ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೊಟೇಲ್ ಪಕ್ಕದಲ್ಲಿ ಪಾನ-ಬೀಡಿ ಅಂಗಡಿ ನಡೆಸುತ್ತಿರುವ ರಾಜೀವ್ ಶೆಟ್ಟಿ ಅವರು ಅಪೂರ್ವ ಪ್ರಾಮಾಣಿಕತೆ ಮೆರೆದಿದ್ದಾರೆ. 2026ರ ಜೂನ್ 14ರ ಭಾನುವಾರ ಸಂಜೆ ಅವರ ಅಂಗಡಿಗೆ ಬಂದಿದ್ದ ಒಬ್ಬ ಅಪರಿಚಿತ ವಿದ್ಯಾವಂತ ಯುವಕ ವ್ಯಾಪಾರ ಮುಗಿಸಿ ತೆರಳಿದಾಗ, ಆತನ ಮನಿ ಪರ್ಸ್ ಅಂಗಡಿಯ ಮುಂದೆ ಜಾರಿ ಬಿದ್ದಿತ್ತು. ಈ ವಿಷಯ ಆರಂಭದಲ್ಲಿ ಯಾರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ಸಮಯದ ನಂತರ ರಾಜೀವ್ ಶೆಟ್ಟಿ ಅವರಿಗೆ ಪಾಕೀಟ್ ಸಿಕ್ಕಿದ್ದು, ಯಾರದ್ದೆಂದು ತಿಳಿದುಬಾರದಿದ್ದಾಗ ಅದನ್ನು ತೆರೆದು ನೋಡಿದ್ದಾರೆ. ಅದರಲ್ಲಿದ್ದ ಸುಮಾರು ₹10,000 ನಗದು ಮತ್ತು ಮಹತ್ವದ ಕಾರ್ಡ್ಗಳನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ. ಆ ಪಾಕೀಟ್ನಲ್ಲಿ ವ್ಹಿ ಆರ್ ಎಲ್ ಬಸ್ ಟಿಕೆಟ್ ಸಹ ಇದ್ದು, ಅದನ್ನು ಹುಡುಕಿಕೊಂಡು ಬಂದ ಯುವಕನಿಗೆ ತಕ್ಷಣ ರಾಜೀವ್ ಅವರು ಪಾಕೀಟನ್ನು ಹಿಂದಿರುಗಿಸಿ ಮಾನವೀಯತೆ ಮೆರೆದರು. ರಾಜೀವ್ ಅವರ ಪ್ರಾಮಾಣಿಕ ನಡತೆಯನ್ನು ಕಂಡು ಯುವಕ ₹1,000 ಬಹುಮಾನ ನೀಡಲು ಮುಂದಾದಾಗ, ಸದಾ ಆರ್ಥಿಕ ತೊಂದರೆಯಲ್ಲಿರುವ ರಾಜೀವ್ ಅವರು, “ಪರರ ಹಣ ನಮಗೆ ಬೇಕಿಲ್ಲ ಸರ್, ಧನ್ಯವಾದಗಳು” ಎಂದು ಹೇಳಿ ನಗುಮುಖದಿಂದ ಅದನ್ನು ನಿರಾಕರಿಸಿದರು. ರಾಜೀವ್ ಶೆಟ್ಟಿ ಅವರ ಬಡತನದಲ್ಲೂ ಪ್ರಾಮಾಣಿಕ ಬದುಕು ಸಾಗಿಸುವ ಗುಣವನ್ನು ಮೆಚ್ಚಿ, ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆಯ ವರದಿಗಾರ ಸುಧೀರ ಕುಂಭೋಜಕರ ಮತ್ತು ಸಮಾನ ಮನಸ್ಕರು ರಾಜೀವ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸಿಹಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ಹುಕ್ಕೇರಿ, ಅಶೋಕ ಶೆಟ್ಟಿ, ಸಂಯುಕ್ತ ಕ್ರಾಂತಿ ದಿನಪತ್ರಿಕೆಯ ವರದಿಗಾರ ನದೀಮ್ ನಾಯಿಕವಾಡಿ, ಸುಭಾಷಿತ ದಿನಪತ್ರಿಕೆಯ ವರದಿಗಾರ ಶಿವಾನಂದ ಭಂಡಾರಿ ಸೇರಿದಂತೆ ರಾಘವೇಂದ್ರ ಹೊಟೇಲ್ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೊಟೇಲ್ ಪಕ್ಕದಲ್ಲಿ ಪಾನ-ಬೀಡಿ ಅಂಗಡಿ ನಡೆಸುತ್ತಿರುವ ರಾಜೀವ್ ಶೆಟ್ಟಿ ಅವರು ಅಪೂರ್ವ ಪ್ರಾಮಾಣಿಕತೆ ಮೆರೆದಿದ್ದಾರೆ. 2026ರ ಜೂನ್ 14ರ ಭಾನುವಾರ ಸಂಜೆ ಅವರ ಅಂಗಡಿಗೆ ಬಂದಿದ್ದ ಒಬ್ಬ ಅಪರಿಚಿತ ವಿದ್ಯಾವಂತ ಯುವಕ ವ್ಯಾಪಾರ ಮುಗಿಸಿ ತೆರಳಿದಾಗ, ಆತನ ಮನಿ ಪರ್ಸ್ ಅಂಗಡಿಯ ಮುಂದೆ ಜಾರಿ ಬಿದ್ದಿತ್ತು. ಈ ವಿಷಯ ಆರಂಭದಲ್ಲಿ ಯಾರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ಸಮಯದ ನಂತರ ರಾಜೀವ್ ಶೆಟ್ಟಿ ಅವರಿಗೆ ಪಾಕೀಟ್ ಸಿಕ್ಕಿದ್ದು, ಯಾರದ್ದೆಂದು ತಿಳಿದುಬಾರದಿದ್ದಾಗ ಅದನ್ನು ತೆರೆದು ನೋಡಿದ್ದಾರೆ. ಅದರಲ್ಲಿದ್ದ ಸುಮಾರು ₹10,000 ನಗದು ಮತ್ತು ಮಹತ್ವದ ಕಾರ್ಡ್ಗಳನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ. ಆ ಪಾಕೀಟ್ನಲ್ಲಿ ವ್ಹಿ ಆರ್ ಎಲ್ ಬಸ್ ಟಿಕೆಟ್ ಸಹ ಇದ್ದು, ಅದನ್ನು ಹುಡುಕಿಕೊಂಡು ಬಂದ ಯುವಕನಿಗೆ ತಕ್ಷಣ ರಾಜೀವ್ ಅವರು ಪಾಕೀಟನ್ನು ಹಿಂದಿರುಗಿಸಿ ಮಾನವೀಯತೆ ಮೆರೆದರು. ರಾಜೀವ್ ಅವರ ಪ್ರಾಮಾಣಿಕ ನಡತೆಯನ್ನು ಕಂಡು ಯುವಕ ₹1,000 ಬಹುಮಾನ ನೀಡಲು ಮುಂದಾದಾಗ, ಸದಾ ಆರ್ಥಿಕ ತೊಂದರೆಯಲ್ಲಿರುವ ರಾಜೀವ್ ಅವರು, “ಪರರ ಹಣ ನಮಗೆ ಬೇಕಿಲ್ಲ ಸರ್, ಧನ್ಯವಾದಗಳು” ಎಂದು ಹೇಳಿ ನಗುಮುಖದಿಂದ ಅದನ್ನು ನಿರಾಕರಿಸಿದರು. ರಾಜೀವ್ ಶೆಟ್ಟಿ ಅವರ ಬಡತನದಲ್ಲೂ ಪ್ರಾಮಾಣಿಕ ಬದುಕು ಸಾಗಿಸುವ ಗುಣವನ್ನು ಮೆಚ್ಚಿ, ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆಯ ವರದಿಗಾರ ಸುಧೀರ ಕುಂಭೋಜಕರ ಮತ್ತು ಸಮಾನ ಮನಸ್ಕರು ರಾಜೀವ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸಿಹಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ಹುಕ್ಕೇರಿ, ಅಶೋಕ ಶೆಟ್ಟಿ, ಸಂಯುಕ್ತ ಕ್ರಾಂತಿ ದಿನಪತ್ರಿಕೆಯ ವರದಿಗಾರ ನದೀಮ್ ನಾಯಿಕವಾಡಿ, ಸುಭಾಷಿತ ದಿನಪತ್ರಿಕೆಯ ವರದಿಗಾರ ಶಿವಾನಂದ ಭಂಡಾರಿ ಸೇರಿದಂತೆ ರಾಘವೇಂದ್ರ ಹೊಟೇಲ್ ಸಿಬ್ಬಂದಿಯವರು ಉಪಸ್ಥಿತರಿದ್ದರು.
- ಅಮರ ವಾಹಿನಿ ಕನ್ನಡ ನ್ಯೂಸ್ ವರದಿಯ ಪ್ರಕಾರ, ಕತ್ತಿ ಸಾಹುಕಾರ್ ಮತ್ತು ಜಾರಕಿಹೊಳಿ ಸಾಹುಕಾರ್ಗಳ ಸಮಾಗಮ ನಡೆದಿದೆ.1
- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ, ಭೀಮ ಧ್ವನಿ ಸಂಘಟನೆ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಒಂದು ಪೂರ್ವಭಾವಿ ಸಭೆಯನ್ನು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಿನಾಂಕ 21/06/2026 ರಂದು ನಡೆಸಲಾಯಿತು. ದಲಿತ ಸಂಘರ್ಷ ಸಮಿತಿ ಭೀಮ ಧ್ವನಿ ಸಂಘಟನೆಯು ಈ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಪ್ರಮುಖವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅವುಗಳಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುವುದು ಸೇರಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಸ್ಸಿ/ಎಸ್ಟಿ ಜನಾಂಗದ ಅನುದಾನದ ದುರ್ಬಳಕೆಯ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತುವುದು, ಹಾಗೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಗುವವರೆಗೆ ಅವರ ಜೊತೆ ನಿಲ್ಲುವುದು ನಿರ್ಣಯಿಸಲಾಯಿತು. ಜೊತೆಗೆ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು, ಮತ್ತು ಎಸ್ಸಿ/ಎಸ್ಟಿ ನೌಕರರ ಮೇಲೆ ನಡೆಯುವ ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಖಂಡಿಸುವುದು ಮುಂತಾದ ಹಲವು ಮುಖ್ಯ ವಿಷಯಗಳನ್ನು ವಿವರವಾಗಿ ಚರ್ಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ ಅವರು ಸಂಘಟನೆಯ ಕುರಿತು ವಿವರಿಸಿದರು. ಸಂಘಟನೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೋಳೆ ಅವರು, ಸಭೆ ಮತ್ತು ಸಂಘಟನೆ ಕಟ್ಟುವ ಕುರಿತು, ಪ್ರತಿಯೊಬ್ಬ ಪದಾಧಿಕಾರಿಗಳು ತಾಲೂಕು ಮಟ್ಟದ ಸಂಘಟನೆಯ ಎಲ್ಲ ಪದಾಧಿಕಾರಿಗಳ ನೇಮಕಾತಿಯನ್ನು ಪೂರ್ಣಗೊಳಿಸಿ, ಅಖಂಡ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಕ್ಷೇತ್ರಗಳಲ್ಲಿ ಗಟ್ಟಿಯಾದ ಸಂಘಟನೆಯನ್ನು ನಿರ್ಮಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ, ರಾಜ್ಯ ಸಮಿತಿ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ ಅವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಹಾಗೂ ಜಿಲ್ಲಾ ಸಮಿತಿಗಳನ್ನು ಪೂರ್ಣಗೊಳಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ ನೀಡಿದರು. ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಿಲಿಂದ್ ಐಹೋಳೆ, ರಾಜ್ಯ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ, ಸುನಿತಾ ಮೊದಗಿ, ವೀಣಾ ಹುಚ್ಚನಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹೊಸಮನಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರಾದ ಮುಕೇಶ್ ಲಂಬುಗೋಳ, ಎಲ್ಲ ಮಹಿಳಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪುರುಷ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಸೇರಿದಂತೆ ಕಮಿಟಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.4
- ಮುಧೋಳ ತಾಲೂಕಿನ ಮುದ್ದಾಪೂರ ಪ್ರದೇಶದಲ್ಲಿರುವ ಜೆ.ಕೆ. ಸಿಮೆಂಟ್ಸ್ನ ಅಕ್ರಮ ಗಣಿಗಾರಿಕೆ ವಿರುದ್ಧ ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸೋಮವಾರಕ್ಕೆ ಈ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಸಮರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ರೈತರ ಆರೋಪದ ಪ್ರಕಾರ, ನಿಯಮಗಳ ಅನುಸಾರ ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಅವಕಾಶವಿಲ್ಲ. ಆದರೂ, ಅಧಿಕಾರಿಗಳ ಕಣ್ಮುಂದೆಯೇ ನಿಯಮಗಳನ್ನು ಗಾಳಿಗೆ ತೂರಿ ಕೈಗಾರಿಕೆ ಸ್ಥಾಪನೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸೋಮವಾರ ಶಾಸಕ ಅಶೋಕ ಮನಗೂಳಿ ಅವರು ಸಂಸದ ರಮೇಶ್ ಜಿಗಜಿನಗಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಮತಕ್ಷೇತ್ರವಾದ ಸಿಂದಗಿಗೆ ಸಂಸದ ಜಿಗಜಿನಗಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ ಮನಗೂಳಿ, ಜಿಗಜಿನಗಿ ಅವರು ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ತಾನು ಇಷ್ಟು ಅನುದಾನ ನೀಡಿದ್ದೇನೆ ಎಂದು ಹೇಳಿಕೊಳ್ಳುವ ಬದಲು, ನೀಡಿದ ಅನುದಾನದ ಬಗ್ಗೆ ಸಂಸದರು ನಿಖರ ಮಾಹಿತಿ ನೀಡುವಂತೆ ಶಾಸಕ ಮನಗೂಳಿ ಒತ್ತಾಯಿಸಿದ್ದಾರೆ.1
- ಬೆಳಗಾವಿಯ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಷಣ ಮಾಡಿದರು.1
- ವಿಜಯಪುರದ ಗೋವಿಂದಪುರದಲ್ಲಿ ನಡೆದ ಆರು ಜನರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಮೊದಲು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.1