Shuru
Apke Nagar Ki App…
ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಕೋಳಿಗಳ ಜೊತೆ ಕೋಳಿ ಅಂಗಡಿ ಮಾಲೀಕನು ಸಹ ಮೃತ ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಕೋಳಿಗಳ ಜೊತೆ ಕೋಳಿ ಅಂಗಡಿ ಮಾಲೀಕನು ಸಹ ಮೃತಪಟ್ಟಿರುವ ಘಟನೆ ಶಿವಮೊಗ್ಗದ ರಾಮನಗರದಲ್ಲಿ ನಡೆದಿದೆ. ಮೃತನನ್ನು ಹಾರನಹಳ್ಳಿ ನಿವಾಸಿ ಮುಶೇಖ್ ಮುಜೀಬ್ ಉರ್ ರಹಮಾನ್ (45) ಎಂದು ಗುರುತಿಸಲಾಗಿದೆ. ರಾಮನಗರದಲ್ಲಿ ಸವಳಂಗ ರಸ್ತೆ ಪಕ್ಕದಲ್ಲಿ ರಹಮಾನ್ ಕೋಳಿ ಅಂಗಡಿ ನಡೆಸುತ್ತಿದ್ದರು. ಸೋಮವಾರ ಸಂಜೆ ಮಳೆ ಗಾಳಿ ಜೊತೆಗೆ ಬಂದ ಸಿಡಿಲು ಮೊದಲು ಕೋಳಿ ಅಂಗಡಿ ಪಕ್ಕದ ಮರಕ್ಕೆ ಬಡಿದಿದೆ. ಸಿಡಿಲ ರಭಸಕ್ಕೆ ಮರದ ಜೊತೆಗೆ ಪಕ್ಕದ ಕೋಳಿ ಅಂಗಡಿಗೂ ಬಡಿದಿದೆ. ಇದರಿಂದ ಕೋಳಿ ಹಾಗೂ ಅಂಗಡಿಯಲ್ಲಿದ್ದ ಮಾಲೀಕ ರಹಮಾನ್ ಸಹ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
SANDEEP U. L
ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಕೋಳಿಗಳ ಜೊತೆ ಕೋಳಿ ಅಂಗಡಿ ಮಾಲೀಕನು ಸಹ ಮೃತ ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಕೋಳಿಗಳ ಜೊತೆ ಕೋಳಿ ಅಂಗಡಿ ಮಾಲೀಕನು ಸಹ ಮೃತಪಟ್ಟಿರುವ ಘಟನೆ ಶಿವಮೊಗ್ಗದ ರಾಮನಗರದಲ್ಲಿ ನಡೆದಿದೆ. ಮೃತನನ್ನು ಹಾರನಹಳ್ಳಿ ನಿವಾಸಿ ಮುಶೇಖ್ ಮುಜೀಬ್ ಉರ್ ರಹಮಾನ್ (45) ಎಂದು ಗುರುತಿಸಲಾಗಿದೆ. ರಾಮನಗರದಲ್ಲಿ ಸವಳಂಗ ರಸ್ತೆ ಪಕ್ಕದಲ್ಲಿ ರಹಮಾನ್ ಕೋಳಿ ಅಂಗಡಿ ನಡೆಸುತ್ತಿದ್ದರು. ಸೋಮವಾರ ಸಂಜೆ ಮಳೆ ಗಾಳಿ ಜೊತೆಗೆ ಬಂದ ಸಿಡಿಲು ಮೊದಲು ಕೋಳಿ ಅಂಗಡಿ ಪಕ್ಕದ ಮರಕ್ಕೆ ಬಡಿದಿದೆ. ಸಿಡಿಲ ರಭಸಕ್ಕೆ ಮರದ ಜೊತೆಗೆ ಪಕ್ಕದ ಕೋಳಿ ಅಂಗಡಿಗೂ ಬಡಿದಿದೆ. ಇದರಿಂದ ಕೋಳಿ ಹಾಗೂ ಅಂಗಡಿಯಲ್ಲಿದ್ದ ಮಾಲೀಕ ರಹಮಾನ್ ಸಹ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
More news from ಕರ್ನಾಟಕ and nearby areas
- ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ. ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್ನ್ನು ಸ್ಥಾಪಿಸಲಾಯಿತು. ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ. ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ. ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ: ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು, ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ, ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.1
- ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.3
- ಕಡೂರು : ಏ.2ರಂದು ಕಡೂರಿನಲ್ಲಿ ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವರ ದಾಸಿಮಯ್ಯ ಆಚರಣೆ ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ ಯೋಗೀಶ್ವರ ತಿಳಿಸಿದರು. ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸಭಾ ಕಾರ್ಯಕ್ರಮವು ಮಧ್ಯಾಹ್ನ 12ಗಂಟೆಗೆ ಪ್ರಾರಂಭವಾಗಲಿದೆ. ಸಮಾರಂಭಕ್ಕೂ ಮುನ್ನಾ ಬೆಳಿಗ್ಗೆ 10ಗಂಟೆಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಪೆಂಡಾಲ್ ವರೆಗೂ ದೇವರದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ. ಮೆರವಣಿಗೆ ನಡೆಸಲಾಗುತ್ತದೆ. ಹಂಪೆ ಹೇಮಕೂಟದ ಶ್ರೀ ದಯಾನಂದ ಪುರಿ ಸ್ವಾಮೀಜಿ, ಹಾಗೂ ಮಹಾರಾಷ್ಟ್ರ ಸೊಲ್ಲಾಪುರದ ಶ್ರೀ ಡಾ. ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ದೇವಾಂಗ ಸಂಘದ ತಾಲೂಕು ಅಧ್ಯಕ್ಷ ಎಚ್.ಎಲ್. ರಂಗನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಸಮಾಜದ ಬಂಧುಗಳು ಇರುವ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಜಿಲ್ಲಾದ್ಯಂತ 5,000ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾವೇಶದಲ್ಲಿ ಪಟ್ಟಣದ ಪ್ರಖ್ಯಾತಿ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಂತಹ ವಿಶಿಷ್ಟ ಕೊಡುಗೆ ನೀಡಿರುವ ದೇವರ ದಾಸಿಮಯ್ಯ ಅವರ 1046ನೇ ಜಯಂತಿಯನ್ನು ಕಡೂರಿನಲ್ಲಿ ಶೈಕ್ಷಣಿಕ,ರಾಜಕೀಯ, ಸಾಮಾಜಿಕವಾಗಿ ಸಂಘಟನೆ ಮೂಲಕ ಜಿಲ್ಲಾ ಮಟ್ಟದಲ್ಲಿ ದೇವಾಂಗ ಜನ ಜಾಗೃತಿ ಮತ್ತು ಸಂಘಟನಾ ಸಮಾವೇಶವನ್ನು ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಸಮಾವೇಶವನ್ನು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ.ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಮಾಜಿ ಸಚಿವರಾದ ಉಮಾಶ್ರೀ, ಎಂ ಡಿ ಲಕ್ಷ್ಮಿ ನಾರಾಯಣ್. ಶಾಸಕರುಗಳಾದ ಎಚ್ ಡಿ ತಮ್ಮಯ್ಯ. ಸಿ.ಟಿ ರವಿ, ಜಿ ಎಚ್ ಶ್ರೀನಿವಾಸ್, ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕರಾದ ವೈಎಸ್ವಿ ದತ್ತ, ಬೆಳ್ಳಿಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು, ಸಾಹಿತಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್, ರಾಜ್ಯ ಸಹ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ಕಾರ್ಯದರ್ಶಿ ಧನಪಾಲ್. ಎಚ್ ಎಲ್. ಶೇಖರಪ್ಪ. ಸಿಂಗಟಗೆರೆ ಸಿದ್ದಪ್ಪ. ಅರೆಕಲ್ ಪ್ರಕಾಶ್. ಎಚ್. ವೆಂಕಟೇಶ್ ಮೂರ್ತಿ. ಚಿಕ್ಕಪಟ್ಟಣಗೆರೆ ನಾಗರಾಜು, ಕುಮಾರಸ್ವಾಮಿ ಮತ್ತಿತರಿದ್ದರು.3
- Post by Suresh Belagere1
- ಚಳ್ಳಕೆರೆ ನಗರದಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಇಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಜೋರಾಗಿ ಆರಂಭವಾಗಿದೆ. ಜೆಸಿಬಿ ಯಂತ್ರಗಳ ಸದ್ದು ಮಧ್ಯೆ ಕಾರ್ಯಾಚರಣೆ ಮುಂದುವರಿದಿದ್ದು, ನಗರದಲ್ಲಿ ಚಟುವಟಿಕೆ ಹೆಚ್ಚಾಗಿದೆ. ಚಳ್ಳಕೆರೆ ನಗರಸಭೆಗೆ ಸೇರಿದ ನೆಹರು ಬೆಂಗಳೂರು ರಸ್ತೆ, ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಬಹುಕಾಲದಿಂದ ನಿರೀಕ್ಷಿಸಿದ್ದ ಕ್ರಮ ಇದೀಗ ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ದಿಟ್ಟ ಮಹಿಳಾ ಪೌರಾಕ್ತೆ ನಾಗವೇಣಿ ಮುಂದಾಳತ್ವ ವಹಿಸಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೋಲಿಸ್ ಇಲಾಖೆಯ ಬಿಗಿ ಬಂದೋಬಸ್ತಿನೊಂದಿಗೆ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರಸಭೆ ಆಸ್ತಿಗಳ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಲ್ಲಿ ಈ ಕ್ರಮದಿಂದ ನಡುಕ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.1
- ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ. ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.1
- *“ಸಣ್ಣ ಹೋಟೆಲ್ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು *ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ*4
- ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.1