ಖ್ಯಾತ ಉದ್ಯಮಿ ನಾರಾಯಣ ಸಿಂಗಾಡೆ ಅವರನ್ನು 'ಶರಣ ಶ್ರೀ' ಪ್ರಶಸ್ತಿ ನೀಡಿ ಸನ್ಮಾನಿ ಕಲಬುರಗಿ: ನಗರದ ಹೋಳಿಕಟ್ಟಾ, ಮಕ್ತಾಪುರದಲ್ಲಿರುವ ಭಗವಾನ್ ಶ್ರೀ ಜೀವೇಶ್ವರ ದೇವಸ್ಥಾನದಲ್ಲಿ ಆ. 26ರಂದು ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಪುಟ್ಟರಾಜ ಕಲಾ ಸಂಘದ ವತಿಯಿಂದ ಜಿಲ್ಲಾ ಸ್ವಕುಳ ಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಹಾಗೂ 2025ರಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಮೋಘ ಕಾರ್ಯಗೈದ, ಶರಣ ಸಂಪ್ರದಾಯವನ್ನು ಅಳವಡಿಸಿಕೊಂಡಿರುವ ಖ್ಯಾತ ಉದ್ಯಮಿ, ನಾರಾಯಣ ಸಿಂಗಾಡೆ ಅವರನ್ನು 'ಶರಣ ಶ್ರೀ' ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಖ್ಯಾತ ಕಲಾವಿದ ಶ್ರೀ ದತ್ತರಾಜ ಕಲಶೆಟ್ಟಿ, ಅಂಡಗಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಡಗಿ, ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿನೋದಕುಮಾರ ಜೇನವರಿ, ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷ ಶ್ರೀ ಶಿವಲಿಂಗಪ್ಪ ಅಷ್ಟಗಿ, ಪೇಂಟರ್ ಅರುಣಕುಮಾರ ಕಲಶೆಟ್ಟಿ, ಖ್ಯಾತ ಪುರವಂತ ಶ್ರೀ ಗಂಗಾಧರ ಅಗ್ಗಿಮಠ, ಪೂನಾ ಟೈಲರ್, ಸ್ವಕುಳ ಸಾಲಿ ಸಮಾಜದ ಗೌರವಾಧ್ಯಕ್ಷ ಹೀರೊಳ್ಳಿಕರ, ರಾಜ್ಯ ಉಪಾಧ್ಯಕ್ಷ ತುಕಾರಾಂ ಕೊಂಗೆ, ಶಿಕ್ಷಕ ಮಹೇಶಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಖ್ಯಾತ ಉದ್ಯಮಿ ನಾರಾಯಣ ಸಿಂಗಾಡೆ ಅವರನ್ನು 'ಶರಣ ಶ್ರೀ' ಪ್ರಶಸ್ತಿ ನೀಡಿ ಸನ್ಮಾನಿ ಕಲಬುರಗಿ: ನಗರದ ಹೋಳಿಕಟ್ಟಾ, ಮಕ್ತಾಪುರದಲ್ಲಿರುವ ಭಗವಾನ್ ಶ್ರೀ ಜೀವೇಶ್ವರ ದೇವಸ್ಥಾನದಲ್ಲಿ ಆ. 26ರಂದು ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಪುಟ್ಟರಾಜ ಕಲಾ ಸಂಘದ ವತಿಯಿಂದ ಜಿಲ್ಲಾ ಸ್ವಕುಳ ಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಹಾಗೂ 2025ರಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಮೋಘ ಕಾರ್ಯಗೈದ, ಶರಣ ಸಂಪ್ರದಾಯವನ್ನು ಅಳವಡಿಸಿಕೊಂಡಿರುವ ಖ್ಯಾತ ಉದ್ಯಮಿ, ನಾರಾಯಣ ಸಿಂಗಾಡೆ ಅವರನ್ನು 'ಶರಣ ಶ್ರೀ' ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಖ್ಯಾತ ಕಲಾವಿದ ಶ್ರೀ ದತ್ತರಾಜ ಕಲಶೆಟ್ಟಿ, ಅಂಡಗಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಡಗಿ, ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿನೋದಕುಮಾರ ಜೇನವರಿ, ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷ ಶ್ರೀ ಶಿವಲಿಂಗಪ್ಪ ಅಷ್ಟಗಿ, ಪೇಂಟರ್ ಅರುಣಕುಮಾರ ಕಲಶೆಟ್ಟಿ, ಖ್ಯಾತ ಪುರವಂತ ಶ್ರೀ ಗಂಗಾಧರ ಅಗ್ಗಿಮಠ, ಪೂನಾ ಟೈಲರ್, ಸ್ವಕುಳ ಸಾಲಿ ಸಮಾಜದ ಗೌರವಾಧ್ಯಕ್ಷ ಹೀರೊಳ್ಳಿಕರ, ರಾಜ್ಯ ಉಪಾಧ್ಯಕ್ಷ ತುಕಾರಾಂ ಕೊಂಗೆ, ಶಿಕ್ಷಕ ಮಹೇಶಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ನೇಪಾಳ ಪ್ರವಾಹದಲ್ಲಿ ಸಾವನಪ್ಪಿದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಿ ಕಲಬುರಗಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡದ್ದು ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರ ಅಲ್ಲ ದೇಶದ ಸಾಕಷ್ಟು ಜನ ಸಿಲುಕಿದ್ದಾರೆ ನೂರಾರು ಜನ ಕೊಚ್ಚಿಕೊಂಡು ಕೆಲ ಜನ ಪ್ರಾಣ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಶ್ರದ್ಧಾಂಜಲಿ ಅರ್ಪಿಸುತ್ತೆನೆ. ಜೊತೆಗೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೆನೆ ಕರ್ನಾಟಕ ಅಷ್ಟೇ ಅಲ್ಲ ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರಿಗೆ ಪರಿಹಾರ ಕೊಡಬೇಕು. ಹಾಗೂ ನೇಪಾಳದ ಜೊತೆಗೆ ನಿಲ್ಲುವಂತೆ ಕೂಡ ಪತ್ರ ಬರೆದಿದ್ದನೆ. ಎಂದು ಡಾ- ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಸಂಪುಟದಲ್ಲಿ ಕೆಲ ಸಚಿವರ ಬದಲಾವಣೆಗೆ ಡಿಕೆಶಿ ದೆಹಲಿ ಬೇಟಿ ವಿಚಾರ. ನಾನು ಇವಾಗ ಕಲಬುರಗಿಯಲ್ಲಿದ್ದೆನೆ. ನನಗೆ ಯಾವುದೇ ಮಾಹಿತಿ ಇಲ್ಲ ಏನೆ ಬದಲಾವಣೆ ಇದ್ದರು ನನ್ನ ಬಳಿ ಬರಲೇ ಬೇಕು ಅವರು ಏಲ್ಲೆ ಹೋದ್ರು ನನ್ನ ಬಳಿ ಬರಬೇಕು ಬಂದ ಮೇಲೆ ನಿಮಗೆ ಮಾಹಿತಿ ನೀಡುತ್ತೆನೆ ಎಂದು ಹೇಳಿದ್ದಾರೆ1
- ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.1
- ಗೌರ (ಬಿ) ಗ್ರಾಮದಲ್ಲಿ ಆ.30 ಮತ್ತು 31ರಂದು ಪವಾಡ ಪುರುಷ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಉಡಿ ತುಂಬುವ ಕಾರ್ಯಕ್ರಮ. ಗೌರ ಬಿಯಲ್ಲಿ ಅ.30, 31ರಂದು ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ. ಅಫಜಲಪೂರ: ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಗೌರ ಬಿ ಗ್ರಾಮದಲ್ಲಿ ಅ.30 ಹಾಗೂ 31ರಂದು ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ನೂತನ ಪಲ್ಲಕ್ಕಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಅ.30ರಂದು ಸಂಜೆ 6 ಗಂಟೆಗೆ 21 ಪಲ್ಲಕ್ಕಿಗಳ ಸಂಗಮ ನಡೆಯಲಿದೆ. ಅ.31ರಂದು ಬೆಳಗ್ಗೆ 8 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ ನಡೆಯಲಿದ್ದು, ಬಳಿಕ ದೈವೀ ಪುರುಷರಿಂದ ದೈವವಾಣಿ ನುಡಿಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಗ್ರಾಮದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸರ್ವಧರ್ಮ ಧಾರ್ಮಿಕ ಸಭೆ ಜರುಗಲಿದ್ದು, ಅಭಿನವ ಯಲ್ಲಾಲಿಂಗ ಮಹಾರಾಜರು, ಕೈಲಾಸಲಿಂಗ ಶಿವಾಚಾರ್ಯರು, ಅತನೂರು ಗ್ರಾಮದ ಗುರುಬಸವ ಶಿವಾಚಾರ್ಯರು,ಶ್ರೀ ಕನ್ನಯ್ಯ ಮಹಾರಾಜರು, ಮುಗಳಿ ಗ್ರಾಮದ ಶ್ರೀ ಭೋಗೇಶ್ವರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠದ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಅರುಣಕುಮಾರ ಪಾಟೀಲ್, ನಿತಿನ್ ಗುತ್ತೇದಾರ, ಶಿವಕುಮಾರ್ ನಾಟಿಕಾರ, ಜೆ ಎಂ ಕೊರಬು, ಶಂಕು ಮ್ಯಾಕೇರಿ, ಕೆ.ಜಿ. ಪೂಜಾರಿ ಹಾಗೂ ತಹಸೀಲ್ದಾರ್ ಸಂಜೀವ ಕುಮಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಠ್ಠಲ್ ಮಿರಗಿ, ಜಟ್ಟೆಪ್ಪ ಪೂಜಾರಿ, ಶರಣು ದಿವಾಣಜಿ, ನಿಂಗಣ್ಣ ಪೂಜಾರಿ, ಬಸವರಾಜ ಕುಂಬಾರ, ಸಂಗನಬಸಪ್ಪ ಪೂಜಾರಿ, ಅಪ್ಪಾಪಟೇಲ್ ಪಟೇಲ್, ನಾಗರಾಜ ದಿವಾಣಜಿ, ಗುರುಲಿಂಗಪ್ಪ ಶಿಂಪಿ, ಶ್ರೀಕಾಂತ್ ಪೂಜಾರಿ, ಚೌಡಪ್ಪ ಚೌಡಿಹಾಳ, ಸಿದ್ದಾರ್ಥ ಪೂಜಾರಿ, ಸಿದ್ದರಾಮ ಗಿಲ್ಕಿ, ಶರಣಪ್ಪ ಅಮೋಗಿ, ಪರಮಾನಂದ ಸಭದ, ಕಿರಣ ಚೌಡಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.1
- ಮಾಧ್ಯಮ ಮಿತ್ರರಿಗೆ ನಮಸ್ಕಾರ ಪತ್ರಿಕಾ ಹೇಳಿಕೆ 101 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಕಲಬುರ್ಗಿ ಜಿಲ್ಲೆಯನ್ನು ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ ಕಲಬುರ್ಗಿ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರವು 101 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ, ಕಲಬುರ್ಗಿ ಜಿಲ್ಲೆಯನ್ನು ಬರಗಾಲ ಘೋಷಣೆಯಿಂದ ಕೈಬಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ. ಕಲಬುರ್ಗಿ ಜಿಲ್ಲೆಯ ರೈತರು ಕೂಡ ಬರದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ. ರೈತರ ಸಂಕಷ್ಟವನ್ನು ವಾಸ್ತವವಾಗಿ ಪರಿಶೀಲಿಸಿ, ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಮತ್ತು ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು. ಕಲಬುರ್ಗಿ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದ್ದರೂ, ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ಮೌನ ವಹಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಕಲಬುರ್ಗಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಇಲ್ಲದಿದ್ದರೆ ಕಲಬುರ್ಗಿ ಜಿಲ್ಲೆಯ ರೈತರು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಕಲಬುರ್ಗಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ರೈತರ ತಾಳ್ಮೆಯನ್ನು ಪರೀಕ್ಷಿಸದೆ, ತಕ್ಷಣವೇ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ವಾಸ್ತವಿಕ ಸಮೀಕ್ಷೆ ನಡೆಸಿ, ಕಲಬುರ್ಗಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಿ ರೈತರಿಗೆ ನ್ಯಾಯ ಒದಗಿಸಬೇಕು. ರಮೇಶ್ ಎಸ್. ಹೂಗಾರ್ ಜಿಲ್ಲಾಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರ ಸಂಘ, ಕಲಬುರ್ಗಿ1
- ದೇವಲ ಗಾಣಗಾಪುರದಲ್ಲಿ ಮತ್ತೆ ಗರ್ಜಿಸಿದ ಜೆಸಿಬಿ ಸದ್ದು: ದೇವಸ್ಥಾನದ ಜಾಗ ಖಾಲಿ ಮಾಡಿದ ಅಂಗಡಿ ಮಾಲೀಕರು1
- ಮುಸ್ಲಿಂ ಯುವಕನಿಗೆ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದ ಕೇಂದ್ರ ಸಚಿವ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಆಡಿಯೋ ವೈರಲ್1
- ಆಗಸ್ಟ್: 30,31ರಂದು ಶ್ರೀ ಅಭಿನವ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ನೂತನ ಪಲ್ಲಕಿ ಉತ್ಸವ.! ಆಗಸ್ಟ್: 30,31ರಂದು ಶ್ರೀ ಅಭಿನವ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ನೂತನ ಪಲ್ಲಕಿ ಉತ್ಸವ.!1
- ಸೆ.14 ಕ್ಕೆ ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರ "ಅಡ್ಡ ಪಲ್ಲಕ್ಕಿ ಮಹೋತ್ಸವ" ಹಾಗೂ ಸೆ.11 ಕ್ಕೆ ಉಡಿ ತುಂಬುವ ಕಾರ್ಯಕ್ರಮ. ಅಫಜಲಪುರ: ಸೆ.14 ಕ್ಕೆ ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರ "ಅಡ್ಡ ಪಲ್ಲಕ್ಕಿ ಮಹೋತ್ಸವ" ಹಾಗೂ ಸೆ.11 ಕ್ಕೆ ಉಡಿ ತುಂಬುವ ಕಾರ್ಯಕ್ರಮ.1