logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯು ಕನಕದಾಸರು, ಷರೀಫರು, ವಿ.ಕೃ. ಗೋಕಾಕ್‌ರು, ಗಳಗನಾಥರು ಸೇರಿ ಹಲವು ಮಹಾನ್ ಸಾಹಿತ್ಯದ ವ್ಯಕ್ತಿಗಳಿಗೆ ಜನ್ಮ ನೀಡಿದ ಸ್ಥಳ. ಇಂಥ ಜಿಲ್ಲೆಯ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಅಭಿಯಾನ ಆರಂಭಿಸಿದೆ. ಇದೇ ಅಭಿಯಾನದಡಿ ಅಲೆಮಾರಿ ಸಮುದಾಯದ ಸುಡುಗಾಡು ಸಿದ್ಧರು ವಾಸವಿರುವ ಗುಡಿಸಲಿನಲ್ಲೂ ಗ್ರಂಥಾಲಯ ನಿರ್ಮಿಸಲಾಗಿದ್ದು, ಈ ಗ್ರಂಥಾಲಯ ರಾಜ್ಯದ ಗಮನ ಸೆಳೆಯುತ್ತಿದೆ. ರಾಜ್ಯದ ಮೊದಲ ಗುಡಿಸಲು ಗ್ರಂಥಾಲಯಕ್ಕೆ ಬೆಳಗಾವಿ ವಿಭಾಗ ಮಟ್ಟದ ಕಾದಂಬರಿ ಪಿತಾಮಹ ಗಳಗನಾಥರ ಪ್ರಶಸ್ತಿಯೂ ಲಭ್ಯವಾಗಿದೆ. ಅಲೆಮಾರಿ ಜನಾಂಗದ ಪ್ರತಿನಿಧಿಯಾಗಿ ಹೋರಾಡುತ್ತ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ ಅವರ ಗುಡಿಸಲಿನಲ್ಲಿಯೇ ಗ್ರಂಥಾಲಯ ಮಾಡಲಾಗಿದೆ. ಇದೇ ಗ್ರಂಥಾಲಯದಲ್ಲಿ ಹಲವು ಸಾಹಿತಿಗಳ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಇರಿಸಲಾಗಿದೆ. ಹಾವೇರಿ ಹೊರವಲಯದ ಖುಲ್ಲಾ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಅಲೆಮಾರಿ ಜನಾಂಗದವರು ವಾಸವಿದ್ದಾರೆ. ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ಮಕ್ಕಳು ಸಂಜೆ ಹಾಗೂ ಬೆಳಿಗ್ಗೆ ಗ್ರಂಥಾಲಯದಲ್ಲಿ ಹಾಜರಿದ್ದು, ಸಾಹಿತಿಗಳ ಪುಸ್ತಕ ಓದುತ್ತಿದ್ದಾರೆ. ನಿತ್ಯವೂ ಸಂಜೆ ಹಾಗೂ ಬೆಳಿಗ್ಗೆ ಗ್ರಂಥಾಲಯವು ಮಕ್ಕಳಿಂದ ತುಂಬಿರುತ್ತದೆ. ಶಾಲೆಯ ಪುಸ್ತಕಗಳನ್ನು ಓದುವುದರ ಜೊತೆಯಲ್ಲಿಯೇ ಮಕ್ಕಳು, ಕುವೆಂಪು, ದ.ರಾ. ಬೇಂದ್ರ, ವಿ.ಕೃ. ಗೋಕಾಕ್, ಗಳಗನಾಥರು ಸೇರಿದಂತೆ ಹಲವರ ಸಾಹಿತ್ಯಗ ಕೃತಿಗಳನ್ನು ಓದುತ್ತಿದ್ದಾರೆ. ಓದಿದ ನಂತರ, ಅದರಲ್ಲಿರುವ ವಿಷಯಗಳನ್ನು ತಂದೆ-ತಾಯಿಗೆ ತಿಳಿಸುತ್ತಿದ್ದಾರೆ. ಶಾಲೆ ಮೆಟ್ಟಿಲು ಹತ್ತದೇ ಕುಲ ವೃತ್ತಿಯನ್ನೇ ನಂಬಿ ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡಿರುವ ಅಲೆಮಾರಿ ಸಮುದಾಯದ ತಂದೆ-ತಾಯಿ, ಮಕ್ಕಳ ಓದಿನ ಆಸಕ್ತಿಯನ್ನು ನೋಡಿ ಖುಷಿಪಡುತ್ತಿದ್ದಾರೆ. 'ನಾನು ಶಾಲೆ ಮೆಟ್ಟಿಲು ಹತ್ತಿಲ್ಲ. ಆದರೆ, ನಮ್ಮ ಅಲೆಮಾರಿ ಸಮುದಾಯದ ಮಕ್ಕಳು ಓದಿ ವಿದ್ಯಾವಂತರಾಗಬೇಕು. ಹೀಗಾಗಿ, ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಅದೇ ರೀತಿ ಬೆಳಿಗ್ಗೆ ಹಾಗೂ ಸಂಜೆ, ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಅದರ ಜೊತೆಯಲ್ಲಿ, ಅಲೆಮಾರಿ ಮಕ್ಕಳಿಗಾಗಿ ನನ್ನ ಗುಡಿಸಲಿನಲ್ಲಿಯೇ ಗ್ರಂಥಾಲಯ ಮಾಡಿದ್ದೇನೆ' ಎಂದು ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ ಹೇಳಿದರು. 'ಕನ್ನಡ ಪುಸ್ತಕ ಪ್ರಾಧಿಕಾರದವರು ನನ್ನ ಗುಡಿಸಲು ನೋಡಿ ಖುಷಿ ಪಟ್ಟಿದ್ದಾರೆ. ಗುಡಿಸಲಿನಲ್ಲಿ ಇರುವ ಗ್ರಂಥಾಲಯದಲ್ಲಿ ಸ್ವಚ್ಛತೆ ಕಾಯ್ದುಕೊಂಡಿದ್ದೇನೆ. ನಿತ್ಯವೂ ಮಕ್ಕಳು ಇಲ್ಲಿಯೇ ಕುಳಿತು ಪುಸ್ತಕ ಓದುತ್ತಿದ್ದಾರೆ. ಅದನ್ನು ನೋಡಿ ನನಗೂ ಖುಷಿಯಾಗುತ್ತದೆ' ಎಂದರು. ಗುಡಿಸಲಿನಲ್ಲಿ ಶುರುವಾಗಿರುವ ಗ್ರಂಥಾಲಯಕ್ಕೆ ಹಾವೇರಿ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಜನರು ಬಂದು ಹೋಗುತ್ತಿದ್ದಾರೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಖುದ್ದು ಗುಡಿಸಲಿಗೆ ಭೇಟಿ ನೀಡಿದ್ದರು. ವಿದ್ಯುತ್ ಇಲ್ಲದಿರುವುದನ್ನು ಕಂಡು, ವಿದ್ಯುತ್ ವ್ಯವಸ್ಥೆ ಮಾಡಿಸಿದ್ದಾರೆ. ಹಾವೇರಿ ಸಾಹಿತ್ಯ ಬಳಗದವರೆಲ್ಲರೂ ಸೇರಿ, ಗ್ರಂಥಾಲಯದಲ್ಲಿ ಪುಸ್ತಕ ಇರಿಸಲು ಪೀಠೋಪಕರಣ ಮಾಡಿಸಿಕೊಟ್ಟಿದ್ದಾರೆ. ಗುಡಿಸಲಿನಲ್ಲಿರುವ ಗ್ರಂಥಾಲಯದ ಬಗ್ಗೆ ಪ್ರತಿಕ್ರಿಯಿಸಿದ ಕವಿ ಸತೀಶ ಕುಲಕರ್ಣಿ, 'ಇದೊಂದು ಅದ್ಭುತ ಗ್ರಂಥಾಲಯ. ಚಿಕ್ಕ ಗುಡಿಸಲಿನಲ್ಲಿ ಎಲ್ಲ ಮಹಾನ್ ಸಾಹಿತಿಗಳ ಪುಸ್ತಕಗಳು ಲಭ್ಯವಿವೆ. ಅಲೆಮಾರಿ ಮಕ್ಕಳು, ನಿತ್ಯವೂ ಪುಸ್ತಕ ಓದುತ್ತಿದ್ದಾರೆ. ಗುಡಿಸಲಿನಲ್ಲಿಯೇ ಪುಸ್ತಕ ಕ್ರಾಂತಿ ನಡೆಯುತ್ತಿದೆ' ಎಂದರು. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿದವನು ಘರ್ಜಿಸಲೇಬೇಕು' ಎಂಬ ಬಿ.ಆರ್. ಅಂಬೇಡ್ಕರ್ ಅವರ ಮಾತಿನಲ್ಲಿ ಅಲೆಮಾರಿ ಸಮುದಾಯದ ಮಕ್ಕಳು, ಗ್ರಂಥಾಲಯದ ಮೂಲಕ ಪುಸ್ತಕಗಳ ಓದುಗರಾಗಿದ್ದಾರೆ. ಗುಡಿಸಲಿನಲ್ಲಿ ಅರಳಿದ ಗ್ರಂಥಾಲಯ, ಸದಾ ಕಾಲ ಮುಂದುವರಿಯಲಿ. ಅಲೆಮಾರಿ ಮಕ್ಕಳ ಬಾಳಿನಲ್ಲಿ ಬೆಳಕು ತರಲಿ ಎಂಬುದು ನಮ್ಮ ಆಶಯ.

12 hrs ago
user_Shiva Belagavi
Shiva Belagavi
Photographer ಅಥಣಿ, ಬೆಳಗಾವಿ, ಕರ್ನಾಟಕ•
12 hrs ago
eee1c2e2-fc0f-4b8d-b79f-cb99e9c1dcdb

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯು ಕನಕದಾಸರು, ಷರೀಫರು, ವಿ.ಕೃ. ಗೋಕಾಕ್‌ರು, ಗಳಗನಾಥರು ಸೇರಿ ಹಲವು ಮಹಾನ್ ಸಾಹಿತ್ಯದ ವ್ಯಕ್ತಿಗಳಿಗೆ ಜನ್ಮ ನೀಡಿದ ಸ್ಥಳ. ಇಂಥ ಜಿಲ್ಲೆಯ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಅಭಿಯಾನ ಆರಂಭಿಸಿದೆ. ಇದೇ ಅಭಿಯಾನದಡಿ ಅಲೆಮಾರಿ ಸಮುದಾಯದ ಸುಡುಗಾಡು ಸಿದ್ಧರು ವಾಸವಿರುವ ಗುಡಿಸಲಿನಲ್ಲೂ ಗ್ರಂಥಾಲಯ ನಿರ್ಮಿಸಲಾಗಿದ್ದು, ಈ ಗ್ರಂಥಾಲಯ ರಾಜ್ಯದ ಗಮನ ಸೆಳೆಯುತ್ತಿದೆ. ರಾಜ್ಯದ ಮೊದಲ ಗುಡಿಸಲು ಗ್ರಂಥಾಲಯಕ್ಕೆ ಬೆಳಗಾವಿ ವಿಭಾಗ ಮಟ್ಟದ ಕಾದಂಬರಿ ಪಿತಾಮಹ ಗಳಗನಾಥರ ಪ್ರಶಸ್ತಿಯೂ ಲಭ್ಯವಾಗಿದೆ. ಅಲೆಮಾರಿ ಜನಾಂಗದ ಪ್ರತಿನಿಧಿಯಾಗಿ ಹೋರಾಡುತ್ತ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ ಅವರ ಗುಡಿಸಲಿನಲ್ಲಿಯೇ ಗ್ರಂಥಾಲಯ ಮಾಡಲಾಗಿದೆ. ಇದೇ ಗ್ರಂಥಾಲಯದಲ್ಲಿ ಹಲವು ಸಾಹಿತಿಗಳ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಇರಿಸಲಾಗಿದೆ. ಹಾವೇರಿ ಹೊರವಲಯದ ಖುಲ್ಲಾ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಅಲೆಮಾರಿ ಜನಾಂಗದವರು ವಾಸವಿದ್ದಾರೆ. ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ಮಕ್ಕಳು ಸಂಜೆ ಹಾಗೂ ಬೆಳಿಗ್ಗೆ ಗ್ರಂಥಾಲಯದಲ್ಲಿ ಹಾಜರಿದ್ದು, ಸಾಹಿತಿಗಳ ಪುಸ್ತಕ

ad4bff63-eb16-49eb-ade2-c1a85422e740

ಓದುತ್ತಿದ್ದಾರೆ. ನಿತ್ಯವೂ ಸಂಜೆ ಹಾಗೂ ಬೆಳಿಗ್ಗೆ ಗ್ರಂಥಾಲಯವು ಮಕ್ಕಳಿಂದ ತುಂಬಿರುತ್ತದೆ. ಶಾಲೆಯ ಪುಸ್ತಕಗಳನ್ನು ಓದುವುದರ ಜೊತೆಯಲ್ಲಿಯೇ ಮಕ್ಕಳು, ಕುವೆಂಪು, ದ.ರಾ. ಬೇಂದ್ರ, ವಿ.ಕೃ. ಗೋಕಾಕ್, ಗಳಗನಾಥರು ಸೇರಿದಂತೆ ಹಲವರ ಸಾಹಿತ್ಯಗ ಕೃತಿಗಳನ್ನು ಓದುತ್ತಿದ್ದಾರೆ. ಓದಿದ ನಂತರ, ಅದರಲ್ಲಿರುವ ವಿಷಯಗಳನ್ನು ತಂದೆ-ತಾಯಿಗೆ ತಿಳಿಸುತ್ತಿದ್ದಾರೆ. ಶಾಲೆ ಮೆಟ್ಟಿಲು ಹತ್ತದೇ ಕುಲ ವೃತ್ತಿಯನ್ನೇ ನಂಬಿ ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡಿರುವ ಅಲೆಮಾರಿ ಸಮುದಾಯದ ತಂದೆ-ತಾಯಿ, ಮಕ್ಕಳ ಓದಿನ ಆಸಕ್ತಿಯನ್ನು ನೋಡಿ ಖುಷಿಪಡುತ್ತಿದ್ದಾರೆ. 'ನಾನು ಶಾಲೆ ಮೆಟ್ಟಿಲು ಹತ್ತಿಲ್ಲ. ಆದರೆ, ನಮ್ಮ ಅಲೆಮಾರಿ ಸಮುದಾಯದ ಮಕ್ಕಳು ಓದಿ ವಿದ್ಯಾವಂತರಾಗಬೇಕು. ಹೀಗಾಗಿ, ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಅದೇ ರೀತಿ ಬೆಳಿಗ್ಗೆ ಹಾಗೂ ಸಂಜೆ, ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಅದರ ಜೊತೆಯಲ್ಲಿ, ಅಲೆಮಾರಿ ಮಕ್ಕಳಿಗಾಗಿ ನನ್ನ ಗುಡಿಸಲಿನಲ್ಲಿಯೇ ಗ್ರಂಥಾಲಯ ಮಾಡಿದ್ದೇನೆ' ಎಂದು ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ ಹೇಳಿದರು. 'ಕನ್ನಡ ಪುಸ್ತಕ ಪ್ರಾಧಿಕಾರದವರು ನನ್ನ ಗುಡಿಸಲು ನೋಡಿ ಖುಷಿ ಪಟ್ಟಿದ್ದಾರೆ. ಗುಡಿಸಲಿನಲ್ಲಿ ಇರುವ ಗ್ರಂಥಾಲಯದಲ್ಲಿ ಸ್ವಚ್ಛತೆ ಕಾಯ್ದುಕೊಂಡಿದ್ದೇನೆ. ನಿತ್ಯವೂ ಮಕ್ಕಳು ಇಲ್ಲಿಯೇ ಕುಳಿತು ಪುಸ್ತಕ ಓದುತ್ತಿದ್ದಾರೆ.

5d6e6a3d-c5c1-463d-94b9-d55c961a81e5

ಅದನ್ನು ನೋಡಿ ನನಗೂ ಖುಷಿಯಾಗುತ್ತದೆ' ಎಂದರು. ಗುಡಿಸಲಿನಲ್ಲಿ ಶುರುವಾಗಿರುವ ಗ್ರಂಥಾಲಯಕ್ಕೆ ಹಾವೇರಿ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಜನರು ಬಂದು ಹೋಗುತ್ತಿದ್ದಾರೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಖುದ್ದು ಗುಡಿಸಲಿಗೆ ಭೇಟಿ ನೀಡಿದ್ದರು. ವಿದ್ಯುತ್ ಇಲ್ಲದಿರುವುದನ್ನು ಕಂಡು, ವಿದ್ಯುತ್ ವ್ಯವಸ್ಥೆ ಮಾಡಿಸಿದ್ದಾರೆ. ಹಾವೇರಿ ಸಾಹಿತ್ಯ ಬಳಗದವರೆಲ್ಲರೂ ಸೇರಿ, ಗ್ರಂಥಾಲಯದಲ್ಲಿ ಪುಸ್ತಕ ಇರಿಸಲು ಪೀಠೋಪಕರಣ ಮಾಡಿಸಿಕೊಟ್ಟಿದ್ದಾರೆ. ಗುಡಿಸಲಿನಲ್ಲಿರುವ ಗ್ರಂಥಾಲಯದ ಬಗ್ಗೆ ಪ್ರತಿಕ್ರಿಯಿಸಿದ ಕವಿ ಸತೀಶ ಕುಲಕರ್ಣಿ, 'ಇದೊಂದು ಅದ್ಭುತ ಗ್ರಂಥಾಲಯ. ಚಿಕ್ಕ ಗುಡಿಸಲಿನಲ್ಲಿ ಎಲ್ಲ ಮಹಾನ್ ಸಾಹಿತಿಗಳ ಪುಸ್ತಕಗಳು ಲಭ್ಯವಿವೆ. ಅಲೆಮಾರಿ ಮಕ್ಕಳು, ನಿತ್ಯವೂ ಪುಸ್ತಕ ಓದುತ್ತಿದ್ದಾರೆ. ಗುಡಿಸಲಿನಲ್ಲಿಯೇ ಪುಸ್ತಕ ಕ್ರಾಂತಿ ನಡೆಯುತ್ತಿದೆ' ಎಂದರು. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿದವನು ಘರ್ಜಿಸಲೇಬೇಕು' ಎಂಬ ಬಿ.ಆರ್. ಅಂಬೇಡ್ಕರ್ ಅವರ ಮಾತಿನಲ್ಲಿ ಅಲೆಮಾರಿ ಸಮುದಾಯದ ಮಕ್ಕಳು, ಗ್ರಂಥಾಲಯದ ಮೂಲಕ ಪುಸ್ತಕಗಳ ಓದುಗರಾಗಿದ್ದಾರೆ. ಗುಡಿಸಲಿನಲ್ಲಿ ಅರಳಿದ ಗ್ರಂಥಾಲಯ, ಸದಾ ಕಾಲ ಮುಂದುವರಿಯಲಿ. ಅಲೆಮಾರಿ ಮಕ್ಕಳ ಬಾಳಿನಲ್ಲಿ ಬೆಳಕು ತರಲಿ ಎಂಬುದು ನಮ್ಮ ಆಶಯ.

More news from ಕರ್ನಾಟಕ and nearby areas
  • ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ. ಮಹಾಪ್ರಸಾದ ಸವಿದ ನೂರಾರು ಭಕ್ತರು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ. ಮಹಾಪ್ರಸಾದ ಸವಿದ ನೂರಾರು ಭಕ್ತರು ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ 10 ಗಂಟೆಗೆ ಪಿಎಸ್ಐ ಕಿರಣ ಮೋಹಿತೆ ಇವರು ಗಣೇಶನಿಗೆ ಪೂಜೆ ಸಲ್ಲಿಸಿ ಸರ್ವರಿಗೂ ಶ್ರೇಯಸ್ಸು ಬಯಸಿ ಗಣೇಶ ಸರ್ವ ಸಿಬ್ಬಂದಿಗಳಿಗೆ ಹಬ್ಬದ ಶುಭಾಶಯ ತಿಳಿಸಿದರು. ಠಾಣೆಯಲ್ಲಿ ನಡೆದ ಗಣೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಸರ್ವ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಠಾಣೆಯ ಮುಂಬಾಗದಲ್ಲಿ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇವತ್ತಿನ ಮಹಾಪ್ರಸಾದಕ್ಕೆ ನಗರದ ಸುತ್ತಮುತ್ತಲಿರುವ ಅಂಗಡಿ ಮುಗ್ಗಟ್ಟುಗಳಿಂದ ಮತ್ತು ವಿವಿಧ ಹಳ್ಳಿಗಳಿಂದ ಜನರು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಮಟ್ಟದ ಅಧಿಕಾರಿಗಳು,ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು, ರಿಕ್ಷಾ ಚಾಲಕರು ಇವತ್ತಿನ ಗಣೇಶನ ಮಹಾಪ್ರಸಾದವನ್ನು ಸವಿದು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶಹರ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದು ಮಹಾಪ್ರಸಾದದಲ್ಲಿ ಸಾರ್ವಜನಿಕರಿಗೆ ಕೊರತೆ ಆಗದಂತೆ ನೋಡಿಕೊಂಡು ಪ್ರಸಂಸೆಗೆ ಪಾತ್ರರಾದರು.
    1
    ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ. ಮಹಾಪ್ರಸಾದ ಸವಿದ ನೂರಾರು ಭಕ್ತರು 

ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ. ಮಹಾಪ್ರಸಾದ ಸವಿದ ನೂರಾರು ಭಕ್ತರು 
ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮುಂಜಾನೆ 10 ಗಂಟೆಗೆ ಪಿಎಸ್ಐ ಕಿರಣ ಮೋಹಿತೆ ಇವರು ಗಣೇಶನಿಗೆ ಪೂಜೆ ಸಲ್ಲಿಸಿ ಸರ್ವರಿಗೂ ಶ್ರೇಯಸ್ಸು ಬಯಸಿ ಗಣೇಶ ಸರ್ವ ಸಿಬ್ಬಂದಿಗಳಿಗೆ ಹಬ್ಬದ ಶುಭಾಶಯ ತಿಳಿಸಿದರು.
ಠಾಣೆಯಲ್ಲಿ ನಡೆದ ಗಣೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಸರ್ವ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ಠಾಣೆಯ ಮುಂಬಾಗದಲ್ಲಿ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇವತ್ತಿನ ಮಹಾಪ್ರಸಾದಕ್ಕೆ ನಗರದ ಸುತ್ತಮುತ್ತಲಿರುವ ಅಂಗಡಿ ಮುಗ್ಗಟ್ಟುಗಳಿಂದ ಮತ್ತು ವಿವಿಧ ಹಳ್ಳಿಗಳಿಂದ ಜನರು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿದರು. 
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಮಟ್ಟದ ಅಧಿಕಾರಿಗಳು,ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು, ರಿಕ್ಷಾ ಚಾಲಕರು ಇವತ್ತಿನ ಗಣೇಶನ ಮಹಾಪ್ರಸಾದವನ್ನು ಸವಿದು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶಹರ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದು ಮಹಾಪ್ರಸಾದದಲ್ಲಿ ಸಾರ್ವಜನಿಕರಿಗೆ ಕೊರತೆ ಆಗದಂತೆ ನೋಡಿಕೊಂಡು ಪ್ರಸಂಸೆಗೆ ಪಾತ್ರರಾದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    3 hrs ago
  • ಉದ್ಯಾನವನದ ಮಕ್ಕಳು  ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ.  chethana_muniswamygowda #riyamshee_yogeshagowda  #yogeshagowda @riyagowda #KidsInThePark #Parkintumkur ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು. ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು. ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು.  ಮಕ್ಕಳಿಗಿರುವ ಪ್ರಯೋಜನಗಳು ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ.   #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids # ಉದ್ಯಾನವನದ ಮಕ್ಕಳು  ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ.  chethana_muniswamygowda #riyamshee_yogeshagowda #yogeshagowda @riyagowda #KidsInThePark #Parkintumkur ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು. ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು. ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು.  ಮಕ್ಕಳಿಗಿರುವ ಪ್ರಯೋಜನಗಳು ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ.  #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #
    4
    ಉದ್ಯಾನವನದ ಮಕ್ಕಳು 

ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ. 

chethana_muniswamygowda

#riyamshee_yogeshagowda

 #yogeshagowda

@riyagowda

#KidsInThePark

#Parkintumkur

ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು

ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು.

ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು.

ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು. 

ಮಕ್ಕಳಿಗಿರುವ ಪ್ರಯೋಜನಗಳು

ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ. 

 #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #






ಉದ್ಯಾನವನದ ಮಕ್ಕಳು 
ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ. 
chethana_muniswamygowda
#riyamshee_yogeshagowda
#yogeshagowda
@riyagowda
#KidsInThePark
#Parkintumkur
ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು
ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು.
ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು.
ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು. 
ಮಕ್ಕಳಿಗಿರುವ ಪ್ರಯೋಜನಗಳು
ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ. 
#ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #
    user_Chethana Muniswamygowda
    Chethana Muniswamygowda
    Press advisory Tikota, Vijayapura•
    7 hrs ago
  • 30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ.. ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು. ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    4
    30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ..
ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು.
ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    user_S L TEGGI
    S L TEGGI
    Voice of people ಕೊಲ್ಹಾರ, ವಿಜಯಪುರ, ಕರ್ನಾಟಕ•
    10 hrs ago
  • ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ | ಬಸನಗೌಡ ಬಸರಕೋಡ ಅಧ್ಯಕ್ಷತೆ | ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ್ ನಿಯಮಿತದ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು. ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸೌಮ್ಯ ಆರ್. ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಶೇರುದಾರರು ಸಂಘದ ಮತ್ತಷ್ಟು ಅಭಿವೃದ್ಧಿಗಾಗಿ ಹಲವು ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ, ಸಂಘದ ಅಭಿವೃದ್ಧಿಗೆ ಶೇರುದಾರರು ಹಾಗೂ ಗ್ರಾಮಸ್ಥರು ಇದೇ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಸಾಹೇಬಗೌಡ ಮೂಲಿಮನಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ, ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ಚರ್ಚೆ ಹಾಗೂ ಸಲಹೆಗಳಿಗೆ ವೇದಿಕೆಯಾಯಿತು.
    1
    ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ | ಬಸನಗೌಡ ಬಸರಕೋಡ ಅಧ್ಯಕ್ಷತೆ |
ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ್ ನಿಯಮಿತದ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು.
ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸೌಮ್ಯ ಆರ್. ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಶೇರುದಾರರು ಸಂಘದ ಮತ್ತಷ್ಟು ಅಭಿವೃದ್ಧಿಗಾಗಿ ಹಲವು ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ, ಸಂಘದ ಅಭಿವೃದ್ಧಿಗೆ ಶೇರುದಾರರು ಹಾಗೂ ಗ್ರಾಮಸ್ಥರು ಇದೇ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಸಾಹೇಬಗೌಡ ಮೂಲಿಮನಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ಚರ್ಚೆ ಹಾಗೂ ಸಲಹೆಗಳಿಗೆ ವೇದಿಕೆಯಾಯಿತು.
    user_ಸಂಗನಗೌಡ
    ಸಂಗನಗೌಡ
    Engineer Vijayapura, Karnataka•
    12 hrs ago
  • ಬಾಗಲಕೋಟೆ: ಒಂದು ತಿಂಗಳ ಕಾಲ ಸೇವಾಸಂಕಲ್ಪ ಅಭಿಯಾನದ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
    1
    ಬಾಗಲಕೋಟೆ: ಒಂದು ತಿಂಗಳ ಕಾಲ ಸೇವಾಸಂಕಲ್ಪ ಅಭಿಯಾನದ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು.. ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
    1
    ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    10 hrs ago
  • ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನ ಆಚರಣೆ 🪷 🪷 ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನ ಆಚರಣೆ 🪷 ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಇಂದು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ 76ನೇ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಗೋಕಾಕದ ಜನಪ್ರಿಯ ಶಾಸಕರಾದ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಅದೇ ರೀತಿ ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯವನ್ನು ನೆರವೇರಿಸಲಾಯಿತು. ಸೇವೆಯೇ ಸಂಕಲ್ಪ, ಜನಸೇವೆಯೇ ನಮ್ಮ ಧ್ಯೇಯ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಜೈ ಹಿಂದ್ 🇮🇳 ಭಾರತ್ ಮಾತಾ ಕೀ ಜೈ 🇮🇳 #NarendraModi #SevaSankalpAbhiyan #BJP #BJP4Gokak
    1
    ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನ ಆಚರಣೆ 🪷
🪷 ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನ ಆಚರಣೆ 🪷
ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಇಂದು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ 76ನೇ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಗೋಕಾಕದ ಜನಪ್ರಿಯ ಶಾಸಕರಾದ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಅದೇ ರೀತಿ ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯವನ್ನು ನೆರವೇರಿಸಲಾಯಿತು.
ಸೇವೆಯೇ ಸಂಕಲ್ಪ, ಜನಸೇವೆಯೇ ನಮ್ಮ ಧ್ಯೇಯ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜೈ ಹಿಂದ್ 🇮🇳
ಭಾರತ್ ಮಾತಾ ಕೀ ಜೈ 🇮🇳
#NarendraModi #SevaSankalpAbhiyan #BJP #BJP4Gokak
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    5 hrs ago
  • ಹಸಿರು ಬನದ ದೇವತೆ" ಯು ಪ್ರಕೃತಿ, ಅರಣ್ಯ ಮತ್ತು ಸಮೃದ್ಧಿಯನ್ನು ಕಾಯುತ್ತದೆ #chethana_muniswamygowda #riyamshee_yogeshagowda  #yogeshagowda @riyagowda  ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಕಾಡು ಹಾಗೂ ಹಸಿರನ್ನು ರಕ್ಷಿಸುವ ದೇವತೆಗಳಿಗೆ ವಿಶೇಷ ಸ್ಥಾನವಿದೆ. #horticulturedepartment  ಬನಶಂಕರಿ ದೇವಿ (ಶಾಕಂಭರಿ): ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಬನಶಂಕರಿ ದೇವಾಲಯ ಅತ್ಯಂತ ಪ್ರಸಿದ್ಧ ಶಕ್ತಿಪೀಠವಾಗಿದೆ ಹಸಿರು ಬನದ ದೇವತೆ" ಯು ಪ್ರಕೃತಿ, ಅರಣ್ಯ ಮತ್ತು ಸಮೃದ್ಧಿಯನ್ನು ಕಾಯುತ್ತದೆ #chethana_muniswamygowda #riyamshee_yogeshagowda #yogeshagowda @riyagowda ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಕಾಡು ಹಾಗೂ ಹಸಿರನ್ನು ರಕ್ಷಿಸುವ ದೇವತೆಗಳಿಗೆ ವಿಶೇಷ ಸ್ಥಾನವಿದೆ. #horticulturedepartment  ಬನಶಂಕರಿ ದೇವಿ (ಶಾಕಂಭರಿ): ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಬನಶಂಕರಿ ದೇವಾಲಯ ಅತ್ಯಂತ ಪ್ರಸಿದ್ಧ ಶಕ್ತಿಪೀಠವಾಗಿದೆ
    3
    ಹಸಿರು ಬನದ ದೇವತೆ" ಯು ಪ್ರಕೃತಿ, ಅರಣ್ಯ ಮತ್ತು ಸಮೃದ್ಧಿಯನ್ನು ಕಾಯುತ್ತದೆ

#chethana_muniswamygowda

#riyamshee_yogeshagowda

 #yogeshagowda

@riyagowda

 ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಕಾಡು ಹಾಗೂ ಹಸಿರನ್ನು ರಕ್ಷಿಸುವ ದೇವತೆಗಳಿಗೆ ವಿಶೇಷ ಸ್ಥಾನವಿದೆ.

#horticulturedepartment 

ಬನಶಂಕರಿ ದೇವಿ (ಶಾಕಂಭರಿ): ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಬನಶಂಕರಿ ದೇವಾಲಯ ಅತ್ಯಂತ ಪ್ರಸಿದ್ಧ ಶಕ್ತಿಪೀಠವಾಗಿದೆ


ಹಸಿರು ಬನದ ದೇವತೆ" ಯು ಪ್ರಕೃತಿ, ಅರಣ್ಯ ಮತ್ತು ಸಮೃದ್ಧಿಯನ್ನು ಕಾಯುತ್ತದೆ
#chethana_muniswamygowda
#riyamshee_yogeshagowda
#yogeshagowda
@riyagowda
ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಕಾಡು ಹಾಗೂ ಹಸಿರನ್ನು ರಕ್ಷಿಸುವ ದೇವತೆಗಳಿಗೆ ವಿಶೇಷ ಸ್ಥಾನವಿದೆ.
#horticulturedepartment 
ಬನಶಂಕರಿ ದೇವಿ (ಶಾಕಂಭರಿ): ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಬನಶಂಕರಿ ದೇವಾಲಯ ಅತ್ಯಂತ ಪ್ರಸಿದ್ಧ ಶಕ್ತಿಪೀಠವಾಗಿದೆ
    user_Chethana Muniswamygowda
    Chethana Muniswamygowda
    Press advisory Tikota, Vijayapura•
    23 hrs ago
  • ತಾಳಿಕೋಟೆ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅಪ್ಪಾಸಾಹೇಬಗೌಡ ಮೂಲಿಮನಿ ಆಯ್ಕೆ ತಾಳಿಕೋಟೆ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ದೊರೆಯುವ ಗೌರವಗಳಲ್ಲಿ ಒಂದಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಳಿಕೋಟೆ ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅಪ್ಪಾಸಾಹೇಬಗೌಡ ಮೂಲಿಮನಿ ಅವರು ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ತಾಳಿಕೋಟೆ ತಾಲ್ಲೂಕಿನಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಈ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಶಿಕ್ಷಕರಾಗಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದದಿಂದಲೂ ಅಪ್ಪಾಸಾಹೇಬಗೌಡ ಮೂಲಿಮನಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಹ ಶಿಕ್ಷಕರು ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶುಭ ಹಾರೈಸಿದರು. ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸೇವೆಗೆ ಇದೀಗ ಜಿಲ್ಲಾ ಮಟ್ಟದ ಗೌರವ ದೊರೆತಿರುವುದು ವಿಶೇಷವಾಗಿದೆ. ಅವರ ಈ ಸಾಧನೆ ತಾಳಿಕೋಟೆ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ, ಹೆಚ್ಚಿನ ಗೌರವ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದ ಹಾಗೂ ಶಿಕ್ಷಣಾಭಿಮಾನಿಗಳು ಶುಭ ಹಾರೈಸಿದರು. ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
    1
    ತಾಳಿಕೋಟೆ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅಪ್ಪಾಸಾಹೇಬಗೌಡ ಮೂಲಿಮನಿ ಆಯ್ಕೆ
ತಾಳಿಕೋಟೆ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ದೊರೆಯುವ ಗೌರವಗಳಲ್ಲಿ ಒಂದಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಳಿಕೋಟೆ ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅಪ್ಪಾಸಾಹೇಬಗೌಡ ಮೂಲಿಮನಿ ಅವರು ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ತಾಳಿಕೋಟೆ ತಾಲ್ಲೂಕಿನಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಈ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಶಿಕ್ಷಕರಾಗಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದದಿಂದಲೂ ಅಪ್ಪಾಸಾಹೇಬಗೌಡ ಮೂಲಿಮನಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಹ ಶಿಕ್ಷಕರು ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶುಭ ಹಾರೈಸಿದರು.
ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸೇವೆಗೆ ಇದೀಗ ಜಿಲ್ಲಾ ಮಟ್ಟದ ಗೌರವ ದೊರೆತಿರುವುದು ವಿಶೇಷವಾಗಿದೆ.
ಅವರ ಈ ಸಾಧನೆ ತಾಳಿಕೋಟೆ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ, ಹೆಚ್ಚಿನ ಗೌರವ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೃಂದ ಹಾಗೂ ಶಿಕ್ಷಣಾಭಿಮಾನಿಗಳು ಶುಭ ಹಾರೈಸಿದರು.
ಅಪ್ಪಾಸಾಹೇಬಗೌಡ ಮೂಲಿಮನಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
    user_ಸಂಗನಗೌಡ
    ಸಂಗನಗೌಡ
    Engineer Vijayapura, Karnataka•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.