ಗಂಡನ ಹೆಸರಲ್ಲಿ 50 ಲಕ್ಷ ಇನ್ಶೂರೆನ್ಸ್ ಮಾಡಿಸಿ, ಹಣ ಪಡೆದು ಪ್ರಿಯಕರನೊಂದಿಗೆ ಹಾಯಾಗಿರಲು ಗಂಡನನ್ನೇ ಕೊಂ*ದ ಹೆಂಡತಿ! ಪ್ರಿಯಕರನ ಜೊತೆ ಮಜಾ ಮಾಡಬೇಕೆಂಬ ಆಸೆ, ಜೊತೆಗೆ ಗಂಡ ಸತ್ತರೆ ಸಿಗುವ 50 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣದ ಆಮಿಷ! ಈ ದುರಾಸೆಗೆ ಬಿದ್ದ ಹೆಂಡತಿಯೊಬ್ಬಳು ಕಟ್ಟಿ ಕೊಂಡ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ? ಗುಡಿಪೇಟ ಗ್ರಾಮದ ಸಾಯಿನಿ ಕುಮಾರ್ (ರೈತ) ಮತ್ತು ಭಾರತಿ ದಂಪತಿಗೆ 2002 ರಲ್ಲಿ ಮದುವೆಯಾಗಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಹತ್ತು ವರ್ಷ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ 2012 ರಲ್ಲಿ ಭಾರತಿಗೆ ಅದೇ ಗ್ರಾಮದ ಲಗಿಶೆಟ್ಟಿ ಸುರೇಂದರ್ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದು ಕುಮಾರ್ ತೀವ್ರ ಮಾನಸಿಕ ಬೇಸರದಿಂದ ಕುಡಿತಕ್ಕೆ ದಾಸನಾಗಿದ್ದರು. ಇದರಿಂದ ಗಂಡ-ಹೆಂಡತಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು. 50 ಲಕ್ಷದ ಇನ್ಶೂರೆನ್ಸ್ ಪ್ಲಾನ್.. 10 ಲಕ್ಷ ಸುಪಾರಿ! ಗಂಡ ಅಡ್ಡ ತಪ್ಪಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಮತ್ತು ಹಣವನ್ನೂ ಪಡಕೊಳ್ಳಬಹುದು ಎಂದು ಭಾರತಿ ಒಂದು ಕ್ರೂರ ಸ್ಕೆಚ್ ಹಾಕಿದ್ದಳು. ಮೊದಲ ಪ್ಲಾನ್: ಯಾರಿಗೂ ಅನುಮಾನ ಬಾರದಂತೆ ಗಂಡ ಕುಮಾರ್ ಹೆಸರಿನಲ್ಲಿ 50 ಲಕ್ಷ ರೂಪಾಯಿ ಲೈಫ್ ಇನ್ಶೂರೆನ್ಸ್ ಮಾಡಿಸಿದ್ದಳು. ಎರಡನೇ ಪ್ಲಾನ್: ಕುಮಾರ್ ಮಾಡಿದ್ದ ಸಾಲ ತೀರಿಸುವ ನೆಪದಲ್ಲಿ ನಂಬಿಸಿ, ರಾಮ್ ಮಲ್ಲೇಶ್ ಎಂಬಾತನಿಗೆ ಗಂಡನನ್ನು ಮುಗಿಸಲು 10 ಲಕ್ಷ ರೂಪಾಯಿ ಸುಪಾರಿ (ಕಿಲ್ಲಿಂಗ್ ಕಾಂಟ್ರಾಕ್ಟ್) ಮಾತಾಡಿದ್ದಳು. ಅದರಲ್ಲಿ 2 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಕೊಟ್ಟಿದ್ದಳು. ಮದ್ಯ ಕುಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ! ಮೇ 22 ರ ರಾತ್ರಿ ಪ್ಲಾನ್ ಪ್ರಕಾರ ಆರೋಪಿಗಳು ಕುಮಾರ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಮುಲ್ಕಲ್ಲ ಗ್ರಾಮದ ಹೊರವಲಯದಲ್ಲಿ ಒಂಟಿಯಾಗಿ ಸಿಕ್ಕ ಕುಮಾರ್ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಆತ ಸತ್ತಿದ್ದಾನೆ ಎಂದು ಖಾತ್ರಿ ಮಾಡಿಕೊಂಡ ನಂತರ, ಅದು ರೋಡ್ ಆಕ್ಸಿಡೆಂಟ್ ತರ ಕಾಣಲಿ ಎಂದು ಶವವನ್ನು ಬೈಕ್ ಸಮೇತ ರಸ್ತೆ ಪಕ್ಕದ ಚರಂಡಿಗೆ ಎಸೆದು ಹೋಗಿದ್ದರು. ತೀವ್ರ ಗಾಯಗೊಂಡಿದ್ದ ಕುಮಾರ್ರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದರು. ಅಮ್ಮನ ಅನುಮಾನ: ಅಸಲಿ ಬಣ್ಣ ಬಯಲು ಮಾಡಿದ ಪೊಲೀಸ್! ಮೊದಮೊದಲು ಎಲ್ಲರೂ ಇದನ್ನು ಬೈಕ್ ಅಪಘಾತ ಎಂದೇ ನಂಬಿದ್ದರು. ಆದರೆ ಕುಮಾರ್ ಅವರ ತಾಯಿ ಸಾಯಿನಿ ಲಕ್ಷ್ಮಿಗೆ ಮಗನ ಸಾವಿನ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸ್ ತನಿಖೆಯಲ್ಲಿ ತಿಳಿದಿದ್ದೇನು? ಪೋಸ್ಟ್ಮಾರ್ಟಂ ವರದಿಯಲ್ಲಿ ಕುಮಾರ್ ತಲೆಗಿದ್ದ ಗಾಯಗಳು ಅಪಘಾತದಿಂದ ಆಗಿದ್ದಲ್ಲ, ಯಾರೋ ಬೇಕಂತಲೇ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ಹೆಂಡತಿ ಭಾರತಿಯನ್ನು ವಿಚಾರಣೆ ನಡೆಸಿದಾಗ, ಪ್ರಿಯಕರನಿಗಾಗಿ ತಾನೇ ಸುಪಾರಿ ಕೊಟ್ಟು ಗಂಡನನ್ನು ಕೊಲ್ಲಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಕಿರಾತಕ ಹೆಂಡತಿ ಭಾರತಿ, ಪ್ರಿಯಕರ ಸುರೇಂದರ್ ಹಾಗೂ ಸುಪಾರಿ ಗ್ಯಾಂಗ್ನ್ನು ಬಂಧಿಸಿದ್ದಾರೆ. ಅವರಿಂದ ಇನ್ಶೂರೆನ್ಸ್ ದಾಖಲೆಗಳು, ಕೊಲೆಗೆ ಬಳಸಿದ ಆಯುಧಗಳು, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹಣ ಮತ್ತು ಕಾಮದ ಆಸೆಗಾಗಿ ಏಳು ಜನ್ಮದ ಬಾಂಧವ್ಯವನ್ನು ಮರೆತು ಗಂಡನನ್ನೇ ಕೊಂದ ಹೆಂಡತಿಯ ಕಥೆ ಈಗ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಂಡನ ಹೆಸರಲ್ಲಿ 50 ಲಕ್ಷ ಇನ್ಶೂರೆನ್ಸ್ ಮಾಡಿಸಿ, ಹಣ ಪಡೆದು ಪ್ರಿಯಕರನೊಂದಿಗೆ ಹಾಯಾಗಿರಲು ಗಂಡನನ್ನೇ ಕೊಂ*ದ ಹೆಂಡತಿ! ಪ್ರಿಯಕರನ ಜೊತೆ ಮಜಾ ಮಾಡಬೇಕೆಂಬ ಆಸೆ, ಜೊತೆಗೆ ಗಂಡ ಸತ್ತರೆ ಸಿಗುವ 50 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣದ ಆಮಿಷ! ಈ ದುರಾಸೆಗೆ ಬಿದ್ದ ಹೆಂಡತಿಯೊಬ್ಬಳು ಕಟ್ಟಿ ಕೊಂಡ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ? ಗುಡಿಪೇಟ ಗ್ರಾಮದ ಸಾಯಿನಿ ಕುಮಾರ್ (ರೈತ) ಮತ್ತು ಭಾರತಿ ದಂಪತಿಗೆ 2002 ರಲ್ಲಿ ಮದುವೆಯಾಗಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಹತ್ತು ವರ್ಷ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ 2012 ರಲ್ಲಿ ಭಾರತಿಗೆ ಅದೇ ಗ್ರಾಮದ ಲಗಿಶೆಟ್ಟಿ ಸುರೇಂದರ್ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದು ಕುಮಾರ್ ತೀವ್ರ ಮಾನಸಿಕ ಬೇಸರದಿಂದ ಕುಡಿತಕ್ಕೆ ದಾಸನಾಗಿದ್ದರು. ಇದರಿಂದ ಗಂಡ-ಹೆಂಡತಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು. 50 ಲಕ್ಷದ ಇನ್ಶೂರೆನ್ಸ್ ಪ್ಲಾನ್.. 10 ಲಕ್ಷ ಸುಪಾರಿ! ಗಂಡ ಅಡ್ಡ ತಪ್ಪಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಮತ್ತು ಹಣವನ್ನೂ ಪಡಕೊಳ್ಳಬಹುದು ಎಂದು ಭಾರತಿ ಒಂದು ಕ್ರೂರ ಸ್ಕೆಚ್ ಹಾಕಿದ್ದಳು. ಮೊದಲ ಪ್ಲಾನ್: ಯಾರಿಗೂ ಅನುಮಾನ ಬಾರದಂತೆ ಗಂಡ ಕುಮಾರ್ ಹೆಸರಿನಲ್ಲಿ 50 ಲಕ್ಷ ರೂಪಾಯಿ ಲೈಫ್ ಇನ್ಶೂರೆನ್ಸ್ ಮಾಡಿಸಿದ್ದಳು. ಎರಡನೇ ಪ್ಲಾನ್: ಕುಮಾರ್ ಮಾಡಿದ್ದ ಸಾಲ ತೀರಿಸುವ ನೆಪದಲ್ಲಿ ನಂಬಿಸಿ, ರಾಮ್ ಮಲ್ಲೇಶ್ ಎಂಬಾತನಿಗೆ ಗಂಡನನ್ನು ಮುಗಿಸಲು 10 ಲಕ್ಷ ರೂಪಾಯಿ ಸುಪಾರಿ (ಕಿಲ್ಲಿಂಗ್ ಕಾಂಟ್ರಾಕ್ಟ್) ಮಾತಾಡಿದ್ದಳು. ಅದರಲ್ಲಿ 2 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಕೊಟ್ಟಿದ್ದಳು. ಮದ್ಯ ಕುಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ! ಮೇ 22 ರ ರಾತ್ರಿ ಪ್ಲಾನ್ ಪ್ರಕಾರ ಆರೋಪಿಗಳು ಕುಮಾರ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಮುಲ್ಕಲ್ಲ ಗ್ರಾಮದ ಹೊರವಲಯದಲ್ಲಿ ಒಂಟಿಯಾಗಿ ಸಿಕ್ಕ ಕುಮಾರ್ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಆತ ಸತ್ತಿದ್ದಾನೆ ಎಂದು ಖಾತ್ರಿ ಮಾಡಿಕೊಂಡ ನಂತರ, ಅದು ರೋಡ್ ಆಕ್ಸಿಡೆಂಟ್ ತರ ಕಾಣಲಿ ಎಂದು ಶವವನ್ನು ಬೈಕ್ ಸಮೇತ ರಸ್ತೆ ಪಕ್ಕದ ಚರಂಡಿಗೆ ಎಸೆದು ಹೋಗಿದ್ದರು. ತೀವ್ರ ಗಾಯಗೊಂಡಿದ್ದ ಕುಮಾರ್ರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದರು. ಅಮ್ಮನ ಅನುಮಾನ: ಅಸಲಿ ಬಣ್ಣ ಬಯಲು ಮಾಡಿದ ಪೊಲೀಸ್! ಮೊದಮೊದಲು ಎಲ್ಲರೂ ಇದನ್ನು ಬೈಕ್ ಅಪಘಾತ ಎಂದೇ ನಂಬಿದ್ದರು. ಆದರೆ ಕುಮಾರ್ ಅವರ ತಾಯಿ ಸಾಯಿನಿ ಲಕ್ಷ್ಮಿಗೆ ಮಗನ ಸಾವಿನ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸ್ ತನಿಖೆಯಲ್ಲಿ ತಿಳಿದಿದ್ದೇನು? ಪೋಸ್ಟ್ಮಾರ್ಟಂ ವರದಿಯಲ್ಲಿ ಕುಮಾರ್ ತಲೆಗಿದ್ದ ಗಾಯಗಳು ಅಪಘಾತದಿಂದ ಆಗಿದ್ದಲ್ಲ, ಯಾರೋ ಬೇಕಂತಲೇ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ಹೆಂಡತಿ ಭಾರತಿಯನ್ನು ವಿಚಾರಣೆ ನಡೆಸಿದಾಗ, ಪ್ರಿಯಕರನಿಗಾಗಿ ತಾನೇ ಸುಪಾರಿ ಕೊಟ್ಟು ಗಂಡನನ್ನು ಕೊಲ್ಲಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಕಿರಾತಕ ಹೆಂಡತಿ ಭಾರತಿ, ಪ್ರಿಯಕರ ಸುರೇಂದರ್ ಹಾಗೂ ಸುಪಾರಿ ಗ್ಯಾಂಗ್ನ್ನು ಬಂಧಿಸಿದ್ದಾರೆ. ಅವರಿಂದ ಇನ್ಶೂರೆನ್ಸ್ ದಾಖಲೆಗಳು, ಕೊಲೆಗೆ ಬಳಸಿದ ಆಯುಧಗಳು, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹಣ ಮತ್ತು ಕಾಮದ ಆಸೆಗಾಗಿ ಏಳು ಜನ್ಮದ ಬಾಂಧವ್ಯವನ್ನು ಮರೆತು ಗಂಡನನ್ನೇ ಕೊಂದ ಹೆಂಡತಿಯ ಕಥೆ ಈಗ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗಂಡನ ಹೆಸರಲ್ಲಿ 50 ಲಕ್ಷ ಇನ್ಶೂರೆನ್ಸ್ ಮಾಡಿಸಿ, ಹಣ ಪಡೆದು ಪ್ರಿಯಕರನೊಂದಿಗೆ ಹಾಯಾಗಿರಲು ಗಂಡನನ್ನೇ ಕೊಂ*ದ ಹೆಂಡತಿ! ಪ್ರಿಯಕರನ ಜೊತೆ ಮಜಾ ಮಾಡಬೇಕೆಂಬ ಆಸೆ, ಜೊತೆಗೆ ಗಂಡ ಸತ್ತರೆ ಸಿಗುವ 50 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣದ ಆಮಿಷ! ಈ ದುರಾಸೆಗೆ ಬಿದ್ದ ಹೆಂಡತಿಯೊಬ್ಬಳು ಕಟ್ಟಿ ಕೊಂಡ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ? ಗುಡಿಪೇಟ ಗ್ರಾಮದ ಸಾಯಿನಿ ಕುಮಾರ್ (ರೈತ) ಮತ್ತು ಭಾರತಿ ದಂಪತಿಗೆ 2002 ರಲ್ಲಿ ಮದುವೆಯಾಗಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಹತ್ತು ವರ್ಷ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ 2012 ರಲ್ಲಿ ಭಾರತಿಗೆ ಅದೇ ಗ್ರಾಮದ ಲಗಿಶೆಟ್ಟಿ ಸುರೇಂದರ್ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದು ಕುಮಾರ್ ತೀವ್ರ ಮಾನಸಿಕ ಬೇಸರದಿಂದ ಕುಡಿತಕ್ಕೆ ದಾಸನಾಗಿದ್ದರು. ಇದರಿಂದ ಗಂಡ-ಹೆಂಡತಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು. 50 ಲಕ್ಷದ ಇನ್ಶೂರೆನ್ಸ್ ಪ್ಲಾನ್.. 10 ಲಕ್ಷ ಸುಪಾರಿ! ಗಂಡ ಅಡ್ಡ ತಪ್ಪಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಮತ್ತು ಹಣವನ್ನೂ ಪಡಕೊಳ್ಳಬಹುದು ಎಂದು ಭಾರತಿ ಒಂದು ಕ್ರೂರ ಸ್ಕೆಚ್ ಹಾಕಿದ್ದಳು. ಮೊದಲ ಪ್ಲಾನ್: ಯಾರಿಗೂ ಅನುಮಾನ ಬಾರದಂತೆ ಗಂಡ ಕುಮಾರ್ ಹೆಸರಿನಲ್ಲಿ 50 ಲಕ್ಷ ರೂಪಾಯಿ ಲೈಫ್ ಇನ್ಶೂರೆನ್ಸ್ ಮಾಡಿಸಿದ್ದಳು. ಎರಡನೇ ಪ್ಲಾನ್: ಕುಮಾರ್ ಮಾಡಿದ್ದ ಸಾಲ ತೀರಿಸುವ ನೆಪದಲ್ಲಿ ನಂಬಿಸಿ, ರಾಮ್ ಮಲ್ಲೇಶ್ ಎಂಬಾತನಿಗೆ ಗಂಡನನ್ನು ಮುಗಿಸಲು 10 ಲಕ್ಷ ರೂಪಾಯಿ ಸುಪಾರಿ (ಕಿಲ್ಲಿಂಗ್ ಕಾಂಟ್ರಾಕ್ಟ್) ಮಾತಾಡಿದ್ದಳು. ಅದರಲ್ಲಿ 2 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಕೊಟ್ಟಿದ್ದಳು. ಮದ್ಯ ಕುಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ! ಮೇ 22 ರ ರಾತ್ರಿ ಪ್ಲಾನ್ ಪ್ರಕಾರ ಆರೋಪಿಗಳು ಕುಮಾರ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಮುಲ್ಕಲ್ಲ ಗ್ರಾಮದ ಹೊರವಲಯದಲ್ಲಿ ಒಂಟಿಯಾಗಿ ಸಿಕ್ಕ ಕುಮಾರ್ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಆತ ಸತ್ತಿದ್ದಾನೆ ಎಂದು ಖಾತ್ರಿ ಮಾಡಿಕೊಂಡ ನಂತರ, ಅದು ರೋಡ್ ಆಕ್ಸಿಡೆಂಟ್ ತರ ಕಾಣಲಿ ಎಂದು ಶವವನ್ನು ಬೈಕ್ ಸಮೇತ ರಸ್ತೆ ಪಕ್ಕದ ಚರಂಡಿಗೆ ಎಸೆದು ಹೋಗಿದ್ದರು. ತೀವ್ರ ಗಾಯಗೊಂಡಿದ್ದ ಕುಮಾರ್ರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದರು. ಅಮ್ಮನ ಅನುಮಾನ: ಅಸಲಿ ಬಣ್ಣ ಬಯಲು ಮಾಡಿದ ಪೊಲೀಸ್! ಮೊದಮೊದಲು ಎಲ್ಲರೂ ಇದನ್ನು ಬೈಕ್ ಅಪಘಾತ ಎಂದೇ ನಂಬಿದ್ದರು. ಆದರೆ ಕುಮಾರ್ ಅವರ ತಾಯಿ ಸಾಯಿನಿ ಲಕ್ಷ್ಮಿಗೆ ಮಗನ ಸಾವಿನ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸ್ ತನಿಖೆಯಲ್ಲಿ ತಿಳಿದಿದ್ದೇನು? ಪೋಸ್ಟ್ಮಾರ್ಟಂ ವರದಿಯಲ್ಲಿ ಕುಮಾರ್ ತಲೆಗಿದ್ದ ಗಾಯಗಳು ಅಪಘಾತದಿಂದ ಆಗಿದ್ದಲ್ಲ, ಯಾರೋ ಬೇಕಂತಲೇ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ಹೆಂಡತಿ ಭಾರತಿಯನ್ನು ವಿಚಾರಣೆ ನಡೆಸಿದಾಗ, ಪ್ರಿಯಕರನಿಗಾಗಿ ತಾನೇ ಸುಪಾರಿ ಕೊಟ್ಟು ಗಂಡನನ್ನು ಕೊಲ್ಲಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಕಿರಾತಕ ಹೆಂಡತಿ ಭಾರತಿ, ಪ್ರಿಯಕರ ಸುರೇಂದರ್ ಹಾಗೂ ಸುಪಾರಿ ಗ್ಯಾಂಗ್ನ್ನು ಬಂಧಿಸಿದ್ದಾರೆ. ಅವರಿಂದ ಇನ್ಶೂರೆನ್ಸ್ ದಾಖಲೆಗಳು, ಕೊಲೆಗೆ ಬಳಸಿದ ಆಯುಧಗಳು, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹಣ ಮತ್ತು ಕಾಮದ ಆಸೆಗಾಗಿ ಏಳು ಜನ್ಮದ ಬಾಂಧವ್ಯವನ್ನು ಮರೆತು ಗಂಡನನ್ನೇ ಕೊಂದ ಹೆಂಡತಿಯ ಕಥೆ ಈಗ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಂಡನ ಹೆಸರಲ್ಲಿ 50 ಲಕ್ಷ ಇನ್ಶೂರೆನ್ಸ್ ಮಾಡಿಸಿ, ಹಣ ಪಡೆದು ಪ್ರಿಯಕರನೊಂದಿಗೆ ಹಾಯಾಗಿರಲು ಗಂಡನನ್ನೇ ಕೊಂ*ದ ಹೆಂಡತಿ! ಪ್ರಿಯಕರನ ಜೊತೆ ಮಜಾ ಮಾಡಬೇಕೆಂಬ ಆಸೆ, ಜೊತೆಗೆ ಗಂಡ ಸತ್ತರೆ ಸಿಗುವ 50 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣದ ಆಮಿಷ! ಈ ದುರಾಸೆಗೆ ಬಿದ್ದ ಹೆಂಡತಿಯೊಬ್ಬಳು ಕಟ್ಟಿ ಕೊಂಡ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ? ಗುಡಿಪೇಟ ಗ್ರಾಮದ ಸಾಯಿನಿ ಕುಮಾರ್ (ರೈತ) ಮತ್ತು ಭಾರತಿ ದಂಪತಿಗೆ 2002 ರಲ್ಲಿ ಮದುವೆಯಾಗಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಹತ್ತು ವರ್ಷ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ 2012 ರಲ್ಲಿ ಭಾರತಿಗೆ ಅದೇ ಗ್ರಾಮದ ಲಗಿಶೆಟ್ಟಿ ಸುರೇಂದರ್ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದು ಕುಮಾರ್ ತೀವ್ರ ಮಾನಸಿಕ ಬೇಸರದಿಂದ ಕುಡಿತಕ್ಕೆ ದಾಸನಾಗಿದ್ದರು. ಇದರಿಂದ ಗಂಡ-ಹೆಂಡತಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು. 50 ಲಕ್ಷದ ಇನ್ಶೂರೆನ್ಸ್ ಪ್ಲಾನ್.. 10 ಲಕ್ಷ ಸುಪಾರಿ! ಗಂಡ ಅಡ್ಡ ತಪ್ಪಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಮತ್ತು ಹಣವನ್ನೂ ಪಡಕೊಳ್ಳಬಹುದು ಎಂದು ಭಾರತಿ ಒಂದು ಕ್ರೂರ ಸ್ಕೆಚ್ ಹಾಕಿದ್ದಳು. ಮೊದಲ ಪ್ಲಾನ್: ಯಾರಿಗೂ ಅನುಮಾನ ಬಾರದಂತೆ ಗಂಡ ಕುಮಾರ್ ಹೆಸರಿನಲ್ಲಿ 50 ಲಕ್ಷ ರೂಪಾಯಿ ಲೈಫ್ ಇನ್ಶೂರೆನ್ಸ್ ಮಾಡಿಸಿದ್ದಳು. ಎರಡನೇ ಪ್ಲಾನ್: ಕುಮಾರ್ ಮಾಡಿದ್ದ ಸಾಲ ತೀರಿಸುವ ನೆಪದಲ್ಲಿ ನಂಬಿಸಿ, ರಾಮ್ ಮಲ್ಲೇಶ್ ಎಂಬಾತನಿಗೆ ಗಂಡನನ್ನು ಮುಗಿಸಲು 10 ಲಕ್ಷ ರೂಪಾಯಿ ಸುಪಾರಿ (ಕಿಲ್ಲಿಂಗ್ ಕಾಂಟ್ರಾಕ್ಟ್) ಮಾತಾಡಿದ್ದಳು. ಅದರಲ್ಲಿ 2 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಕೊಟ್ಟಿದ್ದಳು. ಮದ್ಯ ಕುಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ! ಮೇ 22 ರ ರಾತ್ರಿ ಪ್ಲಾನ್ ಪ್ರಕಾರ ಆರೋಪಿಗಳು ಕುಮಾರ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಮುಲ್ಕಲ್ಲ ಗ್ರಾಮದ ಹೊರವಲಯದಲ್ಲಿ ಒಂಟಿಯಾಗಿ ಸಿಕ್ಕ ಕುಮಾರ್ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಆತ ಸತ್ತಿದ್ದಾನೆ ಎಂದು ಖಾತ್ರಿ ಮಾಡಿಕೊಂಡ ನಂತರ, ಅದು ರೋಡ್ ಆಕ್ಸಿಡೆಂಟ್ ತರ ಕಾಣಲಿ ಎಂದು ಶವವನ್ನು ಬೈಕ್ ಸಮೇತ ರಸ್ತೆ ಪಕ್ಕದ ಚರಂಡಿಗೆ ಎಸೆದು ಹೋಗಿದ್ದರು. ತೀವ್ರ ಗಾಯಗೊಂಡಿದ್ದ ಕುಮಾರ್ರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದರು. ಅಮ್ಮನ ಅನುಮಾನ: ಅಸಲಿ ಬಣ್ಣ ಬಯಲು ಮಾಡಿದ ಪೊಲೀಸ್! ಮೊದಮೊದಲು ಎಲ್ಲರೂ ಇದನ್ನು ಬೈಕ್ ಅಪಘಾತ ಎಂದೇ ನಂಬಿದ್ದರು. ಆದರೆ ಕುಮಾರ್ ಅವರ ತಾಯಿ ಸಾಯಿನಿ ಲಕ್ಷ್ಮಿಗೆ ಮಗನ ಸಾವಿನ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸ್ ತನಿಖೆಯಲ್ಲಿ ತಿಳಿದಿದ್ದೇನು? ಪೋಸ್ಟ್ಮಾರ್ಟಂ ವರದಿಯಲ್ಲಿ ಕುಮಾರ್ ತಲೆಗಿದ್ದ ಗಾಯಗಳು ಅಪಘಾತದಿಂದ ಆಗಿದ್ದಲ್ಲ, ಯಾರೋ ಬೇಕಂತಲೇ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ಹೆಂಡತಿ ಭಾರತಿಯನ್ನು ವಿಚಾರಣೆ ನಡೆಸಿದಾಗ, ಪ್ರಿಯಕರನಿಗಾಗಿ ತಾನೇ ಸುಪಾರಿ ಕೊಟ್ಟು ಗಂಡನನ್ನು ಕೊಲ್ಲಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಕಿರಾತಕ ಹೆಂಡತಿ ಭಾರತಿ, ಪ್ರಿಯಕರ ಸುರೇಂದರ್ ಹಾಗೂ ಸುಪಾರಿ ಗ್ಯಾಂಗ್ನ್ನು ಬಂಧಿಸಿದ್ದಾರೆ. ಅವರಿಂದ ಇನ್ಶೂರೆನ್ಸ್ ದಾಖಲೆಗಳು, ಕೊಲೆಗೆ ಬಳಸಿದ ಆಯುಧಗಳು, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹಣ ಮತ್ತು ಕಾಮದ ಆಸೆಗಾಗಿ ಏಳು ಜನ್ಮದ ಬಾಂಧವ್ಯವನ್ನು ಮರೆತು ಗಂಡನನ್ನೇ ಕೊಂದ ಹೆಂಡತಿಯ ಕಥೆ ಈಗ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
- ತನ್ನನ್ನು ಹೆತ್ತ ತಾಯಿಗೆ ಒಬ್ಬ ಮಗ ಘೋರ ದ್ರೋಹ ಎಸಗಿದ್ದಾನೆ. ತಾಯಿಯ ಬ್ಯಾಂಕ್ ಖಾತೆಗೆ ಕಣ್ಣುಹಾಕಿ, ಅದರಿಂದ ಹಣ ದೋಚಿದ ಈ ಖತರ್ನಾಕ ವ್ಯಕ್ತಿ, ಹೆತ್ತವರ ಕಣ್ಣೀರಿನ ಕಥೆಯಲ್ಲಿ ನಿಜವಾದ ಖಳನಾಯಕನಾಗಿದ್ದಾನೆ.1
- ‘ಋಣಮುಕ್ತ’ ಕಿರುತೆರೆ ಚಿತ್ರದಿಂದ ತಾಯಿ ಮತ್ತು ಮಗನ ಪ್ರೀತಿಯನ್ನು ಬಿಂಬಿಸುವ ಒಂದು ಹೃದಯಸ್ಪರ್ಶಿ ಭಾವನಾತ್ಮಕ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಈ ಭಾವನಾಮಯ ದೃಶ್ಯಕ್ಕೆ ಬಸವರಾಜ ಪಟ್ಟಣಶೆಟ್ಟಿ ಅವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ದೃಶ್ಯದಲ್ಲಿ ಸ್ವತಃ ಬಸವರಾಜ ಪಟ್ಟಣಶೆಟ್ಟಿ ಮತ್ತು ಅಮ್ಮಾಜಿ (ಶ್ರೀಮತಿ ರಜನಿ ಡಾ. ಅಶೋಕ ಜೀರಗ್ಯಾಳ) ಅವರು ಕಲಾವಿದರಾಗಿ ಅಭಿನಯಿಸಿದ್ದಾರೆ.1
- ಧಾರವಾಡದಲ್ಲಿ ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಾಯಗೊಂಡ ವಿಠಲ ವಾಲೀಕಾರನ ಆರೋಗ್ಯ ವಿಚಾರಿಸಲು ಎಸ್ಡಿಎಂ ಆಸ್ಪತ್ರೆಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಆಗಮಿಸದ ಕಾರಣ ತೀವ್ರವಾಗಿ ಗರಂ ಆಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಆಸ್ಪತ್ರೆಗೆ ಬರುವ ಬಗ್ಗೆ ಮಾಹಿತಿ ಇದ್ದರೂ ಆಯುಕ್ತರು ಗೈರುಹಾಜರಾಗಿದ್ದರು. ಈ ಘಟನೆಯಿಂದ ಕೋಪಗೊಂಡ ಜೋಶಿ, ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗುಂಡಿನ ದಾಳಿ ನಡೆದು ನಾಲ್ಕು ದಿನಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಸಾಧ್ಯವಾಗದಿರುವುದು ವಿಚಿತ್ರ ಎಂದ ಅವರು, ಅಲ್ಲಿ ಉಪಸ್ಥಿತರಿದ್ದ ಡಿಸಿಪಿ ಶ್ರುತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, "ನಿಮ್ಮ ಕಮಿಷನರ್ ಎಲ್ಲಿ? ಇಲ್ಲಿಗೆ ಬರುವುದು ಅವರ ಕೆಲಸ ಅಲ್ಲವೇ?" ಎಂದು ಪ್ರಶ್ನಿಸಿದರು.1
- ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಮಕ್ಕಳನ್ನು ದಾಖಲಿಸಲು ಪೋಷಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳತ್ತ ಜನರು ಹೆಚ್ಚು ಒಲವು ತೋರಿಸುತ್ತಿದ್ದರೂ, ಈಗ ಸರ್ಕಾರಿ ಶಾಲೆಗಳತ್ತ ಗಮನ ಹರಿಸುತ್ತಿರುವುದು ಅವುಗಳ ಬೇಡಿಕೆಯನ್ನು ಹೆಚ್ಚಿಸಿದೆ. ಸರ್ಕಾರಿ ಶಾಲೆಯ ಬೇಡಿಕೆಗೆ ಸಾಕ್ಷಿಯಾಗಿ, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳಲು ಹಗಲು-ರಾತ್ರಿ ಎನ್ನದೆ ಅರ್ಜಿ ಹಿಡಿದು ಶಾಲೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. 2009ರಲ್ಲಿ ಮೇಲ್ದರ್ಜೆಗೇರಿದ ಈ ಕೆಪಿಎಸ್ ಶಾಲೆಯಲ್ಲಿ ಕಳೆದ ವರ್ಷ 800ಕ್ಕೂ ಹೆಚ್ಚು ಮಕ್ಕಳು ಅಧ್ಯಯನಕ್ಕೆ ದಾಖಲಾಗಿದ್ದರು. ಈ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಕೆಪಿಎಸ್ ಶಾಲೆಯಲ್ಲಿ ಎಲ್ಕೆಜಿಯಿಂದ ಪಿಯುಸಿಯವರೆಗೂ ಒಂದೇ ಸೂರಿನಡಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಪಿಎಸ್ ಪಠ್ಯಕ್ರಮದ ಜೊತೆಗೆ, ಎಲ್ಕೆಜಿ ಹಾಗೂ ಯುಕೆಜಿಗೆ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಕೆಪಿಎಸ್ ಪ್ರಭಾರಿ ಶಿಕ್ಷಕ, ಪ್ರಾಥಮಿಕ ವಿಭಾಗದ ಸುರೇಶ ಯಲ್ಲಾರಿ ಮಾಹಿತಿ ನೀಡಿದ್ದಾರೆ.1
- ರಾಜ್ಯ ಸರ್ಕಾರ ಸಚಿವ ಸಂಪುಟ ಪುನರ್ರಚನೆಗೆ ಮುಂದಾದಲ್ಲಿ, ಬಂಜಾರಾ ಸಮಾಜದಿಂದ ಕಾಂಗ್ರೆಸ್ನ ಏಕೈಕ ಶಾಸಕರಾಗಿರುವ ಹಾವೇರಿ ಶಾಸಕ ಹಾಗೂ ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸಮಾಜದ ಯುವ ಮುಖಂಡ ಸುಧೀರ ಲಮಾಣಿ ಒತ್ತಾಯಿಸಿದ್ದಾರೆ. ಶಿಗ್ಗಾವಿಯಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಸುಧೀರ ಲಮಾಣಿ, ರಾಜ್ಯದ ಪರಿಶಿಷ್ಟ ಜಾತಿಯ ೩೬ ಮೀಸಲು ಮತಕ್ಷೇತ್ರಗಳು ಹಾಗೂ ಪರಿಶಿಷ್ಟ ಪಂಗಡದ ೧೫ ಮೀಸಲು ಮತಕ್ಷೇತ್ರಗಳಲ್ಲಿ ಬಂಜಾರ ಸಮುದಾಯದ ಮತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ, ಕಳೆದ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮತ್ತು ಶಿಫಾರಸುಗಳನ್ನು ಖಂಡಿಸಿ, "ಬಿಜೆಪಿ ಹಠಾವೋ-ತಾಂಡಾ ಬಚಾವೋ" ಘೋಷಣೆಯೊಂದಿಗೆ ರಾಜ್ಯದ ೪೦ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯದ ೩೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದವರು, ಏಕೈಕ ಶಾಸಕರಾದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೆಲವು ರಾಜಕೀಯ ಕಾರಣಗಳಿಂದ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೂರು ಬಾರಿ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರು ೨೦೧೪ರಿಂದ ಸಂತ ಸೇವಾಲಾಲ್ ಗುರೂಜಿ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಮಹಾಮಠ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮಹಾಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ ₹೫೦ ಕೋಟಿ ಅನುದಾನ ತಂದು, ೧೫ ಎಕರೆ ಜಾಗವನ್ನು ೨೮ ಎಕರೆಗೆ ವಿಸ್ತರಿಸಿ, ಅದನ್ನು ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಮೀಸಲಿಟ್ಟಿದ್ದಾರೆ. ಸರ್ಕಾರ ಬಂದು ಈಗಾಗಲೇ ಮೂರು ವರ್ಷಗಳು ಕಳೆದಿವೆ ಎಂದು ಸುಧೀರ ಲಮಾಣಿ ಉಲ್ಲೇಖಿಸಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಿರುವ ಅವರು, ಮುಂದಿನ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ.1
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ದಲಿತ ಯುವಕ ರವಿಚಂದ್ರ ದೇವಪ್ಪ ಮಾದರ ಅವರ ಅಮಾನುಷ ಕೊಲೆಯನ್ನು ಖಂಡಿಸಿ, ಶಿಗ್ಗಾವಿಯಲ್ಲಿ ತಾಲೂಕು ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ತಾಲೂಕಾ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ರವಿಚಂದ್ರ ಮಾದರ್ ಅವರು ಎನ್.ಎಸ್. ಪೂಜಾರಿ ಅವರ ಕಂಪನಿಯಲ್ಲಿ ನಾಲ್ಕು ವರ್ಷಗಳಿಂದ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹಂಗರಗಿ ಗ್ರಾಮದ ಕ್ರಾಸ್ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಎಸ್.ಎಸ್. ಪೂಜಾರಿ ಅವರು ರವಿಚಂದ್ರ ಅವರ ತಂದೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ, ತಂದೆ ಸ್ಥಳಕ್ಕೆ ಭೇಟಿ ನೀಡಿ ಮಗನ ಸ್ಥಿತಿಯನ್ನು ಕಂಡು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ತೀರ್ಮಾನಿಸಿದರು. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ 15 ಜನರ ವಿರುದ್ಧ ದೂರು ನೀಡಲಾಗಿದೆ. ಆದರೂ, ದೂರು ನೀಡಿ ಮೂರು ದಿನ ಕಳೆದರೂ ಆರೋಪಿಗಳನ್ನು ಬಂಧಿಸದೆ ಪೊಲೀಸರು ಮತ್ತೊಂದು ದೌರ್ಜನ್ಯ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ದಲಿತ ಯುವಕನ ಸಾವಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ. ಅಮಾಯಕ ದಲಿತರ ಎಷ್ಟೋ ಕೊಲೆ ಪ್ರಕರಣಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ತಿಳಿಸಿದ ಅವರು, ಸರ್ಕಾರ ಈ ಪ್ರಕರಣದ ಹೊಣೆಗಾರಿಕೆಯನ್ನು ವಹಿಸಿಕೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದರೆ, ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲೂಕು ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಅಧ್ಯಕ್ಷ ಮಂಜುನಾಥ ಬಾಲಪ್ಪನವರ, ಅರುಣ ನಡುವಿನಮನಿ, ಫಕ್ಕೀರೇಶ ಹರಿಜನ, ಬಸವರಾಜ ಕಟ್ಟಿಮನಿ, ದೇವರಾಜ ಹರಿಜನ, ಅಭಿಷೇಕ ಹರಿಜನ, ನಾಗರಾಜ ನಡುವಿನಮನಿ, ಅವಿನಾಶ ಬಾಲಪ್ಪನವರ, ಸಂತೋಷ ಮಾದರ, ಮಂಜುನಾಥ ಪೂಜಾರ, ರವಿ ಮಾದರ, ಆಕಾಶ ಲಮಾಣಿ, ಶಿವಾನಂದ ದೊಡ್ಡಮನಿ ಸೇರಿದಂತೆ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.1
- ಗುಳೇದಗುಡ್ಡ ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯಲ್ಲಿ, ತಹಶೀಲ್ದಾರ ಎಸ್.ಎಫ್. ಬೊಮ್ಮಣ್ಣವರ ಅವರು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದರು. ಸರಕಾರದ ಆದೇಶದಂತೆ, ಇಲಾಖೆಗಳಿಗೆ ನಿಗದಿಪಡಿಸಿದ ಒಟ್ಟು ಅನುದಾನದಲ್ಲಿ ಶೇಕಡಾ 5 ರಷ್ಟನ್ನು ಕಡ್ಡಾಯವಾಗಿ ಖರ್ಚು ಮಾಡಬೇಕು ಹಾಗೂ ಅಗತ್ಯ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಹಾಜರಾಗಬೇಕು ಎಂದು ಅವರು ಸೂಚಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಮತ್ತು ಕಾಟಾಚಾರಕ್ಕೆ ಸಭೆಗೆ ಹಾಜರಾಗಬಾರದು ಎಂದು ಎಚ್ಚರಿಕೆ ನೀಡಿದರು. ವಿಕಲಚೇತನರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸುವಂತೆ ತಹಶೀಲ್ದಾರರು ತಿಳಿಸಿದರು. ಇದುವರೆಗೆ ಮೂರು ತಿಂಗಳ ವಿಕಲಚೇತನರ ಪೋಷಣಾ ಭತ್ಯೆ ಅನುದಾನ ಜಮಾ ಆಗದಿರುವ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ಕೃಷಿ, ಪಶುಸಂಗೋಪನೆ, ಮತ್ತು ಹೆಸ್ಕಾಂ ಇಲಾಖೆಯವರು ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನಿಯಮಾನುಸಾರ ವಿಕಲಚೇತನರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಯಿತು. ಇದೇ ವೇಳೆ, ಬಸ್ ನಿಲ್ದಾಣದಲ್ಲಿ ವಿಶೇಷ ಶೌಚಾಲಯ ನಿರ್ಮಿಸಲು ಹಾಗೂ ಬಸ್ನಲ್ಲಿ ವಾಸಸ್ಥಳದಿಂದ 100 ಕಿ.ಮೀ. ಪ್ರಯಾಣಿಸಲು ಅವಕಾಶ ಕಲ್ಪಿಸಿ, ಮಾನವೀಯತೆಯಿಂದ ವರ್ತಿಸಲು ಮತ್ತು ನಿಗದಿಪಡಿಸಿದ ಆಸನದಲ್ಲಿ ಕೂರಲು ಅವಕಾಶ ಮಾಡಿಕೊಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಅಲ್ಲದೆ, ವಾರದಲ್ಲಿ ಒಂದು ದಿನ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯುಡಿಐಡಿ ಮೆಡಿಕಲ್ ಕ್ಯಾಂಪ್ ನಡೆಸಲು ಕ್ರಮವಹಿಸುವಂತೆ ಸೂಚಿಸಲಾಯಿತು. ಈ ಸಭೆಗೆ ತಾಲ್ಲೂಕು ಪಂಚಾಯತ್, ಅರಣ್ಯ, ಖಜಾನೆ, ಪೊಲೀಸ್, ತೋಟಗಾರಿಕೆ, ಸಮಾಜ ಕಲ್ಯಾಣ ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದರಿಂದ ಆಕ್ರೋಶಗೊಂಡ ವಿಕಲಚೇತನರು, ಮುಂದಿನ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಾಗದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಮಾತನಾಡಿದ ವಿಕಲಚೇತನರ ಸಂಘದ ತಾಲ್ಲೂಕು ಅಧ್ಯಕ್ಷ ಹುಚ್ಚೇಶ ಯಂಡಿಗೇರಿ ಅವರು, ವಿಕಲಚೇತನರ ಕುಂದುಕೊರತೆ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು, ಇದು ಕಾಟಾಚಾರದ ಸಭೆಯಾಗಬಾರದು, ಹಾಗೂ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ ಗುಳೇದಗುಡ್ಡದಲ್ಲಿ ವಿಕಲಚೇತನರ ಸಮುದಾಯ ಭವನ ನಿರ್ಮಿಸುವಂತೆ ಒತ್ತಾಯಿಸಿದರು. ತಹಶೀಲ್ದಾರ ಬೊಮ್ಮಣ್ಣವರ ಅವರು, ಸಭೆಗೆ ಗೈರಾದ ಇಲಾಖಾ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಸೂಚಿಸಿದರು.4
- ತಮ್ಮ ಹೊಲದಲ್ಲಿ ಭೂತಾಯಿಯ ಸೇವೆಯಲ್ಲಿ ನಿರತರಾಗಿರುವ ಬಗ್ಗೆ ಒಂದು ವಿಡಿಯೋ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋವು ಎಲ್ಲರ ಗಮನ ಸೆಳೆಯುವ ಮತ್ತು ವ್ಯಾಪಕವಾಗಿ ವೈರಲ್ ಆಗುವ ಉದ್ದೇಶದಿಂದ ಪ್ರಕಟಗೊಂಡಿದೆ.1