"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
"ಕೈ" ತಪ್ಪಿದ ಹಳದಿ, ಸತೀಶ್ ಗೌಡರ ಹೆಗಲ ಮೇಲೆ 'ಅಹಿಂದ' ಕಲಿ ಬಣ್ಣದ ಬಸಣ್ಣ, ಹಿರಿಯೂರು ಬ್ಯೂರೋ.😄😄😄 ಇಲ್ಲಿನ ರಾಜಕೀಯ ಅಖಾಡದಲ್ಲಿ ಈಗ 'ಸಿದ್ಧಾಂತ'ಗಳಿಗಿಂತ 'ಬಣ್ಣದ ಬಟ್ಟೆ'ಗಳದ್ದೇ ದೊಡ್ಡ ಫೈಟು! ಮೊನ್ನೆ ಮೊನ್ನೆಯಷ್ಟೇ ನಡೆದ ಶಕ್ತಿ ಗಣಪತಿ ಹಬ್ಬದಲ್ಲಿ ಬಿಜೆಪಿ ಅವರಿಗೆ ಸರಿಯಾಗಿ 'ಟಾಕ್ಕರ್' ಕೊಡಬೇಕು ಅಂತ ಕಾಂಗ್ರೆಸ್ಸಿಗರು ಒಂದು ಭರ್ಜರಿ ಮಾಸ್ಟರ್ ಪ್ಲಾನ್ ಹಾಕಿದ್ದರು."ಕೇಸರಿ ಬಣ್ಣ ಅವರದಾದರೆ, ಹಳದಿ ಬಣ್ಣ ನಮ್ಮದು! ಇದು ಅಹಿಂದ ಶಕ್ತಿ!" ಅಂತ ಪಣತೊಟ್ಟು, ಕೇಸರಿ ಬಾವುಟಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಖ್ಯರಸ್ತೆ ತುಂಬಾ ಹಳದಿ ಬಾವುಟ ಕಟ್ಟಿ , ಕೈಯಲ್ಲಿ ಹಳದಿ ಟವಲ್ ಹಿಡಿದು, ಹಳದಿ ಬಾವುಟ ಹಾರಿಸಿ "ನೋಡಿ ನಮ್ಮ ಪವರ್" ಅಂತ ಪೋಸ್ ಕೊಟ್ಟಿದ್ದರು. ಕಾಂಗ್ರೆಸ್ಸಿಗರು "ಹಳದಿ ಅಂದ್ರೆ ಅಹಿಂದ, ಅಹಿಂದ ಅಂದ್ರೆ ನಾವೇ" ಅಂತ ಎದೆಯುಬ್ಬಿಸಿ ಓಡಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರ ಈ 'ಹಳದಿ ತಂತ್ರ'ಕ್ಕೆ ವಿಧಿಯಾಟ ಬೇರೆಯೇ ಇತ್ತು! ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪಕ್ಷೇತರ ಅಭ್ಯರ್ಥಿ ಸತೀಶ್ ಗೌಡರು ಬಂದಿದ್ದೇ ತಡ, ಕಾಂಗ್ರೆಸ್ಸಿಗರು "ನಮ್ಮದು" ಅಂತ ಜಪಿಸುತ್ತಿದ್ದ ಅದೇ ಹಳದಿ ಶಾಲು ಈಗ ಗೌಡರ ಹೆಗಲ ಮೇಲೆ ಆರಾಮವಾಗಿ ವಿರಾಜಮಾನವಾಗಿದೆ! "ಬಿತ್ತಿದವನು ಒಬ್ಬ, ಬೆಳೆದವನು ಇನ್ನೊಬ್ಬ... ಕೈಲಿ ಹಳದಿ ಹಿಡಿದು ಕಾಂಗ್ರೆಸ್ ಪೋಸ್ ಕೊಟ್ಟರೆ, ಅದೇ ಹಳದಿ ಶಾಲು ಹಾಕ್ಕೊಂಡು ಗೌಡ್ರು ಮಾಸ್ ಎಂಟ್ರಿ ಕೊಟ್ಟರಲ್ಲಪ್ಪಾ! ಈಗ ಹಿರಿಯೂರು ಮಾರುಕಟ್ಟೆಯಲ್ಲಿ ಪಕ್ಷಕ್ಕಿಂತ 'ಶಾಲು' ಬದಲಿಸೋ ಸ್ಪೀಡ್ ಜಾಸ್ತಿ ಆಗಿದೆ!" 🤣 ಹಿರಿಯೂರಿನಲ್ಲಿ ಈಗ ರಾಜಕಾರಣಿಗಳಿಗೆ ಸಿದ್ಧಾಂತಕ್ಕಿಂತ ಮುಖ್ಯವಾಗಿದ್ದು 'ಬಟ್ಟೆ ಬಣ್ಣ '! ಯಾಕಂದ್ರೆ ಯಾವತ್ತು ಯಾವ ಬಣ್ಣದ ಶಾಲು ಹಾಕಿಕೊಳ್ಳಬೇಕಾಗುತ್ತೋ ಅಂತ ಯಾರಿಗೂ ಗೊತ್ತಿಲ್ಲ! ಟ್ವಿಸ್ಟ್ ಅಂದ್ರೆ ಈಗ - ಕೈ ಕೆಳಗೆ ಕುಳಿತಿದ್ದ ಹಳದಿ, ಗೌಡರ ಹೆಗಲ ಮೇಲೆ😄😄😄😄 ಜಸ್ಟ್ fun - ಅರ್ಜುನ್ ಬ್ಯಾಡರಹಳ್ಳಿ -🙏
- Post by ಗೋಪನಹಳ್ಳಿಶಿವಣ್ಣ1
- ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿದರು. ಈ ವೇಳೆ ವಿವಿಧ ಕಾರ್ಯಕ್ರಮಗಳಿಗೆ ನೀಡಿದ ಆಹ್ವಾನವನ್ನು ಸ್ವೀಕರಿಸಿದರು9
- ಟಿಪ್ಪರ್ ಲಾರಿಗಳಲ್ಲಿ ಕೆಂಗೇರಿಯ ಕೋಡಿಪಾಳ್ಯದ ಆಸುಪಾಸಿನಲ್ಲಿ ಮರಳು ಸಾಗಿಸುವಾಗ ಸುರಕ್ಷತೆ ವಿಧಾನ ಬಳಸದೇ, ಟಾರ್ಪಲ್ ಮುಚ್ಚಿ ಉಳಿದ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸದೆ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ ಸ್ಥಳೀಯರು.... ಹೊಯ್ಸಳ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು..1
- Post by SUDHUR CHAULANI NEWS1
- डिलीवरी बॉय की गुंडई, कस्टर को बुरी तरह पीटा... टूट गई नाक बेंगलुरु से एक हैरान करने वाला मामला सामने आया है. जहां एक क्विक-कॉमर्स प्लेटफॉर्म के लिए काम करने वाले एक डिलीवरी एजेंट ने विवाद के बाद कस्टमर पर हमला कर दिया. जिससे उसकी नाक टूट गई. घटना कोरमंगला में एक अपार्टमेंट के कॉम्पलेक्स में हुई. अधिकारी ने बताया कि एजेंट एक ऑर्डर डिलीवर करने पहुंचा था, तभी कस्टमर के साथ इस बात को लेकर बहस हो गई कि डिलीवरी किस फ्लोर पर करनी है? देखते ही देखते विवाद इतना बढ़ गया कि मारपीट शुरू हो गई. जिसके बाद डिलीवरी एजेंट ने कस्टमर के चेहरे पर मुक्का मारा, जिससे उसकी नाक टूट गई. इसके बाद आरोपी ने डिलीवरी का सामान ज़मीन पर फेंक दिया और अपार्टमेंट कॉम्प्लेक्स से भाग गया.1
- Al ham Adiya, home on dates, ke taraf.Se iftaar ke part..KOLAR1
- Post by Suresh Belagere1
- 82 ಲಕ್ಷದ ಪುಣ್ಯಕೋಟಿ ಗೋಶಾಲೆ – ನೀರು, ನೆರಳು, ಮೇವು ಕೊರತೆಯಿಂದ ಸೊರಗುತ್ತಿರುವ ಜಾನುವಾರುಗಳು ಹೌದು ಇದು ಚಳ್ಳಕೆರೆ ನಗರದ ಹೊರವಲಯದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಪುಣ್ಯಕೋಟಿ ಗೋಶಾಲೆ’ಯಲ್ಲಿ ಜಾನುವಾರುಗಳು ನೀರು, ನೆರಳು ಮತ್ತು ಮೇವು ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ. 100 ಗೋವುಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಇಲ್ಲಿ ಸುಸಜ್ಜಿತ ಶೆಡ್, ಆಡಳಿತ ಕಚೇರಿ, ಎರಡು ವಸತಿ ಗೃಹ ಹಾಗೂ ಮೇವಿನ ಗೋದಾಮು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಗೋಶಾಲೆಯಲ್ಲಿ ಇರುವ ಜಾನುವಾರುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಗೋಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಜಾನುವಾರುಗಳು ಇದ್ದು, ಈಗಾಗಲೇ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ನೀರು, ನೆರಳು ಮತ್ತು ಮೇವು ಸಾಕಾಗುತ್ತಿಲ್ಲ. ಇದರಿಂದ ಜಾನುವಾರುಗಳು ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಗೋಶಾಲೆಗೆ ಮೇವು ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿ ಒಂದು ತಿಂಗಳು ಕಳೆದರೂ ಇನ್ನೂ ಅಂತಿಮಗೊಳ್ಳದ ಕಾರಣ ಮೇವು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗೋಶಾಲೆಯ ಮೇವಿನ ಗೋದಾಮಿನಲ್ಲಿ ಇರುವ ಮೇವು ಇನ್ನೂ ಒಂದೆರಡು ದಿನಗಳಲ್ಲಿ ಖಾಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ ವಿಶಾಲವಾದ ಜಾಗ ಇರುವುದರಿಂದ ಭೂಮಿಯನ್ನು ಸಮತಟ್ಟು ಮಾಡಿ ನೀರಿನ ಸೌಲಭ್ಯ ಒದಗಿಸಿದರೆ ಸ್ಥಳೀಯ ಪಶುಪಾಲಕರು ತಾವೇ ಮೇವು ಬೆಳೆಸಲು ಸಿದ್ಧರಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪುಣ್ಯಕೋಟಿ ಗೋಶಾಲೆಯ ಜಾನುವಾರುಗಳಿಗೆ ನೀರು, ನೆರಳು ಹಾಗೂ ಸಮರ್ಪಕ ಮೇವು ಒದಗಿಸಿ ತಮ್ಮ ಕರ್ತವ್ಯ ನಿರ್ವಹಿಸುವರೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈಗಲಾದರೂ ಅಧಿಕಾರಿಗಳು ಗಮನಹರಿಸಿ ಗೋಶಾಲೆಯ ಜಾನುವಾರುಗಳ ಸಂಕಷ್ಟ ನಿವಾರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.1
- ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಭೀತಿಗೆ ದುಬೈನಲ್ಲಿ ನೆಲೆಸಿದ್ದ ಭಾರತೀಯರು ಸೇರಿದಂತೆ ಬೇರೆ ರಾಷ್ಟ್ರಗಳ ಪ್ರಜೆಗಳು ಸುರಕ್ಷಿತವಾಗಿರಲು ತಮ್ಮ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದರು, ಈ ಸಂಬಂಧ ದುಬೈ ಏರ್ಪೋರ್ಟ್ ಕಿಕ್ಕಿರಿದು ತುಂಬಿತ್ತು...1