ಪ್ರಸಕ್ತ ವರ್ಷದಿಂದಲೇ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಶಾಲೆಯಲ್ಲಿ ಸಿಬಿಎಸ್ಇ ಪಠ್ಯ ಪ್ರಾರಂಭ -ಐ ಎಸ್ ಪಾಟೀಲ್, ರೋಣ ಪಟ್ಟಣದಲ್ಲಿ ಸುದ್ದಿಗೋಷ್ಠಿ ರೋಣ ಪಟ್ಟಣದಲ್ಲಿ 30 ವರ್ಷದ ಹಿಂದೆ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಗೆ ಸಿಬಿಎಸ್ಇ ಮಾನ್ಯತೆ ಕೇಂದ್ರ ಸರ್ಕಾರದಿಂದ ದೊರೆತಿದ್ದು ಈ ವರ್ಷದಿಂದಲೇ ನರ್ಸರಿಯಿಂದ ಒಂಬತ್ತನೇ ತರಗತಿವರೆಗೆ ತರಗತಿಗಳು ಪ್ರಾರಂಭವಾಗಲಿವೆ ಇದೊಂದು ರೋಣ ತಾಲೂಕು ಹೆಮ್ಮೆಪಡುವ ವಿಷಯವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಐ ಎಸ್ ಪಾಟೀಲ್ ಹೇಳಿದರು, ಅವರು ಮಂಗಳವಾರ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸಂಸ್ಥೆಯ ಮಾಂತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಗೆ ಕೇಂದ್ರ ಸರ್ಕಾರದ ಸಿಬಿಎಸ್ಇ ಮಾನ್ಯತೆ ದೊರೆತಿದ್ದು ಸಂತಸ ಪಡುವ ವಿಷಯವಾಗಿದೆ, ನಮ್ಮ ಸಂಸ್ಥೆಯ ಆಯುರ್ವೇದ ಕಾಲೇಜು ಕೂಡ ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತಿದೆ, ಹೆಣ್ಣು ಮಕ್ಕಳ ಪ್ರೌಢ ಶಾಲೆ ಕೂಡ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ,ಗುಣಮಟ್ಟದ ಶಿಕ್ಷಣವನ್ನು ನೀಡಲು ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಉತ್ತಮ ಕಾರ್ಯ ನಿರ್ವಹಿಸಿದೆ,ದೇಶ ಬಹಳ ಮುಂದು ವರೆಯುತ್ತಿದೆ ಗ್ರಾಮೀಣ ಮಟ್ಟದಲ್ಲಿ ಸಿಬಿಎಸ್ಇ ಅವಶ್ಯವಿದೆ, ನರ್ಸರಿಯಿಂದ ಒಂಬತ್ತನೆ ತರಗತಿ ವರೆಗೂ ಸಿಬಿಎಸ್ಇ ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭ ಮಾಡುತ್ತೇವೆ, ಸುಸಜ್ಜಿತ ಕಟ್ಟಡವನ್ನು ಶಾಲೆ ಹೊಂದಿದೆ, ಮಕ್ಕಳಿಗೆ ಉತ್ತಮ ಶಿಕ್ಸಣ ದೊರೆಯಬೇಕು ಎನ್ನುವ ಕಾರಣ ನುರಿತ ಶಿಕ್ಷರನ್ನು ನೇಮಕ ಮಾಡುತ್ತೇವೆ ಕೇಂದ್ರ ಸರ್ಕಾರದಿಂದ ಮಾನ್ಯತೆ ದೊರೆತಿದೆ ಸಂಸ್ಥೆಯ ಅಧ್ಯಕ್ಷರಾದ ಜಿ ಎಸ್ ಪಾಟೀಲರ ದೂರದೃಷ್ಟಿಯಿಂದ ನಮ್ಮ ಸಂಸ್ಥೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಗ್ರಾಮೀಣ ಭಾಗದ ಮಕ್ಕಳು ದೊಡ್ಡ ದೊಡ್ಡ ನಗರಗಳಲ್ಲಿ ಪಡೆಯುವಂತಹ ಶಿಕ್ಷಣವನ್ನು ಈ ಭಾಗದ ಮಕ್ಕಳು ಗ್ರಾಮೀಣ ಭಾಗದ ಮಕ್ಕಳು ಸಹ ಪಡೆಯಲಿ ಎನ್ನುವ ಕಾರಣಕ್ಕೆ ಬಹಳ ಶ್ರಮ ಪಟ್ಟಿದ್ದಾರೆ ಎಂದರು, ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಮಿಥುನ್ ಪಾಟೀಲ್, ಡಾ. ಐ ಬಿ ಕೊಟ್ಟೂರಶೆಟ್ಟರ, ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಶೈಲ್ ಸಂಗೊಟಿ ಇದ್ದರು.
ಪ್ರಸಕ್ತ ವರ್ಷದಿಂದಲೇ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಶಾಲೆಯಲ್ಲಿ ಸಿಬಿಎಸ್ಇ ಪಠ್ಯ ಪ್ರಾರಂಭ -ಐ ಎಸ್ ಪಾಟೀಲ್, ರೋಣ ಪಟ್ಟಣದಲ್ಲಿ ಸುದ್ದಿಗೋಷ್ಠಿ ರೋಣ ಪಟ್ಟಣದಲ್ಲಿ 30 ವರ್ಷದ ಹಿಂದೆ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಗೆ ಸಿಬಿಎಸ್ಇ ಮಾನ್ಯತೆ ಕೇಂದ್ರ ಸರ್ಕಾರದಿಂದ ದೊರೆತಿದ್ದು ಈ ವರ್ಷದಿಂದಲೇ ನರ್ಸರಿಯಿಂದ ಒಂಬತ್ತನೇ ತರಗತಿವರೆಗೆ ತರಗತಿಗಳು
ಪ್ರಾರಂಭವಾಗಲಿವೆ ಇದೊಂದು ರೋಣ ತಾಲೂಕು ಹೆಮ್ಮೆಪಡುವ ವಿಷಯವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಐ ಎಸ್ ಪಾಟೀಲ್ ಹೇಳಿದರು, ಅವರು ಮಂಗಳವಾರ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಮಾತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸಂಸ್ಥೆಯ ಮಾಂತೋಶ್ರೀ ಬಸಮ್ಮ ಎಸ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಗೆ ಕೇಂದ್ರ ಸರ್ಕಾರದ ಸಿಬಿಎಸ್ಇ ಮಾನ್ಯತೆ ದೊರೆತಿದ್ದು ಸಂತಸ ಪಡುವ ವಿಷಯವಾಗಿದೆ, ನಮ್ಮ ಸಂಸ್ಥೆಯ ಆಯುರ್ವೇದ ಕಾಲೇಜು ಕೂಡ ರಾಷ್ಟ್ರ
ಮಟ್ಟದಲ್ಲಿ ಬೆಳೆದು ನಿಂತಿದೆ, ಹೆಣ್ಣು ಮಕ್ಕಳ ಪ್ರೌಢ ಶಾಲೆ ಕೂಡ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ,ಗುಣಮಟ್ಟದ ಶಿಕ್ಷಣವನ್ನು ನೀಡಲು ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಉತ್ತಮ ಕಾರ್ಯ ನಿರ್ವಹಿಸಿದೆ,ದೇಶ ಬಹಳ ಮುಂದು ವರೆಯುತ್ತಿದೆ ಗ್ರಾಮೀಣ ಮಟ್ಟದಲ್ಲಿ ಸಿಬಿಎಸ್ಇ ಅವಶ್ಯವಿದೆ, ನರ್ಸರಿಯಿಂದ ಒಂಬತ್ತನೆ ತರಗತಿ ವರೆಗೂ ಸಿಬಿಎಸ್ಇ ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭ ಮಾಡುತ್ತೇವೆ, ಸುಸಜ್ಜಿತ ಕಟ್ಟಡವನ್ನು ಶಾಲೆ ಹೊಂದಿದೆ, ಮಕ್ಕಳಿಗೆ ಉತ್ತಮ ಶಿಕ್ಸಣ ದೊರೆಯಬೇಕು ಎನ್ನುವ ಕಾರಣ ನುರಿತ ಶಿಕ್ಷರನ್ನು ನೇಮಕ ಮಾಡುತ್ತೇವೆ ಕೇಂದ್ರ
ಸರ್ಕಾರದಿಂದ ಮಾನ್ಯತೆ ದೊರೆತಿದೆ ಸಂಸ್ಥೆಯ ಅಧ್ಯಕ್ಷರಾದ ಜಿ ಎಸ್ ಪಾಟೀಲರ ದೂರದೃಷ್ಟಿಯಿಂದ ನಮ್ಮ ಸಂಸ್ಥೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಗ್ರಾಮೀಣ ಭಾಗದ ಮಕ್ಕಳು ದೊಡ್ಡ ದೊಡ್ಡ ನಗರಗಳಲ್ಲಿ ಪಡೆಯುವಂತಹ ಶಿಕ್ಷಣವನ್ನು ಈ ಭಾಗದ ಮಕ್ಕಳು ಗ್ರಾಮೀಣ ಭಾಗದ ಮಕ್ಕಳು ಸಹ ಪಡೆಯಲಿ ಎನ್ನುವ ಕಾರಣಕ್ಕೆ ಬಹಳ ಶ್ರಮ ಪಟ್ಟಿದ್ದಾರೆ ಎಂದರು, ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಮಿಥುನ್ ಪಾಟೀಲ್, ಡಾ. ಐ ಬಿ ಕೊಟ್ಟೂರಶೆಟ್ಟರ, ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಶೈಲ್ ಸಂಗೊಟಿ ಇದ್ದರು.
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- ಗುಳೇದಗುಡ್ಡ: ಜಗತ್ತಿನಲ್ಲಿ ತುಂಬಿದ್ದ ಅಜ್ಞಾನ, ಮೂಢನಂಬಿಕೆ, ಕಂದಾಚಾರ, ಜಾತಿಯತೆಯಂತಹ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕರು ಎಂದು ಸಾಹಿತಿ ರವಿ ಕಂಗಳ ಹೇಳಿದರು. ಅವರು ಸೋಮವಾರ ಪಟ್ಟಣದ ಬಸವ ಕೇಂದ್ರ ವತಿಯಿಂದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದರು. ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಮ್ಮೆಲ್ಲರ ಮನೆಯೂ ಮಹಾಮನೆಯಾಗವ ಮೂಲಕ ಶರಣ ವಚನ,ತತ್ವಗಳು ಮನೆಮನೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಬಸವಕೇಂದ್ರದಿಂದ ಪಟ್ಟಣದಲ್ಲಿ ಪ್ರತಿವಾರವೂ ಒಬ್ಬೊಬ್ಬ ಶರಣರ ಮನೆಯಲ್ಲಿ ಮಹಾಮನೆಕಾರ್ಯಕ್ರಮ ಕಳೆದ 30 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಮುರಗೇಶ ಶೇಖಾ, ಗೀತಾ ತಿಪ್ಪಾ ಅವರಿಂದ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಪ್ರೊ.ಎಸ್.ಐ.ರಾಜನಾಳ, ಪ್ರೊ.ಜಿ.ಜಿ.ಹೂಗಾರ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಸುರೇಶ ರಾಜನಾಳ, ರಾಚಪ್ಪ ಯಂಡಿಗೇರಿ, ಶಿವಕುಮಾರ ಶಿಪ್ರಿ, ಮಹಾಲಿಂಗಪ್ಪ ಕರನಂದಿ, ಗಿರೀಶ ನೀಲಕಂಠಮಠ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ಕವಿತಾ ಬರಗುಂಡಿ, ವಿಶಾಲಾಕ್ಷಿ ಗಾಳಿ, ಗಾಯತ್ರಿ ಕಲ್ಯಾಣಿ, ಸುರೇಖಾ ಕಲ್ಯಾಣಿ, ಸೌಮ್ಯಾ ಯಳಮೇಲಿ, ಲಕ್ಷ್ಮೀ ತೊರಲಿ ಮತ್ತಿತರರು ಇದ್ದರು.1
- ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು. ಹನುಮನಾಳ ಗ್ರಾಮದ ಬಳಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ. ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು. ಇಬ್ಬರು ಇಳಕಲ್ ನಗರದ ನಿವಾಸಿಗಳು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ. ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ1
- ಕುಷ್ಟಗಿ:- ಪಟ್ಟಣದ ವಾರ್ಡ ನಂಬರ-20 ಮತ್ತು 19 ರಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಜಾತ್ರಾ ಮಹತ್ಸೋವ ಅಂಗವಾಗಿ ಮತ್ತು 893ನೇ ಬಸವ ಜಯಂತಿ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಕೂಡ ಐದು ದಿನಗಳ ಕಾಲ ಶ್ರೀ ನವನಹಳ್ಳಿ ದುರ್ಗಾದೇವಿಗೆ ನಂದಾದೀಪ ಹಾಕುವ ಮೂಲಕ ಜಾತ್ರಾ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಯಿತು. ಬಸವೇಶ್ವರ ಜಯಂತಿ ದಿನದಂದು ಶ್ರೀ ನವನಹಳ್ಳಿ ದುರ್ಗಾದೇವಿಗೆ ವಿಶೇಷ ಪೂಜೆ, ಹೋಮ ಹವನ ಕುಂಕುಮಾರ್ಚನೆ ಸೇರಿದಂತೆ ನಾನಾ ಪೂಜೆಗಳೊಂದಿಗೆ ಶ್ರೀ ನವನಹಳ್ಳಿ ದುರ್ಗಾದೇವಿಯನ್ನು ಅಲಂಕರಿಸಿ ಪೂಜಿಸಲಾಯಿ. ಅದೇ ದಿನ ರಾತ್ರಿ-8 ಗಂಟೆಗೆ ಪುರುಷರಿಗೆ, ಯುವಕ ಮಿತ್ರರಿಗೆ, ಯುವತಿಯರಿಗೆ, ಚಿಕ್ಕ ಮಕ್ಕಳಿಗೆ, ಹಿರಿಯರಿಗೆ ಸೇಬು, ಸೋನ್ ಪಾಪಡಿ, ಮ್ಯಾಂಗೋ ಜ್ಯೂಸ್, ಬಿಸ್ಕೆಟ್ , ಐಸ್ ಕ್ರೀಮ್ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ಪರ್ಧಾಳಗಳಿಗೆ ಶ್ರೀನವನಹಳ್ಳಿ ದುರ್ಗಾದೇವಿ ಕ್ಷೇಮ ಅಭಿವೃದ್ದಿ ಸಂಘದಿಂದ ಸ್ಪರ್ಧೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಕಮಿಟಿಯವರು ಉಚಿತವಾಗಿ ಏರ್ಪಡಿಸಿದ್ದರು. ಸ್ಪರ್ದಾಳುಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ಮಾಡಲಾಯಿತು. ಆಯ್ಕೆ ಸಮಿತಿ ಸದಸ್ಯರಾದ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ್ ಸೋನಾರ್, ಶಿಕ್ಷಕ ಬಸವರಾಜ ಹಕ್ಕಲ್, ಮರಿಯಪ್ಪ ಹಕ್ಕಲ್, ಮುತ್ತಣ್ಣ ಹಕ್ಕಲ್ ಇವರನ್ನು ನೇಮಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ ಸೋನಾರ್ ಇವರು ಸ್ಪರ್ಧೆಯಲ್ಲಿ ಉತ್ತಮವಾಗಿ ಆಟ ಹಾಡಿದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ದಾಳುಗಳನ್ನು ಆಯ್ಕೆ ಮಾಡಿ ಕೊಟ್ಟರು. ನಂತರ ಆಯ್ಕೆಯಾದ ಸ್ಪರ್ದಾಳುಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಆ ನಂತರ ಸಕಲ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಯಪ್ಪ ಹಕ್ಕಲ್, ಶರಣಯ್ಯ ಹಿರೇಮಠ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಕರಿಯಪ್ಪ ಹುಣಸಿಹಾಳ, ಶರಣಪ್ಪ ಕಲಕಬಂಡಿ, ದುರಗಪ್ಪ ಹಕ್ಕಲ್, ಅಡಿಯಪ್ಪ ಗದ್ದಿ, ಯಮನಪ್ಪ ಚೂರಿ, ಮಾರುತಿ ಇಂಗಳಗಿ, ರಮೇಶ ಇಂಗಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- Post by Onlinetv24x71
- ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮ ಇಂದು ಜನಸಾಗರದಿಂದ ತುಂಬಿ ತುಳುಕುತ್ತಿದೆ. ದಶಕದ ಹತ್ತಿರದ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆಯು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ತುಂಬಿದೆ.1
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- Post by Vv Vv1