logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ರಾಕೇಶ್ ಎಮ್ ಅಥ್ಲೆಟಿಕ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ. ಶಾಸಕರಿಂದ ಅಭಿನಂದನೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ಜೆಡಿಎಸ್ ತಾಲ್ಲೂಕು ಪಂಚಾಯತಿ ಮಾಜಿ ಉಪಾದ್ಯಕ್ಷ ಮುನಿಯಪ್ಪ ನವರ ಸುಪುತ್ರ ರಾಕೇಶ್ ಎಮ್ ಇಂದು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಆಯ್ಕೆಯಾಗಿದ್ದಾರೆ ಪಂಜಾಬ್‌ನ ತಲ್ವಾಂಡಿ ಸಾಬೊದಲ್ಲಿರುವ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ಇದೇ ತಿಂಗಳ ಮಾರ್ಚ್ 14.15.16 ಶನಿವಾರ, ಭಾನುವಾರ ಮತ್ತು ಸೋಮವಾರ ರಂದು ನಡೆಯಲಿರುವ 45 ನೇ ರಾಷ್ಟ್ರೀಯ ಮಾಜಿ ಸೈನಿಕರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ ಗೆ ಆಯ್ಕೆಯಾದ ಮಳ್ಳೂರು ಗ್ರಾಮದ ರಾಕೇಶ್ ಎಂ ಇವರಿಗೆ ಕ್ರೀಡೆ ಎಂಬುದು ಅವರು ಬಾಲ್ಯದಿಂದಲೆ ಮೈಗೂಡಿಸಿಕೊಂಡ ಬಂದ ಅವರು ತಾಲ್ಲೂಕು ಮಟ್ಟ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವುದು ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಹೆಮ್ಮೆಯ ವಿಚಾರ. ರಾಷ್ಟ್ರ ಮಟ್ಟದಲ್ಲಿ ಆಯ್ಕೆ ವಿಚಾರ ತಿಳಿದ ಶಾಸಕ ಬಿಎನ್ ರವಿಕುಮಾರ್ ರವರು ತಮ್ಮ ನಿವಾಸದ ಬಳಿ ರಾಕೇಶ್ ರವರನ್ನು ಕರೆಯಿಸಿ ಸನ್ಮಾನಿಸಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ತಿಳಿಸುತ್ತಾ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕೂಡ ಗೆದ್ದು ಬಾ ಎಂದು ಆಶೀರ್ವದಿಸಿದರು ರಾಕೇಶ್ ರವರ ಪ್ರತಿಯೊಂದು ಹಂತದಲ್ಲೂ ಗೆಲುವಿನ ಹಿನ್ನೆಲೆ ನಮ್ಮ ತಂದೆಯವರಾದ ಮುನಿಯಪ್ಪನವರೇ ಕಾರಣ ಎಂದು ತಿಳಿಸಿದರು ಯಾವುದೇ ಕ್ರೀಡೆಯಲ್ಲಿ ಭಾಗವಹಿಸಲು ನನಗೆ ಬೇಕಾದ ಎಲ್ಲಾ ಸೌಲತ್ತುಗಳನ್ನು ನೀಡಿ ನನಗೆ ಸಹಕರಿಸಿ ಉತ್ತೇಜನ ನೀಡಿ ಪ್ರೋತ್ಸಾಹಿಸಿರುವುದೇ ನನ್ನ ಗೆಲುವಿಗೆ ಕಾರಣಗಳು ಎಂದು ತಿಳಿಸಿದರು ಈ ಒಂದು ಸಂದರ್ಭದಲ್ಲಿ ವಕೀಲರಾದ ಅಜಯ್.ಗ್ರಾಮ ಪಂಚಾಯತಿ ಸದಸ್ಯ ಎಮ್ ಜೆ ಶ್ರೀಧರ್. ರವಿ. ಶ್ರೀವೇಂದ್ರ. ಅರ್ಜುನ್. ಕಿರಣ್. ಗೋಪಿ.ಮುಂತಾದವರು ಬಾಗಿಯಾಗಿದ್ದರು

2 hrs ago
user_Venu Gopal
Venu Gopal
ಪತ್ರಕರ್ತ Sidlaghatta, Chikkaballapura•
2 hrs ago
03ea8441-ce21-4006-9e52-d6fb8becaaa7

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ರಾಕೇಶ್ ಎಮ್ ಅಥ್ಲೆಟಿಕ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ. ಶಾಸಕರಿಂದ ಅಭಿನಂದನೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ಜೆಡಿಎಸ್ ತಾಲ್ಲೂಕು ಪಂಚಾಯತಿ ಮಾಜಿ ಉಪಾದ್ಯಕ್ಷ ಮುನಿಯಪ್ಪ ನವರ ಸುಪುತ್ರ ರಾಕೇಶ್ ಎಮ್ ಇಂದು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಆಯ್ಕೆಯಾಗಿದ್ದಾರೆ ಪಂಜಾಬ್‌ನ ತಲ್ವಾಂಡಿ ಸಾಬೊದಲ್ಲಿರುವ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ಇದೇ ತಿಂಗಳ ಮಾರ್ಚ್ 14.15.16 ಶನಿವಾರ, ಭಾನುವಾರ ಮತ್ತು ಸೋಮವಾರ ರಂದು ನಡೆಯಲಿರುವ 45 ನೇ ರಾಷ್ಟ್ರೀಯ ಮಾಜಿ ಸೈನಿಕರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ ಗೆ ಆಯ್ಕೆಯಾದ ಮಳ್ಳೂರು ಗ್ರಾಮದ ರಾಕೇಶ್ ಎಂ ಇವರಿಗೆ ಕ್ರೀಡೆ ಎಂಬುದು ಅವರು ಬಾಲ್ಯದಿಂದಲೆ ಮೈಗೂಡಿಸಿಕೊಂಡ ಬಂದ ಅವರು ತಾಲ್ಲೂಕು ಮಟ್ಟ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವುದು ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಹೆಮ್ಮೆಯ ವಿಚಾರ. ರಾಷ್ಟ್ರ ಮಟ್ಟದಲ್ಲಿ ಆಯ್ಕೆ ವಿಚಾರ ತಿಳಿದ ಶಾಸಕ ಬಿಎನ್ ರವಿಕುಮಾರ್ ರವರು ತಮ್ಮ ನಿವಾಸದ ಬಳಿ ರಾಕೇಶ್ ರವರನ್ನು ಕರೆಯಿಸಿ ಸನ್ಮಾನಿಸಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ತಿಳಿಸುತ್ತಾ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕೂಡ ಗೆದ್ದು ಬಾ ಎಂದು ಆಶೀರ್ವದಿಸಿದರು ರಾಕೇಶ್ ರವರ ಪ್ರತಿಯೊಂದು ಹಂತದಲ್ಲೂ ಗೆಲುವಿನ ಹಿನ್ನೆಲೆ ನಮ್ಮ ತಂದೆಯವರಾದ ಮುನಿಯಪ್ಪನವರೇ ಕಾರಣ ಎಂದು ತಿಳಿಸಿದರು ಯಾವುದೇ ಕ್ರೀಡೆಯಲ್ಲಿ ಭಾಗವಹಿಸಲು ನನಗೆ ಬೇಕಾದ ಎಲ್ಲಾ ಸೌಲತ್ತುಗಳನ್ನು ನೀಡಿ ನನಗೆ ಸಹಕರಿಸಿ ಉತ್ತೇಜನ ನೀಡಿ ಪ್ರೋತ್ಸಾಹಿಸಿರುವುದೇ ನನ್ನ ಗೆಲುವಿಗೆ ಕಾರಣಗಳು ಎಂದು ತಿಳಿಸಿದರು ಈ ಒಂದು ಸಂದರ್ಭದಲ್ಲಿ ವಕೀಲರಾದ ಅಜಯ್.ಗ್ರಾಮ ಪಂಚಾಯತಿ ಸದಸ್ಯ ಎಮ್ ಜೆ ಶ್ರೀಧರ್. ರವಿ. ಶ್ರೀವೇಂದ್ರ. ಅರ್ಜುನ್. ಕಿರಣ್. ಗೋಪಿ.ಮುಂತಾದವರು ಬಾಗಿಯಾಗಿದ್ದರು

More news from ಕರ್ನಾಟಕ and nearby areas
  • *ವಿಪತ್ತು ನಿರ್ವಹಣೆ ಅರಿವು ಅಗತ್ಯ: ಎಡಿಸಿ ಸೈಯಿದಾ ಆಯಿಷಾ* ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆಗಳು ಸದಾ ಸಿದ್ಧರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನಡೆದ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ನೈಸರ್ಗಿಕ ವಿಕೋಪಗಳ, ಅಪಾಯಕಾರಿ ಕಾರ್ಖಾನೆಗಳಲ್ಲಿ ಆಗುವಂತಹ ದುರಂತ, ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆ ಅಧಿಕಾರಿಗಳಿಗೆ ಅರಿವು ಇರಬೇಕು. ಕಾರ್ಖಾನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ ಕೂಡ ಸಮನ್ವಯ ಇಲಾಖೆಗಳು ಸದಾ ಸನ್ನದ್ಧವಾಗಿರಬೇಕು ಎಂದರು. *ನೈಜ ಘಟನೆಯಂತೆ ರಾಸಾಯನಿಕ ಸೋರಿಕೆ ಮಾಕ್ ಡ್ರಿಲ್* ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನೈಜ ಘಟನೆಯಂತೆ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಂತೆ ಕಾರ್ಖಾನೆ ಆವರಣದಲ್ಲಿ ಅಣಕು ಡ್ರಿಲ್ ಸಂಕೀರ್ಣ ಕೈಗಾರಿಕಾ ತುರ್ತು ಸನ್ನಿವೇಶವನ್ನು ಅನುಕರಿಸಿತು, ಇದರಲ್ಲಿ ಉತ್ಖನನ ಕೆಲಸದ ಸಮಯದಲ್ಲಿ PNG ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಯಿತು, ಇದರ ಪರಿಣಾಮವಾಗಿ ಅನಿಲ ಸೋರಿಕೆ ಮತ್ತು ಸ್ಥಿರ ದಹನದಿಂದಾಗಿ ನಂತರದ ಬೆಂಕಿ ಉಂಟಾಯಿತು. ಅದೇ ಸಮಯದಲ್ಲಿ, LPG ನಿಲ್ದಾಣದಲ್ಲಿ LPG ಟ್ಯಾಂಕರ್ ಇಳಿಸುವ ಕಾರ್ಯಾಚರಣೆಯಲ್ಲಿ ಮೆದುಗೊಳವೆ ಸೋರಿಕೆ ಉಂಟಾಯಿತು, ಇದು ನಂತರ ಉಗಿ ಮೋಡವನ್ನು ರೂಪಿಸಿತು, ಇದು ಆವಿ ಮೋಡ ಸ್ಫೋಟಕ್ಕೆ (VCE) ಕಾರಣವಾಯಿತು. ಪ್ರಥಮ ಚಿಕಿತ್ಸೆ ಅಗತ್ಯವಿರುವ 05 ಜನರು, ಗಂಭೀರ ಸುಟ್ಟ ಗಾಯಗಳೊಂದಿಗೆ 05 ಜನರು ಮತ್ತು 10 ಜನರು ಸಾವನ್ನಪ್ಪಿದ್ದಾರೆ ಎಂದು ಬಂಬಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಿ ಸುಮಾರು 400 ರಿಂದ 500 ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕಾರ್ಖಾನೆಗಳಲ್ಲಿ ಘಟಿಸುವ ರಾಸಾಯನಿಕ ಸೋರಿಕೆಯಂತಹ ಘಟನೆಯಿಂದ ಕಾರ್ಖಾನೆ ಸಿಬ್ಬಂದಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಹಾನಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ, ನಿರ್ವಹಣೆ ಮಾಡುವ ಜ್ಞಾನ ಅಧಿಕಾರಿ, ಸಿಬ್ಬಂದಿಗಳಿಗೆ, ಕಾರ್ಖಾನೆಗಳಿಗೆ ಇರಬೇಕು.ಭೂಪಾಲ್ ಅನಿಲ ದುರಂತ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಖಾನೆಗಳಲ್ಲಿ, ಸಾರ್ವಜನಿಕರಿಗೆ ಅರಿವು ಮಾಡಿಸುವ ಸಲುವಾಗಿ ಕಾಲಕಾಲಕ್ಕೆ ಅಣುಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಕಾರ್ಖಾನೆಗಳ ಜಂಟಿ ನಿರ್ದೇಶಕ ಪಾರ್ಥಸಾರಥಿ, ಉಪನಿರ್ದೇಶಕರಾದ ನರಸಿಂಹ ಮೂರ್ತಿ, ತಿಮ್ಮರಾಜು; ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್‌ನಿಂದ ಮುಖ್ಯಸ್ಥರಾದ ವಿಕ್ರಮ್ ಶರ್ಮಾ, ಎಂ. ಸತೇಶ್ ಕುಮಾರ್, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    1
    *ವಿಪತ್ತು ನಿರ್ವಹಣೆ ಅರಿವು ಅಗತ್ಯ: ಎಡಿಸಿ ಸೈಯಿದಾ ಆಯಿಷಾ*
ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆಗಳು ಸದಾ ಸಿದ್ಧರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನಡೆದ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೈಸರ್ಗಿಕ ವಿಕೋಪಗಳ, ಅಪಾಯಕಾರಿ ಕಾರ್ಖಾನೆಗಳಲ್ಲಿ ಆಗುವಂತಹ ದುರಂತ, ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಇಲಾಖೆ ಅಧಿಕಾರಿಗಳಿಗೆ ಅರಿವು ಇರಬೇಕು. ಕಾರ್ಖಾನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಯಾವುದೇ ಸಂದರ್ಭ ಬಂದರೂ ಕೂಡ ಸಮನ್ವಯ ಇಲಾಖೆಗಳು ಸದಾ  ಸನ್ನದ್ಧವಾಗಿರಬೇಕು ಎಂದರು.
*ನೈಜ ಘಟನೆಯಂತೆ ರಾಸಾಯನಿಕ ಸೋರಿಕೆ ಮಾಕ್ ಡ್ರಿಲ್*
ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್(JINDAL ALUMINIUM LTD) ಕಾರ್ಖಾನೆಯಲ್ಲಿ ನೈಜ ಘಟನೆಯಂತೆ 'ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಂತೆ ಕಾರ್ಖಾನೆ ಆವರಣದಲ್ಲಿ ಅಣಕು ಡ್ರಿಲ್ ಸಂಕೀರ್ಣ ಕೈಗಾರಿಕಾ ತುರ್ತು ಸನ್ನಿವೇಶವನ್ನು ಅನುಕರಿಸಿತು, ಇದರಲ್ಲಿ ಉತ್ಖನನ ಕೆಲಸದ ಸಮಯದಲ್ಲಿ PNG ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಯಿತು, ಇದರ ಪರಿಣಾಮವಾಗಿ ಅನಿಲ ಸೋರಿಕೆ ಮತ್ತು ಸ್ಥಿರ ದಹನದಿಂದಾಗಿ ನಂತರದ ಬೆಂಕಿ ಉಂಟಾಯಿತು. ಅದೇ ಸಮಯದಲ್ಲಿ, LPG ನಿಲ್ದಾಣದಲ್ಲಿ LPG ಟ್ಯಾಂಕರ್ ಇಳಿಸುವ ಕಾರ್ಯಾಚರಣೆಯಲ್ಲಿ ಮೆದುಗೊಳವೆ ಸೋರಿಕೆ ಉಂಟಾಯಿತು, ಇದು ನಂತರ ಉಗಿ ಮೋಡವನ್ನು ರೂಪಿಸಿತು, ಇದು ಆವಿ ಮೋಡ ಸ್ಫೋಟಕ್ಕೆ (VCE) ಕಾರಣವಾಯಿತು. ಪ್ರಥಮ ಚಿಕಿತ್ಸೆ ಅಗತ್ಯವಿರುವ 05 ಜನರು, ಗಂಭೀರ ಸುಟ್ಟ ಗಾಯಗಳೊಂದಿಗೆ 05 ಜನರು ಮತ್ತು 10 ಜನರು ಸಾವನ್ನಪ್ಪಿದ್ದಾರೆ ಎಂದು ಬಂಬಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಿ ಸುಮಾರು 400 ರಿಂದ 500 ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. 
ಕಾರ್ಖಾನೆಗಳಲ್ಲಿ ಘಟಿಸುವ ರಾಸಾಯನಿಕ ಸೋರಿಕೆಯಂತಹ ಘಟನೆಯಿಂದ ಕಾರ್ಖಾನೆ ಸಿಬ್ಬಂದಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಹಾನಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ, ನಿರ್ವಹಣೆ ಮಾಡುವ ಜ್ಞಾನ ಅಧಿಕಾರಿ, ಸಿಬ್ಬಂದಿಗಳಿಗೆ, ಕಾರ್ಖಾನೆಗಳಿಗೆ ಇರಬೇಕು.ಭೂಪಾಲ್ ಅನಿಲ ದುರಂತ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಖಾನೆಗಳಲ್ಲಿ, ಸಾರ್ವಜನಿಕರಿಗೆ ಅರಿವು ಮಾಡಿಸುವ ಸಲುವಾಗಿ ಕಾಲಕಾಲಕ್ಕೆ ಅಣುಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ.
ಕಾರ್ಖಾನೆಗಳ ಜಂಟಿ ನಿರ್ದೇಶಕ ಪಾರ್ಥಸಾರಥಿ, ಉಪನಿರ್ದೇಶಕರಾದ ನರಸಿಂಹ ಮೂರ್ತಿ, ತಿಮ್ಮರಾಜು; ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್‌ನಿಂದ  ಮುಖ್ಯಸ್ಥರಾದ ವಿಕ್ರಮ್ ಶರ್ಮಾ, ಎಂ. ಸತೇಶ್ ಕುಮಾರ್, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    48 min ago
  • Admissions only limited seats urryup
    1
    Admissions only limited seats urryup
    user_KRUTHI NEWS KANNADA
    KRUTHI NEWS KANNADA
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    7 hrs ago
  • ಜಿಲ್ಲಾಧಿಕಾರಿ ಗೌರಿಬಿನಲ್ ನಗರಸಭೆಗೆ ದಿಡೀರ್ ಬೇಟಿ
    2
    ಜಿಲ್ಲಾಧಿಕಾರಿ ಗೌರಿಬಿನಲ್ ನಗರಸಭೆಗೆ ದಿಡೀರ್ ಬೇಟಿ
    user_ಸುಪ್ರಿಯಾ
    ಸುಪ್ರಿಯಾ
    ಗೌರಿಬಿದನೂರು, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ವಾರ್ಡ್ ನೊಂ 22 ರಲ್ಲಿ ಮೂವತ್ತು ಲಕ್ಷ ಕಾಮಗಾರಿ ಗೆ ಚಾಲನೆ ನೀಡಿದ ರಫಿ
    1
    ವಾರ್ಡ್ ನೊಂ 22 ರಲ್ಲಿ ಮೂವತ್ತು ಲಕ್ಷ ಕಾಮಗಾರಿ ಗೆ ಚಾಲನೆ ನೀಡಿದ ರಫಿ
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....
    1
    ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿದ್ದಾರೆ.
    4
    ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ 
ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ  ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು    ಹೇಳಿದ್ದಾರೆ.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    12 hrs ago
  • ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್‌ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿ:ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು. ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ ಅದು ನಾವು ಕೇಳಿದಾಗ ಮಾತ್ರ ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್‌ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ: ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ: ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್‌ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು. ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್ ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿತ್ರ-೧೧-೩ ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು. \
    1
    ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್‌ಕುಮಾರ್ ಹೇಳಿಕೆ
•	ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ
ಮಳವಳ್ಳಿ:ಪಟ್ಟಣದ ತಾಲೂಕು  ಕಛೇರಿಯಲ್ಲಿ  ಲೋಕಾಯುಕ್ತ ಡಿವೈಎಸ್ಪಿ  ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು.
ಪಟ್ಟಣದ ತಾಲೂಕು ಕಛೇರಿಯಲ್ಲಿ  ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ  ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ  ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.
ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ  ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ
ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ  ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ  ಅದು ನಾವು ಕೇಳಿದಾಗ ಮಾತ್ರ  ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್  ಪ್ರತಿನಿಧಿ ಪ್ರಶ್ನಿಸಿದಾಗ  ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್‌ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ  ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ:  ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.
ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ:
ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್‌ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು.
ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್  ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಚಿತ್ರ-೧೧-೩
ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು.
\
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ನೆಲಮಂಗಲ ಕೂದಲು ವ್ಯಾಪಾರಕ್ಕೆ ಬಂದು ಮಕ್ಕಳ ಕಳ್ಳತನಕ್ಕೆ ಯತ್ನ ಅರೋಪ ಮಕ್ಕಳು ಕಳ್ಳರೆಂದು ಕೂದಲು ವ್ಯಾಪಾರಿಗಳನ್ನ ಹಿಡಿದು ಬಡಿದ ಜನ! ಕೂದಲು ವ್ಯಾಪಾರ ವೇಳೆ ಮಗುವಿನ ಕೈ ಹಿಡಿದು ಎಳೆದದಾಟ ಆರೋಪ ಮಗು ಕಿರುಚುತ್ತಿದ್ದಂತೆ ಗ್ರಾಮಸ್ಥರು ಸುತ್ತುವರೆದು ಬಡಿದಾಟ ಕೂದಲು ವ್ಯಾಪಾರಿಗಳು ಹಾಗೂ ಗ್ರಾಮದ ಮಹಿಳೆಯರ ನಡುವೆ ಮಾರಾಮಾರಿ ನೆಲಮಂಗಲ ಟೌನ್ ಜಕ್ಕಸಂದ್ರ ಗ್ರಾಮದಲ್ಲಿ ಘಟನೆ ಕೂದಲು ವಿಚಾರಕ್ಕೆ ಜಗಳ ತೆಗೆದು ಸುಳ್ಳುಹೇಳುತ್ತಿದ್ದಾರೆ ಎನ್ನುವ ಕೂದಲು ವ್ಯಾಪಾರಿಗಳು ಕಣ್ಣಾರೆ ನೋಡಿದ್ದೀವಿ ಇವರು ಮಕ್ಕಳು ಕಳ್ಳರು ಎಂದು ಪೋಷಕರ ಆರೋಪ ಸದ್ಯ ಕೂದಲು ವ್ಯಾಪಾರಿಗಳನ್ನ ವಶಕ್ಕೆ ಪಡೆದಿರುವ ನೆಲಮಂಗಲ ಪೊಲೀಸರು ನೆಲಮಂಗಲ ಟೌನ್ ಪೊಲೀಸರಿಂದ ವ್ಯಾಪಾರಿಗಳ ವಿಚಾರಣೆ.
    1
    ನೆಲಮಂಗಲ ಕೂದಲು ವ್ಯಾಪಾರಕ್ಕೆ ಬಂದು ಮಕ್ಕಳ ಕಳ್ಳತನಕ್ಕೆ ಯತ್ನ ಅರೋಪ
ಮಕ್ಕಳು ಕಳ್ಳರೆಂದು ಕೂದಲು ವ್ಯಾಪಾರಿಗಳನ್ನ ಹಿಡಿದು ಬಡಿದ ಜನ!
ಕೂದಲು ವ್ಯಾಪಾರ ವೇಳೆ ಮಗುವಿನ ಕೈ ಹಿಡಿದು ಎಳೆದದಾಟ ಆರೋಪ
ಮಗು ಕಿರುಚುತ್ತಿದ್ದಂತೆ ಗ್ರಾಮಸ್ಥರು ಸುತ್ತುವರೆದು ಬಡಿದಾಟ
ಕೂದಲು ವ್ಯಾಪಾರಿಗಳು ಹಾಗೂ ಗ್ರಾಮದ ಮಹಿಳೆಯರ ನಡುವೆ ಮಾರಾಮಾರಿ
ನೆಲಮಂಗಲ ಟೌನ್ ಜಕ್ಕಸಂದ್ರ ಗ್ರಾಮದಲ್ಲಿ ಘಟನೆ
ಕೂದಲು ವಿಚಾರಕ್ಕೆ ಜಗಳ ತೆಗೆದು ಸುಳ್ಳುಹೇಳುತ್ತಿದ್ದಾರೆ ಎನ್ನುವ ಕೂದಲು ವ್ಯಾಪಾರಿಗಳು
ಕಣ್ಣಾರೆ ನೋಡಿದ್ದೀವಿ ಇವರು ಮಕ್ಕಳು ಕಳ್ಳರು ಎಂದು ಪೋಷಕರ ಆರೋಪ 
ಸದ್ಯ ಕೂದಲು ವ್ಯಾಪಾರಿಗಳನ್ನ ವಶಕ್ಕೆ ಪಡೆದಿರುವ ನೆಲಮಂಗಲ ಪೊಲೀಸರು
ನೆಲಮಂಗಲ ಟೌನ್ ಪೊಲೀಸರಿಂದ ವ್ಯಾಪಾರಿಗಳ ವಿಚಾರಣೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.