ನಾಳೆಯಿಂದ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ;ಡಾ.ಚನ್ನಲ್ಲಿಕಾರ್ಜುನ ಶಿವಾಚಾರ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋವುಗಳ ಜಾತ್ರಾ ಮಹೋತ್ಸವ ಮತ್ತು ಮಠದ ಪೀಠಾಧಿಪತಿಗಳ 6ನೇ ವರ್ಷದ ಗುರು ಪಟ್ಟಾಧಿಕಾರದ ವರ್ಧಂತೋತ್ಸವ ನಿಮಿತ್ತ ಇಟಗಿ ಭೀಮಾಂಬಿಕೆ ದೇವಿಯ ಪ್ರವಚನ ನಾಳೆಯಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ದಾರಿಯಲ್ಲಿ ನಡೆಯಿರಿ, ಶ್ರಮವನ್ನು ಪೂಜೆಯಾಗಿ ಕಾಣಿರಿ, ಮಾನವೀಯತೆಯೇ ಮಹಾದೇವತೆ ಎಂದು ಅರಿಯಿರಿ ಸಾರಿದ ದೇವಿ ಭೀಮಾಂಬಿಕಾ ತಾಯಿಯ ಪುರಾಣ ಪ್ರವಚನ ಜ.12 ರಿಂದ ಜ.20 ರವರೆಗೆ ಪ್ರತಿ ದಿನ ರಾತ್ರಿ 7.30 ಗಂಟೆಯಿಂದ ಆರಂಭವಾಗುತ್ತದೆ.ಪಂಡಿತರತ್ನ ವೇ.ಮೂ. ಶ ಸಿದ್ದರಾಮ ಸ್ವಾಮಿಗಳು ವಿಶ್ವಾರಾಧ್ಯ ನಿವಾಸ ಬ್ಯಾಡಗಿಹಾಳ ಪುರಾಣ ಪ್ರವಚನ ಮಾಡುವರು ಜ.21 ರಂದು ಬೆಳಗ್ಗೆ ಮೌನಯೋಗಿಸುಶೀಲ ಗೋವುಗಳ ಜಾತ್ರೆ ನಿಮಿತ್ತ ಶ್ರೀನಂದಿ ಬಸವೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರುತಿ, ಪುರಂತರ ಸೇವೆ, ಸಂಜೆ ಮಹಾ ರಥೋತ್ಸವ ಇರುತ್ತದೆ. ಐದು ದಿನಗಳ ಪರ್ಯಂತ ಜಾತ್ರೆ ನಡೆಯಲಿದೆ. 23 ರಂದು ಜಾತ್ರೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಜ.23 ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಜ.24 ರಂದು ಉಸುಕಿನ ಚೀಲ ಎತ್ತುವ ಸ್ಪರ್ಧೆ, ಜ.25 ರಂದು ಜೋಡು ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಬೆಳ್ಳಿ ಮತ್ತು ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಗುವುದು. 1986 ರಿಂದ ಇಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತಾ ಬಂದಿದೆ ಈ ಪರಂಪರೆಯಿಂದ ಶ್ರೀಗಿರಿ ಮಠ ನಾಡಿಗೆ ಪ್ರಸಿದ್ದಿ ಪಡೆದಿದೆ ಎಂದರು. ದೇವಸ್ಥಾನದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಿಸಿ ರಸ್ತೆ ನಿರ್ಮಾಣ, ಬೆಟ್ಟದ ಮೇಲೆ ಕುಡಿಯುವ ನೀರು, ಭಕ್ತರಿಗೆ ನಾಲ್ಕು ಕೋಣೆಗಳ ವ್ಯವಸ್ಥೆ ನಂತರ ಭಕ್ತರ ದೇಣಿಗೆಯಿಂದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯ ಗದ್ದುಗೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಶರಣು ನಾಯಕ ಬೈರಿಮರಡ್ಡಿ ,ಸೂಗರೇಶ್ವರ ಸೇರಿದಂತೆ ಮಠದ ಸದ್ಭಕ್ತರು ಉಪಸ್ಥಿತರಿದ್ದರು.
ನಾಳೆಯಿಂದ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ;ಡಾ.ಚನ್ನಲ್ಲಿಕಾರ್ಜುನ ಶಿವಾಚಾರ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋವುಗಳ ಜಾತ್ರಾ ಮಹೋತ್ಸವ ಮತ್ತು ಮಠದ ಪೀಠಾಧಿಪತಿಗಳ 6ನೇ ವರ್ಷದ ಗುರು ಪಟ್ಟಾಧಿಕಾರದ ವರ್ಧಂತೋತ್ಸವ ನಿಮಿತ್ತ ಇಟಗಿ ಭೀಮಾಂಬಿಕೆ ದೇವಿಯ ಪ್ರವಚನ ನಾಳೆಯಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಧರ್ಮದ ದಾರಿಯಲ್ಲಿ ನಡೆಯಿರಿ, ಶ್ರಮವನ್ನು ಪೂಜೆಯಾಗಿ ಕಾಣಿರಿ, ಮಾನವೀಯತೆಯೇ ಮಹಾದೇವತೆ ಎಂದು ಅರಿಯಿರಿ ಸಾರಿದ ದೇವಿ ಭೀಮಾಂಬಿಕಾ ತಾಯಿಯ ಪುರಾಣ ಪ್ರವಚನ ಜ.12 ರಿಂದ ಜ.20 ರವರೆಗೆ ಪ್ರತಿ ದಿನ ರಾತ್ರಿ 7.30 ಗಂಟೆಯಿಂದ ಆರಂಭವಾಗುತ್ತದೆ.ಪಂಡಿತರತ್ನ ವೇ.ಮೂ. ಶ ಸಿದ್ದರಾಮ ಸ್ವಾಮಿಗಳು ವಿಶ್ವಾರಾಧ್ಯ ನಿವಾಸ ಬ್ಯಾಡಗಿಹಾಳ ಪುರಾಣ ಪ್ರವಚನ ಮಾಡುವರು ಜ.21 ರಂದು ಬೆಳಗ್ಗೆ ಮೌನಯೋಗಿಸುಶೀಲ ಗೋವುಗಳ ಜಾತ್ರೆ ನಿಮಿತ್ತ ಶ್ರೀನಂದಿ ಬಸವೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರುತಿ,
ಪುರಂತರ ಸೇವೆ, ಸಂಜೆ ಮಹಾ ರಥೋತ್ಸವ ಇರುತ್ತದೆ. ಐದು ದಿನಗಳ ಪರ್ಯಂತ ಜಾತ್ರೆ ನಡೆಯಲಿದೆ. 23 ರಂದು ಜಾತ್ರೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಜ.23 ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಜ.24 ರಂದು ಉಸುಕಿನ ಚೀಲ ಎತ್ತುವ ಸ್ಪರ್ಧೆ, ಜ.25 ರಂದು ಜೋಡು ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಬೆಳ್ಳಿ ಮತ್ತು ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಗುವುದು. 1986 ರಿಂದ ಇಲ್ಲಿ ಪ್ರತಿ ವರ್ಷ ದನಗಳ
ಜಾತ್ರೆ ನಡೆಯುತ್ತಾ ಬಂದಿದೆ ಈ ಪರಂಪರೆಯಿಂದ ಶ್ರೀಗಿರಿ ಮಠ ನಾಡಿಗೆ ಪ್ರಸಿದ್ದಿ ಪಡೆದಿದೆ ಎಂದರು. ದೇವಸ್ಥಾನದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಿಸಿ ರಸ್ತೆ ನಿರ್ಮಾಣ, ಬೆಟ್ಟದ ಮೇಲೆ ಕುಡಿಯುವ ನೀರು, ಭಕ್ತರಿಗೆ ನಾಲ್ಕು ಕೋಣೆಗಳ ವ್ಯವಸ್ಥೆ ನಂತರ ಭಕ್ತರ ದೇಣಿಗೆಯಿಂದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯ ಗದ್ದುಗೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಶರಣು ನಾಯಕ ಬೈರಿಮರಡ್ಡಿ ,ಸೂಗರೇಶ್ವರ ಸೇರಿದಂತೆ ಮಠದ ಸದ್ಭಕ್ತರು ಉಪಸ್ಥಿತರಿದ್ದರು.
- ಹೈಯಾಳಲಿಂಗೇಶ್ವರ ದೇವಸ್ಥಾನದ ದೇವರ ಹುಂಡಿ ಕಳ್ಳತನಕ್ಕೆ ಯತ್ನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೈಯಾಳಲಿಂಗೇಶ್ವರ ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿಯನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ. ಬೈಕ್ನಲ್ಲಿ ಬಂದ ನಾಲ್ವರು ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಲು ಪ್ರಯತ್ನಿಸಿದ್ದಾರೆ. ಈ ಘಟನೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.1
- ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ಬರುವ ತಾಲೂಕಿನ ಮೈಲಾಪುರದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ತೊಂದರೆಯಾಗುತ್ತಿದೆ. ಅಲ್ಲದೆ ಜಿಲ್ಲಾ ಕೇಂದ್ರವಾಗಿ 15 ವರ್ಷ ಗತಿಸಿದ್ದರು ಈ ದೇವಸ್ಥಾನಕ್ಕೆ ಬರತ್ಕಂತ ಭಕ್ತಾಧಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಡಲಿತ ವಿಫಲವಾಗಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶಕೆ. ಮುದ್ನಾಳ ಅವರು ಆರೋಪಿಸಿದ್ದಾರೆ ಮೈಲಾರ ಮಲ್ಲಯ್ಯನ ದರ್ಶನ ಪಡೆದ ನಂತರ ಎಲ್ಲಾ ಪ್ರಮುಖ ಸ್ಥಳಗಳಿಗೆ ಸಂಚರಿಸಿ ಪರೀಶೀಲಸಿದ ನಂತರ ಮಾತನಾಡಿದ ಅವರು ಯಾದಗಿರಿ ಜಿಲ್ಲೆಯಲ್ಲಿ ಎರಡು ಎ ಗ್ರೇಡ್ ದೇವಸ್ಥಾನಗಳ ಪೈಕಿ ಮೈಲಾಪುರ ಒಂದಾಗಿದ್ದು, ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಧಾರ್ಮಿಕ, ಪ್ರೇಕ್ಷಣೀಯ ಸ್ಥಳದಲ್ಲಿ ಮೂಲಸೌಕಯ್ಯ ವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು ಪ್ರತಿ ವರ್ಷ ಸಂಕ್ರಾಮಣದಲ್ಲಿ ಜಾತ್ರೆಯನ್ನು ಹೊರತು ಪಡೆಸಿ ಪ್ರತಿ ರವಿವಾರ ಮತ್ತು ಪ್ರತಿ ಅಮವಾಸ್ಯೆದಂದು ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ, ದೇವಸ್ಥಾನದ ಆದಾಯ ಹೆಚ್ಚುತಿದ್ದರೂ ಮೂಲ ಸೌಕರ್ಯ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚುತ್ತಿಲ್ಲ. ಬರುವ ಸಾರ್ವಜನಿಕರ ಸೌಲಭ್ಯಕ್ಕಾಗಿ ಶಾಶ್ವತ ಪರಿಹಾರ ಮಾಡದೇ ತಾತ್ಕಲಿಕ ಪರಿಹಾರಕ್ಕೆ ಮುಂದಾಗುತ್ತಿರುವುದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಬದಲ್ಲಿ ಪವನ ಮಲ್ಲೇಶಿ, ರಾಜಪ್ಪ ಹಣಮಂತ ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು1
- ಸಹಾಯ ಮಾಡಿ ಶಾಸಕರೇ. 🙏🙏💐💐1
- log payyr krte hai aur saath chalne ke anval satth chod dete hai fhir bhi ek ham hai jo har pal apni Kasam aur vaade nhi bhulte1
- ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ 93803537101
- ಯಶಸ್ವಿಯಾಗಿ ಜರುಗಿದ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಕಾರ್ಯಕ್ರಮ1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- ರಾಜ್ಯದಲ್ಲಿ ಸಂಕ್ರಾಂತಿಯ ನಂತರ ರಾಜಕೀಯ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿ ನಗರದಲ್ಲಿ ಇಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಪ್ರತಿಕ್ರಿಯೆ ನೀಡಿ ನಮ್ಮಲ್ಲಿ ಯಾವುದೇ ರಾಜಕೀಯ ಕ್ರಾಂತಿ ಇಲ್ಲಾ. ಇದೆಲ್ಲ ಕೇವಲ ಮಾಧ್ಯಮದಲ್ಲಿ ಮಾತ್ರ ಎಂದು ಹೇಳಿದರು.1