ರಬಕವಿ-ಬನಹಟ್ಟಿ ತಾಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷಗಳು ಕಳೆದಿದ್ದರೂ, ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳು ಕಾರ್ಯಾರಂಭ ಮಾಡದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಇನ್ನೂ ಜಮಖಂಡಿ, ಮುಧೋಳ ಹಾಗೂ ತೇರದಾಳ ತಾಲೂಕುಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ತಾಲೂಕು ಭಾಗ್ಯ ದೊರೆತರೂ, ಕಚೇರಿಗಳ ಸೌಲಭ್ಯ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ರಬಕವಿ-ಬನಹಟ್ಟಿಯನ್ನು 2017ರಲ್ಲಿ ಜಮಖಂಡಿ ಮತ್ತು ಮುಧೋಳ ತಾಲೂಕುಗಳ ಒಟ್ಟು 31 ಗ್ರಾಮಗಳನ್ನು ಸೇರಿಸಿ ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಿ, ರಾಜ್ಯಪತ್ರ ಹೊರಡಿಸಲಾಗಿತ್ತು. 2018ರ ಜನವರಿಯಲ್ಲಿ ಇದು ಕಾರ್ಯಾರಂಭ ಮಾಡಿತ್ತು. ನಂತರ, ರಬಕವಿ-ಬನಹಟ್ಟಿ ತಾಲೂಕಿನಿಂದ 9 ಗ್ರಾಮಗಳನ್ನು ಬೇರ್ಪಡಿಸಿ ತೇರದಾಳ ತಾಲೂಕು ರಚನೆ ಮಾಡಲಾಯಿತು. ಆದರೆ, ರಬಕವಿ-ಬನಹಟ್ಟಿ ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವ ಕಚೇರಿಗಳೂ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿ ಜನರಲ್ಲಿ ಭ್ರಮನಿರಸನ ಉಂಟಾಗಿದೆ. ಸದ್ಯ, ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧಿಸಿದ ಉಪನೋಂದಣಿ ಕಾರ್ಯಗಳು ತೇರದಾಳ ಉಪನೋಂದಣಿ ಕಾರ್ಯಾಲಯದಲ್ಲಿಯೇ ನಡೆಯುತ್ತಿದ್ದು, ತಾಲೂಕಾಗಿ 8 ವರ್ಷಗಳಾದರೂ ಜನರು ನೋಂದಣಿ ಕಾರ್ಯಗಳಿಗೆ ತೇರದಾಳಕ್ಕೆ ಹೋಗುವುದು ತಪ್ಪಿಲ್ಲ. ಹಾಗೆಯೇ, ಮಹಾಲಿಂಗಪೂರ ವ್ಯಾಪ್ತಿಯ ಜನರು ಉಪನೋಂದಣಿ ಕಚೇರಿಯ ಕೆಲಸಗಳಿಗೆ ಮುಧೋಳ ತಾಲೂಕಿಗೆ ಅಲೆದಾಡಬೇಕಾಗಿದೆ. ಒಟ್ಟಾರೆ, ಒಂದು ತಾಲೂಕಿನ ಜನತೆ ತಮ್ಮ ವ್ಯವಹಾರಗಳಿಗಾಗಿ ನಾಲ್ಕು ಬೇರೆ ತಾಲೂಕುಗಳಿಗೆ ಅಲೆದಾಡುವಂತಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಜಮಖಂಡಿ ಹಾಗೂ ಮುಧೋಳಕ್ಕೆ ಅಲೆದಾಡುವುದು ತಪ್ಪಿಲ್ಲ. ಉಪನೋಂದಣಿ, ಶಿಕ್ಷಣ, ಕೃಷಿ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಪಶುಸಂಗೋಪನೆ, ಕರ್ನಾಟಕ ಭೂಸೇನಾ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ಹತ್ತು ಹಲವು ಇಲಾಖೆಗಳ ಕಚೇರಿಗಳು ಇಲ್ಲದಿರುವುದರಿಂದ, ಮಹಾಲಿಂಗಪೂರ ಭಾಗದವರು ಸಂಬಂಧಿಸಿದ ಕೆಲಸಗಳಿಗೆ ಹಿಂದಿನ ತಾಲೂಕು ಕೇಂದ್ರ ಮುಧೋಳಕ್ಕೆ ಅಲೆದಾಡುತ್ತಿದ್ದಾರೆ. ಮಹಾಲಿಂಗಪೂರ ಜನತೆ ಆದಾಯ, ರಹವಾಸಿ, ವಾರಸಾ, ವಂಶವೃಕ್ಷ ಸೇರಿದಂತೆ ಇತರೆ ಪ್ರಮಾಣಪತ್ರಗಳಿಗೆ ತೇರದಾಳ ಉಪತಹಶೀಲ್ದಾರ್ ಬಳಿ ಹೋಗಬೇಕಾದರೆ, ಸಿಂಧುತ್ವ, ಅಲ್ಪಸಂಖ್ಯಾತ, ಜಾತಿ, ಜಾತಿ-ಆದಾಯ ಸೇರಿದಂತೆ ಇತರೆ ಪ್ರಮಾಣಪತ್ರಗಳಿಗೆ ರಬಕವಿ-ಬನಹಟ್ಟಿ ಗ್ರೇಡ್-2 ತಹಶೀಲ್ದಾರ್ ಸಹಿ ಮಾಡುತ್ತಿದ್ದಾರೆ. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಸ್ಥಳೀಯ ನಾಯಕರ ಇಚ್ಛಾಶಕ್ತಿ ಕೊರತೆಯೋ ಅಥವಾ ಸರ್ಕಾರದ ನಿರ್ಲಕ್ಷ್ಯವೋ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಾರೆ, ಹೊಸ ತಾಲೂಕಾಗಿ ಎಂಟು ವರ್ಷ ಕಳೆದರೂ ಈ ಭಾಗದ ಜನತೆ ಮಾತ್ರ ಪರದಾಡುವುದು ತಪ್ಪಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಎಚ್ಚೆತ್ತುಕೊಂಡು ಕಚೇರಿ ಭಾಗ್ಯ ಒದಗಿಸುವತ್ತ ಹೆಚ್ಚಿನ ಗಮನ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮುಖಂಡ ಧರೆಪ್ಪ ಉಳ್ಳಾಗಡ್ಡಿ ಅವರು, ರಬಕವಿ-ಬನಹಟ್ಟಿ ಕೇವಲ ಹೆಸರಿಗೆ ಮಾತ್ರ ತಾಲೂಕಾಗಿದ್ದು, ತೆರಿಗೆ ಮಾತ್ರ ಹೆಚ್ಚಾಗಿದೆ, ಸೌಲಭ್ಯಗಳಿಗೆ ಜಮಖಂಡಿ, ತೇರದಾಳಕ್ಕೆ ಅಲೆದಾಟ ತಪ್ಪಿಲ್ಲ ಎಂದು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕೆ. ಸವದಿ ಅವರು, ಸದನದಲ್ಲಿ ಹಲವು ಬಾರಿ ಈ ಬಗ್ಗೆ ಪ್ರಸ್ತಾಪಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ್ದು, ಎಲ್ಲ ಹೊಸ ತಾಲೂಕುಗಳಲ್ಲಿ ಕಚೇರಿಗಳು ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ. ಬನಹಟ್ಟಿಯ ಈರಣ್ಣ ಚಿಂಚಖಂಡಿ ಸೇರಿದಂತೆ ಸಾರ್ವಜನಿಕರು, ತಾಲೂಕಿನ ಜನತೆ 8 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದು, ಆದಷ್ಟು ಬೇಗನೆ ಸರ್ಕಾರದ ಕಚೇರಿಗಳು ಲಭ್ಯವಾಗಲಿ ಎಂದು ಆಶಿಸಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷಗಳು ಕಳೆದಿದ್ದರೂ, ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳು ಕಾರ್ಯಾರಂಭ ಮಾಡದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಇನ್ನೂ ಜಮಖಂಡಿ, ಮುಧೋಳ ಹಾಗೂ ತೇರದಾಳ ತಾಲೂಕುಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ತಾಲೂಕು ಭಾಗ್ಯ ದೊರೆತರೂ, ಕಚೇರಿಗಳ ಸೌಲಭ್ಯ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ರಬಕವಿ-ಬನಹಟ್ಟಿಯನ್ನು 2017ರಲ್ಲಿ ಜಮಖಂಡಿ ಮತ್ತು ಮುಧೋಳ ತಾಲೂಕುಗಳ ಒಟ್ಟು 31 ಗ್ರಾಮಗಳನ್ನು ಸೇರಿಸಿ ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಿ, ರಾಜ್ಯಪತ್ರ ಹೊರಡಿಸಲಾಗಿತ್ತು. 2018ರ ಜನವರಿಯಲ್ಲಿ ಇದು ಕಾರ್ಯಾರಂಭ ಮಾಡಿತ್ತು. ನಂತರ, ರಬಕವಿ-ಬನಹಟ್ಟಿ ತಾಲೂಕಿನಿಂದ 9 ಗ್ರಾಮಗಳನ್ನು ಬೇರ್ಪಡಿಸಿ ತೇರದಾಳ ತಾಲೂಕು ರಚನೆ ಮಾಡಲಾಯಿತು. ಆದರೆ, ರಬಕವಿ-ಬನಹಟ್ಟಿ ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವ ಕಚೇರಿಗಳೂ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿ ಜನರಲ್ಲಿ ಭ್ರಮನಿರಸನ ಉಂಟಾಗಿದೆ. ಸದ್ಯ, ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧಿಸಿದ ಉಪನೋಂದಣಿ ಕಾರ್ಯಗಳು ತೇರದಾಳ ಉಪನೋಂದಣಿ ಕಾರ್ಯಾಲಯದಲ್ಲಿಯೇ ನಡೆಯುತ್ತಿದ್ದು, ತಾಲೂಕಾಗಿ 8 ವರ್ಷಗಳಾದರೂ ಜನರು ನೋಂದಣಿ ಕಾರ್ಯಗಳಿಗೆ ತೇರದಾಳಕ್ಕೆ ಹೋಗುವುದು ತಪ್ಪಿಲ್ಲ. ಹಾಗೆಯೇ, ಮಹಾಲಿಂಗಪೂರ ವ್ಯಾಪ್ತಿಯ ಜನರು ಉಪನೋಂದಣಿ ಕಚೇರಿಯ ಕೆಲಸಗಳಿಗೆ ಮುಧೋಳ ತಾಲೂಕಿಗೆ ಅಲೆದಾಡಬೇಕಾಗಿದೆ. ಒಟ್ಟಾರೆ, ಒಂದು ತಾಲೂಕಿನ ಜನತೆ ತಮ್ಮ ವ್ಯವಹಾರಗಳಿಗಾಗಿ ನಾಲ್ಕು ಬೇರೆ ತಾಲೂಕುಗಳಿಗೆ ಅಲೆದಾಡುವಂತಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಜಮಖಂಡಿ ಹಾಗೂ ಮುಧೋಳಕ್ಕೆ ಅಲೆದಾಡುವುದು ತಪ್ಪಿಲ್ಲ. ಉಪನೋಂದಣಿ, ಶಿಕ್ಷಣ, ಕೃಷಿ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಪಶುಸಂಗೋಪನೆ, ಕರ್ನಾಟಕ ಭೂಸೇನಾ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ಹತ್ತು ಹಲವು ಇಲಾಖೆಗಳ ಕಚೇರಿಗಳು ಇಲ್ಲದಿರುವುದರಿಂದ, ಮಹಾಲಿಂಗಪೂರ ಭಾಗದವರು ಸಂಬಂಧಿಸಿದ ಕೆಲಸಗಳಿಗೆ ಹಿಂದಿನ ತಾಲೂಕು ಕೇಂದ್ರ ಮುಧೋಳಕ್ಕೆ ಅಲೆದಾಡುತ್ತಿದ್ದಾರೆ. ಮಹಾಲಿಂಗಪೂರ ಜನತೆ ಆದಾಯ, ರಹವಾಸಿ, ವಾರಸಾ, ವಂಶವೃಕ್ಷ ಸೇರಿದಂತೆ ಇತರೆ ಪ್ರಮಾಣಪತ್ರಗಳಿಗೆ ತೇರದಾಳ ಉಪತಹಶೀಲ್ದಾರ್ ಬಳಿ ಹೋಗಬೇಕಾದರೆ, ಸಿಂಧುತ್ವ, ಅಲ್ಪಸಂಖ್ಯಾತ, ಜಾತಿ, ಜಾತಿ-ಆದಾಯ ಸೇರಿದಂತೆ ಇತರೆ ಪ್ರಮಾಣಪತ್ರಗಳಿಗೆ ರಬಕವಿ-ಬನಹಟ್ಟಿ ಗ್ರೇಡ್-2 ತಹಶೀಲ್ದಾರ್ ಸಹಿ ಮಾಡುತ್ತಿದ್ದಾರೆ. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಸ್ಥಳೀಯ ನಾಯಕರ ಇಚ್ಛಾಶಕ್ತಿ ಕೊರತೆಯೋ ಅಥವಾ ಸರ್ಕಾರದ ನಿರ್ಲಕ್ಷ್ಯವೋ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಾರೆ, ಹೊಸ ತಾಲೂಕಾಗಿ ಎಂಟು ವರ್ಷ ಕಳೆದರೂ ಈ ಭಾಗದ ಜನತೆ ಮಾತ್ರ ಪರದಾಡುವುದು ತಪ್ಪಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಎಚ್ಚೆತ್ತುಕೊಂಡು ಕಚೇರಿ ಭಾಗ್ಯ ಒದಗಿಸುವತ್ತ ಹೆಚ್ಚಿನ ಗಮನ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮುಖಂಡ ಧರೆಪ್ಪ ಉಳ್ಳಾಗಡ್ಡಿ ಅವರು, ರಬಕವಿ-ಬನಹಟ್ಟಿ ಕೇವಲ ಹೆಸರಿಗೆ ಮಾತ್ರ ತಾಲೂಕಾಗಿದ್ದು, ತೆರಿಗೆ ಮಾತ್ರ ಹೆಚ್ಚಾಗಿದೆ, ಸೌಲಭ್ಯಗಳಿಗೆ ಜಮಖಂಡಿ, ತೇರದಾಳಕ್ಕೆ ಅಲೆದಾಟ ತಪ್ಪಿಲ್ಲ ಎಂದು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕೆ. ಸವದಿ ಅವರು, ಸದನದಲ್ಲಿ ಹಲವು ಬಾರಿ ಈ ಬಗ್ಗೆ ಪ್ರಸ್ತಾಪಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ್ದು, ಎಲ್ಲ ಹೊಸ ತಾಲೂಕುಗಳಲ್ಲಿ ಕಚೇರಿಗಳು ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ. ಬನಹಟ್ಟಿಯ ಈರಣ್ಣ ಚಿಂಚಖಂಡಿ ಸೇರಿದಂತೆ ಸಾರ್ವಜನಿಕರು, ತಾಲೂಕಿನ ಜನತೆ 8 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದು, ಆದಷ್ಟು ಬೇಗನೆ ಸರ್ಕಾರದ ಕಚೇರಿಗಳು ಲಭ್ಯವಾಗಲಿ ಎಂದು ಆಶಿಸಿದ್ದಾರೆ.
- ರಾಜ್ಯದಲ್ಲಿ ಒಟ್ಟು 1.53 ಲಕ್ಷ ಅನರ್ಹ ವ್ಯಕ್ತಿಗಳ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಲಾಗಿದ್ದು, ಅವರ ಪಿಂಚಣಿ ಸೌಲಭ್ಯವನ್ನು ನಿಲ್ಲಿಸಲಾಗಿದೆ.1
- ಅಮರ ವಾಹಿನಿ ಕನ್ನಡ ನ್ಯೂಸ್ ವರದಿಯ ಪ್ರಕಾರ, ಕತ್ತಿ ಸಾಹುಕಾರ್ ಮತ್ತು ಜಾರಕಿಹೊಳಿ ಸಾಹುಕಾರ್ಗಳ ಸಮಾಗಮ ನಡೆದಿದೆ.1
- ಜಮಖಂಡಿಯಲ್ಲಿ ರೈತ ಕುಟುಂಬವೊಂದು ಗಂಭೀರ ಆರೋಪ ಮಾಡಿದೆ. ಪಶುವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಆಕಳು ಸಾವನ್ನಪ್ಪಿದೆ ಎಂದು ಕುಟುಂಬ ಹೇಳಿದೆ.1
- ಡಾ. ಅಂಬೇಡ್ಕರ್ ಅವರು ಅಜ್ಞಾನವನ್ನು ದೂರಗೊಳಿಸಿ, ಜ್ಞಾನದ ಬೆಳಕನ್ನು ಹರಡಿದ ಯುಗಪುರುಷರಾಗಿದ್ದಾರೆ.1
- ಮುಧೋಳ ತಾಲೂಕಿನ ಮುದ್ದಾಪೂರ ಪ್ರದೇಶದಲ್ಲಿರುವ ಜೆ.ಕೆ. ಸಿಮೆಂಟ್ಸ್ನ ಅಕ್ರಮ ಗಣಿಗಾರಿಕೆ ವಿರುದ್ಧ ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸೋಮವಾರಕ್ಕೆ ಈ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಸಮರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ರೈತರ ಆರೋಪದ ಪ್ರಕಾರ, ನಿಯಮಗಳ ಅನುಸಾರ ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಅವಕಾಶವಿಲ್ಲ. ಆದರೂ, ಅಧಿಕಾರಿಗಳ ಕಣ್ಮುಂದೆಯೇ ನಿಯಮಗಳನ್ನು ಗಾಳಿಗೆ ತೂರಿ ಕೈಗಾರಿಕೆ ಸ್ಥಾಪನೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ವಿಜಯಪುರ ಜಿಲ್ಲೆಯ ಸಂಸದ ರಮೇಶ್ ಜಿಗಜಿನಗಿ ಅವರ ಹೇಳಿಕೆಯನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಭಾನುವಾರ ಹೇಳಿದ್ದಾರೆ. ಜಿಗಜಿನಗಿ ಹಿರಿಯರು ಮತ್ತು ಖರ್ಗೆ ಕಿರಿಯರಾಗಿದ್ದು, ಇಬ್ಬರೂ ದಲಿತ ಸಮಾಜಕ್ಕೆ ಸೇರಿದವರಾಗಿದ್ದಾರೆ ಎಂದು ಅಂಗಡಿ ವಿವರಿಸಿದರು. ಹಿರಿಯರು ಕಿರಿಯರಿಗೆ ಬುದ್ದಿವಾದ ಹೇಳುವಂತೆ, ಖರ್ಗೆ ಅವರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಖಾತೆ ನಿರ್ವಹಿಸುತ್ತಿದ್ದಾರೆ ಎಂದರು. "ನಮಗೂ ನಿಮಗೂ ಆರ್ ಎಸ್ ಎಸ್ ಸಹವಾಸ ಬೇಡ" ಎಂಬುದು ಜಿಗಜಿನಗಿ ಅವರ ಮಾತಿನ ಅರ್ಥ ಎಂದು ಅಂಗಡಿ ಸ್ಪಷ್ಟಪಡಿಸಿದರು.1
- ಚಿತ್ರನಟ ಚೇತನ್ ಅಹಿಂಸಾ ಅವರು ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಆರೋಪಿಸಿದ್ದಾರೆ. ಬೀಳಗಿಯ ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡದೆ ಕೇವಲ ಬೆಂಗಳೂರಿಗೆ ಆದ್ಯತೆ ನೀಡಿ ಈ ಭಾಗದ ಜನರಿಗೆ ಹಾಗೂ ಯುವಕರಿಗೆ ಅನ್ಯಾಯ ಮಾಡುತ್ತಾ ಬಂದಿವೆ ಎಂದರು. ಇದರಿಂದ ಜನರು ರೋಸಿ ಹೋಗಿದ್ದಾರೆ ಎಂದು ಅವರು ತಿಳಿಸಿದರು. ಚೇತನ್ ಅಹಿಂಸಾ ಅವರು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚರಿಸಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ, ದಲಿತ ಸಂಘ, ಬಹುಜನ ಸಂಘ, ಕಾರ್ಮಿಕ ಸಂಘ, ಭ್ರಷ್ಟಾಚಾರ ವಿರೋಧಿ ಸಂಘ, ಪರಿಸರವಾದಿ ಸಂಘ, ರೈತ ಸಂಘ ಮತ್ತು ಮಹಿಳಾ ಸಂಘಗಳ ಜೊತೆಗೂಡಿ ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣ ಮಾಡಿ ಬರುವ ಚುನಾವಣೆಯಲ್ಲಿ ಸಂವಿಧಾನದ ಶಕ್ತಿಯನ್ನು ಕಟ್ಟಲಾಗುವುದು ಎಂದು ತಿಳಿಸಿದರು. ಈಗಿರುವ ನಾಯಕರು ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿಲ್ಲ ಮತ್ತು ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಆಸಕ್ತಿ ಯಾರ ಮನಸ್ಸಿನಲ್ಲಿಯೂ ಇಲ್ಲ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಅವರು ಟೀಕಿಸಿದರು. ಮುಂಬರುವ 2028ರ ಚುನಾವಣೆಗೆ ಹೊಸ ಪಕ್ಷವನ್ನು ಕಟ್ಟಿ, ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಚೇತನ್ ಘೋಷಿಸಿದರು. ತಾವು ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಯುವಕರ ಸಂಘಟನೆಯನ್ನು ಮಾಡುತ್ತಿದ್ದೇನೆ ಮತ್ತು ಎಲ್ಲ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಪ್ರವೀಣಗೌಡ ಪಾಟೀಲ್, ಹನಮಂತ ಜಲ್ಲಿ, ಭೀಮಸಿ ಮುತ್ತಲದಿನ್ನಿ, ಮಂಜುನಾಥ್ ಹೂಗಾರ್, ಶ್ರೀಕಾಂತ್ ಬಾಡಗಂಡಿ ಸೇರಿ ಅನೇಕರು ಉಪಸ್ಥಿತರಿದ್ದರು.1
- ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ಮೃತ ಯುವಕನನ್ನು ಮುಧೋಳದ ಪವನಚುಕ್ಕಿ ನಿವಾಸಿ, 20 ವರ್ಷದ ನವೀನ್ ಹಣಮಂತ ಗೊರ್ಕ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಬಾದಾಮಿಯಿಂದ ಇಚಲಕರಂಜಿಗೆ ಹೊರಟಿದ್ದ ಬಸ್ ಮತ್ತು ಬೈಕ್ ನಡುವೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಪರಿಣಾಮವಾಗಿ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವನ್ನು ಮುಧೋಳ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.1