Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಚಿತ್ರದುರ್ಗ: ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕಳೆದ ಹದಿನೈದು ದಿನಗಳಿಂದಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಕುಕ್ಕುಟೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ! ಕುಕ್ಕುಟೋದ್ಯಮಕ್ಕೆ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ.ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್ಇಸಿಸಿ) ನಿಗದಿ ಮಾಡಿರುವ ದರದ ಅನುಸಾರ ತಿಂಗಳ ಹಿಂದೆ ಪ್ರತಿ ಸಗಟು ಕೋಳಿ ಮೊಟ್ಟೆ ದರ ₹5.50ರಿಂದ ₹5.60 ಇತ್ತು. ಆದರೆ ಈಗ ₹3.80ರಿಂದ ₹3.90ಕ್ಕೆ ಕುಸಿದಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇಲ್ಲಿನ ಮೊಟ್ಟೆಗಳನ್ನು ಬೆಂಗಳೂರು, ಹೊಸಪೇಟೆ, ಹೈದ್ರಾಬಾದ್, ನಾಮಕಲ್, ಮೈಸೂರು, ಚೆನ್ನೈಗಳಲ್ಲಿ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್ಇಸಿಸಿ) ಗಳಿದ್ದು, ಈ ಸಮನ್ವಯ ಸಮಿತಿಗಳು ನಿಗದಿ ಮಾಡುವ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಮೊದಲಿನಿಂದಲೂ ಮಾಲೀಕರದ್ದಾಗಿದೆ. ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೋಳಿ ಫಾರಂಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟಾರೆ 40 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಇದರಲ್ಲಿ 32 ಲಕ್ಷ ಕೋಳಿಗಳ ಸಾಕಣೆ ಈ ಎರಡು ತಾಲ್ಲೂಕುಗಳಲ್ಲೇ ನಡೆಯುತ್ತಿದೆ. ಜಿಲ್ಲೆಯಿಂದ ರಾಜ್ಯ, ಹೊರರಾಜ್ಯಗಳಿಗೆ ಮಾತ್ರವಲ್ಲದೇ ಹೊರ ದೇಶಗಳಿಗೂ ಮೊಟ್ಟೆ ರಫ್ತಾಗುತ್ತದೆ. ಆಂಧ್ರ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಬಂದ ಅಂದಾಜು 1 ಕೋಟಿಯಷ್ಟು ಮೊಟ್ಟೆಯನ್ನು ಪ್ರತಿದಿನ ಕಳುಹಿಸಲಾಗುತ್ತದೆ. ಕೋಳಿ ಸಾಕಣೆ, ವಿದೇಶಿ ರಫ್ಟಿಗೆ ಹೆಸರು-ವಾಸಿಯಾಗಿರುವ ತಮಿಳುನಾಡಿನ ನಾಮಕ್ಕಲ್ ಮೂಲಕ ಮೊಟ್ಟೆ ರಫ್ತು ಮಾಡಲಾಗುತ್ತದೆ. ಯುದ್ಧ ನಡೆಯುತ್ತಿರುವ ಕಾರಣ ನಾಮಕ್ಕಲ್ ನಿಂದ ರಫ್ತು ಸಂಪೂರ್ಣವಾಗಿ ಮೊಟ್ಟೆಗಳು ಸ್ಥಗಿತಗೊಂಡಿದ್ದು ಮಾರಾಟವಾಗದೇ ಹಾಳಾಗುತ್ತಿವೆ. *ಮೊಟ್ಟೆ ರಫ್ತಿಗೆ ಬ್ರೇಕ್* ಯುದ್ಧದ ಪರಿಣಾಮ ಕರ್ನಾಟಕ ರಾಜ್ಯ ಹಾಗೂ ತಮಿಳುನಾಡಿನ ನಾಮಕಲ್ ಸೇರಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಹಡಗು ಹಾಗೂ ವಿಮಾನಗಳ ಮೂಲಕ ರಫ್ತಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ. ಇದರಿಂದ ಮೊಟ್ಟೆ ಬೆಲೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಾಣಲು ಪ್ರಮುಖ ಕಾರಣವಾಗಿದೆ. ಸಮ್ಮರ್ ಸೀಜನ್ ಕುಕ್ಕುಟೋದ್ಯಮಕ್ಕೆ ಪ್ರತಿ ವರ್ಷವೂ ಅನ್ಸೀಜನ್. ಆದರೆ ಈಗ ಇದರ ಜೊತೆ ಯುದ್ಧವು ಸೇರಿ ಕೊಂಡಿರುವುದು ಪೌಲ್ಟ್ರಿ ಫಾರಂ ಮಾಲೀಕರ ಆತಂಕ ದ್ವಿಗುಣವಾಗಿದೆ. ಇನ್ನೇನು ಶೀಘ್ರವೇ ಶಾಲೆಗಳಿಗೆ ಬೇಸಿಗೆ ರಜೆ ಆಗಮಿಸಲಿದ್ದು, ಶಾಲೆಗೆ ವಿತರಣೆಯಾಗುತ್ತಿದ್ದ ಮೊಟ್ಟೆಗೂ ಬ್ರೇಕ್ ಬೀಳಲಿದೆ. ಇದು ಇನ್ನೊಂದು ಶಾಕಿಂಗ್ ವಿಷಯವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ. *ಪೌಲ್ಟಿ ಮಾಲೀಕರ ಆತಂಕ* 'ಸೋಯಾ, ಸೂರ್ಯಕಾಂತಿ ಹಿಂಡಿ, ಮೆಕ್ಕೆಜೋಳ, ಡಿಒಆರ್ಬಿ ಹಾಗೂ ವಿಟಮಿನ್ ಬೆಲೆಗಳು ಗಗನಕ್ಕೇರು ತ್ತಿವೆ. ಮೊಟ್ಟೆ ಬೆಲೆ ಮಾತ್ರ ಕುಸಿಯು ತ್ತಿದೆ. ಬಂಡವಾಳ ಹಾಕಿ, ಫುಡ್, ಕೂಲಿ, ನಿರ್ವಹಣೆ ಮಾಡುವ ಮಾಲೀಕರ ಕೈ ಸುಡುತ್ತಿದೆ. ಒಂದು ವಾರಕ್ಕೂ ಅಧಿಕ ಕಾಲ ಮೊಟ್ಟೆಯನ್ನು ದಾಸ್ತಾನು ಮಾಡಲು ಸಾಧ್ಯವಿಲ್ಲವಾ ದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಅನೇಕರು ಮೊಟ್ಟೆಯ ಬೆಲೆಯನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ' ಎನ್ನುತ್ತಾರೆ ಪೌಲ್ಟಿಫಾರಂ ಮಾಲೀಕರು.1
- ಮಳವಳ್ಳಿ: ಸಂಸ್ಕಾರಯುತ ಕಲಿಕೆಯ ಜ್ಞಾನ ಮಕ್ಕಳ ಸಾಧನೆಗೆ-ಸರ್ವಾಂಗಿಣ ಪ್ರಗತಿಗೆ ದಾರಿದೀಪವಾಗಲಿದೆ-ಮುಖ್ಯ ಶಿಕ್ಷಕ ಚಂದ್ರಶೇಖರ್ ಹೇಳಿಕೆ • ಶ್ರೀಶಿವರಾತ್ರೀಶ್ವರ ಬಡಾವಣೆಯಲ್ಲಿ ಜೆ.ಎಸ್.ಎಸ್ ಪ್ರೌಢಶಾಲೆ ಶಾರದಪೂಜೆ - ೧೦ನೇ ತರಗತಿ ಮಕ್ಕಳಿಗೆ ಬೀಳ್ಕೂಡುಗೆ ಸಮಾರಂಭ ಮಳವಳ್ಳಿ:ಸAಸ್ಕಾರಯುತ ಕಲಿಕೆಯ ಜ್ಞಾನ ಮಕ್ಕಳ ಸಾಧನೆಗೆ ದಾರಿದೀಪವಾಗುವುದರೊಂದಿಗೆ ಸಮಾಜದ ಸರ್ವಾಂಗೀಣ ಪ್ರಗತಿಗೆ ನಾಂದಿಯಾಗಲಿದೆ ಎಂದು ಜೆ.ಎಸ್.ಎಸ್.ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಹೇಳಿದರು. ಮಾಗನೂರಿನ ಶ್ರೀ ಶಿವರಾತ್ರೀಶ್ವರ ಬಡಾವಣೆಯಲ್ಲಿರುವ ಜೆ.ಎಸ್.ಎಸ್.ಪ್ರೌಢಶಾಲೆಯಲ್ಲಿ ಅಯೋಜಿಸಿದ್ದ ಶಾರದ ಪೂಜೆ ಹಾಗೂ ೧೦ನೇ ತರಗತಿ ಮಕ್ಕಳ ಬೀಳ್ಕೂಡುಗೆ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು ಪ್ರತಿಯೊಂದು ತರಗತಿಯಲ್ಲೂ ಜ್ಞಾನವನ್ನು ಗಳಿಸಿಕೊಂಡರೆ ಸಮಾಜದೊಳಗೆ ತಮ್ಮ ಸ್ಥಾನಮಾನ ಹೇಗಿರುತ್ತದೆ,ಜ್ಞಾನದಿಂದ ಸಿಗುವ ಗೌರವವೇನು ಎಂಬುವುದನ್ನು ಅರಿವು ಮೂಡಿಸಲಾಗಿದೆ ಮಕ್ಕಳು ಜ್ಞಾನವನ್ನು ಪಡೆದು ಸಾಧಕ ವ್ಯಕ್ತಗಳಾಗಿ ಸಮಾಜಕ್ಕೆ ಉತ್ತಮ ಕೂಡುಗೆ ನೀಡುವಂಎತ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಕಾರ್ಯಕ್ರಮವನ್ನು ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕುಮಾರಸ್ವಾಮಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಹಾಗೂ ಶಾರದ ದೇವಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ವಿದ್ಯಾಥಿಗಳು ಸಮಯದ ಮಹತ್ವ ಅರಿಯಬೇಕು,ಕಲಿಕೆಯ ಹಂತದಲ್ಲಿ ಶಿಕ್ಷಣದ ಮಹತ್ವ,ಯಾವ ವಿಷಯದ ಬಗ್ಗೆ ಮಾತನಾಡಬೇಕು,ಹೆಚ್ಚು ಮಾತನಾಡುವುದು ಅವಶ್ಯಕತೆಯಿಲ್ಲ,ಮಾತುಗಳು ಅರ್ಥಪೂರ್ಣವಾಗಿರಬೇಕು ಅದೇ ರಿತಿಯಲ್ಲಿ ಕಲಿಕೆಯ ಹಂತದಲ್ಲಿ ಬಹು ಮುಖ್ಯವಾಗಿ ಏಕಾಗ್ರತೆ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡುವ ಮೂಲಕ ಪೋಷಕರಿಗೆ ಶಾಲೆಗೆ,ಗುರುಗಳಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಮಕ್ಕಳು ಮುಂದಾಗುವAತೆ ಸಲಹೆ ನೀಡಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ದತಾಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಮರ ಸೌಹರ್ಧ ಸಹಕಾರಿ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಈ ನಡುವೆ ಬದುಕವ ನಾವುಗಳು ಸಮಾಜಕ್ಕೆ ಶಾಸ್ವತ ಕೂಡುಗೆ ನೀಡಬೇಕು,ನಾವು ಸತ್ತರೂ ನೀಡಿದ ಕೂಡುಗೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಯುತ್ತದೆ. ಈ ದಿಶೇಯಲ್ಲಿ ಮಕ್ಕಳಿಗೆ ಕನಸ್ಸು ಕಾಣಬೇಕು,ಅದು ದೊಡ್ಡ ಕನಸ್ಸಾಗಿರಬೇಕು,ಅದನ್ನು ಸಾಧಿಸುವ ಛಲ ವಿಶ್ವಾಸ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ,ಪೋಷಕರ ಅರ್ಶೀವಾದದೊಂದಿಗೆ ಮುನ್ನೆಡೆಯಿರಿ ಸಾಧನೆ ನಿಮ್ಮದಾಗಲಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜೆ.ಎಸ್.ಎಸ್.ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವೇಲ್ಲರೂ ಪುಣ್ಯವಂತರು,ಶಾಲೆಯ ಶಿಕ್ಷಕರು ಹಗಳಿರುಲು ನಿಮ್ಮ ಪ್ರಗತಿ ಸಾಧನೆಗೆ ಕೆಲಸ ಮಾಡುತ್ತಿದ್ದಾರೆ ಇದು ಸಾರ್ಥಕತೆ ಅಗಬೇಕು ನೀವು ಶೇ.೧೦೦ ಪಲಿತಾಂಶ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು,ಶಾಲೆಯ ಶಿಕ್ಷಕರು ಶಾಲೆಯ ದಿನನಿತ್ಯದ ಕಾರ್ಯಚಟುವಟಿಕೆಗಳು,ಮಕ್ಕಳ ಯಶಸ್ಸಿಗೆ ಕೈಗೊಂಡ ಪಾಠ ಪ್ರವಚನಗಳ ಬಗ್ಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಪದ್ದತಿ ಯಾವ ರೀತಿ ಇರಲಿದೆ,ಮೊದಲು ಪ್ರಶ್ನೆ ಪತ್ರಿಕೆ ನೀಡುತ್ತಾರೆ ನಂತರ೧೫ ನಿಮಷಗಳ ನಂತರ ಉತ್ತರ ಪತ್ರಿಕೆ ನೀಡುತ್ತಾರೆ ಮಕ್ಕಳು ಪ್ರಶ್ನೆ ಪತ್ರಿಕೆಯನ್ನು ಗಂಭಿರವಾಗಿ ಓದಿಕೊಂಡು ಯಾವುದು ಚೆನ್ನಾಗಿ ಗೊತ್ತಿದೆಯೋ ಅ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ನಂತರ ಉಳಿದ ಪ್ರಶ್ನೆಗಳಿಗೆ ಯೋಚಿಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುವಂತೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಈ ಸಂದರ್ಭದಲ್ಲಿ ನೀಡಿ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು,ಪೋಷಕರು,ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಉಪಸ್ತಿತರಿದ್ದರು.1
- ಹನೂರು,:ತಾಲೂಕಿನ ಲೊಕ್ಕನಹಳ್ಳಿ–ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿರುವ ಮಸ್ಕಿತಹಳ್ಳ ಮತ್ತು ಜಡೆತಡೆ ಹಳ್ಳಗಳಿಗೆ ಅಡ್ಡಲಾಗಿದ್ದ ಸೇತುವೆ ಮೇಲ್ಜರ್ಜೆ ಕಾಮಗಾರಿಗೆ ಸುಮಾರು 04 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಪಿಜಿ ಪಾಳ್ಯ–ಒಡೆಯರಪಾಳ್ಯ ಮುಖ್ಯ ರಸ್ತೆ ನೆರೆಯ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಅಪಾರ ಸಂಖ್ಯೆಯ ವಾಹನಗಳು ಹಾಗೂ ನೂರಾರು ಗೂಡ್ಸ್ ವಾಹನಗಳು ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಎಂದರು. ಈ ಹಿನ್ನೆಲೆಯಲ್ಲಿ ಜಡೆತಡೆ ಹಳ್ಳಕ್ಕೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪಿಜಿ ಪಾಳ್ಯ ಹತ್ತಿರದ ಮಸ್ಕಿತಹಳ್ಳಕ್ಕೆ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು . ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು ಇದಲ್ಲದೆ ಪಿ. ಜಿ. ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್.ಇ.ಪಿ ಯೋಜನೆಯಡಿ ಸುಮಾರು 25 ಲಕ್ಷ ರೂ. ಮತ್ತು ಹುಣಸೇ ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್. ಇ. ಪಿ.ಪಿ ಯೋಜನೆ ಅನುಧಾನದಡಿ ಸುಮಾರು 25 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಸಿಸಿರಸ್ತೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೆ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಮುಖಂಡರುಗಳಾದ ಬಿಳಿಗಿರಿ ಮಹದೇವಸ್ವಾಮಿ, ಜಿ ಎಂ ಮಾದೇಶ್ ನಿಂಗಶೆಟ್ಟಿ ಜಡರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ ಮಹೇಂದ್ರ,ರವಿ ಸಣ್ಣಮಾದ ಸೋಮಶೇಖರ್ ನಾಗೇಂದ್ರ ಮಧುಸೂದನ್ ಎಂ ಎಸ್ ಸಿ ಮಹದೇಸ್ವಾಮಿ ಡಿ ಕೆ ರಾಜು ನಾಗರಾಜು ಪುನೀತ್ ಉದ್ದನೂರು ಶಾಂತಣ್ಣ ಗಿರೀಶ್ ಪ್ರಮೋದ್, ನಟರಾಜು ವೆಂಕಟೇಶ್ ಗೋವಿಂದ, ವಿಜಯ್ ಕುಮಾರ್ ನಟರಾಜು ಪ್ರಭುಸ್ವಾಮಿಹಾಗೂ ಇನ್ನಿತರು ಇದ್ದರು.4
- ಹನೂರು: ಹನೂರು ತಾಲೂಕಿನ ಲೊಕ್ಕನಹಳ್ಳಿ–ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿರುವ ಮಸ್ಕಿತಹಳ್ಳ ಮತ್ತು ಜಡೆತಡೆ ಹಳ್ಳಗಳಿಗೆ ಅಡ್ಡಲಾಗಿ ಸೇತುವೆ ಮೇಲ್ಜರ್ಜೆ ಕಾಮಗಾರಿಗೆ ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಿಜಿ ಪಾಳ್ಯ–ಒಡೆಯರಪಾಳ್ಯ ಮುಖ್ಯ ರಸ್ತೆ ನೆರೆಯ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಅಪಾರ ಸಂಖ್ಯೆಯ ವಾಹನಗಳು ಹಾಗೂ ನೂರಾರು ಗೂಡ್ಸ್ ವಾಹನಗಳು ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಜಡೆತಡೆ ಹಳ್ಳಕ್ಕೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪಿಜಿ ಪಾಳ್ಯ ಹತ್ತಿರದ ಮಸ್ಕಿತಹಳ್ಳಕ್ಕೆ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು ಇದೆ ಸಮಯದಲ್ಲಿ ಬಿಳಿಗಿರಿ,ಮಹದೇವಸ್ವಾಮಿ, ಜಿ ಎಂ ಮಾದೇಶ್, ನಿಂಗಶೆಟ್ಟಿ , ಜಡರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ, ಮಹೇಂದ್ರ,ರವಿ ಸಣ್ಣಮಾದ,ಸೋಮಶೇಖರ್, ನಾಗೇಂದ್ರ,ಮಧುಸೂದನ್, ಎಂ ಎಸ್ ಸಿ ಮಹದೇಸ್ವಾಮಿ,ಡಿ ಕೆ ರಾಜು,ನಾಗರಾಜು, ಪುನೀತ್,ಉದ್ದನೂರು ಶಾಂತಣ್ಣ,ಗಿರೀಶ್, ಪ್ರಮೋದ್, ನಟರಾಜು,ವೆಂಕಟೇಶ್,ಗೋವಿಂದ, ವಿಜಯ್ ಕುಮಾರ್,ನಟರಾಜು,ಪ್ರಭುಸ್ವಾಮಿ,ಹಾಗೂ ಇನ್ನಿತರು ಇದ್ದರು... .2
- ಹನೂರು, ನೀರಾವರಿ ಯೋಜನೆಗಳು ಹೆಚ್ಚಾದಾಗ ಜನರಿಗೆ ಅನುಕೂಲ ಆಗಲಿದೆ. ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು. ತಾಲ್ಲೂಕಿನ ಮಣಗಳ್ಳಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರ ಆರ್ಥಿಕ ಅಭಿವೃದ್ದಿಗೆ ನೀರಾವರಿ ಯೋಜನೆಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ವಿಧ್ಯುತ್ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಹೊತ್ತು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಕೆರೆಕಟ್ಟೆಗಳು ಜಾಕ್ ಡ್ಯಾಂ ಅಭಿವೃದ್ದಿಯಿಂದ ಬಿವಿ ಬೋರ್ ವೆಲ್ ಗಳಲ್ಲಿ ಆಂತರ್ಜಲ ಹೆಚ್ಚಳ ಆಗಲಿದೆ. ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಿದ್ದ ಪರಿಣಾಮ ಚಿಂಚಳ್ಳಿ ಹಳ್ಳದ ಮೂಲಕ ಮಣಗಳ್ಳಿ ಹಳ್ಳ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಹಾಗೆಯೇ ಮುಂದೆ ಸಾಗಿ ಇನ್ನಿತರ ಗ್ರಾಮಗಳಗೂ ಅನುಕೂಲ ಆಗಲಿದೆ. ಈಗ ಬಜೆಟ್ ನಲ್ಲಿ ಘೋಷಣೆ ಆಗಿರುವ 490 ಕೋಟಿ ಹಣದಿಂದ ರಾಮಾಪುರ ಹೋಬಳಿ ವ್ಯಾಪ್ತಿಗೆ ಉಡೊತೊರೆ ಜಲಾಶಯದ ಮೂಲಕ ನೀರು ಹರಿಸುವ ಸಧ್ಯದಲ್ಲೆ ಪ್ರಾರಂಭ ಆಗಲಿದೆ. ಅದಲ್ಲದೆ ಕಬಿನಿ ನಾಲೆಯಿಂದ 980 ಕೋಟಿ ರೂ ವೆಚ್ಚದಲ್ಲಿ ಮೇಘ ಪ್ರೋಜೆಕ್ಟ್ ತರುವ ಉದ್ದೇಶ ಹೊಂದಿದ್ದು ಸರ್ಕಾರ ಮಟ್ಟದಲ್ಲಿ ಚೆರ್ಚೆ ಮಾಡಲಾಗಿದೆ. ಎಂದರು ಕ್ಷೇತ್ರದ ಎಲ್ಲೆಡೆ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಸಹ ನಡೆಯಲಿದೆ. ಚುನಾವಣೆ ವೇಳೆ ನನಗೊಂದು ಅವಕಾಶ ನೀಡಿ ಎಂದು ಕೇಳಿದ್ದೆ ಅದರಂತೆ ಕೆಲಸ ಮಾಡುತ್ತಿದ್ದೇನೆ. ಇನ್ನೂ ಹೆಚ್ಚು ಕೆಲಸ ಮಾಡಲು ಎಲ್ಲರು ನನಗೆ ಸಹಕಾರ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು. ತಾಲಲೂಕು ಘೋಷಣೆ ಆದ್ಮೇಲೆ ಕಛೇರಿಗಳು ಇರಲಿಲ್ಲ. ಅದಕ್ಕಾಗಿ ಪ್ರಯತ್ನಗಳು ನಡೆದಿದೆ. ರಸ್ತೆಗಳು ಆರೋಗ್ಯ ವಿಧ್ಯುತ್ ಕ್ಷೇತ್ರಗಳಲ್ಲಿ ಸುಧಾಹರಣೆ ಕಂಡಿದೆ. ಎಂದರು ಗ್ರಾಮ ಸದಸ್ಯ ಮಲ್ಲಣ್ಣ ಮಾತನಾಡಿ ಶಾಸಕ ಮಂಜುನಾಥ್ ರವರ ಅಭಿವೃದ್ದಿ ಕೆಲಸ ಕಾರ್ಯಗಳನ್ನು ನೋಡಿ ಮೆಚ್ಚಿದ ಜನರು ಸ್ವ ಇಚ್ಚೆಯಿಂದ ಅವರನ್ನು ಬೆಂಬಲಿಸಲು ಪ್ರತಿ ಗ್ರಾಮದಲ್ಲೂ ಮುಂದೆ ಬರುತ್ತಿದ್ದಾರೆ. ಶಾಸಕರ ಮಂದಾಲೋಚನೆ ಫಲವಾಗಿ ಕೆರೆಕಟ್ಟೆಗಳು ಜಾಕ್ ಡ್ಯಾಂ ಗಳು ಭರ್ತಿ ಆಗಿ ಹಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಪ್ರತಿ ಗ್ರಾಮದಲ್ಲೂ ಅಂತರ್ಜಲ ಹೆಚ್ಚಾಗಲಿದೆ. ಇದರಿಂದ ರೖತರು ಕೂಲಿ ಕಾರ್ಮಿಕರು ನಗರ ಪಟ್ಟಣಗಳಿಗೆ ವಲಸೆ ಹೋಗುವುದು ನಿಲ್ಲುತ್ತದೆ. ಜೊತೆಗೆ ಇಲ್ಲಿಯೇ ಉಧ್ಯೋಗ್ಯ ದೊರೆಯುವುದರಿಂದ ಜನರ ಬದುಕು ಹಸನಾಗಲಿದೆ. ಎಂದರು ಇದೇ ವೇಳೆ ಮಣಗಳ್ಳಿ ವಾದ್ಯ ಕೆಂಪಯ್ಯ ಅವರ ಕುಟುಂಬ ಸೇರಿದಂತೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿನ್ನ ವೆಂಕಟಯ್ಯ ಮಲ್ಲಣ್ಣ ಕೃಷ್ಣಸ್ವಾಮಿ ರಾಮಚಂದ್ರ ಶ್ರೀನಿವಾಸ ಗ್ರಾಮದ ಯಜಮಾನ್ರು ಆದ ಕೆಂಪರಾಜು ಮಹದೇವಯ್ಯ ಚೆನ್ನಯ್ಯ ಕಾಲ ಕೆಂಪಯ್ಯ ಹಾಗೂ ಐವತ್ತು ಹೆಚ್ಚು ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಎಂ.ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಜೆಡಿಎಸ್ ಕ್ಕೆ ಸೇರ್ಪಡೆಗೊಂಡರು. ವೇಳೆ ಲಿಂಗರಾಜು ಶಿವಮಲ್ಲು ಯುವ ಮುಖಂಡರಾದ ಲೋಕೇಶ್ ಕೃಷ್ಣರಾಜು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ಮುಖಂಡರುಗಳಾದ ವಿಜಯ್ ಕುಮಾರ್, ತಿರುಪತಿ,ತಮಯ್ಯ ನಾಗಯ್ಯ,ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..1
- *ಭಾರತ ನಲ್ಲಿ ವೈರಲ್*1