logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲದ ಹಳೆ ನಗರಸಭೆ ರಸ್ತೆಯಲ್ಲಿರುವ ರವಿ ಬಾಬು ಅವರ ಪ್ರಿಂಟಿಂಗ್ ಅಂಗಡಿಯೊಳಗೆ ಸುಮಾರು 5 ಕೆಜಿ ತೂಕದ, 3 ಅಡಿ ಉದ್ದದ ದೈತ್ಯ ಉಡವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಈ ಪರಿಸ್ಥಿತಿಯಲ್ಲಿ, ಸಮಾಜ ಸೇವಕ ಹಾಗೂ ಉರಗ ರಕ್ಷಕ ಸ್ನೇಕ್ ಬಾಬು ಅವರು ಸಮಯಪ್ರಜ್ಞೆ ಮೆರೆದು, ಆತಂಕ ಸೃಷ್ಟಿಸಿದ್ದ ಉಡಕ್ಕೆ ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯ ಬಳಿಕ, ಉಡವನ್ನು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಸಮಾಜ ಸೇವೆ ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿ ಸದಾ ಮುಂದೆ ಇರುವ ಸ್ನೇಕ್ ಬಾಬು ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಸಹಾಯ ಅಥವಾ ಉರಗಗಳ ರಕ್ಷಣೆಗಾಗಿ ಸ್ನೇಕ್ ಬಾಬು ಅವರನ್ನು 96633 03651 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

4 hrs ago
user_ಉಸ್ಮಾನ್ ಖಾನ್
ಉಸ್ಮಾನ್ ಖಾನ್
Local News Reporter ಹನೂರು, ಚಾಮರಾಜನಗರ, ಕರ್ನಾಟಕ•
4 hrs ago

ಕೊಳ್ಳೇಗಾಲದ ಹಳೆ ನಗರಸಭೆ ರಸ್ತೆಯಲ್ಲಿರುವ ರವಿ ಬಾಬು ಅವರ ಪ್ರಿಂಟಿಂಗ್ ಅಂಗಡಿಯೊಳಗೆ ಸುಮಾರು 5 ಕೆಜಿ ತೂಕದ, 3 ಅಡಿ ಉದ್ದದ ದೈತ್ಯ ಉಡವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಈ ಪರಿಸ್ಥಿತಿಯಲ್ಲಿ, ಸಮಾಜ ಸೇವಕ ಹಾಗೂ ಉರಗ ರಕ್ಷಕ ಸ್ನೇಕ್ ಬಾಬು ಅವರು ಸಮಯಪ್ರಜ್ಞೆ ಮೆರೆದು, ಆತಂಕ ಸೃಷ್ಟಿಸಿದ್ದ ಉಡಕ್ಕೆ ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯ ಬಳಿಕ, ಉಡವನ್ನು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಸಮಾಜ ಸೇವೆ ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿ ಸದಾ ಮುಂದೆ ಇರುವ ಸ್ನೇಕ್ ಬಾಬು ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಸಹಾಯ ಅಥವಾ ಉರಗಗಳ ರಕ್ಷಣೆಗಾಗಿ ಸ್ನೇಕ್ ಬಾಬು ಅವರನ್ನು 96633 03651 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

More news from ಕರ್ನಾಟಕ and nearby areas
  • ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಕುಡಿದ ಮತ್ತಿನಲ್ಲಿ ಮಾತು ವಿಕೋಪಕ್ಕೆ ತಿರುಗಿ ಸ್ನೇಹಿತರಿಂದಲೇ ವ್ಯಕ್ತಿಯೊಬ್ಬನ ಹತ್ಯೆ ನಡೆದಿದೆ. ಹಲಗೂರಿನ ಮೇದರ ಕಾಲೋನಿ ನಿವಾಸಿ 33 ವರ್ಷದ ಮಂಜು @ ಕಾಶಿ ಮೃತ ದುರ್ದೈವಿ. ಈ ಘಟನೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದೆ. ಬಾರ್‌ನಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದ ಮೂವರು ಸ್ನೇಹಿತರು ಬಾರ್ ಮುಚ್ಚಿದ ನಂತರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿಯ ಖಾಲಿ ಜಾಗಕ್ಕೆ ತೆರಳಿದ್ದಾರೆ. ಅಲ್ಲಿ ಮಾತನಾಡುವಾಗ ಮೂವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಪ್ರದೀಪ ಅವರ ಸಿದ್ದರಾಜು ಮತ್ತು ರಾಜ ಎಂಬುವರ ಮಗ ಸಿದ್ದರಾಜು ಇಬ್ಬರು ಸೇರಿ ಮಂಜು @ ಕಾಶಿ ಹೊಟ್ಟೆಗೆ ಬಿಯರ್ ಬಾಟಲ್‌ನಿಂದ ಬಲವಾಗಿ ಚುಚ್ಚಿದ್ದಾರೆ. ಪರಿಣಾಮವಾಗಿ, ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ವಿಷಯ ತಿಳಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ‌.ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್, ಹಾಗೂ ಪಿಎಸ್ಐ ಲೋಕೇಶ್ ಅವರು ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳಾದ ಸಿದ್ದರಾಜು ಮತ್ತು ಸಿದ್ದರಾಜು ಅವರನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಕುಡಿದ ಮತ್ತಿನಲ್ಲಿ ಮಾತು ವಿಕೋಪಕ್ಕೆ ತಿರುಗಿ ಸ್ನೇಹಿತರಿಂದಲೇ ವ್ಯಕ್ತಿಯೊಬ್ಬನ ಹತ್ಯೆ ನಡೆದಿದೆ. ಹಲಗೂರಿನ ಮೇದರ ಕಾಲೋನಿ ನಿವಾಸಿ 33 ವರ್ಷದ ಮಂಜು @ ಕಾಶಿ ಮೃತ ದುರ್ದೈವಿ. ಈ ಘಟನೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದೆ.

ಬಾರ್‌ನಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದ ಮೂವರು ಸ್ನೇಹಿತರು ಬಾರ್ ಮುಚ್ಚಿದ ನಂತರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿಯ ಖಾಲಿ ಜಾಗಕ್ಕೆ ತೆರಳಿದ್ದಾರೆ. ಅಲ್ಲಿ ಮಾತನಾಡುವಾಗ ಮೂವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಪ್ರದೀಪ ಅವರ ಸಿದ್ದರಾಜು ಮತ್ತು ರಾಜ ಎಂಬುವರ ಮಗ ಸಿದ್ದರಾಜು ಇಬ್ಬರು ಸೇರಿ ಮಂಜು @ ಕಾಶಿ ಹೊಟ್ಟೆಗೆ ಬಿಯರ್ ಬಾಟಲ್‌ನಿಂದ ಬಲವಾಗಿ ಚುಚ್ಚಿದ್ದಾರೆ. ಪರಿಣಾಮವಾಗಿ, ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಈ ವಿಷಯ ತಿಳಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ‌.ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್, ಹಾಗೂ ಪಿಎಸ್ಐ ಲೋಕೇಶ್ ಅವರು ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳಾದ ಸಿದ್ದರಾಜು ಮತ್ತು ಸಿದ್ದರಾಜು ಅವರನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    8 hrs ago
  • ಅಬೀಬಾ ಟೆಂಟ್ ಹೌಸ್ ಬೆಂಗಳೂರಿನ PMR ಪ್ರದೇಶದಲ್ಲಿ ಸೇವೆಗಳನ್ನು ಒದಗಿಸುತ್ತದೆ. ಸೇವೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಸಂಪರ್ಕಿಸಲು, 7760976887 ಮತ್ತು 9900619376 ಸಂಖ್ಯೆಗಳಿಗೆ ಕರೆ ಮಾಡಬಹುದು.
    1
    ಅಬೀಬಾ ಟೆಂಟ್ ಹೌಸ್ ಬೆಂಗಳೂರಿನ PMR ಪ್ರದೇಶದಲ್ಲಿ ಸೇವೆಗಳನ್ನು ಒದಗಿಸುತ್ತದೆ. ಸೇವೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಸಂಪರ್ಕಿಸಲು, 7760976887 ಮತ್ತು 9900619376 ಸಂಖ್ಯೆಗಳಿಗೆ ಕರೆ ಮಾಡಬಹುದು.
    user_Sahir sarakar
    Sahir sarakar
    Bengaluru South, Bengaluru Urban•
    23 hrs ago
  • ತುರುವೇಕೆರೆ ತಾಲೂಕಿನ ಡಿ. ಕಲ್ಕರೆ ಸುಕ್ಷೇತ್ರ ಶ್ರೀ ಅಲ್ಲಮ ಪ್ರಭು ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅವರು ಅಲ್ಲಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಟ್ಟದಹಳ್ಳಿ ಗವಿಮಠದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಕಲುಷಿತ ರಾಜಕೀಯದಲ್ಲಿ ಮುರುಳೀಧರ ಹಾಲಪ್ಪ ಅವರು ಸಜ್ಜನ ರಾಜಕಾರಣಿಯಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದು, ರಾಜಕೀಯದಲ್ಲಿ ಅವರಿಗೆ ಉನ್ನತ ಹುದ್ದೆ ದೊರಕಲಿ ಎಂದು ಆಶಿಸಿದರು. ರಾಜಕಾರಣ ಅತಿ ಕೆಟ್ಟುಹೋಗಿದ್ದು, ರಾಜಕೀಯ ಲಾಭಕ್ಕಾಗಿ ಜನರು ರಾಜಕಾರಣಿಗಳ ಕಾಲಿಗೆ ಬೀಳುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಠಾಧೀಶರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದನ್ನು ಬಿಡಬೇಕು ಎಂದರು. ಹಣ ಮತ್ತು ಅಧಿಕಾರ ಉಳ್ಳವರು ಸಮಾಜದಲ್ಲಿ ಸರಳತೆ ಹಾಗೂ ಸಮಾನತೆಯನ್ನು ಸಾರಿದರೆ ಬಸವಣ್ಣನವರು ಕಂಡ ಬಸವ ಕಲ್ಯಾಣ ಸಾಧ್ಯವಾಗಲಿದೆ ಎಂದೂ ಸ್ವಾಮೀಜಿ ಹೇಳಿದರು. ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಪರಂಪರೆಯ ಮೂಲಕ ಜಗತ್ತಿಗೆ ಪರಿವರ್ತನೆಯ ಯುಗವನ್ನು ಸಾರಿದರು ಎಂದು ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಸ್ಮರಿಸಿದರು. ಬಸವೇಶ್ವರರನ್ನು ಇಂದಿಗೂ ಸಮಾಜದ ಎಲ್ಲ ವರ್ಗದವರು ಒಪ್ಪಿ, ಪ್ರೀತಿಸಿ, ಪೂಜಿಸುತ್ತಿರುವುದಕ್ಕೆ ಕಾರಣ 12ನೇ ಶತಮಾನದಲ್ಲಿಯೇ ಅವರು ಮೇಲು-ಕೀಳು, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂಬುದಾಗಿದೆ. 21ನೇ ಶತಮಾನದಲ್ಲಿಯೂ ಶರಣ ಪರಂಪರೆ ಉಳಿದಿದ್ದು, ಬಸವಣ್ಣನವರು ಹಾಕಿಕೊಟ್ಟ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ಬಸವೇಶ್ವರರು ಕಂಡ ಕಲ್ಯಾಣ ಕ್ರಾಂತಿಯನ್ನು ಮಾಡಬಹುದು ಎಂದು ಸ್ವಾಮೀಜಿ ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುರುಳೀಧರ ಹಾಲಪ್ಪ, ಪುಟ್ಟ ಗ್ರಾಮದ ಸಣ್ಣ ಮಠವಾದರೂ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಮಾಡಬೇಕು ಎಂದು ಸಲಹೆ ನೀಡಿದರು. ಜೊತೆಗೆ, ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ತಾನು ಹೆಚ್ಚಿನ ಸಹಕಾರ ನೀಡುವುದಾಗಿ ಹಾಲಪ್ಪ ಘೋಷಿಸಿದರು. ಇದೇ ಸಮಾರಂಭದಲ್ಲಿ ಉದ್ಯಮಿ ಡಿ.ವಿ. ಶಿವಾನಂದ್ ಅವರಿಗೆ ಶರಣಶ್ರೀ ಪ್ರಶಸ್ತಿ, ಕೊರಟಗೆರೆ ಕೋಡಗದಾಲ ಗ್ರಾಮದ ಮಹಾಮುನೇಶ್ವರ ಸ್ವಾಮಿ ಪ್ರಧಾನ ಅರ್ಚಕ ಲಕ್ಷ್ಮೀಕಾಂತ ಅವರಿಗೆ ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿ ಹಾಗೂ ದಾಂಡೇಲಿಯ ಶರಣ ದೇವೇಂದ್ರ ಸಮಾಜ ಸೇವಕ ಮತ್ತು ಎಂ. ಗುಳೂರು ಅವರಿಗೆ ಬಹುರೂಪಿ ಚೌಡಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುರುಳೀಧರ ಹಾಲಪ್ಪ ಅವರಿಗೆ ರಾಜಕೀಯದಲ್ಲಿ ಉನ್ನತ ಹುದ್ದೆ ದೊರಕಲಿ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದರು.
    4
    ತುರುವೇಕೆರೆ ತಾಲೂಕಿನ ಡಿ. ಕಲ್ಕರೆ ಸುಕ್ಷೇತ್ರ ಶ್ರೀ ಅಲ್ಲಮ ಪ್ರಭು ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅವರು ಅಲ್ಲಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಟ್ಟದಹಳ್ಳಿ ಗವಿಮಠದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಕಲುಷಿತ ರಾಜಕೀಯದಲ್ಲಿ ಮುರುಳೀಧರ ಹಾಲಪ್ಪ ಅವರು ಸಜ್ಜನ ರಾಜಕಾರಣಿಯಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದು, ರಾಜಕೀಯದಲ್ಲಿ ಅವರಿಗೆ ಉನ್ನತ ಹುದ್ದೆ ದೊರಕಲಿ ಎಂದು ಆಶಿಸಿದರು. ರಾಜಕಾರಣ ಅತಿ ಕೆಟ್ಟುಹೋಗಿದ್ದು, ರಾಜಕೀಯ ಲಾಭಕ್ಕಾಗಿ ಜನರು ರಾಜಕಾರಣಿಗಳ ಕಾಲಿಗೆ ಬೀಳುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಠಾಧೀಶರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದನ್ನು ಬಿಡಬೇಕು ಎಂದರು. ಹಣ ಮತ್ತು ಅಧಿಕಾರ ಉಳ್ಳವರು ಸಮಾಜದಲ್ಲಿ ಸರಳತೆ ಹಾಗೂ ಸಮಾನತೆಯನ್ನು ಸಾರಿದರೆ ಬಸವಣ್ಣನವರು ಕಂಡ ಬಸವ ಕಲ್ಯಾಣ ಸಾಧ್ಯವಾಗಲಿದೆ ಎಂದೂ ಸ್ವಾಮೀಜಿ ಹೇಳಿದರು.

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಪರಂಪರೆಯ ಮೂಲಕ ಜಗತ್ತಿಗೆ ಪರಿವರ್ತನೆಯ ಯುಗವನ್ನು ಸಾರಿದರು ಎಂದು ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಸ್ಮರಿಸಿದರು. ಬಸವೇಶ್ವರರನ್ನು ಇಂದಿಗೂ ಸಮಾಜದ ಎಲ್ಲ ವರ್ಗದವರು ಒಪ್ಪಿ, ಪ್ರೀತಿಸಿ, ಪೂಜಿಸುತ್ತಿರುವುದಕ್ಕೆ ಕಾರಣ 12ನೇ ಶತಮಾನದಲ್ಲಿಯೇ ಅವರು ಮೇಲು-ಕೀಳು, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂಬುದಾಗಿದೆ. 21ನೇ ಶತಮಾನದಲ್ಲಿಯೂ ಶರಣ ಪರಂಪರೆ ಉಳಿದಿದ್ದು, ಬಸವಣ್ಣನವರು ಹಾಕಿಕೊಟ್ಟ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ಬಸವೇಶ್ವರರು ಕಂಡ ಕಲ್ಯಾಣ ಕ್ರಾಂತಿಯನ್ನು ಮಾಡಬಹುದು ಎಂದು ಸ್ವಾಮೀಜಿ ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುರುಳೀಧರ ಹಾಲಪ್ಪ, ಪುಟ್ಟ ಗ್ರಾಮದ ಸಣ್ಣ ಮಠವಾದರೂ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಮಾಡಬೇಕು ಎಂದು ಸಲಹೆ ನೀಡಿದರು. ಜೊತೆಗೆ, ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ತಾನು ಹೆಚ್ಚಿನ ಸಹಕಾರ ನೀಡುವುದಾಗಿ ಹಾಲಪ್ಪ ಘೋಷಿಸಿದರು.

ಇದೇ ಸಮಾರಂಭದಲ್ಲಿ ಉದ್ಯಮಿ ಡಿ.ವಿ. ಶಿವಾನಂದ್ ಅವರಿಗೆ ಶರಣಶ್ರೀ ಪ್ರಶಸ್ತಿ, ಕೊರಟಗೆರೆ ಕೋಡಗದಾಲ ಗ್ರಾಮದ ಮಹಾಮುನೇಶ್ವರ ಸ್ವಾಮಿ ಪ್ರಧಾನ ಅರ್ಚಕ ಲಕ್ಷ್ಮೀಕಾಂತ ಅವರಿಗೆ ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿ ಹಾಗೂ ದಾಂಡೇಲಿಯ ಶರಣ ದೇವೇಂದ್ರ ಸಮಾಜ ಸೇವಕ ಮತ್ತು ಎಂ. ಗುಳೂರು ಅವರಿಗೆ ಬಹುರೂಪಿ ಚೌಡಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುರುಳೀಧರ ಹಾಲಪ್ಪ ಅವರಿಗೆ ರಾಜಕೀಯದಲ್ಲಿ ಉನ್ನತ ಹುದ್ದೆ ದೊರಕಲಿ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    23 hrs ago
  • ಕೋಲಾರ ಜಿಲ್ಲೆಯ ಬಲಗೈ ಸಮುದಾಯದ ಮುಖಂಡರುಗಳು ಹಾಗೂ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಲಗೈ ಸಮುದಾಯದ ಮುಖಂಡ ಮಾರ್ಚೇನಹಳ್ಳಿ ಬಾಬು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೋಲಾರವೂ ಒಂದಾಗಿದ್ದು, ಕರ್ನಾಟಕ ರಾಜ್ಯ ಘೋಷಣೆಯಾದ ನಂತರವೂ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಸಿಗದೆ ವಂಚನೆಗೆ ಒಳಗಾಗಿದೆ ಎಂದು ದೂರಿದರು. ಲೋಕಸಭಾ ಚುನಾವಣೆಯಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಾಯ ಇದ್ದರೂ, ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷ ವಂಚಿಸಿದೆ ಎಂದು ಆರೋಪಿಸಿದ ಅವರು, ಈಗಲಾದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಷಯದ ಸೂಕ್ಷ್ಮತೆಯನ್ನು ಗಮನಿಸಬೇಕು ಎಂದು ಮನವಿ ಮಾಡಿದರು. ಮೂರು ಬಾರಿ ಗೆದ್ದಿರುವ ಹಿರಿಯ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ರವರಿಗೆ ಡಿ.ಕೆ. ಶಿವಕುಮಾರ್‌ರವರ ಮಂತ್ರಿಮಂಡಲದ ಎರಡನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನ ನೀಡಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ಶೇಕಡಾ 50ರಷ್ಟು ಬಲಗೈ ಸಮುದಾಯದ ಮತದಾರರಿದ್ದು, ಮುಂದಿನ ಚುನಾವಣೆಗಳ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಬಲಗೈ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ ನಾರಾಯಣಸ್ವಾಮಿ ರವರಿಗೆ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒ.ಬಿ.ಸಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯರಾಂ, ಬಲಗೈ ಸಮುದಾಯದ ಮುಖಂಡರಾದ ಅಮ್ಮೇರಹಳ್ಳಿ ಚಲಪತಿ, ಮಂಗಸಂದ್ರ ಶ್ರೀನಿವಾಸ್, ವಿ. ಕಿರಣ್, ದಳಸಗೆರೆ ನರಸಿಂಹ ಮೂರ್ತಿ, ಸೀಪೂರ್ ದೇವರಾಜ್, ಚಲಪತಿ ಮುಂತಾದವರು ಉಪಸ್ಥಿತರಿದ್ದರು.
    3
    ಕೋಲಾರ ಜಿಲ್ಲೆಯ ಬಲಗೈ ಸಮುದಾಯದ ಮುಖಂಡರುಗಳು ಹಾಗೂ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಲಗೈ ಸಮುದಾಯದ ಮುಖಂಡ ಮಾರ್ಚೇನಹಳ್ಳಿ ಬಾಬು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೋಲಾರವೂ ಒಂದಾಗಿದ್ದು, ಕರ್ನಾಟಕ ರಾಜ್ಯ ಘೋಷಣೆಯಾದ ನಂತರವೂ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಸಿಗದೆ ವಂಚನೆಗೆ ಒಳಗಾಗಿದೆ ಎಂದು ದೂರಿದರು.

ಲೋಕಸಭಾ ಚುನಾವಣೆಯಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಾಯ ಇದ್ದರೂ, ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷ ವಂಚಿಸಿದೆ ಎಂದು ಆರೋಪಿಸಿದ ಅವರು, ಈಗಲಾದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಷಯದ ಸೂಕ್ಷ್ಮತೆಯನ್ನು ಗಮನಿಸಬೇಕು ಎಂದು ಮನವಿ ಮಾಡಿದರು. ಮೂರು ಬಾರಿ ಗೆದ್ದಿರುವ ಹಿರಿಯ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ರವರಿಗೆ ಡಿ.ಕೆ. ಶಿವಕುಮಾರ್‌ರವರ ಮಂತ್ರಿಮಂಡಲದ ಎರಡನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನ ನೀಡಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಶೇಕಡಾ 50ರಷ್ಟು ಬಲಗೈ ಸಮುದಾಯದ ಮತದಾರರಿದ್ದು, ಮುಂದಿನ ಚುನಾವಣೆಗಳ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಬಲಗೈ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ ನಾರಾಯಣಸ್ವಾಮಿ ರವರಿಗೆ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒ.ಬಿ.ಸಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯರಾಂ, ಬಲಗೈ ಸಮುದಾಯದ ಮುಖಂಡರಾದ ಅಮ್ಮೇರಹಳ್ಳಿ ಚಲಪತಿ, ಮಂಗಸಂದ್ರ ಶ್ರೀನಿವಾಸ್, ವಿ. ಕಿರಣ್, ದಳಸಗೆರೆ ನರಸಿಂಹ ಮೂರ್ತಿ, ಸೀಪೂರ್ ದೇವರಾಜ್, ಚಲಪತಿ ಮುಂತಾದವರು ಉಪಸ್ಥಿತರಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    7 hrs ago
  • ಭಾಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪಲ್ಲವಿ ಬೆಳಕೇರೆ ಅವರಿಗೆ ಗ್ರೇಡ್-1 ತಹಶೀಲ್ದಾರರಾಗಿ ಪದೋನ್ನತಿ ದೊರೆತ ಹಿನ್ನೆಲೆಯಲ್ಲಿ, ಇಂದು ಭಾಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ಪತ್ರಕರ್ತರ ಧ್ವನಿ ಸಂಘಟನೆ ಮತ್ತು ಕರ್ನಾಟಕ ಹೊಯ್ಸಳ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂತೋಷ್ ನಾಟೇಕರ್ ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಅವರ ಕರ್ತವ್ಯನಿಷ್ಠೆಗೆ ದೊರೆತ ಉನ್ನತ ಹುದ್ದೆ ಮತ್ತು ಜನಸೇವೆಗೆ ದೊರೆತ ಗೌರವವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸನ್ಮಾನಿಸಿ ಮಾತನಾಡಿದ ಸಂತೋಷ್ ನಾಟೇಕರ್ ಅವರು, ಪಲ್ಲವಿ ಬೆಳಕೇರೆ ಅವರು ಭಾಲ್ಕಿ ತಹಶೀಲ್ದಾರ್ ಕಚೇರಿಗೆ ಬಂದ ನಂತರ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಕಚೇರಿಗೆ ಬರುವ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿ, ಯಾವುದೇ ವಿಳಂಬವಿಲ್ಲದೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಿಗೆ ದೊರೆತಿರುವ ಗ್ರೇಡ್-1 ಪದೋನ್ನತಿ ಅವರ ಉತ್ತಮ ಕಾರ್ಯಕ್ಕೆ ದೊರೆತ ಗೌರವವಾಗಿದೆ ಎಂದು ನಾಟೇಕರ್ ಹೇಳಿದರು. ತಹಶೀಲ್ದಾರ್ ಕಚೇರಿಯು ಪ್ರತಿದಿನ ನೂರಾರು ಸಾರ್ವಜನಿಕರಿಗೆ ಜಾತಿ, ಆದಾಯ, ನಿವಾಸ, ವಾರಸುದಾರರ ಹಾಗೂ ವಯೋ ದೃಢೀಕರಣ ಪತ್ರಗಳು, ರೈತರ ಪಹಣಿ ಪತ್ರಗಳು, ಮ್ಯೂಟೇಶನ್, ಭೂ ದಾಖಲೆಗಳ ತಿದ್ದುಪಡಿ, ಬೆಳೆ ಹಾನಿ ಪರಿಹಾರ ಅರ್ಜಿಗಳು, ಪ್ರಕೃತಿ ವಿಕೋಪ ಪರಿಹಾರ ಮನವಿಗಳು, ಭೂ ವಿವಾದಗಳ ವಿಚಾರಣೆ, ಸರ್ಕಾರಿ ಜಮೀನು ಸಂಬಂಧಿತ ಅರ್ಜಿಗಳು ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ ವಿಧವಾ, ವೃದ್ಧಾಪ್ಯ, ಅಂಗವಿಕಲರ ವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಬೇಕಾದ ಪ್ರಮಾಣಪತ್ರಗಳು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಇಂತಹ ಅನೇಕ ಸಾರ್ವಜನಿಕ ಸಮಸ್ಯೆಗಳಿಗೆ ಪಲ್ಲವಿ ಬೆಳಕೇರೆ ಅವರು ತ್ವರಿತವಾಗಿ ಸ್ಪಂದಿಸಿ, ಉತ್ತಮ ಆಡಳಿತ ನೀಡಿರುವುದು ಶ್ಲಾಘನೀಯ ಎಂದು ಸಂತೋಷ್ ನಾಟೇಕರ್ ಬಣ್ಣಿಸಿದರು. ಗ್ರೇಡ್-2 ರಿಂದ ಗ್ರೇಡ್-1 ತಹಶೀಲ್ದಾರರ ಪದೋನ್ನತಿ ಎನ್ನುವುದು ಆಡಳಿತ ಸೇವೆಯಲ್ಲಿ ಮಹತ್ವದ ಹುದ್ದೆಯ ಏರಿಕೆಯಾಗಿದ್ದು, ಅಧಿಕಾರಿಯ ಸೇವಾ ಅನುಭವ, ಕಾರ್ಯಕ್ಷಮತೆ, ಕರ್ತವ್ಯನಿಷ್ಠೆ ಹಾಗೂ ಜನಪರ ಆಡಳಿತವನ್ನು ಪರಿಗಣಿಸಿ ನೀಡಲಾಗುವ ಉನ್ನತ ಗೌರವವಾಗಿದೆ. ಪಲ್ಲವಿ ಬೆಳಕೇರೆ ಅವರು ತಮ್ಮ ಸೇವಾವಧಿಯಲ್ಲಿ ತೋರಿದ ಉತ್ತಮ ಕಾರ್ಯನಿರ್ವಹಣೆಯ ಫಲವಾಗಿ ಈ ಪದೋನ್ನತಿಯನ್ನು ಪಡೆದುಕೊಂಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರವೀಣ್ ಮೋರೆ, ಪ್ರವೀಣ್ ಮೇಲಕುಂದಾ, ಸಜ್ಜನ್ ಶೆಟ್ಟಿ, ಅಶೋಕ್ ಅಂಬಿಗರ್, ಸಂತೋಷ್ ಬೇಲೂರೆ, ತುಕಾರಾಂ ಕಾಸಲೆ ಸೇರಿದಂತೆ ಅನೇಕ ಮುಖಂಡರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಪಲ್ಲವಿ ಬೆಳಕೇರೆ ಅವರ ಮುಂದಿನ ಸೇವಾ ಜೀವನ ಇನ್ನಷ್ಟು ಯಶಸ್ವಿಯಾಗಲಿ ಹಾಗೂ ಇದೇ ರೀತಿಯ ಜನಪರ ಆಡಳಿತ ಮುಂದುವರಿಯಲಿ ಎಂದು ಶುಭ ಹಾರೈಸಿದರು.
    1
    ಭಾಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪಲ್ಲವಿ ಬೆಳಕೇರೆ ಅವರಿಗೆ ಗ್ರೇಡ್-1 ತಹಶೀಲ್ದಾರರಾಗಿ ಪದೋನ್ನತಿ ದೊರೆತ ಹಿನ್ನೆಲೆಯಲ್ಲಿ, ಇಂದು ಭಾಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ಪತ್ರಕರ್ತರ ಧ್ವನಿ ಸಂಘಟನೆ ಮತ್ತು ಕರ್ನಾಟಕ ಹೊಯ್ಸಳ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂತೋಷ್ ನಾಟೇಕರ್ ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಅವರ ಕರ್ತವ್ಯನಿಷ್ಠೆಗೆ ದೊರೆತ ಉನ್ನತ ಹುದ್ದೆ ಮತ್ತು ಜನಸೇವೆಗೆ ದೊರೆತ ಗೌರವವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಸಂತೋಷ್ ನಾಟೇಕರ್ ಅವರು, ಪಲ್ಲವಿ ಬೆಳಕೇರೆ ಅವರು ಭಾಲ್ಕಿ ತಹಶೀಲ್ದಾರ್ ಕಚೇರಿಗೆ ಬಂದ ನಂತರ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಕಚೇರಿಗೆ ಬರುವ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿ, ಯಾವುದೇ ವಿಳಂಬವಿಲ್ಲದೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಿಗೆ ದೊರೆತಿರುವ ಗ್ರೇಡ್-1 ಪದೋನ್ನತಿ ಅವರ ಉತ್ತಮ ಕಾರ್ಯಕ್ಕೆ ದೊರೆತ ಗೌರವವಾಗಿದೆ ಎಂದು ನಾಟೇಕರ್ ಹೇಳಿದರು.

ತಹಶೀಲ್ದಾರ್ ಕಚೇರಿಯು ಪ್ರತಿದಿನ ನೂರಾರು ಸಾರ್ವಜನಿಕರಿಗೆ ಜಾತಿ, ಆದಾಯ, ನಿವಾಸ, ವಾರಸುದಾರರ ಹಾಗೂ ವಯೋ ದೃಢೀಕರಣ ಪತ್ರಗಳು, ರೈತರ ಪಹಣಿ ಪತ್ರಗಳು, ಮ್ಯೂಟೇಶನ್, ಭೂ ದಾಖಲೆಗಳ ತಿದ್ದುಪಡಿ, ಬೆಳೆ ಹಾನಿ ಪರಿಹಾರ ಅರ್ಜಿಗಳು, ಪ್ರಕೃತಿ ವಿಕೋಪ ಪರಿಹಾರ ಮನವಿಗಳು, ಭೂ ವಿವಾದಗಳ ವಿಚಾರಣೆ, ಸರ್ಕಾರಿ ಜಮೀನು ಸಂಬಂಧಿತ ಅರ್ಜಿಗಳು ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ ವಿಧವಾ, ವೃದ್ಧಾಪ್ಯ, ಅಂಗವಿಕಲರ ವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಬೇಕಾದ ಪ್ರಮಾಣಪತ್ರಗಳು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಇಂತಹ ಅನೇಕ ಸಾರ್ವಜನಿಕ ಸಮಸ್ಯೆಗಳಿಗೆ ಪಲ್ಲವಿ ಬೆಳಕೇರೆ ಅವರು ತ್ವರಿತವಾಗಿ ಸ್ಪಂದಿಸಿ, ಉತ್ತಮ ಆಡಳಿತ ನೀಡಿರುವುದು ಶ್ಲಾಘನೀಯ ಎಂದು ಸಂತೋಷ್ ನಾಟೇಕರ್ ಬಣ್ಣಿಸಿದರು.

ಗ್ರೇಡ್-2 ರಿಂದ ಗ್ರೇಡ್-1 ತಹಶೀಲ್ದಾರರ ಪದೋನ್ನತಿ ಎನ್ನುವುದು ಆಡಳಿತ ಸೇವೆಯಲ್ಲಿ ಮಹತ್ವದ ಹುದ್ದೆಯ ಏರಿಕೆಯಾಗಿದ್ದು, ಅಧಿಕಾರಿಯ ಸೇವಾ ಅನುಭವ, ಕಾರ್ಯಕ್ಷಮತೆ, ಕರ್ತವ್ಯನಿಷ್ಠೆ ಹಾಗೂ ಜನಪರ ಆಡಳಿತವನ್ನು ಪರಿಗಣಿಸಿ ನೀಡಲಾಗುವ ಉನ್ನತ ಗೌರವವಾಗಿದೆ. ಪಲ್ಲವಿ ಬೆಳಕೇರೆ ಅವರು ತಮ್ಮ ಸೇವಾವಧಿಯಲ್ಲಿ ತೋರಿದ ಉತ್ತಮ ಕಾರ್ಯನಿರ್ವಹಣೆಯ ಫಲವಾಗಿ ಈ ಪದೋನ್ನತಿಯನ್ನು ಪಡೆದುಕೊಂಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರವೀಣ್ ಮೋರೆ, ಪ್ರವೀಣ್ ಮೇಲಕುಂದಾ, ಸಜ್ಜನ್ ಶೆಟ್ಟಿ, ಅಶೋಕ್ ಅಂಬಿಗರ್, ಸಂತೋಷ್ ಬೇಲೂರೆ, ತುಕಾರಾಂ ಕಾಸಲೆ ಸೇರಿದಂತೆ ಅನೇಕ ಮುಖಂಡರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಪಲ್ಲವಿ ಬೆಳಕೇರೆ ಅವರ ಮುಂದಿನ ಸೇವಾ ಜೀವನ ಇನ್ನಷ್ಟು ಯಶಸ್ವಿಯಾಗಲಿ ಹಾಗೂ ಇದೇ ರೀತಿಯ ಜನಪರ ಆಡಳಿತ ಮುಂದುವರಿಯಲಿ ಎಂದು ಶುಭ ಹಾರೈಸಿದರು.
    user_JB NEWS ಕನ್ನಡ
    JB NEWS ಕನ್ನಡ
    Kolar, Karnataka•
    8 hrs ago
  • ಕನಕಪುರ ದೇಗುಲ ಮಠದ ಶಿವೈಕ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ವಿದಾಯವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪೂಜ್ಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿವೈಕ್ಯರಾದ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪಾದಗಳಿಗೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿ, ಪೂಜ್ಯರಿಗೆ ರಾಷ್ಟ್ರಧ್ವಜವನ್ನು ಹೊದಿಸಿ, ಸರ್ಕಾರಿ ಗೌರವಗಳನ್ನು ನೀಡಿ ಅಂತಿಮ ದರ್ಶನ ಪಡೆದರು. ನಂತರ, ಪೂಜ್ಯರು ಐಕ್ಯವಾಗುವ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಲಿಂಗೈಕ್ಯ ಪರಮಪೂಜ್ಯ ತ್ರಿವಿಧ ದಾಸೋಹಿಗಳಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಅವರು ಮಾತೃ ಹೃದಯಿ, ಸರಳತೆಯ ಸಾಕಾರಮೂರ್ತಿ ಹಾಗೂ ಸಹಸ್ರಾರು ವಿದ್ಯಾರ್ಥಿಗಳಿಗೆ ದಿವ್ಯಜ್ಯೋತಿಯಾಗಿದ್ದರು ಎಂದು ಬಣ್ಣಿಸಿದರು. ಪೂಜ್ಯರ ಅಗಲಿಕೆ ಕನಕಪುರದ ಮಹಾಜನತೆಗೆ ಮತ್ತು ಭಕ್ತವೃಂದಕ್ಕೆ ಅಪಾರ ದುಃಖವನ್ನುಂಟು ಮಾಡಿದೆ ಎಂದರು. ಶ್ರೀಮಠದ ಪೀಠಾಧ್ಯಕ್ಷರಾಗಿ, ಅವರು ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದರು. ಪೂಜ್ಯರ ಅಗಲಿಕೆ ಭಕ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಭಗವಂತನು ಅವರ ಪವಿತ್ರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಚಿರಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದರು.
    1
    ಕನಕಪುರ ದೇಗುಲ ಮಠದ ಶಿವೈಕ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ವಿದಾಯವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪೂಜ್ಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿವೈಕ್ಯರಾದ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪಾದಗಳಿಗೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿ, ಪೂಜ್ಯರಿಗೆ ರಾಷ್ಟ್ರಧ್ವಜವನ್ನು ಹೊದಿಸಿ, ಸರ್ಕಾರಿ ಗೌರವಗಳನ್ನು ನೀಡಿ ಅಂತಿಮ ದರ್ಶನ ಪಡೆದರು. ನಂತರ, ಪೂಜ್ಯರು ಐಕ್ಯವಾಗುವ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಲಿಂಗೈಕ್ಯ ಪರಮಪೂಜ್ಯ ತ್ರಿವಿಧ ದಾಸೋಹಿಗಳಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಅವರು ಮಾತೃ ಹೃದಯಿ, ಸರಳತೆಯ ಸಾಕಾರಮೂರ್ತಿ ಹಾಗೂ ಸಹಸ್ರಾರು ವಿದ್ಯಾರ್ಥಿಗಳಿಗೆ ದಿವ್ಯಜ್ಯೋತಿಯಾಗಿದ್ದರು ಎಂದು ಬಣ್ಣಿಸಿದರು. ಪೂಜ್ಯರ ಅಗಲಿಕೆ ಕನಕಪುರದ ಮಹಾಜನತೆಗೆ ಮತ್ತು ಭಕ್ತವೃಂದಕ್ಕೆ ಅಪಾರ ದುಃಖವನ್ನುಂಟು ಮಾಡಿದೆ ಎಂದರು.

ಶ್ರೀಮಠದ ಪೀಠಾಧ್ಯಕ್ಷರಾಗಿ, ಅವರು ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದರು. ಪೂಜ್ಯರ ಅಗಲಿಕೆ ಭಕ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಭಗವಂತನು ಅವರ ಪವಿತ್ರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಚಿರಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
  • ಜೆಡಿಎಸ್ ಮುಖಂಡ ಹೂಡಿ ವಿಜಿಕುಮಾರ್ ಅವರು 2028ರಲ್ಲಿ ಮಾಲೂರು ಶಾಸಕನಾಗಿ ಖಂಡಿತಾ ಗೆಲ್ಲುವುದಾಗಿ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಲ್ಲಿ ನಿರ್ಮಿಸಿರುವ ಡಾಂಬರೀಕರಣ ರಸ್ತೆಗಳು 250 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕಳೆದ ಎರಡು ವರ್ಷವಾದರೂ ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೂಡಿ ವಿಜಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    1
    ಜೆಡಿಎಸ್ ಮುಖಂಡ ಹೂಡಿ ವಿಜಿಕುಮಾರ್ ಅವರು 2028ರಲ್ಲಿ ಮಾಲೂರು ಶಾಸಕನಾಗಿ ಖಂಡಿತಾ ಗೆಲ್ಲುವುದಾಗಿ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಲ್ಲಿ ನಿರ್ಮಿಸಿರುವ ಡಾಂಬರೀಕರಣ ರಸ್ತೆಗಳು 250 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕಳೆದ ಎರಡು ವರ್ಷವಾದರೂ ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೂಡಿ ವಿಜಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_Kolaraminchu
    Kolaraminchu
    ಕೋಲಾರ, ಕೋಲಾರ, ಕರ್ನಾಟಕ•
    9 hrs ago
  • ಒಬ್ಬ ಯುವಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಬಸ್‌ನಲ್ಲಿ ಕೇಳಿಬಂದಿದೆ. ಈ ಘಟನೆಯನ್ನು ಗಮನಿಸಿದ ಸಹ ಪ್ರಯಾಣಿಕರು ಆ ಯುವಕನನ್ನು ತಕ್ಷಣ ತರಾಟೆಗೆ ತೆಗೆದುಕೊಂಡಿದ್ದಾರೆ.
    1
    ಒಬ್ಬ ಯುವಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಬಸ್‌ನಲ್ಲಿ ಕೇಳಿಬಂದಿದೆ. ಈ ಘಟನೆಯನ್ನು ಗಮನಿಸಿದ ಸಹ ಪ್ರಯಾಣಿಕರು ಆ ಯುವಕನನ್ನು ತಕ್ಷಣ ತರಾಟೆಗೆ ತೆಗೆದುಕೊಂಡಿದ್ದಾರೆ.
    user_Veega News Kannada
    Veega News Kannada
    Newspaper advertising department ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    23 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.