿತ್ತೂರು ಚೆನ್ನಮ್ಮನ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕು. ದೇಶ, ದೇಶಪ್ರೇಮ, ಸ್ವಾಭಿಮಾನ, ನಮ್ಮ ನರನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ. ತ್ಯಾಖರೇ ಎಂಬ ಇಂಗ್ಲಿಷ್ ಅಧಿಕಾರಿ ಹತ್ಯೆ ಆಗುತ್ತದೆ. ಸಹಾಯಕ ಸೈನ್ಯ ಪದ್ಧತಿ ಮೂಲಕ ಕಿತ್ತೂರಿನ ಮೇಲೆ ದಾಳಿ ಮಾಡುತ್ತಾರೆ. ಬ್ರಿಟಿಷರಿಗೆ ನಮ್ಮ ದುಷ್ಟ ಜನರ ಸಹಕಾರದಿಂದ ಮೂರನೇ ದಾಳಿ ಮೂಲಕ ಅರಮನೆ ಧ್ವಂಸ ಆಗುತ್ತದೆ.ಆದರೆ ಇಂದು ಚೆನ್ನಮ್ಮಳಿಗೆ ಸಾಕಷ್ಟು ಪ್ರಚಾರ ಸಿಗದೇ ಇರೋದಕ್ಕೆ ನಮ್ಮ ವ್ಯವಸ್ಥೆ ನಿರ್ಲಕ್ಷ ಕಾರಣ ಎಂದು ಹೇಳಿದರು. ಈ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂತೋಷ ಉಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಬಸಯ್ಯ ಮಠಪತಿ ಅವರು ಉಪಸ್ಥಿತರಿದ್ದರು. ಈ ವೇಳೆ ಡಾ ವಿಜಯ ಕಾಂಬಳೆ, ಡಾ ಪದ್ಮಶ್ರೀ, ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಪ್ರೋ ಪಿ ಎಲ್ ಪೂಜಾರಿ,ಡಾ. ಶಿವಾನಂದ ಹೆಳವರ,ಡಾ. ಆರ್ ಜಿ ಗೊಂಧಳೆ,ಡಾ. ಎ ಜಿ ಮಾದರ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.4
- ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ ನಿಯಮಿತ ಇದರ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು. ತಾಳಿಕೋಟಿ ವರದಿ ಲಿಂಗದಹಳ್ಳಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ. ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಆರಂಭಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀಮತಿ ಸೌಮ್ಯ ಆರ್.ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ ಸಂಘದ ಒಂದು ವರ್ಷದ ಚಟುವಟಿಕೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಹಾಜರಿದ್ದ ಶೇರುದಾರರು ಸಂಘದ ಅಭಿವೃದ್ಧಿಗಾಗಿ ಕೆಲವು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ ಬಸನಗೌಡ ಬಸರಕೋಡ ಅವರು ಮಾತನಾಡಿ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು. ಶಿಕ್ಷಕ ಅಪ್ಪಸಾಹೇಬಗೌಡ ಮೂಲಿಮನಿ ಕಾರ್ಯಕ್ರಮವನ್ನು ಸುಂದರವಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಇವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ , ಗಂಗಮ್ಮ ನಾಡಗೌಡ ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ,ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.1