ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ಕಲ್ಪಿಸಲು ದಿಢೀರ್ ಪ್ರತಿಭಟನೆ. ವಿದ್ಯಾರ್ಥಿಗಳ ಗೋಳು ಕೇಳದ ಶಾಸಕ ಮಾನಪ್ಪ ವಜ್ಜಲ್ ಆರೋಪ. ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ಕಲ್ಪಿಸಲು ದಿಢೀರ್ ಪ್ರತಿಭಟನೆ. ವಿದ್ಯಾರ್ಥಿಗಳ ಗೋಳು ಕೇಳದ ಶಾಸಕ ಮಾನಪ್ಪ ವಜ್ಜಲ್. ಹಟ್ಟಿ; ಪಟ್ಟಣದಿಂದ ಲಿಂಗಸೂರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಸ್ ಎಫ್ ಐ ಸಿ ಐ ಟಿ ಯು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಟ್ಟಿ ಬಸ್ ನಿಲ್ದಾಣದಲ್ಲಿ ಸುಮಾರು 3 ಗಂಟೆಗಳ ಕಾಲ ಬಸ್ ಗಳನ್ನು ತಡೆದು ದಿಡೀರ್ ಪ್ರತಿಭಟನೆ ನಡೆಸಲಾಯಿತು ಗುರುವಾರ ಪ್ರತಿಭಟನೆ ನಡೆಸಿದ ಜಂಟಿ ಸಂಘಟನೆಗಳ ಮುಖಂಡರು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಾಗ ಡಿಪೋ ಮ್ಯಾನೇಜರ್ ಅವರು ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕಿನ ಲಿಂಗಸ್ಗೂರು ಡಿಪೋ ದಲ್ಲಿ ಬಸ್ಸುಗಳ ಕೊರತೆ ಇದೆ. ಗುಜರಿಗೆ ಹಾಕುವ ಎಲ್ಲಾ ಬಸ್ಸುಗಳನ್ನು ತಾಲೂಕಿನಲ್ಲಿ ಓಡಿಸಲಾಗುತ್ತದೆ. ಇದರಿಂದ ಅವು ಮಧ್ಯದಲ್ಲಿ ಕೆಟ್ಟ ನಿಲ್ಲುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ಹಾಗೂ ಇತರೇ ಕೆಲಸಗಳ ಸ್ಥಳಕ್ಕೆ ತಲುಪದೆ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗಂತೂ ಅವರ ಅಭ್ಯಾಸದ ಮೇಲೆ ಭಾರೀ ಪೆಟ್ಟು ಬಿದ್ದಿದೆ. ತಾಲೂಕಿನ ಬಸ್ ಡಿಪೋಗೆ ಹೊಸ ಬಸ್ಸುಗಳನ್ನು ಖರೀದಿ ಮಾಡುವ ತುರ್ತು ಇದೆ. ಆದರೆ ಶಾಸಕ ಮಾನಪ್ಪ ವಜ್ಜಲ್ ತಾಲೂಕಿನಲ್ಲಿ ಕಾಣೆಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಯುವಜನರ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂತಹ ಅಯೋಗ್ಯ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ವೇಳೆ ವೆಂಕೋಬ್ ಮಿಯ್ಯಾಪೂರು, ನಿಂಗಪ್ಪ ವೀರಾಪೂರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಕೆಪಿಆರ್ ಎಸ್ ಮುಖಂಡರಾದ ಪೆಂಚಲಯ್ಯ, ವನಜಾಕ್ಷಿ, ಹಾಜಿಬಾಬು, ಅಲ್ಲಾಭಕ್ಷ, ರಜಿಯಾ, ಸಾಹಿರಾ ಬಾನು, ದುರುಗಮ್ಮ, ಫಕೃದ್ದೀನ್, ದಾವೂದ್, ಸೇರಿದಂತೆ ನೂರಾರು ಜನ ಇದ್ದರು
ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ಕಲ್ಪಿಸಲು ದಿಢೀರ್ ಪ್ರತಿಭಟನೆ. ವಿದ್ಯಾರ್ಥಿಗಳ ಗೋಳು ಕೇಳದ ಶಾಸಕ ಮಾನಪ್ಪ ವಜ್ಜಲ್ ಆರೋಪ. ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ಕಲ್ಪಿಸಲು ದಿಢೀರ್ ಪ್ರತಿಭಟನೆ. ವಿದ್ಯಾರ್ಥಿಗಳ ಗೋಳು ಕೇಳದ ಶಾಸಕ ಮಾನಪ್ಪ ವಜ್ಜಲ್. ಹಟ್ಟಿ; ಪಟ್ಟಣದಿಂದ ಲಿಂಗಸೂರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಸ್ ಎಫ್ ಐ ಸಿ ಐ ಟಿ ಯು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಟ್ಟಿ ಬಸ್ ನಿಲ್ದಾಣದಲ್ಲಿ ಸುಮಾರು
3 ಗಂಟೆಗಳ ಕಾಲ ಬಸ್ ಗಳನ್ನು ತಡೆದು ದಿಡೀರ್ ಪ್ರತಿಭಟನೆ ನಡೆಸಲಾಯಿತು ಗುರುವಾರ ಪ್ರತಿಭಟನೆ ನಡೆಸಿದ ಜಂಟಿ ಸಂಘಟನೆಗಳ ಮುಖಂಡರು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಾಗ ಡಿಪೋ ಮ್ಯಾನೇಜರ್ ಅವರು ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕಿನ ಲಿಂಗಸ್ಗೂರು ಡಿಪೋ ದಲ್ಲಿ
ಬಸ್ಸುಗಳ ಕೊರತೆ ಇದೆ. ಗುಜರಿಗೆ ಹಾಕುವ ಎಲ್ಲಾ ಬಸ್ಸುಗಳನ್ನು ತಾಲೂಕಿನಲ್ಲಿ ಓಡಿಸಲಾಗುತ್ತದೆ. ಇದರಿಂದ ಅವು ಮಧ್ಯದಲ್ಲಿ ಕೆಟ್ಟ ನಿಲ್ಲುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ಹಾಗೂ ಇತರೇ ಕೆಲಸಗಳ ಸ್ಥಳಕ್ಕೆ ತಲುಪದೆ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗಂತೂ ಅವರ ಅಭ್ಯಾಸದ ಮೇಲೆ ಭಾರೀ ಪೆಟ್ಟು ಬಿದ್ದಿದೆ. ತಾಲೂಕಿನ ಬಸ್ ಡಿಪೋಗೆ ಹೊಸ ಬಸ್ಸುಗಳನ್ನು ಖರೀದಿ ಮಾಡುವ ತುರ್ತು ಇದೆ. ಆದರೆ ಶಾಸಕ
ಮಾನಪ್ಪ ವಜ್ಜಲ್ ತಾಲೂಕಿನಲ್ಲಿ ಕಾಣೆಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಯುವಜನರ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂತಹ ಅಯೋಗ್ಯ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ವೇಳೆ ವೆಂಕೋಬ್ ಮಿಯ್ಯಾಪೂರು, ನಿಂಗಪ್ಪ ವೀರಾಪೂರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಕೆಪಿಆರ್ ಎಸ್ ಮುಖಂಡರಾದ ಪೆಂಚಲಯ್ಯ, ವನಜಾಕ್ಷಿ, ಹಾಜಿಬಾಬು, ಅಲ್ಲಾಭಕ್ಷ, ರಜಿಯಾ, ಸಾಹಿರಾ ಬಾನು, ದುರುಗಮ್ಮ, ಫಕೃದ್ದೀನ್, ದಾವೂದ್, ಸೇರಿದಂತೆ ನೂರಾರು ಜನ ಇದ್ದರು
- ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ. ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.1
- ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ1
- ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ2
- ಈದ್ ಮಿಲಾದ್ ಸಂಭ್ರಮದ ಆಚರಣೆ ದೇವದುರ್ಗದ ಮುಖ್ಯ ರಸ್ತೆ ಮೂಲಕ ಮೆಕ್ಕಾ ಮದೀನಾ ಸ್ಥಬ್ದ ಚಿತ್ರಗಳ ಮೆರವಣಿಗೆ1
- ಸದನದ ಒಳಗೆ ಹೋರಾಟ ಆಗಿದೆ ಸದನದ ಹೊರಗೆ ಹೋರಾಟ ಸೆ.1 ರಿಂದ ಆರಂಭ ಚಲವಾದಿ ನಾರಾಯಣಸ್ವಾಮಿ ರಾಯಚೂರು: ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ತಾನು ಗಂಭೀರವಾಗಿದ್ದು, ಹೆಚ್ಚು ಮಾತನಾಡಿದರೆ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಪರಿಶಿಷ್ಟ ವರ್ಗಗಳ ಜನರಲ್ಲಿ ಸಾಕಷ್ಟು ಬಡತನವಿದ್ದು, ಅವರಿಗೆ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳನ್ನು ತಲುಪಿಸಬೇಕಿತ್ತು. ಆದರೆ 187 ಕೋಟಿ ರೂ. ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿರುವುದು ನೋವಿನ ಸಂಗತಿ. ಅದೇ ಸಮುದಾಯದ ಸಚಿವರ ಕೈಕೆಳಗೆ ಈ ಅಕ್ರಮ ನಡೆದಿದೆ ಎನ್ನುವುದು ಬೇಸರದ ಸಂಗತಿ. ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 1ರಿಂದ ಪಾದಯಾತ್ರೆ ಸೇರಿದಂತೆ ಹೋರಾಟ ಆರಂಭಿಸಲಾಗುವುದು ಎಂದರು.1
- ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ದೂತರಾದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಸ್ಮರಿಸಲು ಆಚರಿಸುವ ಪವಿತ್ರ ದಿನವಾಗಿದೆ ಗೋಗಿ ಎಲ್ಲಿ ಪಥಸಂಚಲನ ನಡೆಯಿತು ಸ್ಥಳೀಯ ಪೊಲೀಸರು, ಮಹಿಳಾ ಸಿಬ್ಬಂದಿ, ಕೆಎಸ್ಆರ್ಪಿ (KSRP) ತುಕಡಿಗಳು ಮತ್ತು ಗೃಹ ರಕ್ಷಕ ದಳದವರು.ಮಾರ್ಗ: ಊರಿನ ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಮತ್ತು ಸಂವೇದನಾಶೀಲ ಪ್ರದೇಶಗಳ ಮೂಲಕ ಸಾಗುತ್ತದೆ1
- ಲಿಂಗನಬಂಡಿ ಮೌನೇಶ್ವರ ಪೂಜೆಗೆ ಬಾಕುತಿರುವ ವಿಶ್ವಕರ್ಮ ಸಮಾಜದ ಎಲ್ಲರೂ ಒಂದಾಗೋಣ ಬನ್ನಿ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ಇವರ ಕೈ ಕೊಡ್ಸೋಣ ಎಲ್ಲಾ ಮಠ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ವಿನಂತಿ1
- ಬಿಹಾರ್ ರಾಜ್ಯದಲ್ಲಿ ಪ್ರತಿ ಭಟನೆ ಮಾಡಿದ 6-ವರ್ಷದ ಬಾಲಕನಿಗೆ ಪೊಲೀಸ್ ಅರೆಸ್ಟ್ ಮಾಡಿದ್ದಾರೆ1