*ಅಳ್ನಾವರದಲ್ಲಿ ನಡೆದ ಇಪ್ತಿಯಾರ ಕೂಟದಲ್ಲಿ* *ಸಮಾಜದ ಮುಖಂಡರು ಭಾಗವಹಿಸಿದ್ದರು.* *ರಮಜಾನ ಉಪವಾಸ್ ಆರೋಗ್ಯಕ್ಕೆ ಸಹಕಾರಿ* *ಅಳ್ನಾವರ(ಧಾರವಾಡ):* ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಏಕತೆ ಮೂಡಿಸಲು ಸಹಕಾರಿಯಾಗಿವೆ. ವಿಶೇಷವಾಗಿ ರಮಜಾನ ತಿಂಗಳಲ್ಲಿನ ಉಪವಾಸ ವೃತ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ಸಮಾಜದಲ್ಲಿ ಶಾಂತಿ ಮೂಡಲು ಸೌಹಾರ್ದ ಬದುಕು ಕಟ್ಟಿಕೊಳ್ಳಬೇಕು ಎಂದು ಉಧ್ಯಮಿ ಫೈರೋಜಖಾನ ಪಠಾಣ ಹೇಳಿದರು. ಇಲ್ಲಿನ ಕಾಳೆ ಪ್ಲಾಟ್ ಸಮೀಪದ ಬಯಲು ಪ್ರದೇಶದಲ್ಲಿ ಸೋಮವಾರ ರಾತ್ರಿ ಫೈರೋಜಖಾನ ಪಠಾಣ ಸಹೋದರರು ರಮಜಾನ ಪ್ರಯುಕ್ತ ಹಮ್ಮಿಕೊಂಡ ಇಫ್ತಿಯಾರ ಕೂಟದಲ್ಲಿ ಅವರು ಮಾತನಾಡಿ, ನಮ್ಮ ದೇಶದಲ್ಲಿ ವಿವಿದ ಜಾತಿ,ಧರ್ಮ,ಆಚಾರ ವಿಚಾರಗಳು ಇದ್ದರೂ ಸಹ ಸೌಹಾರ್ಧತೆಯ ಬದುಕು ನಮ್ಮದಾಗಿದೆ. ಈ ಸಂಪ್ರದಾಯ ಪ್ರಪಂಚಕ್ಕೆ ಮಾದರಿ ಎಂದರು. ಮುಸ್ಲೀA ಸಮಾಜದ ಮುಖಂಡ ಅಲೀಂ ಬಸರಿಕಟ್ಟಿ ಮಾತನಾಡಿ, ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅವರದೆ ಆದ ಧಾರ್ಮಿಕ ಕಟ್ಳೆಗಳು ಇರುವದು ಸಹಜ ಆದರೆ ಒಗ್ಗಟ್ಟು ಮುಖ್ಯವಾಗಿದ್ದು ಅಂತಹ ಸುಂದರ ಮತ್ತು ಸಹೋದರತ್ವವನ್ನು ನಾವು ಭಾರತದಲ್ಲಿ ಮಾತ್ರ ಕಾಣುತ್ತೇವೆ, ನಾವೆಲ್ಲ ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲಿ ಇರುವದರಿಂದ ಸದೃಡ ಭಾರತ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದರು. ಶ್ರೀಕಾAತ ಗಾಯಕವಾಡ, ಅಜರ ಬಸರಿಕಟ್ಟಿ, ವಾಸೀಂಖಾನ ಪಠಾಣ, ರುದ್ರೇಶ ಹಡಪದ, ಸತ್ತಾರ ಬಾತಖಂಡೆ, ಹಸನಅಲಿ ಶೇಖ, ಜಾವೇದ ತೋಲಗಿ, ಸುರೇಂದ್ರ ಕಡಕೋಳ, ನಬಿಸಾಬ ಮುಜಾವರ ಇತರರು ಇದ್ದರು. ಸಿಹಿ ಹಾಗೂ ಹಣ್ಣು ವಿತರಿಸಲಾಯಿತು.
*ಅಳ್ನಾವರದಲ್ಲಿ ನಡೆದ ಇಪ್ತಿಯಾರ ಕೂಟದಲ್ಲಿ* *ಸಮಾಜದ ಮುಖಂಡರು ಭಾಗವಹಿಸಿದ್ದರು.* *ರಮಜಾನ ಉಪವಾಸ್ ಆರೋಗ್ಯಕ್ಕೆ ಸಹಕಾರಿ* *ಅಳ್ನಾವರ(ಧಾರವಾಡ):* ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಏಕತೆ ಮೂಡಿಸಲು ಸಹಕಾರಿಯಾಗಿವೆ. ವಿಶೇಷವಾಗಿ ರಮಜಾನ ತಿಂಗಳಲ್ಲಿನ ಉಪವಾಸ ವೃತ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ಸಮಾಜದಲ್ಲಿ ಶಾಂತಿ ಮೂಡಲು ಸೌಹಾರ್ದ ಬದುಕು ಕಟ್ಟಿಕೊಳ್ಳಬೇಕು ಎಂದು ಉಧ್ಯಮಿ ಫೈರೋಜಖಾನ ಪಠಾಣ ಹೇಳಿದರು. ಇಲ್ಲಿನ ಕಾಳೆ ಪ್ಲಾಟ್ ಸಮೀಪದ ಬಯಲು ಪ್ರದೇಶದಲ್ಲಿ ಸೋಮವಾರ ರಾತ್ರಿ ಫೈರೋಜಖಾನ ಪಠಾಣ ಸಹೋದರರು ರಮಜಾನ ಪ್ರಯುಕ್ತ ಹಮ್ಮಿಕೊಂಡ ಇಫ್ತಿಯಾರ ಕೂಟದಲ್ಲಿ ಅವರು ಮಾತನಾಡಿ, ನಮ್ಮ ದೇಶದಲ್ಲಿ ವಿವಿದ ಜಾತಿ,ಧರ್ಮ,ಆಚಾರ ವಿಚಾರಗಳು ಇದ್ದರೂ ಸಹ ಸೌಹಾರ್ಧತೆಯ ಬದುಕು ನಮ್ಮದಾಗಿದೆ. ಈ ಸಂಪ್ರದಾಯ ಪ್ರಪಂಚಕ್ಕೆ ಮಾದರಿ ಎಂದರು. ಮುಸ್ಲೀA ಸಮಾಜದ ಮುಖಂಡ ಅಲೀಂ ಬಸರಿಕಟ್ಟಿ ಮಾತನಾಡಿ, ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅವರದೆ ಆದ ಧಾರ್ಮಿಕ ಕಟ್ಳೆಗಳು ಇರುವದು ಸಹಜ ಆದರೆ ಒಗ್ಗಟ್ಟು ಮುಖ್ಯವಾಗಿದ್ದು ಅಂತಹ ಸುಂದರ ಮತ್ತು ಸಹೋದರತ್ವವನ್ನು ನಾವು ಭಾರತದಲ್ಲಿ ಮಾತ್ರ ಕಾಣುತ್ತೇವೆ, ನಾವೆಲ್ಲ ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲಿ ಇರುವದರಿಂದ ಸದೃಡ ಭಾರತ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದರು. ಶ್ರೀಕಾAತ ಗಾಯಕವಾಡ, ಅಜರ ಬಸರಿಕಟ್ಟಿ, ವಾಸೀಂಖಾನ ಪಠಾಣ, ರುದ್ರೇಶ ಹಡಪದ, ಸತ್ತಾರ ಬಾತಖಂಡೆ, ಹಸನಅಲಿ ಶೇಖ, ಜಾವೇದ ತೋಲಗಿ, ಸುರೇಂದ್ರ ಕಡಕೋಳ, ನಬಿಸಾಬ ಮುಜಾವರ ಇತರರು ಇದ್ದರು. ಸಿಹಿ ಹಾಗೂ ಹಣ್ಣು ವಿತರಿಸಲಾಯಿತು.
- ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಧಾರವಾಡ ನಗರದಲ್ಲಿ ವಿಷಕಾರಿ ಹೊಗೆ ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರು ಕಸದ ಡಂಪಿಂಗ್ ಯಾರ್ಡ್ ಎದುರು ಜಮಾಯಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಸದ ಗಾಡಿಗಳನ್ನು ಕಸ ತಂದು ಸುರಿಯುವುದನ್ನು ತಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಧಾರವಾಡ ಹೊಸ ಯಲ್ಲಾಪೂರದ ಬಳಿಯ ಕಸದ ಡಂಪಿಂಗ್ ಯಾರ್ಡ್ ಎದುರು ಜಮಾಯಿಸಿದ ಜನರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಸದ ಡಂಪಿಂಗ್ ಯಾರ್ಡ್ ನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.1
- ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ ಗೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೊಸ ನೀರಲಗಿ ಗ್ರಾಮದ ವಕೀಲರಾದ ಸಿದ್ದನಗೌಡ ವೀರಭದ್ರ ಗೌಡ ಪಾಟೀಲ ಚುನಾವಣಾ ಕಣಕ್ಕೆ2
- ಬೆಳಗಾವಿಯ ವಡಗಾಂವದ ರಯತ್ ಗಲ್ಲಿಯ ಮಹಿಳೆಯರು ನೀರಿನ ಸಮಸ್ಯೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ 'ಘಾಗರ್ ಮೋರ್ಚಾ'ದ (ಕೊಡಗಳ ಮೆರವಣಿಗೆ)1
- ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ತಲಾ ₹4 ಲಕ್ಷ ಅನುದಾನ ನೀಡಲಾಗಿದೆ ಎಂಬ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಪ್ರತಿಷ್ಠಾಪನೆಗೆ ಇನ್ನೂ ಸರ್ಕಾರದಿಂದ ಅನುಮತಿ ಇಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಆರೋಪಿಸಿದ್ದಾರೆ. ಬೈಎಲೆಕ್ಷನ್ ಹಿನ್ನೆಲೆಯಲ್ಲಿ ರಾಜಕೀಯ ಡ್ರಾಮಾ ಮಾಡಬೇಡಿ, ಮೊದಲು ಅನುಮತಿ ನೀಡಿ ಎಂದು ಆಗ್ರಹಿಸಿದ್ದಾರೆ.1
- Post by @april14news1
- ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ಹಲವಾರು ದಿನಗಳಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು, ಇದರಿಂದ ಯುವಕರು ಮತ್ತು ಕುಟುಂಬಗಳು ಹಾನಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿನ ಇಬ್ಬರು ವ್ಯಕ್ತಿಗಳು ಮದ್ಯದ ನಿಷೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆಯರು ಸಂಗನಾಳ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೇರಿ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಮದ್ಯ ಮಾರಾಟದಿಂದ ಗ್ರಾಮದಲ್ಲಿ ಶಾಂತಿ ಭಂಗವಾಗುತ್ತಿದೆ ಮತ್ತು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಮಹಿಳೆಯರು ಆರೋಪಿಸಿದರು. ಪ್ರತಿಭಟನೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.1
- ಹೌದು ಹೋಳಿ ಹಬ್ಬದ ವೇಳೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ. ರಾಹುಲ್ ಬಾಹುಬಲಿ ಕೊಲೆಯಾದ ದುರ್ದೈವಿ, ಹೋಳಿ ಹಬ್ಬದಂದು ರಾಹುಲ ಹಾಗೂ ಆತನ ಸ್ನೇಹಿತನ ಕ್ಷುಲ್ಲಕ ಕಾರಣಕ್ಕೆ ಜಗಳವುಂಟಾಗಿತ್ತು. ಇದೇ ವಿಷಯವಾಗಿ ಮಾತನಾಡಲು ಸ್ನೇಹಿತರೆಲ್ಲ ದೇವಸ್ಥಾನ ಒಂದರ ಬಳಿ ಸೇರಿದ್ದ ವೇಳೆಯಲ್ಲಿ ಮಾತಿಗೆ ಮಾತು ಬೆಳೆದು ರಾಹುಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.1
- ಜನವಿರೋಧಿ ಕರಾಳ ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಕರ್ನಾಟಕ ರಾಜ್ಯ ವಿದ್ಯುತ್ ಬಳಕೆದಾರರ ಸಂಘ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿದೆ. ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನರ ಜೀವನ ಜೊತೆ ಆಟವಾಡುತ್ತಿವೆ. ಕೂಡಲೇ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾದ ಕರಾಳ ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಹಾಗೂ ವಿದ್ಯುತ್ ಗ್ರಾಹಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.1