ಶಿವಮೊಗ್ಗ-ಅನುಮಾನ ಸ್ಪದವಾಗಿ ಗೋವುಗಳ ಸಾಗಾಣಿಕೆ-ಕಸಾಯಿ ಖಾನೆಗೆ ಬದಲು ಠಾಣೆಗೆ ರವಾನೆ ಶಿವಮೊಗ್ಗ: ಸಾಗರ ರಸ್ತೆಯ ಶಿವರಾಂಪುರ ದಲ್ಲಿ ಅನುಮಾನ ಪದವಾಗಿ ಬಂದ ವಾಹನವನ್ನು ತಡೆದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಪಾಸಣೆ ನಡೆಸಿದಾಗ ಕಸಾಯಿ ಖಾನೆಗೆ ಹೋಗುತ್ತಿದ್ದ ಆರು ಹಸು ಗಳನ್ನು ಬಚಾವ್ ಮಾಡಿದ್ದಾರೆ. ಶ್ರೀರಾಂಪುರ ಬಡಾವಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಯುವಕರು ರಸ್ತೆ ಬದಿ ನಿಂತು ಕೊಂಡಿದ್ದಾಗ ಕೆಎ 04 ಎ 0967 ನಂಬರ್ ನ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದು ಅನುಮಾನಸ್ಪದವಾಗಿ ಬರುತ್ತಿತ್ತು. ಹಿಂದೂ ಜಾಗರಣ ವೇದಿಕೆ ಯುವಕರು ಈ ವಾಹನವನ್ನು ತಡೆದು ಪರಿಶೀಲಿಸಿದಾಗ ಹಿಂಸಾ ತ್ಮಕವಾಗಿ ಆರು ಹಸುಗಳನ್ನು ತುಂಬಿಸಿ ಕೊಂಡು ಹೋಗುತ್ತಿ ರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಹಸು ಸಾಗಾಣಿಕೆಗೆ ಬೇಕಾದ ದಾಖಲಾತಿಗಳನ್ನು ಕೇಳಿದಾಗ ಗೂಡ್ಸ್ ವಾಹನ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಹಿಂದೂ ಜಾಗರಣೆ ವೇದಿಕೆಯ ಹುಡುಗರು 112 ಸಂಖ್ಯೆಗೆ ಕರೆ ಮಾಡಿದ್ದಾರೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ತುಂಗ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾರ್ಗಲ್ ನಿಂದ ಹೊರಟ ಗೂಡ್ಸ್ ವಾಹನವು ತುಮಕೂರಿನ ಬಳಿ ತೆರಳುತ್ತಿರುವುದು ತಿಳಿದು ಬಂದಿದೆ ತುಂಗಾ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ-ಅನುಮಾನ ಸ್ಪದವಾಗಿ ಗೋವುಗಳ ಸಾಗಾಣಿಕೆ-ಕಸಾಯಿ ಖಾನೆಗೆ ಬದಲು ಠಾಣೆಗೆ ರವಾನೆ ಶಿವಮೊಗ್ಗ: ಸಾಗರ ರಸ್ತೆಯ ಶಿವರಾಂಪುರ ದಲ್ಲಿ ಅನುಮಾನ ಪದವಾಗಿ ಬಂದ ವಾಹನವನ್ನು ತಡೆದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಪಾಸಣೆ ನಡೆಸಿದಾಗ ಕಸಾಯಿ ಖಾನೆಗೆ ಹೋಗುತ್ತಿದ್ದ ಆರು ಹಸು ಗಳನ್ನು ಬಚಾವ್ ಮಾಡಿದ್ದಾರೆ. ಶ್ರೀರಾಂಪುರ ಬಡಾವಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಯುವಕರು ರಸ್ತೆ ಬದಿ ನಿಂತು ಕೊಂಡಿದ್ದಾಗ ಕೆಎ 04 ಎ 0967 ನಂಬರ್ ನ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದು ಅನುಮಾನಸ್ಪದವಾಗಿ ಬರುತ್ತಿತ್ತು. ಹಿಂದೂ ಜಾಗರಣ ವೇದಿಕೆ ಯುವಕರು ಈ ವಾಹನವನ್ನು ತಡೆದು ಪರಿಶೀಲಿಸಿದಾಗ ಹಿಂಸಾ ತ್ಮಕವಾಗಿ ಆರು ಹಸುಗಳನ್ನು ತುಂಬಿಸಿ ಕೊಂಡು ಹೋಗುತ್ತಿ ರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಹಸು ಸಾಗಾಣಿಕೆಗೆ ಬೇಕಾದ ದಾಖಲಾತಿಗಳನ್ನು ಕೇಳಿದಾಗ ಗೂಡ್ಸ್ ವಾಹನ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಹಿಂದೂ ಜಾಗರಣೆ ವೇದಿಕೆಯ ಹುಡುಗರು 112 ಸಂಖ್ಯೆಗೆ ಕರೆ ಮಾಡಿದ್ದಾರೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ತುಂಗ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾರ್ಗಲ್ ನಿಂದ ಹೊರಟ ಗೂಡ್ಸ್ ವಾಹನವು ತುಮಕೂರಿನ ಬಳಿ ತೆರಳುತ್ತಿರುವುದು ತಿಳಿದು ಬಂದಿದೆ ತುಂಗಾ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
- ಶಿವಮೊಗ್ಗ-ಗ್ರಾಮ ದೇವತೆ ಜಾತ್ರೆಗೆ ಯುವಕರಿಂದ ಕೆರೆ ಬೇಟೆ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿವೆ. ಸೊರಬ ತಾಲೂಕಿನ ಜನತೆ ಕೆರೆಯನ್ನು ಅತ್ಯಂತ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. ಕೆರೆಯನ್ನು ತಮ್ಮ ಜಾನಪದ ಕ್ರೀಡೆಗೂ ಬಳಸುತ್ತಾರೆ. ಬೇಸಿಗೆ ಪ್ರಾರಂಭವಾದರೆ ಇಲ್ಲಿ ಕೆರೆ ಬೇಟೆ ಸುಗ್ಗಿ ಪ್ರಾರಂಭವಾಗುತ್ತದೆ. ಅದರಂತೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷ ಗಳಿಂದ ಸ್ಥಗಿತವಾಗಿದ್ದ ಕೆರೆ ಬೇಟೆ ಯನ್ನು ಇದೀಗ ಮತ್ತೆ ನಡೆಸಿದ್ದಾರೆ. ಕೆರೆಬೇಟೆ ಅಂದ್ರೆ, ಗ್ರಾಮದ ಕೆರೆಯ ಮೀನುಗಳನ್ನು ಹಿಡಿಯುವುದು. ಯಾರು ಹೆಚ್ಚು ಮೀನುಗಳನ್ನು ಹಿಡಿಯುತ್ತಾರೋ ಅವರಿಗೆ ಬಹುಮಾನವೂ ಇರುತ್ತದೆ. ಕೆರೆಬೇಟೆಯಲ್ಲಿ ದೊರೆತ ಮೀನು ಗಳನ್ನು ಹಿಡಿದವರು ಮನೆಗೆ ತೆಗೆದುಕೊಂಡು ಹೋಗಬಹುದು. ಕಳೆದ 30 ವರ್ಷಗಳಿಂದ ಸ್ಥಗಿತ ವಾಗಿದ್ದ ಕೆರೆಬೇಟೆಯನ್ನು ಗ್ರಾಮದ ಯುವಕರು ಸೇರಿ ಪುನಃ ಪ್ರಾರಂಭಿ ಸಿದ್ದಾರೆ. ಪ್ರತಿ ಕೆರೆಯ ಬೇಟೆಗೂ ಸಹ ಒಬ್ಬರಿಗೆ ಒಂದು ಕುಣಿ 230 ರೂ. ನಿಗದಿ ಮಾಡಿದ್ದರು. ಹೀಗೆ ಕುಣಿಗೆ ಹಣ ನೀಡಿದವರಿಗೆ ಕೆರೆ ಬೇಟೆಗೆ ಅವಕಾಶ ನೀಡಲಾಗುತ್ತದೆ. ಹೀಗೆ ಅವಕಾಶ ಪಡೆದವರು ಒಮ್ಮಲೆ ಕೆರೆಗೆ ನುಗ್ಗಿ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿಯಬಹುದು. ಕೆರೆಗೆ ಹೋದವರು ಮೊದಲು ನೀರು ಕುಣಿಹಾಕುತ್ತಾರೆ. ಅದರೊಳಗೆ ಸಿಲುಕುವ ಮೀನು ಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರಂತೆಯೇ ಈ ಬಾರಿ ಈ ಚಿಟ್ಟೂರು ಕೆರೆಗೆ ಒಮ್ಮೆಲೆ ನೂರಾರು ಜನ ಇಳಿದು ಭರ್ಜರಿ ಕೆರೆಬೇಟೆ ನಡೆಸಿದ್ದಾರೆ. ಕೆರೆ ಬೇಟೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ. ಮಳೆಗಾಲದಲ್ಲಿ ಮೀನಿನ ಮರಿಗಳನ್ನು ಈ ಕೆರೆಗಳಿಗೆ ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆ ಯಲ್ಲಿ ನೀರು ಕಡಿಮೆ ಆಗುತ್ತಿ ದ್ದಂತೆಯೇ ಕೆರೆಬೇಟೆಗೆ ಸೂಕ್ತ ಸಮಯವಾಗಿರುತ್ತದೆ. ಚಿಟ್ಟೂರಿನಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಆಂಜನೇಯನ ರಥೋತ್ಸವ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದ ದುಗ್ಗಮ್ಮನ ಜಾತ್ರೆ ಯನ್ನೂ ನಡೆಸಲಾಗುತ್ತದೆ. ಮುಂದಿನ ವರ್ಷ ದುಗ್ಗಮ್ಮನ ಜಾತ್ರೆ ನಡೆಸುವ ಸಲುವಾಗಿ ಕೆರೆ ಬೇಟೆ ನಡೆಸಲಾಗಿದೆ. ಕೆರೆ ಬೇಟೆಗೆ ಚಿಟ್ಟೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಯ ಜನತೆ ಸಹ ಆಗಮಿಸಿದ್ದರು. ಕೆರೆಬೇಟೆ ನಡೆದಾಗ ಗ್ರಾಮದಲ್ಲಿ ಜಗಳ ನಡೆದಿತ್ತು. ಅಂದಿನಿಂದ ಕೆರೆಬೇಟೆ ನಡೆದಿರಲಿಲ್ಲ. ಆದರೆ, ಮುಂದಿನ ಬಾರಿ ದುಗ್ಗಮ್ಮನ ಜಾತ್ರೆ ನಡೆಸಬೇಕಾಗಿರುವುದ ರಿಂದ ಈ ಬಾರಿ ಗ್ರಾಮದ ಯುವಕರೆಲ್ಲ ಸೇರಿ ಶಾಂತಿಯುತವಾಗಿ ಕೆರೆಬೇಟೆ ನಡೆಸಿದ್ದಾರೆ.1
- ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಮದುವೆ ದಿಬ್ಬಣಕ್ಕೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸುಮಾರು 50 ಜನರಿದ್ದ ಬಸ್ ಇರ್ಪಿನ ಕೆರೆ ಏರಿಯ ಬಳಿ ಉರುಳಿ ಬಿದ್ದಿದ್ದು, ಕಲ್ಲುಗಳ ಅಡಚಣೆಯಿಂದ ದೊಡ್ಡ ದುರಂತದಿಂದ ಪಾರಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.2
- ಶಿವಮೊಗ್ಗ ಜಿಲ್ಲೆಯಲ್ಲಿ 'ಹಸಿರೇ ಉಸಿರು' ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಇದು ಭೂಮಿಯನ್ನು ಉಳಿಸಲು ಮತ್ತು ಹಸಿರು ಕ್ರಾಂತಿಯನ್ನು ಬೆಂಬಲಿಸಲು ಮರಗಳನ್ನು ನೆಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.2
- Post by Karibasava Balal1
- ಚಳ್ಳಕೆರೆ ನಗರದಲ್ಲಿ ಸಚಿವ ಡಿ.ಸುಧಾಕರ್ ನೆನೆದು ಕಣ್ಣಿರು ಸುರಿಸಿದ ಮಹಿಳೆಯರು1
- ಡಾ॥ ಶಿವಕುಮಾರ ಮಹಾಸ್ವಾಮೀಜಿಗಳನ್ನು ಸ್ಮರಿಸಿದ ಬಿ.ಎಸ್. ಯಡಿಯೂರಪ್ಪನವರು ಚಿತ್ರದುರ್ಗದಲ್ಲಿ ನಡೆದ ಭವ್ಯ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ B. S. Yediyurappa ತಮ್ಮ ಭಾಷಣ ಆರಂಭಿಸುವ ಮುನ್ನ ಪರಮಪೂಜ್ಯ Dr. Shivakumara Swamiji ಅವರನ್ನು ಭಕ್ತಿಭಾವದಿಂದ ಸ್ಮರಿಸಿದರು. ಸಿದ್ದಗಂಗಾ ಶ್ರೀಗಳ ಸಮಾಜಸೇವೆ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಮಾನವೀಯ ಮೌಲ್ಯಗಳನ್ನು ನೆನೆದು ಯಡಿಯೂರಪ್ಪನವರು ಭಾವುಕರಾದ ಕ್ಷಣ ಕಾರ್ಯಕ್ರಮದಲ್ಲಿ ಗಮನಸೆಳೆಯಿತು. #BSYediyurappa #ShivakumaraSwamiji #Siddaganga #Chitradurga #KarnatakaNews #ASNNEWS24Kannada #BreakingNews #KannadaNews #PoliticalNews #YediyurappaSpeech1
- ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ, ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಇರಲಿದ್ದು, ಯಾವುದೇ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ.1
- ಉತ್ತರಾದಿ ಮಠ ಮತ್ತು ಶ್ರೀ ಸತ್ಯಾತ್ಮತೀರ್ಥರು ವಿದ್ಯಾರ್ಥಿ ಜೀವನಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಮಧ್ವ ಪರಂಪರೆ ಮತ್ತು ಮೂಲರಾಮನ ಆರಾಧನೆಯ ಮೂಲಕ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡಲಾಗುತ್ತಿದೆ.1