ಬಾಗೇಪಲ್ಲಿ: ಕೃಷಿಕರ ಮಗಳು ಶ್ರೀಗುಣ ಪದವಿಯ 3 ವಿಷಯಗಳಲ್ಲಿ 100 ಅಂಕಗಳು ವಿದ್ಯಾರ್ಥಿನಿ ಎಸ್.ಶ್ರೀಗುಣ ಬಾಗೇಪಲ್ಲಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪದವಿಯ ಕಲಾ ವಿಭಾಗದ 5 ನೇ ಸೆಮಿಸ್ಟರ್ ನ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಸ್. ಶ್ರೀಗುಣ, ಸಮಾಜಶಾಸ್ತçದ 2 ವಿಷಯಗಳಲ್ಲಿ 100 ಅಂಕಗಳು ಮತ್ತು ಅಥðಶಾಸ್ತçದ ಒಂದು ವಿಷಯದಲ್ಲಿ 100 ಅಂಕಗಳು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿಯ ತೀಮಾಕಲಪಲ್ಲಿ ಗ್ರಾಮದ ರೈತ ಶಂಕರಪ್ಪ, ರೈತ ಮಹಿಳೆ ರಾಧಮ್ಮ ದಂಪತಿಗಳ ಪುತ್ರಿ ಶ್ರೀಗುಣ ಆಗಿದ್ದಾರೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯ 5 ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡಿದ್ದಾರೆ. ಮುಖ್ಯವಿಷಯಗಳಾದ ಸಮಾಜಶಾಸ್ತç ವಿಭಾಗದ ಸೊಸೈಟಿ ಅಂಡ್ ಟ್ರೆöÊಬ್ಸ್ ಮತ್ತು ಸ್ಟಾಟಿಟಿಕ್ಸ್ ಫಾರ್ ಸೋಷಿಯಾಲಾಜಿಕಲ್ ರಿಸರ್ಚ್ ಎಂಬ ವಿಷಯಗಳಲ್ಲಿ 100 ಕ್ಕೆ 100 ಅಂಕಗಳು ಪಡೆದಿದ್ದಾರೆ. ಅರ್ಥಶಾಸ್ತçದ ಪಬ್ಲಿಕ್ ಏಕಾನಾಮಿಕ್ಸ್ ವಿಷಯದಲ್ಲಿ 100 ಕ್ಕೆ 100 ಅಂಕಗಳು ಪಡೆದಿದ್ದಾರೆ. ಉಳಿದಂತೆ ಡೆವೆಲೆಪ್ಮೆಂಟ್ ಎಕಾನಾಮಿಕ್ಸ್ ವಿಷಯದಲ್ಲಿ 90 ಅಂಕಗಳು, ಹೂಮನ್ ರಿಸೋರ್ಸ್ ಮ್ಯಾನೇಜಮೆಂಟ್ 93 ಅಂಕಗಳು, ಸೋಷಿಯಲ್ ಎಂಟ್ರಿಪ್ರೀಲಿಮಿನರಿಶಿಪ್ ವಿಷಯದಲ್ಲಿ 93, ಎಪ್ಲಾಯಿಬಿಲಿಟಿ ಸ್ಕಿಲ್ಸ್ ವಿಷಯದಲ್ಲಿ 89 ಅಂಕಗಳು ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣ ಜಿಲಕರಪಲ್ಲಿ ಸರ್ಕಾರಿ ಕಿರಿಯ, ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸರ್ಕಾರಿ ಬಾಲಕಿಯರ ಫ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಶ್ರೀಗುಣ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 3 ವಿಷಯಗಳಲ್ಲಿ 100 ಅಂಕಗಳು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ರೀಗುಣ ತಂದೆ ರೈತ ಶಂಕರಪ್ಪ ಪ್ರತಿಕ್ರಿಯಿಸಿದರು. 'ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದಿದ್ದೇನೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚು ಅಂಕಗಳು ಪಡೆದು, ಸಮಾಜಶಾಸ್ತçದಲ್ಲಿ ಅಥವಾ ಅರ್ಥಶಾಸ್ತçದ ವಿಷಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುವ ಗುರಿ ಇದೆ. ಕಾಲೇಜಿಗೆ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ, ಪಿಎಚ್ಡಿ ವಿದ್ಯಾರ್ಥಿಗಳಿಗೆ ಗೈಡ್ ಮಾಡುವ ಆಸೆ ಇದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನುರಿತ ಪ್ರಾಧ್ಯಾಪಕರ ಮತ್ತು ಪೋಷಕರ ಸಹಕಾರದಿಂದ ಹೆಚ್ಚು ಅಂಕಗಳು ಪಡೆದಿದ್ದೇನೆ ಎಂದು ವಿದ್ಯಾರ್ಥಿನಿ ಶ್ರೀಗುಣ ತಿಳಿಸಿದರು.
ಬಾಗೇಪಲ್ಲಿ: ಕೃಷಿಕರ ಮಗಳು ಶ್ರೀಗುಣ ಪದವಿಯ 3 ವಿಷಯಗಳಲ್ಲಿ 100 ಅಂಕಗಳು ವಿದ್ಯಾರ್ಥಿನಿ ಎಸ್.ಶ್ರೀಗುಣ ಬಾಗೇಪಲ್ಲಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪದವಿಯ ಕಲಾ ವಿಭಾಗದ 5 ನೇ ಸೆಮಿಸ್ಟರ್ ನ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಸ್. ಶ್ರೀಗುಣ, ಸಮಾಜಶಾಸ್ತçದ 2 ವಿಷಯಗಳಲ್ಲಿ 100 ಅಂಕಗಳು ಮತ್ತು ಅಥðಶಾಸ್ತçದ ಒಂದು ವಿಷಯದಲ್ಲಿ 100 ಅಂಕಗಳು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿಯ ತೀಮಾಕಲಪಲ್ಲಿ ಗ್ರಾಮದ ರೈತ ಶಂಕರಪ್ಪ, ರೈತ ಮಹಿಳೆ ರಾಧಮ್ಮ ದಂಪತಿಗಳ ಪುತ್ರಿ ಶ್ರೀಗುಣ ಆಗಿದ್ದಾರೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯ 5 ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡಿದ್ದಾರೆ. ಮುಖ್ಯವಿಷಯಗಳಾದ ಸಮಾಜಶಾಸ್ತç ವಿಭಾಗದ ಸೊಸೈಟಿ ಅಂಡ್ ಟ್ರೆöÊಬ್ಸ್ ಮತ್ತು ಸ್ಟಾಟಿಟಿಕ್ಸ್ ಫಾರ್ ಸೋಷಿಯಾಲಾಜಿಕಲ್ ರಿಸರ್ಚ್ ಎಂಬ ವಿಷಯಗಳಲ್ಲಿ 100 ಕ್ಕೆ 100 ಅಂಕಗಳು ಪಡೆದಿದ್ದಾರೆ. ಅರ್ಥಶಾಸ್ತçದ ಪಬ್ಲಿಕ್ ಏಕಾನಾಮಿಕ್ಸ್ ವಿಷಯದಲ್ಲಿ 100 ಕ್ಕೆ 100 ಅಂಕಗಳು ಪಡೆದಿದ್ದಾರೆ. ಉಳಿದಂತೆ ಡೆವೆಲೆಪ್ಮೆಂಟ್ ಎಕಾನಾಮಿಕ್ಸ್ ವಿಷಯದಲ್ಲಿ 90 ಅಂಕಗಳು, ಹೂಮನ್ ರಿಸೋರ್ಸ್ ಮ್ಯಾನೇಜಮೆಂಟ್ 93 ಅಂಕಗಳು, ಸೋಷಿಯಲ್ ಎಂಟ್ರಿಪ್ರೀಲಿಮಿನರಿಶಿಪ್ ವಿಷಯದಲ್ಲಿ 93, ಎಪ್ಲಾಯಿಬಿಲಿಟಿ ಸ್ಕಿಲ್ಸ್ ವಿಷಯದಲ್ಲಿ 89 ಅಂಕಗಳು ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣ ಜಿಲಕರಪಲ್ಲಿ ಸರ್ಕಾರಿ ಕಿರಿಯ, ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸರ್ಕಾರಿ ಬಾಲಕಿಯರ ಫ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಶ್ರೀಗುಣ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 3 ವಿಷಯಗಳಲ್ಲಿ 100 ಅಂಕಗಳು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ರೀಗುಣ ತಂದೆ ರೈತ ಶಂಕರಪ್ಪ ಪ್ರತಿಕ್ರಿಯಿಸಿದರು. 'ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದಿದ್ದೇನೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚು ಅಂಕಗಳು ಪಡೆದು, ಸಮಾಜಶಾಸ್ತçದಲ್ಲಿ ಅಥವಾ ಅರ್ಥಶಾಸ್ತçದ ವಿಷಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುವ ಗುರಿ ಇದೆ. ಕಾಲೇಜಿಗೆ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ, ಪಿಎಚ್ಡಿ ವಿದ್ಯಾರ್ಥಿಗಳಿಗೆ ಗೈಡ್ ಮಾಡುವ ಆಸೆ ಇದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನುರಿತ ಪ್ರಾಧ್ಯಾಪಕರ ಮತ್ತು ಪೋಷಕರ ಸಹಕಾರದಿಂದ ಹೆಚ್ಚು ಅಂಕಗಳು ಪಡೆದಿದ್ದೇನೆ ಎಂದು ವಿದ್ಯಾರ್ಥಿನಿ ಶ್ರೀಗುಣ ತಿಳಿಸಿದರು.
- ಪವನ್ ಕಲ್ಯಾಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:- ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ತದನಂತರ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಎಂದು ಹೇಳಿದರು. ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್, ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.1
- ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.2
- Post by Vv Vv1
- ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ1
- ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ1
- Post by Chand Pasha1
- KOLAR KI.AWAAZ KOUSAR1
- ಮಹಿಳಾ ಮೀಸಲಾತಿ ವಿರೋಧದ ಆರೋಪ: ಕಾಂಗ್ರೆಸ್ ವಿರುದ್ಧ ಕೋಲಾರ BJP ಬೃಹತ್ ಪ್ರತಿಭಟನೆ1