ಕೊಳ್ಳೇಗಾಲ. ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಮಂಗಳವಾರ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನೇರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಕೊಳ್ಳೇಗಾಲ ಕ್ಷೇತ್ರಕ್ಕೆ ನೂರು ಕೋಟಿಗೂ ಮೀಗಿಲಾಗಿ ವಿವಿಧ ಕಾಮಗಾರಿಗಳಿಗೆ ಅನುದಾನ ತಂದಿರುವ ಶಾಸಕ ಎಂಬ ಅಭಿಮಾನ ನನಗೆ ಇದೆ. ಉಳಿದಿರುವ ಮುಂದಿನ ಅವಧಿಯಲ್ಲೂ ಸಹಾ ಈಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹಣ ಬಿಡುಗಡೆ ಮಾಡುವ ಶಕ್ತಿ ನನಗೆ ದೇವರು ದಯಾಪಾಲಿಸಿದ್ದಾರೆ. ಈ ಅಭಿಮಾನ ಕ್ಷೇತ್ರದ ಜನರು ಮುಂದಿನ ದಿನಗಳಲ್ಲಿ ನನ್ನ ತೋರುವ ನೀರಿಕ್ಷೆ ಇದೆ ಎಂದು ತಿಳಿಸಿದರು. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಕೋಮಿನ ಜನಾಂಗದವರಿಗೆ ಸಮುದಾಯ ಭವನವನ್ನು ಒಟ್ಟು 75 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ತಲಾ ಒಂದು ಲಕ್ಷ ವೆಚ್ಚದಲ್ಲಿ 50 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಳ್ಳೂರು ಗ್ರಾಮಸ್ಥರ ಬಯಕೆಯಂತೆ ಸರ್ವೇ ಮಾದಪ್ಪ ಮನೆ ಮುಂಭಾಗದಿಂದ ಉತ್ತಂಬಳ್ಳಿ ಬೈಪಾಸ್ ರಸ್ತೆವರೆಗೆ ಡಾಂಬರು ನಿರ್ಮಾಣ ಮಾಡುವುದ್ದರಿಂದ ಮುಳ್ಳೂರು ಹಾಗೂ ಉತ್ತಂಬಳ್ಳಿ ಸಂಚಾರಕ್ಕೆ ಅನುಕೂಲವಾಗಲಿದೆ. ಮುಳ್ಳೂರು ನಮ್ಮ ಕ್ಷೇತ್ರದಲ್ಲೇ ದೊಡ್ಡ ಗ್ರಾಮವಾಗಿದ್ದು, ಮತದಾರರಿಗೆ ನೀಡಿದ್ದ ಮಾತಿನಂತೆ ಗ್ರಾಮಸ್ಥರು ಕೇಳಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಾನು ಚಕಾರ ಎತ್ತದೇ ಮಾಡಿಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಕೆಲಸ ಮಾಡಿಕೊಡುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಮಾಜಿ ಅಧ್ಯಕ್ಷರು ಕಮಲಮ್ಮ, ಸಿದ್ದಶೆಟ್ಟಿ, ಮಾಜಿ ಉಪಾಧ್ಯಕ್ಷ ದೊರೆರಾಜು, ಮಹದೇವಮ್ಮ, ಜಿ.ಪಂ ಮಾಜಿ ಸದಸ್ಯರು ಕಮಲ್, ಪಿಎಸಿಸಿಎಸ್ ನಿರ್ದೇಶಕ ಪುಟ್ಟಸ್ವಾಮಿ, ಮುಳ್ಳೂರು ಮಂಜು, ಮುಖಂಡ ಚೇತನ್, ಕೆ.ಆರ್.ಡಿ.ಐ.ಎಲ್ ಎಇಇ ಚಿಕ್ಕಲಿಂಗಯ್ಯ, ಗುತ್ತಿಗೆದಾರ ವಿವೇಕ್ ಹಾಗೂ ಇತರರು ಇದ್ದರು.
ಕೊಳ್ಳೇಗಾಲ. ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಮಂಗಳವಾರ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನೇರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಕೊಳ್ಳೇಗಾಲ ಕ್ಷೇತ್ರಕ್ಕೆ ನೂರು ಕೋಟಿಗೂ ಮೀಗಿಲಾಗಿ ವಿವಿಧ ಕಾಮಗಾರಿಗಳಿಗೆ ಅನುದಾನ ತಂದಿರುವ ಶಾಸಕ ಎಂಬ ಅಭಿಮಾನ ನನಗೆ ಇದೆ. ಉಳಿದಿರುವ ಮುಂದಿನ ಅವಧಿಯಲ್ಲೂ ಸಹಾ ಈಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹಣ ಬಿಡುಗಡೆ ಮಾಡುವ ಶಕ್ತಿ ನನಗೆ ದೇವರು ದಯಾಪಾಲಿಸಿದ್ದಾರೆ. ಈ ಅಭಿಮಾನ ಕ್ಷೇತ್ರದ ಜನರು
ಮುಂದಿನ ದಿನಗಳಲ್ಲಿ ನನ್ನ ತೋರುವ ನೀರಿಕ್ಷೆ ಇದೆ ಎಂದು ತಿಳಿಸಿದರು. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಕೋಮಿನ ಜನಾಂಗದವರಿಗೆ ಸಮುದಾಯ ಭವನವನ್ನು ಒಟ್ಟು 75 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ತಲಾ ಒಂದು ಲಕ್ಷ ವೆಚ್ಚದಲ್ಲಿ 50 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಳ್ಳೂರು ಗ್ರಾಮಸ್ಥರ ಬಯಕೆಯಂತೆ ಸರ್ವೇ ಮಾದಪ್ಪ ಮನೆ ಮುಂಭಾಗದಿಂದ ಉತ್ತಂಬಳ್ಳಿ ಬೈಪಾಸ್ ರಸ್ತೆವರೆಗೆ ಡಾಂಬರು ನಿರ್ಮಾಣ ಮಾಡುವುದ್ದರಿಂದ ಮುಳ್ಳೂರು ಹಾಗೂ ಉತ್ತಂಬಳ್ಳಿ ಸಂಚಾರಕ್ಕೆ ಅನುಕೂಲವಾಗಲಿದೆ. ಮುಳ್ಳೂರು ನಮ್ಮ ಕ್ಷೇತ್ರದಲ್ಲೇ ದೊಡ್ಡ
ಗ್ರಾಮವಾಗಿದ್ದು, ಮತದಾರರಿಗೆ ನೀಡಿದ್ದ ಮಾತಿನಂತೆ ಗ್ರಾಮಸ್ಥರು ಕೇಳಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಾನು ಚಕಾರ ಎತ್ತದೇ ಮಾಡಿಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಕೆಲಸ ಮಾಡಿಕೊಡುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಮಾಜಿ ಅಧ್ಯಕ್ಷರು ಕಮಲಮ್ಮ, ಸಿದ್ದಶೆಟ್ಟಿ, ಮಾಜಿ ಉಪಾಧ್ಯಕ್ಷ ದೊರೆರಾಜು, ಮಹದೇವಮ್ಮ, ಜಿ.ಪಂ ಮಾಜಿ ಸದಸ್ಯರು ಕಮಲ್, ಪಿಎಸಿಸಿಎಸ್ ನಿರ್ದೇಶಕ ಪುಟ್ಟಸ್ವಾಮಿ, ಮುಳ್ಳೂರು ಮಂಜು, ಮುಖಂಡ ಚೇತನ್, ಕೆ.ಆರ್.ಡಿ.ಐ.ಎಲ್ ಎಇಇ ಚಿಕ್ಕಲಿಂಗಯ್ಯ, ಗುತ್ತಿಗೆದಾರ ವಿವೇಕ್ ಹಾಗೂ ಇತರರು ಇದ್ದರು.
- ಹನೂರು: ರಾಮನಗುಡ್ಡೆ ಜಲಾಶಯ ಪೂರ್ಣವಾಗಿ ತುಂಬಿದ ಪರಿಣಾಮ, ಮಣಗಳ್ಳಿ ಸಮೀಪದ ದೊಡ್ಡಹಳ್ಳ ಹಳ್ಳಿ ಹರಿಯುತ್ತಿರುವ ದೃಶ್ಯವು ಸ್ಥಳೀಯ ರೈತರು ಮತ್ತು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಗ್ರಾಮಸ್ಥರು ಶಾಸಕ ಮಂಜುನಾಥ್ ಅವರ ಸಮ್ಮುಖದಲ್ಲಿ ಗಂಗಾಪೂಜೆಯನ್ನು ನೆರವೇರಿಸಿ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್ ಅವರು, “ಕ್ಷೇತ್ರದ ನೀರಾವರಿ ಯೋಜನೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ರಾಮನಗುಡ್ಡೆ ಜಲಾಶಯ ತುಂಬಿರುವುದರಿಂದ ರೈತರಿಗೆ ಬಹುಮುಖ್ಯ ನೆರವು ದೊರೆಯಲಿದೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಮುಖ್ಯ ಗುರಿ” ಎಂದು ಹೇಳಿದರು.2
- ಕ್ಷೇತ್ರದ ರೈತರ ಬದುಕು ಕಟ್ಟಿಕೊಳ್ಳಲು ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುವುದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. ಹನೂರು :ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ದೊಡ್ಡಹಳ್ಳಕ್ಕೆ ಗಂಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದ ಅವರು ರಾಮನಗುಡ್ಡ ಕೆರೆಗೆ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಿದ ಪರಿಣಾಮ ಈ ಭಾಗದ ರಾಯರ ದೊಡ್ಡಿ ಚಿಂಚಳ್ಳಿ ಮಣಗಳ್ಳಿ ಸೇರಿದಂತೆ ನೀರು ಹರಿಯುತ್ತಿರುವ ಹಳ್ಳದಲ್ಲಿ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಬರಬಿಸಿಲಿನಿಂದ ಕತ್ತರಿಸಿ ಗ್ರಾಮಗಳನ್ನೇ ತೊರೆದಿರುವ ರೈತರು ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ಎಂದರು. ಶಾಶ್ವತ ನೀರಾವರಿ ಯೋಜನೆಗೆ ಅಸ್ತು : ಕ್ಷೇತ್ರದ ಸರ್ವಂಂಗಿನ ಅಭಿವೃದ್ಧಿಗೆ ತಾಲೂಕಿನಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು ಕಾಲುವೆಗಳು ಬರಿದಾಗಿತ್ತು ಇಂತಹ ಸಂದರ್ಭದಲ್ಲಿ ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ಹರಿಸಿದ ಪರಿಣಾಮ ಹಳ್ಳದ ಮೂಲಕ ವಿವಿಧ ಗ್ರಾಮಗಳ ಮೂಲಕ ನೀರು ಅರಿದ ಪರಿಣಾಮ ಈ ಭಾಗದ ರೈತರ ಜೀವನದಿ ಶಾಶ್ವತ ನೀರಾವರಿ ಯೋಜನೆಯಿಂದ ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ತಿಳಿಸಿದರು ರೈತರ ಬದುಕು ನನಸಾಗಿಸಲು ಕ್ರಮ: ಇಡೀ ಕ್ಷೇತ್ರ ಅತ್ಯಂತ ನೀರಾವರಿ ಯೋಜನೆಯನ್ನು ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧಡೆ 490 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ಜಲಾಶಯಗಳಿಗೆ ನೀರು ತುಂಬಿಸಿ ಅದರಿಂದ ವಿವಿಧ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು . ಎರಡು ಗ್ರಾಮ ಪಂಚಾಯಿತಿಗಳ ದತ್ತು : ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದತ್ತು ಪಡೆದು ನೀರಾವರಿ ಯೋಜನೆಗಳಿಂದ ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ಅದಕ್ಕೆ ಬೇಕಾದ ವಿಮೆ ನೀಡುವ ಮೂಲಕ ರೈತರ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕಾಗಿದೆ ಜೊತೆಗೆ ಯುವಕರ ಬದುಕು ಸಹ ರೂಪಿಸಲು ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು . ಮೂಲಭೂತ ಸೌಲಭ್ಯಗಳಿಗೆ ಕ್ರಮ : ಹನೂರು ಕ್ಷೇತ್ರ ವ್ಯಾಪ್ತಿಯ ಜನತೆಗೆ ಮುಖ್ಯವಾಗಿ ನೀರಾವರಿ ಯೋಜನೆ ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ಆರೋಗ್ಯ ಸುಧಾರಿಸಲು ಸುಸರ್ಜಿತವಾದ ಆಸ್ಪತ್ರೆ ಮತ್ತು ರೈತರಿಗೆ ಬೆಳೆಗೆ ಬೆಂಬಲ ಬೆಲೆ ರೂಪಿಸಲು ಕ್ರಮ ಮತ್ತು ಹೈನುಗಾರಿಕೆಗೆ ಹೆಚ್ಚಿನ ಒತ್ತು ಮತ್ತು ತೋಟಗಾರಿಕೆ ಸೇರಿದಂತೆ ತಾಲೂಕಿನ ಕ್ಷೇತ್ರ ವ್ಯಾಪ್ತಿಯ ಜನತೆಗೆ ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಕ್ಷೇತ್ರದ ಜನತೆಯ ಸಹಕಾರ ಹೀಗೆ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು . ಮುಖಂಡರುಗಳಾದ ಚಾಮುಲ್ ನಿರ್ದೇಶಕರಾದ ಉದ್ದನೂರು ಮಹದೇವ ಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಾಮುಲ್ ಮಾಜಿ ಅಧ್ಯಕ್ಷರಾದ ಗುರುಮಲ್ಲಪ್ಪ, ಶಿವಮಲ್ಲೇಗೌಡ,ರಾಮಣ್ಣ, ಕುಲ್ಲೇಗೌಡ,ಮಲ್ಲಣ್ಣ,ತಮ್ಮೆಗೌಡ, ಮಾದೆಗೌಡ,ಮರಿಸ್ವಾಮಿ, ವೆಂಕಟಚಲಿ,ಮಾದೆಗೌಡರು,ಶಿವಣ್ಣ,ಚೆನ್ನಯ್ಯ,ಪ್ರೀತಮ್ಮಹಾದೇವಯ್ಯ, ಕೃಷ್ಣಮೂರ್ತಿ ರಾಜು,ಜಯಮಾಲಾ ಮಾದೇಶ್, ಜೇಸಿಮ್ ಪಾಷ,ತಿರುಪತಿ ಹಾಗೂ ಗ್ರಾಮಸ್ಥರು ಇದ್ದರು..4
- ಮಳವಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ಶ್ರೀ ಸಿದ್ದ ಮಲ್ಲೇಶ್ವರ ಪಟ್ಟದ ಮಠದ ಪ್ರಾರ್ಥನಾ ಮಂದಿರ ದಾಸೋಹ ಭವನ ಲೋಕಾರ್ಪಣೆಗೆ ಕ್ಷಣಗಣನೆ ಮಳವಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದಮಲ್ಲೇಶ್ವರ ಪ್ರಾರ್ಥನ ಮಂದಿರ ದಾಸೋಹ ಭವನ ಲೋಕಾರ್ಪಣೆಗೆ ಕ್ಷಣೆ ಗಣನೆ ಆರಂಭವಾಗಿದ್ದು ಸಂಪ್ರದಾಯ ಬದ್ಧ ಪೂಜಾ ಕಾರ್ಯಕ್ರಮಗಳು ಬರದಿಂದ ಸಾಗಿವೆ. ಏಪ್ರಿಲ್ 5 ರಂದು ಭಾನುವಾರ ಬೆಳಿಗ್ಗೆ 10:30 ಗಂಟೆಗೆ ಸುತ್ತೂರು ಸಿದ್ದಗಂಗಾ ಆದಿಚುಂಚನಗಿರಿ ಮಠಾಧೀಶರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ರಾಜ್ಯ ಭಾಜಪ ಅಧ್ಯಕ್ಷ ಬಿವೈ ವಿಜಯೇಂದ್ರ ಪ್ರಾರ್ಥನಾ ಮಂದಿರವನ್ನು ದಾಸೋಹ ಭವನವನ್ನು ಲೋಕಾರ್ಪಣೆ ಮಾಡಲಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ವಿ ಸೋಮಣ್ಣ ಶಾಸಕರಾದ ಸಿಎಂ ನರೇಂದ್ರಸ್ವಾಮಿ ಮಾಜಿ ಸಚಿವರು ಮಾಜಿ ಶಾಸಕರು ಮಾಜಿ ವಿಧಾನ ಪರಿಷತ್ ಸದಸ್ಯರು ಉದ್ಯಮಿಗಳು ರಾಜ್ಯದ ಹಲವು ಮಠಗಳ ಹರಗುರು ಚರ ಮೂರ್ತಿಗಳು ಭಾಗವಹಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸುವ ಸಕಲ ಭಕ್ತರಿಗೂ ಪ್ರಸಾದ ವ್ಯವಸ್ಥೆಗೆ ಶನಿವಾರ ರಾತ್ರಿಯಿಂದಲೇ ಸಿದ್ಧತೆಗಳು ಜರುಗಿವೆ ಸಾವಿರಾರು ಜನರು ಭಾನುವಾರದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ ಬನ್ನಿ ನಾವು ಹೋಗೋಣ ಹೊಸಹಳ್ಳಿ ಶ್ರೀ ಸಿದ್ದ ಮಲ್ಲೇಶ್ವರ ಪಟ್ಟದ ಮಠದ ಧಾರ್ಮಿಕ ಮಹೋತ್ಸವಕ್ಕೆ ಗುರು ಕೃಪೆಗೆ ಪಾತ್ರರಾಗೋಣ ಶರಣು ಬನ್ನಿ1
- ತಿ.ನರಸೀಪುರ ಪಟ್ಟಣದಲ್ಲಿ ನಡೆಯುತ್ತಿದ್ದ ಶ್ರೀ ಗುಂಜಾನರಸಿಂಹಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಮೂರನೇ ದಿನ ಅವಬೃತ ಸ್ನಾನ ಹಾಗೂ ಧ್ವಜ ಅವರೋಹಣ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಸಾಂಪ್ರದಾಯಿಕ ವಾಡಿಕೆಯಂತೆ ಬೆಳಗಿನ ಜಾವ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಅವಬೃತ ಪುಣ್ಯಸ್ನಾನ ಕಾರ್ಯಕ್ರಮ ಆಯೋಜಿಸಲಾಯಿತು. ಕಾವೇರಿ, ಕಪಿಲ ಮತ್ತು ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ಸುದರ್ಶನ ನರಸಿಂಹಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿ ವೇದಮಂತ್ರಗಳ ಮಧ್ಯೆ ಪೂಜೆಗಳು ನೆರವೇರಿಸಲಾಯಿತು. ಈ ವೇಳೆ ಹಾಲು, ಮೊಸರು, ಜೇನುತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಿ ದೇವರಿಗೆ ವಿಶೇಷ ಆರಾಧನೆ ಸಲ್ಲಿಸಲಾಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತ ಮಹಾಶಯರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಭಕ್ತಿ ಭಾವ ಮೆರೆದರು. ಪೂಜಾ ವಿಧಿಗಳು ಪೂರ್ಣಗೊಂಡ ಬಳಿಕ ಧ್ವಜ ಅವರೋಹಣ ನಡೆಸುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಅಧಿಕೃತ ಸಮಾರೋಪ ದೊರಕಿತು. ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗವಹಿಸಿದರು. ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಶಿಸ್ತಿನಿಂದ ನೆರವೇರಿದವು. ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿಕೊಂಡು ಆಚರಿಸಲಾದ ಈ ಬ್ರಹ್ಮ ರಥೋತ್ಸವ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಹೆಚ್ಚಿಸಿತು. ಇಡೀ ಉತ್ಸವ ಅವಧಿಯಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಭಕ್ತರ ಭಾರೀ ಉಪಸ್ಥಿತಿಯಿಂದ ತಿ.ನರಸೀಪುರ ತೀರ್ಥಕ್ಷೇತ್ರ ಭಕ್ತಿರಸದ ಸಾಗರವಾಗಿ ಕಂಗೊಳಿಸಿತು.2
- KARNATAKA RASHTRIYA SAMITTHI PAKSHA ANNOUNCED THE LIST OF OFFICE BEARERS FOR CHAMARAJA CONSTITUENCY TODAY1
- *ಭಾರತ ನಲ್ಲಿ ವೈರಲ್*1
- ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನನ ಮೇಲೆ ಹಲ್ಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನೆಡೆದಿದೆ. ಮುದ್ದು ಮಾದೇಗೌಡ (40) ಹಲ್ಲೆಗೊಳಗಾದ ವಿಶೇಷಚೇತನನಾಗಿದ್ದು ಸದ್ಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಮಾರ್ಚ್ 31ರಂದು ಮುದ್ದು ಮಾದೇಗೌಡ ಮೂರು ಚಕ್ರದ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು ಈ ವೇಳೆ ಗ್ರಾಮದ ಬಸವಣ್ಣ ಎಂಬ ವ್ಯಕ್ತಿ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿದ್ದ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ವಿಶೇಷ ಚೇತನ ಎಂಬುದನ್ನ ನೋಡದೆ ವಾಹನ ಅಡ್ಡ ಹಾಕಿ ಬಸವಣ್ಣ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಹನೂರು :ತಾಲ್ಲೂಕಿನ ಬಂಡಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಆವರಣ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಬದುಕು ಸಾಗಿಸುತ್ತಿರುವ ಸೂರು ಇಲ್ಲದ ಫಲಾನುಭವಿಗಳನ್ನು ಗುರುತಿಸಿ ಮನೆ ಒದಗಿಸುವ ಕೆಲಸಗಳು ಆಗಬೇಕು. ಜೊತೆಗೆ ಕಷ್ಟಕರವಾದ ಜೀವನದಲ್ಲಿ ದುಡಿಮೆಗಾಗಿ ವಲಸೆ ಹೋಗಿ ಬೇರ್ಪಟ್ಟಿರುವ ಕುಟುಂಬಗಳಿಗೆ ಆದಾಯದ ಮೂಲ ತೋರಿಸುವ ಮೂಲಕ ಸ್ವ ಗ್ರಾಮದಲ್ಲಿ ನೆಲೆಯಿರುವಂತೆ ಮಾಡಬೇಕು. ಅದಕ್ಕಾಗಿ ಜನರಿಗೆ ಉಧ್ಯೋಗ ಕೂಲಿ ದೊರೆಯುವ ಲಾಭ ದಾಯಕವಾದ ಹೈನುಗಾರಿಕೆ ಕೃಷಿ ವ್ಯವಸಾಯಗಳಿಗೆ ಅನುಕೂಲವಾಗುವಂತಹ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಾಗಿ ನೀರು ವಿದ್ಯುತ್ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತದೆ. ಸರ್ಕಾರದ ಸಾಲ ಸೌಲಭ್ಯಗಳು ಸುಲಲಿತವಾಗಿ ದೊರೆತಾಗ ಜನರು ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಎಂದರು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನಾಗಯ್ಯ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಮಾಡುತ್ತಿರುವ ಶಾಸಕ ಎಂಆರ್ ಮಂಜುನಾಥ್ ರವರ ಜನಪರ ಸೇವಾ ಕಾರ್ಯಗಳನ್ನು ಮತ್ತು ಜನರ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಯ ಒಂದು ನೋಟ ನನ್ನ ಮನಸ್ಸು ಪರಿವರ್ತನೆಗೆ ಕಾರಣವಾಗಿದ್ದು ಇಂದು ನಾನು ಬಿಜೆಪಿ ಪಕ್ಷವನ್ನು ತೆರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆಂದು ತಿಳಿಸಿದರು. ಈ ವೇಳೆ ಬಂಡಳ್ಳಿ ಗ್ರಾಮದ ನಾಗಯ್ಯ ಮಹದೇವು ಪುಟ್ಟಸ್ವಾಮಿ ಕುಳ್ಳ ವೀರಯ್ಯ ಅಣಗಳ್ಳಿದೊಡ್ಡಿ ನಾಗರಾಜು ಭರತ್ ಹರೀಶ ಮಂಗಳಮ್ಮ ಮಹೇಂದ್ರ ಸೇರಿದಂತೆ 60 ಕ್ಕೂ ಹೆಚ್ಚು ಮಂದಿ ಮುಖಂಡರು ಮಹಿಳೆಯರು ಬಿಜೆಪಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದೆ ಸಮಯದಲ್ಲಿ ಶಂಕರಪ್ಪ,ತಿರುಪತಿ, ಸಮೀವುಳ್ಳ, ಮಂಜೇಶ್,ಶುವಣಪ್ಪ,ಉದ್ದನೂರು ಗಿರೀಶ್, ಅಣಗಳ್ಳಿ ಚಂದ್ರು, ಮಾದೇಶ್,ಕುಳ್ಳವಿರಯ್ಯ,ಶಿವರಾಜು,ಹುಚ್ಚಯ್ಯ,ಎಸ್ ಆರ್ ಮಹದೇವ್, ನಟರಾಜು ಜೇಸಿಮ್ ಪಾಷ, ಜವಾದ್,ಗೋಪಾಲ್ ನಾಯಕ,ಚಿನ್ನವೆಂಕಟ್,ಡಿ ಕೆ ರಾಜು, ಗೋವಿಂದ, ವೆಂಕಟೇಶ್,ಪ್ರಮೋದ್,ಸೇರಿದಂತೆ ಗ್ರಾಮಸ್ಥರು ಸಮುದಾಯದ ಮುಖಂಡರುಗಳು ಇದ್ದರು..4