Shuru
Apke Nagar Ki App…
ನಗರದಲ್ಲಿ ಯಶಸ್ವಿಯಾಗಿ ಜರುಗಿದ ಶ್ರಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳನ್ನು ಒಳ ಕರೆದು ಕೊಳ್ಳುವ ಕಾರ್ಯಕ್ರಮ
@april14news
ನಗರದಲ್ಲಿ ಯಶಸ್ವಿಯಾಗಿ ಜರುಗಿದ ಶ್ರಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳನ್ನು ಒಳ ಕರೆದು ಕೊಳ್ಳುವ ಕಾರ್ಯಕ್ರಮ
More news from ಕರ್ನಾಟಕ and nearby areas
- Post by @april14news1
- ಮಹಾತಪಸ್ವಿ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ ವಿಜೃಂಭಣೆಯ ರಥೋತ್ಸವ ಅಥಣಿ: ಇಲ್ಲಿನ ಗಚ್ಚಿನಮಠದ ಮಹಾತಪಶ್ವಿ ಭಕ್ತರ ಜೀವಾಳ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ 105 ನೇ ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ 7 ಗಂಟೆಗೆ ರಥೋತ್ಸವ ವಿಜೃಂಭಣೆಯಿಂದ ಗಚ್ಚಿನ ಮಠದಿಂದ ಆರಂಭವಾಯಿತು ರಥೋತ್ಸವಕ್ಕೆ ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಚ್ಚಿನ ಮಠದ ಮುರುಘೇಂದ್ರ ಶಿವಯೋಗಿಗಳ ಜಾತ್ರೆ ಭಾವೈಕ್ಯತೆ ಸಾರುವ ಜಾತ್ರೆಯಾಗಿದೆ ಎಲ್ಲಾ ಧರ್ಮದವರು ಒಟ್ಟಾಗಿ ಆಚರಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆಯುತ್ತಾರೆ ಈ ಮೂಲಕವಾಗಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂದು ಹೇಳಿದರು .ನಗರದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಂಚರಿಸುತ್ತ ಆಗಮಿಸಿದಾಗ ಭಕ್ತರು ಮುರುಗೇಂದ್ರ ಶಿವಯೋಗಿಗಳ ಜೈ ಘೋಷದೊಂದಿಗೆ ಬೆಂಡು ಬತ್ತಾಸು ಉತ್ತತ್ತಿಗಳನ್ನು ರಥದ ಮೇಲೆ ಹಾರಿಸುವ ಮೂಲಕ ಮಹಿಳೆಯರು ಮಕ್ಕಳು ಪುರುಷರೆನ್ನದೆ ಎಲ್ಲರೂ ಭಕ್ತಿಭಾವದಿಂದ ದರ್ಶನ ಪಡೆದರು .ನಗರದ ಎಲ್ಲೆಡೆ ಸಂಚರಿಸಿ ರಥೋತ್ಸವ ಕಣ್ಮನ ಸೆಳೆಯಿತು ವಿವಿಧ ವಾದ್ಯ ಮೇಳಗಳೊಂದಿಗೆ ಭಜನೆ ಹಾಡುವವರು ಭಾವುಕರಾಗಿ ಭಜನೆಯಲ್ಲಿ ತೊಡಗಿದರೆ ,ಜಾಂಜ್ ಪತಾಕ್ ಮೇಳದೊಂದಿಗೆ ಯುವಕರು ವಿಶೇಷವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ತಮ್ಮ ಭಕ್ತಿ ಭಾವ ಮೆರೆದರು ಸಂಗೀತದ ಮೇಳದೊಂದಿಗೆ ಹಾಡುಗಾರರ ಹಾಡುಗಳು ನೋಡುಗರ ಕಣ್ಮನ ಸೆಳೆದವು ನಗರದೆಲ್ಲೆಡೆಯಲ್ಲಿ ತಳಿರು ತೋರಣಗಳಿಂದ ರಥೋತ್ಸವ ಸಾಗುವ ಬೀದಿಗಳನ್ನು ಶೃಂಗಾರ ಮಾಡಲಾಗಿತ್ತು ಅಷ್ಟೇ ಅಲ್ಲದೆ ನಗರದಾದ್ಯಂತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುವಂತಿತ್ತು ,ಪುಷ್ಪಮಾಲೆ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲ್ಪಟ್ಟ ರಥ ಸಂಜೆ 7 ಗಂಟೆಗೆ ಶ್ರೀಮಠದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ನಸುಕಿನ ಜಾವ ಶಿವಯೋಗಿಗಳು ಅನುಷ್ಠಾನಗೈದ ಪುರಾತನೇಶ್ವರ ದೇವಸ್ಥಾನ ತಲುಪಿತು. ವ್ಯಾಸನತೋಳ ಮೆರವಣಿಗೆ : ದೇಶದ ಖ್ಯಾತ ಕ್ಷೆತ್ರ ಕಾಶಿಯಲ್ಲಿ ನಡೆಯುವ ವ್ಯಾಸನ ತೋಳ ಮೆರವಣಿಗೆ ಈ ಸಂದರ್ಭದಲ್ಲಿ ಜರುಗಿತು . ಒಂದು ಕಾಶಿಯಲ್ಲಿ ಇನ್ನೊಂದು ಅಥಣಿ ಗಚ್ಚಿನ ಮಠದಲ್ಲಿ ವ್ಯಾಸನ ತೋಳ ಮೆರವಣಿಗೆ ಜರುಗುತ್ತದೆ ಎಂಬುದು ಹೆಮ್ಮೆಯ ಸಂಗತಿ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವಿಯಿಂದ ಭಕ್ತರು ಶಿವಯೋಗಿಗಳ ಬಾಲಮೂರ್ತಿ ಯನ್ನು ಉತ್ಸವದ ಮೂಲಕ ಗಚ್ಚಿನಮಠಕ್ಕೆ ತ೦ದರು. ಶ್ರೀಮಠದಲ್ಲಿ ಲಿಂ.ಚನ್ನಬಸವ ಸ್ವಾಮೀಜಿ 46 ನೇ ಸ್ಮರಣೋತ್ಸವ ಜರುಗಿತು . ನಂತರ ಪಂಚಕಲಶ, ವ್ಯಾಸನತೋಳ, ಸಕಲ ಬಿರುದಾವಳಿ ಸಹಿತ ಅಲಂಕರಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು .ಸುಮಾರು 150 ಕೆಜಿ ಬೆಳ್ಳಿ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯ ಶ್ರೀ ಶಿವಯೋಗಿ ಬೆಳ್ಳಿಯ ಭಾವಚಿತ್ರ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು . ಮಠಾಧೀಶರಾದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಜರುಗುತ್ತಲಿವೆ. ಸಂಪ್ರದಾಯದಂತೆ ಬೆಳಗ್ಗೆ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು . ಮಧ್ಯಾಹ್ನ ಮಹಾಪ್ರಸಾದ ಜರುಗಿತು .ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಶ್ರೀಮಠದ ಅನುಭವ ಮಂಟಪದಲ್ಲಿ ಪುರಾಣ, ಪ್ರವಚನ, ಶಿವಾನುಭವ, ವಚನ ಸಂಗೀತ, ಶಿವಭಜನೆ ಹಾಗೂ ಬಯಲಾಟ ಪ್ರದರ್ಶನ,. ಜಾನುವಾರು ಪ್ರದರ್ಶನ ಜರುಗುತ್ತಿದೆ.ಕಾರ್ಯಕ್ರಮದಲ್ಲಿ ಇಂಗಳಗಾವಿ ಸಿದ್ದಲಿಂಗ ಸ್ವಾಮೀಜಿ, ಹಲ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ,ಮೋಟಗಿ ಮಠದ ಚನ್ನಬಸವ ಮಹಾಸ್ವಾಮಿಗಳು, ಶೆಟ್ಟರ್ ಮಠದ ಮರುಳಸಿದ್ದ ಮಹಾಸ್ವಾಮಿಗಳು, ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ,ಶಿವಾನಂದ ದಿವಾನಮಳ ಪ್ರಕಾಶ ಮಹಾಜನ, ಸೇರಿದಂತೆ ಹಲವಾರು ಮುಖಂಡರು, ಸುತ್ತಮುತ್ತಲ ಹಾಗೂ ಅಥಣಿ ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳಿಂದ ಲಕ್ಷಾಂತರ ಭಕ್ತಾದಿಗಳು ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು .2
- ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್ಸಿ ಎಸ್ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.1
- ಗುಳೇದಗುಡ್ಡ : ಏ.7 ರಂದು ನಡೆಯಲಿರುವ ಕೂಡಲಸಂಗಮದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯಲಿರುವ ಹುಚ್ಚಯ್ಯ ರಥದ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ನಗರದ ರೇವಣಸಿದ್ದಪ್ಪ ದೇವರಮನಿ ಅವರ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡಲಸಂಗಮಕ್ಕೆ ಶನಿವಾರ ಪಾದಯಾತ್ರೆಯ ಮೂಲಕ ತೆರಳಿತು. ಇದಕ್ಕೂ ಮೊದಲು ಕಳಸಕ್ಕೆ ಅಭಿಷೇಕ, ಪೂಜೆ ನಡೆಯಿತು. ಮೆರವಣಿಗೆಯಲ್ಲಿ ರೇವಣಸಿದ್ದಪ್ಪ ದೇವರಮನಿ, ಮುತ್ತಣ್ಣ ದೇವರಮನಿ, ವೀರುಪಾಕ್ಷ ದೇವರಮನಿ, ಈರಪ್ಪ ಗಡ್ಡಿ, ಶಿವಪ್ಪ ಶ್ಯಾವಿ, ಶೇಖರಪ್ಪ ರಂಜನಗಿ, ಬಿ.ಎನ್.ಪಾಗಿ, ಶರಣಪ್ಪ ಖಂಡಿ, ಈರಪ್ಪ ಬೆಟಗೇರಿ, ಮಹಾಗುಂಡಪ್ಪ ದೇವರಮನಿ, ಶ್ರೀನಿವಾಸ ರಂಜನಗಿ, ಸಂಗಮೇಶ ರಂಜನಗಿ, ಮಹೇಶ ಶ್ಯಾವಿ, ಈರಪ್ಪ ಗಂಜಾಳ, ಈರಣ್ಣ ಸುರಪುರ, ವಿಜಯ ಕಣವಿ, ಮೇಘರಾಜ ಸುರಪುರ, ಬಸವರಾಜ ಬುದರಿ, ಪ್ರಭುಕುಮಾರ ಬುದರಿ, ಬಸಪ್ಪ ಕೊಪ್ಪದ, ಅಮರೇಶ ಗೊಡನ್ನವರ, ಅಶ್ವೀನಿ ದೇವರಮನಿ, ಕೂಡ್ಲೆವ್ವ ರಂಜನಗಿ, ಗಿರಿಜಾ ರಂಜನಗಿ, ಅನ್ನವ್ವ ರಂಜನಗಿ, ಸಂಗಮ್ಮ ಕುಂಟೋಜಿ, ನೀಲಮ್ಮ ಕಲಕೇರಿ, ಶೋಭಾ ಹದ್ಲಿ ಮತ್ತಿತರರು ಇದ್ದರು.3
- Post by Sharanugouda Patil1
- ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ *ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು *ಬೆನಕಟ್ಟಿ*,*ಹಳ್ಳೂರ*, *ಭಗವತಿ*, ಗ್ರಾಮದಲ್ಲಿ ಹಾಗೂ *ಬಾಗಲಕೋಟೆ* ಪಟ್ಟಣದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ *ಶ್ರೀ ಉಮೇಶ್ ಮೇಟಿ* ರವರ *ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು*. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಬಾಗಲಕೋಟೆ ಜಿಲ್ಲೆಯಲ್ಲಿ ಉಪ ಚುನಾವಣೆಯ ಹವಾ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಭರ್ಜರಿ ರಾಜಕೀಯ ಪೈಪೋಟಿ ನಡೆಯುತ್ತಿದೆ. ಪಕ್ಷದ ಹಿರಿಯ ನಾಯಕರು, ಸಚಿವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಮತದಾರರ ಮನ ಗೆಲ್ಲಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಅವರು ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ. ಮತದಾರರ ಅಭಿಪ್ರಾಯ ಏನು? ಜನರು ಯಾರಿಗೆ ಬೆಂಬಲ ಕೊಡುತ್ತಿದ್ದಾರೆ? ಸಂಪೂರ್ಣ ವರದಿ ಈ ವಿಡಿಯೋದಲ್ಲಿ… ಬಾಗಲಕೋಟೆ ಉಪ ಚುನಾವಣೆ ರಾಜಕೀಯ ಕಾವು ತಾರಕಕ್ಕೇರಿದೆ! ಕಾಂಗ್ರೆಸ್ vs ಬಿಜೆಪಿ ನಡುವೆ ಭರ್ಜರಿ ಫೈಟ್ ನಡೆಯುತ್ತಿದ್ದು, ನಾಯಕರು ಹಳ್ಳಿಗಳಿಗೆ ದಾಳಿ ಮಾಡ್ತಿದ್ದಾರೆ… ಇದರ ನಡುವೆ ಎನ್. ಮಹೇಶ್ ಅವರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಕೇಳಿದ್ದಾರೆ! ಆದರೆ ಟ್ವಿಸ್ಟ್ ಏನು ಗೊತ್ತಾ? ಮತದಾರರ ನಿಜವಾದ ಅಭಿಪ್ರಾಯವೇ ಬೇರೆ ಆಗಿದೆ! ಜನರು ಏನು ಹೇಳ್ತಾರೆ ನೋಡಿ ಈ ವಿಡಿಯೋದಲ್ಲಿ… ಬಾಗಲಕೋಟೆ ಉಪ ಚುನಾವಣೆ 50 ಹಳ್ಳಿಗಳಲ್ಲಿ ಪ್ರಚಾರ… ಜನರ ತೀರ್ಪು ಏನು? ನೇರವಾಗಿ ಕೇಳಿದ ಮಾತುಗಳು ಈ ವಿಡಿಯೋದಲ್ಲಿ ಬಾಗಲಕೋಟೆಯಲ್ಲಿ ದೊಡ್ಡ ರಾಜಕೀಯ ಟ್ವಿಸ್ಟ್! 50 ಹಳ್ಳಿಗಳಲ್ಲಿ ಸುತ್ತಿದ ಪ್ರಚಾರದ ನಂತರ… ಮತದಾರರು ಹೇಳಿದ ಸತ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಕಾಂಗ್ರೆಸ್ ಗೆಲ್ತಾ? ಬಿಜೆಪಿ ಗೆಲ್ತಾ? ಪೂರ್ಣ ರಿಪೋರ್ಟ್ ಇಲ್ಲಿ ನೋಡಿ…1