Shuru
Apke Nagar Ki App…
ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರುಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಇಂದು ನಡೆದ ಸಚಿವ ಸಂಪುಟ ಸಮಾರಂಭದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಟ್ಟು ಆರು ಬಾರಿ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಇಂದು ಡಿಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಕೊಪ್ಪಳ ಜಿಲ್ಲೆಯ ಜನತೆಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ
Bhimasenrao Kulkarni Kushtagi
ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರುಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಇಂದು ನಡೆದ ಸಚಿವ ಸಂಪುಟ ಸಮಾರಂಭದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಟ್ಟು ಆರು ಬಾರಿ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಇಂದು ಡಿಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಕೊಪ್ಪಳ ಜಿಲ್ಲೆಯ ಜನತೆಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ
More news from ಕರ್ನಾಟಕ and nearby areas
- ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿಯನ್ನು ಕೂಡಲೇ ಕುಡಚಿ ಯಿಂದ ಪ್ರಾರಂಭಿಸಬೇಕು, ಈಗಾಗಲೇ ಬಾಗಲಕೋಟೆಯಿಂದ-ಲೋಕಾಪೂರವರೆಗೆ ಕಾಮಗಾರಿ ಮುಗಿದ ಮಾರ್ಗದಲ್ಲಿ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು ಎಂದು ಮಾನ್ಯ ನೈರುತ್ಯ ರೈಲ್ವೆ ಮಹಾ ಪ್ರಬಂಧಕರಾದ ಪಿ. ಅನಂತ ಅವರನ್ನು ಭೇಟಿಯಾದ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಕಾಜಿಯವರ ನೇತೃತ್ವದ ರೇಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಡಚಿ ಕಡೆಯಿಂದ ಕಾಮಗಾರಿ ಪ್ರಾರಂಭಕ್ಕೆ ಯಾವುದೇ ರೀತಿಯ ಅಡೆತಡೆ ಇದ್ದಲ್ಲಿ ರಾಜ್ಯ ಸರ್ಕಾರದಿಂದ ಪರಿಹರಿಸಲು ಜಿಲ್ಲೆಯ ಜನರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು ಇದಕ್ಕೆ ಅಲ್ಪಸ್ವಲ್ಪ ಸಮಸ್ಯೆಗಳಿದ್ದರೆ ರೈತರು ಅಡೆತಡೆ ಮಾಡದೆ ಸಹಕರಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು. ಈಗಾಗಲೆ ಸಾಕಷ್ಟು ವಿಳಂಬತೆಯಿಂದ ಕೂಡಿದ ಯೋಜನೆ ಸಾರ್ವಜನಿಕರಿಗೆ ಮೂಲ ಸೌಲಭ್ಯದಿಂದ ವಂಚಿತರಾಗಿದ್ದು, ಯೋಜನಾ ವೆಚ್ಚ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ತತಕ್ಷಣ ಕಾಮಗಾರಿ ಕೈಗೊಳ್ಳವುದು ಅತಿ ಅವಶ್ಯಕವಾಗಿದ್ದು ಮಾನ್ಯರು 15 ದಿನಗಳೊಳಗಾಗಿ ಪರಿಶೀಲಿಸಿ ಕ್ರಮವಹಿಸಬೇಕು ಇಲ್ಲದಿದ್ದಲ್ಲಿ ಕುಡಚಿಯಿಂದ ಬಾಗಲಕೋಟೆ ವರೆಗಿನ ಎಲ್ಲ ಹೋರಾಟಗಾರರ ಸಹಕಾರದೊಂದಿಗೆ ಹುಬ್ಬಳ್ಳಿ ನೈರುತ್ಯ ರೇಲ್ವೇ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಕುಡಚಿ ರೇಲ್ವೆ ನಿಲ್ದಾಣಕ್ಕೆ ಭೇಡಿದ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದಿನ ಖಾಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು. ಈ ಸಂದರ್ಭದಲ್ಲಿ ಸಭಾಸ ಶಿರಬೂರು, ಗಣಪಥರಾವ್ ಹಜಾರೆ, ಡಾ. ರವಿ ಜಮಖಂಡಿ, ನೀಲಕಂಠ ನಾತ್ತುರ್, ಬಸವರಾಜ್ ತೆಗ್ಗಿ,, ಮೈನೋದ್ದಿನ ಕಾಜಿ, ಅಮೀನ ವಾಟೆ, ಏಜಾಜ ಬಿಚ್ಚು, ಸಯೀದಹ್ಮದ ದೇಸಾಯಿ, ಸಾಕೀಬ ಪಾಳೇಗಾರ, ನಾಶೀರ ಲಶ್ಕರಿ, ಸಂಜೀವ ಬ್ಯಾಕುಡೆ, ಅನ್ವರ್ ಚಮನಶೇಖ, ಹಬೀಬ್ ವಾಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- ಕೂಡ್ಲಿಗಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ವತಿಯಿಂದ ಹಿತ ಚಿಂತನಾ ಸಭೆ ಕೂಡ್ಲಿಗಿ: ವಾಲ್ಮೀಕಿ ಸಮುದಾಯದ ಸಂಘಟನೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ಸಮುದಾಯದ ಪ್ರಗತಿಗೆ ಅತ್ಯಗತ್ಯವಾಗಿದೆ. ಶಿಕ್ಷಣವೇ ಪ್ರಬಲ ಅಸ್ತ್ರ, ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾನತೆ ಹಾಗೂ ಹಕ್ಕುಗಳನ್ನು ಸಾಧಿಸಲು ಸಾಧ್ಯ ಎಂದು ಹಿರಿಯ ವಕೀಲರಾದ ಡಾ. ಟಿ. ಓಂಕಾರಪ್ಪ ಹೇಳಿದರು. ತಾಲೂಕಿನ ಗಾಣಗಟ್ಟೆ ಗ್ರಾಮದ ಶ್ರೀ ಮಾಯಮ್ಮ ದೇವಿಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲ್ಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ವತಿಯಿಂದ ಹಿತ ಚಿಂತನಾ ಸಭೆ ಆಯೋಜನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸು. 80-90 ಸಾವಿರದ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯದ ಮತ ಸಂಖ್ಯೆ ಇದ್ದು, ಸು.15 ವರ್ಷಗಳಿಂದ ವಾಲ್ಮೀಕಿ ಸಮುದಾಯದಲ್ಲಿ ಸಂಘಟನೆ ನಿಷ್ಕ್ರಿಯವಾಗಿದ್ದು, ಗ್ರಾಮೀಣ ಭಾಗವಾದ ಉಜ್ಜಿನಿ, ಹೊಸಹಳ್ಳಿ, ಗುಡೇಕೋಟೆ, ಹುಡೇಂ, ಮಟ್ಟದಲ್ಲಿ ಯಾವುದೇ ಸಭೆ, ಜಯಂತಿ, ಸಂಘಟನೆ ಇಲ್ಲದೇ, ಇರುವುದನ್ನು ನಾವು ನೋಡಬಹುದು. ಹೀಗಾಗಿ, ವಾಲ್ಮೀಕಿ ಸಮುದಾಯವನ್ನು ರಾಜಕೀಯ ಭಿನ್ನಾಭಿಪ್ರಾಯ ಮರೆತು, ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನಿಂದ ಮುನ್ನಡೆಸಲು, ಸರ್ವ ರೀತಿಯಲ್ಲಿ ಒಮ್ಮತದಿಂದ ಸಮುದಾಯದ ಏಳಿಗೆಗಾಗಿ ಶ್ರಮಿಸಲು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ವೇಳೆ ನಿವೃತ್ತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಮಾತನಾಡಿ, ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬ ಹಿರಿಯರು, ಮುಖಂಡರು, ಯುವಕರು, ವಾಲ್ಮೀಕಿ ಸಮುದಾಯದ ಸಂಘಟನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸೋಣ. ವಾಲ್ಮೀಕಿ ಸಮುದಾಯ ಅಂದರೇ, ಕೂಡ್ಲಿಗಿ ಮಟ್ಟದಲ್ಲಿ ಅಷ್ಟೇ, ಜಯಂತಿಗೆ, ಕುಣಿತಕ್ಕೆ ಸೀಮಿತವಾಗದೇ, ಹಳ್ಳಿಗಳ ಮಟ್ಟದಲ್ಲಿ ವಾಲ್ಮೀಕಿ ಸಮುದಾಯದ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ಸಮುದಾಯವೂ ವಿವಿಧ ಕ್ಷೇತ್ರಗಳಲ್ಲಿ ಏಳಿಗೆ ಶ್ರಮಿಸಲು ಧ್ವನಿಯಾಗೋಣ ಎಂದರು. ಈ ಸಂದರ್ಭದಲ್ಲಿ ಚೋರನೂರು ಅಡಿವೆಪ್ಪ, ತಳವಾರ ಶರಪ್ಪ, ಹೊಸಹಳ್ಳಿ ಸಿದ್ದಣ್ಣ, ಕೆಡಿಪಿ ಸದಸ್ಯ ಪಾಪಣ್ಣ ಯರಗುಂಡ್ಲಹಟ್ಟಿ, ಕೆ ದಿಬ್ಬದಹಳ್ಳಿ ಗೋವಿಂದಪ್ಪ, ಬಸವರಾಜ, ಜಿ. ಓಬಣ್ಣ, ಕುರಿಹಟ್ಟಿ ರಾಮಣ್ಣ, ಗುಂಡುಮುಣುಗು ಮಂಜಣ್ಣ, ಹುಬ್ಬಳ್ಳಿ ವೆಂಕಟೇಶ, ಪಸಲು ಪಾಲಯ್ಯ, ಗುತ್ತಿಗೆದಾರರು ಗಾಣಗಟ್ಟೆ ಮಹಾಂತೇಶ, ಮಾಜಿ ಗ್ರಾ. ಪಂ. ಅಧ್ಯಕ್ಷ ಮಹಾಂತೇಶ್, ಹುಲಿಕೆರೆ ಮಾರಪ್ಪ, ಕಂಡಕ್ಟರ್ ಬಸವರಾಜ, ರೈತ ಮುಖಂಡರಾದ ಮಾರಪ್ಪ, ಉಜ್ಜಿನಿ ರಂಗಪ್ಪ, ಸಕಲಾಪುರದಹಟ್ಟಿ ಹರೀಶ್, ತೂಲಹಳ್ಳಿ ಬಸವರಾಜ, ಕೆ. ದಿಬ್ಬದಹಳ್ಳಿ ವೆಂಕಟೇಶ, ಸಿಎಸ್ ಪುರ ಮಲಿಯಪ್ಪ, ಮಾಡ್ಲನಾಯಕನಹಳ್ಳಿ ಧನಂಜಯ್, ತಿಪ್ಪೇಸ್ವಾಮಿ, ಬೊಮ್ಮಲಿಂಗಣ್ಣ, ಗುಣಸಾಗರ ಕೊಟ್ರೇಶ, ಹುಡೇಂ ಬಸಣ್ಣ, ಡಾ. ಸಿದ್ದೇಶ ಕಾತ್ರಿಕೆಹಟ್ಟಿ, ನಾಗರಕಟ್ಟೆ ದೇವೇಂದ್ರಪ್ಪ ಸೇರಿದಂತೆ ಗಾಣಗಟ್ಟೆ ಗ್ರಾಮದ ಹಿರಿಯರು, ತಾಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.1
- ಕೂಡ್ಲಿಗಿ :ವೈಜ್ಞಾನಿಕತೆ ಸಕಾರಾತ್ಮಕ ಕ್ರಿಯಾಶೀಲತೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಸೂಚನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ :ವೈಜ್ಞಾನಿಕತೆ ಸಕಾರಾತ್ಮಕ ಕ್ರಿಯಾಶೀಲತೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಸೂಚನೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಕಾರಾತ್ಮಕತೆ ಕ್ರಿಯಾಶೀಲತೆ ಮನೋಭಾವ ಬೆಳಸಬೇಕು , ಹಾಗೂ ಗುಣಮಟ್ಟ ಶಿಕ್ಷಣ ನೀಡಬೇಕಿದೆ ಎಂದು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಮುಖ್ಯ ಶಿಕ್ಷಕರಿಗೆ ಸೂಚಿಸಿದರು. ಅವರು ಆ 1ರಂದು , ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಜರುಗಿದ. ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ , 2026 ನೇ ಸಾಲಿನ SSLC ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಸರ್ಕಾರಿ ಸರ್ಕಾರಿ ಅನುದಾನಿತ ಅನುದಾನ ರಹಿತ , ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ದೇವರಗೋನಲ ಗ್ರಾಮದಲ್ಲಿ ಇಂದು ಮಳೆಗೆ ರೈತರಲ್ಲಿ ಮಂದಹಾಸ ಸುಮಾರು ಒಂದು ಗಂಟೆ ಕಾಲ ಮಳೆ1
- 108 ಮುತ್ತೈದೆಯರ ಭವ್ಯ ಕಳಸ ಮೆರವಣಿಗೆ: ರಾಜ್ಯದ ಸುಭಿಕ್ಷತೆಗಾಗಿ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಬಳ್ಳಾರಿ ನಗರದ ಅಧಿದೇವತೆಯಾದ ಶ್ರೀ ಕನಕದುರ್ಗಮ್ಮ ದೇವಾಲಯದಲ್ಲಿ ಆಷಾಢ ಮಾಸದ ಅಂಗವಾಗಿ ಭಕ್ತಿ, ಸಂಪ್ರದಾಯ ಮತ್ತು ಶ್ರದ್ಧೆಯ ಸಂಗಮಕ್ಕೆ ಸಾಕ್ಷಿಯಾದ ಅಪರೂಪದ ಧಾರ್ಮಿಕ ಕಾರ್ಯಕ್ರಮ ನಡೆಯಿತು. 108 ಮುತ್ತೈದೆಯರು ಪೂರ್ಣಕುಂಭಗಳನ್ನು ಹೊತ್ತು ಭವ್ಯ ಕಳಸ ಮೆರವಣಿಗೆ ನಡೆಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂಗಳ ವಾದ್ಯಗಳ ನಾದ, ಭಜನಾ ತಂಡಗಳ ಗಾಯನ ಹಾಗೂ ಭಕ್ತರ ಜಯಘೋಷದ ನಡುವೆ ನಡೆದ ಮೆರವಣಿಗೆ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಮೂಡಿಸಿತು. ಲಲಿತಾ ಸಹಸ್ರನಾಮ ಪಾರಾಯಣ, ಮಹಾಪೂಜೆ ಹಾಗೂ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ರಾಜ್ಯದ ಸುಭಿಕ್ಷತೆ, ರೈತರ ನೆಮ್ಮದಿ, ಉತ್ತಮ ಮಳೆ ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು. #KanakaDurgamma #Ballari #BellaryNews #AshadaMasa #KalashaYatra #108Kalasha #DevotionalNews #KarnatakaNews #TempleFestival #SpiritualIndia #HinduTradition #Bhakti #KannadaNews #ASNNews24Kannada #BreakingNews #ReligiousEvent #IndiaNews #ViralNews #TrendingNow #ballariupdates1
- ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ ಸಂತ್ಯಾಗ ನಾಟಕ ಪ್ರದರ್ಶನ ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ ಸಂತ್ಯಾಗ ನಾಟಕ ಪ್ರದರ್ಶನ1
- ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ *ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಾಡಳಿತದಿಂದ ಜರುಗುವ ಸಭೆಗಳು , ಉತ್ಸವಗಳು ಕಾಟಾಚಾರಕ್ಕೆ ಜರುಗಿಸಬಾರದು. ತುಂಬಾ ಅರ್ಥಪೂರ್ಣವಾಗಿ , ಹಾಗೂ ಶಿಷ್ಟಾಚಾರದಿಂದ ಜರುಗಿಸಬೇಕೆಂದು. ಮತ್ತು ಸಭೆಗಳಿಗೆ ಉತ್ಸವಗಳಿಗೆ ಗೈರಾದ , ಇಲಾಖೆಗಳ ಅಧಿಕಾರಿಗಳ ವಿರುದ್ಧ. ಶಿಸ್ತು ಕ್ರಮ ಜರುಗಿಸಬೇಕೆಂದು ಸಂಘಟನೆಗಳು , ತಾಲೂಕಾಡಳಿತಕ್ಕೆ ಆಗ್ರಹಿಸಿವೆ. ಆ 1ರಂದು ಪ್ರವಾಸಿಮಂದಿರದಲ್ಲಿ ಜರುಗಿದ , ಸ್ವಾತಂತ್ರ್ಯೋತ್ಸವ ಪೂರ್ವ ಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿದರು. ಯಾವುದೇ ಉತ್ಸವಗಳ ಪೂರ್ವ ಸಭೆಗಳಿಗೆ ಹಾಗೂ ಉತ್ಸವಗಳಿಗೆ , ಅಧಿಕಾರಿಗಳು ವಿನಾಃಕಾರಣ ಗೈರು ಹಾಜರಾಗೋದು ರೂಡಿಗತವಾಗಿದೆ. ತಾಲೂಕಾಡಳಿತ ನೇರ ಹೊಣೆ ಹೊರಬೇಕಿದೆ , ಗೈರಾಗುವ ಅಧಿಕಾರಿಗಳ ಸಿಬ್ಬಂದಿಯವರ ವಿರುದ್ಧ. ಕಾನೂನು ರೀತ್ಯ ಕಠಿಣ ಶಿಸ್ಥು ಕ್ರಮ ಜರುಗಿಸಬೇಕೆಂದು , ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಿಗೆ ಆಗ್ರಹಿಸಿದರು. ಸಭೆಗಳು ಆಚರಣೆಗಳು ಉತ್ಸವಗಳ ಸಂದರ್ಭದಲ್ಲಿ , ಶಿಷ್ಟಾಚಾರ ಗಾಳಿಗೆ ತೂರಲಾಗುತ್ತಿದೆ. ಸಭೆಯ ವೇದಿಕೆಯಲ್ಲಿ ಜನಪ್ರತಿನಿಧಿಗಳು ಉನ್ನತಾಧಿಕಾರಿಗಳು ಗಣ್ಯರು ಹೊರತು ಪಡಿಸಿ , ಅಯೋಗ್ಯರಿಗೆ ಪ್ರಾಶಸ್ತ್ಯ ನೀಡಿ ವೇದಿಕೆಯ ಗಾಂಭೀರತೆ ಘನತೆಗೆ ಧಕ್ಕೆ ತರುವಂತಾಗಬಾರದು. ಉತ್ಸವಗಳು ಮಕ್ಕಳಿಗೆ ಹಬ್ಬದ ಅನುಭವ ನೀಡುವಂತಾಗಬೇಕಿದೆ , ಉತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ , ಸಂಬಂಧಿಸಿದ ಇಲಾಖೆಗಳು ಒದಗಿಸಬೇಕಿದೆ. ಧ್ವಜಾರೋಹಣ ಸಂದರ್ಭದಲ್ಲಿ ಹಾಗೂ ವೇದಿಕೆಯಲ್ಲಿ , ಶಿಷ್ಟಾಚಾರಗಳನ್ನು ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಬೇಕಿದೆ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಸಭೆಗಳು ಉತ್ಸವ ಆಚರಣೆಗಳ ಸಂದರ್ಭದಲ್ಲಿ , ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರ ಹಾಜರಾತಿ ಖಡ್ಡಾಯಗೊಳಿಸಿ. ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು , ಹೋರಾಟಗಾರರು ತಹಶಿಲ್ದಾರರಿಗೆ ಆಗ್ರಹಿಸಿದರು. ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ , ತಾಪಂ ಅಧಿಕಾರಿ ಟಿ.ನರಸಪ್ಪ , ಬಿಇಒ ಮೈಲೇಶ ಬೇವೂರ್ , ಪಿಎಸ್ಐ ಸಿ.ಪ್ರಕಾಶ್ ಇದ್ದರು. ಕನ್ನಡ ಪರ ಸಂಘಟನೆಗಳು , ರೈತರಪರ , ಮಹಿಳಾ ಪರ , ದಲಿತಪರ , ಕಾರ್ಮಿಕರ ಪರ ಸಂಘಟನೆಗಳು ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ! ಜಮಖಂಡಿಯಲ್ಲಿ ಅಭಿಮಾನಿಗಳಿಂದ ಭರ್ಜರಿ ವಿಜಯೋತ್ಸವ ! ಎ.ಜಿ. ದೇಸಾಯಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ1
- ಅಂದು ರಾಮ ಮಂದಿರ ಇಂದು ಭೀಮ ಮಂದಿರ ಗದದಲ್ಲಿ ವಿಭಿನ ಸಹಿ ಸಂಗ್ರಹ ಬಿಜಿಪಿ ಮುಖಂಡ ಅನಿಲ್ ಮೆಣಸಿನ ಕಾಯಿ ವಿಶೇಷ ಸಹಿ ಸಂಗ್ರಹಣೆ ಮುಂದಿನ ದಿನದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಕಾಂತರ ಮನವಿ ಸಲ್ಲಿಸಲು ಶಿದ್ಧತೆ1