"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
- ಹೊಳಲ್ಕೆರೆ ಪಟ್ಟಣದ ಇಂಡೇನ್ ಏಜೆನ್ಸಿಯ ಗ್ರಾಹಕರು ಒಂದು ತಿಂಗಳ ಹಿಂದೆ ಗ್ಯಾಸ್ ಬುಕ್ ಮಾಡಿದರು ಸಹ ಏಜೆನ್ಸಿ ಅವರು ಗ್ರಾಮಗಳಿಗೆ ತೆರಳಿ ಸಿಲಿಂಡರ್ ಗಳನ್ನು ನೀಡುತ್ತಿಲ್ಲ, ದಿನನಿತ್ಯ ಹೊಳಲ್ಕೆರೆ ತಾಲೂಕಿನ ಗಡಿಭಾಗದ ಸಾಸಲುಹಳ್ಳ, ರಾಮೇನಹಳ್ಳಿ, ತುಪ್ಪದಹಳ್ಳಿ, ರಾಮಘಟ್ಟ,ಕೆಂಚಾಪುರ,ಬಿ,ಜಿ ಹಳ್ಳಿ,ತಾಳ್ಯ, ಅಂದನೂರು, ರಾಮಗಿರಿ, ಟಿ ,ನೂಲೆನೂರು, ಲಿಂಗದಹಳ್ಳಿ, ಹೊಳಲ್ಕೆರೆ ಪಟ್ಟಣ ಹೊರಕೆದೇವಪುರ,ಎಲ್ಲಾ ಗ್ರಾಮಗಳಿಂದ ಗ್ರಾಹಕರು ಅಡುಗೆಗೆ ಸಿಲಿಂಡರ್ ಇಲ್ಲದೇ ಅಖಿಲ್ ಇಂಡಿಯನ್ ಏಜೆನ್ಸಿ ಆಫೀಸ್ ಮುಂದೆ ಬರುತ್ತಿದ್ದಾರೆ.1
- Post by Suresh Belagere1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಿರುವ ಹಿನ್ನೆಲೆ, ದಾವಣಗೆರೆಯಲ್ಲಿ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು ಸ್ಪಷ್ಟನೆ ನೀಡಿದರು. ಸ್ವಾಮೀಜಿಗಳು ಸಮಾಜದ ಹಿರಿಯರಿಗೆ ಗೌರವ ನೀಡುತ್ತಿರಲಿಲ್ಲ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಸಮಾಜ ಸಂಘಟನೆ ಕಾರ್ಯಗಳನ್ನೂ ಅವರು ಸಮರ್ಪಕವಾಗಿ ನಡೆಸುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೂ ಮೊದಲು ಸ್ವಾಮೀಜಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಬದಲಾವಣೆ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿಯನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಇದಲ್ಲದೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಈಗ ಲೆಕ್ಕ ಕೇಳುವ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ ಆರೋಪಿಸಿದರು.1
- ಶಿವಮೊಗ್ಗ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ನಗರದ ಮಂಜುನಾಥ್ ರವರನ್ನು ಬೆಂಗಳೂರಿನ ಸ್ವಪ್ನ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಈ ಪ್ರಶಸ್ತಿ ಜೀವಮಾನದ 70ನೇ ರಾಜ್ಯ ಪ್ರಶಸ್ತಿಯಾಗಿದೆ ಎಂದು ಅಪೇಕ್ಷಾ ಮಂಜುನಾಥ್ ತಿಳಿಸಿದರು.1
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಭೀಕರ ಬಸ್ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದ ಬಸ್, ಐವರು ಸ್ಥಳದಲ್ಲೇ ಸಾವು! #JB_News_Kannada1
- ಚಳ್ಳಕೆರೆ ನಗರದಲ್ಲಿ ಕಬ್ಬಿಣದ ಅದಿರು ಸಾಗಣೆ ಲಾಲಗಳಿಂದ ಉಂಟಾಗುತ್ತಿರುವ ಧೂಳು ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಕರ್ನಾಟಕ ರಕ್ಷಣಾ ವೇಧಿಕೆ ಚಳ್ಳಕೆರೆ ಘಟಕದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಡೆರೆ ಪಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ನೂರಾರು ಟಿಪ್ಪರ್ ಲಾರಿಗಳು ಪ್ರತಿದಿನ ಸಂಚಣಸುತ್ತಿವೆ. ಆದರೆ ಈ ಲಾದಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸುತ್ತಿರುವುದರಿಂದ ನಗರದ ಬೆಂಗಳೂರು ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಂಪು ಧೂಳು ಎಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.1