ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ಶಾಲೆಗೆ ನ್ಯಾಯಾದೀಶರಾದ ಎಂ.ಮಹೆ0ದ್ರ ನೇತೃತ್ವದ ಕಾ.ಸೇ ಸಮಿತಿ ತಂಡ ದಿಡೀರ್ ಬೇಟಿ- ವಸತಿ ಶಾಲೆಯ ಅವ್ಯವಸ್ಥೆ ಕಂಡು ಶಾಕ್ • ಮದ್ಯಪಾನ ಮಾಡುವ ವಾಚ್ ಮೆನ್-ಕೆಲ ವಿದ್ಯಾರ್ಥಿಗಳು- ವಿದ್ಯಾರ್ಥಿಗಳಿಂದ ಗಂಭೀರ ಆರೋಪ-ಶಾಲೆಯ ವಸತಿ-ಶೌಚಾಲಯ-ಅಹಾರ ತಯಾರು-ಸ್ಥಾನಗೃಹ ಕೊಠಡಿಗಳ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ ನ್ಯಾಯಾದೀಶರು ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ಶಾಲೆಗೆ ನ್ಯಾಯಾದೀಶರಾದ ಎಂ.ಮಹೆ0ದ್ರ ನೇತೃತ್ವದ ಕಾ.ಸೇ ಸಮಿತಿ ತಂಡ ದಿಡೀರ್ ಬೇಟಿ- ವಸತಿ ಶಾಲೆಯ ಅವ್ಯವಸ್ಥೆ ಕಂಡು ಶಾಕ್ • ಮದ್ಯಪಾನ ಮಾಡುವ ವಾಚ್ ಮೆನ್-ಕೆಲ ವಿದ್ಯಾರ್ಥಿಗಳು- ವಿದ್ಯಾರ್ಥಿಗಳಿಂದ ಗಂಭೀರ ಆರೋಪ-ಶಾಲೆಯ ವಸತಿ-ಶೌಚಾಲಯ-ಅಹಾರ ತಯಾರು-ಸ್ಥಾನಗೃಹ ಕೊಠಡಿಗಳ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ ನ್ಯಾಯಾದೀಶರು ಮಳವಳ್ಳಿ:ತಾಲ್ಲೂಕಿನ ಚನ್ನಪಿಳ್ಳೇಕೊಪ್ಪಲು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿರುದ್ಧ ಕೇಳಿ ಬಂದ ದೂರು ಹಿನ್ನೆಲೆ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ದತೆಯ ಪರಿಶೀಲನೆಗೆಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಮಹೇ0ದ್ರ ಮತ್ತು ವಕೀಲರ ಸಂಘದ ಪದಾದಿಕಾರಿಗಳು ದಿಡೀರ್ ಬೇಟಿ ನೀಡಿ ಮುರಾರ್ಜಿ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ್ದಾರೆ. ಮಾ.೧೧ ರಂದು ಬುದವಾರ ರಾತ್ರಿ ೮.೩೦ ಗಂಟೆಗೆ ನ್ಯಾಯಾದೀಶರು ಬೇಟಿ ನೀಡಿದಾಗ, ವಸತಿ ಶಾಲೆಯ ಜವಬ್ದಾರಿ ಹೊತ್ತ ಪ್ರಾಂಶುಪಾಲರು,ಶಿಕ್ಷಕರು ಇಲ್ಲದಿರುವುದನ್ನು ಕಂಡು ಬೇಸರಗೊಂಡ ಅವರು ಈ ಸಂದರ್ಭದಲ್ಲಿ ವಸತಿ ಶಾಲೆಯ ಎಲ್ಲ ಕೊಠಡಿಗಳ ವೀಕ್ಷಣೆ ಮಾಡಿ ಮಕ್ಕಳ ದೂರುಗಳನ್ನು ಕೇಳಿ ದಿಗ್ಬಾಂತರರಾದರು. ವಸತಿ ಶಾಲೆಯ ಅವ್ಯವಸ್ಥೆ ವಿರುದ್ದ ಮಕ್ಕಳ ದೂರುಗಳು: ಗಂಡು ಮಕ್ಕಳ ವಸತಿ ಗೃಹದಲ್ಲಿ ಕಸದ ರಾಶಿ,ಬಾಗಿಲು ಇಲ್ಲದ,ವಿದ್ಯುತ್ ಇಲ್ಲದ ಗಬ್ಬು ನಾರುತ್ತಿರುವ ವಸತಿ ಗೃಹದಲ್ಲಿರುವ ಶೌಚಾಲಯಗಳು,೫೦ ಮಕ್ಕಳಿರುವ ಗಂಡು ಮಕ್ಕಳ ವಸತಿ ಗೃಹ,ಅದು ಸಹ ಕೆಟ್ಟ ವಾಸನೆ,ಊಟದ ಹಾಲ್ಗಳು,ಕುಡಿಯುವ ನೀರಿನ ಡ್ರಂಗಳು,ನಲ್ಲಿಗಳು ಗಲೀಜು, ಕೈತೊಳೆಯುವ ಬೇಸನ್ಗಳು ಸ್ವಚ್ಛತೆಯಿಲ್ಲ,ಮಕ್ಕಳಿಗೆ ಆಹಾರ ತಯಾರು ಮಾಡುವ ಕೊಠಡಿ ಸಂಪೂರ್ಣ ಗಬ್ಬು ನಾರುತ್ತಿದೆ.ಆಹಾರ ತಯಾರಿಸುವ ಪಾತ್ರೆಗಳು ಶೌಚಗೃಹದಲ್ಲಿ ಇಟ್ಟಿರುವುದು ದುರಂತವೆನ್ನಬಹುದು,ಆಹಾರ ತಯಾರು ಮಾಡುವ ಸಮಯದಲ್ಲಿ ಉಳಿಯುವ ಅಹಾರ , ಕಸ,ಅಶುದ್ಧ ನೀರನ್ನು ಹಿಂಭಾಗಕ್ಕೆ ಬಿಟ್ಟಿದ್ದು ಅವುಗಳು ನೆಲದ ಮೇಲ್ಭಾಗದಲ್ಲಿಯೇ ಕೊಳೆತು ನಾರುತ್ತಿದೆ,ಮಕ್ಕಳಿಗೆ ನೀಡುವ ಆಹಾರದ ಮೆನುನಾಮಪಲಕ್ಕೆ ಸೀಮಿತ,ಮೆನು ಪ್ರಕಾರ ಊಟ ನೀಡುತ್ತಿಲ್ಲ, ಗಲೀಜಾದ,ಕೊಳೆತ ತರಕಾರಿಗಳ ಬಳಕೆ,ಹುಳ ಉಪ್ಪಟೆ ಅಕ್ಕಿಯಿಂದ ಅನ್ನ ತಯಾರು,ನಾನ್ ವೆಜ್ಗಳನ್ನು ಸರಿಯಾಗಿ ಮಾಡುವುದಿಲ್ಲ,ಆಡುಗೆ ಸಿಬ್ಬಂದಿಗಳು ಶುಚಿತ್ವವಿಲ್ಲ,ಪಾಮೋಲಿನ ಎಣ್ಣೆ ತಿಂಡಿಗಳನ್ನು ನೀಡುತ್ತಾರೆ. ಊಟ ಬಡಿಸುವವರು ಸಹ ಅಶುಚಿತ್ವ, ಆಹಾರ ವಿತರಣೆಯಲ್ಲೂ ಪಕ್ಷಪಾತದ ದೂರುಗಳು ಬಂದವು ಹೆಣ್ಣು ಮಕ್ಕಳಿಗೂ ಕ್ಲಿಷ್ಟ ಪರಿಸ್ಥಿತಿ: ಹೆಣ್ಣು ಮಕ್ಕಳ ವಸತಿಗೃಹದ ಕಿಟಕಿಗಳಿಗೆ ಕರ್ಟನ್ಗಳುಇಲ್ಲ,ಬಟ್ಟೆ ಬದಲಿಸಲು ಕ್ಲಿಷ್ಟ ಪರಿಸ್ಥಿತಿ, ಕಿಟಕಿ ಮರೆಮಾಡಲು ಪೇಪರ್ ಕೇಳಿದರು ನೀಡುವುದಿಲ್ಲ,ಕೊಠಡಿಗಳಲ್ಲಿ ಫ್ಯಾನ್ ಕೆಟ್ಟು ನಿಂತಿವೆ, ಸೊಳ್ಳೆಗಳ ಕಾಟ,ಶೌಚಗೃಹದಲ್ಲಿ ನೀರಿನ ಸಮಸ್ಯೆ,ಹೆಣ್ಣು ಮಕ್ಕಳು ಬಟ್ಟೆ ಒಗೆಯುವ ಸ್ಥಳದಲ್ಲಿ ಒಂದೇ ನಲ್ಲಿಯ ಅಳವಡಿಕೆ, ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ವಸತಿ ಗೃಹದಲ್ಲಿರುವ ನರ್ಸ್ ಪಕ್ಷಪಾತ, ಹೆಣ್ಣು ಮಕ್ಕಳು ಋತು ಸ್ರಾವದ ಸಮಯದಲ್ಲಿ ಬಿಸಿ ನೀರನ್ನು ನೀಡುತ್ತಿಲ್ಲ,ಗಣಿತ ಶಿಕ್ಷಕಿ ಸರಿಯಾಗಿ ಪಾಠ ಮಾಡುವುದಿಲ್ಲ,ಶಿಕ್ಷಕರು ಸಮಸ್ಯೆ ಬಗೆಹರಿಸದೆ ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಾರೆ,ಇಂಗ್ಲೀಷ್ ಟೀಚರ್ನಿಂದ ಮಕ್ಕಳ ನಡುವೆ ಪಕ್ಷಪಾತ- ಅಸಭ್ಯ ವರ್ತನೆಯ ದೂರುಗಳ ಸುರಿಮಳೆಯನ್ನು ಮಕ್ಕಳು ಹೇಳಿದರು. ದಿನನಿತ್ಯದ ಜಗತ್ತಿನ ವಿಷಯಗಳನ್ನು ತಿಳಿಸುವ ದಿನ ಪತ್ರಿಕೆಗಳನ್ನು ಹಾಕಿಸುತ್ತಿಲ್ಲ,ಪುಸ್ತಕ ಇರದ, ಪುಸ್ತಕದ ನೀಡದ ಲೈಬ್ರರಿಯ ಅವ್ಯವಸ್ಥೆ,ಪಠ್ಯೇತರ ವಿಷಯ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಪ್ರೋತ್ಸಾಹದ ಕೊರತೆ, ಮಕ್ಕಳಿಗೆ ಮೊಟ್ಟೆ,ಬಾಳೆ ಹಣ್ಣು ನೀಡುತ್ತಿಲ್ಲ,ಮೊಟ್ಟೆ ಬಾಳೆ ಹಣ್ಣು ನೀಡುವಂತೆ ಕೇಳಿದರೆ ತಿನ್ನುವುದಕ್ಕಾಗಿಯೇ ಬಂದಿದ್ದೀರ ಎಂದು ಮೂದಲಿಕೆ, ರಾತ್ರಿ ಪಾಳಯದಲ್ಲಿ ಕೇವಲ ಅತಿಥಿ ಶಿಕ್ಷಕರನ್ನು ಬಿಟ್ಟು, ಖಾಯಂ ಶಿಕ್ಷಕರು ಅವರ ಮನೆಗೆ ಹೋಗುತತಾರೆ,ವಿದ್ಯಾರ್ಥಿಗಳ ಸಮಸ್ಯೆ-ಅಳಲನ್ನು ಕೇಳಲು ಯಾರು ಇಲ್ಲ,ಸಮಸ್ಯೆಗಳ ಬಗ್ಗೆ ಪ್ರಾಂಶುಪಾಲರನ್ನು, ಶಿಕ್ಷಕರನ್ನು ಕೇಳಿದರೆ ಅವರು ಪ್ರಶ್ನಿಸುವ ಮಕ್ಕಳನ್ನು ಟಾರ್ಗೇಟ್ ಮಾಡುತ್ತಾರೆ, ಸಮಸ್ಯೆಗಳ ಬಗ್ಗೆ ನಮ್ಮ ಪೋಷಕರು ಕೇಳಿದರೆ “ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವುದು, ಮದ್ಯಪಾನ ಮಾಡುವ ವಾಚ್ ಮೆನ್ ಮತ್ತು ಕೆಲ ವಿದ್ಯಾರ್ಥಿಗಳು: ರಾತ್ರಿ ಪಾಳಯದಲ್ಲಿರುವ ವಾಚ್ಮನ್ ಕುಡಿದು ಬರುವುದು,ಇದಲ್ಲದೆ ಕೆಲ ಗಂಡು ಮಕ್ಕಳು ಹೊರಗಡೆ ಹೋಗಿ ಮದ್ಯಪಾನ ಮಾಡಿ ಬಂದಿರುವ ದೂರುಗಳನ್ನು ಮಕ್ಕಳು ಹೇಳಿದ್ದಾರೆ. ನೀರು ಇರುವುದಿಲ್ಲ ಮೋಟರ್ ಆನ್ ಮಾಡಿ ಎಂದರೆ ಮಕ್ಕಳನ್ನು ಬಯ್ಯುತ್ತಾರೆ.ಇದರಿಂದಾಗಿ ರಾತ್ರಿ ವೇಳೆಯಲ್ಲಿ ಹೊರಗಡೆ ಬರ್ಹಿದೆಸೆಗೆ ಹೋಗಿರುವ ಉದಾಹರಣೆಗಳಿವೆ. ಶಾಲೆಯ ಅಭಿವೃದ್ದಿಗೆ ಶಾಸಕರು ನೀಡಿದ ೨೫ ಲಕ್ಷ ಅನುದಾನ ಬಳಕೆಯ ಕಂಡು ಬರದಿರುವ ಬಗ್ಗೆ ನ್ಯಾಯಾದೀಶರು ಸಂಬAದಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಈ ಸಂಭAದ ನ್ಯಾಯಾದೀಶರು ಕ್ರಮಕೈಗೊಂಡು ವಸತಿ ಶಾಲೆಯ ಪ್ರಾಂಶುಪಾಲರಿಗೆ,ಕAಪ್ಯೂಟರ್ ಶಿಕ್ಷಕಿ, ಗಣಿತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ, ತಾಲ್ಲೂಕು ವೈದ್ಯಾಧಿಕಾರಿಗಳಿಗೆ,ಕಿರುಗಾವಲು ವೃತ್ತ ನಿರೀಕ್ಷಕರಿಗೆ ನೋಟಿಸ್ ನೀಡಲಾಗಿದೆ. ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ವಕೀಲರ ಸಂಘದ ಉಪಾದ್ಯಕ್ಷರಾದ ಎಂ.ಮಲ್ಲಪ್ಪ,ಕಾರ್ಯದರ್ಶಿಎನ್.ನಟೇಶ್ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಹಾಗೂ ಕಾನೂನು ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೧೩-೧ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ದೇಶಾಯಿ ವಸತಿ ಶಾಳೆಗೆ ನ್ಯಾಯಾಧೀಶರು ಬೇಟಿ ನೀಡಿ ಮಕ್ಕಳ ದೂರುಗಳನ್ನು ಸ್ವೀಕರಿಸಿದರು.
ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ಶಾಲೆಗೆ ನ್ಯಾಯಾದೀಶರಾದ ಎಂ.ಮಹೆ0ದ್ರ ನೇತೃತ್ವದ ಕಾ.ಸೇ ಸಮಿತಿ ತಂಡ ದಿಡೀರ್ ಬೇಟಿ- ವಸತಿ ಶಾಲೆಯ ಅವ್ಯವಸ್ಥೆ ಕಂಡು ಶಾಕ್ • ಮದ್ಯಪಾನ ಮಾಡುವ ವಾಚ್ ಮೆನ್-ಕೆಲ ವಿದ್ಯಾರ್ಥಿಗಳು- ವಿದ್ಯಾರ್ಥಿಗಳಿಂದ ಗಂಭೀರ ಆರೋಪ-ಶಾಲೆಯ ವಸತಿ-ಶೌಚಾಲಯ-ಅಹಾರ ತಯಾರು-ಸ್ಥಾನಗೃಹ ಕೊಠಡಿಗಳ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ ನ್ಯಾಯಾದೀಶರು ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ಶಾಲೆಗೆ ನ್ಯಾಯಾದೀಶರಾದ ಎಂ.ಮಹೆ0ದ್ರ ನೇತೃತ್ವದ ಕಾ.ಸೇ ಸಮಿತಿ ತಂಡ ದಿಡೀರ್ ಬೇಟಿ- ವಸತಿ ಶಾಲೆಯ ಅವ್ಯವಸ್ಥೆ ಕಂಡು ಶಾಕ್ • ಮದ್ಯಪಾನ ಮಾಡುವ ವಾಚ್ ಮೆನ್-ಕೆಲ ವಿದ್ಯಾರ್ಥಿಗಳು- ವಿದ್ಯಾರ್ಥಿಗಳಿಂದ ಗಂಭೀರ ಆರೋಪ-ಶಾಲೆಯ ವಸತಿ-ಶೌಚಾಲಯ-ಅಹಾರ ತಯಾರು-ಸ್ಥಾನಗೃಹ ಕೊಠಡಿಗಳ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ ನ್ಯಾಯಾದೀಶರು ಮಳವಳ್ಳಿ:ತಾಲ್ಲೂಕಿನ ಚನ್ನಪಿಳ್ಳೇಕೊಪ್ಪಲು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿರುದ್ಧ ಕೇಳಿ ಬಂದ ದೂರು ಹಿನ್ನೆಲೆ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ದತೆಯ ಪರಿಶೀಲನೆಗೆಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಮಹೇ0ದ್ರ ಮತ್ತು ವಕೀಲರ ಸಂಘದ ಪದಾದಿಕಾರಿಗಳು ದಿಡೀರ್ ಬೇಟಿ ನೀಡಿ ಮುರಾರ್ಜಿ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಅತಂಕ ವ್ಯಕ್ತಪಡಿಸಿದ್ದಾರೆ. ಮಾ.೧೧ ರಂದು ಬುದವಾರ ರಾತ್ರಿ ೮.೩೦ ಗಂಟೆಗೆ ನ್ಯಾಯಾದೀಶರು ಬೇಟಿ ನೀಡಿದಾಗ, ವಸತಿ ಶಾಲೆಯ ಜವಬ್ದಾರಿ ಹೊತ್ತ ಪ್ರಾಂಶುಪಾಲರು,ಶಿಕ್ಷಕರು ಇಲ್ಲದಿರುವುದನ್ನು ಕಂಡು ಬೇಸರಗೊಂಡ ಅವರು ಈ ಸಂದರ್ಭದಲ್ಲಿ ವಸತಿ ಶಾಲೆಯ ಎಲ್ಲ ಕೊಠಡಿಗಳ ವೀಕ್ಷಣೆ ಮಾಡಿ ಮಕ್ಕಳ ದೂರುಗಳನ್ನು ಕೇಳಿ ದಿಗ್ಬಾಂತರರಾದರು. ವಸತಿ ಶಾಲೆಯ ಅವ್ಯವಸ್ಥೆ ವಿರುದ್ದ ಮಕ್ಕಳ ದೂರುಗಳು: ಗಂಡು ಮಕ್ಕಳ ವಸತಿ ಗೃಹದಲ್ಲಿ ಕಸದ ರಾಶಿ,ಬಾಗಿಲು ಇಲ್ಲದ,ವಿದ್ಯುತ್ ಇಲ್ಲದ ಗಬ್ಬು ನಾರುತ್ತಿರುವ ವಸತಿ ಗೃಹದಲ್ಲಿರುವ ಶೌಚಾಲಯಗಳು,೫೦ ಮಕ್ಕಳಿರುವ ಗಂಡು ಮಕ್ಕಳ ವಸತಿ ಗೃಹ,ಅದು ಸಹ ಕೆಟ್ಟ ವಾಸನೆ,ಊಟದ ಹಾಲ್ಗಳು,ಕುಡಿಯುವ ನೀರಿನ ಡ್ರಂಗಳು,ನಲ್ಲಿಗಳು ಗಲೀಜು, ಕೈತೊಳೆಯುವ ಬೇಸನ್ಗಳು ಸ್ವಚ್ಛತೆಯಿಲ್ಲ,ಮಕ್ಕಳಿಗೆ ಆಹಾರ ತಯಾರು ಮಾಡುವ ಕೊಠಡಿ ಸಂಪೂರ್ಣ ಗಬ್ಬು ನಾರುತ್ತಿದೆ.ಆಹಾರ ತಯಾರಿಸುವ ಪಾತ್ರೆಗಳು ಶೌಚಗೃಹದಲ್ಲಿ ಇಟ್ಟಿರುವುದು ದುರಂತವೆನ್ನಬಹುದು,ಆಹಾರ ತಯಾರು ಮಾಡುವ ಸಮಯದಲ್ಲಿ ಉಳಿಯುವ ಅಹಾರ , ಕಸ,ಅಶುದ್ಧ ನೀರನ್ನು ಹಿಂಭಾಗಕ್ಕೆ ಬಿಟ್ಟಿದ್ದು ಅವುಗಳು ನೆಲದ ಮೇಲ್ಭಾಗದಲ್ಲಿಯೇ ಕೊಳೆತು ನಾರುತ್ತಿದೆ,ಮಕ್ಕಳಿಗೆ ನೀಡುವ ಆಹಾರದ ಮೆನುನಾಮಪಲಕ್ಕೆ ಸೀಮಿತ,ಮೆನು ಪ್ರಕಾರ ಊಟ ನೀಡುತ್ತಿಲ್ಲ, ಗಲೀಜಾದ,ಕೊಳೆತ ತರಕಾರಿಗಳ ಬಳಕೆ,ಹುಳ ಉಪ್ಪಟೆ ಅಕ್ಕಿಯಿಂದ ಅನ್ನ ತಯಾರು,ನಾನ್ ವೆಜ್ಗಳನ್ನು ಸರಿಯಾಗಿ ಮಾಡುವುದಿಲ್ಲ,ಆಡುಗೆ ಸಿಬ್ಬಂದಿಗಳು ಶುಚಿತ್ವವಿಲ್ಲ,ಪಾಮೋಲಿನ ಎಣ್ಣೆ ತಿಂಡಿಗಳನ್ನು ನೀಡುತ್ತಾರೆ. ಊಟ ಬಡಿಸುವವರು ಸಹ ಅಶುಚಿತ್ವ, ಆಹಾರ ವಿತರಣೆಯಲ್ಲೂ ಪಕ್ಷಪಾತದ ದೂರುಗಳು ಬಂದವು ಹೆಣ್ಣು ಮಕ್ಕಳಿಗೂ ಕ್ಲಿಷ್ಟ ಪರಿಸ್ಥಿತಿ: ಹೆಣ್ಣು ಮಕ್ಕಳ ವಸತಿಗೃಹದ ಕಿಟಕಿಗಳಿಗೆ ಕರ್ಟನ್ಗಳುಇಲ್ಲ,ಬಟ್ಟೆ ಬದಲಿಸಲು ಕ್ಲಿಷ್ಟ ಪರಿಸ್ಥಿತಿ, ಕಿಟಕಿ ಮರೆಮಾಡಲು ಪೇಪರ್ ಕೇಳಿದರು ನೀಡುವುದಿಲ್ಲ,ಕೊಠಡಿಗಳಲ್ಲಿ ಫ್ಯಾನ್ ಕೆಟ್ಟು ನಿಂತಿವೆ, ಸೊಳ್ಳೆಗಳ ಕಾಟ,ಶೌಚಗೃಹದಲ್ಲಿ ನೀರಿನ ಸಮಸ್ಯೆ,ಹೆಣ್ಣು ಮಕ್ಕಳು ಬಟ್ಟೆ ಒಗೆಯುವ ಸ್ಥಳದಲ್ಲಿ ಒಂದೇ ನಲ್ಲಿಯ ಅಳವಡಿಕೆ, ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ವಸತಿ ಗೃಹದಲ್ಲಿರುವ ನರ್ಸ್ ಪಕ್ಷಪಾತ, ಹೆಣ್ಣು ಮಕ್ಕಳು ಋತು ಸ್ರಾವದ ಸಮಯದಲ್ಲಿ ಬಿಸಿ ನೀರನ್ನು ನೀಡುತ್ತಿಲ್ಲ,ಗಣಿತ ಶಿಕ್ಷಕಿ ಸರಿಯಾಗಿ ಪಾಠ ಮಾಡುವುದಿಲ್ಲ,ಶಿಕ್ಷಕರು ಸಮಸ್ಯೆ ಬಗೆಹರಿಸದೆ ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಾರೆ,ಇಂಗ್ಲೀಷ್ ಟೀಚರ್ನಿಂದ ಮಕ್ಕಳ ನಡುವೆ ಪಕ್ಷಪಾತ- ಅಸಭ್ಯ ವರ್ತನೆಯ ದೂರುಗಳ ಸುರಿಮಳೆಯನ್ನು ಮಕ್ಕಳು ಹೇಳಿದರು. ದಿನನಿತ್ಯದ ಜಗತ್ತಿನ ವಿಷಯಗಳನ್ನು ತಿಳಿಸುವ ದಿನ ಪತ್ರಿಕೆಗಳನ್ನು ಹಾಕಿಸುತ್ತಿಲ್ಲ,ಪುಸ್ತಕ ಇರದ, ಪುಸ್ತಕದ ನೀಡದ ಲೈಬ್ರರಿಯ ಅವ್ಯವಸ್ಥೆ,ಪಠ್ಯೇತರ ವಿಷಯ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಪ್ರೋತ್ಸಾಹದ ಕೊರತೆ, ಮಕ್ಕಳಿಗೆ ಮೊಟ್ಟೆ,ಬಾಳೆ ಹಣ್ಣು ನೀಡುತ್ತಿಲ್ಲ,ಮೊಟ್ಟೆ ಬಾಳೆ ಹಣ್ಣು ನೀಡುವಂತೆ ಕೇಳಿದರೆ ತಿನ್ನುವುದಕ್ಕಾಗಿಯೇ ಬಂದಿದ್ದೀರ ಎಂದು ಮೂದಲಿಕೆ, ರಾತ್ರಿ ಪಾಳಯದಲ್ಲಿ ಕೇವಲ ಅತಿಥಿ ಶಿಕ್ಷಕರನ್ನು ಬಿಟ್ಟು, ಖಾಯಂ ಶಿಕ್ಷಕರು ಅವರ ಮನೆಗೆ ಹೋಗುತತಾರೆ,ವಿದ್ಯಾರ್ಥಿಗಳ ಸಮಸ್ಯೆ-ಅಳಲನ್ನು ಕೇಳಲು ಯಾರು ಇಲ್ಲ,ಸಮಸ್ಯೆಗಳ ಬಗ್ಗೆ ಪ್ರಾಂಶುಪಾಲರನ್ನು, ಶಿಕ್ಷಕರನ್ನು ಕೇಳಿದರೆ ಅವರು ಪ್ರಶ್ನಿಸುವ ಮಕ್ಕಳನ್ನು ಟಾರ್ಗೇಟ್ ಮಾಡುತ್ತಾರೆ, ಸಮಸ್ಯೆಗಳ ಬಗ್ಗೆ ನಮ್ಮ ಪೋಷಕರು ಕೇಳಿದರೆ “ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವುದು, ಮದ್ಯಪಾನ ಮಾಡುವ ವಾಚ್ ಮೆನ್ ಮತ್ತು ಕೆಲ ವಿದ್ಯಾರ್ಥಿಗಳು: ರಾತ್ರಿ ಪಾಳಯದಲ್ಲಿರುವ ವಾಚ್ಮನ್ ಕುಡಿದು ಬರುವುದು,ಇದಲ್ಲದೆ ಕೆಲ ಗಂಡು ಮಕ್ಕಳು ಹೊರಗಡೆ ಹೋಗಿ ಮದ್ಯಪಾನ ಮಾಡಿ ಬಂದಿರುವ ದೂರುಗಳನ್ನು ಮಕ್ಕಳು ಹೇಳಿದ್ದಾರೆ. ನೀರು ಇರುವುದಿಲ್ಲ ಮೋಟರ್ ಆನ್ ಮಾಡಿ ಎಂದರೆ ಮಕ್ಕಳನ್ನು ಬಯ್ಯುತ್ತಾರೆ.ಇದರಿಂದಾಗಿ ರಾತ್ರಿ ವೇಳೆಯಲ್ಲಿ ಹೊರಗಡೆ ಬರ್ಹಿದೆಸೆಗೆ ಹೋಗಿರುವ ಉದಾಹರಣೆಗಳಿವೆ. ಶಾಲೆಯ ಅಭಿವೃದ್ದಿಗೆ ಶಾಸಕರು ನೀಡಿದ ೨೫ ಲಕ್ಷ ಅನುದಾನ ಬಳಕೆಯ ಕಂಡು ಬರದಿರುವ ಬಗ್ಗೆ ನ್ಯಾಯಾದೀಶರು ಸಂಬAದಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಈ ಸಂಭAದ ನ್ಯಾಯಾದೀಶರು ಕ್ರಮಕೈಗೊಂಡು ವಸತಿ ಶಾಲೆಯ ಪ್ರಾಂಶುಪಾಲರಿಗೆ,ಕAಪ್ಯೂಟರ್ ಶಿಕ್ಷಕಿ, ಗಣಿತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ, ತಾಲ್ಲೂಕು ವೈದ್ಯಾಧಿಕಾರಿಗಳಿಗೆ,ಕಿರುಗಾವಲು ವೃತ್ತ ನಿರೀಕ್ಷಕರಿಗೆ ನೋಟಿಸ್ ನೀಡಲಾಗಿದೆ. ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ವಕೀಲರ ಸಂಘದ ಉಪಾದ್ಯಕ್ಷರಾದ ಎಂ.ಮಲ್ಲಪ್ಪ,ಕಾರ್ಯದರ್ಶಿಎನ್.ನಟೇಶ್ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಹಾಗೂ ಕಾನೂನು ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೧೩-೧ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಮುರಾರ್ಜಿ ದೇಶಾಯಿ ವಸತಿ ಶಾಳೆಗೆ ನ್ಯಾಯಾಧೀಶರು ಬೇಟಿ ನೀಡಿ ಮಕ್ಕಳ ದೂರುಗಳನ್ನು ಸ್ವೀಕರಿಸಿದರು.
- ಕೊಳ್ಳೇಗಾಲ. ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದಂದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕರ ಮಾಡದೇ ಅಪಮಾನ ಎಸಗಿರುವುದನ್ನು ಖಂಡಿಸಿ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಹಾಗೂ ಪದಾಧಿಕಾರಿಗಳು ಜಮಾಯಿಸಿ ಶಿರೆಸ್ತದಾರ್ ಕೃಪಕಾರ್ ರವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಮಾತನಾಡಿ ಪ್ರಜಾಪ್ರಭುತ್ವದ ಪಿತಾಮಹ, ರಾಷ್ಟ್ರನಾಯಕ ಡಾ. ಅಂಬೇಡ್ಕರ್ರವರ 135ನೇ ಜಯಂತಿಯನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಗೌರವ ಪೂರ್ವಕವಾಗಿ ಆಚರಣೆ ಮಾಡುತ್ತೀರುವುದು ನಮ್ಮೇಲ್ಲರಿಗೂ ತಿಳಿದಿರುವು ನಿಮಗೂ ಸಹ ತಿಳಿದಿಲಿದೆ. ಆದರೆ ಕೊಳ್ಳೇಗಾಲ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಕೂಡ ಆಚರಣೆ ಮಾಡಿದೆ ಆದರೆ ಕೆಲವು ತಾಲ್ಲೂಕಿನ ವಿವಿಧ ಇಲಾಖೆಗಳು ನಿಯಮ ವಾಗಿ ದೀಪಾಲಂಕರ ಮಾಡದೆ, ಕಾಟಚಾರಕ್ಕೆ ಜಯಂತಿಯನ್ನು ಮಾಡಿರುತ್ತಾರೆ, ಹಾಗಾಗಿ ಇಂತವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಉಪಾಧ್ಯಕ್ಷರು ಮೊಹಮ್ಮದ್ ಅಬ್ಜಲ್, ಯೂನುಸ್ ಪಾಷ, ಪ್ರಧಾನ ಕಾರ್ಯದರ್ಶಿ ನಾಗರಾಜು, ಚೇತನ್, ಚಂದನ್ ಇದ್ದರು.1
- 135 TH BIRTH ANNIVERSARY OF DR. BR AMBEDKAR SAHEB BY KARNATAKA RASHTRA SAMITI PAKSHA1
- ಹನೂರು ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡ್ನಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿ, ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಸಮಸ್ಯೆಯಿಂದ ಬೇಸತ್ತ ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳನ್ನು ಹಿಡಿದು ತಮ್ಮ ಆಕ್ರೋಶ ಮತ್ತು ನೋವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, “ಎರಡನೇ ವಾರ್ಡ್ನಲ್ಲಿ ವಾಸಿಸುವ ಕ್ರಿಶ್ಚಿಯನ್ ಸಮುದಾಯದ ಜನರು ನೀರಿನ ಕೊರತೆಯಿಂದ ದಿನನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಕುಡಿಯಲು ನೀರಿಲ್ಲದೆ, ಶೌಚಾಲಯಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ತೀವ್ರ ಸಂಕಷ್ಟ ಅನುಭವಿಸುತ್ತಿದ್ದೇವೆ,” ಎಂದು ಹೇಳಿದರು. “ನಾವು ಅಲ್ಪಸಂಖ್ಯಾತರು. ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ. ನಮಗೆ ಬೇರೆ ಏನೂ ಬೇಡ, ಕುಡಿಯಲು ನೀರು ಕೊಟ್ಟರೆ ಸಾಕು,” ಎಂದು ಮಹಿಳೆಯರು ಕಳವಳ ವ್ಯಕ್ತಪಡಿಸಿದರು.1
- *ಭಾರತ ನಲ್ಲಿ ವೈರಲ್*1
- ಹನೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. "ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.. ಈ ಸಂದರ್ಭದಲ್ಲಿ ಅವತಾರ್ ಶಿವ ರೈತ ಸಂಘದ ಯುವ ಸದಸ್ಯರು ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೂರು ತಿಂಗಳಿಗೆ ಒಮ್ಮೆ ಸಭೆ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಕಾಡಿನ ಪ್ರಾಮುಖ್ಯತೆ ಹಾಗೂ ರೈತರಿಗೆ ಇದರ ಮಹತ್ವ ತಿಳಿಸಿ ಹಾಗೂ ಕಾಡ್ಗಿಚ್ಚು ಇದರ ಬಗ್ಗೆ ಸಭೆಗಳು ಮಾಡಿಸಿ ರೈತರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.4
- ಮೈಸೂರಿನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ1
- ಬನ್ನೂರು: ತಾಲೂಕಿನ ಬನ್ನೂರು ಹೋಬಳಿಯ ಬಿ.ಸಿ ಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯಾದ ಹುಚ್ಚಮ್ಮ ದೇವಿಯ ದೊಡ್ಡ ಹಬ್ಬ ಭಕ್ತಿಭಾವ, ಸಂಪ್ರದಾಯ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಬಗಿನೊಂದಿಗೆ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹಬ್ಬದ ಪ್ರಮುಖ ಅಂಗವಾಗಿ ಗ್ರಾಮದ ಮಹಿಳೆಯರು 70 ಕ್ಕೂ ಹೆಚ್ಚು ಮಡಿಕೆಗಳಲ್ಲಿ ಪವಿತ್ರ ನೀರನ್ನು ತಂದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಹುಚ್ಚಮ್ಮ ದೇವಿಯ ಉತ್ಸವ ಮೂರ್ತಿಗೆ ಗ್ರಾಮ ಸುತ್ತ ಭವ್ಯ ಮೆರವಣಿಗೆ ನಡೆಸಲಾಯಿತು. ಡೊಳ್ಳು, ನಾದಸ್ವರ, ಪೂಜಾ ಘೋಷಣೆಗಳು ಮತ್ತು ಭಕ್ತರ ಜಯಘೋಷಗಳಿಂದ ಗ್ರಾಮದೆಲ್ಲೆಡೆ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು. ದೇವಿಗೆ ಹರಕೆ ತೀರಿಸುವ ಸಲುವಾಗಿ ಭಕ್ತರು ಸ್ವಯಂಪ್ರೇರಿತವಾಗಿ ಸುಮಾರು 500 ಕುರಿಗಳನ್ನು ಸಮರ್ಪಿಸಿದರು. ಪ್ರತಿಯೊಂದು ಕುರಿಯ ಅಂದಾಜು ಬೆಲೆ ₹12,000 ಆಗಿದ್ದು, ಒಟ್ಟು ಮೌಲ್ಯ ಸುಮಾರು ₹60 ಲಕ್ಷ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭಕ್ತರು ನೀಡಿದ ಈ ಕುರಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಹಬ್ಬದ ವಿಶೇಷ ಆಕರ್ಷಣೆಯಾಗಿ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು. ಭಕ್ತರಿಗಾಗಿ ಸುಮಾರು 12 ಟನ್ ಮಟನ್ ಸಾಂಬಾರ್ ಹಾಗೂ ರಾಗಿ ಮುದ್ದೆ ತಯಾರಿಸಿ 1000 ಕ್ಕೂ ಹೆಚ್ಚು ಜನರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಗ್ರಾಮಸ್ಥರು, ಹಾಗೂ ಮಹಿಳಾ ಯಾರು ಸಹ ಅಡುಗೆ ತಯಾರಿ ಭಾಗವಹಿಸಿ ದ್ದರು. ಅಡುಗೆ ವ್ಯವಸ್ಥೆ ಸುಸೂತ್ರವಾಗಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಏಕತೆ, ಸಹಕಾರ ಮತ್ತು ಭಕ್ತಿಯ ಪ್ರತಿರೂಪ ಕಾಣಿಸಿಕೊಂಡಿತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ದೇವಿಯ ಆಶೀರ್ವಾದ ಪಡೆದು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪರಂಪರೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಹುಚ್ಚಮ್ಮ ದೇವಿ ಹಬ್ಬ ಗ್ರಾಮೀಣ ಬದುಕಿನ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಸಾರಿತು. ಗ್ರಾಮಸ್ಥರ ಒಗ್ಗಟ್ಟು ಹಾಗೂ ಭಕ್ತರ ಅಪಾರ ಭಕ್ತಿ ಈ ವರ್ಷದ ಹುಚ್ಚಮ್ಮ ದೇವಿ ದೊಡ್ಡ ಹಬ್ಬವನ್ನು ವಿಶೇಷವಾಗಿ ಮೆರಗುಗೊಳಿಸಿತು.1
- ಕೌದಳ್ಳಿ ಗ್ರಾಮದ ಮನೆಗಳಲ್ಲಿ ಕಳ್ಳರು ಬೀಗದ ಹಣ ಚಿನ್ನಭರಣವನ್ನು ಕಳವು ಮಾಡಿರುವ ಘಟನೆ ಜರುಗಿದೆ ಗ್ರಾಮದ ಮೊದಲಿಯರು ಬೀದಿಗಯಲ್ಲಿ ಮೂರು ಮನೆಗಳನ್ನು ಯಾರೋ ಕಳ್ಳರು ಬೀಗ ಹೊಡೆದಿದ್ದು ಅದರಲ್ಲಿ ಪಳನಿ ಅಮ್ಮ ಬಿನ್ ಕೃಷ್ಣ ಮೊದಲಿಯ ರ್ ಎಂಬುವರ ಮನೆಯಲ್ಲಿ ka 10 v3245 Honda Activa ಕಳ್ಳತನ ಆಗಿರುತ್ತದೆ ಹಾಗೂ ಮನೆಯ ಒಳಗಡೆ ಎರಡು ಬೀರುಗಳ ನು ಹೊಡೆದಿರುತ್ತಾರೆ ಹಾಗೂ ಮಾದೇಶ ಬಿನ್ ನಾಗ ಮೊದಲಿಯರು ರವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ ಅಲ್ಲಿ ಯಾವುದೇ ವಸ್ತುಗಳು ಹೋಗಿರುವುದಿಲ್ಲ ಎಂಬುದಾಗಿ ಅವರೇ ತಿಳಿಸಿರುತ್ತಾರೆ ನಂತರ ಮಾದಪ್ಪ ಮೊದಲಿಯರ್ ಎಂಬುವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ, ಅವರುಗಳು ಮನೆಯಲ್ಲಿ ಇರುವುದಿಲ್ಲ ಈ ಸಂಬಂಧ ಸ್ಥಳಕ್ಕೆಬಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕ್ಯೆಗೊಂಡಿದ್ದಾರೆ1