Shuru
Apke Nagar Ki App…
ಪತ್ರಕರ್ತ ಅಮನ್ ಕೊಡಗಲಿ ನಿಧನ ; ಇಳಕಲ್ ಪತ್ರಕರ್ತರಿಂದ ಸಂತಾಪ.. ಪತ್ರಕರ್ತ ಅಮನ್ ಕೊಡಗಲಿ ನಿಧನ ಇಲಕಲ್ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ ಸಂತಾಪ ಸೂಚಿಸಿದರು.
ಶರಣಗೌಡ ಕಂದಕೂರ
ಪತ್ರಕರ್ತ ಅಮನ್ ಕೊಡಗಲಿ ನಿಧನ ; ಇಳಕಲ್ ಪತ್ರಕರ್ತರಿಂದ ಸಂತಾಪ.. ಪತ್ರಕರ್ತ ಅಮನ್ ಕೊಡಗಲಿ ನಿಧನ ಇಲಕಲ್ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ ಸಂತಾಪ ಸೂಚಿಸಿದರು.
More news from ಕರ್ನಾಟಕ and nearby areas
- ಇಳಕಲ್: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಕಂದಗಲ್ಲ ಗ್ರಾಮಸ್ಥರು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸೋಮವಾರದಂದು ಆಚರಿಸಿದರು. ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಕೊಂಡೆಗಳನ್ನು ಕಟ್ಟಿ, ಕೊರಳಿಗೆ ಗೆಜ್ಜೆಯನ್ನು ಕಟ್ಟಿ, ಹೆಗಲ ಮೇಲೆ ಶೃಂಗರಿಸಿರುವ ಶಾಲನ್ನು ಹಾಕಿ ಪೂಜೆಯನ್ನು ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ೫೦ ಕ್ಕೂ ಜೋಡಿ ಎತ್ತುಗಳ ಮೆರವಣಿಗೆಯೊಂದಿಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಮಾಡುತ್ತಾ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿಯ ನೇತೃತ್ವವವನ್ನು ತಿಪ್ಪಣ್ಣ ಧರ್ಮಂತಿ, ಕಳಕಪ್ಪ ಕಡಿವಾಲ, ಶರಣಪ್ಪ ಧರ್ಮಂತಿ, ಅಮರಪ್ಪ ಗೆಜ್ಜಲಗಟ್ಟಿ, ಮದರಸಾಬ ಕಂಬಾರ,ಮAಜುನಾಥ ಗೊಂದಿ, ರಾಜಮಹಮ್ಮದ ನಧಾಫ್ ಸೇರಿದಂತೆ ಗ್ರಾಮಸ್ಥರು ಇದ್ದರು .1
- ಇಳಕಲ್ ತಾಲೂಕಿನ ವಜ್ಜಲ ಗ್ರಾಮದ ಮಹಿಳೆ ಶ್ಯಾವವ್ವ ಮಲ್ಲಪ್ಪ ವಾಲಿಕಾರ ವಯಸ್ಸು 48 ಇವರು ಸಿಡಿಲು ಬಡಿದು ಮೃತ ಪಟ್ಟಿದ್ದರು. ನಿನ್ನೆ ರಾತ್ರಿ ಸ್ಥಳಕ್ಕೆ ತಹಸಿಲ್ದಾರ ಅಮರೇಶ ಪಮ್ಮಾರ ಭೇಟಿ ನೀಡಿದರು1
- ಕುಷ್ಟಗಿ:- ಪಟ್ಟಣದ ವಾರ್ಡ ನಂಬರ-20 ಮತ್ತು 19 ರಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಜಾತ್ರಾ ಮಹತ್ಸೋವ ಅಂಗವಾಗಿ ಮತ್ತು 893ನೇ ಬಸವ ಜಯಂತಿ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಕೂಡ ಐದು ದಿನಗಳ ಕಾಲ ಶ್ರೀ ನವನಹಳ್ಳಿ ದುರ್ಗಾದೇವಿಗೆ ನಂದಾದೀಪ ಹಾಕುವ ಮೂಲಕ ಜಾತ್ರಾ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಯಿತು. ಬಸವೇಶ್ವರ ಜಯಂತಿ ದಿನದಂದು ಶ್ರೀ ನವನಹಳ್ಳಿ ದುರ್ಗಾದೇವಿಗೆ ವಿಶೇಷ ಪೂಜೆ, ಹೋಮ ಹವನ ಕುಂಕುಮಾರ್ಚನೆ ಸೇರಿದಂತೆ ನಾನಾ ಪೂಜೆಗಳೊಂದಿಗೆ ಶ್ರೀ ನವನಹಳ್ಳಿ ದುರ್ಗಾದೇವಿಯನ್ನು ಅಲಂಕರಿಸಿ ಪೂಜಿಸಲಾಯಿ. ಅದೇ ದಿನ ರಾತ್ರಿ-8 ಗಂಟೆಗೆ ಪುರುಷರಿಗೆ, ಯುವಕ ಮಿತ್ರರಿಗೆ, ಯುವತಿಯರಿಗೆ, ಚಿಕ್ಕ ಮಕ್ಕಳಿಗೆ, ಹಿರಿಯರಿಗೆ ಸೇಬು, ಸೋನ್ ಪಾಪಡಿ, ಮ್ಯಾಂಗೋ ಜ್ಯೂಸ್, ಬಿಸ್ಕೆಟ್ , ಐಸ್ ಕ್ರೀಮ್ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ಪರ್ಧಾಳಗಳಿಗೆ ಶ್ರೀನವನಹಳ್ಳಿ ದುರ್ಗಾದೇವಿ ಕ್ಷೇಮ ಅಭಿವೃದ್ದಿ ಸಂಘದಿಂದ ಸ್ಪರ್ಧೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಕಮಿಟಿಯವರು ಉಚಿತವಾಗಿ ಏರ್ಪಡಿಸಿದ್ದರು. ಸ್ಪರ್ದಾಳುಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ಮಾಡಲಾಯಿತು. ಆಯ್ಕೆ ಸಮಿತಿ ಸದಸ್ಯರಾದ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ್ ಸೋನಾರ್, ಶಿಕ್ಷಕ ಬಸವರಾಜ ಹಕ್ಕಲ್, ಮರಿಯಪ್ಪ ಹಕ್ಕಲ್, ಮುತ್ತಣ್ಣ ಹಕ್ಕಲ್ ಇವರನ್ನು ನೇಮಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಟರಾಜ ಸೋನಾರ್ ಇವರು ಸ್ಪರ್ಧೆಯಲ್ಲಿ ಉತ್ತಮವಾಗಿ ಆಟ ಹಾಡಿದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ದಾಳುಗಳನ್ನು ಆಯ್ಕೆ ಮಾಡಿ ಕೊಟ್ಟರು. ನಂತರ ಆಯ್ಕೆಯಾದ ಸ್ಪರ್ದಾಳುಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಆ ನಂತರ ಸಕಲ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನವನಹಳ್ಳಿ ದುರ್ಗಾದೇವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಯಪ್ಪ ಹಕ್ಕಲ್, ಶರಣಯ್ಯ ಹಿರೇಮಠ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಕರಿಯಪ್ಪ ಹುಣಸಿಹಾಳ, ಶರಣಪ್ಪ ಕಲಕಬಂಡಿ, ದುರಗಪ್ಪ ಹಕ್ಕಲ್, ಅಡಿಯಪ್ಪ ಗದ್ದಿ, ಯಮನಪ್ಪ ಚೂರಿ, ಮಾರುತಿ ಇಂಗಳಗಿ, ರಮೇಶ ಇಂಗಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಗುಳೇದಗುಡ್ಡ: ಜಗತ್ತಿನಲ್ಲಿ ತುಂಬಿದ್ದ ಅಜ್ಞಾನ, ಮೂಢನಂಬಿಕೆ, ಕಂದಾಚಾರ, ಜಾತಿಯತೆಯಂತಹ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕರು ಎಂದು ಸಾಹಿತಿ ರವಿ ಕಂಗಳ ಹೇಳಿದರು. ಅವರು ಸೋಮವಾರ ಪಟ್ಟಣದ ಬಸವ ಕೇಂದ್ರ ವತಿಯಿಂದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದರು. ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಮ್ಮೆಲ್ಲರ ಮನೆಯೂ ಮಹಾಮನೆಯಾಗವ ಮೂಲಕ ಶರಣ ವಚನ,ತತ್ವಗಳು ಮನೆಮನೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಬಸವಕೇಂದ್ರದಿಂದ ಪಟ್ಟಣದಲ್ಲಿ ಪ್ರತಿವಾರವೂ ಒಬ್ಬೊಬ್ಬ ಶರಣರ ಮನೆಯಲ್ಲಿ ಮಹಾಮನೆಕಾರ್ಯಕ್ರಮ ಕಳೆದ 30 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಮುರಗೇಶ ಶೇಖಾ, ಗೀತಾ ತಿಪ್ಪಾ ಅವರಿಂದ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಪ್ರೊ.ಎಸ್.ಐ.ರಾಜನಾಳ, ಪ್ರೊ.ಜಿ.ಜಿ.ಹೂಗಾರ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಸುರೇಶ ರಾಜನಾಳ, ರಾಚಪ್ಪ ಯಂಡಿಗೇರಿ, ಶಿವಕುಮಾರ ಶಿಪ್ರಿ, ಮಹಾಲಿಂಗಪ್ಪ ಕರನಂದಿ, ಗಿರೀಶ ನೀಲಕಂಠಮಠ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ಕವಿತಾ ಬರಗುಂಡಿ, ವಿಶಾಲಾಕ್ಷಿ ಗಾಳಿ, ಗಾಯತ್ರಿ ಕಲ್ಯಾಣಿ, ಸುರೇಖಾ ಕಲ್ಯಾಣಿ, ಸೌಮ್ಯಾ ಯಳಮೇಲಿ, ಲಕ್ಷ್ಮೀ ತೊರಲಿ ಮತ್ತಿತರರು ಇದ್ದರು.1
- ಕರ್ನಾಟಕದಲಿ. ಕಳ್ಳರ ಹಾವಳಿ ಹೆಚ್ಚಾಗುತಿದೆ ಜನರು ಜಾಗ್ರತವಾಗಿ ಇರಬೇಕು ಯಾವದೆ ಕಾರಣಕು ಆಧಾರ ಕಾರ್ಡ ವಾಗಲ್ಲಿ ಏನೆ ಕೇಳಿದರು ದಯವಿಟ್ಟು ಕೊಡಬೇಡಿ.1
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- ಇಳಕಲ್ಲ : ದಯವಿಲ್ಲದ ಧರ್ಮವವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ,ಜಾತಿ ವ್ಯವಸ್ಥೆ, ಶೋಷಣೆ ಮೂಢನಂಬಿಕೆಯ ವಿರುದ್ಧ ಸಮರ ಸಾರಿ ಸಮಾಜದ ಅಂಕು - ಡೊಂಕುಗಳನ್ನು ತಿದ್ದಿದವರು ಶ್ರೀ ಜಗಜ್ಯೋತಿ ಬಸವೇಶ್ವರರ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ನಿಮಿತ್ಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾ ಭಾರತೀಯ ಸಂಸ್ಕೃತಿಯ ಮಹಾನ್ ಚಿಂತಕರು, ಸಮಾಜ ಸುಧಾರಕರು, ಸಮಾನತೆಯ ಸಂದೇಶ ಸಾರಿದ ಧರ್ಮ ಗುರು ಹಾಗೂ ಶರಣ ಚಳುವಳಿಯ ಮಹಾ ನಾಯಕರಾಗಿದ್ದ ಬಸವಣ್ಣನ ಜಯಂತಿಯನ್ನು ಆಚರಿಸುವುದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುವುದು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. ಜಯಂತಿಯಲ್ಲಿ ಸಂತೋಷ ಐಲಿ, ಚಿದಾನಂದ ಚಿನ್ನಾಪೂರ, ಕಪಿಲ ಪವಾರ, ಮಲ್ಲು ಸೇರಿದಂತೆ ಕಾರ್ಯಕರ್ತರು ಇದ್ದರು.2