ಹನುಮ ಜಯಂತಿ : ಇಳಕಲ್ಲದಿಂದ ಹೊಸೂರು ಗ್ರಾಮದ ಹನುಮ ಮಂದಿರಕ್ಕೆ ಭಕ್ತರಿಂದ ಪಾದಯಾತ್ರೆ ಇಳಕಲ್ : ಇಲ್ಲಿನ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಹನುಮ ಜಯಂತಿ ಪ್ರಯುಕ್ತ ೫ ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಶ್ರೀರಾಮಮಂದಿರದಿAದ ಹೊಸೂರು ಹನುಮ ಮಂದಿರಕ್ಕೆ ಭಕ್ತರುಪಾದಯಾತ್ರೆಯನ್ನು ಗುರುವಾರ ಮುಂಜಾನೆ ನಡೆಸಿದರು. ಶ್ರೀರಾಮನಿಗೆ ಮತ್ತು ಹನುಮಂತನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಗರದ ಪ್ರಮುಖ ಬೀದಿಗಳಾದ ಬಜಾರ ಬಸವಣ್ಣ ದೇವಸ್ಥಾನ, ಗಾಂಧಿ ಚೌಕ, ಗ್ರಾಮ ಚಾವಡಿ, ದ್ವಾರಕಾ ಲಾಡ್ಜ್, ಕಂಠಿ ಸರ್ಕಲ್,ನಗರಸಭೆ ಕಾರ್ಯಾಲಯ, ಸಾಯಿಬಾಬಾ ಮಂದಿರ, ದೇವರ ದಾಸಿಮಯ್ಯ ವೃತ್ತ, ಶ್ರೀನಿವಾಸ ಚಿತ್ರಮಂದಿರ ಮಾರ್ಗವಾಗಿ ಹೊಸೂರು ಗ್ರಾಮಕ್ಕೆ ತೆರಳಿದರು. ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಬಿಳಿವಸ್ತçಗಳನ್ನು ಧರಿಸಿ ಕೊರಳಿಗೆ ಕೇಸರಿ ಶಾಲನ್ನು ಹಾಕಿಕೊಂಡು ಗಮನ ಸೆಳೆದರು. ಹೊಸರು ಗ್ರಾಮದ ಹನುಮ ಮಂದಿರ ತಲುಪಿ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಹನುಮ ಭಜನೆಯನ್ನು ಮಾಡಿ ಭಕ್ತಿಯನ್ನು ಮೆರೆದರು. ಪಾದಯಾತ್ರೆಯ ನೇತೃತ್ವವನ್ನು ಪರಶುರಾಮ ಬಿಸಲದಿನ್ನಿ, ಪ್ರದೀಪ ಅಮರಣ್ಣನವರ, ಶಿವರಾಜ ಮಾದಗುಂಡಿ, ಬಸವರಾಜ ಬಲಕುಂದಿ, ಮೌನೇಶ ಪತ್ತಾರ,ಶ್ಯಾಮ ತಳವಾರ ವಹಿಸಿದ್ದರು.
ಹನುಮ ಜಯಂತಿ : ಇಳಕಲ್ಲದಿಂದ ಹೊಸೂರು ಗ್ರಾಮದ ಹನುಮ ಮಂದಿರಕ್ಕೆ ಭಕ್ತರಿಂದ ಪಾದಯಾತ್ರೆ ಇಳಕಲ್ : ಇಲ್ಲಿನ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಹನುಮ ಜಯಂತಿ ಪ್ರಯುಕ್ತ ೫ ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಶ್ರೀರಾಮಮಂದಿರದಿAದ ಹೊಸೂರು ಹನುಮ ಮಂದಿರಕ್ಕೆ ಭಕ್ತರುಪಾದಯಾತ್ರೆಯನ್ನು ಗುರುವಾರ ಮುಂಜಾನೆ ನಡೆಸಿದರು. ಶ್ರೀರಾಮನಿಗೆ ಮತ್ತು ಹನುಮಂತನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಗರದ ಪ್ರಮುಖ ಬೀದಿಗಳಾದ ಬಜಾರ ಬಸವಣ್ಣ ದೇವಸ್ಥಾನ, ಗಾಂಧಿ ಚೌಕ, ಗ್ರಾಮ ಚಾವಡಿ, ದ್ವಾರಕಾ ಲಾಡ್ಜ್, ಕಂಠಿ ಸರ್ಕಲ್,ನಗರಸಭೆ ಕಾರ್ಯಾಲಯ, ಸಾಯಿಬಾಬಾ ಮಂದಿರ, ದೇವರ ದಾಸಿಮಯ್ಯ ವೃತ್ತ, ಶ್ರೀನಿವಾಸ ಚಿತ್ರಮಂದಿರ ಮಾರ್ಗವಾಗಿ ಹೊಸೂರು ಗ್ರಾಮಕ್ಕೆ ತೆರಳಿದರು. ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಬಿಳಿವಸ್ತçಗಳನ್ನು ಧರಿಸಿ ಕೊರಳಿಗೆ ಕೇಸರಿ ಶಾಲನ್ನು ಹಾಕಿಕೊಂಡು ಗಮನ ಸೆಳೆದರು. ಹೊಸರು ಗ್ರಾಮದ ಹನುಮ ಮಂದಿರ ತಲುಪಿ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಹನುಮ ಭಜನೆಯನ್ನು ಮಾಡಿ ಭಕ್ತಿಯನ್ನು ಮೆರೆದರು. ಪಾದಯಾತ್ರೆಯ ನೇತೃತ್ವವನ್ನು ಪರಶುರಾಮ ಬಿಸಲದಿನ್ನಿ, ಪ್ರದೀಪ ಅಮರಣ್ಣನವರ, ಶಿವರಾಜ ಮಾದಗುಂಡಿ, ಬಸವರಾಜ ಬಲಕುಂದಿ, ಮೌನೇಶ ಪತ್ತಾರ,ಶ್ಯಾಮ ತಳವಾರ ವಹಿಸಿದ್ದರು.
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.2
- ರಂಗೇರಿದ ಬಾಗಲಕೋಟೆ ಉಪಚುನಾವಣೆ… ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು … ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ. “ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.4
- ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- Post by Sharanugouda Patil1
- ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಉಪಚುನಾವಣೆ ಇದೀಗ ತೀವ್ರ ಹಂತ ತಲುಪಿದೆ. ಶಾಸಕ ಎಚ್. ವೈ. ಮೇಟಿ ಅವರ ಅಕಾಲಿಕ ನಿಧನದ ನಂತರ ನಡೆಯುತ್ತಿರುವ ಈ ಬೈಎಲೆಕ್ಷನ್ನಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಖಾಡಕ್ಕಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಭ್ಯರ್ಥಿಯಾಗಿ ಬಲಿಷ್ಠ ಸವಾಲು ಒಡ್ಡಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ: ಅನುಕಂಪ ಗೆಲ್ಲುತ್ತಾ ಅಥವಾ ಅಭಿವೃದ್ಧಿ ಗೆಲ್ಲುತ್ತಾ. ಕೆಲವರು ಅಭಿವೃದ್ಧಿ ವಿಚಾರದಲ್ಲಿ ಚರಂತಿಮಠ ಪರ ಮಾತು ಮತ್ತೊಂದೆಡೆ ಮಹಿಳೆಯರು ‘ಗೃಹ ಲಕ್ಷ್ಮಿ’ ಯೋಜನೆಯ ಆಧಾರದ ಮೇಲೆ ಕಾಂಗ್ರೆಸ್ ಪರ ಒಲವು ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆದಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ವಿಡಿಯೋ ಇಷ್ಟವಾದರೆ Like ಮಾಡಿ ಇನ್ನಷ್ಟು ನಿಖರ ಸುದ್ದಿಗಳಿಗೆ Subscribe ಮಾಡಿ – ಭೀಮ ಹೆಜ್ಜೆ ನ್ಯೂಸ್, ಬಾಗಲಕೋಟೆ..1
- ಯಾದಗಿರಿಯಲ್ಲಿ ಕೆಂಭಾವಿ ತಾಲೂಕ ಕಾಲುವೆಗೆ ಬಿದ್ದ ಮಹಿಳೆಯ ರಕ್ಷಣೆ1
- ಹನುಮ ಜಯಂತಿ ಅಂಗವಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿನ ಹನುಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ನಗರದಲ್ಲಿನ ಹನುಮ ದೇವಸ್ಥಾನಗಳನ್ನು ತಳಿರೋ ತೋರಣ,ಹೂವುಗಳಿಂದ ಶೃಂಗರಿಸಿ ಆಂಜನೇಯ್ಯನಿಗೆ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನಗಳಿಗೆ ಭಕ್ತರು ದಂಡು ಆಗಮಿಸಿ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಜೋಶಿಗಲ್ಲಿಯಲ್ಲಿನ ಹನುಮ ಮಂದಿರ, ಬಸ್ ನಿಲ್ದಾಣ ಹತ್ತಿರದ ಆಂಜನೇಯ್ಯಸ್ವಾಮಿ ದೇವಸ್ಥಾನ, ಬಸವನಗರದ ಹನುಮ ದೇವಸ್ಥಾನ, ದರ್ಗಾ ಹತ್ತಿರದ ಹನುಮ ದೇವಸ್ಥಾನ, ಜುಂಜಾ ಮನೆಯ ಹತ್ತಿರದ ಹನುಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.1