Shuru
Apke Nagar Ki App…
SUDHUR CHAULANI NEWS
More news from ಕರ್ನಾಟಕ and nearby areas
- Post by SUDHUR CHAULANI NEWS1
- डिलीवरी बॉय की गुंडई, कस्टर को बुरी तरह पीटा... टूट गई नाक बेंगलुरु से एक हैरान करने वाला मामला सामने आया है. जहां एक क्विक-कॉमर्स प्लेटफॉर्म के लिए काम करने वाले एक डिलीवरी एजेंट ने विवाद के बाद कस्टमर पर हमला कर दिया. जिससे उसकी नाक टूट गई. घटना कोरमंगला में एक अपार्टमेंट के कॉम्पलेक्स में हुई. अधिकारी ने बताया कि एजेंट एक ऑर्डर डिलीवर करने पहुंचा था, तभी कस्टमर के साथ इस बात को लेकर बहस हो गई कि डिलीवरी किस फ्लोर पर करनी है? देखते ही देखते विवाद इतना बढ़ गया कि मारपीट शुरू हो गई. जिसके बाद डिलीवरी एजेंट ने कस्टमर के चेहरे पर मुक्का मारा, जिससे उसकी नाक टूट गई. इसके बाद आरोपी ने डिलीवरी का सामान ज़मीन पर फेंक दिया और अपार्टमेंट कॉम्प्लेक्स से भाग गया.1
- ಟಿಪ್ಪರ್ ಲಾರಿಗಳಲ್ಲಿ ಕೆಂಗೇರಿಯ ಕೋಡಿಪಾಳ್ಯದ ಆಸುಪಾಸಿನಲ್ಲಿ ಮರಳು ಸಾಗಿಸುವಾಗ ಸುರಕ್ಷತೆ ವಿಧಾನ ಬಳಸದೇ, ಟಾರ್ಪಲ್ ಮುಚ್ಚಿ ಉಳಿದ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸದೆ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ ಸ್ಥಳೀಯರು.... ಹೊಯ್ಸಳ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು..1
- ಬೆಂಗಳೂರು ಗ್ರಾಮಾಂತರ ಮಕ್ಕಳ ಕಳ್ಳರೆಂದು ಅನಾಮಧೇಯ ವ್ಯಕ್ತಿಗಳಿಗೆ ಸಾರ್ವಜನಿಕರಿಂದ ಗೂಸ. ಮನೆ ಬಳಿ ಬಂದು ಕುಡಿಯೋಕೆ ನೀರು ಕೇಳಿದ್ದ ಅಪರಿಚಿತರು ಕುಡಿಯಲು ನೀರು ತರಲು ಹೋದಾಗ ಮಗುವನ್ನ ಕರೆದೊಯ್ಯಲು ಯತ್ನಿಸಿರುವ ಆರೋಪ. ತಕ್ಷಣ ಮಗುವನ್ನ ಹುಡುಕಿ ನೋಡಿದಾಗ ಮಗು ಇಲ್ಲದಿರುವುದನ್ನ ಕಂಡು ತಾಯಿ ಶಾಕ್. ತಕ್ಷಣ ನೀರು ಕೇಳಿದೋರ ಜಾಡನ್ನ ಹಿಡಿದಿದ್ದ ತಾಯಿ ಮತ್ತು ಕುಟುಂಬಸ್ಥರು. ವಿದ್ಯಾನಗರ ಕ್ರಾಸ್ ಬಳಿ ಮಗು ಸಮೇತ ಆರೋಪಿಗಳು ಹೋಗ್ತಿದ್ದರು ಎಂದು ಆರೋಪ. ತಕ್ಷಣ ಹೆಣ್ಣು ಮಗುವನ್ನ ವಶಕ್ಕೆ ಪಡೆದು ಸ್ಥಳೀಯರಿಂದ ಗೂಸ. ಘಟನೆಯಲ್ಲಿ 63 ವರ್ಷದ ವ್ಯಕ್ತಿಗೆ ಮತ್ತು ಸುಮಾರು 26 ವರ್ಷದ ವ್ಯಕ್ತಿಗೆ ಧರ್ಮದೇಟು. ಕೂಡಲೇ ಆರೋಪಿಗಳನ್ನ ಚಿಕ್ಕಜಾಲ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಅಪರಿಚಿತರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಪೊಲೀಸರು. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಚಿಕ್ಕಜಾಲ ಸಮೀಪದ ವಿದ್ಯಾನಗರ ಕ್ರಾಸ್ ಬಳಿ ನಡೆದಿರುವ ಘಟನೆ1
- Al ham Adiya, home on dates, ke taraf.Se iftaar ke part..KOLAR1
- ವರದನಾಯಕನಹಳ್ಳಿಗೆ ನೂತನ ದ್ವಾರಬಾಗಿಲು ನಿರ್ಮಾಣಕ್ಕೆ ಗುದ್ದಲಿ ಪೂಜೆ : ಧರ್ಮದರ್ಶಿ ನಾಗರಾಜಪ್ಪ ಶಿಡ್ಲಘಟ್ಟ : ಹಳ್ಳಿಯಲ್ಲಿ ಕೆರೆ, ಕಟ್ಟೆ, ಗೂಕುಂಟೆ ಸರ್ಕಾರಿ ಶಾಲೆ, ಗುಂಡುತೋಪು, ಅಶ್ವಥಕಟ್ಟೆ, ದೇವಾಲಯಗಳು ಒಳಗೊಂಡಂತೆ ವಿವಿಧ ಹಬ್ಬಗಳು ಆಚರಿಸಿ ಊರ ಜಾತ್ರೆ ಮಹೋತ್ಸವದಲ್ಲಿ ತೊಡಗುವ ಹಳ್ಳಿಯ ಜನತೆ ಹಿರಿಕರು ಕಟ್ಟಿದ ಊರ ಬಾಗಿಲಿನಿಂದ ಗ್ರಾಮದ ಒಳಗೆ ಬರುವ ಸಂಪ್ರದಾಯ ಇಂದಿಗೂ ಸಹ ಅನೇಕ ಹಳ್ಳಿಗಳಲ್ಲಿ ಕಾಣುವಂತಾಗಿದೆ. ಆ ಪ್ರತೀತಿಯ ಸಂಕೇತವಾಗಿ ನೂತನ ದ್ವಾರಭಾಗಿಲು ನಿರ್ಮಿಸಿವಂತ ಪುಣ್ಯದ ಕೆಲಸಕ್ಕೆ ಸಂಕಲ್ಪ ತೊಟ್ಟಿದ್ದೇನೆ ಇದು ನನ್ನ ಸೌಭಾಗ್ಯವಾಗಿದೆ ಎಂದು ಬೆಂಗಳೂರು ಕಳ್ಳಿಪಾಳ್ಯ ಧರ್ಮದರ್ಶಿ ನಾಗರಾಜಪ್ಪ ತಿಳಿಸಿದರು. ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿ ಗ್ರಾಮಕ್ಕೆ ನೂತನ ಧ್ವಾರಭಾಗಿಲು ನಿರ್ಮಾಣ ಕಾರ್ಯದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ ಈಗಾಗಲೆ ಗ್ರಾಮದಲ್ಲಿ ಶ್ರೀ ಆಂಜಿನೇಯಸ್ವಾಮಿ ದೇವಾಲಯ ಮತ್ತು ಶ್ರೀ ಪಟಾಲಮ್ಮದೇವಿ ದೇವಾಲಯವನ್ನು ನಿರ್ಮಿಸಿದ್ದು, ಇದೀಗ ಧ್ವಾರಭಾಗಿಲು ನಿರ್ಮಿಸಿ ಅದರಲ್ಲಿ ಗ್ರಾಮದಲ್ಲಿರುವಂತ ಎಲ್ಲಾ ದೇವರುಗಳ ವಿಗ್ರಹಗಳನ್ನು ನೂತನ ಧ್ವಾರಭಾಗಿಲಿನಲ್ಲಿ ಪ್ರತಿಷ್ಟಾಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಧರ್ಮದರ್ಶಿ ವಿ. ನಾಗರಾಜಪ್ಪ ಮೊಮ್ಮಗ ನಾಗೇಂದ್ರ, ಹಂಡಿಗನಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರೆಡ್ಡಿ, ಶ್ರೀಪಟಾಲಮ್ಮ ದೇವಸ್ಥಾನದ ವಕ್ಕಲರಾದ ಕೊಂಡೇನಹಳ್ಳಿ ನಾಗರಾಜಪ್ಪ, ಗಡದನಾಯಕನಹಳ್ಳಿ ನಾಗರಾಜಪ್ಪ, ಗ್ರಾಮದ ಮುಖಂಡರಾದ ಎಂ.ಬಿ ರಾಮಯ್ಯ, ವಿ.ಬಿ ನಾರಾಯಣಸ್ವಾಮಿ, ವಿ. ಆರ್. ಶ್ರೀನಿವಾಸ್, ಆಂಜಿನೇಯ, ವಿಶ್ವನಾಥ್, ಆರ್ ಶ್ರೀನಿವಾಸ್, ಹನುಮಂತಣ್ಣ, ಎಂ. ಶ್ರೀನಿವಾಸ್, ಮುನಿರಾಮ ಇನ್ನಿತರರು ಹಾಜರಿದ್ದರು.3
- ಶಿಡ್ಲಘಟ್ಟ: ಮನುಷ್ಯನ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು ಪ್ರಮುಖವಾಗಿವೆ. ಇದರಲ್ಲಿ ಧರ್ಮದ ಹಾದಿಯಲ್ಲಿ ಗಳಿಸಿದ ಸಂಪತ್ತು (ಅರ್ಥ) ಮಾತ್ರ ನಮಗೆ ನಿಜವಾದ ಸುಖ ಮತ್ತು ಶಾಂತಿಯನ್ನು ನೀಡಲು ಸಾಧ್ಯ ಎಂದು ಚಿಕ್ಕಬಳ್ಳಾಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ಅವರು ಪ್ರತಿಪಾದಿಸಿದರು. ಬೆಳ್ಳೂಟಿಯ ಶ್ರೀ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಸಮಿತಿ ಹಾಗೂ ಬೆಳ್ಳೂಟಿ ಪ್ರಗತಿ ಬಂಧು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 'ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ' ವಿಜೃಂಭಣೆಯಿಂದ ನೆರವೇರಿತು. ಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮಿಯ ಪೂಜೆಯನ್ನು ನೆರವೇರಿಸಿದರು. ಗ್ರಾಮದ ಸುಭಿಕ್ಷೆ ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊದಲಿಗೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ಅವರು, ಇಂದು ಸಮಾಜದಲ್ಲಿ ಸಾಕಷ್ಟು ಹಣವಿದ್ದರೂ ಜನರಲ್ಲಿ ನೆಮ್ಮದಿ ಇಲ್ಲದಿರುವುದಕ್ಕೆ ಧರ್ಮದ ತಳಹದಿಯ ಕೊರತೆಯೇ ಕಾರಣ. ಕೇವಲ ಹಣದಿಂದ ಆರೋಗ್ಯವನ್ನಾಗಲಿ ಅಥವಾ ಜ್ಞಾನವನ್ನಾಗಲಿ ಕೊಳ್ಳಲು ಸಾಧ್ಯವಿಲ್ಲ. ನಾವು ಮಾಡುವ ಲಕ್ಷ್ಮಿ ಪೂಜೆಯು ಸಾರ್ಥಕವಾಗಬೇಕಾದರೆ ನಮ್ಮ ಸಂಪತ್ತು ಧರ್ಮದ ಹಾದಿಯಲ್ಲಿ ಬಂದಿರಬೇಕು. ಭಗವಂತನ ಅನುಗ್ರಹವಿದ್ದರೆ ಮಾತ್ರ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರವು ದಾನ, ಆರೋಗ್ಯ ಮತ್ತು ವಿದ್ಯಾ ದಾನದ ಮೂಲಕ ಲೋಕಕಲ್ಯಾಣ ಮಾಡುತ್ತಿದೆ ಎಂದು ಶ್ಲಾಘಿಸಿದರು. ನಂತರ ಮಾತನಾಡಿದ ಯೋಜನಾಧಿಕಾರಿ ಪ್ರಸಾದ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಮತ್ತು ಗ್ರಾಮೀಣ ಸಂಘಟನೆಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಳ್ಳಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಯೋಜನೆಯಡಿ ಸ್ವ-ಸಹಾಯ ಸಂಘಗಳನ್ನು ರಚಿಸಿ, ಬ್ಯಾಂಕುಗಳ ಮೂಲಕ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. ನಂತರ ವೇದಿಕೆಯಲ್ಲಿರುವ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀಪೂಜಾ ವ್ಯವಸ್ಥಾಪನಾ ಸಮಿತಿ ಬೆಳ್ಳೂಟಿ ಅಧ್ಯಕ್ಷರಾದ ಹೆಚ್. ಕೆ. ಸುರೇಶ್, ಮಾಜಿ ಕೆ.ಎಂ.ಎಫ್. ನಿರ್ದೇಶಕರಾದ ಶ್ರೀನಿವಾಸ್ ರಾಮಯ್ಯ, ರೈತ ಮುಖಂಡರಾದ ಮುನಿಕೆಂಪಣ್ಣ, ಸುಗಟೂರು ನಾಗೇಶ್, ಆನೂರಿನ ಯೋಗ ಶಿಕ್ಷಕರಾದ ಶ್ರೀನಿವಾಸ್,ಬೆಳ್ಳೂಟಿ ವಲಯದ ಮೇಲ್ವಿಚಾರಕಿ ಮೇಘನಾ,ರಾಮಚಂದ್ರ, ಹುಜುಗೂರು ಬಚ್ಚೇಗೌಡ ,ಲಕ್ಷ್ಮೀದೇವಮ್ಮ ದೇವರಾಜ್, ಕಲ್ಪನಾ ಮುನಿರಾಜು,ಹೆಚ್. ಕೆ. ನಾಗೇಶ್ಗೌಡ,ಚಿಕ್ಕಣ್ಣ ಹಾಗೂ ನೂರಕ್ಕೂ ಹೆಚ್ಚು ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ1
- ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಭೀತಿಗೆ ದುಬೈನಲ್ಲಿ ನೆಲೆಸಿದ್ದ ಭಾರತೀಯರು ಸೇರಿದಂತೆ ಬೇರೆ ರಾಷ್ಟ್ರಗಳ ಪ್ರಜೆಗಳು ಸುರಕ್ಷಿತವಾಗಿರಲು ತಮ್ಮ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದರು, ಈ ಸಂಬಂಧ ದುಬೈ ಏರ್ಪೋರ್ಟ್ ಕಿಕ್ಕಿರಿದು ತುಂಬಿತ್ತು...1