logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮೊಳಕಾಲ್ಮೂರು ಕ್ಷೇತ್ರದ 2028ಕ್ಕೆ ನಾನೇ ಅಭ್ಯರ್ಥಿ ಮಾಜಿ ಶಾಸಕ ತಿಪ್ಪೇಸ್ವಾಮಿ ನಾಯಕನಹಟ್ಟಿ:- ಮಂಗಳವಾರ ನಾಯಕನಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಈ ಮೊಳಕಾಲ್ಮೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳ ಹಿನ್ನೆಡೆಯಲ್ಲಿದೆ. ಐದು ಸರಿ ನಾನು ಎಂ.ಎಲ್.ಎ (MLA) ಆಗಿದ್ದೀನಿ, ಆರು ಸರಿ ಆಗಿದ್ದೀನಿ ಅಂತ ಹೇಳ್ತಾನೆ... ಎಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀಯಾ ನೀನು ಕ್ಷೇತ್ರದಲ್ಲಿ? ಎಲ್ಲಿಯೂ ಅಭಿವೃದ್ಧಿ ಕೆಲಸ ಮಾಡಿಲ್ಲ... ಶೂನ್ಯವೇ ಇವತ್ತು! ಹೋಲಿ, ಎಸ್‌ಸಿ/ಎಸ್‌ಟಿ (SC/ST) ಗೆ ಎಷ್ಟು ಬೋರ್‌ವೇಲ್ ಕೊಟ್ಟಿದ್ದಾನೆ? ಎಸ್‌ಸಿಗೆ ಎಷ್ಟು ಕೊಟ್ಟಿದ್ದಾನೆ? ಎಸ್‌ಟಿಗೆ ಎಷ್ಟು ಕೊಟ್ಟಿದ್ದಾನೆ? ಜನರಲ್‌ಗೆ ಎಷ್ಟು ಕೊಟ್ಟಿದ್ದಾನೆ? ಆ ಕೆಲಸನೂ ಮಾಡಿಲ್ಲ. ನನ್ನ ಅವಧಿಯಲ್ಲಿ ಎಸ್‌ಸಿಗೂ ಮತ್ತು ಎಸ್‌ಟಿಗೂ ಸಾಕಷ್ಟು ಬೋರ್‌ವೇಲ್‌ಗಳನ್ನು ಕೊಟ್ಟಿದ್ದೀನಿ. ಒಬ್ಬ ರೈತ ಜಮೀನಿಗೆ ಹೋಗಿ ಚಾಲು ಮಾಡಬೇಕು ಅಂದ್ರೆ, ನನ್ನ ಹೆಸರು ಹೇಳಿ ಒಂದು ಬಟನ್ ಒತ್ತಬೇಕು... ಅಂತಹ ಕೆಲಸ ಮಾಡಿರತಕ್ಕಂತವನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀನಿ ಅಂತ ಹೇಳ್ತಾನಲ್ಲ... ಏನ್ ಮಾಡಿದ್ದೀಯಪ್ಪ ನೀನು? ನೀನು ಹೇಳ್ತಿಯಾ ಒಂದು ಸಂದರ್ಭ ಬಂದಾಗ, 'ನಾನು ದರಿದ್ರದವನು, ನಾನು ದರಿದ್ರದ ಮೇಲೆ ನನಗೆ ಅದಕ್ಕೆ ಮಂತ್ರಿಗಿರಿ ಕೊಡಲಿಲ್ಲ' ಅಂತ ಹೇಳ್ತಿಯಾ. ಆಮೇಲೆ ಹೇಳ್ತಿಯಾ, 'ಈ ಮೊಳಕಾಲ್ಮೂರನ್ನು ತಗೊಂಡು ಹೋಗಿ ಬಿಟ್ಟು ಆಂಧ್ರಕ್ಕೆ ಸೇರಿಸಬೇಕು' ಅಂತ. ಯಾವ ನೈತಿಕತೆ ಐತಪ್ಪ ನಿನಗೆ ಹೇಳೋಕೆ? ಮೊಳಕಾಲ್ಮೂರು ನೀರು ಕುಡಿದಿದ್ದೀಯಾ, ಮೊಳಕಾಲ್ಮೂರಿನಲ್ಲಿ ಹುಟ್ಟಿ ಬೆಳೆದಿದ್ದೀಯಾ... ಹೋಗ್ಬಿಟ್ಟು ಆಂಧ್ರಕ್ಕೆ ಸೇರಿಸ್ತೀನಿ ಅಂತೀಯಲ್ಲ, ಇದು ನಾಚಿಕೆಗೇಡಿನ ಸಂಗತಿ ಅಲ್ಲವೇನಪ್ಪ? ನೀನೇನು ಅಭಿವೃದ್ಧಿ ಮಾಡಿದ್ದೀಯಾ? ಕೆಲಸ ಮಾಡ್ರಿ, ಸರ್ಕಾರ ನಿಮ್ಮದೇ ಐತೆ! ಯಾಕೆ ಕೆಲಸ ಮಾಡಬಾರದು ನೀನು? ಸೋಮಾರಿತನ ಎಂಬ ಮುಸುಗು ಹಾಕಿಕೊಂಡು ಮೇಲೆ ತಿರುಗುತ್ತೀಯಾ ನೀನು... ದರಿದ್ರನೋ ಮತ್ತು ಸೋಮಾರಿತನನೋ? ನಾನು ಎಂ.ಎಲ್.ಎ ಆದಾಗ, ಏನಪ್ಪಾ ಮಿನಿ ವಿಧಾನಸೌಧ ಮಾಡಿದೆ ಮೊಳಕಾಲ್ಮೂರಲ್ಲಿ. ವಾಲ್ಮೀಕಿ ಭವನ ನಾಯಕರಿಗೆ ಕೊಡುಗೆಯಾಗಿ ಕೊಟ್ಟಿದ್ದೀನಿ ನಾನು. ಒಂದು ಐದು ಮುರಾರ್ಜಿ ಶಾಲೆಗಳನ್ನು ಬಡ ಮಕ್ಕಳು ಓದಲಿ ಅಂತ ಹೇಳಿಬಿಟ್ಟು ಐದು ಮುರಾರ್ಜಿ ಶಾಲೆಗಳನ್ನು ಕೊಟ್ಟಿದ್ದೀನಿ ನಾನು. ಆಮೇಲೆ ಕೆ.ಇ.ಬಿ (KEB) ದು... ತಮಗೆ ಗೊತ್ತಿರೋ ಹಾಗೆ ಚಳ್ಳಕೆರೆಯಲ್ಲಿ ಇರತಕ್ಕಂತದ್ದನ್ನು ನಾಯಕನಹಟ್ಟಿಗೆ ಭಾಗ ಮಾಡಿದೆ, ಮತ್ತೆ ನಾಗಸಮುದ್ರ ಮಾಡಿದ್ದೀನಿ, ಹಿರೇಹಳ್ಳಿ ಮಾಡಿದ್ದೀನಿ... ಇಷ್ಟೆಲ್ಲಾ ರೈತರಿಗೆ ಅನುಕೂಲ ಆಗಲಿ ಅನ್ನೋ ಆ ದೃಷ್ಟಿಯಲ್ಲಿ ನಾನು ಮಾಡಿದೆ. ನೀನೇನು ಮಾಡಿದ್ದೀಯಪ್ಪ? ನೀನಾಗಲಿ ಅಥವಾ ನಿನ್ನ ಹಿಂದೆ ಬಂದ ಶ್ರೀರಾಮುಲು ಆಗಲಿ ಏನು ಮಾಡಿದ್ದಾರೆ? ಏನಾದರೂ ಮಾಡಿದ್ದರೆ ಹೇಳ್ರಿ ನೋಡೋಣ... ಏನೂ ಮಾಡಿಲ್ಲ ನೀವು, ಏನು ಮಾಡೋಕೆ ಆಗಿಲ್ಲ ನೀವು! ಅದೇ ರಾಮುಲು ಹೇಳ್ತಾನೆ, 'ನಾನು ಮೊಳಕಾಲ್ಮೂರು ಕ್ಷೇತ್ರವನ್ನು ರಾಮರಾಜ್ಯ ಮಾಡ್ತೀನಿ' ಅಂತ ಹೇಳಿದ ಅಲ್ವಾ ತಮ್ಮ? ಯಾವ ರಾಜ್ಯ ಮಾಡಿದೆ ನೀನು? ಪಿ.ಎ (PA) ಗಳನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದೆ ನೀನು! ಯಾವ ರಾಮರಾಜ್ಯ ಮಾಡಿದೆಪ್ಪಾ ರಾಮುಲು ಸಾಹೇಬರೇ? ಪಿ.ಎಗಳನ್ನು ಇಟ್ಟುಕೊಂಡು ರಾಮರಾಜ್ಯ ಮಾಡಿದೆ. ಈ ಕ್ಷೇತ್ರವನ್ನು ಹಾಳುಮಾಡಿದ್ದಲ್ಲದೆ ಇಡೀ ಜಿಲ್ಲೆಯನ್ನೇ ಹಾಳುಮಾಡಿದ್ದೀರಿ. ಏನಪ್ಪಾ ಗೋಪಾಲಕೃಷ್ಣ ಅವರೇ, ಭದ್ರಾ ನೀರು ಯಾಕಪ್ಪ ತರಲಿಲ್ಲ ನೀನು? ಭದ್ರಾದು ನಾನಾ... ನಾನು ಎಂ.ಎಲ್.ಎ ಇದ್ದಾಗ ಮೊಳಕಾಲ್ಮೂರಲ್ಲಿ ರೋಡಿಗೆ ಸ್ಟ್ರೈಕ್ ಮಾಡಿಸಿದ್ದೀನಿ ರೈತರ ರೈತ ಸಂಘದ ಜೊತೆಯಲ್ಲಿ ನಾನು, ತಳಕಲ್ಲಿ ರೈತ ಸಂಘದವರ ಜೊತೆಯಲ್ಲಿ ಸ್ಟ್ರೈಕ್ ಮಾಡಿಸಿದ್ದೀನಿ ನಾನು... ಭದ್ರಾ ನೀರು ಕೊಡಬೇಕು ಅಂತ, ಕೆರೆಗಳಿಗೆ ನೀರು ತುಂಬಿಸತಕ್ಕಂತ ಕೆಲಸ ಮಾಡಬೇಕು ಅಂತ ಹೇಳಿಬಿಟ್ಟು! ನಾನು ಎಂ.ಎಲ್.ಎ ಆದಾಗ ಚೀಫ್ ಇಂಜಿನಿಯರ್ ಹತ್ತಿರ ಹೋದರೆ, ಚೀಫ್ ಇಂಜಿನಿಯರ್ ಏನು ಹೇಳಿದರು ಗೊತ್ತಾ? 'ನಿಮ್ಮ ಮೊಳಕಾಲ್ಮೂರು ಶಾಸಕರೇ ಬರಲಿಲ್ಲ ಸರ್, ನಾವೇನು ಮಾಡೋದು? ಚಳ್ಳಕೆರೆ ತಿಪ್ಪೇಸ್ವಾಮಿ ಬಂದರು, ಚಳ್ಳಕೆರೆ ಭಾಗದಲ್ಲಿ ಸೇರಿಸಿದೆವು ನಾವು' ಅಂದರು. ಯಾಕೆ ಕೇಳಬೇಕಾಗಿತ್ತು? 'ಇಲ್ಲ, ನಾನು ಕೆರೆಗಳಿಗೆ ನೀರು ಬಿಟ್ಟರೆ ಅವರು ನನಗೆ ವೋಟ್ ಹಾಕೋದಿಲ್ಲ' ಅಂದನಂತೆ! ಕೆರೆಗಳಿಗೆ ಮೊಳಕಾಲ್ಮೂರು ಕ್ಷೇತ್ರದ ಕೆರೆಗಳಿಗೆಲ್ಲ ನೀರು ಬಿಟ್ಟರೆ ಅವರು ವೋಟ್ ಹಾಕೋದಿಲ್ಲ ಅಂದನಂತೆ! ಎಲೈ ಮತದಾರ ಬಂಧುಗಳೇ ನೋಡ್ರಿ... ನಿಮಗೆ 'ವೋಟ್ ಹಾಕೋದಿಲ್ಲ' ಅಂದರೆ ಅವನಿಗೆ ವೋಟ್ ಹಾಕಿದ್ದೀರಪ್ಪ, ನೀವೆಂತಹ ಜನ ಇದ್ದೀರಿ ನೋಡಿ ನೋಡೋಣ! ಅದನ್ನು ನಾನು ಸರ್ಕಾರದಲ್ಲಿ ಅಪ್ರೂವ್ ಮಾಡಿಸಿ, ಭದ್ರಾದು ಕೆರೆಗಳಿಗೆ ನೀರು ತುಂಬಿಸತಕ್ಕಂತ ಕೆಲಸವನ್ನು ನಾನು ಮಾಡಿದೆ. ನೀವೇನು... ನೀವೇನಾದರೂ ಮಾಡಿದ್ದೀರಾ? ರಾಮುಲು ಅವರೇ, ನೀನೇನು ಸಮಾಜ ಕಲ್ಯಾಣದ ಸಚಿವರು, ನಿನ್ನ ಹತ್ತಿರ ಸಾವಿರಾರು ಕೋಟಿಗಳು ಇತ್ತು ಇಲಾಖೆಯ ಖಾತೆಯಲ್ಲಿ... ಭದ್ರಾಕ್ಕೆ ಕೊಡಬಹುದಾಗಿತ್ತಲ್ಲ ನೀನು, ಯಾಕೆ ಕೊಡಲಿಲ್ಲ ನೀನು? ಇದೇ ಕೆರೆಗೆ ಚಿಕ್ಕೇರಿಗೆ ಬಂದುಬಿಟ್ಟು 'ಇನ್ನು ಮೂರು ತಿಂಗಳಲ್ಲಿ ನೀರು ಕೊಡ್ತೀನಿ' ಅಂದೆಯಲ್ಲಪ್ಪ, ಕೊಟ್ಟೇನಪ್ಪ ನೀನು ನೀರು? ನೀನು ನೀರು ಕೊಡೋಕೆ ಬಂದಿಲ್ಲ! ಮೊಳಕಾಲ್ಮೂರು ಕ್ಷೇತ್ರವನ್ನು ರಾಮರಾಜ್ಯ ಮಾಡ್ತೀನಿ ಅಂತ ಬಂದುಬಿಟ್ಟು ಅದನ್ನು ಯಾವ ಪರಿಸ್ಥಿತಿಗೆ ತಂದೆ, ಅದೋಗತಿಗೆ ತಂದಿಟ್ಟೆ!" ಯಡಿಯೂರಪ್ಪನವರು ಎಷ್ಟು ಕಷ್ಟಪಟ್ಟು, ಹೋರಾಟಗಳನ್ನು ಮಾಡಿ, ಪಕ್ಷವನ್ನು ಸಂಘಟನೆ ಮಾಡಿ ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ, ಆ ನಂತರ ಅಸೆಂಬ್ಲಿಯಲ್ಲಿ (ವಿಧಾನಸಭೆಯಲ್ಲಿ) ಏನಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಅಳಿಯನನ್ನು ಕಳುಹಿಸಿದ್ರಲ್ಲಾ? ಕಂಪ್ಲಿಗೆ ಯಾಕೆ ಯಾವುದೇ ದೇವರುಗಳು ಇಲ್ಲವೇ? ಕಂಪ್ಲಿಯಲ್ಲಿ ಇದ್ದಂತಹ ದೇವರುಗಳೆಲ್ಲ ಹೊರಟುಹೋದ ನಂತರ, ಕೇವಲ ಮೊಳಕಾಲ್ಮೂರಿನಲ್ಲಿ ಮಾತ್ರ ದೇವರುಗಳು ಇರೋದಾ? ಇಲ್ಲಿಗೆ ಕಳುಹಿಸಬೇಕಿತ್ತಾ? ಅದಾದ ಮೇಲೆ ಅಸೆಂಬ್ಲಿಯಲ್ಲಿ ನಿಮ್ಮ ಅಳಿಯ ಸುರೇಶ್ ಬಾಬು ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿದರು. ಸೋಮಶೇಖರ ರೆಡ್ಡಿ ಅವರು ಏನು ಮಾಡಿದರು? ಆಮೇಲೆ ಸಿದ್ದರಾಮಯ್ಯನವರು ಹೋರಾಟಗಾರರಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಿದರು. ಆ ಬಳ್ಳಾರಿ ಪಾದಯಾತ್ರೆಯ ಪರಿಣಾಮವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೂ, ನಾನು ಮೊಳಕಾಲ್ಮೂರಿನಿಂದ ಸ್ಪರ್ಧಿಸಿ ಗೆದ್ದು ಶಾಸಕನಾದೆ (MLA). ಕ್ಷೇತ್ರದ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ತದನಂತರದ ಚುನಾವಣೆಯಲ್ಲಿ, ಯಡಿಯೂರಪ್ಪನವರು ಮೊಳಕಾಲ್ಮೂರಿಗೆ ಬಂದು ತಿಪ್ಪೇಸ್ವಾಮಿಯೇ ನಮ್ಮ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಆದರೆ ಶ್ರೀರಾಮುಲು ಅವರು ಏನು ಮಾಡಿದರು? ಯಾರದ್ದೋ ಕಿವಿಮಾತುಗಳನ್ನು ಕೇಳಿಕೊಂಡು, ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದು ಯಡಿಯೂರಪ್ಪನವರ ಬಳಿ ಹೋದರು. ಯಡಿಯೂರಪ್ಪನವರು "ಇಲ್ಲ, ನಾನು ತಿಪ್ಪೇಸ್ವಾಮಿಗೆ ಮಾತು ಕೊಟ್ಟಿದ್ದೇನೆ" ಎಂದರೂ ಕೇಳದೆ, ಅವರ ಮೇಲೆ ದೌರ್ಜನ್ಯ ನಡೆಸಿ ಬಿ-ಫಾರಂ ಪಡೆದುಕೊಂಡರು. ಇತ್ತ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂಬ ಸುಳಿವು ಸಿಕ್ಕ ತಕ್ಷಣ, ಅವರನ್ನು ಸೋಲಿಸಲೆಂದೇ ಶ್ರೀರಾಮುಲು ಬಾದಾಮಿ ಕ್ಷೇತ್ರಕ್ಕೆ ಹೋದರು. "ಸಿದ್ದರಾಮಯ್ಯನವರನ್ನು ಸೋಲಿಸಬೇಕು, ನನಗೆ ಬಾದಾಮಿ ಕ್ಷೇತ್ರದಲ್ಲೂ ಟಿಕೆಟ್ ಕೊಡಿ" ಎಂದು ಪಟ್ಟು ಹಿಡಿದು, ಮೊಳಕಾಲ್ಮೂರು ಮತ್ತು ಬಾದಾಮಿ ಎರಡೂ ಕಡೆ ಟಿಕೆಟ್ ಪಡೆದರು. ಆದರೆ ಏನಾಯಿತು? ಸಿದ್ದರಾಮಯ್ಯನವರನ್ನು ಸೋಲಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಗೆದ್ದರು, ಆದರೆ ನಿಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನನ್ನು ನೀವು ಸೋಲಿಸಿದ್ರಿ! ಅಂದು ಬಿಜೆಪಿ ಬೆಳೆಸಲು, ಈ ರಾಜ್ಯದಲ್ಲಿ ಸರ್ಕಾರ ತರಲು ಕಾರಣರಾದವರು ನೀವು. ಆದರೆ ಕೊನೆಗೆ ಇಡೀ ಕ್ಷೇತ್ರದಲ್ಲಿ ಹಾಗೂ ಈ ಜಿಲ್ಲೆಯಲ್ಲಿ ಬೇರೆ ಯಾವುದೇ ನಾಯಕರು ಬೆಳೆಯಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಹಾಳುಮಾಡಿದ್ರಿ. ಶ್ರೀರಾಮುಲು ಅವರೇ, ನೆನಪಿರಲಿ... ಇದು ಮದಕರಿ ನಾಯಕರು ಹುಟ್ಟಿದಂತಹ, ಚಿತ್ರದುರ್ಗದ ಕೋಟೆಯ ವೀರ ನಾಯಕರ ನಾಡು. ಈ ನಾಯಕ ಸಮುದಾಯದ ಸ್ವಾಭಿಮಾನವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ.... ಈ ಸಮಯದಲ್ಲಿ ಮುಖಂಡರಾದ ಕನ್ನಯ್ಯ, ದಳವಾಯಿ, ಚೌಳಕೆರೆ ಬಸಣ್ಣ, ಕುದಾಪುರ ಜಿ.ಬಿ. ಲೋಕೇಶ್, ಕುದಾಪುರ ಪ್ರಕಾಶ್, ಪಟೇಲ್ ಕೃಷ್ಣೇಗೌಡ, ಮಲ್ಲೂರಹಳ್ಳಿ ಗುಂಡಯ್ಯ, ಸಣ್ಣಬೋರಯ್ಯ, ಶರಣಪ್ಪ ಆರ್. ತಿಪ್ಪೇಸ್ವಾಮಿ, ಗಜ್ಜುಗಾನಹಳ್ಳಿ ಹೊನ್ನೂರಪ್ಪ, ಇದ್ದರು.

17 hrs ago
user_Channakeshava Press ಗಡಿ ವಾಣಿ
Channakeshava Press ಗಡಿ ವಾಣಿ
ಕಂಪ್ಲಿ, ಬಳ್ಳಾರಿ, ಕರ್ನಾಟಕ•
17 hrs ago
03d2f418-5d2d-46ec-9afe-3d778afe2720

ಮೊಳಕಾಲ್ಮೂರು ಕ್ಷೇತ್ರದ 2028ಕ್ಕೆ ನಾನೇ ಅಭ್ಯರ್ಥಿ ಮಾಜಿ ಶಾಸಕ ತಿಪ್ಪೇಸ್ವಾಮಿ ನಾಯಕನಹಟ್ಟಿ:- ಮಂಗಳವಾರ ನಾಯಕನಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಈ ಮೊಳಕಾಲ್ಮೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳ ಹಿನ್ನೆಡೆಯಲ್ಲಿದೆ. ಐದು ಸರಿ ನಾನು ಎಂ.ಎಲ್.ಎ (MLA) ಆಗಿದ್ದೀನಿ, ಆರು ಸರಿ ಆಗಿದ್ದೀನಿ ಅಂತ ಹೇಳ್ತಾನೆ... ಎಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀಯಾ ನೀನು ಕ್ಷೇತ್ರದಲ್ಲಿ? ಎಲ್ಲಿಯೂ ಅಭಿವೃದ್ಧಿ ಕೆಲಸ ಮಾಡಿಲ್ಲ... ಶೂನ್ಯವೇ ಇವತ್ತು! ಹೋಲಿ, ಎಸ್‌ಸಿ/ಎಸ್‌ಟಿ (SC/ST) ಗೆ ಎಷ್ಟು ಬೋರ್‌ವೇಲ್ ಕೊಟ್ಟಿದ್ದಾನೆ? ಎಸ್‌ಸಿಗೆ ಎಷ್ಟು ಕೊಟ್ಟಿದ್ದಾನೆ? ಎಸ್‌ಟಿಗೆ ಎಷ್ಟು ಕೊಟ್ಟಿದ್ದಾನೆ? ಜನರಲ್‌ಗೆ ಎಷ್ಟು ಕೊಟ್ಟಿದ್ದಾನೆ? ಆ ಕೆಲಸನೂ ಮಾಡಿಲ್ಲ. ನನ್ನ ಅವಧಿಯಲ್ಲಿ ಎಸ್‌ಸಿಗೂ ಮತ್ತು ಎಸ್‌ಟಿಗೂ ಸಾಕಷ್ಟು ಬೋರ್‌ವೇಲ್‌ಗಳನ್ನು ಕೊಟ್ಟಿದ್ದೀನಿ. ಒಬ್ಬ ರೈತ ಜಮೀನಿಗೆ ಹೋಗಿ ಚಾಲು ಮಾಡಬೇಕು ಅಂದ್ರೆ, ನನ್ನ ಹೆಸರು ಹೇಳಿ ಒಂದು ಬಟನ್ ಒತ್ತಬೇಕು... ಅಂತಹ ಕೆಲಸ ಮಾಡಿರತಕ್ಕಂತವನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀನಿ ಅಂತ ಹೇಳ್ತಾನಲ್ಲ... ಏನ್ ಮಾಡಿದ್ದೀಯಪ್ಪ ನೀನು? ನೀನು ಹೇಳ್ತಿಯಾ ಒಂದು ಸಂದರ್ಭ ಬಂದಾಗ, 'ನಾನು ದರಿದ್ರದವನು, ನಾನು ದರಿದ್ರದ ಮೇಲೆ ನನಗೆ ಅದಕ್ಕೆ ಮಂತ್ರಿಗಿರಿ ಕೊಡಲಿಲ್ಲ' ಅಂತ ಹೇಳ್ತಿಯಾ. ಆಮೇಲೆ ಹೇಳ್ತಿಯಾ, 'ಈ ಮೊಳಕಾಲ್ಮೂರನ್ನು ತಗೊಂಡು ಹೋಗಿ ಬಿಟ್ಟು ಆಂಧ್ರಕ್ಕೆ ಸೇರಿಸಬೇಕು' ಅಂತ. ಯಾವ ನೈತಿಕತೆ ಐತಪ್ಪ ನಿನಗೆ ಹೇಳೋಕೆ? ಮೊಳಕಾಲ್ಮೂರು ನೀರು ಕುಡಿದಿದ್ದೀಯಾ, ಮೊಳಕಾಲ್ಮೂರಿನಲ್ಲಿ ಹುಟ್ಟಿ ಬೆಳೆದಿದ್ದೀಯಾ... ಹೋಗ್ಬಿಟ್ಟು ಆಂಧ್ರಕ್ಕೆ ಸೇರಿಸ್ತೀನಿ ಅಂತೀಯಲ್ಲ, ಇದು ನಾಚಿಕೆಗೇಡಿನ ಸಂಗತಿ ಅಲ್ಲವೇನಪ್ಪ? ನೀನೇನು ಅಭಿವೃದ್ಧಿ ಮಾಡಿದ್ದೀಯಾ? ಕೆಲಸ ಮಾಡ್ರಿ, ಸರ್ಕಾರ ನಿಮ್ಮದೇ ಐತೆ! ಯಾಕೆ ಕೆಲಸ ಮಾಡಬಾರದು ನೀನು? ಸೋಮಾರಿತನ ಎಂಬ ಮುಸುಗು ಹಾಕಿಕೊಂಡು ಮೇಲೆ ತಿರುಗುತ್ತೀಯಾ ನೀನು... ದರಿದ್ರನೋ ಮತ್ತು ಸೋಮಾರಿತನನೋ? ನಾನು ಎಂ.ಎಲ್.ಎ ಆದಾಗ, ಏನಪ್ಪಾ ಮಿನಿ ವಿಧಾನಸೌಧ ಮಾಡಿದೆ ಮೊಳಕಾಲ್ಮೂರಲ್ಲಿ. ವಾಲ್ಮೀಕಿ ಭವನ ನಾಯಕರಿಗೆ ಕೊಡುಗೆಯಾಗಿ ಕೊಟ್ಟಿದ್ದೀನಿ ನಾನು. ಒಂದು ಐದು ಮುರಾರ್ಜಿ ಶಾಲೆಗಳನ್ನು ಬಡ ಮಕ್ಕಳು ಓದಲಿ ಅಂತ ಹೇಳಿಬಿಟ್ಟು ಐದು ಮುರಾರ್ಜಿ ಶಾಲೆಗಳನ್ನು ಕೊಟ್ಟಿದ್ದೀನಿ ನಾನು. ಆಮೇಲೆ ಕೆ.ಇ.ಬಿ (KEB) ದು... ತಮಗೆ ಗೊತ್ತಿರೋ ಹಾಗೆ ಚಳ್ಳಕೆರೆಯಲ್ಲಿ ಇರತಕ್ಕಂತದ್ದನ್ನು ನಾಯಕನಹಟ್ಟಿಗೆ ಭಾಗ ಮಾಡಿದೆ, ಮತ್ತೆ ನಾಗಸಮುದ್ರ ಮಾಡಿದ್ದೀನಿ, ಹಿರೇಹಳ್ಳಿ ಮಾಡಿದ್ದೀನಿ... ಇಷ್ಟೆಲ್ಲಾ ರೈತರಿಗೆ ಅನುಕೂಲ ಆಗಲಿ ಅನ್ನೋ ಆ ದೃಷ್ಟಿಯಲ್ಲಿ ನಾನು ಮಾಡಿದೆ. ನೀನೇನು ಮಾಡಿದ್ದೀಯಪ್ಪ? ನೀನಾಗಲಿ ಅಥವಾ ನಿನ್ನ ಹಿಂದೆ ಬಂದ ಶ್ರೀರಾಮುಲು ಆಗಲಿ ಏನು ಮಾಡಿದ್ದಾರೆ? ಏನಾದರೂ ಮಾಡಿದ್ದರೆ ಹೇಳ್ರಿ ನೋಡೋಣ... ಏನೂ ಮಾಡಿಲ್ಲ ನೀವು, ಏನು ಮಾಡೋಕೆ ಆಗಿಲ್ಲ ನೀವು! ಅದೇ ರಾಮುಲು ಹೇಳ್ತಾನೆ, 'ನಾನು ಮೊಳಕಾಲ್ಮೂರು ಕ್ಷೇತ್ರವನ್ನು ರಾಮರಾಜ್ಯ ಮಾಡ್ತೀನಿ' ಅಂತ ಹೇಳಿದ ಅಲ್ವಾ ತಮ್ಮ? ಯಾವ ರಾಜ್ಯ ಮಾಡಿದೆ ನೀನು? ಪಿ.ಎ (PA) ಗಳನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದೆ ನೀನು! ಯಾವ ರಾಮರಾಜ್ಯ ಮಾಡಿದೆಪ್ಪಾ ರಾಮುಲು ಸಾಹೇಬರೇ? ಪಿ.ಎಗಳನ್ನು ಇಟ್ಟುಕೊಂಡು ರಾಮರಾಜ್ಯ ಮಾಡಿದೆ. ಈ ಕ್ಷೇತ್ರವನ್ನು ಹಾಳುಮಾಡಿದ್ದಲ್ಲದೆ ಇಡೀ ಜಿಲ್ಲೆಯನ್ನೇ ಹಾಳುಮಾಡಿದ್ದೀರಿ. ಏನಪ್ಪಾ ಗೋಪಾಲಕೃಷ್ಣ ಅವರೇ, ಭದ್ರಾ ನೀರು ಯಾಕಪ್ಪ ತರಲಿಲ್ಲ ನೀನು? ಭದ್ರಾದು ನಾನಾ... ನಾನು ಎಂ.ಎಲ್.ಎ ಇದ್ದಾಗ ಮೊಳಕಾಲ್ಮೂರಲ್ಲಿ ರೋಡಿಗೆ ಸ್ಟ್ರೈಕ್ ಮಾಡಿಸಿದ್ದೀನಿ ರೈತರ ರೈತ ಸಂಘದ ಜೊತೆಯಲ್ಲಿ ನಾನು, ತಳಕಲ್ಲಿ ರೈತ ಸಂಘದವರ ಜೊತೆಯಲ್ಲಿ ಸ್ಟ್ರೈಕ್ ಮಾಡಿಸಿದ್ದೀನಿ ನಾನು... ಭದ್ರಾ ನೀರು ಕೊಡಬೇಕು ಅಂತ, ಕೆರೆಗಳಿಗೆ ನೀರು ತುಂಬಿಸತಕ್ಕಂತ ಕೆಲಸ ಮಾಡಬೇಕು ಅಂತ ಹೇಳಿಬಿಟ್ಟು! ನಾನು ಎಂ.ಎಲ್.ಎ ಆದಾಗ ಚೀಫ್ ಇಂಜಿನಿಯರ್ ಹತ್ತಿರ ಹೋದರೆ, ಚೀಫ್ ಇಂಜಿನಿಯರ್ ಏನು ಹೇಳಿದರು ಗೊತ್ತಾ? 'ನಿಮ್ಮ ಮೊಳಕಾಲ್ಮೂರು ಶಾಸಕರೇ ಬರಲಿಲ್ಲ ಸರ್, ನಾವೇನು ಮಾಡೋದು? ಚಳ್ಳಕೆರೆ ತಿಪ್ಪೇಸ್ವಾಮಿ ಬಂದರು, ಚಳ್ಳಕೆರೆ ಭಾಗದಲ್ಲಿ ಸೇರಿಸಿದೆವು ನಾವು' ಅಂದರು. ಯಾಕೆ ಕೇಳಬೇಕಾಗಿತ್ತು? 'ಇಲ್ಲ, ನಾನು ಕೆರೆಗಳಿಗೆ ನೀರು ಬಿಟ್ಟರೆ ಅವರು ನನಗೆ ವೋಟ್ ಹಾಕೋದಿಲ್ಲ' ಅಂದನಂತೆ! ಕೆರೆಗಳಿಗೆ ಮೊಳಕಾಲ್ಮೂರು ಕ್ಷೇತ್ರದ ಕೆರೆಗಳಿಗೆಲ್ಲ ನೀರು ಬಿಟ್ಟರೆ ಅವರು ವೋಟ್ ಹಾಕೋದಿಲ್ಲ ಅಂದನಂತೆ! ಎಲೈ ಮತದಾರ ಬಂಧುಗಳೇ ನೋಡ್ರಿ... ನಿಮಗೆ 'ವೋಟ್ ಹಾಕೋದಿಲ್ಲ' ಅಂದರೆ ಅವನಿಗೆ ವೋಟ್ ಹಾಕಿದ್ದೀರಪ್ಪ, ನೀವೆಂತಹ ಜನ ಇದ್ದೀರಿ ನೋಡಿ ನೋಡೋಣ! ಅದನ್ನು ನಾನು ಸರ್ಕಾರದಲ್ಲಿ ಅಪ್ರೂವ್ ಮಾಡಿಸಿ, ಭದ್ರಾದು ಕೆರೆಗಳಿಗೆ ನೀರು ತುಂಬಿಸತಕ್ಕಂತ ಕೆಲಸವನ್ನು ನಾನು ಮಾಡಿದೆ. ನೀವೇನು... ನೀವೇನಾದರೂ ಮಾಡಿದ್ದೀರಾ? ರಾಮುಲು ಅವರೇ, ನೀನೇನು ಸಮಾಜ ಕಲ್ಯಾಣದ ಸಚಿವರು, ನಿನ್ನ ಹತ್ತಿರ ಸಾವಿರಾರು ಕೋಟಿಗಳು ಇತ್ತು ಇಲಾಖೆಯ ಖಾತೆಯಲ್ಲಿ... ಭದ್ರಾಕ್ಕೆ ಕೊಡಬಹುದಾಗಿತ್ತಲ್ಲ ನೀನು, ಯಾಕೆ ಕೊಡಲಿಲ್ಲ ನೀನು? ಇದೇ ಕೆರೆಗೆ ಚಿಕ್ಕೇರಿಗೆ ಬಂದುಬಿಟ್ಟು 'ಇನ್ನು ಮೂರು ತಿಂಗಳಲ್ಲಿ ನೀರು ಕೊಡ್ತೀನಿ' ಅಂದೆಯಲ್ಲಪ್ಪ, ಕೊಟ್ಟೇನಪ್ಪ ನೀನು ನೀರು? ನೀನು ನೀರು ಕೊಡೋಕೆ ಬಂದಿಲ್ಲ! ಮೊಳಕಾಲ್ಮೂರು ಕ್ಷೇತ್ರವನ್ನು ರಾಮರಾಜ್ಯ ಮಾಡ್ತೀನಿ ಅಂತ ಬಂದುಬಿಟ್ಟು ಅದನ್ನು ಯಾವ ಪರಿಸ್ಥಿತಿಗೆ ತಂದೆ, ಅದೋಗತಿಗೆ ತಂದಿಟ್ಟೆ!" ಯಡಿಯೂರಪ್ಪನವರು ಎಷ್ಟು ಕಷ್ಟಪಟ್ಟು, ಹೋರಾಟಗಳನ್ನು ಮಾಡಿ, ಪಕ್ಷವನ್ನು ಸಂಘಟನೆ ಮಾಡಿ ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ, ಆ ನಂತರ ಅಸೆಂಬ್ಲಿಯಲ್ಲಿ (ವಿಧಾನಸಭೆಯಲ್ಲಿ) ಏನಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಅಳಿಯನನ್ನು ಕಳುಹಿಸಿದ್ರಲ್ಲಾ? ಕಂಪ್ಲಿಗೆ ಯಾಕೆ ಯಾವುದೇ ದೇವರುಗಳು ಇಲ್ಲವೇ? ಕಂಪ್ಲಿಯಲ್ಲಿ ಇದ್ದಂತಹ ದೇವರುಗಳೆಲ್ಲ ಹೊರಟುಹೋದ ನಂತರ, ಕೇವಲ ಮೊಳಕಾಲ್ಮೂರಿನಲ್ಲಿ ಮಾತ್ರ ದೇವರುಗಳು ಇರೋದಾ? ಇಲ್ಲಿಗೆ ಕಳುಹಿಸಬೇಕಿತ್ತಾ? ಅದಾದ ಮೇಲೆ ಅಸೆಂಬ್ಲಿಯಲ್ಲಿ ನಿಮ್ಮ ಅಳಿಯ ಸುರೇಶ್ ಬಾಬು ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿದರು. ಸೋಮಶೇಖರ ರೆಡ್ಡಿ ಅವರು ಏನು ಮಾಡಿದರು? ಆಮೇಲೆ ಸಿದ್ದರಾಮಯ್ಯನವರು ಹೋರಾಟಗಾರರಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಿದರು. ಆ ಬಳ್ಳಾರಿ ಪಾದಯಾತ್ರೆಯ ಪರಿಣಾಮವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೂ, ನಾನು ಮೊಳಕಾಲ್ಮೂರಿನಿಂದ ಸ್ಪರ್ಧಿಸಿ ಗೆದ್ದು ಶಾಸಕನಾದೆ (MLA). ಕ್ಷೇತ್ರದ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ತದನಂತರದ ಚುನಾವಣೆಯಲ್ಲಿ, ಯಡಿಯೂರಪ್ಪನವರು ಮೊಳಕಾಲ್ಮೂರಿಗೆ ಬಂದು ತಿಪ್ಪೇಸ್ವಾಮಿಯೇ ನಮ್ಮ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಆದರೆ ಶ್ರೀರಾಮುಲು ಅವರು ಏನು ಮಾಡಿದರು? ಯಾರದ್ದೋ ಕಿವಿಮಾತುಗಳನ್ನು ಕೇಳಿಕೊಂಡು, ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದು ಯಡಿಯೂರಪ್ಪನವರ ಬಳಿ ಹೋದರು. ಯಡಿಯೂರಪ್ಪನವರು "ಇಲ್ಲ, ನಾನು ತಿಪ್ಪೇಸ್ವಾಮಿಗೆ ಮಾತು ಕೊಟ್ಟಿದ್ದೇನೆ" ಎಂದರೂ ಕೇಳದೆ, ಅವರ ಮೇಲೆ ದೌರ್ಜನ್ಯ ನಡೆಸಿ ಬಿ-ಫಾರಂ ಪಡೆದುಕೊಂಡರು. ಇತ್ತ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂಬ ಸುಳಿವು ಸಿಕ್ಕ ತಕ್ಷಣ, ಅವರನ್ನು ಸೋಲಿಸಲೆಂದೇ ಶ್ರೀರಾಮುಲು ಬಾದಾಮಿ ಕ್ಷೇತ್ರಕ್ಕೆ ಹೋದರು. "ಸಿದ್ದರಾಮಯ್ಯನವರನ್ನು ಸೋಲಿಸಬೇಕು, ನನಗೆ ಬಾದಾಮಿ ಕ್ಷೇತ್ರದಲ್ಲೂ ಟಿಕೆಟ್ ಕೊಡಿ" ಎಂದು ಪಟ್ಟು ಹಿಡಿದು, ಮೊಳಕಾಲ್ಮೂರು ಮತ್ತು ಬಾದಾಮಿ ಎರಡೂ ಕಡೆ ಟಿಕೆಟ್ ಪಡೆದರು. ಆದರೆ ಏನಾಯಿತು? ಸಿದ್ದರಾಮಯ್ಯನವರನ್ನು ಸೋಲಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಗೆದ್ದರು, ಆದರೆ ನಿಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನನ್ನು ನೀವು ಸೋಲಿಸಿದ್ರಿ! ಅಂದು ಬಿಜೆಪಿ ಬೆಳೆಸಲು, ಈ ರಾಜ್ಯದಲ್ಲಿ ಸರ್ಕಾರ ತರಲು ಕಾರಣರಾದವರು ನೀವು. ಆದರೆ ಕೊನೆಗೆ ಇಡೀ ಕ್ಷೇತ್ರದಲ್ಲಿ ಹಾಗೂ ಈ ಜಿಲ್ಲೆಯಲ್ಲಿ ಬೇರೆ ಯಾವುದೇ ನಾಯಕರು ಬೆಳೆಯಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಹಾಳುಮಾಡಿದ್ರಿ. ಶ್ರೀರಾಮುಲು ಅವರೇ, ನೆನಪಿರಲಿ... ಇದು ಮದಕರಿ ನಾಯಕರು ಹುಟ್ಟಿದಂತಹ, ಚಿತ್ರದುರ್ಗದ ಕೋಟೆಯ ವೀರ ನಾಯಕರ ನಾಡು. ಈ ನಾಯಕ ಸಮುದಾಯದ ಸ್ವಾಭಿಮಾನವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ.... ಈ ಸಮಯದಲ್ಲಿ ಮುಖಂಡರಾದ ಕನ್ನಯ್ಯ, ದಳವಾಯಿ, ಚೌಳಕೆರೆ ಬಸಣ್ಣ, ಕುದಾಪುರ ಜಿ.ಬಿ. ಲೋಕೇಶ್, ಕುದಾಪುರ ಪ್ರಕಾಶ್, ಪಟೇಲ್ ಕೃಷ್ಣೇಗೌಡ, ಮಲ್ಲೂರಹಳ್ಳಿ ಗುಂಡಯ್ಯ, ಸಣ್ಣಬೋರಯ್ಯ, ಶರಣಪ್ಪ ಆರ್. ತಿಪ್ಪೇಸ್ವಾಮಿ, ಗಜ್ಜುಗಾನಹಳ್ಳಿ ಹೊನ್ನೂರಪ್ಪ, ಇದ್ದರು.

More news from ಕರ್ನಾಟಕ and nearby areas
  • ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ
    1
    ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ 
ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    9 hrs ago
  • ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    2
    ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ
ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ  ನಡೆಯಿತು.
ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. 
ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು.
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    10 hrs ago
  • ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
    3
    ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ

ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ
ಬಾಗಲಕೋಟೆ ಜಿಲ್ಲೆಯ ಇಳಕಲ್  ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. 
ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ  ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ  ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    17 hrs ago
  • ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ. ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ‌. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು‌. ರಾಯಚೂರು, ಮಾನ್ವಿ ಮತ್ತು ಸಿರವಾರ ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್‌. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.
    2
    ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ.
ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ.
ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ.
ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು  
ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ‌. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು‌.
ರಾಯಚೂರು, ಮಾನ್ವಿ ಮತ್ತು ಸಿರವಾರ  ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್‌. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.
    user_Mallikarjun Athnoor
    Mallikarjun Athnoor
    ಸಿರ್ವಾರ, ರಾಯಚೂರು, ಕರ್ನಾಟಕ•
    11 hrs ago
  • ಕಾಕಿ ತೊಟ್ಟ ತಕ್ಷಣ ಎಲ್ಲವನ್ನು ಅಳಬಹುದು ಎಂಬ ಮುಟ್ಟಾಳತನಕ್ಕೆ ಏನನ್ನಬೇಕು? ಹಿರಿಯ ನಾಗರಿಕ ಅನ್ನುವ ವಿವೇಚನೆ ಇಲ್ಲದೆ ಕೈ ಮಾಡಿದ ಇಲ್ಲೊಬ್ಬ ಭ್ರಷ್ಟ ನೋಡಿ!?
    1
    ಕಾಕಿ ತೊಟ್ಟ ತಕ್ಷಣ ಎಲ್ಲವನ್ನು ಅಳಬಹುದು 
ಎಂಬ ಮುಟ್ಟಾಳತನಕ್ಕೆ ಏನನ್ನಬೇಕು? 
ಹಿರಿಯ ನಾಗರಿಕ ಅನ್ನುವ ವಿವೇಚನೆ 
ಇಲ್ಲದೆ ಕೈ ಮಾಡಿದ ಇಲ್ಲೊಬ್ಬ ಭ್ರಷ್ಟ ನೋಡಿ!?
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    21 hrs ago
  • ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ
    1
    ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು
ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು  ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು  ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ  ರಾಜ  ಹೇಳಿಕೆ
    user_Sharanugouda Patil
    Sharanugouda Patil
    Muddebihal, Vijayapura•
    9 hrs ago
  • ಇಳಕಲ್‌ದ ಮಹಾಂತೇಶ ಅಂಗಡಿ ನಿವಾಸದಲ್ಲಿ ಪೂಜ್ಯ ಶ್ರೀ ರುದ್ರಾರಾಧ್ಯ ಶ್ರೀಗಳಿಂದ ವಿಶೇಷ ಪೂಜೆ ಪವಿತ್ರ ಶ್ರಾವಣ ಮಾಸದ ನಿಮಿತ್ತ ಇಳಕಲ್ಲ ನಗರದ ಭಕ್ತರಾದ ಮಹಾಂತೇಶ ಅಂಗಡಿ ಅವರ ನಿವಾಸದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀಗುರುಗಿರಿಸಿದ್ದೇಶ್ವರ ನಿಜೈಕ್ಯ ಕ್ಷೇತ್ರ ಶ್ರೀಮಠದ ಪರಮಪೂಜ್ಯ ವೇದಮೂರ್ತಿ ರುದ್ರಾರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನೆರವೇರಿತು. ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಪೂಜಾ ವಿಧಿವಿಧಾನ ಹಾಗೂ ೧೦೮ ಜಂಗಮರಾಧನೆ ಹಾಗೂ ಪ್ರಸಾದ ಸೇವೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಹರಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ನಗರದ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿದರು.
    1
    ಇಳಕಲ್‌ದ ಮಹಾಂತೇಶ ಅಂಗಡಿ ನಿವಾಸದಲ್ಲಿ ಪೂಜ್ಯ ಶ್ರೀ ರುದ್ರಾರಾಧ್ಯ ಶ್ರೀಗಳಿಂದ ವಿಶೇಷ ಪೂಜೆ
ಪವಿತ್ರ ಶ್ರಾವಣ ಮಾಸದ ನಿಮಿತ್ತ ಇಳಕಲ್ಲ ನಗರದ ಭಕ್ತರಾದ ಮಹಾಂತೇಶ ಅಂಗಡಿ ಅವರ ನಿವಾಸದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀಗುರುಗಿರಿಸಿದ್ದೇಶ್ವರ ನಿಜೈಕ್ಯ ಕ್ಷೇತ್ರ ಶ್ರೀಮಠದ ಪರಮಪೂಜ್ಯ ವೇದಮೂರ್ತಿ ರುದ್ರಾರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನೆರವೇರಿತು.
ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಪೂಜಾ ವಿಧಿವಿಧಾನ ಹಾಗೂ ೧೦೮ ಜಂಗಮರಾಧನೆ ಹಾಗೂ ಪ್ರಸಾದ ಸೇವೆ  ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಹರಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ನಗರದ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    10 hrs ago
  • ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ​ಮುಂಡರಗಿ: "ಕೃತಕ ಮಳೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಕ್ಷಣವೇ ನಿಲ್ಲಿಸಿ, ಬರಗಾಲದಿಂದ ಕಂಗೆಟ್ಟಿರುವ ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 50 ಸಾವಿರ ರೂಪಾಯಿ ಪರಿಹಾರ ಧನ ಜಮೆ ಮಾಡಿ!" ​ಹೀಗಂತ ಸರ್ಕಾರಕ್ಕೆ ಖಡಕ್ ಆಗ್ರಹ ಮುಹೂರ್ತ ಇಟ್ಟಿದ್ದು ಮುಂಡರಗಿಯ ಬಿಜೆಪಿ ಯುವ ಮುಖಂಡ ದೇವಪ್ಪ ಇಟಗಿ. ​ಇಲ್ಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ​ಸುದ್ದಿಯ ಪ್ರಮುಖ ಅಂಶಗಳು: ​'ಮೂಗಿಗೆ ತುಪ್ಪ ಸವರುವ ಕೆಲಸ': ಮೋಡ ಬಿತ್ತನೆ ಯೋಜನೆ ಸಂಪೂರ್ಣ ನಿಷ್ಪ್ರಯೋಜಕ. ಕೋಟಿ ಕೋಟಿ ಹಣ ಸುರಿಯುವ ಈ ಪ್ರಕ್ರಿಯೆ ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ 'ಮೂಗಿಗೆ ತುಪ್ಪ ಸವರುವ ಕೆಲಸ'. ಇದರಿಂದ ಸಂಕಷ್ಟದಲ್ಲಿರುವ ರೈತರ ಹೊಟ್ಟೆ ತುಂಬುವುದಿಲ್ಲ. ​ಸಾಲದ ಸುಳಿಯಲ್ಲಿ ರೈತ: ಸರಿಯಾಗಿ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಾಲ-ಸೋಲ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಒಂದೆಡೆ ಭೀಕರ ಅಭಾವ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಬದುಕು ಕಳೆದುಕೊಳ್ಳುವಂತಾಗಿದೆ. ​ನೇರ ಹಣ ರವಾನೆಗೆ ಒತ್ತಾಯ: ತಾಂತ್ರಿಕವಾಗಿ ಯಶಸ್ಸಿನ ಖಾತರಿ ಇಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡುವ ಬದಲು, ಆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕು.
    1
    ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ
ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ
​ಮುಂಡರಗಿ: "ಕೃತಕ ಮಳೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಕ್ಷಣವೇ ನಿಲ್ಲಿಸಿ, ಬರಗಾಲದಿಂದ ಕಂಗೆಟ್ಟಿರುವ ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 50 ಸಾವಿರ ರೂಪಾಯಿ ಪರಿಹಾರ ಧನ ಜಮೆ ಮಾಡಿ!"
​ಹೀಗಂತ ಸರ್ಕಾರಕ್ಕೆ ಖಡಕ್ ಆಗ್ರಹ ಮುಹೂರ್ತ ಇಟ್ಟಿದ್ದು ಮುಂಡರಗಿಯ ಬಿಜೆಪಿ ಯುವ ಮುಖಂಡ ದೇವಪ್ಪ ಇಟಗಿ.
​ಇಲ್ಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
​ಸುದ್ದಿಯ ಪ್ರಮುಖ ಅಂಶಗಳು:
​'ಮೂಗಿಗೆ ತುಪ್ಪ ಸವರುವ ಕೆಲಸ': ಮೋಡ ಬಿತ್ತನೆ ಯೋಜನೆ ಸಂಪೂರ್ಣ ನಿಷ್ಪ್ರಯೋಜಕ. ಕೋಟಿ ಕೋಟಿ ಹಣ ಸುರಿಯುವ ಈ ಪ್ರಕ್ರಿಯೆ ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ 'ಮೂಗಿಗೆ ತುಪ್ಪ ಸವರುವ ಕೆಲಸ'. ಇದರಿಂದ ಸಂಕಷ್ಟದಲ್ಲಿರುವ ರೈತರ ಹೊಟ್ಟೆ ತುಂಬುವುದಿಲ್ಲ.
​ಸಾಲದ ಸುಳಿಯಲ್ಲಿ ರೈತ: ಸರಿಯಾಗಿ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಾಲ-ಸೋಲ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಒಂದೆಡೆ ಭೀಕರ ಅಭಾವ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಬದುಕು ಕಳೆದುಕೊಳ್ಳುವಂತಾಗಿದೆ.
​ನೇರ ಹಣ ರವಾನೆಗೆ ಒತ್ತಾಯ: ತಾಂತ್ರಿಕವಾಗಿ ಯಶಸ್ಸಿನ ಖಾತರಿ ಇಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡುವ ಬದಲು, ಆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕು.
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    16 hrs ago
  • ಲಂಚ ಕೇಳಿದ ಅಧಿಕಾರಿಗಳಿಗೆ ಬಟ್ಟೆ ಬಿಚ್ಚಿ ಕೊಡಲು ಮುಂದಾದ ಚಾಲಕನ ಕಂಡು ಹೆದರಿ ಹೊಡೆದ ಅಧಿಕಾರಿಗಳು
    1
    ಲಂಚ ಕೇಳಿದ ಅಧಿಕಾರಿಗಳಿಗೆ ಬಟ್ಟೆ ಬಿಚ್ಚಿ ಕೊಡಲು ಮುಂದಾದ ಚಾಲಕನ ಕಂಡು ಹೆದರಿ ಹೊಡೆದ ಅಧಿಕಾರಿಗಳು
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.