ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ ದೇವಿಗೆ ಪೂಜೆ ಸಲ್ಲಿಸಿದ ಅಪಾರ ಭಕ್ತರು ಹಲಗೂರು: ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಾ. 4ನೇ ಬುದುವಾರದಿಂದ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದಿನನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಂಗಳವಾರ ಸಾಯಂಕಾಲ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನಡೆಸಿದ ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿ, ಅಚ್ಛಂದ ನೀಡುವುದು ವಾಡಿಕೆ ಅದನ್ನು ಪಡೆದ ದೇವರಗುಡ್ಡರು ಮತ್ತೆ ದೇವಸ್ಥಾನಕ್ಕೆ ಹೆಬ್ಬಾರೆಯನ್ನು ಹೊತ್ತು ಬರುತ್ತಾರೆ. ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು, ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ, ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿಕೊಂಡು ದೇವಸ್ಥಾನದ ಹತ್ತಿರ ಬಂದಾಗ ಅರ್ಚಕರು ಅವರಿಗೆ ತೀರ್ಥ ಹಾಕಿ ಬರಮಾಡಿಕೊಳ್ಳುತ್ತಾರೆ ನಂತರ ಬೆಟ್ಟದರಸಮ್ಮನ ದೇವರ ಕರಗವನ್ನು ಹೊತ್ತ ಅರ್ಚಕರಾದ ವೀರಭದ್ರಪ್ಪ ಮಡಿವಾಳ ಹಾಸಿದ ಮಡಿಯ ಮೇಲೆ ನಡೆಯುವಾಗ ಜೊತೆಯಲ್ಲಿ ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳ ನಡುವೆ ಸಂಜೆ ಆರು ಗಂಟೆಯ ನಂತರ ದೇವಸ್ಥಾನ ತಲುಪಿತು. ಅಲ್ಲಿ ಮತ್ತೆ ಪೂಜೆ ಪುನಸ್ಕಾರಗಳು ನಡೆಸಿದ ನಂತರ ಅದೇ ದಿನ ರಾತ್ರಿ ಮತ್ತೆ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ದೇವರ ಕರಗವನ್ನು ತರುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದ ಮೇಲೆ ದೇವರು ಕರಗದ ಮನೆಗೆ ಕರಗವನ್ನು ಕೊಂಡಯಾಲಾಯಿತು. ಈ ಸಂದರ್ಭದಲ್ಲಿ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವ ಕಾರ್ಯಕ್ರಮಗಳು ಬಹು ಸೊಗಸಾಗಿ ನಡೆಯಿತು. ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತುಕೊಂಡ ಭಕ್ತರು ಹಂಚುತ್ತಾರೆ.ಹಾಗೂ ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಮಂಗಳವಾರ ಗುಂಡಾಪುರದ ಜಾತ್ರೆಯ ದಿನವಾದ ಮಂಗಳವಾರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.. ಅರ್ಚಕರಾದ ವೀರತಪ್ಪ ಮಾತನಾಡಿ ನಮ್ಮ ಗ್ರಾಮದ ದೇವತೆಯಾದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ದೊಡ್ಡ ಜಾತ್ರೆಯ ಮಂಗಳವಾರ ಸಾಯಂಕಾಲ ಕರಗದ ಮನೆಯಿಂದ ದೇವರು ಮೂಲ ಸನ್ನಿಧಿಗೆ ದೇವರ ಕರಗವನ್ನು ತರಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ. ಗುಂಡಾಪುರ ಸೇರಿದಂತೆ ಒಂಬತ್ತು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಯಾವುದೇ ವಿಘ್ನವಿಲ್ಲದೆ ಜಾತ್ರೆ ಮಹೋತ್ಸವ ನಡೆದಿರುತ್ತದೆ ಎಂದು ಅರ್ಚಕರಾದ ವೀರ ತಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರುಗಳಾದ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತೆಯ ಕ್ರಮವಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಏರ್ಪಡಿಸಿದ್ದರು. 10 hgr1 ಬೆಟ್ಟದ ತಪ್ಪಲ್ಲಿನ ದೇವಸ್ಥಾನಕ್ಕೆ ದೇವರು ಬರುತ್ತಿರುವುದು. 10hgr2 ದೇವರಿಗೆ ಪ್ರಿಯವಾದ ಪರದೇಶಿ ಕುಣಿತದಲ್ಲಿ ಬಾಳೆಹೂನ್ನಿಗ ಗ್ರಾಮಸ್ಥರು ತೊಡಗಿರುವುದು. 10hgr3 ದೇವರ ಮೆರವಣಿಗೆ ಬರುವುದನ್ನು ನೋಡಲು ಕಾದು ಕೋಳಿತ ಭಕ್ತರು. 10hgr4
ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ ದೇವಿಗೆ ಪೂಜೆ ಸಲ್ಲಿಸಿದ ಅಪಾರ ಭಕ್ತರು ಹಲಗೂರು: ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಾ. 4ನೇ ಬುದುವಾರದಿಂದ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದಿನನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಂಗಳವಾರ ಸಾಯಂಕಾಲ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನಡೆಸಿದ ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿ, ಅಚ್ಛಂದ ನೀಡುವುದು ವಾಡಿಕೆ ಅದನ್ನು ಪಡೆದ ದೇವರಗುಡ್ಡರು ಮತ್ತೆ ದೇವಸ್ಥಾನಕ್ಕೆ ಹೆಬ್ಬಾರೆಯನ್ನು ಹೊತ್ತು ಬರುತ್ತಾರೆ. ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು, ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ, ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿಕೊಂಡು ದೇವಸ್ಥಾನದ ಹತ್ತಿರ ಬಂದಾಗ ಅರ್ಚಕರು ಅವರಿಗೆ ತೀರ್ಥ ಹಾಕಿ ಬರಮಾಡಿಕೊಳ್ಳುತ್ತಾರೆ ನಂತರ ಬೆಟ್ಟದರಸಮ್ಮನ ದೇವರ ಕರಗವನ್ನು ಹೊತ್ತ ಅರ್ಚಕರಾದ ವೀರಭದ್ರಪ್ಪ ಮಡಿವಾಳ ಹಾಸಿದ ಮಡಿಯ ಮೇಲೆ ನಡೆಯುವಾಗ ಜೊತೆಯಲ್ಲಿ ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳ ನಡುವೆ ಸಂಜೆ ಆರು ಗಂಟೆಯ ನಂತರ ದೇವಸ್ಥಾನ ತಲುಪಿತು. ಅಲ್ಲಿ ಮತ್ತೆ ಪೂಜೆ ಪುನಸ್ಕಾರಗಳು ನಡೆಸಿದ ನಂತರ ಅದೇ ದಿನ ರಾತ್ರಿ ಮತ್ತೆ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ದೇವರ ಕರಗವನ್ನು ತರುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದ ಮೇಲೆ ದೇವರು ಕರಗದ ಮನೆಗೆ ಕರಗವನ್ನು ಕೊಂಡಯಾಲಾಯಿತು. ಈ ಸಂದರ್ಭದಲ್ಲಿ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವ ಕಾರ್ಯಕ್ರಮಗಳು ಬಹು ಸೊಗಸಾಗಿ ನಡೆಯಿತು. ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತುಕೊಂಡ ಭಕ್ತರು ಹಂಚುತ್ತಾರೆ.ಹಾಗೂ ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಮಂಗಳವಾರ ಗುಂಡಾಪುರದ ಜಾತ್ರೆಯ ದಿನವಾದ ಮಂಗಳವಾರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.. ಅರ್ಚಕರಾದ ವೀರತಪ್ಪ ಮಾತನಾಡಿ ನಮ್ಮ ಗ್ರಾಮದ ದೇವತೆಯಾದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ದೊಡ್ಡ ಜಾತ್ರೆಯ ಮಂಗಳವಾರ ಸಾಯಂಕಾಲ ಕರಗದ ಮನೆಯಿಂದ ದೇವರು ಮೂಲ ಸನ್ನಿಧಿಗೆ ದೇವರ ಕರಗವನ್ನು ತರಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ. ಗುಂಡಾಪುರ ಸೇರಿದಂತೆ ಒಂಬತ್ತು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಯಾವುದೇ ವಿಘ್ನವಿಲ್ಲದೆ ಜಾತ್ರೆ ಮಹೋತ್ಸವ ನಡೆದಿರುತ್ತದೆ ಎಂದು ಅರ್ಚಕರಾದ ವೀರ ತಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರುಗಳಾದ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತೆಯ ಕ್ರಮವಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಏರ್ಪಡಿಸಿದ್ದರು. 10 hgr1 ಬೆಟ್ಟದ ತಪ್ಪಲ್ಲಿನ ದೇವಸ್ಥಾನಕ್ಕೆ ದೇವರು ಬರುತ್ತಿರುವುದು. 10hgr2 ದೇವರಿಗೆ ಪ್ರಿಯವಾದ ಪರದೇಶಿ ಕುಣಿತದಲ್ಲಿ ಬಾಳೆಹೂನ್ನಿಗ ಗ್ರಾಮಸ್ಥರು ತೊಡಗಿರುವುದು. 10hgr3 ದೇವರ ಮೆರವಣಿಗೆ ಬರುವುದನ್ನು ನೋಡಲು ಕಾದು ಕೋಳಿತ ಭಕ್ತರು. 10hgr4
- ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿ:ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು. ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ ಅದು ನಾವು ಕೇಳಿದಾಗ ಮಾತ್ರ ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ: ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ: ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು. ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್ ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿತ್ರ-೧೧-೩ ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು. \1
- *ಭಾರತ ನಲ್ಲಿ ವೈರಲ್*1
- ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಕೆಯ ನಂತರ ಚಿಕ್ಕಬಾಯಿ ಬೀಗ ಪ್ರಾರಂಭವಾಯಿತು. ಸಂಜೆ 4:00 ವರೆಗೆ 3 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಚಿಕ್ಕಬಾಯಿ ಬೀಗ ಹಾಕಿಸಿಕೊಂಡು ತಮ್ಮ ಹರಕೆ ಸಮರ್ಪಿಸಿದರು. 80ಕ್ಕೂ ಹೆಚ್ಚು ಅಧಿಕ ಭಕ್ತರು ಕಳೆದ ಒಂದು ವಾರಗಳಿಂದ ಮಾಲೆ ಹಾಕಿಸಿಕೊಂಡು ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆಯ ವೇಳೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಬುಧವಾರ ಬೆಳಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಉಪವಾಸವಿದ್ದು 30 ಅಡಿ ಉದ್ದದ ಬಾಯಿ ಬೀಗ ಹಾಕಿಸಿಕೊಂಡಿದ್ದರು ಈ ಪೈಕಿ 69 ಮಂದಿ ಪುರುಷರು ಹಾಗೂ 17 ಮಹಿಳೆಯರು ದೊಡ್ಡ ಬಾಯಿ ಬೀಗ ಹಾಕಿಸಿಕೊಂಡಿದ್ದದ್ದು ಆಚ್ಚರಿ ಮೂಡಿಸಿತು. ದೊಡ್ಡ ಬಾಯಿ ಬೀಗವನ್ನು ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು . ಭಕ್ತಾದಿಗಳು ಕಿಲೋಮೀಟರ್ ಗಟ್ಟಲೆ ಮೆರವಣಿಗೆ ನಡೆಸಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಗೆ ನಮಸ್ಕರಿಸಿ ತಮ್ಮ ಸೇವೆಯನ್ನು ಸಂಪನ್ನಗೊಳಿಸಿದರು.4
- ಮೈಸೂರು: ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಶಿಕ್ಷಕಿಯವರಾದ ಶ್ರೀಮತಿ ಎ.ಸಿ. ನೇತ್ರಾವತಿ ಹಾಗೂ ಶ್ರೀ ಎಂ.ಡಿ. ಗುರುಸ್ವಾಮಿ ದಂಪತಿಗಳ ಪುತ್ರರಾದ ಶ್ರೀ ಎಂ.ಜಿ. ನಾಗದೇವ ಅವರು 2026ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ ಶೇ. 99.97 ಅಂಕಗಳನ್ನು ಪಡೆದು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಅಪಾರ ಸಂತಸಕ್ಕೆ ಕಾರಣವಾಗಿದೆ. ಈ ಸಾಧನೆಯ ಹಿನ್ನೆಲೆ ಅವರ ಕುಟುಂಬ ವರ್ಗದವರು ವಿದ್ಯಾರ್ಥಿಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದರು. ಸುತ್ತೂರು ಜೆಎಸ್ಎಸ್ ವಸತಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ವಿಶೇಷ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗದೇವ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಗ್ರಾಮೀಣ ಹಿನ್ನೆಲೆಯಲ್ಲೂ ಉತ್ತಮ ಮಾರ್ಗದರ್ಶನ ಮತ್ತು ಪರಿಶ್ರಮ ಇದ್ದರೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ನಾಗದೇವ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು. ಬಾಲ್ಯದಿಂದಲೇ ಅಧ್ಯಯನದಲ್ಲಿ ಆಸಕ್ತಿ ತೋರಿದ ಅವರು ನಿಯಮಿತ ಅಧ್ಯಯನ, ಪೋಷಕರ ಮಾರ್ಗದರ್ಶನ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಉತ್ಸಾಹ ಮತ್ತು ಪ್ರೇರಣೆ ಮೂಡಿಸುವ ಉದ್ದೇಶದಿಂದ ಕುಟುಂಬ ವರ್ಗದವರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿ ನಾಗದೇವ ಅವರ ಸಾಧನೆ ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಊಟವನ್ನು ವಿತರಿಸಿದರು. ನಾಗದೇವ ಅವರ ಸಾಧನೆಗೆ ಶಾಲೆಯ ಎಲ್ಲರೂ ಅಭಿನಂದನೆ ಸಲ್ಲಿಸಿ ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.1
- ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಕ್ರೋಧಗೊಂಡ ಒಳ ಮೀಸಲಾತಿ ಹೋರಾಟಗಾರರು ಇದೀಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ....1
- Post by Sunil Sunil1
- ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದ ಬಂಗಾರಪ್ಪ ಕಾಲೋನಿಯಲ್ಲಿ ಚರಂಡಿ ಯ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಬಂಗಾರಪ್ಪ ಕಾಲೋನಿ ನಿವಾಸಿ ಗಳ ದೇಹ ಸೇರುತ್ತಿದೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದಾರೆ ಮನವಿ ಸಲ್ಲಿಸಿದ ನಂತರವೂ ಯಾವುದೇ ಕೆಲಸ ಆಗಿಲ್ಲ ಎಂದು ಬಂಗಾರಪ್ಪ ಕಾಲೋನಿ ನಿವಾಸಿಗಳ ಅಳಲು ಅಲ್ಲದೆ ಚರಂಡಿ ಕೂಡ ಸ್ವಚ್ಛತೆ ಮಾಡುವ ಕಾರ್ಯ ಮಾಡಿಲ್ಲ , ಸ್ಥಳೀಯ ನಿವಾಸಿಗಳು ಮಕ್ಕಳು ಅನಾರೋಗ್ಯ ಪೀಡಿತ ರಾಗುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿದ್ದಾರೆ.4
- ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ ದೇವಿಗೆ ಪೂಜೆ ಸಲ್ಲಿಸಿದ ಅಪಾರ ಭಕ್ತರು ಹಲಗೂರು: ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಾ. 4ನೇ ಬುದುವಾರದಿಂದ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದಿನನಿತ್ಯ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಂಗಳವಾರ ಸಾಯಂಕಾಲ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನಡೆಸಿದ ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿ, ಅಚ್ಛಂದ ನೀಡುವುದು ವಾಡಿಕೆ ಅದನ್ನು ಪಡೆದ ದೇವರಗುಡ್ಡರು ಮತ್ತೆ ದೇವಸ್ಥಾನಕ್ಕೆ ಹೆಬ್ಬಾರೆಯನ್ನು ಹೊತ್ತು ಬರುತ್ತಾರೆ. ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು, ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ, ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿಕೊಂಡು ದೇವಸ್ಥಾನದ ಹತ್ತಿರ ಬಂದಾಗ ಅರ್ಚಕರು ಅವರಿಗೆ ತೀರ್ಥ ಹಾಕಿ ಬರಮಾಡಿಕೊಳ್ಳುತ್ತಾರೆ ನಂತರ ಬೆಟ್ಟದರಸಮ್ಮನ ದೇವರ ಕರಗವನ್ನು ಹೊತ್ತ ಅರ್ಚಕರಾದ ವೀರಭದ್ರಪ್ಪ ಮಡಿವಾಳ ಹಾಸಿದ ಮಡಿಯ ಮೇಲೆ ನಡೆಯುವಾಗ ಜೊತೆಯಲ್ಲಿ ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳ ನಡುವೆ ಸಂಜೆ ಆರು ಗಂಟೆಯ ನಂತರ ದೇವಸ್ಥಾನ ತಲುಪಿತು. ಅಲ್ಲಿ ಮತ್ತೆ ಪೂಜೆ ಪುನಸ್ಕಾರಗಳು ನಡೆಸಿದ ನಂತರ ಅದೇ ದಿನ ರಾತ್ರಿ ಮತ್ತೆ ಕರಗವನ್ನು ಹೊತ್ತು ಗ್ರಾಮದ ಕರಗದ ಮನೆಗೆ ದೇವರ ಕರಗವನ್ನು ತರುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದ ಮೇಲೆ ದೇವರು ಕರಗದ ಮನೆಗೆ ಕರಗವನ್ನು ಕೊಂಡಯಾಲಾಯಿತು. ಈ ಸಂದರ್ಭದಲ್ಲಿ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವ ಕಾರ್ಯಕ್ರಮಗಳು ಬಹು ಸೊಗಸಾಗಿ ನಡೆಯಿತು. ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತುಕೊಂಡ ಭಕ್ತರು ಹಂಚುತ್ತಾರೆ.ಹಾಗೂ ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಮಂಗಳವಾರ ಗುಂಡಾಪುರದ ಜಾತ್ರೆಯ ದಿನವಾದ ಮಂಗಳವಾರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.. ಅರ್ಚಕರಾದ ವೀರತಪ್ಪ ಮಾತನಾಡಿ ನಮ್ಮ ಗ್ರಾಮದ ದೇವತೆಯಾದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ದೊಡ್ಡ ಜಾತ್ರೆಯ ಮಂಗಳವಾರ ಸಾಯಂಕಾಲ ಕರಗದ ಮನೆಯಿಂದ ದೇವರು ಮೂಲ ಸನ್ನಿಧಿಗೆ ದೇವರ ಕರಗವನ್ನು ತರಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ. ಗುಂಡಾಪುರ ಸೇರಿದಂತೆ ಒಂಬತ್ತು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಯಾವುದೇ ವಿಘ್ನವಿಲ್ಲದೆ ಜಾತ್ರೆ ಮಹೋತ್ಸವ ನಡೆದಿರುತ್ತದೆ ಎಂದು ಅರ್ಚಕರಾದ ವೀರ ತಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರುಗಳಾದ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತೆಯ ಕ್ರಮವಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಏರ್ಪಡಿಸಿದ್ದರು. 10 hgr1 ಬೆಟ್ಟದ ತಪ್ಪಲ್ಲಿನ ದೇವಸ್ಥಾನಕ್ಕೆ ದೇವರು ಬರುತ್ತಿರುವುದು. 10hgr2 ದೇವರಿಗೆ ಪ್ರಿಯವಾದ ಪರದೇಶಿ ಕುಣಿತದಲ್ಲಿ ಬಾಳೆಹೂನ್ನಿಗ ಗ್ರಾಮಸ್ಥರು ತೊಡಗಿರುವುದು. 10hgr3 ದೇವರ ಮೆರವಣಿಗೆ ಬರುವುದನ್ನು ನೋಡಲು ಕಾದು ಕೋಳಿತ ಭಕ್ತರು. 10hgr41