Shuru
Apke Nagar Ki App…
ಗಣರಾಜ್ಯೋತ್ಸವದಂದು ವಿಯೆಟ್ನಾದಲ್ಲಿ ಸೇವೆ ಸಲ್ಲಿಸುತ್ತಿರುವ ಆದಿನಾಥ ಖೇಮಲಾಪುರೆ ಇವರಿಂದ ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ ವಿತರಣೆ.
Manohar megeri
ಗಣರಾಜ್ಯೋತ್ಸವದಂದು ವಿಯೆಟ್ನಾದಲ್ಲಿ ಸೇವೆ ಸಲ್ಲಿಸುತ್ತಿರುವ ಆದಿನಾಥ ಖೇಮಲಾಪುರೆ ಇವರಿಂದ ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ ವಿತರಣೆ.
More news from ಕರ್ನಾಟಕ and nearby areas
- ಬೆಳಗಾವಿ ಬ್ರೇಕಿಂಗ್ ಬೆಳಗಾವಿಯಲ್ಲಿ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಯಿಂದ ಧ್ವಜಾರೋಹಣ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 77 ನೇ ಗಣರಾಜ್ಯೋತ್ಸವ ಸಮಾರಂಭ ಧ್ವಜಾರೋಹಣ ಬಳಿಕ ಪರೇಡ್ ಪರಿವೀಕ್ಷಣೆ, ಪೊಲೀಸ್ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತ ಧ್ವಜಾರೋಹಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ್ ಕೋರೆ, ಶಾಸಕ ಆಶೀಫ್ ಸೇಠ್, ಡಿಸಿ ಮೊಹಮ್ಮದ್ ರೋಷನ್ ಭಾಗಿ ಮೇಯರ್, ಪಾಲಿಕೆ ಸದಸ್ಯರು, ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ2
- ಸಂವಿಧಾನ ಆಶಯಗಳನ್ನು ಗೌರವಿಸುವ ಮೂಲಕ ನಾವೆಲ್ಲ ಭಾರತ ದೇಶದ ಕಾನೂನು ಪಾಲಿಸೋಣ : ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅಥಣಿ : ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಸಮಾನತೆಯ ಬಾಳನ್ನು ನೀಡಿದ ಸಂವಿಧಾನ ಜಾರಿಗೆ ಬಂದ ದಿನವಾಗಿದೆ ನಾವೆಲ್ಲ ಸಂವಿಧಾನ ಆಶಯ ಗಳನ್ನು ಗೌರವಿಸುವ ಮೂಲಕ ನಾವೆಲ್ಲ ಭಾರತ ದೇಶದ ಕಾನೂನು ಪಾಲಿಸೋಣ ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಅಥಣಿ ತಾಲೂಕು ಆಡಳಿತದಿಂದ ಜರುಗಿದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಶ್ವರತ್ನ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ದಿನ.ವಿಶ್ವದಲ್ಲಿ ಸ್ವತಂತ್ರ ಸ್ವಾವಲಂಬಿ ವಾಕ್ ಸ್ವತಂತ್ರ ಹಕ್ಕು, ಸಮಾನತೆ ಐಕ್ಯತೆ ನಮ್ಮ ಸಂವಿಧಾನದಲ್ಲಿ ಇದೆ. ದೇಶದ ಸ್ವಾತಂತ್ರಕ್ಕೆ ಹಾಗೂ ಘನತೆಗೆ ಶ್ರಮಿಸಿದ ಎಲ್ಲ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು. ಅಥಣಿ ಕ್ಷೇತ್ರವನ್ನು ಮಾದರಿಯಾಗಿಸಲು ನಿರಂತರವಾಗಿ ಎಲ್ಲ ಅಧಿಕಾರಿಗಳ ಸಹಕಾರದೊಂದಿಗೆ ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಅಥಣಿಯನ್ನು ಸುಂದರ ವನ್ನಾಗಿ ಮಾಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ.ಜೋಡು ಕೆರೆ ಅಭಿವೃದ್ಧಿಗೆ 25 ಕೋಟಿ, ಭಾಗೀರಥಿ ನಾಲಾ ಅಭಿವೃದ್ಧಿಗೆ 10ಕೋಟಿ ಮಂಜೂರಾಗಿಸುವ ಜೊತೆಗೆ ಕಾಮಗಾರಿ ಪ್ರಾರಂಭವಾಗಿದೆ.ಬೈ ಪಾಸ್ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ,ಅಥಣಿ ಪಟ್ಟಣಕ್ಕೆ 24/7 ಕುಡಿಯುವ ನೀರು ಪೂರೈಸಲು ಕ್ರಮ. ಪುಣೆಯ ಮಹಾನಗರ ಪಾಲಿಕೆಯಷ್ಟು ಹಳೆಯದಾದ ಅಥಣಿ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲದರ್ಜೆಗೆ ಏರಿಸಿದ ಮುಖ್ಯ ಮಂತ್ರಿಗಳಿಗೆ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಹಣೆ ಪಟ್ಟಿ ಹೋಗಲುಗೋವಿಂದ್ ರಾಜ ಸಮಿತಿ ಮೂಲಕ ವರದಿ ಸಲ್ಲಿಸಲಾಗಿದೆ. 50 ಕೋಟಿ ರೂ ವೆಚ್ಚದಲ್ಲಿ ತಂತಿ ರಹಿತ ವಿದ್ಯುತ್ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿ ದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪಟ್ಟಣದಲ್ಲಿ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಿದ್ದೇವೆ,ನಮ್ಮ ಪಶು ವೈದ್ಯಕಿಯ ಮಹಾವಿದ್ಯಾಲಯ ಕಟ್ಟಡ ಕೇಂದ್ರ ತಂಡದಿಂದ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಕೃಷಿ ಕಾಲೇಜು, ಅರಟಾಳ ನಂದಗಾಂವದಲ್ಲಿ ಎರಡು ಪಶು ಆಸ್ಪತ್ರೆ ಮಂಜೂರು, ಉತ್ತಮ ಶಿಕ್ಷಣಕ್ಕೆ 9 ಶಾಲೆಗಳಿಗೆ ಕಟ್ಟಡ ಮಂಜೂರು, ಮೂರು ಕೆಪಿಎಸ್ ಶಾಲೆಗಳು ಸತ್ತಿ, ಕೋಹಳ್ಳಿ, ಕೊಕಟನೂರ್, ಏಕಕಾಲದಲ್ಲಿ ಅಥಣಿ ಪಟ್ಟಣದಲ್ಲಿ ಎರಡು ಸರ್ಕಾರಿ ಪ್ರಾಢಶಾಲೆ ಮಂಜೂರು, ಅರಟಾಳ, ಸಪ್ತಸಾಗರ, ಕೀಲಾರದೊಡ್ಡಿ ಸೇರಿದಂತೆ ಗ್ರಾಮೀಣ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂದು ಈ ಶಾಲೆಗಳ ಸ್ಥಾಪನೆ ಮಾಡಲಾಗಿದೆ.ಅಲ್ಲದೇ ಒಂಬತ್ತು ಕೆರೆಗೆ ನೀರು ತುಂಬಿ ಸಣ್ಣ ನೀರಾವರಿ ಇಲಾಖೆ ಮಂತ್ರಿಗಳ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದ್ದೇವೆ. ಕೊಟ್ಟಲಗಿ ಅಮ್ಮಾಜೇಶ್ವರಿ, ಬಸವೆಶ್ವರ ನೀರಾವರಿ ಯೋಜನೆ ಬರುವ ಹಂಗಮಿನಲ್ಲಿ ಆರಂಭವಾಗಲಿವೆ. ಅಥಣಿ ತಾಲೂಕಿನಲ್ಲಿ 76 ಲಕ್ಷ ಟನ್ ರಾಜ್ಯದಲ್ಲಿಯೇ ಅತಿಹೆಚ್ಚು ಕಬ್ಬು ಬೆಳೆ ಬೆಳೆಯಲಾಗುತ್ತದೆ. ಜೊತೆಗೆ ಕೊಟ್ಟಲಗಿ ಅಮ್ಮಾಜೇಶ್ವರಿ, ಬಸವೆಶ್ವರ ಯೋಜನೆ ಜಾರಿ ನಂತರ ಒಂದು ಕೋಟಿ ಟನ್ ಕಬ್ಬು ಬೆಳೆ ಹೆಚ್ಚಾಗಲಿದೆ. ತಾಲೂಕಿನಲ್ಲಿ ಗುಣಮಟ್ಟದ ವಿದ್ಯುತ್ ಗಾಗಿ ನಾಲ್ಕು 110 ಕೆ ವಿ ಕೇಂದ್ರ ಸ್ಥಾಪನೆ ಮಾಡುತ್ತಿದ್ದೇವೆ. ಯಲ್ಲಡಗಿಯಲ್ಲಿ 32 ಕೋಟಿ ವೆಚ್ಚದಲ್ಲಿ ಸವದಿ, ತೆಲಸಂಗ, ಸಂಕೋನಟ್ಟಿಯಲ್ಲಿ ಕೂಡ ಈ ಕೇಂದ್ರಗಳನ್ನು ಆರಂಭಿಸಲಾಗುವುದು. ಕೋಕಟನೂರ ಯಲ್ಲಡಗಿಯಲ್ಲಿ ಸೌರ್ ವಿದ್ಯುತ್ ಕೇಂದ್ರಗಳ ಸ್ಥಾಪನೆ ವಿದ್ಯುತ್ ಸ್ವಾವಲಂಬಿ ತಾಲೂಕು ಮಾಡಲು ಪ್ರಯತ್ನ. ವಿಶಿಷ್ಟ ತಾಲೂಕಿನ ರಚನೆ ಯೋಜನೆ ನಮ್ಮ ಕನಸು, 36 ಕೋಟಿ ರೂಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಸತ್ತಿ ರಸ್ತೆಯಲ್ಲಿ ವಸತಿ ಶಾಲೆ ಸ್ಥಾಪನೆ,2 ಸಾವಿರ ಇಸ್ವಿಯಿಂದ ಪ್ರಯತ್ನ ಪಟ್ಟು ಸಂಕಿರ್ಣ ಶಾಲೆ ಯಲ್ಲಿ 60ಲಕ್ಷ ಖರ್ಚು ಮಾಡಿ ಎಲ್ಲ ಅಭಿವೃದ್ಧಿ ಮಾಡಿದ್ದೇವೆ.ಹಿಪ್ಪರಗಿ ಬ್ಯಾರೇಜ್ 22 ಗೆಟ್ ಕಿತ್ತು ಹೋಗಿ 2.5 ಟಿ ಎಂ ಸಿ ಹರಿದು ಹೋಗಿದೆ. 35 ಕೋಟಿ ವೆಚ್ಚದಲ್ಲಿ ಹೊಸದಾಗಿ ಗೆಟಗಳನ್ನು ಕೂಡಿಸಲಾಗುವುದು. ಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ಮಹಾರಾಷ್ಟ್ರದಿಂದ 2 ಟಿ ಎಂ ಸಿ 8 ಕೋಟಿ ನೀಡಿಯಾದರೂ ನೀರು ತರಲು ನಮ್ಮ ಜಲಸಂಪನ್ಮೂಲ ಸಚಿವ ಉಪಮುಖ್ಯಮಂತ್ರಿ ಡಿ ಕೆ ಶಿವುಕುಮಾರ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಉತ್ತಮ ಅಧಿಕಾರಿಗಳು ನಮ್ಮ ಜೊತೆಗೆ ಕೈ ಜೋಡಿಸುತ್ತಿದ್ದೂ ಕಾರ್ಯ ಪ್ರಗತಿ ಗೆ ಸಹಕಾರಿಯಾಗಿದೆ. ಹಲವಾರು ಅಭಿವೃದ್ಧಿ ಕಾರ್ಯದ ಮೂಲಕ ಅಥಣಿ ನಾಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಸಂಪೂರ್ಣ ಅಥಣಿ ತಾಲೂಕಿನ ಅಭಿವೃದ್ಧಿಗೆ ಬದ್ದವಿದ್ದು ಅಥಣಿ ಸರ್ವಾoಗಿಣ ಅಭಿವೃದ್ಧಿಗೆ ಸರ್ವನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಅಥಣಿ ತಹಸೀಲ್ದಾರ್ ಸಿದ್ರಾಯ ಭೋಸಗಿ ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ರವರಿಂದ ಪೊಲೀಸ್ ಗೌರವ ಗೌರವವಂದನೆ ಸ್ವೀಕರಿಸಿ ದ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವದ ನುಡಿಗಳನಾಡುತ್ತ ಭಾರತ ಬಹುದೊಡ್ಡ ಗಣರಾಜ್ಯವಾಗಿದೆ. ಬಹುದೊಡ್ಡ ಸಂವಿಧಾನ ಹೊಂದಿರುವ ದೇಶ. ಇಂದು ಪೂರ್ಣ ಸ್ವರಾಜ್ಯ್ ದಿನ. ಡಾ. ಬಿ ಆರ್ ಅಂಬೇಡ್ಕರ್ ಜಗತ್ತಿನ ಮಾದರಿ ಸಂವಿಧಾನ ರಚಿಸಿದರು. ವೈವಿಧ್ಯತೆಯಲ್ಲಿ ಏಕತೆ ತೋರಿಸುವ ದಿನ. ದೇಶದ ಏಳ್ಗೆಯಲ್ಲಿ ಶ್ರಮಿಸಿದ ಶ್ರಮಿಸುತ್ತಿರುವ ಎಲ್ಲರಿಗೂ ನಮನ ಸಲ್ಲಿಸಿದರು.. ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕoಚಿ,ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದಾರ್ಥ ಸಿಂಗೆ ವೇದಿಕೆಯಲ್ಲಿದ್ದರು. ತಾಪ ಆಡಳಿತ ಅಧಿಕಾರಿಗಳಾದ ಬಸವರಾಜ ಹೆಗ್ಗನಾಯಕ ಮಾತನಾಡಿದರು. ಈ ವೇಳೆ ವಿವಿಧ ಶಾಲಾ ಮಕ್ಕಳಿಂದ ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ,ಡಿವೈಎಸ್ಪಿ ಪ್ರಶಾಂತ ಜಿ ಮುನ್ನೊಳಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ,ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ ,ದತ್ತಾ ವಾಸ್ಟರ್, ಗ್ರೇಡ್ 2 ತಹಸಿಲ್ದಾರ ಬಿ ವೈ ಹೊಸಕೇರಿ,ಉಪ ತಹಶೀಲ್ದಾರ ಮಹಾದೇವ ಬಿರಾದಾರ, ಅಭಿಯಂತರ್ ವೀರಣ್ಣ ವಾಲಿ, ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಮಲ್ಲಿಕಾರ್ಜುನ ಮಗದುಮ್, ನಿಂಗನಗೌಡ ಬಿರಾದಾರ,ಎ ಆರ್ ಪಾಟೀಲ್ ಮಾಜಿ ಸೈನಿಕರು, ಸಿ ಪಿ ಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ , , ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ವೆಂಕಟೇಶ್ ಕುಲಕರ್ಣಿ. ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ,ನೀರಾವರಿ ಇಲಾಖೆ ಅಭಿಯಂತ ಪ್ರವೀಣ ಹುಣಸಿಕಟ್ಟಿ ಎಂ.ಡಿ ನಾಮದಾರ, ಪುರಸಭೆಯ ಸರ್ವಸದಸ್ಯರು ತಾಲೂಕು ಪಂಚಾಯತ್ ಸದಸ್ಯರು ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಪೊಲೀಸ್ ಇಲಾಖೆ, ವಿವಿಧ ಸಂಘಟನೆಯ ಪದಾಧಿಕಾರಿಗಳು ಶಾಲಾ ಶಿಕ್ಷಕರು, ಭಾರತ ಸೇವಾ ದಳ, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸಾರ್ವಜನಿಕರು ಉಪಸ್ಥಿತರಿದ್ದರು.2
- 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ : ಶಾಸಕ ಎನ್.ಎಚ್.ಕೋನರಡ್ಡಿ ನವಲಗುಂದ : ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರ ಪಾಲನೆ ಮಾಡಬೇಕು ಡಾ. ಬಿ.ಆರ್.ಅಂಬೇಡ್ಕರ ನೀಡಿರುವಂತಹ ಸಂವಿಧಾನ ಅಮೂಲ್ಯವಾದದ್ದು ಪ್ರತಿಯೊಬ್ಬ ಭಾರತಿಯ ಪ್ರಜೆ ಸಂವಿಧಾನವನ್ನು ಪಾಲನೆ ಮಾಡಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಾ ಆಡಳಿತದಿಂದ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಜಲ್ವಂತ ಸಮಸ್ಯೆಯಾದ ಬೆಣ್ಣೆಹಳ್ಳದ ಅಭಿವೃದ್ದಿಗಾಗಿ ಸುಮಾರು 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸಿ ಚಾಲನೆ ನೀಡಲಿದ್ದಾರೆ. ರೂ. 350 ಕೋಟಿ ಅಭಿವೃದ್ದಿಗೆ ನಿನ್ನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂಬ ಭರವಸೆ ನೀಡಿದ್ದಾರೆ ನವಲಗುಂದ ಪಟ್ಟಣಕ್ಕೆ ರೂ. 30 ಕೋಟಿ ಒಳಚರಂಡಿ ಯೋಜನೆ, ಅಣ್ಣಿಗೇರಿ ಮಿನಿ ವಿಧಾನಸೌಧಕ್ಕೆ ರೂ. 15 ಕೋಟಿ ನೂತನ ತಾಲೂಕ ಕಛೇರಿ, ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳ ಅಡಿಗಲ್ಲು ಪೂಜೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸುವರು. ಇದೇ ಸಂದರ್ಬದಲ್ಲಿ ಪ್ರಗತಿ ಪರ ರೈತ ಶೌಕತ ಲಂಬೂನವರ ಅವರನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ. 50 ಸಾವಿರ ಚಕ್ ವಿತರಿಸಲಾಯಿತು. ದ್ವಜಾರೋಹಣವನ್ನು ತಹಶೀಲ್ದಾರ ಸುಧೀರ ಸಾವಕಾರ ಅವರು ನೇರವೇರಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ರವಿ ಕಪ್ಪತ್ತನವರ, ಹಾಗೂ ತಾಲೂಕಾ ಅಡಳಿತಾಧಿಕಾರಿಗಳು ಉಪಸ್ಥಿತರಿದ್ದರು.4
- अब ये Business आपको कमा कर देगा #tranding #marketkibaat #sadarbazar #business1
- "ಜೈ ಭೀಮ್ ಯುವ ಘರ್ಜನೆ ಸಂಘಟನೇಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ " ಬಾಗಲಕೋಟೆ ಜಿಲ್ಲೆಯಲ್ಲಿ ಮಂಜುನಾಥ್ ಆರ್ ಮಾದರ ಅವರ ನೇತೃತ್ವದಲ್ಲಿ ನೆರವೇರಿತು.1
- ಬೀಳಗಿ ತಾಲೂಕಿನ ಬಿಳಗಿ ಪಟ್ಟಣದಲ್ಲಿ ಜನವರಿ 24 ರಂದು ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್, ಬೀಳಗಿ ತಾಲೂಕಾ ಘಟಕದ ವತಿಯಿಂದ ಭೀಮ ಕೋರೆಗಾವ್ ವಿಜಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.1
- ಬೆಳಗಾವಿ ಬ್ರೇಕಿಂಗ್ ಬಗೆದಷ್ಟು ಬಯಲಾಗ್ತಿದೆ 400 ಕೋಟಿ ರಾಬರಿ ಪ್ರಕರಣ ಬೆಳಗಾವಿಯಲ್ಲಿ ಹೈಜಾಕ್ ಆಗಿರೋ ಹಣದ ಹಿಂದೆ ರಾಜಕೀಯ ನಾಯಕನ ನಂಟು ಮಧ್ಯವರ್ತಿಗಳನ್ನೇ ಬಳಸಿಕೊಂಡು ದಂಧೆ ಮಾಡ್ತಿದ್ದನಾ ಗುಜರಾತ್ ಪ್ರಭಾವಿ ರಾಜಕಾರಣಿ ಎರಡು ಸಾವಿರ ಮುಖ ಬೆಲೆ ನೋಟು ಸಾಗಾಟ ಹೋಗ್ತಿರೋದಾದರು ಎಲ್ಲಿಗೆ? ಬ್ಲಾಕ್ ನಿಂದ ವೈಟ್ ಗೆ ಕನ್ವರ್ಟ ಮಾಡೋಕೆ ಬಳಕೆ ಆಗಿದೇಯಾ ಗುಜರಾತ್ ನ ಆಶ್ರಮ 400ಕೋಟಿ ಹಣದ ಬಗ್ಗೆ ಮಾತನಾಡಿದ ವೈರಲ್ ಸಂಭಾಷಣೆ ಹೇಳುತ್ತೆ ಭಯಾನಕ ಸತ್ಯ! ಬ್ಲಾಕನಿಂದ ವೈಟ ದಂಧೆಗೆ ಬಳಕೆ ಆಗ್ತಿದ್ಯ ಗುಜರಾತಿನ ಆಶ್ರಮ ಗುಜರಾತ್ ಮೂಲದ ಆಶ್ರಮದಲ್ಲಿಯೇ ಆಗ್ತಿತ್ತಾ ಹಣದ ಎಕ್ಸ್ಚೇಂಜ್ ಬೆಚ್ಚಿ ಬೀಳಿಸುತ್ತಿದೆ ಆರೋಪಿಗಳು ಮಾತನಾಡಿರುವ ಸಂಭಾಷಣೆ ದರೋಡೆ ಪ್ರಕರಣದಲ್ಲಿ ಇದ್ದಾರಾ ಕರ್ನಾಟಕದ ಪೊಲೀಸರು ಈವರೆಗೂ ಆರು ಜನರ ಬಂಧನ ಇದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಭಾಗಿ ಮಾಹಿತಿ ವೈರಲ್ ಆಗಿರೋ ಆಡಿಯೋಗಳು ನಿಜಕ್ಕೂ ಅಸಲಿನಾ? ಅಥವಾ ನಕಲಿನಾ ಎಂಬುದರ ಬಗ್ಗೆ ತನಿಖೆ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳಿಂದ ತನಿಖೆ ಆಡಿಯೋ ಸಂಭಾಷಣೆ ಹಾಗೂ ವ್ಯಾಟ್ಸಪ ಕಾಲ ಸಂಭಾಷಣೆ ಆಧಾರದ ಮೇಲೆ ವಿಚಾರಣೆ ಸದ್ಯ ವಿರಾಟ ಬಂಧಿಸಿ ತನಿಖೆ ನಡೆಸುತ್ತಿರೋ ಮಹಾರಾಷ್ಟ್ರ ಪೊಲೀಸರು3
- Post by Yashwanth1
- ಗೋಬಿ ಮಂಚೂರಿಯ ಕೋಸುನಲ್ಲಿ ಹಾನಿಕಾರಕ ಹುಳುಗಳು* #ಗೋಬಿಮಂಚೂರಿ #ಗೋಬಿ #ನಮ್ಮಬೆಂಗಳೂರು #ಕರ್ನಾಟಕಫುಡ್ #ಬೆಂಗಳೂರುಫುಡ್1