ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕ, ಶಿಕ್ಷಕರ ಕರ್ತವ್ಯ ಔರಾದ್: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕರ ಹಾಗೂ ಶಾಲೆಗಳ ಆದ್ಯ ಕರ್ತವ್ಯ ಎಂದು ಹೇಡಗಾಪುರ ಶ್ರೀ ದಾರುಕಲಿಂಗ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಸ್ಕಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಜ್ಞಾನ ಮೇಳ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳು ಆಧುನಿಕವಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವವರಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ದಿಸೆಯಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತವೆ ಎಂದು ಹೇಳಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಇಲ್ಲದೆ ಜೀವನವೇ ಇಲ್ಲ. ದೈನಂದಿನ ಪ್ರತಿಯೊಂದು ಕಾರ್ಯದಲ್ಲೂ ತಿಳಿದೋ ತಿಳಿಯದೆಯೋ ವಿಜ್ಞಾನವನ್ನು ನಾವು ಬಳಸುತ್ತೇವೆ. ವಿವಿಧ ಹಬ್ಬಗಳಂತೆ ವಿಜ್ಞಾನ ಮೇಳವೂ ಮಕ್ಕಳಿಗೆ ಮಹತ್ವದ ಹಬ್ಬವಾಗಿದೆ. ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು ಇಂತಹ ವಿಜ್ಞಾನ ಹಬ್ಬಗಳು ಸಹಕಾರಿ ಎಂದು ಹೇಳಿದರು. ಇಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಪ್ರಯೋಗ, ಚಟುವಟಿಕೆ, ಆಟ ಹಾಗೂ ಹಾಡಿನ ಮೂಲಕ ತಿಳಿದುಕೊಳ್ಳುವ ವಾತಾವರಣ ಇದೆ ಎಂದರು. ಪಿಡಿಒ ಸಂತೋಷ ಪಾಟೀಲ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಪಂಚಾಯತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಲೆಯಲ್ಲಿ ವಿಜ್ಞಾನ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು. ಶಿಕ್ಷಕ ಡಾ. ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಚಿದ್ರೆ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಬಸವರಾಜ ಪಾಂಚಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಆರ್ಪಿ ಜ್ಯೋತಿ ಜಿರ್ಗೆ, ಶಿವಾನಂದ ಸ್ವಾಮಿ, ಪತ್ರಕರ್ತ ಮಲ್ಲಪ್ಪ ಗೌಡಾ, ಶಿವಾಜಿ ಬಿರಾದಾರ್, ಚಂದ್ರಶೇಖರ, ಸಿದ್ರಾಮ ಪಾಟೀಲ್, ಶಿವಕುಮಾರ ಚಿದ್ರೆ, ವಿಜಯಕುಮಾರ ಪಾಟೀಲ್, ವಾಣಿ ರಾಜಕುಮಾರ, ವೀರಶೆಟ್ಟಿ ಕುಮಟೆ, ಸಂತೋಷ ಚಾರೆ, ಮುಜೀಫ್, ಅನಿಲ್ ಹಟ್ಕರ್, ಶಿಲ್ಪಾ ಪಾಟೀಲ್, ಬಸವರಾಜ ಕಾಡೆ, ಈಶ್ವರಯ್ಯ ಸ್ವಾಮಿ, ಬಸವರಾಜ ಹಟ್ಕರ್, ಗುರುಪಾದಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿಗಳಾದ ನುವೇದಿತಾ, ಶಾಲಿನಿ, ಮಹಾದೇವ ಹಾಗೂ ಬಸವಲಿಂಗ ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಗುರು ಶಿವಪುತ್ರ ಮುಕ್ರಂಬೆ ಸ್ವಾಗತಿಸಿದರು. ನವನಾಥ ಹಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ತಂಬಾಕೆ ವಂದಿಸಿದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕ, ಶಿಕ್ಷಕರ ಕರ್ತವ್ಯ ಔರಾದ್: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕರ ಹಾಗೂ ಶಾಲೆಗಳ ಆದ್ಯ ಕರ್ತವ್ಯ ಎಂದು ಹೇಡಗಾಪುರ ಶ್ರೀ ದಾರುಕಲಿಂಗ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಸ್ಕಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಜ್ಞಾನ ಮೇಳ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳು ಆಧುನಿಕವಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವವರಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ದಿಸೆಯಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತವೆ ಎಂದು ಹೇಳಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಇಲ್ಲದೆ ಜೀವನವೇ ಇಲ್ಲ. ದೈನಂದಿನ ಪ್ರತಿಯೊಂದು ಕಾರ್ಯದಲ್ಲೂ ತಿಳಿದೋ ತಿಳಿಯದೆಯೋ ವಿಜ್ಞಾನವನ್ನು ನಾವು ಬಳಸುತ್ತೇವೆ. ವಿವಿಧ ಹಬ್ಬಗಳಂತೆ ವಿಜ್ಞಾನ ಮೇಳವೂ ಮಕ್ಕಳಿಗೆ ಮಹತ್ವದ ಹಬ್ಬವಾಗಿದೆ. ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು ಇಂತಹ ವಿಜ್ಞಾನ ಹಬ್ಬಗಳು ಸಹಕಾರಿ ಎಂದು ಹೇಳಿದರು. ಇಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಪ್ರಯೋಗ, ಚಟುವಟಿಕೆ, ಆಟ ಹಾಗೂ ಹಾಡಿನ ಮೂಲಕ ತಿಳಿದುಕೊಳ್ಳುವ ವಾತಾವರಣ ಇದೆ ಎಂದರು. ಪಿಡಿಒ ಸಂತೋಷ ಪಾಟೀಲ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಪಂಚಾಯತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಲೆಯಲ್ಲಿ ವಿಜ್ಞಾನ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು. ಶಿಕ್ಷಕ ಡಾ. ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಚಿದ್ರೆ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಬಸವರಾಜ ಪಾಂಚಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಆರ್ಪಿ ಜ್ಯೋತಿ ಜಿರ್ಗೆ, ಶಿವಾನಂದ ಸ್ವಾಮಿ, ಪತ್ರಕರ್ತ ಮಲ್ಲಪ್ಪ ಗೌಡಾ, ಶಿವಾಜಿ ಬಿರಾದಾರ್, ಚಂದ್ರಶೇಖರ, ಸಿದ್ರಾಮ ಪಾಟೀಲ್, ಶಿವಕುಮಾರ ಚಿದ್ರೆ, ವಿಜಯಕುಮಾರ ಪಾಟೀಲ್, ವಾಣಿ ರಾಜಕುಮಾರ, ವೀರಶೆಟ್ಟಿ ಕುಮಟೆ, ಸಂತೋಷ ಚಾರೆ, ಮುಜೀಫ್, ಅನಿಲ್ ಹಟ್ಕರ್, ಶಿಲ್ಪಾ ಪಾಟೀಲ್, ಬಸವರಾಜ ಕಾಡೆ, ಈಶ್ವರಯ್ಯ ಸ್ವಾಮಿ, ಬಸವರಾಜ ಹಟ್ಕರ್, ಗುರುಪಾದಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿಗಳಾದ ನುವೇದಿತಾ, ಶಾಲಿನಿ, ಮಹಾದೇವ ಹಾಗೂ ಬಸವಲಿಂಗ ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಗುರು ಶಿವಪುತ್ರ ಮುಕ್ರಂಬೆ ಸ್ವಾಗತಿಸಿದರು. ನವನಾಥ ಹಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ತಂಬಾಕೆ ವಂದಿಸಿದರು.
- Post by Kalyan karanataka news channel1
- ಅಫಜಲಪುರ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ: ಡಾ.ಮುರುಘರಾಜೇಂದ್ರ ಶ್ರೀಗಳು. ಕುಬೇರ ಕರಜಗಿಯ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರೆ.1
- Post by Nava karnataka News channel1
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಡ್ಯಾಮ್ ಮೇಲೆ ಮೊಸಳೆ ವಾಕ್ ಮಾಡುತ್ತಿರುವುದು ಕಂಡು ಸಿಬ್ಬಂದಿಗಳು ಮೊಸಳೆಯ ವಿಡಿಯೋ ಮಾಡಿದ್ದಾರೆ1
- ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ‘ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ’ ವತಿಯಿಂದ ಮಾರ್ಚ್ 11ರಂದು ರಾಯಚೂರು ಬಂದ್ಗೆ ಕರೆ ನೀಡಲಾಗಿದೆ ಎಂದು ಸಮಿತಿಯ ಮುಖಂಡ ಎಂ. ವಿರುಪಾಕ್ಷಿ ತಿಳಿಸಿದರು. ನಗರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಸರ್ಕಾರ ಹಳೆಯ ಮೀಸಲಾತಿಯಲ್ಲೇ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವುದನ್ನು ಮಾದಿಗ ಸಮುದಾಯ ಖಂಡಿಸಿದೆ ಎಂದು ಹೇಳಿದರು. ಈ ಬಂದ್ನಲ್ಲಿ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಗಳು, ಯುವಜನರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.1
- ವಿಜಯಪುರ: ಮಾರ್ಚ್ 15 ರಂದು ನಗರದಲ್ಲಿ ಪ್ರತಿಭಟನೆ ವಿಜಯಪುರದಲ್ಲಿ ಮಂಗಳವಾರ ಎಐಟಿಯು ಸಂಘಟನೆಯ ರಾಜ್ಯ ಖಜಾಂಚಿ ವೀರೇಶ ಅವರು ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟರೆ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತಂದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಮಾರ್ಚ್ 15 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.1
- ಬೇಸಿಗೆ ಬಿಸಿ: ಮಾಗಡಿಯ 56 ಗ್ರಾಮಗಳಿಗೆ ತಪ್ಪಲಿದೆ ನೀರಡಿಕೆ; ಕುಡಿಯುವ ನೀರಿಗಾಗಿ ಸರ್ಕಾರದ ಮಾಸ್ಟರ್ ಪ್ಲಾನ್! #JB_News_Kannada1
- ವಿಜಯಪುರ: ಎಲ್ಪಿಜಿ ಗ್ಯಾಸ್ ಕೊರತೆ ಆಟೋ ಚಾಲಕರ ಪರದಾಟ ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ಅಡಚಣೆಯುಂಟಾಗಿ, ವಿಜಯಪುರ ನಗರದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆ ಎದುರಾಗಿದೆ. ಇದರಿಂದಾಗಿ ಆಟೋ ಚಾಲಕರು ಗ್ಯಾಸ್ ಬಂಕ್ಗಳ ಬಳಿ ಕಿಲೋಮೀಟರ್ಗಟ್ಟಲೆ ಸರತಿ ನಿಲ್ಲುವಂತಾಗಿದೆ. 90 ರೂ.ಗೆ ಮಾರಾಟವಾಗುತ್ತಿರುವ ಗ್ಯಾಸ್ನಿಂದಾಗಿ ಆಟೋ ಚಾಲಕರ ದಿನನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ.1