"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಪ್ರತಿಭಾನ್ವಿತ ಯುವತಿ ಶ್ರೀಮತಿ ಕಾವ್ಯ ಟಿ. ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ವದ ಸಂಶೋಧನೆಗಾಗಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ICAR-IARI) 'ಡಾಕ್ಟರ್ ಆಫ್ ಫಿಲಾಸಫಿ' (Ph.D) ಪದವಿಯನ್ನು ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಐಸಿಎಆರ್–ಐಎಆರ್ಐ ಸಂಸ್ಥೆಯ ಭವ್ಯ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾವ್ಯ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು. ಡಾ. ಕಾವ್ಯ ಅವರು "ಭತ್ತದ ಗದ್ದೆಗಳಿಂದ ಮೀಥೈಲೋಟ್ರೋಫಿಕ್ ಬ್ಯಾಕ್ಟೀರಿಯಾಗಳ ಪ್ರತ್ಯೇಕತೆ ಮತ್ತು ಗುಣಲಕ್ಷಣಗಳು ಹಾಗೂ ಸಸ್ಯ ಬೆಳವಣಿಗೆಯ ಉತ್ತೇಜನ ಮತ್ತು ಮಣ್ಣಿನ ಇಂಗಾಲದ ಸ್ವಾಧೀನದಲ್ಲಿ ಅವುಗಳ ಪಾತ್ರ" ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ನವದೆಹಲಿಯ ಪ್ರತಿಷ್ಠಿತ ಐಸಿಎಆರ್–ಐಎಆರ್ಐ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗೀತಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ಈ ಸಂಶೋಧನೆಯು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಭತ್ತದ ಬೆಳೆಯ ಸಸ್ಯಗಳ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮತ್ತು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಸಂಗ್ರಹಿಸುವ ಬ್ಯಾಕ್ಟೀರಿಯಾಗಳ ಪಾತ್ರವನ್ನು ಇವರ ಸಂಶೋಧನೆಯು ಸಾಬೀತುಪಡಿಸಿದೆ. ಇದು ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ವೃದ್ಧಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟಿದೆ. ಗ್ರಾಮೀಣ ಭಾಗದ ಹಿನ್ನೆಲೆಯ ಯುವತಿಯೊಬ್ಬರು ರಾಷ್ಟ್ರಮಟ್ಟದ ಉನ್ನತ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿ ಸಾಧನೆ ಮಾಡಿರುವುದು ಹಿರಿಯೂರು ತಾಲೂಕು ಮತ್ತು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದೆ. ಕೃಷಿ ಪ್ರಧಾನವಾದ ಚಿತ್ರದುರ್ಗದ ಮಣ್ಣಿನ ಮಗಳ ಈ ಸಾಧನೆಯು ಈ ಭಾಗದ ರೈತ ಸಮುದಾಯಕ್ಕೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದೆ.1
- "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬುಡಗ ಜಂಗಮ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ ನಿವಾಸಿಗಳು ಉಪಸ್ಥಿತರಿದ್ದರು.1
- ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ1
- Post by ಚಂದು ಕನ್ನಡಿಗ ಚಳ್ಳಕೆರೆ1
- ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಿದರು ಼಼಼಼಼಼ಕೊಂಡ್ಲಹಳ್ಳಿ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನದಲ್ಲಿ 14ವರೆ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ,2024 25 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ ಬಂಧಿತ ಅನುದಾನ ದಡಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರ ಹಾಗೂ ನೂತನ ಪಶು ಚಿಕಿತ್ಸಾಲಯ ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ನಿರ್ಮಾಣಗೊಂಡ 5 ಲಕ್ಷದ ನೂತನ ರಥ ಮಂಟಪ ವನ್ನು ಲೋಕಾರ್ಪಣೆಗೊಳಿಸಿದರು಼಼಼಼ ಇದೆ ವೇಳೆ ಬಿಇಒ ಈ ನಿರ್ಮಲಾದೇವಿ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಸ್.ಕೆ .ಗುರುಲಿಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂಎಲ್ ಪವಿತ್ರ ಪ್ರದೀಪ್, ಪಿಡಿಓ ಎನ್ ಪಾಲಯ್ಯ, ಕಾರ್ಯದರ್ಶಿ ಕೃಷ್ಣಪ್ಪ ,ಮುಖಂಡರಾದ ಟಿ ತಿಪ್ಪೇಸ್ವಾಮಿ, ಟಿ ಸಿದ್ದಲಿಂಗಪ್ಪ, ಬಿಎಂ.ತಿಪ್ಪೇಸ್ವಾಮಿ, ಸುಧರ್ಮ, ಪಿ ಆರ್ ಈಡಿ ಎಇಇ ಲಿಂಗರಾಜ್ ,ಕ್ರೆಡಿಲ್ ಎಇಇ ನಟರಾಜ್ ಸಂಗೋಪನ ತಾಲೂಕು ಸಹಾಯಕ ನಿರ್ದೇಶಕ ಹೆಚ್ .ರಂಗಪ್ಪ ,,ಸಿಡಿಪಿಓ ನವೀನ್ ಕುಮಾರ್ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಪಿಎಸ್ಐ ಬಾಹುಬಲಿ, ಬಿಎನ್ ಬೀರಲಿಂಗಪ್ಪ, ಮುಖ್ಯ ಶಿಕ್ಷಕ ಸಿ ಚಂದ್ರಶೇಖರ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಅಧ್ಯಕ್ಷರು, ಪದಾಧಿಕಾರಿಗಳು ,ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.4
- KOLAR KI.AWAAZ1
- बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।1
- ಚಳ್ಳಕೆರೆ ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು. ಹರೆಕೆ ಹೊತ್ತ ಭಕ್ತರು ಬಾಳೆ ಹಣ್ಣು ಸಕ್ಕರೆ ತುಪ್ಪ ವನ್ನ ದೇವಸ್ಥಾನಕ್ಕೆ ನೀಡಿದ್ದರು.. ಮೈಲಾರ ಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆಯ ನಂತರ ದೋಣಿಸೇವೆ ನಡೆಯಿತು.. ದೋಣಿ (ಹಣ್ಣಿನ) ಸೇವೆ: ತಣ್ಣೀರಿನಲ್ಲಿ ಸ್ನಾನ ಮಾಡಿ ನಡೆಮುಡಿಯಲ್ಲಿ ಬಂದ ಭಕ್ತರು ‘ಏಳುಕೋಟಿ ಮೈಲಾರಲಿಂಗ ಚಾಂಗಮಲೋ’ ಎಂಬ ಘೋಷಣೆ ಕೂಗುತ್ತ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಡಮರುಗ ಬಾರಿಸುತ್ತ ಭಕ್ತರು ದೋಣಿಯ ಸುತ್ತಲು ಹೆಜ್ಜೆ ಹಾಕುತ್ತ ಕುಣಿದರು. ಪುರದ ಜ್ಯೋತಿ ಬೆಳಗಿದ ನಂತರ ಭಕ್ತರಿಗೆ ಬಾಳೆಹಣ್ಣಿನ ಪ್ರಸಾದವನ್ನು ನೀಡಲಾಯಿತು..1