ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಿ. ದೊಡ್ಡಬಳ್ಳಾಪುರ ಮಹಿಳೆಯರು, ವಿಶೇಷಚೇತನರು ಸ್ವಾವಲಂಬಿ ಜೀವನ ನಡೆಸಲು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ( ಗ್ಯಾಸ್ ) ಸಹಾಯಹಸ್ತ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಆಹಾರ ಸಚಿವ ಮುನಿಯಪ್ಪ ತಿಳಿಸಿದರು. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ವತಿಯಿಂದ ಬುಧವಾರ ನಡೆದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಚೆಕ್ ವಿತರಣೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಹಾಗೂ ಬ್ಯಾಟರಿ ಚಾಲಿತ ವಾಹನಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ಯಾಸ್ ಸಂಸ್ಥೆಯು 7 ಜಿಲ್ಲೆಗಳಲ್ಲಿ ಸುಮಾರು 20 ಸಾವಿರ ಕುಟುಂಬಗಳ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ವಿಶೇಷ ಚೇತನರಿಗೆ ಉದ್ಯೊಗ ನೀಡುತ್ತಿದೆ. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಅದರಂತೆ ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವುದು ಮಹಿಳೆಯರ ಆದ್ಯತೆ ಸಹ ಆಗಬೇಕು. ಸಂಸ್ಥೆ ನೀಡುತ್ತಿರುವ ಸೇವೆಯಿಂದ ವಿಶೇಷಚೇತನರು ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಅನ್ಯರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಇಂದು ನೀಡುತ್ತಿರುವ ವೀಲ್ ಚೇರ್ ಹಾಗೂ ಹಣದ ಸೇವೆಯು ಸ್ವಾವಲಂಬಿ ಜೀವನ ನಡೆಸಲು ಎಡೆ ಮಾಡಿಕೊಡುತ್ತದೆ ಎಂದರು. ಶಾಸಕ ಧೀರಜ್ ಮುನಿರಾಜು ಮಾತನಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ಬಜೆಟ್ನಲ್ಲಿ ರಾಜ್ಯ ಸರಕಾರದ ಯೋಜನೆಗಳು ಇನ್ನು ಹೆಚ್ಚಾಗಿ ತಲುಪಬೇಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಖರೀದಿಸುವ ತಾಲೂಕು ಇದಾಗಿದೆ. ರೈತರ ಸ್ವಾವಲಂಬಿ ಜೀವನ ನಡೆಸಲು ಇದು ಸಹಕಾರಿಯಾಗಿದೆ. ಈವರೆಗೆ ತಾಲೂಕಿನಲ್ಲಿ 12,930 ರೈತರು ನೋಂದಣಿಯಾಗಿದ್ದಾರೆ. ಆದರೆ, ರಾಗಿ ಖರೀದಿ ಕೇಂದ್ರಗಳು ಕೇವಲ 2 ಇರುವುದರಿಂದ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ತಪ್ಪಿಸಲು ಇನ್ನೂ 3 ಅಥವಾ 4 ಕೇಂದ್ರಗಳನ್ನು ತೆರೆಯಬೇಕಾಗಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸಚಿವರಲ್ಲಿ ಮನವಿ ಮಾಡಿದರು. ಫೊಟೊ:೨೧ಡಿಬಿಪಿ೪ ದೊಡ್ಡಬಳ್ಳಾಪುರದ ಗ್ಯಾಸ್ ಸಂಸ್ಥೆಯಿಂದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಸಚಿವ ಕೆಎಚ್ ಮುನಿಯಪ್ಪ ಚೆಕ್ ವಿತರಣೆ ಮಾಡಿದರು. ಶಾಸಕ ಧೀರಜ್ ಮುನಿರಾಜು, ಸಂಸ್ಥೆಯ ಅಮಲಿನಾಯಕ್, ಕೆಪಿಸಿಸಿ ಸದಸ್ಯ ಮುನಿರಾಜು, ಮೋಟಿವೇಷನ್ ಸಂಸ್ಥೆಯ ಮಹೇಶ್ ಚಂದ್ರಶೇಖರ, ನಗರಸಭಾ ಸದಸ್ಯೆ ನಾಗರತ್ನಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ, ವಿಕಲಚೇತನ ಇಲಾಖೆ ಉಪ ನಿರ್ದೇಶಕ ಜಗದೀಶ್ ಇದ್ದರು.
ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಿ. ದೊಡ್ಡಬಳ್ಳಾಪುರ ಮಹಿಳೆಯರು, ವಿಶೇಷಚೇತನರು ಸ್ವಾವಲಂಬಿ ಜೀವನ ನಡೆಸಲು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ( ಗ್ಯಾಸ್ ) ಸಹಾಯಹಸ್ತ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಆಹಾರ ಸಚಿವ ಮುನಿಯಪ್ಪ ತಿಳಿಸಿದರು. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ವತಿಯಿಂದ ಬುಧವಾರ ನಡೆದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಚೆಕ್ ವಿತರಣೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಹಾಗೂ ಬ್ಯಾಟರಿ ಚಾಲಿತ ವಾಹನಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ಯಾಸ್ ಸಂಸ್ಥೆಯು 7 ಜಿಲ್ಲೆಗಳಲ್ಲಿ ಸುಮಾರು 20 ಸಾವಿರ ಕುಟುಂಬಗಳ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ವಿಶೇಷ ಚೇತನರಿಗೆ ಉದ್ಯೊಗ ನೀಡುತ್ತಿದೆ. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಅದರಂತೆ ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವುದು ಮಹಿಳೆಯರ ಆದ್ಯತೆ ಸಹ ಆಗಬೇಕು. ಸಂಸ್ಥೆ ನೀಡುತ್ತಿರುವ ಸೇವೆಯಿಂದ ವಿಶೇಷಚೇತನರು ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಅನ್ಯರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಇಂದು ನೀಡುತ್ತಿರುವ ವೀಲ್ ಚೇರ್ ಹಾಗೂ ಹಣದ ಸೇವೆಯು ಸ್ವಾವಲಂಬಿ ಜೀವನ ನಡೆಸಲು ಎಡೆ ಮಾಡಿಕೊಡುತ್ತದೆ ಎಂದರು. ಶಾಸಕ ಧೀರಜ್ ಮುನಿರಾಜು ಮಾತನಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ಬಜೆಟ್ನಲ್ಲಿ ರಾಜ್ಯ ಸರಕಾರದ ಯೋಜನೆಗಳು ಇನ್ನು ಹೆಚ್ಚಾಗಿ ತಲುಪಬೇಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಖರೀದಿಸುವ ತಾಲೂಕು ಇದಾಗಿದೆ. ರೈತರ ಸ್ವಾವಲಂಬಿ ಜೀವನ ನಡೆಸಲು ಇದು ಸಹಕಾರಿಯಾಗಿದೆ. ಈವರೆಗೆ ತಾಲೂಕಿನಲ್ಲಿ 12,930 ರೈತರು ನೋಂದಣಿಯಾಗಿದ್ದಾರೆ. ಆದರೆ, ರಾಗಿ ಖರೀದಿ ಕೇಂದ್ರಗಳು ಕೇವಲ 2 ಇರುವುದರಿಂದ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ತಪ್ಪಿಸಲು ಇನ್ನೂ 3 ಅಥವಾ 4 ಕೇಂದ್ರಗಳನ್ನು ತೆರೆಯಬೇಕಾಗಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸಚಿವರಲ್ಲಿ ಮನವಿ ಮಾಡಿದರು. ಫೊಟೊ:೨೧ಡಿಬಿಪಿ೪ ದೊಡ್ಡಬಳ್ಳಾಪುರದ ಗ್ಯಾಸ್ ಸಂಸ್ಥೆಯಿಂದ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಸಚಿವ ಕೆಎಚ್ ಮುನಿಯಪ್ಪ ಚೆಕ್ ವಿತರಣೆ ಮಾಡಿದರು. ಶಾಸಕ ಧೀರಜ್ ಮುನಿರಾಜು, ಸಂಸ್ಥೆಯ ಅಮಲಿನಾಯಕ್, ಕೆಪಿಸಿಸಿ ಸದಸ್ಯ ಮುನಿರಾಜು, ಮೋಟಿವೇಷನ್ ಸಂಸ್ಥೆಯ ಮಹೇಶ್ ಚಂದ್ರಶೇಖರ, ನಗರಸಭಾ ಸದಸ್ಯೆ ನಾಗರತ್ನಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ, ವಿಕಲಚೇತನ ಇಲಾಖೆ ಉಪ ನಿರ್ದೇಶಕ ಜಗದೀಶ್ ಇದ್ದರು.
- ನೆಲಮಂಗಲ ನೆಲಮಂಗಲದಲ್ಲಿ ರಾಷ್ಟ್ರಪಕ್ಷಿಗಳ ಅನುಮಾನಾಸ್ಪದ ಸಾವು ಒಂದೇ ಜಾಗದಲ್ಲಿ ಆರು ನವಿಲುಗಳು ಮಾರಣಹೋಮ ನೆಲಮಂಗಲ ನಗರದ ಬಿಲಾಲ್ ನಗರದ ಬಳಿ ಪತ್ತೆ ಸ್ಥಳಕ್ಕೆ ನೆಲಮಂಗಲ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ಸ್ಥಳೀಯರ ಮಾಹಿತಿ ಮೇರೆಗೆ ಪ್ರಕರಣ ದಾಖಲು ಮೃತ ನವಿಲುಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.1
- Post by Venu Gopal1
- BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಪತ್ರ.1
- ರೋಡ್ ಗೆ ಅಡ್ಡ ಇದೆ ಕೂಡಿ ಡಾರ್ಲಿಂಗ್ c1
- Post by SUDHUR CHAULANI NEWS1
- yah video banaya tha Facebook ke bare mein1
- ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..1
- ನೆಲಮಂಗಲ ಹೆದ್ದಾರಿಯಲ್ಲಿ HP ಗ್ಯಾಸ್ ತುಂಬಿದ್ದ ಲಾರಿ ಪಲ್ಟಿ.. ಆತಂಕ! HP ಗ್ಯಾಸ್ ಪ್ಲ್ಯಾಂಟ್ ಗೆ ಸಾಗಿಸುತ್ತಿದ್ದ ವೇಳೆ ಅವಘಡ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಗ್ಯಾಸ್ ಲಾರಿ ನೆಲಮಂಗಲ ತಾಲೂಕಿನ ಸೋಲೂರು ಬಳಿ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆತಂಕದಲ್ಲೇ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು ಮಂಗಳೂರಿನಿಂದ ಬೆಂಗಳೂರಿಗೆ ಬರುತಿದ್ದ ಲೋಡೆಡ್ HP ಗ್ಯಾಸ್ ಲಾರಿ ಸ್ಥಳಕ್ಕೆ ಕುದೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡು ಗ್ಯಾಸ್ ಲೀಕೇಜ್ ಭಯದಲ್ಲಿ ಹೆದ್ದಾರಿ ಸವಾರ ಆತಂಕ ಅನಾಹುತ ತಡೆಯಲು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪರಿಶೀಲನೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ಪಾರು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.1