ಮಹಿಳಾ ಸಬಲೀಕರಣದ ಹಾದಿಯಲ್ಲಿ ಯಾದಗಿರಿ: ಮಹಿಳಾ ದಿನಾಚರಣೆ ಹಾಗೂ ಸಿಎಂಟಿಸಿ ಉದ್ಘಾಟನೆ ಯಾದಗಿರಿ, ಮಾ.27: ಜಿಲ್ಲಾ ಪಂಚಾಯತ ಯಾದಗಿರಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ–2026ನ್ನು ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಯಾದಗಿರಿಯ ಬಂದಳ್ಳಿ ಗ್ರಾಮದಲ್ಲಿ ಸಮುದಾಯ ನಿರ್ವಹಿತ ತರಬೇತಿ ಕೇಂದ್ರ (CMTC) ಹಾಗೂ ಯಾದವ ವನಧನ್ ಅಭಿವೃದ್ಧಿ ಕೇಂದ್ರ (VDVK)ಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಲವೀಶ ಒರಡಿಯಾ ಉದ್ಘಾಟಿಸಿ, ಮಹಿಳೆಯರು ಸ್ವಾವಲಂಬಿಗಳಾಗಲು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಅಗತ್ಯವಿದೆ, ಒಂದು ಗ್ರಾಮ ಒಂದು ಉತ್ಪನ್ನ ಎಲ್ಲಾ ಗ್ರಾಮ ಪಂಚಾಯತ್ ನ ಸ್ವ ಸಹಾಯ ಗುಂಪುಗಳ ಮೂಲಕ ಪ್ರಯೋಜನ ಪಡೆದುಕೊಳಬೇಕು ಎಂದು ತಿಳಿಸಿದರು. ಶ್ರೀ ಸಿ ಬಿ ದೇವರಮನಿ' ಯೋಜನಾ ನಿರ್ದೇಶಕರು, ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಕುರಿತು ಪ್ರಸ್ತವಿಕತೆ ನುಡಿದರು, ಮಹಿಳೆಯರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಗಳ ಮತ್ತು ಸ್ವ ಸಹಾಯ ಸಂಘಗಳನ್ನು ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು. ಶ್ರೀ ಬಸಪ್ಪ ಸಹಾಯಕ ನಿರ್ದೇಶಕರು ಕೌಶಲ್ಯ ರವರು ನಲ ಜಲ್ ಮಿತ್ರ ತರಬೇತಿ ಪಡೆದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು. ಶ್ರೀ ಸಂತೋಷ್ ಶೇಷಲು ಸಹಾಯಕ ಯೋಜನಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಯಾದಗಿರಿ, ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಜಿಪಿಎಲ್ಎಫ್ಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ಸನ್ಮಾನಿಸಲಾಯಿತು. ನಿರ್ದೇಶಕರುಗಳು ಒಕ್ಕೂಟ ಬಂದಳ್ಳಿ ಶ್ರೀಮತಿ ಸುಗಂಧಮ್ಮಾ, ಶರಣಮ್ಮ ಪಾರ್ವತಿ MKPC ಯಾದಗಿರಿ, ಎನ್. ಆರ್. ಎಲ್. ಎಂ ಸಿಬಂದ್ದಿಗಳಾದ ಗಿರೀಶ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಕಾವೇರಿ ಜಿಲ್ಲಾ ಲೈವ್ಲೀಹುಡ್ ಮ್ಯಾನೇಜರ್, ಸಿದ್ರಾಮಪ್ಪ ಜಿಲ್ಲಾ ವ್ಯವಸ್ಥಾಪಕರು ಕೌಶಲ್ಯ ದತ್ತಾತ್ರೇಯ ಜೆರೆ ನಾರಿ ಕಿಲ್ಪ್ ಜಿಲ್ಲಾ ಸಂಯೋಜಕರು ಜಿಲ್ಲಾ, ತಾಲೂಕುಗಳು ಏನ್ ಆರ್ ಎಲ್ ಎಮ ನ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಿಂದ (GPLF) ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಂಪನ್ಮೂಲಗಳ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಜೊತೆಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ದಿಕ್ಕು ತೋರಿದ ಕಾರ್ಯಕ್ರಮವಾಗಿ ಗಮನಸೆಳೆದಿತು.
ಮಹಿಳಾ ಸಬಲೀಕರಣದ ಹಾದಿಯಲ್ಲಿ ಯಾದಗಿರಿ: ಮಹಿಳಾ ದಿನಾಚರಣೆ ಹಾಗೂ ಸಿಎಂಟಿಸಿ ಉದ್ಘಾಟನೆ ಯಾದಗಿರಿ, ಮಾ.27: ಜಿಲ್ಲಾ ಪಂಚಾಯತ ಯಾದಗಿರಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ–2026ನ್ನು ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಯಾದಗಿರಿಯ ಬಂದಳ್ಳಿ ಗ್ರಾಮದಲ್ಲಿ ಸಮುದಾಯ ನಿರ್ವಹಿತ ತರಬೇತಿ ಕೇಂದ್ರ (CMTC) ಹಾಗೂ ಯಾದವ ವನಧನ್ ಅಭಿವೃದ್ಧಿ ಕೇಂದ್ರ (VDVK)ಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಲವೀಶ ಒರಡಿಯಾ ಉದ್ಘಾಟಿಸಿ, ಮಹಿಳೆಯರು ಸ್ವಾವಲಂಬಿಗಳಾಗಲು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಅಗತ್ಯವಿದೆ, ಒಂದು ಗ್ರಾಮ ಒಂದು ಉತ್ಪನ್ನ ಎಲ್ಲಾ ಗ್ರಾಮ ಪಂಚಾಯತ್ ನ ಸ್ವ ಸಹಾಯ ಗುಂಪುಗಳ ಮೂಲಕ ಪ್ರಯೋಜನ ಪಡೆದುಕೊಳಬೇಕು ಎಂದು ತಿಳಿಸಿದರು. ಶ್ರೀ ಸಿ ಬಿ ದೇವರಮನಿ' ಯೋಜನಾ ನಿರ್ದೇಶಕರು, ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಕುರಿತು ಪ್ರಸ್ತವಿಕತೆ ನುಡಿದರು, ಮಹಿಳೆಯರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಗಳ ಮತ್ತು ಸ್ವ ಸಹಾಯ ಸಂಘಗಳನ್ನು ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು. ಶ್ರೀ ಬಸಪ್ಪ ಸಹಾಯಕ ನಿರ್ದೇಶಕರು ಕೌಶಲ್ಯ ರವರು ನಲ ಜಲ್ ಮಿತ್ರ ತರಬೇತಿ ಪಡೆದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು. ಶ್ರೀ ಸಂತೋಷ್ ಶೇಷಲು ಸಹಾಯಕ ಯೋಜನಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಯಾದಗಿರಿ, ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಜಿಪಿಎಲ್ಎಫ್ಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ಸನ್ಮಾನಿಸಲಾಯಿತು. ನಿರ್ದೇಶಕರುಗಳು ಒಕ್ಕೂಟ ಬಂದಳ್ಳಿ ಶ್ರೀಮತಿ ಸುಗಂಧಮ್ಮಾ, ಶರಣಮ್ಮ ಪಾರ್ವತಿ MKPC ಯಾದಗಿರಿ, ಎನ್. ಆರ್. ಎಲ್. ಎಂ ಸಿಬಂದ್ದಿಗಳಾದ ಗಿರೀಶ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಕಾವೇರಿ ಜಿಲ್ಲಾ ಲೈವ್ಲೀಹುಡ್ ಮ್ಯಾನೇಜರ್, ಸಿದ್ರಾಮಪ್ಪ ಜಿಲ್ಲಾ ವ್ಯವಸ್ಥಾಪಕರು ಕೌಶಲ್ಯ ದತ್ತಾತ್ರೇಯ ಜೆರೆ ನಾರಿ ಕಿಲ್ಪ್ ಜಿಲ್ಲಾ ಸಂಯೋಜಕರು ಜಿಲ್ಲಾ, ತಾಲೂಕುಗಳು ಏನ್ ಆರ್ ಎಲ್ ಎಮ ನ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಿಂದ (GPLF) ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಂಪನ್ಮೂಲಗಳ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಜೊತೆಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ದಿಕ್ಕು ತೋರಿದ ಕಾರ್ಯಕ್ರಮವಾಗಿ ಗಮನಸೆಳೆದಿತು.
- Post by Kalyan karanataka news channel1
- ನಗರದಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಸಮಾವೇಶ ಜರುಗಿತು. ಶಾಸಕ ಶರಣು ಸಲಗರ್ ಚಾಲನೆ ನೀಡಿದರು1
- ಮುದ್ದೇಬಿಹಾಳದಲ್ಲಿ ಮಹಾವೀರ ಜಯಂತಿ ಜೈನ ಧರ್ಮದ ಎಲ್ಲಾ ಜೈನ ಮುಖಂಡರು ಮಹಾವೀರ ಸಗರಿ ಮತು ಎಲ್ಲಾ ಜೈನ ಧರ್ಮದವರು ಹಾಜರು ಇದ್ದರು.1
- ಬಾಗಲಕೋಟ ಮತಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.4
- Post by Iranna Tarnal1
- ಯತ್ನಾಳ್ ನನ್ನ ಜೊತೆಗೆ ರಂಜಾನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ರು ಎಂ ಬಿ ಪಾಟೀಲ್ ಹೇಳಿಕೆ1
- ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು. ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.2
- ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳದ ಪುರಸಭೆ ಮುಖ್ಯ ಅಧಿಕಾರಿ ನಿರ್ಲಕ್ಷದಿಂದ ಕೊಳಚೆ ನೀರನ್ನು ಕುಡಿಸಿರುವ ಅಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು1