ನಂಜನಗೂಡಿನಲ್ಲಿ ಮೇ.3 ರಂದು ಹೊನಲು ಬೆಳಕಿನ ನಾಡಕುಸ್ತಿ ಪಂದ್ಯಾವಳಿ ನಂಜನಗೂಡು: ಜನಪ್ರಿಯ ನಾಯಕ ದಿವಂಗತ ಆರ್. ಧ್ರುವನಾರಾಯಣ್ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಂಕರಪುರ ಹತ್ತು ಜನಗಳ ಗರಡಿ ವತಿಯಿಂದ ನಂಜನಗೂಡು ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ನಾಡ ಕುಸ್ತಿ ಪಂದ್ಯಾವಳಿಯನ್ನು ಮೇ 3 ರಂದು ಆಯೋಜಿಸಿರುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದರು. ನಂಜನಗೂಡು ತಾಲ್ಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಂಸದರು ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕನಾಗಿದ್ದ ದಿ.ಆರ್. ಧ್ರುವನಾರಾಯಣ್ ರವರ ಕೊಡುಗೆ ಅಪಾರ ಮತ್ತು ಅನನ್ಯ. ಅವರ ಜನ ಸೇವೆಗಳು ಅವಿಸ್ಮರಣೀಯ. ನಮ್ಮಂತಹ ಕಿರಿಯ ನಾಯಕರನ್ನು ರಾಜಕೀಯವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಂಜನಗೂಡು ತಾಲ್ಲೂಕಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. 65ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ನಾಡು ಕುಸ್ತಿ ಪಂದ್ಯಾವಳಿ ಆಯೋಜಿಸಿರುವುದಾಗಿ ತಿಳಿಸಿದರು. ಮೇ 3 ರಂದು ಭಾನುವಾರ ನಡೆಯುವ ಕುಸ್ತಿ ಪಂದ್ಯಾವಳಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಒಟ್ಟು 41 ಜೊತೆ ಕುಸ್ತಿ ಪಟುಗಳು ಗೆಲುವಿಗಾಗಿ ತೊಡೆತಟ್ಟಲಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಪಂಜಾವಳಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಕುಸ್ತಿಯ ವ್ಯವಸ್ಥಾಪಕರಾದ ಜಿಮ್ ರಘು, ಪೈಲ್ವಾನ್ ನಟೇಶ್, ಪೈಲ್ವಾನ್ ಚೇತನ್, ಶಿವು ಚಿರು, ಇವರುಗಳು ವ್ಯವಸ್ಥಾಪಕರುಗಳಾಗಿರುತ್ತಾರೆ. ಪೈಲ್ವಾನ್ ಸಿದ್ದರಾಜು, ಶ್ರೀಕಂಠ ಸ್ವಾಮಿ ಇವರುಗಳು ಕುಸ್ತಿ ಪಂದ್ಯಾವಳಿಯ ತರಬೇತಿದಾರರಾಗಿರುತ್ತಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದರಾಜು, ರಘು, ನಟೇಶ್, ಚೇತನ್, ಶಿವು ಚಿರು ಸೇರಿದಂತೆ ಹಲವರು ಭಾಗವಹಿಸಿದ್ದರು.
ನಂಜನಗೂಡಿನಲ್ಲಿ ಮೇ.3 ರಂದು ಹೊನಲು ಬೆಳಕಿನ ನಾಡಕುಸ್ತಿ ಪಂದ್ಯಾವಳಿ ನಂಜನಗೂಡು: ಜನಪ್ರಿಯ ನಾಯಕ ದಿವಂಗತ ಆರ್. ಧ್ರುವನಾರಾಯಣ್ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಂಕರಪುರ ಹತ್ತು ಜನಗಳ ಗರಡಿ ವತಿಯಿಂದ ನಂಜನಗೂಡು ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ನಾಡ ಕುಸ್ತಿ ಪಂದ್ಯಾವಳಿಯನ್ನು ಮೇ 3 ರಂದು ಆಯೋಜಿಸಿರುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದರು. ನಂಜನಗೂಡು ತಾಲ್ಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಂಸದರು ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕನಾಗಿದ್ದ ದಿ.ಆರ್. ಧ್ರುವನಾರಾಯಣ್ ರವರ ಕೊಡುಗೆ ಅಪಾರ ಮತ್ತು ಅನನ್ಯ. ಅವರ ಜನ ಸೇವೆಗಳು ಅವಿಸ್ಮರಣೀಯ. ನಮ್ಮಂತಹ ಕಿರಿಯ ನಾಯಕರನ್ನು ರಾಜಕೀಯವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಂಜನಗೂಡು ತಾಲ್ಲೂಕಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. 65ನೇ
ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ನಾಡು ಕುಸ್ತಿ ಪಂದ್ಯಾವಳಿ ಆಯೋಜಿಸಿರುವುದಾಗಿ ತಿಳಿಸಿದರು. ಮೇ 3 ರಂದು ಭಾನುವಾರ ನಡೆಯುವ ಕುಸ್ತಿ ಪಂದ್ಯಾವಳಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಒಟ್ಟು 41 ಜೊತೆ ಕುಸ್ತಿ ಪಟುಗಳು ಗೆಲುವಿಗಾಗಿ ತೊಡೆತಟ್ಟಲಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಪಂಜಾವಳಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಕುಸ್ತಿಯ ವ್ಯವಸ್ಥಾಪಕರಾದ ಜಿಮ್ ರಘು, ಪೈಲ್ವಾನ್ ನಟೇಶ್, ಪೈಲ್ವಾನ್ ಚೇತನ್, ಶಿವು ಚಿರು, ಇವರುಗಳು ವ್ಯವಸ್ಥಾಪಕರುಗಳಾಗಿರುತ್ತಾರೆ. ಪೈಲ್ವಾನ್ ಸಿದ್ದರಾಜು, ಶ್ರೀಕಂಠ ಸ್ವಾಮಿ ಇವರುಗಳು ಕುಸ್ತಿ ಪಂದ್ಯಾವಳಿಯ ತರಬೇತಿದಾರರಾಗಿರುತ್ತಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದರಾಜು, ರಘು, ನಟೇಶ್, ಚೇತನ್, ಶಿವು ಚಿರು ಸೇರಿದಂತೆ ಹಲವರು ಭಾಗವಹಿಸಿದ್ದರು.
- PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE1
- *ಭಾರತ ನಲ್ಲಿ ವೈರಲ್*1
- chamundeshwari enterprise Waterfilter service and sales dealer no 74068525372
- ಮೈಸೂರಿನಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಗೃಹೋಪಯೋಗಿ ಪೀಠೋಪಕರಣಗಳು ಕಡಿಮೆ ಬೆಲೆಯ ಫೋಮ್ ಹಾಸಿಗೆ COIR ಹಾಸಿಗೆ ಮತ್ತು ಸೋಫಾ ಕುಶನ್ ಮತ್ತು ಬೋಲಿಸ್ಟರ್ ಮತ್ತು ದಿಂಬುಗಳು1
- ಹನೂರು : ತಾಲೂಕಿನ ತಾಳಿಬಿಟ್ಟ ಸ್ವಲ್ಪ ಕೆಎಸ್ಟಿಸಿ ಬಸ್ ಪಾರ್ಟಿಯಾಗಿ 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಮಯಕ್ಕೆ ಸರಿಯಾಗಿ ಬಾರದ ಆಂಬುಲೆನ್ಸ್ ಗಳು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರಳಾಡುತ್ತಿರುವ ಗಾಯಾಳುಗಳು.. ಹನೂರು ತಾಲೂಕಿನಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದ ರೋಗಿಗಳ ಪರದಾಟ ಕಳೆದ ಒಂದು ವಾರದಲ್ಲಿ ನಾಲ್ಕನೇ ಅಪಘಾತ. ಹನೂರು ತಾಲೂಕಿನಲ್ಲಿ ನಾಮಕಾವಸ್ಥೆಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಬಾರದ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ. ಮಾದಪ್ಪ ನಿನ್ನ ಭಕ್ತರನ್ನು ನೀನೆ ಕಾಪಾಡಪ್ಪ.4
- ಮಳವಳ್ಳಿ ಪಟ್ಟಣದ ಉದ್ಯಮಿಗಳಾದ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ರವರು ನೂತನವಾಗಿ ನಿರ್ಮಿಸಿರುವ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಶ್ರೀಗಳ ಆಗಮನ ಅಪಾರ ಭಕ್ತರಿಂದ ಭಕ್ತಿ ಸಮರ್ಪಣೆ ಮಳವಳ್ಳಿ ಪಟ್ಟಣದ ಎನ್ಎಸ್ ಬಡಾವಣೆಯಲ್ಲಿ ಶ್ರೀಮತಿ ಗೀತಾ ಮತ್ತು ಎಸ್ ಬಿ ಶಿವಸ್ವಾಮಿ ರವರ ಸಹೋದರ ಉದ್ಯಮಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ದಂಪತಿಗಳು ನೂತನವಾಗಿ ನಿರ್ಮಿಸಿರುವ ಜಯಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸಿ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಆಗಮಿಸಿ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಅರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪರಮಪೂಜ್ಯರಿಗೆ ದಿವ್ಯ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನ ಹರ ಗುರು ಚರಮೂರ್ತಿಗಳು ತಾಲೂಕಿನ ಉದ್ಯಮಿಗಳು ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ನೂತನ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾರ್ಗದ ತಾಳುಬೆಟ್ಟದ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶುಕ್ರವಾರ ನಡೆದಿದೆ. ಮಾದಪ್ಪನ ಬೆಟ್ಟದಿಂದ ವಾಪಾಸ್ ಆಗುತ್ತಿದ್ದ ಬಸ್, ತಾಳುಬೆಟ್ಟ ಸಮೀಪದ ಆಲದ ಮರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಮಾದಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದರು. ತಿರುವು ಪ್ರದೇಶದಲ್ಲಿ ಸಂಭವಿಸಿದ ಈ ಅವಘಡದಿಂದ ಚಾಲಕ ನಿರ್ವಾಹಕ ಸೇರಿ ಸುಮಾರು 30ಂಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು: ಮಹಿಳೆ ನಿರ್ವಾಹಕರಾದ. ಪದ್ಮಾವತಿಗೆ ತಲೆಗೆ ಪೆಟ್ಟಾಗಿದೆ ಪ್ರಯಾಣಿಕರಾದ ಹೆಚ್ ಡಿಕೋಟೆ ಶಿವನಂಜ ಶ್ಯೆಲಜಾ ಕಿರಗಸೂರು ಮೇಘನಾ ರಾಜಶೇಖರ್ ಮೈಸೂರು ಮೂಲದ ದ್ರಾಕ್ಷಾಯಿಣಿ ಬಸವರಾಜು ಮಧುವನಳ್ಳಿ ಗ್ರಾಮದ ದ್ರಾಕ್ಷಾಯಿಣಿ ಸಿದ್ದಯ್ಯನಪುರದ ಸುಂದ್ರಮ್ಮ ಸೇರಿದಂತೆ ಹಲವರಿಗೆ ಹೆಚ್ಚಾಗಿ ಪೆಟ್ಟಾಗಿದ್ದರೆ 30ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದೆ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದ್ದರೂ, ಆರಂಭದಲ್ಲಿ ಆಂಬುಲೆನ್ಸ್ ಸೌಲಭ್ಯ ಲಭ್ಯವಾಗದೆ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.ನಂತರ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪ್ರಯಾಣಿಕರು ಬಸ್ ಚಾಲಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಹನೂರು ಆಸ್ಪತ್ರೆಗೆ ತಹೀಸಿಲ್ದಾರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಪರಿಶೀಲಿಸಿದರು ಈ ಸಂಬಂಧ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- *ಭಾರತ ನಲ್ಲಿ ವೈರಲ್*1